ಸದಸ್ಯ:2231372LikhithaHPSetty/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆನ್ರಿ ಡೇವಿಡ್ ಥೋರೋ[ಬದಲಾಯಿಸಿ]

ಹೆನ್ರಿ ಡೇವಿಡ್ ಥೋರೊರವರು ಜುಲೈ 12, 1817 ರಂದು ಜನಿಸಿದರು. ಅವರು ಒಬ್ಬ ಅಮೇರಿಕನ್ ನೈಸರ್ಗಿಕವಾದಿ, ಪ್ರಬಂಧಕಾರ, ಕವಿ ಮತ್ತು ತತ್ವಜ್ಞಾನಿ. ಅವರು ತಮ್ಮ ಪುಸ್ತಕ ವಾಲ್ಡೆನ್‌ಗೆ ಹೆಸರುವಾಸಿಯಾಗಿದ್ದರು, ಇದು ನೈಸರ್ಗಿಕ ಪರಿಸರದಲ್ಲಿ ಸರಳವಾದ ಜೀವನವನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರ ಪ್ರಬಂಧ "ನಾಗರಿಕ ಅಸಹಕಾರ" (ಮೂಲತಃ "ನಾಗರಿಕ ಸರ್ಕಾರಕ್ಕೆ ಪ್ರತಿರೋಧ" ಎಂದು ಪ್ರಕಟಿಸಲಾಗಿದೆ), ಇದು ಅನ್ಯಾಯದ ರಾಜ್ಯಕ್ಕೆ ಅವಿಧೇಯತೆಯನ್ನು ವಾದಿಸುತ್ತದೆ.

ಥೋರೋರವರ ಪುಸ್ತಕಗಳು, ಲೇಖನಗಳು, ಪ್ರಬಂಧಗಳು, ನಿಯತಕಾಲಿಕಗಳು ಮತ್ತು ಕವನಗಳು 20 ಕ್ಕೂ ಹೆಚ್ಚು ಸಂಪುಟಗಳನ್ನು ಹೊಂದಿವೆ. ನೈಸರ್ಗಿಕ ಇತಿಹಾಸ ಮತ್ತು ತತ್ತ್ವಶಾಸ್ತ್ರದ ಮೇಲಿನ ಅವರ ಬರಹಗಳು, ಅವರ ಶಾಶ್ವತ ಕೊಡುಗೆಗಳಲ್ಲಿ ಸೇರಿವೆ. ಇದರಲ್ಲಿ ಅವರು ಪರಿಸರ ಮತ್ತು ಪರಿಸರ ಇತಿಹಾಸದ ವಿಧಾನಗಳು ಮತ್ತು ಸಂಶೋಧನೆಗಳನ್ನು ನಿರೀಕ್ಷಿಸಿದ್ದರು, ಇವು ಆಧುನಿಕ ದಿನದ ಪರಿಸರವಾದದ ಎರಡು ಮೂಲಗಳು.

ಹೆನ್ರಿ ಡೇವಿಡ್ ಥೋರೋ

ಲೇಖಕರಾಗಿದ್ದು ಹೀಗೆ[ಬದಲಾಯಿಸಿ]

1841 ರ ಬೇಸಿಗೆಯಲ್ಲಿ ಒಂದು ದಿನ, ಹೆನ್ರಿ ಡೇವಿಡ್ ಥೋರೋ ತನ್ನ ತಂದೆಯ ಪೆನ್ಸಿಲ್ ಕಾರ್ಖಾನೆಯಲ್ಲಿ ತನ್ನ ಕೆಲಸವನ್ನು ತೊರೆದ ನಂತರ ಹಣದ ಬಗ್ಗೆ ಚಿಂತಿತನಾಗಿದ್ದನು. ಇದ್ದಕ್ಕಿದ್ದಂತೆ, ಆ ಸಮಯದಲ್ಲಿ ಅಮೇರಿಕನ್ ಸಾಹಿತ್ಯದ ಅತ್ಯಂತ ಪ್ರಸಿದ್ಧ ಬರಹಗಾರ, ರಾಲ್ಫ್ ವಾಲ್ಡೋ ಎಮರ್ಸನ್ ಅವರ ಬಾಗಿಲು ತಟ್ಟಿದರು. ಎಮರ್ಸನ್ ಅವರನ್ನು ಅವರ ಮನೆಯಲ್ಲಿ ಲೈವ್-ಇನ್ ಹ್ಯಾಂಡ್‌ಮ್ಯಾನ್ ಆಗಿ ಕೆಲಸ ಮಾಡಲು ಕೇಳಿಕೊಂಡರು. ಇದ್ದಕ್ಕಿದ್ದಂತೆ, ಆ ಸಮಯದಲ್ಲಿ ಅತ್ಯಂತ ಪ್ರಸಿದ್ಧ ಬರಹಗಾರ ರಾಲ್ಫ್ ವಾಲ್ಡೋ ಎಮರ್ಸನ್ ರವರು  ಹೆನ್ರಿ ಡೇವಿಡ್ ಥೋರೋನ ಆಸಕ್ತಿ ಮತ್ತು ಉತ್ಸಾಹವನ್ನು ಕಂಡು ಅವರಿಗೆ ಸಾಹಿತಿಯಾಗಲು ಹುರಿದುಂಬಿಸಿದರು.

ಸರ್ಕಾರದ ವಿರುದ್ಧ ಇವರ ಪ್ರತಿಭಟನೆ[ಬದಲಾಯಿಸಿ]

ಮೆಕ್ಸಿಕನ್-ಅಮೆರಿಕನ್ ಯುದ್ಧಕ್ಕೆ ಸರ್ಕಾರಕ್ಕೆ ಹಣದ ಅಗತ್ಯವಿದ್ದುದರಿಂದ, ಅಂದಿನ ಅಮೇರಿಕನ್ ಸರ್ಕಾರ ತೆರಿಗೆಯ ದರವನ್ನು ಹೆಚ್ಚಿಸಿತು. ಹೆನ್ರಿ ಡೇವಿಡ್ ಥೋರೋ ಯುದ್ಧಕ್ಕೆ ನೇರ ತೆರಿಗೆಯನ್ನು ಪಾವತಿಸಲು ನಿರಾಕರಿಸಿದರು. ಇದು ಸರ್ಕಾರದ ವಿರುದ್ಧ ಅವರ ಮೊದಲ ಪ್ರತಿಭಟನೆಯಾಗಿದೆ. ಯುದ್ಧವು ಕೆಟ್ಟ ವಿಷಯ ಎಂದು ಅವರು ಭಾವಿಸಿದ್ದರು, ಆದ್ದರಿಂದ ಸರ್ಕಾರವನ್ನು ವಿರೋಧಿಸುವುದು ಅಗತ್ಯವಾಗಿತ್ತು. ಆದ್ದರಿಂದ ಅಲ್ಲಿನ ಸರ್ಕಾರ ಅವನನ್ನು ಜೈಲಿಗೆ ಹಾಕಿತು. ತೆರಿಗೆ ಕಟ್ಟುವಂತೆ ಜನರು ಸಲಹೆ ನೀಡಿದರೂ ಥೋರೋ ಪಾವತಿಸಲಿಲ್ಲ. ಅವರು ಸರ್ಕಾರಕ್ಕೆ ಹೆದರದೆ ಮತ್ತು  ಪ್ರತಿಭಟನೆಗೆ ಸೇರಲು ಇತರ ಜನರನ್ನು ಪ್ರೇರೇಪಿಸಿದರು. ಜೈಲಿನಲ್ಲಿ ರಾತ್ರಿ ಅವರು ತಮ್ಮ ಪ್ರಬಂಧವನ್ನು ಬರೆಯಲು ಅವಕಾಶ ಮಾಡಿಕೊಟ್ಟರು, ನಾಗರಿಕ ಅಸಹಕಾರ, ಮುಂತಾದ ವಿಷಯಗಳ ಬಗ್ಗೆ ಟಿಪ್ಪಣಿಗಳಲ್ಲಿ, ಅವರು ಸಕ್ರಿಯ ಚಿಂತನೆಯ ಪ್ರಕ್ರಿಯೆಯ ಬಗ್ಗೆ ಮಾತನಾಡಿದರು, ಕೆಲವು ಕಾನೂನುಗಳು ಅಥವಾ ಬೇಡಿಕೆಗಳು, ರಾಜ್ಯದ ಆದೇಶಗಳನ್ನು ಪಾಲಿಸಲು ನಾಗರಿಕನ ನಿರಾಕರಣೆ ಮತ್ತು ಸರ್ಕಾರದ ಆದೇಶಗಳ ಬಗೆಗಿನ ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಿದರು. ಇಪ್ಪತ್ತು ವರ್ಷಗಳ ನಂತರ, ಈ ಟಿಪ್ಪಣಿಗಳನ್ನು ಅದೇ ಹೆಸರಿನ ಪುಸ್ತಕದಲ್ಲಿ ಮುದ್ರಿಸಲಾಯಿತು ಮತ್ತು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ನಂತಹ ಅನೇಕ ಕ್ರಾಂತಿಕಾರಿಗಳಿಗೆ ಮಾರ್ಗದರ್ಶನ ನೀಡಿತು.

ನಂತರದ ವರ್ಷಗಳು[ಬದಲಾಯಿಸಿ]

ಹೆನ್ರಿ ಡೇವಿಡ್ ಥೋರೋ

ಥೋರೋ ರವರು ಧೀರ್ಘ ಕಾಲದಿಂದ ಕ್ಷಯರೋಗದಿಂದ ಬಳಲುತ್ತಿದ್ದರು. ಇದು ಅನೇಕ ವರ್ಷಗಳಿಂದ ಅವರನ್ನು ಬಾಧಿಸುತ್ತಿತ್ತು. ಮೇ 6, 1862 ರಂದು ಥೋರೋ ನಿಧನರಾದರು. ಅವರ ನಿಧನದ ನಂತರ, ಅವರು ಅನೇಕ  ಟಿಪ್ಪಣಿಗಳು ಅಪೂರ್ಣವಾಗಿ ಉಳಿದುಬಿಟ್ಟಿತು. ಅವುಗಳಲ್ಲಿ ಕೆಲವನ್ನು ನಂತರದ ದಿನಗಳಲ್ಲಿ ಮುದ್ರಿಸಲಾಯಿತು. ಥೋರೊ ನಿಧನರಾದಾಗ, ಅಂತ್ಯಕ್ರಿಯೆಯ ಭಾಷಣದಲ್ಲಿ ರಾಲ್ಫ್ ವಾಲ್ಡೊ ಎಮರ್ಸನ್ ಅವರ  ಭಾವುಕರಾಗಿ, "ಈ ದೇಶವು ಇನ್ನೂ ಎಷ್ಟು ಎಂತಹ ಮಗನನ್ನು ಕಳೆದುಕೊಂಡಿದೆ ಎಂದು ಎಷ್ಟೋ ಜನರಿಗೆ ತಿಳಿದಿಲ್ಲ,  ಅವರ ಆತ್ಮವು ಉದಾತ್ತ ಸಮಾಜಕ್ಕಾಗಿ ಮಾಡಲ್ಪಟ್ಟಿದೆ; ಅಲ್ಪಾವಧಿಯ ಜೀವನದಲ್ಲಿ ಈ ಪ್ರಪಂಚದ ಸಾಮರ್ಥ್ಯಗಳ ಬಗ್ಗೆ ಅರಿವು ಮೂಡಿಸಿದರು; ಎಲ್ಲಿ ಜ್ಞಾನವಿದೆಯೋ, ಎಲ್ಲಿ ಸದ್ಗುಣವಿದೆಯೋ, ಎಲ್ಲಿ ಸೌಂದರ್ಯವಿದೆಯೋ ಅಲ್ಲಿ ಅವನು ನೆಲೆ ಕಂಡುಕೊಳ್ಳುತ್ತಾನೆ." ಅವರನ್ನು ಮೊದಲು ಮ್ಯಾಸಚೂಸೆಟ್ಸ್‌ನ ಕಾನ್ಕಾರ್ಡ್‌ನಲ್ಲಿರುವ ಸ್ಲೀಪಿ ಹಾಲೋ ಸ್ಮಶಾನದಲ್ಲಿ ಡನ್‌ಬಾರ್ ಕುಟುಂಬದ ಪ್ಲಾಟ್‌ನಲ್ಲಿ ಸಮಾಧಿ ಮಾಡಲಾಯಿತು. ಆದಾಗ್ಯೂ, 1870 ರಲ್ಲಿ, ಅವನ ಸಮಾಧಿಯನ್ನು ಸ್ಮಶಾನದ ಹಿಂಭಾಗಕ್ಕೆ ಲೇಖಕರ ರಿಡ್ಜ್‌ಗೆ ಸ್ಥಳಾಂತರಿಸಲಾಯಿತು, ಅವರ ಬರಹಗಾರ ಸ್ನೇಹಿತರಾದ ಎಮರ್ಸನ್, ಆಲ್ಕಾಟ್, ಹಾಥಾರ್ನ್ ಮತ್ತು ಚಾನ್ನಿಂಗ್ ಅವರ ಸಮಾಧಿಗಳಿಗೆ ಹತ್ತಿರವಾಗಿದೆ.      

ಅಮೇರಿಕನ್ ಸಮಾಜದ ಮೇಲೆ ಪ್ರಭಾವ[ಬದಲಾಯಿಸಿ]

ಹೆನ್ರಿ ಡೇವಿಡ್ ಥೋರೋ ಯಶಸ್ವಿಯಾದ್ದು ಏಕೆಂದರೆ ರಾಲ್ಫ್ ವಾಲ್ಡೋ ಎಮರ್ಸನ್ ಥೋರೋಗೆ ಇಂಗ್ಲೆಂಡ್‌ನಲ್ಲಿ ತನ್ನ ಕೆಲಸವನ್ನು ಹುಡುಕಲು ಸಹಾಯ ಮಾಡಿದರು. ಥೋರೋ ಅವರ ಆಲೋಚನೆಗಳು ಪ್ರಕೃತಿಯ ಬಗ್ಗೆ ಅವರು ಎಮರ್ಸನ್‌ನಿಂದ ಹೆಚ್ಚು ಪ್ರಭಾವಿತರಾಗಿದ್ದರಿಂದ, ಅವರು ಅವರನ್ನು ಅತೀಂದ್ರಿಯತೆಗೆ ಪರಿಚಯಿಸಿದರು. ಅವರು ತಮ್ಮ ಜೀವಿತಾವಧಿಯಲ್ಲಿ ಜನರನ್ನು ಪ್ರೇರೇಪಿಸುವಂತಹ ಕೆಲಸಗಳನ್ನು ಮಾಡುವ ಮೂಲಕ ಮಾದರಿಯಾಗಿದ್ದಾರೆ. ಅವರು ಸಾಮಾನ್ಯ ಸಾಮಾಜಿಕ ನಿಯಮಗಳನ್ನು ಅನುಸರಿಸದ ವ್ಯಕ್ತಿ. ಅವರ ಆಲೋಚನೆಗಳು ಆ ಸಮಯದಲ್ಲಿ ಅವರನ್ನು ಎದ್ದು ಕಾಣುವಂತೆ ಮಾಡಿತು. ಅವರು ಪರಿಸರದ ಬಗ್ಗೆ ಕಾಳಜಿಯನ್ನು ಹೊಂದಿದ್ದರು ಮತ್ತು ಪರಿಸರ ಸ್ನೇಹಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು‌.

ಪ್ರಮುಖ ಕೃತಿಗಳು[ಬದಲಾಯಿಸಿ]

ವಾಲ್ಡೆನ್ ಪುಸ್ತಕವನ್ನು 1854 ರಲ್ಲಿ ಮುದ್ರಿಸಲಾಯಿತು, ಮತ್ತು ಆ ಸಮಯದಲ್ಲಿ ಈ ಪುಸ್ತಕ ಹೆಚ್ಚು ಜನಪ್ರಿಯತೆ ಗಳಿಸಿದ ಪುಸ್ತಕಗಳಲ್ಲಿ ಒಂದಾಗಿದೆ. ಹೆನ್ರಿ ಡೇವಿಡ್ರವರು 1845 ರಲ್ಲಿ ಎರಡು ವರ್ಷ, ಎರಡು ತಿಂಗಳು, ಎರಡು ವಾರಗಳು ಮತ್ತು ಎರಡು ದಿನಗಳ ಕಾಲ ಕೊಳದ ಬಳಿ ಕಾಡಿನಲ್ಲಿ ಉಳಿದಿಕೊಂಡಿರುವ ಬಗ್ಗೆ ಈ ಪುಸ್ತಕದಲ್ಲಿ ಬರೆದಿದ್ದಾರೆ. ಈ ಸಮಯದಲ್ಲಿ ಅವರು ತನ್ನೊಂದಿಗೆ ಹೇಗೆ ಸಮಯ ಕಳೆಯುವುದು, ನಿಸರ್ಗದ ಜೊತೆ ಹೇಗೆ ಬೆರೆಯಬೇಕು ಎಂಬ ಹಲವು ವಿಷಯಗಳನ್ನು ಕಲಿತರು. ದಿ ಮೈನೆ ವುಡ್ಸ್, ಎ ವೀಕ್ ಆನ್ ದಿ ಕಾನ್ಕಾರ್ಡ್ ಮತ್ತು ಮೆರಿಮ್ಯಾಕ್ ರಿವರ್ಸ್ ಪುಸ್ತಕಗಳು ಹೆಚ್ಚು ನೈಸರ್ಗಿಕ ಮತ್ತು ವಸ್ತುವಲ್ಲದ ಜೀವನ ಶೈಲಿಯನ್ನು ಹೊಂದಲು ಪ್ರಯತ್ನಿಸುವ ಆಲೋಚನೆಗಳನ್ನು ಬೆಂಬಲಿಸಿದವು. `ವಾಲೈನ್'ನ ಪ್ರಥಮ ಆವೃತ್ತಿಯ 2,000 ಪ್ರತಿಗಳು ಮಾರಾಟವಾಗ ಬೇಕಾದರೆ ಎಂಟು ವರ್ಷ ಹಿಡಿಯಿತು. ಈಗ ಬಹುಶಃ ಪ್ರತಿ ವಾರವೂ 2000 ಪ್ರತಿಗಳು ಖರ್ಚಾಗುತ್ತವೆ. ಈ ಪುಸ್ತಕ 150 ಆವೃತ್ತಿಗಳನ್ನು ಕಂಡಿದೆ. ಹದಿನೈದಕ್ಕಿಂತ ಹೆಚ್ಚು ಭಾಷೆಗಳಿಗೆ ಭಾಷಾಂತರವಾಗಿದೆ.

ಇತಿಹಾಸ[ಬದಲಾಯಿಸಿ]

ಹೆನ್ರಿ ಡೇವಿಡ್ ಥೋರೋನ ಕಾರ್ಯ ಧೋರಣೆಯನ್ನು ಒಂಟಿ ಮನುಷ್ಯನ ಕ್ರಾಂತಿ' ಎನ್ನಬಹುದು. ಪ್ರಪಂಚವನ್ನು ಬದಲಿಸುವ ತನ್ನ ಪ್ರಯತ್ನದ ಮೊದಲ ಅಂಗವಾಗಿ ತಾನೇ ಬದಲಾಗಬೇಕು ಎಂದುಕೊಂಡು ಸರಳ, ಉದಾತ್ತ ಜೀವನದ ಧೈಯವನ್ನು ಕಾರ್ಯಗತ ಮಾಡಲು ಅವನು ತನ್ನ ಊರಿನ ಹೊರಗಿರುವ ಕಾಡಿನಲ್ಲಿ ವಾಸಿಸಲು ನಿರ್ಧರಿಸಿದ. 1845ರ ವಸಂತಕಾಲದ ಒಂದು ಬೆಳಗ್ಗೆ ನೆರೆಯವನಿಂದ ಒಂದು ಕೊಡಲಿ ಕೇಳಿ ತಂದು ಕಾಡಿನ ಕಡೆಗೆ ಹೊರಟ. ಮರ ಕಡಿದು ಅದರಿಂದಲೇ ಒಂದು ಕೊಠಡಿಯನ್ನು ಕಟ್ಟಿದ. ಹತ್ತಿರದ ಹಳ್ಳದಲ್ಲಿ ಮಾನು ಹಿಡಿ ಯುತ್ತ, ಕೊಂಚ ವ್ಯವಸಾಯ ಮಾಡುತ್ತ ಅಲ್ಲೇ ವಾಸಿಸತೊಡಗಿದ.

1846 ಜೂಲೈಯಲ್ಲಿ ಒಂದು ದಿನ ಥೋರೋ ದುರಸ್ತಿಗೆ ಕೊಟ್ಟಿದ್ದ ತನ್ನ ಪಾದರಕ್ಷೆಯನ್ನು ತರಲು ಮೂರು ಕಿಲೊಮೀಟರು ದೂರದ ೬ ಕಾನ್‌ಕಾರ್ಡ್ ಪಟ್ಟಣಕ್ಕೆ ಹೊರಟ. ಪಟ್ಟಣದ ಸೆರೆಮನೆಯ ಮುಂದೆ ಹೋಗುತ್ತಿದ್ದಾಗ ಸೆರೆಮನೆಯ ಅಧಿಕಾರಿ ಇವನನ್ನು ಹೆಸರು ಹಿಡಿದು ಕರೆದ. “ಹೇಳಲು ದುಃಖವೆನಿಸುತ್ತದೆ, ಆದರೆ ಏನು ಮಾಡಲಿ ? ನಿನ್ನನ್ನು ಹಿಡಿದು ಜೈಲಿಗೆ ಹಾಕಲು ಹುಕುಂ ಬಂದಿದೆ,” ಎಂದ ಆತ," ಜೈಲಿಗೆ ? ನನ್ನನ್ನು ? ಯಾಕಪ್ಪಾ? " ಥೋರೋ ಕೇಳಿದ “ನಿನಗೂ ಗೊತ್ತಿದೆ -ನಾಲ್ಕು ವರ್ಷಗಳಿಂದ ನೀನು ತೆರಿಗೆ ಕೊಟ್ಟಿಲ್ಲ. ಹೀಗೆ ಬಾ."

ಇನ್ನೂ ಗುಲಾಮಗಿರಿಯನ್ನು ರದ್ದು ಮಾಡದ, ಹಾಗೂ ನೆರೆಯ ಮೆಕ್ಸಿಕೊದೊಡನೆ ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಮ್ಯಾಸಚುಸಟ್ಸ್ ಪ್ರಭುತ್ವಕ್ಕೆ ತೆರಿಗೆ ಕೊಡುವುದನ್ನು ಥೋರೋ ವಿರೋಧಿಸಿದ್ದ. “ಅನ್ಯಾಯವಾಗಿ ಯಾರನ್ನಾದರೂ ಸೆರೆಮನೆಗೆ ಕಳುಹಿಸುವ ಸರಕಾರವಿರುವಾಗ ಈ ಗುಲಾಮ ರಾಜ್ಯದಲ್ಲಿ ನ್ಯಾಯವಂತನ ಸ್ಥಾನ ಸೆರೆಮನೆಯೇ, ಸ್ವತಂತ್ರ ಮನುಷ್ಯನೊಬ್ಬ ಮರ್ಯಾದೆಯಿಂದ ಬದುಕಬಹುದಾದ ಸ್ಥಳವೆಂದರೆ ಇದೆ," ಎಂದು ಥೋರೋ ಧೀರತನದಿಂದ ಸೆರೆಮನೆಗೆ ನಡೆದ, "ಯಾವ ರೀತಿ ಯಲ್ಲಿ ನೋಡಿದರೂ ಇಂಥ ಸರಕಾರಕ್ಕೆ ವಿಧೇಯನಾಗಿರುವುದಕ್ಕಿಂತ ಅಸಹಕಾರ ತೋರುವುದೇ ಕಡಮೆ ಖರ್ಚಿನ ವ್ಯವಹಾರ," ಎ೦ದ.

ಕಾರಾಗೃಹ ಸೇರಿದ, ಆ ರಾತ್ರಿ ಧೋರೋ 'ಆನ್ ದಿ ಡ್ಯೂಟಿ ಆಫ್ ಡಿಸ್‌ಒಬೀಡಿಯನ್ಸ್' ಎಂಬ ಪ್ರಬಂಧ ಬರೆದ ಸರಕಾರ ಅಡ್ಡದಾರಿ ಹಿಡಿದಾಗ ಅದನ್ನು ವಿರೋಧಿಸುವುದು ಪ್ರಾಮಾಣಿಕ ನಾಗರಿಕನ ಕರ್ತವ್ಯ ಎಂಬುದೇ ಇದರಲ್ಲಿ ಪ್ರತಿಪಾದಿಕವಾದ ತತ್ರ. ಟಾಲ್‌ ಸ್ಟಾಯ್, ಮಹಾತ್ಮಾ ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ರಂಥವರ ಮೇಲೆ ಪ್ರಭಾವ ಬೀರಿದ ಪುಬಂಧ ಇದು. * ಥೋರೋ ನನ್ನ ಗುರು, ನಾನು ಮಾಡುತ್ತಿರುವ ಅಸಹಕಾರ ಚಳುವಳಿಯನ್ನು ಈ ಪ್ರಬಂಧ ಶಾಸ್ತ್ರೀಯವಾಗಿ ದೃಢಪಡಿಸಿದೆ" ಎಂದು ಗಾಂಧಿಜಿ ಹೇಳಿದ್ದರು. ಈ ಪ್ರಬಂಧ ಪ್ರಕಟ ವಾಗಿ ಮೂರಕ್ಕಿಂತ ಹೆಚ್ಚು ವರ್ಷಗಳಾಗಿದ್ದರೂ ಇದರ ಪ್ರಭಾವ ಇನ್ನೂ ಕಡಮೆಯಾಗಿಲ್ಲ.

ಮ್ಯಾಸಚೂಸೆಟ್ಸ್ ಸಂಸ್ತಾನದ ಕಾನ್ಕಾರ್ಡ್ ಪಟ್ಟಣದಲ್ಲಿ ಪೆನ್ನಿ ಡೇವಿಡ್‌ ಥೋರೋ 1817, ಜೂಲೈ 11ರಂದು ಹುಟ್ಟಿದ ಮನೆಯಲ್ಲಿ ಕಡು ಬಡತನ. ಆದರೂ ಬುದ್ಧಿವಂತ ಹುಡುಗನನ್ನು ಕಾಲೇಜಿಗೆ ಕಳುಹಿಸುವ ಏರ್ಪಾಡಾಯಿತು. ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಬಂದ ಹೆನ್ರಿ, ತನ್ನ ಸಹೋದರ ಜಾನ್‌ನೊಡನೆ ಸೇರಿ ಮನೆಯಲ್ಲೇ ಒಂದು ಶಾಲೆಯನ್ನು ತೆರೆದ. ಎಲ್ಲ ವಿಧದ ಪ್ರಗತಿಪರ ಶಾಲೆ ಎಂದು ಕರೆಸಿಕೊಳ್ಳಬಹುದಾದ ಸಂಸ್ಥೆಯಿದು. ಲ್ಯಾಟಿನ್, ಗ್ರೀಕ್, ಗಣಿತಗಳ ಪಾಠದ ಜೊತೆಗೆ ಸ್ವಂತ ಪ್ರಯೋಗಗಳಿಂದ ಜ್ಞಾನಾರ್ಜನೆ ಮಾಡುವ ಅವಕಾಶ ಈ ಶಾಲೆಯ ವಿದ್ಯಾರ್ಥಿಗಳಿಗೆ ದೊರಕಿತ್ತು. ತರಗತಿಯಲ್ಲಿ ಕುಳಿತು ಕಲಿತುಕೊಳ್ಳುವುದು ಮಾತ್ರವಲ್ಲದೆ, ಮಕ್ಕಳಿಗೆ ನಿಸರ್ಗದ ಪರಿಚಯ ಮಾಡಿಕೊಡಲು ಆಗಾಗ ಪ್ರವಾಸಗಳನ್ನು ಏರ್ಪಾಟು ಮಾಡುವ ಪದ್ದತಿಯೂ ಇತ್ತು. ಈ ಶಾಲೆ ನಾಲ್ಕು ವರ್ಷಗಳ ಕಾಲ ನಡೆಯಿತು. 1841ರಲ್ಲಿ ಜಾನ್‌ ಆನಾರೋಗ್ಯದಿಂದಾಗಿ ಇದನ್ನು ಮುಚ್ಚಬೇಕಾಯಿತು,

ಥೋರೋನ ತಂದೆ ಪೆನ್ಸಿಲ್ ತಯಾರಿ ಅಂಗಡಿ ಇಟ್ಟಿದ್ದರು. ಸ್ವಲ್ಪ ಕಾಲ ಥೋರೋ ಆ ಅಂಗಡಿಯಲ್ಲಿ ಕೆಲಸ ಮಾಡಿದ. ಸ್ಟಾಲ್ ತಯಾರಿಯ ಹೊಸ ವಿಧಾನವೊಂದನ್ನು ಈತ ಕಂಡುಹಿಡಿದ. ಆಗಾಗ ಪ್ರಬಂಧ, ಪದ್ಯ ಬರೆದು ಪತ್ರಿಕೆಗಳಿಗೆ ಕಳುಹಿಸುತ್ತಿದ್ದ. ಕಾನ್‌ಕಾರ್ಡ್‌ನಲ್ಲಿದ್ದ ಸಾಹಿತಿ, ರಾಲ್ಫ್ ವಾಲ್ಸ್ ಎಮರ್‌ಸನ್ ಲೇಖಕನಾಗುವಂತೆ ಇವನನ್ನು ಪ್ರೋತ್ಸಾಹಿಸಿದ. 1841ರಿಂದ 1843 ರವರೆಗೆ ಥೋರೊ ಏಮರ್‌ಸನ್‌ನ ಮನೆಯಲ್ಲೇ ವಾಸವಾಗಿದ್ದ,

ಒಮ್ಮೆ ಥೋರೋ, ಮನೆಯಲ್ಲೇ ತಯಾರಿಸಿದ ದೋಣಿಯಲ್ಲಿ ಕುಳಿತು ಕಾನ್‌ಕಾರ್ಡಿನಿಂದ ಹೊರಟು ನ್ಯೂ ಹ್ಯಾಂಪ್‌ಶೈ‌ಗೆ ತನ್ನ ಸಹೋದರ ನೊಡನೆ ಪ್ರಯಾಣ ಮಾಡಿದ ಈ ಪ್ರವಾಸದ ಕಥನ” ಎ ವೀಕ್ ಆನ ದಿ ಕಾನ್‌ಕಾರ್ಡ್‌, ಅಂಡ್ ಮೆಮ್ಯಾಕ್ ರಿವರ್ " 1849ರಲ್ಲಿ ಪ್ರಕಟವಾಯಿತು. ಆದರೆ, ಖರ್ಚಾದದ್ದು ನೂರಿನ್ನೂರು ಪ್ರತಿಗಳು ಮಾತ್ರ. ಮುದ್ರಣದ ಖರ್ಚ ಹುಟ್ಟಲಿಲ್ಲ. ಲೇಖಕನೇ ಅದರ ಭಾರ ಹೊರ ಬೇಕಾಯಿತು, ಸುಣ್ಣ ಬಳೆಯುವುದು, ತೋಟ ಅಗೆಯುವುದು. ಬೇ ಏನ ಸರಿಮಾಡುವುದು ಮುಂತಾದ ಸಣ್ಣ ಪುಟ್ಟ ಕೆಲಸಮಾಡಿ ಈತ ಸ ಮ: ಕೂಡಿಸಬೇಕಾಯಿತು.

ಎರಡು ವರ್ಷಗಳ ಅರಣ್ಯ ಜೀವನದ ಚಿತ್ರಣವೇ `ವಾಯ್ಸನ್' (1854) ಇದು ಪ್ರಕೃತಿ ಸೌಂದರ್ಯದ ಸ್ತುತಿ, ಸರಳ ಜೀವನದ ಶ್ಲಾಘನೆ, “ಪ್ರತಿ ಮುಂಜಾನೆಯೂ ಪ್ರಕೃತಿ ತನ್ನ ಜೀವನದಲ್ಲಿ ಪಾಲುಗೊಳ್ಳಲು ನನ್ನನ್ನು ಆಹ್ವಾನಿಸುವಂತಿತ್ತು." ಎಂದಿದ್ದಾನೆ ಥೋರೋ, ಬಾಹ್ಯ ಪ್ರಪಂಚವನ್ನು ಇವನು ಬಹಳವಾಗಿ ಮೆಚ್ಚುತ್ತಿದ್ದರೂ 'ವಾಲೈನ್'ನಲ್ಲಿ ಪ್ರಕೃತಿಯ ಗೆ ವರ್ಣನೆಗಿಂತ ಮನೋವ್ಯಾಪಾರದ ನಿರೂಪಣೆಯೇ ಹೆಚ್ಚಾಗಿದೆ. ಸಾಮಾಜಿಕ - ಮತ್ತು ಆರ್ಥಿಕ ಅನ್ಯಾಯಗಳ ವಿರುದ್ಧ ವಿಡಂಬನೆಯಿದೆ. ನಾಗರಿಕತೆಯು ನಾವು ವಾಸಿಸುವ ಮನೆಗಳನ್ನು ಸುಧಾರಿಸಿದರೂ ಅವುಗಳಲ್ಲಿ ವಾಸಿಸುವವರನ್ನು ಸುಧಾರಿಸಿಲ್ಲ. ಮನುಷ್ಯ ಲೌಕಿಕವಸ್ತುಗಳನ್ನು ದೂರ ಏರಿಸಿದಷ್ಟೂ ಶ್ರೀಮಂತನಾಗುತ್ತಾನೆ. ಕಾಲ್ನಡೆಯಲ್ಲಿ ಹೋಗುವವನೆ ಅತ್ಯಂತ ವೇಗವಾಗಿ ಹೋಗುವವನೆಂದು ನಾನು ಕಂಡುಕೊಂಡಿದ್ದೇನೆ. " ಇಂಥ ಹೇಳಿಕೆಗಳು ಥೋರೋ ಬೆಳೆಸಿಕೊಂಡಿದ್ದ ಜೀವನ ದೃಷ್ಟಿ ಏನೆಂಬುದನ್ನು ತೋರಿಸುತ್ತವೆ.

1862, ಮೇ 6ರಂದು ತನ್ನ ನಲವತ್ತನಾಲ್ಕನೆಯ ವಯಸ್ಸಿನಲ್ಲಿ ಥೋರೋನ ಅಂತ್ಯವಾಯಿತು. ಥೋರೋವಿನ ಮರಣ ಸಂದರ್ಭದಲ್ಲಿ ಮಾತನಾಡುತ್ತ, ಎಮರ್‌ಸನ್, "ಎಂಥ ಮಹಾ ಪುತ್ರನನ್ನು ಕಳೆದುಕೊಂಡೆವೆಂಬುದರ ಅರಿವು ಇನ್ನೂ ಆಗಿಲ್ಲ," ಎಂದು ಹೇಳಿದ್ದು ನಿಜವಾದ ಮಾತು, ಥೋರೋ ಬದುಕಿದ್ದಾಗ, ಅವನ ಹೆಸರನ್ನು ಕೂಡ ಅನೇಕರು ಕೇಳಿರಲಿಲ್ಲ. [೧] [೨] [೩]


ದಾಂತೆ ಅಲಿಘೇರಿಯು[ಬದಲಾಯಿಸಿ]

ದಾಂತೆ ಅಲಿಘೇರಿಯು

ಇಟಲಿಯಲ್ಲಿ ಸಹಸ್ರಾರು ಜನರಿಗೆ 14,000 ಸಾಲು ಉದ್ದದ ಮಹಾ ಕಾವ್ಯ 'ಡಿವೈನ್ ಕಾಮಿಡಿ' ಕಂಠಪಾಠವಾಗಿರುತ್ತದೆ. ಪ್ರತಿ ವರ್ಷ ಈ ಕೃತಿಯ 80,000ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗುತ್ತವೆ. 50ಕ್ಕೂ ಹೆಚ್ಚು ಭಾಷೆಗಳಿಗೆ ಇದು ಭಾಷಾಂತರವಾಗಿದೆ. ಪ್ರಸಿದ್ಧ ಚಿತ್ರಕಾರ ದು ತನ್ನ ಮೈಕೆಲೆಂಜಲೋ 'ಡಿವೈನ್ ಕಾಮಿಡಿ'ಯನ್ನು ಓದಿ 'ಕೊನೆಯ ತೀರ್ಪು' ಎಂಬ ತನ್ನ ಮಹಾ ಕಲಾಕೃತಿಯನ್ನು ರಚಿಸಿದ. ಇಂಥ ಪ್ರಭಾವಶಾಲಿ ಗ್ರಂಥದ ಲೇಖಕ ದಾಂತೆ. "ದಾಂತೆಯ ಕವನ ಪುರಾತನ ಮತ್ತು ಆಧುನಿಕ ಕಾಲಗಳಿಗೆ ಸಂಬಂಧವನ್ನು ಕಲ್ಪಿಸಿದ ಸೇತುವೆ" ಎಂದು ಕವಿ ಷೆಲ್ಲಿ ಹೇಳಿದ್ದಾನೆ. ಇಟಲಿಯ 'ಕತ್ತಲೆಯ ಯುಗ 'ದಲ್ಲಿ ಎದ್ದು ತೋರುವ ಈ ವ್ಯಕ್ತಿ ಆ ದೇಶದ ರಾಷ್ಟ್ರಕವಿ.

1965ರಲ್ಲಿ ಜಗತ್ತಿನಾದ್ಯಂತ ದಾಂತೆಯ ಏಳನೆಯ ಶತಾಬ್ದಿ ಆಚರಿಸಲ್ಪಟ್ಟಿತು. ಇಟಲಿಯ ಜನ ಸಾರ್ವಜನಿಕ ಸಭೆ, ಟೆಲಿವಿಷನ್ ಕಾರ್ಯಕ್ರಮ, ವಸ್ತುಪ್ರದರ್ಶನಗಳನ್ನು ಏರ್ಪಡಿಸಿ ತಮ್ಮ ರಾಷ್ಟ್ರಕವಿಯನ್ನು ಗೌರವಿಸಿದರು. ದಾಂತೆಯ ಸಾಹಿತ್ಯ ಕೃತಿಗಳನ್ನು ಅಭ್ಯಸಿಸುವ ವಿದ್ವಾಂಸರು, ದಾಂತೆಯ ಜನ್ಮಸ್ಥಳವಾದ ಫ್ಲಾರೆನ್ಸಿನಿಂದ ಹೊರಟು ದಾಂತೆ ಬದುಕಿದ್ದಾಗ ಅವನ ಸಂಪರ್ಕ ಹೊಂದಿದ್ದ ವರೋನಾ, ರಾವೆನಾ ನಗರಗಳ ತೀರ್ಥಯಾತ್ರೆ ಕೈಗೊಂಡರು. ಪ್ರತಿ ವರ್ಷ ಮೇ 22ರಂದು ಇಟಲಿಯ ಶಾಲಾ ವಿದ್ಯಾರ್ಥಿಗಳು 'ದಾಂತೆ ದಿನ' ವನ್ನು ಆಚರಿಸುತ್ತಾರೆ.

ದಾಂತೆ 1265ರಲ್ಲಿ ಫ್ಲಾರೆನ್ಸ್‌ ನಲ್ಲಿ ಜನಿಸಿದ. ಅವನದು ಹಿರಿಯ ಮನೆತನ. ಚಿಕ್ಕವನಾಗಿದ್ದಾಗಲೇ ಪಾಠ ಹೇಳಲು ಶಿಕ್ಷಕರು ಮನೆಗೆ ಬರುತ್ತಿದ್ದರು. ಬಾಲಕ ದಾಂತೆ ಕೈಗೆ ಸಿಕ್ಕಿದ ಪುಸ್ತಕಗಳನ್ನೆಲ್ಲ ಓದುತ್ತಿದ್ದ. ಪ್ರಾಚೀನ ಮಹಾಕಾವ್ಯಗಳೂ ವೈಜ್ಞಾನಿಕ ಗ್ರಂಥಗಳೂ ಅವನಿಗೆ ಪರಿಚಿತ ವಾಗಿದ್ದುವು. ಪ್ರಾಸಬದ್ಧವಾಗಿ ಮಾತುಕತೆಯಾಡುವುದನ್ನೂ ಅವನು ಕಲಿತುಕೊಂಡಿದ್ದ.

ದಾಂತೆ ಅಲಿಘೇರಿಯು

ದಾಂತೆ ಒಂಬತ್ತು ವರ್ಷದವನಾಗಿದ್ದಾಗ ಒಂದು ಸಮಾರಂಭದಲ್ಲಿ ತನ್ನ ವಯಸ್ಸಿನ, ನಾಚಿಕೆ ಸ್ವಭಾವದ ಚೆಲುವೆ ಬಿಯಾಟ್ರಿಸಳನ್ನು ಕಂಡು ಆಕರ್ಷಿತನಾದ. ಬಿಯಾಟ್ರಿಸ್ ದಾಂತೆಯ ಆದರ್ಶಮೂರ್ತಿಯಾದಳು. ಅವನು ಅವಳನ್ನು ಮಾತನಾಡಿಸಿದ್ದು ಬಹುಶಃ ಒಂದೇ ಸಲ. ದೂರದಿಂದ ನೋಡುತ್ತ ಅವಳನ್ನು ಆರಾಧಿಸುತ್ತಿದ್ದ. ಬಿಯಾಟ್ರಿಸ್ ಬೇರೊಬ್ಬನನ್ನು ವಿವಾಹವಾದಳು. ತನ್ನ 23ನೆಯ ವಯಸ್ಸಿನಲ್ಲಿ ಸತ್ತುಹೋದಳು. ಆದರೆ ಅವಳ ಬಗೆಗೆ ದಾಂತೆಯದು ಸಾವಿಲ್ಲದ ಪ್ರೇಮ. ತನ್ನ ಜೀವನದ ಕೊನೆಯವರೆಗೂ ದಾಂತೆ ಅವಳ ನೆನಪಿನಿಂದ ಪ್ರಭಾವಿತನಾಗಿದ್ದ, ಅವಳನ್ನು ಕುರಿತು ಅನೇಕ ಪ್ರೇಮಗೀತೆಗಳನ್ನು ಬರೆದ. ಅವಳ ಮರಣಾ ನಂತರ ದಾಂತೆ ಬರೆದ 'ಹೊಸ ಜೀವನ' ಎಂಬ ಗ್ರಂಥದಲ್ಲಿ ತನ್ನ ಬಾಲ್ಯ ಯೌವನಗಳ ಪ್ರೇಮಭಾವವನ್ನು ನಿರೂಪಿಸಿದ್ದಾನೆ. ಅದನ್ನು ರಚಿಸಿದಾಗ ದಾಂತೆಗಿನ್ನೂ ಮೂವತ್ತು ತುಂಬಿರಲಿಲ್ಲ. ಈ ಪುಸ್ತಕ ಇಟಲಿಯಾದ್ಯಂತ ಜನಪ್ರಿಯವಾಯಿತು.

ದಾಂತೆ ಕವಿ, ತತ್ತ್ವಜ್ಞಾನಿ, ಧರ್ಮಶಾಸ್ತ್ರಜ್ಞ, ಅಲ್ಲದೆ ರಾಜಕಾರಣಿಯ ಆಗಿದ್ದ. ಯೂರೋಪಿನಲ್ಲಿ ತೀವ್ರ ಬದಲಾವಣೆಗಳಾಗುತ್ತಿದ್ದ ಕಾಲ ಅದು. ಅಲ್ಲದೆ ಧರ್ಮಾಧಿಕಾರಿಗಳಿಗೂ ಚಕ್ರವರ್ತಿಗಳಿಗೂ ವಿರಸ ಉಂಟಾಗಿತ್ತು. ಪೋಪನ ಕಡೆಯವರೂ ರಾಜವಂಶದ ಕಡೆಯವರೂ ಬೇರೆ ಬೇರೆ ಪಂಗಡಗಳಾಗಿ ಕಚ್ಚಾಡುತ್ತಿದ್ದರು, ಹೊಡೆದಾಡುತ್ತಿದ್ದರು. ದಾಂತೆ ಧರ್ಮಾಧಿಕಾರಿಗಳ ಪಕ್ಷ ವಹಿಸಿದ. ಪ್ರಜಾಪ್ರಭುತ್ವ ಮಾದರಿಯ ಸರಕಾರವಿದ್ದ ಫ್ಲಾರೆನ್ಸಿನಲ್ಲಿ ಉನ್ನತ ಸ್ಥಾನಕ್ಕೆ ಆಯ್ಕೆಗೊಂಡ. ಆದರೆ ದಾಂತೆಯ ಮೇಲೆ ಹಲವಾರು ಆರೋಪಗಳು ಬಂದದ್ದರಿಂದ ಅವನನ್ನು ಗಡೀಪಾರು ಮಾಡಿದರು. ಪುನಃ ಫ್ಲಾರೆನ್ಸಿಗೆ ಬಂದರೆ ತಲೆದಂಡ ವಿಧಿಸಲಾಗುವುದೆಂದು ಬೆದರಿಕೆ ಹಾಕಿದರು. 1302ರಲ್ಲಿ ಫ್ಲಾರೆನ್ಸ್ ಬಿಟ್ಟ ದಾಂತೆ ಮತ್ತೆ ಅಲ್ಲಿಗೆ ಹಿಂದಿರುಗಲಿಲ್ಲ.

ಮುಂದಿನ ಹದಿನೆಂಟು ವರ್ಷಗಳ ಕಾಲ ದಾಂತೆ ಊರಿಂದ ಊರಿಗೆ ತಿರುಗುತ್ತ ಕಳೆದ. ಅವನ ಮಹಾ ಕೃತಿ ನಿರ್ಮಾಣ ವಾದದ್ದು ಈ ಕಾಲಾವಧಿಯಲ್ಲಿ, ಆ ಯವನು ಹೋದಲ್ಲೆಲ್ಲ ವಿದ್ವಾಂಸರೂ, ಪ್ರಮುಖ ನಾಗರಿಕರೂ ಅವನನ್ನು ಅತ್ಯಂತ ಆದರದಿಂದ ಸ್ವಾಗತಿಸಿ ಆತಿಥ್ಯ ನೀಡುತ್ತಿದ್ದರು. ಆದರೆ ದ್ವೇಷ, ದುರಾಸೆ, ಹಿಂಸೆಗಳ ಪರಿಚಯವೂ ಸಾಕಷ್ಟು ಆಯಿತು.

1310 - 1313 ವರೆಗಿನ ಅವಧಿಯಲ್ಲಿ ದಾಂತೆ ಮೂರು ಸಂಪುಟಗಳ 'ರಾಜಪ್ರಭುತ್ವ' ಎಂಬ ಪುಸ್ತಕವನ್ನು ಬರೆದ. ಇದರಲ್ಲಿ ಅವನ ರಾಜಕೀಯ ಅಭಿಪ್ರಾಯಗಳ ವಿವರಣೆ ಇದೆ. ಯೂರೋಪನ್ನು ಇತ್ತಂಡ ಮಾಡಿದ್ದ ಚಕ್ರವರ್ತಿಗಳ ಮತ್ತು ಮಠಾಧಿಕಾರಿಗಳ ಮಧ್ಯೆ ನಡೆಯುತ್ತಿದ್ದ ಯುದ್ಧವನ್ನು ದಾಂತೆ ಆ ಕೃತಿಯಲ್ಲಿ ಖಂಡಿಸಿದ್ದಾನೆ. 'ಔತಣ' ಎಂಬುದು ದಾಂತೆಯ ಮತ್ತೊಂದು ಶ್ರೇಷ್ಠ ಕೃತಿ. ಇದು ವಿಜ್ಞಾನ ಮತ್ತು ಬೌದ್ಧಿಕತೆಗಳನ್ನು ಕುರಿತ ವ್ಯಾಖ್ಯಾನ. ದಾಂತೆ ಕವಿತಿಲಕ ಎನಿಸಿದ್ದು ಅವನ 'ಡಿವೈನ್ ಕಾಮಿಡಿ' ಎಂಬ ಮಹಾಕೃತಿಯಿಂದಾಗಿ. ಇದು ಸ್ವರ್ಗ, ಶುದ್ಧಿ ಲೋಕ, ನರಕಗಳಲ್ಲಿ ತಾನು ನಡೆಸಿದ ಕಾಲ್ಪನಿಕ ಸಂಚಾರದ ವಿವರಣೆಯನ್ನು ಒಳಗೊಂಡ ಕಥನ ಕವನ.

'ಡಿವೈನ್ ಕಾಮಿಡಿ'ಯ ವಸ್ತು ಇದು : ಆ ದಿನ ಗುಡ್ ಪ್ರೈಡೆ. ಮಂಜು ಮುಸುಕಿತ್ತು. ತಿರುಗಾಟಕ್ಕೆ ಹೊರಟ ದಾಂತೆ ಸನ್ಮಾರ್ಗದಿಂದ ದೂರಹೋಗಿ ಕಗ್ಗತ್ತಲು ತುಂಬಿದ ಕಾಡಿನಲ್ಲಿ ದಾರಿ ತಪ್ಪುತ್ತಾನೆ. ಬಹಳ ಹಿಂದೆ ಸತ್ತುಹೋಗಿದ್ದ ರೋಮಿನ ಕವಿ ವರ್ಜಿಲನ ಆತ್ಮ ಅವನ ರಕ್ಷಣೆಗೆ ಬರುತ್ತದೆ. "ನಿನಗೆ ಹೊಸ ಜಗತ್ತನ್ನು ತೋರಿಸಲು ದೇವತೆಗಳು ನನ್ನನ್ನು ಕಳುಹಿಸಿದ್ದಾರೆ" ಎನ್ನುತ್ತದೆ. ಅದರ ಜೊತೆಯಲ್ಲಿ ಸಂಚಾರಕ್ಕೆ ಹೊರಟಾಗ ಮೊದಲು ಸಿಗುವುದು ನರಕ. ಹೆಚ್ಚಿನ ಭಾಗ ಕತ್ತಲು. ಅಲ್ಲಿ ಇಲ್ಲಿ ಬೆಂಕಿ ಹಚ್ಚಿದ್ದು ಕಂಡು ಬರುತ್ತದೆ. ಒಂದು ದೊಡ್ಡ ನಗರವೇ ಹೊತ್ತಿಕೊಂಡು ಉರಿಯುತ್ತಿರುತದೆ. ಯಾವ ಕಡೆಗೆ ತಿರುಗಿದರೂ ಪಾಪಾತ್ಮಗಳ ನಿಟ್ಟುಸಿರು, ಹಾಹಾಕಾರ, ಕರುಣಾಜನಕ ಕೂಗು. ಯಾವ ದಿಕ್ಕಿನಲ್ಲಿ ನೋಡಿದರೂ ಚಿತ್ರಹಿಂಸೆ ಯಾತನೆ.

ನರಕದ ಕೊನೆಯಲ್ಲಿ ಒಂದು ಚಿಕ್ಕ ಬಾಗಿಲು ದಾಟಿದರೆ ಅದು ಶುದ್ದಿ ಲೋಕ, ಆದರೆ ಬಾಗಿಲಿನ ಎದುರು ದೈತ್ಯಾಕಾರದ ಶನಿ ತೂಕಡಿಸುತ್ತ ಕುಳಿತಿದ್ದಾನೆ. ದಾಂತೆ ಮತ್ತು ವರ್ಜಿಲರು ಧೈರ್ಯಮಾಡಿ ಶನಿಯ ದೇಹ ವನ್ನು ಹತ್ತಿ ಆ ಬದಿಗೆ ಹಾರಿ ಶುದ್ದಿ ಲೋಕದತ್ತ ಓಡುತ್ತಾರೆ. ಶುದ್ದಿ ಲೋಕದ ವರ್ಣನೆಯೂ ಕಣ್ಣಿಗೆ ಕಟ್ಟುವಂಥದ್ದು. ಆದರೆ ಇದು ನರಕದಷ್ಟು ಭಯಂಕರವಾಗಿಲ್ಲ. ಪ್ರಾಯಶ್ಚಿತ್ತದ ಬಳಿಕ ಈ ಆತ್ಮಗಳು ಸ್ವರ್ಗಸೇರುವ ಅವಕಾಶ ಉಂಟು. ಶುದ್ದಿ ಲೋಕ ಒಂದು ಪರ್ವತದ ಆಕಾರದ್ದು. ಏರುತ್ತ ಏರುತ್ತ ದಾಂತೆ ಇದರ ತುದಿಗೆ ಬರುತ್ತಾನೆ. ಅಷ್ಟರಲ್ಲಿ ಒಂದು ಹೆಣ್ಣು ದನಿ ಅವನನ್ನು ಹೆಸರು ಹಿಡಿದು ಕರೆದದ್ದು ಕೇಳಿಸುತ್ತದೆ. ಮೇಲೆ ನೋಡುತ್ತಾನೆ. ಅವನ ಬಾಲ್ಯದ ಸಖಿ ಬಿಯಾಟ್ರಿಸ್, ದಾಂತೆಗೆ ಸ್ವರ್ಗದರ್ಶನ ಮಾಡಿಸಲು ಆಕೆ ಬಂದಿದ್ದಳು. ಸ್ವರ್ಗದಲ್ಲಿ ಎತ್ತರ ಎತ್ತರ ಹೋದಂತೆ ಇಂಪಾದ ಸಂಗೀತ ಕಿವಿಯ ಮೇಲೆ ಬೀಳುತ್ತಿರುತ್ತದೆ. ಎತ್ತರಕ್ಕೆ ಹೋಗುತ್ತ, ದೇವರು ಇದ್ದಲ್ಲಿಗೆ ಇವರು ಬರುತ್ತಾರೆ. ಈ ಆನಂದ ಸನ್ನಿವೇಶದೊಂದಿಗೆ ಹತ್ತು ದಿನಗಳ ಸಂಚಾರ ಕೊನೆಗಾಣುತ್ತದೆ.

ದಾಂತೆಗೆ ಈ ಮಹಾಕಾವ್ಯವನ್ನು ಬರೆಯಲು ಇಪ್ಪತ್ತು ವರ್ಷ ಹಿಡಿ ಯಿತು. ಕಾವ್ಯದಲ್ಲಿ ಒಟ್ಟು ಮೂರು ಭಾಗಗಳು ; ನೂರು ಅಧ್ಯಾಯ ಗಳು. ಆಗಿನ ವಿದ್ವಾಂಸರೆಲ್ಲ ಲ್ಯಾಟಿನ್ ಭಾಷೆಯಲ್ಲಿ ಬರೆಯುತ್ತಿದ್ದರೂ ಜನಸಾಮಾನ್ಯರ ಕವಿ ದಾಂತೆ ಇಟಾಲಿಯನ್ ಭಾಷೆಯನ್ನು ಉಪಯೋಗಿ ಸಿದ. ತಾನೇ ಹೊಸದಾಗಿ ರಚಿಸಿದ 'ಟರ್ಜಾ ರಿಮಾ' ಎಂಬ ಪ್ರಾಸದಲ್ಲಿ ಬರೆದ. ಈ ಕಾವ್ಯ ಪ್ರಕಟವಾದೊಡನೆಯೇ ಜನಪ್ರಿಯವಾಯಿತು. ಅತಿ ನೈಜ ವಿವರಗಳಿಂದ ಕೂಡಿದ್ದ ಈ ಕಥೆ ನಿಜವಾಗಿಯೂ ನಡೆದದ್ದೇ ಎಂದು ಭಾವಿಸಿದವರು ಎಷ್ಟೋ ಮಂದಿ.

ದಾಂತೆಯ ಈ ಕೃತಿ ಅತಿ ಶ್ರೇಷ್ಠ ನೀತಿ ಕಥೆ, ಜಗತ್ತಿನಲ್ಲಿ ನಡೆಯುವ ಅನ್ಯಾಯ ದಬ್ಬಾಳಿಕೆಗಳ ಖಂಡನೆ. ಜನ ತಮ್ಮ ಆತ್ಮವನ್ನು ಪರೀಕ್ಷಿಸಿಕೊಂಡು ಪರಿಶುದ್ಧರಾಗಲು ಸಂದೇಶ, ಕಥೆ ಸುಖಾಂತವಾದ್ದರಿಂದ ದಾಂತೆ ಇದನ್ನು 'ಕಮಿಡಿಯಾ' (ಕಾಮಿಡಿ) ಎಂದು ಕರೆದ. ಅವನ ಮರಣದ 234 ವರ್ಷಗಳ ಬಳಿಕ ಪುಸ್ತಕ ಪ್ರಕಾಶಕನೊಬ್ಬ ಹೊಸ ಆವೃತ್ತಿಯನ್ನು ಪ್ರಕ ಟಿಸುವಾಗ ಇದಕ್ಕೆ 'ಡಿವೈನ್' ಎಂಬ ಪದ ಸೇರಿಸಿದ. ಅಂದಿನಿಂದ ಈ ಕಾವ್ಯ 'ಡಿವೈನ್ ಕಾಮಿಡಿ' ಎಂದು ಪ್ರಸಿದ್ಧವಾಗಿದೆ.

ದಾಂತೆ ತನ್ನ ಕೊನೆಯ ವರ್ಷಗಳನ್ನು ರಾವೆನಾ ನಗರದಲ್ಲಿ ಕಳೆದ. ಆದರೆ ತನ್ನನ್ನು ಬಹಿಷ್ಕರಿಸಿದ ಫ್ಲಾರೆನ್ಸನ್ನು ಅವನು ಎಂದೂ ಮರೆಯಲಿಲ್ಲ. ಒಮ್ಮೆ ಮನೆಯ ಹಂಬಲದ ಮನೋವ್ಯಥೆಯಿಂದ ಬರೆದರೆ ಇನ್ನೊಮ್ಮೆ ಫ್ಲಾರೆನ್ಸನ್ನು ಜರೆದು ಬರೆಯುತ್ತಿದ್ದ. ಕೊನೆಗೊಮ್ಮೆ ಫ್ಲಾರೆನ್ಸ್ ಸರಕಾರ ಈ ಮಹಾಕವಿಯನ್ನು 'ಮನ್ನಿಸಿ', ದಂಡವನ್ನು ಕೊಟ್ಟರೆ ಪುನಃ ಅಲ್ಲಿಗೆ ಬರಬಹುದು ಎಂದು ಹೇಳಿತು. ಆದರೆ ಆ ನಗರದ ಶ್ರೇಷ್ಠ ಪುತ್ರನಾದ ದಾಂತೆ ಇದಕ್ಕೊಪ್ಪಲಿಲ್ಲ. 1321ರ ಸೆಪ್ಟೆಂಬರ್ 14 ರಂದು ರಾವೆನಾದಲ್ಲಿ ನಿಧನನಾದ.

ದಾಂತೆ ಸತ್ತ ಮೇಲೆ ಫ್ಲಾರೆನ್ಸಿನ ಜನ ಅವನ ಮೃತದೇಹ ತಮಗೆ ಸಲ್ಲಬೇಕು ಎಂದು ವಾದಿಸಿದರು. ಊರಿನ ಪ್ರಮುಖ ಇಗರ್ಜಿಯಲ್ಲಿ ಒಂದು ಭವ್ಯ ಸಮಾಧಿಯನ್ನೂ ಕಟ್ಟಿಸಿದರು. ರಾವೆನಾದ ಜನ ದಾಂತೆಯ ದೇಹವನ್ನು ಬಿಟ್ಟುಕೊಡಲು ಒಪ್ಪಲಿಲ್ಲ. "ಜೀವಂತವಾಗಿರುವಾಗ ನಿಮಗೆ ಬೇಡವಾದವನು ಸತ್ತಮೇಲೆ ಏಕೆ ಬೇಕು ?" ಎಂದು ಕೇಳಿದರು. ಇಂದಿಗೂ ಫ್ಲಾರೆನ್ಸಿನಲ್ಲಿರುವ ದಾಂತೆಯ ಸ್ಮಾರಕ ಬರಿದಾಗಿಯೇ ಇದೆ.

  1. https://www.poetryfoundation.org/poets/dante-alighieri
  2. https://www.worldhistory.org/Dante_Alighieri/
  3. https://www.britannica.com/biography/Dante-Alighieri/Early-life-and-the-Vita-nuova
  1. https://en.wikipedia.org/wiki/Henry_David_Thoreau
  2. https://plato.stanford.edu/entries/thoreau/
  3. https://www.britannica.com/biography/Henry-David-Thoreau