ಬಿರ್ಲಾ ಮಂದಿರ್, ಹೈದರಾಬಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿರ್ಲಾ ಮಂದಿರ್ ಒಂದು ಹಿಂದೂ ದೇವಾಲಯವಾಗಿದೆ. ಇದನ್ನು ೨೮೦ ಅಡಿ ಎತ್ತರದ ನೌಬತ್ ಪಹಾಡ್ ಎಂಬ ಗುಡ್ಡದ ಮೇಲೆ ನಿರ್ಮಿಸಲಾಗಿದೆ. ಇದು ಭಾರತದ ತೆಲಂಗಾಣ ರಾಜ್ಯದ ಹೈದರಾಬಾದ್‍ನಲ್ಲಿ ಸ್ಥಿತವಾಗಿದೆ. ನಿರ್ಮಾಣವು 10 ವರ್ಷಗಳನ್ನು ತೆಗೆದುಕೊಂಡಿತು ಮತ್ತು 1976 ರಲ್ಲಿ ರಾಮಕೃಷ್ಣ ಮಿಷನ್‌ನ ಸ್ವಾಮಿ ರಂಗನಾಥಾನಂದರು ಉದ್ಘಾಟಿಸಿದರು. ಈ ದೇವಾಲಯವನ್ನು ಬಿರ್ಲಾ ಪ್ರತಿಷ್ಠಾನ ನಿರ್ಮಿಸಿದೆ.

ವಾಸ್ತುಕಲೆ[ಬದಲಾಯಿಸಿ]

ರಾತ್ರಿಯ ಹೊತ್ತು ಬಿರ್ಲಾ ಮಂದಿರ್

ಈ ದೇವಾಲಯವು ದ್ರಾವಿಡ, ರಾಜಸ್ಥಾನಿ ಮತ್ತು ಉತ್ಕಲ ವಾಸ್ತುಕಲೆಗಳ ಮಿಶ್ರಣವನ್ನು ತೋರಿಸುತ್ತದೆ. ಇದನ್ನು 2000 ಟನ್ ಶುದ್ಧ ಬಿಳಿ ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ಪ್ರಧಾನ ದೇವತೆಯಾದ ವೆಂಕಟೇಶ್ವರನ ಗ್ರಾನೈಟ್ ವಿಗ್ರಹವು ಸುಮಾರು ೧೧ ಅಡಿ ಎತ್ತರವಿದೆ. ಒಂದು ಕೆತ್ತಿದ ಕಮಲವು ಮೇಲ್ಭಾಗದಲ್ಲಿ ಛತ್ರಿಯನ್ನು ರೂಪಿಸುತ್ತದೆ. ದೇವಾಲಯದ ಆವರಣದಲ್ಲಿ ಹಿತ್ತಾಳೆಯ ಧ್ವಜಸ್ತಂಭವು ೪೨ ಅಡಿ ಎತ್ತರಕ್ಕೆ ಏರುತ್ತದೆ. ಸ್ವಾಮಿ ರಂಗನಾಥಾನಂದರ ಆಶಯದಂತೆ ದೇವಾಲಯದ ವಾತಾವರಣವು ಧ್ಯಾನಕ್ಕೆ ಪೂರಕವಾಗಿರಬೇಕೆಂದು ದೇವಾಲಯದಲ್ಲಿ ಸಾಂಪ್ರದಾಯಿಕ ಗಂಟೆಗಳಿಲ್ಲ.

ದೇವಸ್ಥಾನದ ಬಗ್ಗೆ[ಬದಲಾಯಿಸಿ]

ಮುಖ್ಯ ದೇವಾಲಯವಲ್ಲದೆ, ವೆಂಕಟೇಶ್ವರನ ಪತ್ನಿಯರಾದ ಪದ್ಮಾವತಿ ಮತ್ತು ಆಂಡಾಳ್ ಅವರಿಗೆ ಪ್ರತ್ಯೇಕ ಗುಡಿಗಳನ್ನು ನಿರ್ಮಿಸಲಾಗಿದೆ. ಈ ದೇವಾಲಯವು ಶಿವ, ಶಕ್ತಿ, ಗಣೇಶ, ಹನುಮಂತ, ಬ್ರಹ್ಮ, ಸರಸ್ವತಿ ಮತ್ತು ಲಕ್ಷ್ಮಿ ಸೇರಿದಂತೆ ವಿವಿಧ ದೇವ ಮತ್ತು ದೇವಿಯ ಪ್ರತ್ಯೇಕ ಗುಡಿಗಳನ್ನು ಹೊಂದಿದೆ . ದೇವಾಲಯದ ಗೋಡೆಗಳ ಮೇಲೆ ಪುರುಷರು ಹಾಗೂ ಗುರ್ಬಾನಿಯ ಆಯ್ದ ಬೋಧನೆಗಳನ್ನು ಕೆತ್ತಲಾಗಿದೆ. ಮಹಾತ್ಮಾ ಗಾಂಧಿ ಮತ್ತು ಇತರ ಹಿಂದೂ ನಾಯಕರು ಗುರುತಿಸಿದಂತೆ ಬಿರ್ಲಾ ದೇವಾಲಯಗಳು ಎಲ್ಲರಿಗೂ ತೆರೆದಿರುತ್ತವೆ.

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]