ಕೃಷ್ಣದೇವರಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶ್ರೀ ಕೃಷ್ಣದೇವ ರಾಯ ಇಂದ ಪುನರ್ನಿರ್ದೇಶಿತ)
Sri Krishnadevaraya/ ಶ್ರೀ ಕೃಷ್ಣದೇವರಾಯ/కృష్ణదేవరాయలు
ವಿಜಯನಗರ ಸಾಮ್ರಾಟ
ಸಾಮ್ರಾಟ್ ಶ್ರೀ ಕೃಷ್ಣದೇವರಾಯರ ಕಂಚಿನ ಪ್ರತಿಮೆ
ರಾಜ್ಯಭಾರ೨೬ ಜುಲೈ ೧೫೦೯ - ೧೫೨೯[೧]
ಜನನ೧೬ ಫೆಬ್ರುವರಿ ೧೪೭೧
ಜನ್ಮ ಸ್ಥಳಹಂಪಿ, ಕರ್ನಾಟಕ
ಮರಣ೧೫೨೯ ಅಕ್ಟೋಬರ್‌ ೧೭
ಸಮಾಧಿ ಸ್ಥಳಹಂಪಿ, ಕರ್ನಾಟಕ
ಪೂರ್ವಾಧಿಕಾರಿವೀರ ನರಸಿಂಹರಾಯ
ಉತ್ತರಾಧಿಕಾರಿಅಚ್ಯುತ ದೇವರಾಯ
ಪಟ್ಟದರಸಿಚಿನ್ನಾ ದೇವಿ,
ತಿರುಮಲಾ ದೇವಿ,
ಅನ್ನಪೂರ್ಣಾ ದೇವಿ
ವಂಶತುಳುವ ವಂಶ
ತಂದೆತುಳುವ ನರಸ ನಾಯಕ
ಧಾರ್ಮಿಕ ನಂಬಿಕೆಗಳುಹಿಂದೂ
ವಿಜಯನಗರ ಸಾಮ್ರಾಜ್ಯ
ಸಂಗಮ ವಂಶ
ಹರಿಹರ I 1336–1356
ಬುಕ್ಕ ರಾಯ I 1356–1377
ಹರಿಹರ ರಾಯ II 1377–1404
ವಿರೂಪಾಕ್ಷ ರಾಯ 1404–1405
ಬುಕ್ಕ ರಾಯ II 1405–1406
ದೇವ ರಾಯ I 1406–1422
ರಾಮಚಂದ್ರ ರಾಯ 1422
ವೀರ ವಿಜಯ ಬುಕ್ಕ ರಾಯ 1422–1424
ದೇವ ರಾಯ II 1424–1446
ಮಲ್ಲಿಕಾರ್ಜುನ ರಾಯ 1446–1465
ವಿರೂಪಾಕ್ಷ ರಾಯ II 1465–1485
ಪ್ರೌಢ ರಾಯ 1485
ಸಾಳ್ವ ವಂಶ
ಸಾಳ್ವ ನರಸಿಂಹ ದೇವ ರಾಯ 1485–1491
ತಿಮ್ಮ ಭೂಪಾಲ 1491
ನರಸಿಂಹ ರಾಯ II 1491–1505
ತುಳುವ ವಂಶ
ತುಳುವ ನರಸ ನಾಯಕ 1491–1503
ವೀರ ನರಸಿಂಹ ರಾಯ 1503–1509
ಕೃಷ್ಣ ದೇವ ರಾಯ 1509–1529
ಅಚ್ಯುತ ದೇವ ರಾಯ 1529–1542
ವೆಂಕಟ I 1542
ಸದಶಿವ ರಾಯ 1542–1570
ಅರವೀಡು ವಂಶ
ಆಳಿಯ ರಾಮ ರಾಯ 1542–1565
ತಿರುಮಲ ದೇವ ರಾಯ 1565–1572
ಶ್ರೀರಂಗ I 1572–1586
ವೆಂಕಟ II 1586–1614
ಶ್ರೀರಂಗ II 1614
ರಾಮ ದೇವ ರಾಯ 1617–1632
ವೆಂಕಟ III 1632–1642
ಶ್ರೀರಂಗ III 1642–1646
ಶ್ರೀ ಕೃಷ್ಣ ದೇವರಾಯರು ಪಟ್ಟಕ್ಕೇರಿದ ಹಾಗು ವಿಶಾಲ ಮುಕ್ತ ಮಂಟಪ ನಿರ್ಮಾಣ ಮಾಡಿಸಿದ ವಿಚಾರಗಳನ್ನೊಳಗೊಂಡ, ಹಂಪಿ ವಿರೂಪಾಕ್ಷ ದೇವಾಲಯದಲ್ಲಿನ ಕ್ರಿ.ಶ ೧೫೦೯ರ ಕನ್ನಡ ಶಾಸನ
ಈಗಿನ ಒಡಿಶಾ ಪ್ರಾಂತ್ಯದ ಗಜಪತಿ ಮಹಾರಾಜನ ಸಂಸ್ಥಾನವನ್ನು ಗೆದ್ದ ಬಗೆಗಿನ ಕ್ರಿ.ಶ ೧೫೧೩ರ ಕನ್ನಡ ಶಾಸನ. ಹಂಪಿ ವಿಜಯ ವಿಠ್ಠಲ ದೇವಾಲಯದ ಪ್ರಾಂಗಣದಲ್ಲಿದೆ.
ವಿಜಯಸ್ಥಂಬ,ಪೊಟ್ನೂರು,ವಿಶಾಖ,ಆಂಧ್ರ

ಕೃಷ್ಣದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರ ವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ[೨]. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.

ಹಿನ್ನೆಲೆ

  • ಕೃಷ್ಣದೇವರಾಯನ ತಂದೆ ತುಳುವ ನರಸ ನಾಯಕ.[೩] ತಾಯಿ ನಾಗಲಾಂಬಿಕೆ . ಸಾಳುವ ನರಸದೇವರಾಯನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕನು , ಸಂಪೂರ್ಣ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದನು. ನರಸನಾಯಕನ ನಂತರ ಕೃಷ್ಣಜನ್ಮಾಷ್ಟಮಿಯಂದು ಪಟ್ಟವೇರಿದ ಕೃಷ್ಣದೇವರಾಯನು ರಾಜಧಾನಿಯಾದ ವಿಜಯನಗರದ ಉಪನಗರವಾಗಿ ನಾಗಲಾಪುರ ಎಂಬ ಸುಂದರ ನಗರವನ್ನು ಕಟ್ಟಿಸಿದನು.
  • ಕೃಷ್ಣದೇವರಾಯನು ತನ್ನ ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದ ತಿಮ್ಮರಸು(ವಿಜಯನಗರದ ಪ್ರಧಾನ ಮಂತ್ರಿಗಳು) ಆತನು ಪಟ್ಟವೇರಲು ಕಾರಣೀಭೂತರಾಗಿದ್ದರಷ್ಟೇ ಅಲ್ಲ, ಅವನ ರಾಜ್ಯಭಾರದ ಕಾಲದಲ್ಲಿ ಮಂತ್ರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಮಟ್ಟಸ ಎತ್ತರವಾಗಿದ್ದ ಕೃಷ್ಣದೇವರಾಯನಿಗೆ, ದಿನವೂ ವ್ಯಾಯಾಮ, ತಾಲೀಮು ಮಾಡಿದ್ದರ ಪರಿಣಾಮವಾಗಿ ಕಲ್ಲಿನಂತಹ ದೇಹಧಾರ್ಡ್ಯವಿತ್ತು. ಹಸನ್ಮುಖಿಯಾದರೂ, ಶೀಘ್ರಕೋಪಿಯೂ ಆಗಿದ್ದ ಎಂದೂ ಹೇಳಲಾಗಿದೆ.
  • ಪರದೇಶದ ಪ್ರವಾಸಿಗಳಿಗೆ ಗೌರವ ತೋರಿಸುತ್ತಿದ್ದ. ಸಮರ್ಥ ಆಡಳಿತಗಾರನಾಗಿದ್ದು ಕಾನೂನು ಪಾಲನೆಯಲ್ಲಿ ಕಟ್ಟರ ಶಿಸ್ತು ಪಾಲಿಸುತ್ತಿದ್ದ. ಅತ್ಯುತ್ತಮ ಸೇನಾನಾಯಕನೂ ಆಗಿದ್ದ ಆತನು, ಸ್ವತಃ ಸೇನೆಯ ಮುಂದಾಳುತ್ವ ವಹಿಸುವುದಷ್ಟೇ ಅಲ್ಲ, ಗಾಯಗೊಂಡವರಿಗೆ ಕೈಯಾರೆ ಶುಶ್ರೂಷೆಯನ್ನೂ ಮಾಡುತ್ತಿದ್ದ ಎಂದೂ ಹೇಳಲಾಗಿದೆ. ಕೃಷ್ಣದೇವರಾಯನ ಆಡಳಿತದ ಬಗೆಗಿನ ಬಹಳಷ್ಟು ಮಾಹಿತಿ ಅವನ ಕಾಲದಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸ್ ಯಾತ್ರಿಕರಾದ ಡೊಮಿಂಗೋ ಪಾಯಸ್ ಮತ್ತು ಫೆರ್ನಾವ್ ನೂನೀಜ್ ಅವರ ಬರಹಗಳಿ೦ದ ತಿಳಿದುಬರುತ್ತದೆ.

ರಾಜ್ಯವಿಸ್ತಾರ

  • ಸಿಂಹಾಸನಕ್ಕೇರಿದ ಆರು ತಿಂಗಳುಗಳಲ್ಲಿಯೇ ಯೂಸುಫ್ ಆದಿಲ್ ಖಾನ್ ಮತ್ತು ಬೀದರಿನ ಸುಲ್ತಾನ ಮಹಮೂದ್ ಅನ್ನು ಕೃಷ್ಣದೇವರಾಯನು ಸೋಲಿಸಿದನೆಂದು ತಿಳಿದುಬರುತ್ತದೆ. ೧೫೧೦ರಲ್ಲಿ ಉತ್ತರದ ರಾಯಚೂರು ಮುತ್ತಿಗೆ ಹಾಕಿ ಗುಲ್ಬರ್ಗಾ ಮತ್ತು ಬೀದರ್ ಕಡೆಗೆ ಹೆಜ್ಜೆ ಹಾಕಿದ. ಹೀಗೆ ಉತ್ತರದಲ್ಲಿ ತನ್ನ ಸಾಮ್ರಾಜ್ಯವನ್ನು ಗಟ್ಟಿಗೊಳಿಸಿದ ನಂತರ ದಕ್ಷಿಣದಲ್ಲಿ ಶ್ರೀರಂಗಪಟ್ಟಣದ ಕೇಂದ್ರವಾದ ರಾಜ್ಯಭಾಗವನ್ನು ಸೃಷ್ಟಿಸಿದ.
  • ನಂತರ ಪೂರ್ವಕ್ಕೆ ತಿರುಗಿ ಪ್ರತಾಪರುದ್ರ ಎಂಬ ಸ್ಥಳೀಯ ನಾಯಕನನ್ನು ಸೋಲಿಸಿ ಕೃಷ್ಣಾ ನದಿಯವರೆಗಿನ ಭಾಗಗಳನ್ನು ಗೆದ್ದನು. ಕೃಷ್ಣದೇವರಾಯನ ಅತಿ ಮುಖ್ಯ ವಿಜಯ ಬಂದದ್ದು ಮೇ ೧೯, ೧೫೨೦ ರಲ್ಲಿ ಬಿಜಾಪುರದ ಇಸ್ಮಾಯಿಲ್ ಆದಿಲ್ ಷಾನಿ೦ದ ರಾಯಚೂರುನ್ನು ಗೆದ್ದಾಗ. ಒಟ್ಟು ಸಾವಿರಾರು ಸೈನಿಕರು, ೩೨,೬೦೦ ಕುದುರೆ ಸವಾರರು ಮತ್ತು ೫೫೧ ಆನೆಗಳು ಪಾಲ್ಗೊಂಡ ಯುದ್ಧದಲ್ಲಿ ಸುಮಾರು ೧೬,೦೦೦ ವಿಜಯನಗರದ ಸೈನಿಕರು ಮೃತಪಟ್ಟರು.
  • ಕೊನೆಯ ಯುದ್ಧದಲ್ಲಿ ಬಹಮನಿ ಸುಲ್ತಾನರು ಮೊದಲ ರಾಜಧಾನಿಯಾದ ಗುಲ್ಬರ್ಗಾದ ಕೋಟೆ ನೆಲಸಮವಾಯಿತು. ಡೊಮಿಂಗೋ ಪಯಸ್ ನ ವಿವರಣೆಯಂತೆ ಅಂದಿನ ವಿಜಯನಗರ ರೋಮ್ ನಗರದಷ್ಟಾದರೂ ದೊಡ್ಡದಿದ್ದು ಐದು ಲಕ್ಷ ಜನಸಂಖ್ಯೆಯನ್ನು ಹೊಂದಿದ್ದಿತು. ತಾನು ಕಂಡ ಅತ್ಯಂತ ಶ್ರೀಮಂತ ನಗರವೆಂದೂ ಪಯಸ್ ವಿಜಯನಗರವನ್ನು ವರ್ಣಿಸಿದ್ದಾನೆ.

ವಿದೇಶಾಂಗ ವ್ಯವಹಾರಗಳು

  • ವಿಜಯನಗರ ಇತಿಹಾಸದಲ್ಲಿಯೇ ಅತಿ ಹೆಚ್ಚು ಸೇನಾಯಶಸ್ಸು ಸಿಕ್ಕಿದ್ದು ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ. ಹಠಾತ್ತನೆ ಯುದ್ಧ ತಂತ್ರವನ್ನು ಬದಲಾಯಿಸಿ , ಸೋಲುವ ಪರಿಸ್ಥಿತಿಯಲ್ಲೂ ಗೆಲುವು ಸಾಧಿಸುವ ಚಾಕಚಕ್ಯತೆ ಅವನಿಗಿತ್ತು. ಆತನ ಆಳ್ವಿಕೆ ಮೊದಲ ದಶಕದಲ್ಲಿ ಆಕ್ರಮಣ, ರಕ್ತಪಾತ ಮತ್ತು ಗೆಲುವುಗಳನ್ನು ಕಾಣುತ್ತೇವೆ.
  • ಅವನ ಶತ್ರುಗಳಲ್ಲಿ ಮುಖ್ಯರೆಂದರೆ, ಐದು ವಿಭಾಗವಾಗಿದ್ದರೂ ಹಗೆ ಸಾಧಿಸಿದ ಬಹಮನಿ ಸುಲ್ತಾನರು , ಸಾಳುವ ನರಸಿಂಹರಾಯನ ಕಾಲದಿಂದಲೂ ಸಂಘರ್ಷದಲ್ಲಿ ತೊಡಗಿದ್ದ ಒಡಿಶಾಗಜಪತಿ, ಹಾಗೂ ತಮ್ಮ ಪ್ರಬಲ ನೌಕಾಪಡೆಯ ಕಾರಣದಿಂದ ಕಡಲ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದ, ಹಾಗೂ ದಿನೇ ದಿನೇ ಬಲಕಾಯಿಸುತ್ತಿದ್ದ ಪೋರ್ಚುಗೀಸರು. ಇವರಲ್ಲದೇ, ಉಮ್ಮತ್ತೂರು ಪಾಳೆಯಗಾರ, ಕೊಂಡವೀಡಿನ ರೆಡ್ಡಿರಾಜು ಮತ್ತು ಭುವನಗಿರಿಯ ವೇಲಮರೊಂದಿಗೂ ಆಗಾಗ ಕಾಳಗಗಳಾಗುತ್ತಿದ್ದವು.

ದಕ್ಖನಿನಲ್ಲಿ ಜಯ

  • ದಕ್ಖನ್ ಸುಲ್ತಾನರಿಂದ ವರ್ಷಕ್ಕೊಮ್ಮೆಯಂತೆ ನಡೆಯುತ್ತಿದ್ದ ವಿಜಯನಗರದ ಹಳ್ಳಿ ಪಟ್ಟಣಗಳ ಮೇಲಿನ ದಾಳಿ ಲೂಟಿ ಇತ್ಯಾದಿಗಳು ಈತನ ಕಾಲದಲ್ಲಿ ಕೊನೆಗೊಂಡವು. ೧೫೦೯ರಲ್ಲಿ ದಿವಾನಿ ಎಂಬಲ್ಲಿ ನಡೆದ ಯುದ್ಧದಲ್ಲಿ ಬಿಜಾಪುರದ ಸುಲ್ತಾನ್ ಮೊಹಮ್ಮದ್ ತೀವ್ರವಾಗಿ ಗಾಯಗೊಂಡು ಸೋಲೊಪ್ಪಿದನು. ಯೂಸುಫ್ ಆದಿಲ್ ನನ್ನು ಕೊಂದು ಅವನ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು.
  • ಈ ವಿಜಯದಿಂದ ಸ್ಪೂರ್ತಿಗೊಂಡು ಮತ್ತು ಬಹಮನಿ ಸುಲ್ತಾನರ ಒಳಜಗಳದ ಲಾಭ ಪಡೆದ ಕೃಷ್ಣದೇವರಾಯನು ಬೀದರ್, ಗುಲ್ಬರ್ಗಾ ಮತ್ತು ಬಿಜಾಪುರಗಳ ಮೇಲೆ ದಾಳಿ ಮಾಡಿದನು. ಅಲ್ಲಿ ಸುಲ್ತಾನ್ ಮೊಹಮ್ಮದ್ ನನ್ನು ಬಿಡುಗಡೆ ಮಾಡಿ ಆತನನ್ನು ಅಲ್ಲಿಯ ವಸ್ತುತಃ ಆಡಳಿತಗಾರನಾಗಿ ಮಾಡಿ "ಯವನ ಸಾಮ್ರಾಜ್ಯ ಪ್ರತಿಷ್ಠಾಪಕ" ಎಂಬ ಬಿರುದನ್ನು ಗಳಿಸಿದನು. ಗೊಲ್ಕೊಂಡಾ ಸುಲ್ತಾನ ಕುಲಿ ಕುತ್ಬ್ ಷಾನನ್ನು ಕೃಷ್ಣದೇವರಾಯನ ಮಂತ್ರಿ ತಿಮ್ಮರಸ ಸೋಲಿಸಿದನು.

ಸಾಮಂತರ ಜೊತೆ ಯುದ್ಧ

ಸ್ಥಳೀಯ ಪಾಳೆಯಗಾರರು ಮತ್ತು ಭುವನಗಿರಿಯ ವೇಲಮನ ಮೇಲೆ ಆಕ್ರಮಣ ಮಾಡಿ ಗೆದ್ದು ತನ್ನ ರಾಜ್ಯವನ್ನು ಕೃಷ್ಣಾನದಿಯವರೆಗೂ ವಿಸ್ತರಿಸಿದನು. ಕಾವೇರಿ ದಡದಲ್ಲಿ ನಡೆದ ಯುದ್ಧದಲ್ಲಿ ಉಮ್ಮತ್ತೂರಿನ ದೊರೆ ಗಂಗರಾಜನನ್ನು ಸೋಲಿಸಿದನು. ೧೫೧೨ರಲ್ಲಿ ಗಂಗರಾಜನು ಕಾವೇರಿಯಲ್ಲಿ ಮುಳುಗಿ ಅಸುನೀಗಿದ. ಈ ಪ್ರದೇಶ ಶ್ರೀರಂಗಪಟ್ಟಣ ಪ್ರಾಂತ್ಯದ ಒಂದು ಭಾಗವಾಯಿತು. ೧೫೧೬-೧೭ರಲ್ಲಿ ಅವನ ರಾಜ್ಯ ದ ಗಡಿಯು ಗೋದಾವರಿ ನದಿಯನ್ನು ದಾಟಿತು.

ಕಳಿಂಗ ಯುದ್ಧ

  • ಗಜಪತಿಗಳ ರಾಜ್ಯ ವಿಶಾಲವಾಗಿದ್ದು ಇಂದಿನ ಆಂಧ್ರ ಮತ್ತು ತೆಲಂಗಾಣ ಪ್ರದೇಶ ಹಾಗೂ ಸಂಪೂರ್ಣ ಒರಿಸ್ಸಾವನ್ನು ಒಳಗೊಂಡಿತ್ತು. ಉಮ್ಮತ್ತೂರಿನ ಯಶಸ್ಸಿನಿಂದ ಉತ್ತೇಜಿತನಾದ ಕೃಷ್ಣದೇವರಾಯನು ಗಜಪತಿ ಪ್ರತಾಪ ರುದ್ರದೇವನ ಸ್ವಾಧೀನದಲ್ಲಿದ್ದ ತೆಲಂಗಾಣ ಪ್ರದೇಶದತ್ತ ತನ್ನ ದೃಷ್ಟಿಯನ್ನು ತಿರುಗಿಸಿದನು. ವಿಜಯನಗರ ಸೈನ್ಯವು ೧೫೧೨ರಲ್ಲಿ ಉದಯಗಿರಿ ಕೋಟೆಗೆ ಮುತ್ತಿಗೆ ಹಾಕಿತು. ಒಂದು ವರ್ಷದವರೆಗೂ ನಡೆದ ಈ ಮುತ್ತಿಗೆಯಲ್ಲಿ ಕೊನೆಗೂ ಗಜಪತಿಯ ಸೈನ್ಯ ಹಸಿವಿನಿಂದ ಶಿಥಿಲವಾಗತೊಡಗಿತು.
  • ಇದೇ ಸಮಯದಲ್ಲಿ ಕೃಷ್ಣದೇವರಾಯನು ಪತ್ನಿಯರಾದ ತಿರುಮಲಾ ದೇವಿ ಮತ್ತು ಚಿನ್ನಮ ದೇವಿಯರೊಂದಿಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿದನು. ಇದರ ನಂತರ ಗಜಪತಿಯ ಸೇನೆ ಕೊಂಡವೀಡುರಾಜು ಎಂಬಲ್ಲಿ ವಿಜಯನಗರ ಸೇನೆಗೆ ಎದುರಾಯಿತು. ಕೆಲವು ತಿಂಗಳುಗಳಿಂದ ಮುತ್ತಿಗೆ ಹಾಕಿದ್ದರೂ, ಕೆಲವು ಮೊದಮೊದಲ ಸೋಲುಗಳ ನಂತರ ವಿಜಯನಗರ ಸೇನೆ ರಣರಂಗದಿಂದ ಹಿಂದೆಗೆಯಲಾರಂಭಿಸಿತು.
  • ಅದೇ ಸಮಯದಲ್ಲಿ ತಿಮ್ಮರಸು ಕಂಡುಹಿಡಿದ ಕಾವಲಿಲ್ಲದ ಪೂರ್ವದ ದ್ವಾರದ ರಹಸ್ಯಒಳದಾರಿಯ ಮೂಲಕ ಒಳನುಗ್ಗಿದ ವಿಜಯನಗರದ ಸೇನೆ ಕೋಟೆಯನ್ನು ಗೆದ್ದು, ಆಕಾಲದ ಅತಿಸಮರ್ಥ ಕತ್ತಿವರಸೆಗಾರ ಎಂದು ಹೆಸರಾಗಿದ್ದ , ಪ್ರತಾಪರುದ್ರದೇವನ ಮಗ, ಯುವರಾಜ ವೀರಭದ್ರನನ್ನು ಸೆರೆಹಿಡಿಯಿತು. ಈ ವಿಜಯದ ನಂತರ ತಿಮ್ಮರಸು ಕೊಂಡವೀಡು ಪ್ರಾಂತದ ಮಾಂಡಲೀಕನಾಗಿ ನೇಮಕಗೊಂಡ.
  • ಮುಂದೆ ವಿಜಯನಗರ ಸೇನೆಯು ಕೊಂಡಪಲ್ಲಿ ಪ್ರದೇಶದಲ್ಲಿ ಗಜಪತಿ ಸೇನೆಯನ್ನು ಮತ್ತೊಮ್ಮೆ ಮುತ್ತಿತು. ಉತ್ಕಲ-ಕಳಿಂಗದ ಮೇಲೆ ನೇರ ದಾಳಿ ಮಾಡಿ ವಶಪಡಿಸಿಕೊಳ್ಳಬೇಕೆಂದಿದ್ದ ಕೃಷ್ಣದೇವರಾಯನ ರಣತಂತ್ರಕ್ಕೆ ಪ್ರತಿಯಾಗಿ ಪ್ರತಾಪರುದ್ರದೇವನು ಕೃಷ್ಣದೇವರಾಯನನ್ನು ಅವನ ಸೇನೆಯೊಂದಿಗೆ ಹೀನಾಯವಾಗಿ ಸೋಲಿಸುವ ಪ್ರತಿಯೋಜನೆ ಹಾಕಿದನು. ಈ ಯೋಜನೆಯ ಪ್ರಕಾರ ಇವೆರಡು ಸೇನೆಗಳು ಕಳಿಂಗನಗರದಲ್ಲಿ ಸಂಧಿಸಬೇಕಾಗಿತ್ತು.
  • ಆದರೆ , ಈ ಮಾಹಿತಿಯನ್ನು ಚಾಣಾಕ್ಷ ತಿಮ್ಮರಸು ಪ್ರತಾಪರುದ್ರದೇವನ ಪಕ್ಷ ತ್ಯಜಿಸಿದ ತೆಲುಗು ಭಾಷಿಕನೊಬ್ಬನಿಗೆ ಲಂಚ ಕೊಟ್ಟು ಸಂಪಾದಿಸಿದನು. ಪ್ರತಾಪರುದ್ರನ ಯೋಜನೆ ನಡೆಯದೆ, ಆತ ತನ್ನ ರಾಜಧಾನಿಯತ್ತ ಹಿಮ್ಮೆಟ್ಟಬೇಕಾಯಿತು. ಕೊನೆಗೂ ಆತ ವಿಜಯನಗರ ಸೇನೆಗೆ ಶರಣಾಗಿ, ತನ್ನ ಮಗಳನ್ನು ಕೃಷ್ಣದೇವರಾಯನಿಗೆ ಕೊಟ್ಟು ಮದುವೆಮಾಡಿದ. ಇದರ ನಂತರ ಭಾರತದ ಎರಡು ಪ್ರಬಲ ಹಿಂದೂ ಸಾಮ್ರಾಜ್ಯಗಳ ನಡುವೆ ಶಾಂತಿ ಸಾಮರಸ್ಯ ನೆಲೆಸಿ ಸನಾತನ ಧರ್ಮ ಸುರಕ್ಷಿತವಾಯಿತು.
  • ೧೫೧೦ರಲ್ಲಿ ಗೋವಾದಲ್ಲಿ ಡೊಮಿನಿಯನ್ ಸ್ಥಾಪಿಸಿದ ಪೋರ್ಚುಗೀಸರೊಂದಿಗೆ ಶ್ರೀಕೃಷ್ಣದೇವರಾಯನು ಸ್ನೇಹ ಸಂಬಂಧಗಳನ್ನು ಬೆಳೆಸಿದನು. ಪೋರ್ಚುಗೀಸ್ ವ್ಯಾಪಾರಿಗಳಿಂದ ಬಂದೂಕು ಮತ್ತು ಅರಬ್ಬೀ ಕುದುರೆಗಳನ್ನು ಪಡೆದುಕೊಂಡದ್ದಷ್ಟೇ ಅಲ್ಲದೆ . ಪೋರ್ಚುಗೀಸ್ ಪರಿಣತಿಯನ್ನು ಉಪಯೋಗಿಸಿಕೊಂಡು ವಿಜಯನಗರ ನಗರಕ್ಕೆ ನೀರು ಸರಬರಾಜು ಯೋಜನೆಯ ಸುಧಾರಣೆ ಮಾಡಿದನು.

ಅಂತಿಮ ಸಂಘರ್ಷ

  • ಐವರು ದಖ್ಖನ್ ಸುಲ್ತಾನರೊಂದಿಗೆ ವಿಜಯನಗರ ಸಾಮ್ರಾಜ್ಯಕ್ಕಿದ್ದ ಸಂಬಂಧ ದಿನಗಳೆದಂತೆ ಹಳಸಲು ಶುರುವಾದ ಕಾರಣ ವಿಜಯನಗರ ಸಾಮ್ರಾಜ್ಯ ದಖ್ಖನ್ ಸುಲ್ತಾನರ ವಿರುದ್ಧ ಸಿಟ್ಟಿಗೆದ್ದು ನಿಂತಿತು. ಇದೇ ಸಂಧರ್ಭದಲ್ಲಿ ಕೃಷ್ಣದೇವರಾಯನು ಗೋಲ್ಕೊಂಡವನ್ನು ಗೆದ್ದು ಅದರ ಸಾಮಂತನಾಗಿದ್ದ ಮುದುರುಲ್-ಮುಲ್ಕ್ ನನ್ನು ಸೆರೆ ಹಿಡಿದನು. ಇನ್ನೂ ಮುಂದುವರೆದು ಬಹಮನಿ ಸುಲ್ತಾನರ ಪರವಾಗಿ ಬಿಜಾಪುರದ ಮೇಲೆ ದಾಳಿ ನಡೆಸಿ ಅಲ್ಲಿ ರಾಜ್ಯವಾಳುತ್ತಿದ್ದ ಸುಲ್ತಾನ್ ಇಸ್ಮಾಯಿಲ್ ಆದಿಲ್ ಷಾ ನನ್ನು ಸೋಲಿಸಿ ಗೆದ್ದ ರಾಜ್ಯವನ್ನು ಬಹಮನಿ ಸುಲ್ತಾನ ಮುಹಮ್ಮದ್ ಷಾ ನಿಗೆ ವಹಿಸಿ ತಾನು ವಿಜಯನಗರಕ್ಕೆ ಹಿಂದಿರುಗುತ್ತಾನೆ.
  • ದಖ್ಖನ್ ಸುಲ್ತಾನರೊಂದಿಗಿನ ಕಾಳಗದಲ್ಲಿ ಮುಖ್ಯವೆನಿಸುವ ಘಟನೆಯೆಂದರೆ ೧೫೨೦ರ ಮೇ ೧೯ ರಂದು ಬಿಜಾಪುರವನ್ನು ಆಳುತ್ತಿದ್ದ ಇಸ್ಮಾಯಿಲ್ ಆದಿಲ್ ಷಾ ನಿಂದ ರಾಯಚೂರು ಕೋಟೆಯನ್ನು ವಶಪಡಿಸಿಕೊಂಡಿದ್ದು. ಅತಿ ಪ್ರಯಾಸದಿಂದ ನಡೆದ ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ತನ್ನ ೧೬,೦೦೦ ಸೈನಿಕರನ್ನು ಕಳೆದುಕೊಂಡು ರಾಯಚೂರು ಕೋಟೆ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಯುದ್ಧದಲ್ಲಿ ಚತುರತೆ ಮೆರೆದು ಗೆಲುವಿಗೆ ಕಾರಣನಾದ ವಿಜಯನಗರದ ಮುಖ್ಯ ಸೇನಾಧಿಕಾರಿ ಪೆಮ್ಮಸಾನಿ ರಾಮಲಿಂಗ ನಾಯ್ಡು ಅರಸರ ಪ್ರೀತ್ಯಾದರಗಳನ್ನು ಗಳಿಸಿದ, ಶ್ರೀ ಕೃಷ್ಣದೇವರಾಯರು ಆತನನ್ನು ಸೂಕ್ತ ಸನ್ಮಾನದೊಂದಿಗೆ ಗೌರವಿಸಿದರು.
  • ಒಂದು ಅಂದಾಜಿನ ಪ್ರಕಾರ ರಾಯಚೂರಿಗಾಗಿ ನಡೆದ ಕಾಳಗದಲ್ಲಿ ಸುಮಾರು ೭೦೩,೦೦೦ ಪದಾತಿ ದಳದ ಸೈನಿಕರು, ೩೨,೬೦೦ ಅಶ್ವದಳದ ಸೈನಿಕರು ಹಾಗು ೫೫೧ ಗಜ ಪಡೆಯ ಸೈನಿಕರು ಆಹುತಿಯಾದರೆಂದು ತಿಳಿದುಬರುತ್ತಿದೆ(ರಾಯಚೂರು ಯುದ್ಧದ ಬಗ್ಗೆ ನೋಡಿ). ಕಟ್ಟ ಕಡೆಯದಾಗಿ ತನ್ನ ಕೊನೆಯ ಯುದ್ಧದಲ್ಲಿ ಕೃಷ್ಣದೇವರಾಯನು ಹಿಂದೆ ಬಹಮನಿ ಸುಲ್ತಾನರ ಕೇಂದ್ರ ಸ್ಥಾನವಾಗಿದ್ದ ಗುಲ್ಬರ್ಗಾ ಕೋಟೆಯನ್ನು ವಶಪಡಿಸಿಕೊಳ್ಳುವ ಮೂಲಕ ದಕ್ಷಿಣ ಭಾರತದಾದ್ಯಂತ ತನ್ನ ವಿಜಯ ಪತಾಕೆ ಹಾರಿಸಿ ಇಡೀ ದಕ್ಷಿಣ ಭಾರತವನ್ನು ತನ್ನ ಸಾಮ್ರಾಜ್ಯದ ಅಡಿಯಲ್ಲಿ ತಂದನು.
  • ೧೫೨೪ರಲ್ಲಿ ಶ್ರೀ ಕೃಷ್ಣದೇವರಾಯನು ತನ್ನ ಪುತ್ರ ತಿರುಮಲರಾಯನಿಗೆ ಪಟ್ಟ ಕಟ್ಟುವ ಮೂಲಕ ಅರಸನ ಪಟ್ಟಕ್ಕೇರಿಸಿದನು. ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ತಿರುಮಲರಾಯನಿಗೆ ಪಿತೂರಿ ನಡೆಸಿ ದುಷ್ಕರ್ಮಿಗಳು ವಿಷ ಪ್ರಾಶನ ಮಾಡಿಸಿ ಕೊಂದುಬಿಟ್ಟರು. ಆದ ಕಾರಣ ಕೃಷ್ಣದೇವರಾಯನ ಪುತ್ರ ಸಿಂಹಾಸನದಲ್ಲಿ ಹೆಚ್ಚು ದಿನ ಉಳಿಯಲಾಗಲಿಲ್ಲ. ತನ್ನ ಪುತ್ರನ ಅಕಾಲಿಕ ಮರಣದಿಂದ ಆಘಾತಕ್ಕೊಳಗಾದ ಕೃಷ್ಣದೇವರಾಯನು ಬಹಳ ಕುಸಿದು ಹೋದನು ಹಾಗು ದಿನೇ ದಿನೇ ಕೃಶವಾಗುತ್ತಾ ಹೋದನು. ತಿರುಮಲರಾಯನ ಕಗ್ಗೊಲೆಯ ವಿಚಾರವಾಗಿ ಈ ನ್ಯಾಯಸ್ಥಾನದಲ್ಲಿ ವಿಚಾರಣೆ ನಡೆಸಿ ವಿಜಯನಗರದ ಪ್ರಧಾನಮಂತ್ರಿ ತಿಮ್ಮರಸುವಿಗೆ ತಪ್ಪಾಗಿ ಕಣ್ಣು ಕೀಳಿಸುವ ಶಿಕ್ಷೆ ವಿಧಿಸಲಾಯಿತು. ಇದನ್ನು ತಡೆಯಲು ಶ್ರೀ ಕೃಷ್ಣದೇವರಾಯರು ಬಹಳ ಪ್ರಯತ್ನ ಪಟ್ಟರಾದರೂ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಶ್ರೀ ಕೃಷ್ಣ ದೇವರಾಯನನ್ನು ಸಿಂಹಾಸನದಲ್ಲಿ ಕುಳ್ಳಿರಿಸಲು ಅವಿರತ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದ ತಿಮ್ಮರಸು ವಿಜಯನಗರ ಸಾಮ್ರಾಜ್ಯದ ಹಿತೈಷಿಯಾಗಿದ್ದರೇ ಹೊರತು ದ್ವೇಷಿಯಾಗಿರಲಿಲ್ಲ. ತಿಮ್ಮರಸುವಿನ ಕಣ್ಣುಗಳನ್ನು ಕಿತ್ತ ಸುದ್ದಿ ತಿಳಿದಂತೆಯೇ ಶ್ರೀ ಕೃಷ್ಣದೇವಾರಾಯರು ಕುಸಿದು ಹೋದರು.ಅದೇ ಸಮಯದಲ್ಲಿ ಬಹಮನಿ ಸುಲ್ತಾನರ ವಶದಲ್ಲಿದ್ದ ಬೆಳಗಾವಿಯನ್ನು ವಶಪಡಿಸಿಕೊಳ್ಳುವ ಕನಸು ಕೃಷ್ಣದೇವರಾಯರಿಗಿದ್ದರೂ ಅದು ಸಾಧ್ಯವಾಗದೆ ಆಘಾತಗಳ ಮೇಲೆ ಆಘಾತ ಬಂದೆರಗಿ ಅನಾರೋಗ್ಯಕ್ಕೆ ತುತ್ತಾದರು. ಆದರೆ ಕೃಷ್ಣ ದೇವರಾಯರು ಅನಾರೋಗ್ಯದಿಂದ ಹೊರಬರಲಾಗದೆ ೧೫೨೯ರಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸಿದರು.
  • ಸಾವಿಗೆ ಮುನ್ನವೇ ಕೃಷ್ಣದೇವರಾಯ ತನ್ನ ಸಹೋದರ ಅಚ್ಯುತ ರಾಯನಿಗೆ ತನ್ನ ಸಾಮ್ರಾಜ್ಯಾಧಿಕಾರಗಳನ್ನು ವಹಿಸಿಕೊಟ್ಟನು ಹಾಗು ವಿಜಯನಗರದ ಇತಿಹಾಸದ ಪುಟದಲ್ಲಿ ಕೃಷ್ಣದೇವಾರಾಯನು ತನ್ನ ಸುಭೀಕ್ಷ ಆಳ್ವಿಕೆಯಿಂದಲೇ ಅಜರಾಮರನಾದನು.ಇಂದಿಗೂ ಕರ್ನಾಟಕದ ಹಂಪಿಯಲ್ಲಿರುವ ಅವಶೇಷಗಳು ವಿಜಯನಗರದ ಗತ ವೈಭವವನ್ನು ಸಾರಿ ಹೇಳುತ್ತಿವೆ.

ಆಂತರಿಕ ವ್ಯವಹಾರಗಳು

  • ಪೇಸ್ ಶಿಕ್ಷೆಯನ್ನು ಕಾನೂನು ಮತ್ತು ಸುವ್ಯವಸ್ಥೆ ವಿಷಯಗಳಿಗೆ ರಾಜ ಧೋರಣೆಯನ್ನು ಸಂಕ್ಷಿಪ್ತವಾಗಿ, "ರಾಜ ಕೊಲ್ಲುವ ಮೂಲಕ ಕಾನೂನು ನಿರ್ವಹಿಸುತ್ತದೆ." ಆಸ್ತಿ (ಸ್ಥಿರತೆಯನ್ನು ಉಳಿಸಿಕೊಳ್ಳುವ ವಿನ್ಯಾಸ) ವಿರುದ್ಧ ಮತ್ತು ಕೊಲೆಯ ಅಪರಾಧಗಳು ಕಳ್ಳತನ ಮತ್ತು ಕೊಲೆಯ ಶಿರಚ್ಛೇದವು (ದ್ವಂದ್ವ ಪರಿಣಾಮವಾಗಿ ಸಂಭವಿಸುವ ಹೊರತುಪಡಿಸಿ) ಒಂದು ಕಾಲು ಮತ್ತು ಕೈ ಕತ್ತರಿಸುವ ರಷ್ಟಿದೆ.
  • ಅವರ ದೃಷ್ಟಿಕೋನ ಅಸ್ಪಷ್ಟವಾಗಿದೆ ಆದರೆ ನಗರದ ರೋಮ್ ಕಡೇಪಕ್ಷ ದೊಡ್ಡ ಎಂದು ಅಂದಾಜಿಸಲಾಗಿದೆ ಎಂದು ಪೇಸ್ (Vijaynagar)ವಿಜಯನಗರದ ಗಾತ್ರವು ಅಂದಾಜು ಮಾಡಲಾಗಿಲ್ಲ. ಇದಲ್ಲದೆ, ಅವರು ಅರ್ಧ ಮಿಲಿಯನ್ ಕಡಿಮೆ ಮಾಡುವ ಜನಸಂಖ್ಯೆ ವಿಜಯನಗರ "ವಿಶ್ವದ ಅತ್ಯುತ್ತಮ ನಗರ" ಎಂದು ಪರಿಗಣಿಸಲಾಗಿದೆ. ಸಾಮ್ರಾಜ್ಯವು ಹೆಚ್ಚಾಗಿ ರಾಯಲ್ ಕುಟುಂಬದ ಸದಸ್ಯರ ಅಡಿಯಲ್ಲಿ ಮತ್ತು ಮತ್ತಷ್ಟು ಉಪವಿಭಾಗಗಳು ಆಗಿ ಪ್ರಾಂತ್ಯಗಳ ಅನೇಕ ವಿಭಜಿಸಲಾಗಿದೆ.
  • ನ್ಯಾಯಾಲಯದ ಅಧಿಕೃತ ಭಾಷೆ ಕನ್ನಡ ಇತ್ತು. ನಾನು ಕೃಷ್ಣದೇವರಾಯ ಕಾನೂನುರೀತ್ಯಾ ಕೇವಲ ಒಬ್ಬ ರಾಜ, ಆದರೆ ಅವರ ವ್ಯಾಪಕ ಅಧಿಕಾರಗಳು ಮತ್ತು ಬಲವಾದ ವೈಯಕ್ತಿಕ ಪ್ರಭಾವ ಒಂದು ವಸ್ತುತಃ ಸಾರ್ವಭೌಮ . ಮಂತ್ರಿ ತಿಮ್ಮರಸು ಅವರ ಸಕ್ರಿಯ ಸಹಕಾರದೊಂದಿಗೆ ಕೃಷ್ಣದೇವರಾಯ ಚೆನ್ನಾಗಿ ರಾಜ್ಯದ ಆಡಳಿತ, ಭೂಮಿ ಉಳಿಸಿಕೊಳ್ಳುವುದು, ಶಾಂತಿ ಮತ್ತು ಜನರ ಅಭ್ಯುದಯ ಹೆಚ್ಚಳ, ಸಾಮ್ರಾಜ್ಯದ ಆಡಳಿತ ತನ್ನ ಅಮುಕ್ತಮಾಲ್ಯದ ಸೂಚಿಸಿರುವ ಹಳಿಗಳ ಮೇಲೆ ನಡೆಸಲಾಯಿತು ಎಂದು ಬರೆದುಕೊಂಡಿದ್ದಾನೆ.
  • ಕೃಷ್ಣದೇವರಾಯ ಯಾವಾಗಲೂ ಧರ್ಮ ಕಡೆಗೆ ಒಂದು ಕಣ್ಣಿಡಬೇಕೆಂದು ಅಭಿಪ್ರಾಯವಾಗಿತ್ತು. ಜನರ ಕ್ಷೇಮಕ್ಕಾಗಿ ತನ್ನ ಕಾಳಜಿ, ವ್ಯಾಪಕವಾಗಿ ಎಲ್ಲಾ ಸಾಮ್ರಾಜ್ಯದ ಮೇಲೆ ತಮ್ಮ ವ್ಯಾಪಕ ವಾರ್ಷಿಕ ಪ್ರವಾಸಗಳನ್ನು ನೀಡಿದರು. ಇದೇ ಅವಧಿಯಲ್ಲಿ ಅವರು ವೈಯಕ್ತಿಕವಾಗಿ ಎಲ್ಲವನ್ನೂ ಅಧ್ಯಯನ ಮಾಡಿ ಜನರ ಕುಂದುಕೊರತೆಗಳನ್ನು ನಿವಾರಿಸಲು ಮತ್ತು ದುಷ್ಟರನ್ನು ಶಿಕ್ಷಿಸಲು ಪ್ರಯತ್ನಿಸಿದರು.
  • ಪೋರ್ಚುಗೀಸ್ ಚರಿತ್ರೆ ಡೊಮಿಂಗೊ ಪೇಸ್ "ಅತ್ಯಂತ ಗಾಂಭೀರ್ಯ ಮತ್ತು ಪರಿಪೂರ್ಣ ರಾಜ. ಹೆಚ್ಚು ನ್ಯಾಯ ಪಕ್ಷಪಾತಿ ಮತ್ತು ಶ್ರೇಷ್ಠ ರಾಜ.", ಎಂದು ಕೃಷ್ಣದೇವರಾಯನನ್ನು ಹೊಗಳುತ್ತಾನೆ. ವೈಷ್ಣವ ಅನುಯಾಯಿ ಆದರೂ ಎಲ್ಲ ಪಂಥಗಳು ಸಂಬಂಧಿಸಿದಂತೆ ತೋರಿಸಿತು, ಮತ್ತು ಸಣ್ಣ ಧಾರ್ಮಿಕ ಪೂರ್ವಾಗ್ರಹ ಉಡುಗೊರೆಗಳನ್ನು ನೀಡುವ ಅಥವಾ ಸಹಚರರು ಮತ್ತು ಅಧಿಕಾರಿಗಳ ಆಯ್ಕೆಯ ರೂಪದಲ್ಲಿ ಅವನ ಪ್ರಭಾವ ಇಲ್ಲ. ಬಾರ್ಬೋಸಾ ಪ್ರಕಾರ, "ರಾಜ ಯಾವುದೇ ಕಿರಿಕಿರಿಗೆ ಬಳಲುತ್ತಿರುವ ಇಲ್ಲದೆ, ಪ್ರತಿ ವ್ಯಕ್ತಿ ಬಂದು ಹೋಗಿ, ತನ್ನ ಮತ ಪ್ರಕಾರ ಜೀವಿಸಬಹುದಾಗಿದೆ ಅಂದರೆ ಸ್ವಾತಂತ್ರ್ಯ ನೀಡುತ್ತದೆ" ಎಂದಾಗಿದೆ.

ಕಲೆ ಮತ್ತು ಸಾಹಿತ್ಯದಲ್ಲಿ

ಕೃಷ್ಣದೇವರಾಯನ ಆಡಳಿತವು ಅನೇಕ ಭಾಷೆಗಳಲ್ಲಿ ಸಮೃದ್ಧ ಸಾಹಿತ್ಯದ ಕಾಲವಾಗಿತ್ತು ಹಾಗೂ ತೆಲುಗು ಸಾಹಿತ್ಯದ ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಅನೇಕ ತೆಲುಗು, ಸಂಸ್ಕೃತ, ಕನ್ನಡ ಮತ್ತು ತಮಿಳು ಕವಿಗಳು ಚಕ್ರವರ್ತಿಯ ಪ್ರೋತ್ಸಾಹವನ್ನು ಅನುಭವಿಸಿದರು. ಕೃಷ್ಣದೇವರಾಯ ಹಲವು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ. ಅವನ ವಂಶಾವಳಿಯ ಭಾಷೆ ಕನ್ನಡ, ತೆಲುಗು ಅಥವಾ ತುಳುವ (Tuluva) ಎಂಬ ಒಂದು ಚರ್ಚೆ ಉಳಿದಿದೆ. ಕೃಷ್ಣದೇವರಾಯನ ತೆಲುಗು ಭಾಷೆಯ ಮೇಲಿನ ಪಾಂಡಿತ್ಯ ಮತ್ತು ಪ್ರೀತಿಯಿಂದಾಗಿ ಅವನ ಆಸ್ಥಾನದಲ್ಲಿ ಅನೇಕ ಕವಿಗಳು ಮತ್ತು ಸೈನ್ಯದಲ್ಲಿ ಅನೇಕ ಸೈನಿಕರು ಆಶ್ರಯವನ್ನು ಪಡೆದುಕೊಂಡಿದ್ದರು.ಅನೇಕ ಕವಿಗಳು ಕೃಷ್ಣದೇವರಾಯನ ಬಗ್ಗೆ ವಿವಿಧ ರೀತಿಯಲ್ಲಿ ಹಾಡಿ ಹೊಗಳಿದ್ದಾರೆ.

ಕನ್ನಡ ಸಾಹಿತ್ಯ

ಕೃಷ್ಣದೇವರಾಯ ಅನೇಕ ಕನ್ನಡ ಕವಿಗಳನ್ನು ಪ್ರೋತ್ಸಾಹಿಸಿದನು. ಮಲ್ಲನಾರ್ಯ ಬರೆದ ಕೃತಿಗಳು ವೀರ-ಶೈವಾಮೃತ, ಭವ-ಚಿಂತಾ-ರತ್ನ ಮತ್ತು ಸತ್ಯೇಂದ್ರ ಚೋಳ-ಕಥೆ, ಚಟ್ಟು ವಿಟ್ಟಲನಾಥ ಬರೆದ ಭಾಗವತ ಪ್ರಸಿದ್ಧವಾಗಿವೆ. ತಿಮ್ಮಣ್ಣ ಕವಿಯು ಬಹು ಪ್ರಸಿದ್ಧನಾಗಿದ್ದನು. ಶ್ರೀ ವ್ಯಾಸತೀರ್ಥರು, ಉಡುಪಿ ಮಾಧ್ವ ಸಂಪ್ರದಾಯಕ್ಕೆ ಸೇರಿದ ಶ್ರೇಷ್ಠ ಸಂತರು ಕೃಷ್ಣದೇವರಾಯನ ರಾಜಗುರುವಾಗಿದ್ದರು. "ಕೃಷ್ಣದೇವರಾಯನ ದಿನಚರಿ" ಇತ್ತೀಚೆಗೆ ಪತ್ತೆಹಚ್ಚಲ್ಪಟ್ಟ ದಾಖಲೆ. ದಾಖಲೆಯು ಕೃಷ್ಣದೇವರಾಯನ ಕಾಲದ ಸಮಕಾಲೀನ ಸಮಾಜವನ್ನು ತೋರಿಸುತ್ತದೆ. ದಾಖಲೆಯು ರಾಜ ಸ್ವತಃ ಬರೆದನೇ ಎಂಬುದು ಸಂದೇಹವಾಗಿ ಉಳಿದಿದೆ.

ತಮಿಳು ಸಾಹಿತ್ಯ

ಕೃಷ್ಣದೇವ ರಾಯ ತಮಿಳು ಕವಿ ಹರಿದಾಸರನ್ನು ಪೋಷಿಸಿದರು ಮತ್ತು ತಮಿಳು ಸಾಹಿತ್ಯ ಬೇಗ ವರ್ಷ ಜಾರಿಗೆ ಅಭಿವೃದ್ದಿ ಆರಂಭಿಸಿತು.

ಸಂಸ್ಕೃತ ಸಾಹಿತ್ಯ

ಸಂಸ್ಕೃತದಲ್ಲಿ, ಶ್ರೀವ್ಯಾಸತೀರ್ಥರು ತಾತ್ಪಾರ್ಯ-ಚಂದ್ರಿಕಾ, ನ್ಯಾಯಮಿತ್ರ (ಅದ್ವೈತ ತತ್ತ್ವದ ವಿರುದ್ಧ ನಿರ್ದೇಶನದ ಕೆಲಸ) ಮತ್ತು ತರ್ಕ-ತಾಂಡವ ಬರೆದಿದ್ದಾರೆ. ಕೃಷ್ಣದೇವರಾಯ ಸ್ವತಃ ಒಬ್ಬ ನಿಪುಣ ವಿದ್ವಾಂಸನಾಗಿದ್ದ ಮತ್ತು ಮದಾಲಸ ಚರಿತ, Satyavadu Parinaya ಮತ್ತು ರಸಮಂಜರಿ ಮತ್ತು ಜಾಂಬವತಿ ಕಲ್ಯಾಣ ಎಂಬ ಕೃತಿಗಳನ್ನು ರಚಿಸಿದ್ದಾರೆ.

ಆಂಧ್ರ ವಿಷ್ಣು ದೇವಾಲಯಕ್ಕೆ ಭೇಟಿ

  • ವಿಜಯನಗರದ ಚಕ್ರವರ್ತಿ ಶ್ರೀ ಕೃಷ್ಣದೇವರಾಯ ತನ್ನ ಕಳಿಂಗ ಪ್ರಚಾರ (c. ೧೫೧೬) ಸಂದರ್ಭದಲ್ಲಿ ವಿಜಯವಾಡ ಮೂಲಕ ಪ್ರಯಾಣಿಸುತ್ತಿದ್ದ. ಅವರು ವಿಜಯವಾಡ, ಕೊಂಡಪಲ್ಲಿ ಕೋಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಶಪಡಿಸಿಕೊಂಡರು. ಅವರು ಶ್ರೀ ಆಂಧ್ರ ವಿಷ್ಣುವಿನ ಪವಿತ್ರ ದೇವಾಲಯದ ಬಗ್ಗೆ ತಿಳಿದು ಬಂದು ಕೆಲವು ದಿನಗಳ ಶ್ರೀಕಾಕುಲಂ ಹಳ್ಳಿಗೆ ಭೇಟಿ ನೀಡಿದರು. ಆ ಸಮಯದಲ್ಲಿ ಏಕಾದಶಿ ಸಮುದಾಯದ ಪ್ರಮುಖ ಕಾರ್ಯಗಳಲ್ಲಿ ವ್ರತ ಪ್ರದರ್ಶನ.
  • ಎಲ್ಲಾ ಅವರ ವೈಭವ ಶ್ರೀ ಆಂಧ್ರ ವಿಷ್ಣು ಒಂದು ಬೆಳಗಿನ ಡ್ರೀಮ್ ("ನೀಲ mEGhamu DAlu Deelu sEyaga jAlu ....") ಚಕ್ರವರ್ತಿಯ ಕಾಣಿಸುತ್ತಿದ್ದವು ಇಲ್ಲಿದೆ. ಅಮುಕ್ತಮಾಲ್ಯದ ಒಳಗೆ ಸ್ವತಃ [8] ಉಲ್ಲೇಖಿಸಲಾಗಿದೆ ಒಂದು Harivāsara, ಶ್ರೀ ಕೃಷ್ಣದೇವರಾಯ ಮೇಲೆ ಶ್ರೀ ಆಂಧ್ರ ವಿಷ್ಣುವಿನ Darsan ಹೊಂದಿತ್ತು. Harivāsara ಏಕಾದಶಿ ಕೊನೆಯ 4 ಮಹೂರ್ತಗಳಲ್ಲಿ ಒಂದಾಗಿದೆ ಮತ್ತು Dwadasi, ಅಂದರೆ, 6 ಗಂಟೆ 24 ನಿಮಿಷ ಮೊದಲ 4 ಮಹೂರ್ತಗಳಲ್ಲಿ ಒಂದಾಗಿದೆ
  • ದೇವಸ್ಥಾನಕ್ಕೆ ಭೇಟಿ ಈ ಘಟನೆ Ahobilam Śaasanam (ಡಿಸೆಂಬರ್ 1515 ರ) ಮತ್ತು ಸಿಂಹಾಚಲಂ Śaasanam (ಮಾರ್ಚ್ 1515 ರ 30) ನಡುವೆ ಇರಬೇಕು. ಬಹುಶಃ ಜನವರಿ 1516, ಅವರು Dvadasi ದಿನ ದೇವಾಲಯಕ್ಕೆ ಭೇಟಿ ಮಾಡಿರಬಹುದು. ಈ ಮೀರಿ ಯಾವುದೇ ಮಾನ್ಯ ಉಲ್ಲೇಖಗಳು ಭೇಟಿ ನಿಖರವಾದ ದಿನಾಂಕ ಲಭ್ಯವಿವೆ. [9] ಶ್ರೀ ಕೃಷ್ಣದೇವರಾಯ ಸ್ವತಃ ಈ ಕೆಲಸ ಸಂಯೋಜನೆಯು ಸನ್ನಿವೇಶ ಸ್ಮರಿಸುತ್ತಾರೆ.
  • ಕೆಲವೊಮ್ಮೆ ಹಿಂದೆ, ನಾನು ಕಳಿಂಗದ ಪ್ರದೇಶವನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದರು. ದಾರಿಯಲ್ಲಿ ನಾನು ವಿಜಯವಾಡ ನನ್ನ ಸೈನ್ಯವು ಕೆಲವು ದಿನಗಳ ಕಾಲ ಇದ್ದರು. ನಂತರ ನಾನು Srikakula ವಾಸಿಸುವ ಆಂಧ್ರ ವಿಷ್ಣು, ಭೇಟಿ ಹೋದರು. ಆ ದೇವರ ರಾತ್ರಿ (Harivaasaram) ನಾಲ್ಕನೆಯ ಹಾಗೂ ಕೊನೆಯ ವೀಕ್ಷಣಾ, ವಿಷ್ಣು ಡೇ (Dvadasi) ವೇಗದ ಗಮನಿಸಿದ ಆಂಧ್ರ ವಿಷ್ಣು ನನ್ನ ಕನಸಿನಲ್ಲಿ ನನ್ನ ಬಳಿ ಬಂದು.
  • ಬುದ್ಧಿವಂತ ಮತ್ತು ಹೊಳೆಯುವ ಅವನ ಕಣ್ಣುಗಳು, ಅವಮಾನ ಕಮಲದ ಪುಟ್. ಆತ ಅದನ್ನು ತನ್ನ ಹದ್ದಿನ ರೆಕ್ಕೆಗಳು ಬದಲಾಗಿ ಈಗಲೂ ಅತ್ಯುತ್ತಮ ಗೋಲ್ಡನ್ ರೇಷ್ಮೆ, ಅಪ್ಪಟವಾದ ಧರಿಸಿರುತ್ತಾಳೆ ಮಾಡಲಾಯಿತು. ಕೆಂಪು ಸೂರ್ಯೋದಯ ಮಸುಕಾದ ತನ್ನ ಎದೆಯ ಮೇಲೆ ಮಾಣಿಕ್ಯ ಹೋಲಿಸಲಾಗುತ್ತದೆ. [10] ತೆಲುಗು ಕೆಲಸ ಪ್ರಾರಂಭಿಸಬೇಕು [ಬದಲಾಯಿಸಿ] ಲಾರ್ಡ್ಸ್ ಶಿಕ್ಷಣ ಶ್ರೀ ಆಂಧ್ರ ವಿಷ್ಣು ಶ್ರೀರಂಗಮ್ನಲ್ಲಿನ ಅಂಡಾಲ್ನಿಂದ ("rangamandayina penDili seppumu ..") ತಮ್ಮ ಮದುವೆಯ ಕಥೆಯನ್ನು ಸಂಯೋಜಿಸಲು ಕೇಳಿಕೊಂಡರು. *ಈ ಕೃತಿಯ 14 ಕವನದ ನಾವು, ಲಾರ್ಡ್ ಕೂಡ ತೆಲುಗು ಕಥೆಯನ್ನು ಹೇಳಲು ಚಕ್ರವರ್ತಿ ಆದೇಶ Telugus ರಾಜ (ತೆಲುಗು Vallabhunḍa) ತನ್ನನ್ನು ಉಲ್ಲೇಖಿಸಲಾಗುತ್ತದೆ ಮತ್ತು ಕನ್ನಡ ಕಿಂಗ್ (ಕನ್ನಡ ರಾಯ) ಎಂದು ಶ್ರೀ ಕೃಷ್ಣದೇವರಾಯ ಸೂಚಿಸುತ್ತದೆ ಎಂದು ನೋಡಬಹುದು. (... NEnu delugu raayanDa, ಕನ್ನಡ raaya!, Yakkodunangappu ....). ಲಾರ್ಡ್ "telugadElayanna, dESambu ತೆಲುಗು. YEnu ತೆಲುಗು vallaBhunDa. Telugo ಕಂದ ..... yerugavE ಬಸದಿ, dESa BhAShalandu ತೆಲುಗು lessa!" ಸಮರ್ಥನೆಯ ಚಕ್ರವರ್ತಿ ನಿರ್ಬಂಧಕ್ಕೆ ಮತ್ತು ಇಡೀ ತೆಲುಗು ಸಾಹಿತ್ಯದ ಅತ್ಯಂತ ಪ್ರಸಿದ್ಧ ಕಾವ್ಯಾತ್ಮಕ ಕೃತಿಗಳ ಒಂದು ಇದು ಅಮುಕ್ತಮಾಲ್ಯದ ಸಂಯೋಜಿಸಿದರು. [11]

"తెలుఁగ దేల నన్న దేశంబు దెలుఁగేను తెలుఁగు వల్లభుండఁ దెలుఁ గొకండ యెల్ల నృపులగొలువ నెరుఁగ వే బాసాడి దేశభాషలందుఁ తెలుఁగు లెస్స " - శ్రీ ఆంధ్ర విష్ణు "TelugadElayanna, dESambu telugEnu ತೆಲುಗು vallaBhunDa telugokanDa yella nRpulu golva nerugavE ಬಸದಿ dESa BhAShalandu ತೆಲುಗು lessa " ಏಕೆ ಅಮುಕ್ತಮಾಲ್ಯದ ಆನ್ ಶ್ರೀ ಆಂಧ್ರ ವಿಷ್ಣುವಿನ ಕಾರಣಕ್ಕಾಗಿ ಶ್ರೀ ಕೃಷ್ಣದೇವರಾಯ ಮೂಲಕ ತೆಲುಗು ಬರೆದ ಮಾಡಬೇಕು ಉದ್ಧರಣ ಅರ್ಥ: "ತೆಲುಗು ಒಂದು ಕೆಲಸವನ್ನು ಏಕೆ ನೀವು ಕೇಳಲು ವೇಳೆ; ನಾನು ತೆಲುಗು (ಅಂದರೆ, Teluguland ಸೇರಿರುವ) ಮತ್ತು Telugus ರಾಜ ತೆಲುಗು ಸ್ಟಫ್ (TelugO ಕಂದ) ಅಭಿನಯಿಸುವುದರೊಂದಿಗೆ ಭಾಷೆ ಆದ್ದರಿಂದ, ನೀವು ಅಡಿಯಲ್ಲಿ ಸೇವೆ ಎಲ್ಲಾ ರಾಜರು, ಅದಕ್ಕೆ.. ನೀವು ಎಲ್ಲಾ ರಾಷ್ಟ್ರೀಯ ಭಾಷೆಗಳಲ್ಲಿ ತೆಲುಗು ಉತ್ತಮ ಎಂದು ತಿಳಿಯುವುದಿಲ್ಲ ಮಾತನಾಡುವುದು. "

ಧರ್ಮ ಮತ್ತು ಸಂಸ್ಕೃತಿ

  • ತಿರುಮಲ ದೇವಸ್ಥಾನ ಮತ್ತು ವೈಕುಂಠಂ ಸರದಿಗೆ ಕಾಂಪ್ಲೆಕ್ಸ್ (ಮುನ್ನೆಲೆಯಲ್ಲಿ ಅರ್ಧವೃತ್ತಾಕಾರದ ಕಟ್ಟಡ) ಎಂದು ನಾರಯಣಗಿರಿ ಬೆಟ್ಟದ ಮೇಲೆ ಶ್ರೀವಾರಿ ರ್ಪಾದಾಲು ಕಂಡಂತೆ ಕೃಷ್ಣದೇವ ರಾಯ ಹಿಂದೂ ಧರ್ಮ ಎಲ್ಲ ಪಂಥಗಳು ಗೌರವವನ್ನು ಮತ್ತು ವಜ್ರ ಲೇಪಿತ ಕಿರೀಟಗಳು ನಿಂದ ಚಿನ್ನದ ಖಡ್ಗಗಳನ್ನು ಹಿಡಿದು ಅಮೂಲ್ಯವಾದ ಮೌಲ್ಯದ ತಿರುಮಲ ವೆಂಕಟೇಶ್ವರ ದೇವಸ್ಥಾನ ಹಲವಾರು ವಸ್ತುಗಳ ಮೇಲೆ ಯಥೇಚ್ಛವಾಗಿ ಸುರಿದ.
  • ಜೊತೆಗೆ, ಆತ ಮತ್ತು ದೇವಾಲಯದ complex.These ಪ್ರತಿಮೆಗಳು ಅವರ ಪತ್ನಿಯರು ಪ್ರತಿಮೆಗಳ ತಯಾರಿಕೆ ಕಾರ್ಯಾರಂಭ ಹೇಳಲಾಗುತ್ತದೆ ಇನ್ನೂ ನಿರ್ಗಮನ ದೇವಸ್ಥಾನವನ್ನು ಕಾಣಬಹುದಾಗಿದೆ. ಕೃಷ್ಣದೇವ ರಾಯ ಔಪಚಾರಿಕವಾಗಿ ವ್ಯಸತಿರ್ಥ ಅದಕ್ಕೆ ವೈಷ್ಣವ ಸಂಪ್ರದಾಯದ ಅನ್ನು ಪ್ರಾರಂಭಿಸಿದರು. [17] ಅವರು ಕನ್ನಡ, ತೆಲುಗು, ತಮಿಳು ಮತ್ತು ಸಂಸ್ಕೃತ ಕವಿಗಳು ಮತ್ತು ವಿದ್ವಾಂಸರು ಪೋಷಿಸಿದರು. ಶ್ರೀ ವ್ಯಾಸತಿರ್ಥ ತಮ್ಮ ಕುಲ-ಗುರುವಾಗಿದ್ದರು.

ಅಂತ್ಯ

  • ರಾಜ ಮತ್ತು ತನ್ನನ್ನು ಹುದ್ದೆಯಿಂದ ಕೈಗೆತ್ತಿಕೊಂಡು ತಮ್ಮ ಜೀವಿತಾವಧಿಯಲ್ಲಿ ಕೃಷ್ಣದೇವರಾಯ ತನ್ನ ಆರು ವರ್ಷದ ಮಗ ತಿರುಮಲರಾಯನನ್ನು ಪಟ್ಟಕ್ಕೆ ಏರಿಸಿದರು ಎಂದು ಹೇಳಲಾಗಿದೆ. ಆದರೆ ತಿರುಮಲರಾಯ ಅನಾರೋಗ್ಯಕ್ಕೊಳಗಾದರು ಸಾಲುವ ತಿಮ್ಮ(ಮುಖ್ಯಮಂತ್ರಿ) ಮಗ ಮೂಲಕ ವಿಷ ನಿಧನರಾದರು.
  • ಅವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಹಾಗು ಶೀಘ್ರವೇ ಅಂದರೆ ೧೫೨೯ ರ ನಂತರ ನಿಧನ ಏತನ್ಮಧ್ಯೆ ಕೃಷ್ಣದೇವರಾಯ ಆದಿಲ್ ಶಾನ ಸ್ವಾಮ್ಯದಲ್ಲಿ ನಂತರ, ಬೆಳಗಾವಿ ಮೇಲೆ ದಾಳಿಗೆ ತಯಾರಿ ನಡೆಸುತ್ತಿದೆ. ಅವರ ಸಾವಿಗೆ ಮುನ್ನ, ಅವರ ಉತ್ತರಾಧಿಕಾರಿಯಾಗಿ ತನ್ನ ಸಹೋದರ, ಅಚ್ಯುತರಾಯ ನಾಮನಿರ್ದೇಶನಗೊಂಡಿರುತ್ತಾರೆ. ಕೃಷ್ಣದೇವರಾಯರ ಆಳ್ವಿಕೆಯ ಕಾಲ ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಒಂದು ಅಮೋಘ ಅಧ್ಯಾಯವಾಗಿ ಉಳಿದಿದೆ.

ಉಲ್ಲೇಖ

  1. Srinivasan, C. R. (1979). Kanchipuram Through the Ages. Agam Kala Prakashan. p. 200. Retrieved 25 July 2014.
  2. "ಕೃಷ್ಣದೇವರಾಯರ ಕುರಿತ ಆಂಗ್ಲ ಮಾಹಿತಿ ಪುಟ".
  3. https://books.google.co.in/books?id=740AqMUW8WQC&q=Tulu#v=snippet&q=Tuluva&f=false