ದಿ ಕಾಶ್ಮೀರ್ ಫೈಲ್ಸ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಿ ಕಾಶ್ಮೀರ್ ಫೈಲ್ಸ್ (ಚಲನಚಿತ್ರ)
ದಿ ಕಾಶ್ಮೀರಿ ಫೈಲ್ಸ್
ನಿರ್ದೇಶನವಿವೇಕ್ ಅಗ್ನಿಹೋತ್ರಿ
ನಿರ್ಮಾಪಕತೇಜ್ ನಾರಾಯಣ ಅಗರವಾಲ್
ಅಭಿಷೇಕ್ ಅಗರವಾಲ್
ಪಲ್ಲವಿ ಜೋಶಿ
ವಿವೇಕ್ ಅಗ್ನಿಹೋತ್ರಿ[೧]
ಪಾತ್ರವರ್ಗಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ,ಚಿನ್ಮಯ್ ಮಂಡ್ಲೇಕರ್,ಪುನೀತ್ ಇಸ್ಸಾರ್, ಭಾಷಾ ಸುಂಬ್ಲಿ, ಸೌರವ್ ವರ್ಮಾ,ಮೃಣಾಲ್ ಕುಲಕರ್ಣಿ, ಅತುಲ್ ಶ್ರೀವಾಸ್ತವ, ಪೃಥ್ವಿರಾಜ್ ಸರ್ನಾಯಕ್,ಅಮಾನ್ ಇಕ್ಬಾಲ್
ಛಾಯಾಗ್ರಹಣಉದಯಸಿಂಗ್ ಮೋಹಿತೆ
ಬಿಡುಗಡೆಯಾಗಿದ್ದು೨೦೨೨
ಚಿತ್ರ ನಿರ್ಮಾಣ ಸಂಸ್ಥೆಝೀ ಸ್ಟುಡಿಯೋಸ್, ಅಭಿಷೇಕ್ ಅಗರವಾಲ್ ಆರ್ಟ್ಸ್
ಹಿನ್ನೆಲೆ ಗಾಯನಸ್ವಪ್ನಿಲ್ ಬಂಡೋಡ್ಕರ್


ದಿ ಕಾಶ್ಮೀರ್ ಫೈಲ್ಸ್ 2022 ರಲ್ಲಿ ಬಿಡುಗಡೆಯಾದ ಹಿಂದಿ ಭಾಷೆಯ ಚಲನಚಿತ್ರ, ಝೀ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಕಾಶ್ಮೀರಿ ಪಂಡಿತರ ಉಚ್ಚಾಟನೆಯೇ ಈ ಚಲನಚಿತ್ರದ ಪ್ರಮುಖ ವಿಷಯ . ಇದರಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಷಿ ಮಿಥುನ್ ಚಕ್ರವರ್ತಿ, ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿದ್ದಾರೆ. [೨] ಚಲನಚಿತ್ರವು 11 ಮಾರ್ಚ್ 2022 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. [೩]

ಅನೇಕ ರಾಜ್ಯಗಳಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಭಾರತೀಯರು ನಿರ್ಲಕ್ಷಿಸಿದ್ದ ಇತಿಹಾಸವನ್ನು ಚಲನಚಿತ್ರದ ಮೂಲಕ ತೋರಿಸಿದ್ದಕ್ಕಾಗಿ ಅನೇಕರು ಚಲನಚಿತ್ರವನ್ನು ಹೊಗಳಿದ್ದಾರೆ. [೪] ಅನೇಕ ಟೀಕೆಗಳನ್ನೂ ಚಲನಚಿತ್ರವು ಎದುರಿಸಿದೆ [೫] [೬]

ಕಥಾವಸ್ತು[ಬದಲಾಯಿಸಿ]

೨೦೨೦ ರ ಸಮಕಾಲೀನ ಸ್ಥಿತಿಯನ್ನು ತೋರಿಸುವುದರೊಂದಿಗೆ ಕಾಶ್ಮೀರಿ ಪಂಡಿತರ ಉಚ್ಚಾಟನೆಯ ಕಾಲಮಾನದ ಇತಿಹಾಸವನ್ನೂ ಫ್ಲಾಶ್ ಬ್ಯಾಕ್ ಮೂಲಕ ಚಲನಚಿತ್ರ ತೋರಿಸುತ್ತದೆ.

೧೯೮೯-೯೦ ರ ಕಾಲಘಟ್ಟದ ಕತೆ

೧೯೮೯-೯೦ ರ ಅವಧಿಯಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳು ಕಾಶ್ಮೀರಿ ಹಿಂದೂ ಪಂಡಿತರನ್ನು ಕಾಶ್ಮೀರಿ ಕಣಿವೆಯಿಂದ ರಲೀವ್ ಗಲಿವ್ ಯಾ ಚಲಿವ್ (ಇಸ್ಲಾಮಿಗೆ ಮತಾಂತರವಾಗಿ ಅಥವಾ ಸಾಯಿರಿ, ಅಥವಾ ಇಲ್ಲಿಂದ ಓಡಿಹೋಗಿ) ಮತ್ತು ಮುಸ್ತಫಾ ಬಟ್ಟೆ ಸಫಾ ("ದೇವರ ಕೃಪೆಯೊಂದಿಗೆ ಕಾಶ್ಮೀರದಿಂದ ತೊಲಗಿ) ಎಂಬ ಘೋಷಣೆಗಳನ್ನು ಬಳಸಿ ಉಚ್ಚಾಟಿಸಿದರು ಉಗ್ರಗಾಮಿಗಳಿಂದ ಭಾರತೀಯ ಗೂಢಚಾರ ಎಂದು ಆರೋಪಿಸಿರುವ ತನ್ನ ಮಗ ಕರಣ್‌ನ ಸುರಕ್ಷತೆಯ ಬಗ್ಗೆ ಶಿಕ್ಷಕ ಪುಷ್ಕರ್ ನಾಥ್ ಪಂಡಿತ್ ಭಯಪಡುತ್ತಾನೆ. ಪುಷ್ಕರ್ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ತನ್ನ ಸ್ನೇಹಿತ ಬ್ರಹ್ಮದತ್ತನನ್ನು ಕರಣನ ರಕ್ಷಣೆಗಾಗಿ ವಿನಂತಿಸುತ್ತಾನೆ. ಆದರೆ ಭಯೋತ್ಪಾದಕರಿಂದ ಕರಣನನ್ನು ರಕ್ಷಿಸಲು ಬ್ರಹ್ಮದತ್ತನಿಗೆ ಸಾಧ್ಯವಾಗುವುದಿಲ್ಲ. ಶಾಂತಿ ಸ್ಥಾಪನೆಗೆ ಯತ್ನಿಸಿದ ಕಾರಣಕ್ಕಾಗಿ ಬ್ರಹ್ಮದತ್ತ ಅಮಾನತಾಗುತ್ತಾನೆ

ಪುಷ್ಕರ್‌ನ ಹಿರಿಯ ವಿದ್ಯಾರ್ಥಿಯೂ ಆಗಿರುವ ಉಗ್ರಗಾಮಿ ಕಮಾಂಡರ್ ಫಾರೂಕ್ ಮಲಿಕ್ ಬಿಟ್ಟಾ ಅವರು ಪುಷ್ಕರ್ ನಾಥ್ ಅವರ ಮನೆಯನ್ನು ಪ್ರವೇಶಿಸುತ್ತಾನೆ. ಕರಣ್ ಅಕ್ಕಿ ಪಾತ್ರೆಯಲ್ಲಿ ಅಡಗಿಕೊಳ್ಳುತ್ತಾನೆ ಆದರೆ ಬಿಟ್ಟಾ ಅಕ್ಕಿಯ ಪಾತ್ರೆಗೇ ಗುಂಡು ಹಾರಿಸುತ್ತಾನೆ. ಪುಷ್ಕರ್ ಮತ್ತು ಅವರ ಸೊಸೆ ಶಾರದಾ ತಮ್ಮ ಜೀವಕ್ಕಾಗಿ ಮನವಿ ಮಾಡುತ್ತಾರೆ. ಬಿಟ್ಟಾ ಬದುಕುಳಿಯಬೇಕಾದರೆ ಬದಲಾಗಿ ಕರಣನ ರಕ್ತದಲ್ಲಿ ನೆನೆಸಿದ ಅನ್ನವನ್ನು ತಿನ್ನುವಂತೆ ಶಾರದಾಳನ್ನು ಒತ್ತಾಯಿಸುತ್ತಾನೆ. ಬಿಟ್ಟಾ ಮತ್ತು ಅವನ ಗ್ಯಾಂಗ್ ಮನೆಯಿಂದ ಹೊರಬಂದ ನಂತರ, ಪುಷ್ಕರ್ ಕರಣ್‌ನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾನೆ ಮತ್ತು ಕರಣ್‌ನ ಜೀವವನ್ನು ಉಳಿಸಲು ತನ್ನ ವೈದ್ಯ ಸ್ನೇಹಿತ ಮಹೇಶ್ ಕುಮಾರ್‌ಗೆ ವಿನಂತಿಸುತ್ತಾನೆ. ಆದಾಗ್ಯೂ, ಆಸ್ಪತ್ರೆಯನ್ನು ಉಗ್ರಗಾಮಿಗಳು ಸ್ವಾಧೀನಪಡಿಸಿಕೊಳ್ಳುತ್ತಾರೆ, ಆಸ್ಪತ್ರೆಯ ಸಿಬ್ಬಂದಿ ಮುಸ್ಲಿಮೇತರರಿಗೆ ಚಿಕಿತ್ಸೆ ನೀಡುವುದನ್ನು ನಿಷೇಧಿಸುತ್ತಾರೆ. ತರುವಾಯ, ಕರಣ್ ಗುಂಡೇಟಿನಿಂದ ಗಾಯಗೊಂಡು ಸಾಯುತ್ತಾನೆ.

ಪುಷ್ಕರ್ ಮತ್ತು ಅವರ ಕುಟುಂಬವನ್ನು ಅವರ ಪತ್ರಕರ್ತ ಸ್ನೇಹಿತ ವಿಷ್ಣು ರಾಮ್ ಅವರು ಮುಸ್ಲಿಮರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿರುವ ಹಿಂದೂ ಕವಿ ಕೌಲ್ ಬಳಿಗೆ ಕರೆದೊಯ್ಯುತ್ತಾರೆ. ಕೌಲ್ ಅನೇಕ ಪಂಡಿತರನ್ನು ತನ್ನ ಮನೆಗೆ ಕರೆದೊಯ್ಯುತ್ತಾನೆ ಆದರೆ ರಕ್ಷಣೆ ನೀಡುವ ನೆಪದಲ್ಲಿ ಕೌಲ್ ಮತ್ತು ಅವನ ಮಗನನ್ನು ಕರೆದುಕೊಂಡು ಹೋಗಲು ಉಗ್ರಗಾಮಿಗಳ ಗುಂಪು ಆಗಮಿಸುತ್ತದೆ. ಉಳಿದ ಪಂಡಿತರು ಸ್ಥಳವನ್ನು ತೊರೆಯುತ್ತಾರೆ ಆದರೆ ಕೌಲ್ ಮತ್ತು ಅವನ ಮಗನ ಶವಗಳು ಮರಗಳಲ್ಲಿ ನೇತಾಡುತ್ತಿರುವುದನ್ನು ಕಂಡು ಪಂಡಿತರು ಆಘಾತಕ್ಕೊಳಗಾಗುತ್ತಾರೆ.

ಕಾಶ್ಮೀರ ಕಣಿವೆಯ ನಿರಾಶ್ರಿತ ಪಂಡಿತರು ಜಮ್ಮುವಿನಲ್ಲಿ ನೆಲೆಸುತ್ತಾರೆ. ಅಲ್ಪ ಪ್ರಮಾಣದ ಪಡಿತರ ಮತ್ತು ಕಳಪೆ ಸ್ಥಿತಿಯಲ್ಲಿ ವಾಸಿಸುತ್ತಿರುತ್ತಾರೆ. ಅಮಾನತ್ತಾದ ಬ್ರಹ್ಮಾ ಅವರನ್ನು ಜಮ್ಮು ಕಾಶ್ಮೀರದ ಹೊಸ ಗವರ್ನರ್‌ಗೆ ಸಲಹೆಗಾರರಾಗಿ ನೇಮಿಸಲಾಗುತ್ತದೆ. ಅವರ ಕೋರಿಕೆಯ ಮೇರೆಗೆ, ಗೃಹ ಸಚಿವರು ಜಮ್ಮು ಶಿಬಿರಗಳಿಗೆ ಭೇಟಿ ನೀಡುತ್ತಾರೆ, ಅಲ್ಲಿ ಪುಷ್ಕರ್ ಅವರು ಆರ್ಟಿಕಲ್ 370 ಅನ್ನು ತೆಗೆದುಹಾಕಲು ಮತ್ತು ಕಾಶ್ಮೀರಿ ಪಂಡಿತರ ಪುನರ್ವಸತಿಗೆ ಒತ್ತಾಯಿಸುತ್ತಾರೆ. ಕಾಶ್ಮೀರದ ನಾಡಿಮಾರ್ಗ್‌ನಲ್ಲಿ ಶಾರದಾ ಅವರಿಗೆ ಸರ್ಕಾರಿ ನೌಕರಿ ದೊರಕಿಸಿಕೊಡುವಲ್ಲಿ ಬ್ರಹ್ಮ ಸಹಾಯ ಮಾಡುತ್ತಾನೆ. ಪುಷ್ಕರ್ ಮತ್ತು ಕುಟುಂಬವು ಅಲ್ಲಿಗೆ ತೆರಳುತ್ತದೆ.

ಒಂದು ದಿನ ಬಿಟ್ಟಾ ನೇತೃತ್ವದ ಉಗ್ರಗಾಮಿಗಳ ಗುಂಪು ಭಾರತೀಯ ಸೇನೆಯ ಸದಸ್ಯರಂತೆ ವೇಷಧರಿಸಿ ನಾಡಿಮಾರ್ಗ್‌ಗೆ ಆಗಮಿಸುತ್ತದೆ. ಉಪಾಯದಿಂದ ಹಿಂದೂ ಪಂಡಿತರನ್ನು ಮನೆಯಿಂದ ಹೊರಗೆ ಕರೆಯುತ್ತಾರೆ. ಉಗ್ರಗಾಮಿಗಳು ತನ್ನ ಹಿರಿಯ ಮಗ ಶಿವನನ್ನು ಹಿಡಿದಾಗ ಶಾರದಾ ವಿರೋಧಿಸುತ್ತಾಳೆ. ಕೋಪಗೊಂಡ ಫಾರೂಕ್ ಅವಳ ಬಟ್ಟೆ ಹರಿದು ಅವಳ ದೇಹವನ್ನು ಅರ್ಧಕ್ಕೆ ಗರಗಸುತ್ತಾನೆ. ಅವನು ಶಿವ ಮತ್ತು ಉಳಿದ ಪಂಡಿತರನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾರಿಸುತ್ತಾನೆ. ಏನಾಯಿತು ಎಂಬುದರ ಬಗ್ಗೆ ಸುದ್ದಿ ಹರಡಲು ಪುಷ್ಕರ್ ಅವರನ್ನು ಉಳಿಸುತ್ತಾನೆ. ಪುಷ್ಕರ್ ಮನೆಯಲ್ಲೇ ಉಳಿದಿದ್ದ ಎರಡನೇ ಮೊಮ್ಮಗ ಕೃಷ್ಣನನ್ನು ಕರೆದುಕೊಂಡು ದೆಹಲಿಗೆ ಪಲಾಯನಗೈಯುತ್ತಾನೆ

೨೦೨೦ ರ ಕತೆ

ತಂದೆ-ತಾಯಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕೃಷ್ಣನಿಗೆ ನಂಬಿಸಲಾಗುತ್ತದೆ. ಆತ ANU ಕಾಲೇಜಿನ ವಿದ್ಯಾರ್ಥಿಯಾಗಿರುತ್ತಾನೆ.ಕೃಷ್ಣ ಕಾಶ್ಮೀರಿ ಪ್ರತ್ಯೇಕತಾವಾದದ ಬೆಂಬಲಿಗರಾದ ಪ್ರೊಫೆಸರ್ ರಾಧಿಕಾ ಮೆನನ್ ಅವರ ಪ್ರಭಾವಕ್ಕೆ ಒಳಗಾಗುತ್ತಾನೆ. ಕರಣ್ ಹತ್ಯೆಯಾದಾಗ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ಪುಷ್ಕರ್‌ನ ಗೆಳೆಯರಾದ ಬ್ರಹ್ಮ, ವಿಷ್ಣು, ಮಹೇಶ್ ಮತ್ತು ಪೋಲೀಸ್ ಅಧಿಕಾರಿ ಹರಿ ನರೇನ್, ಕಾಶ್ಮೀರದ ಬ್ರಹ್ಮನ ಮನೆಯಲ್ಲಿ ಸೇರುತ್ತಾರೆ. ಬ್ರಹ್ಮ ೧೯೯೦ ರ ಘಟನೆಯನ್ನ " ಜನಾಂಗೀಯ ಹತ್ಯೆ " ಎಂದು ಕರೆಯುತ್ತಾನೆ

ANU ನ ವಿದ್ಯಾರ್ಥಿಸಂಘದ ಚುನಾವಣೆಯಲ್ಲಿ ಕೃಷ್ಣ ಸ್ಪರ್ಧಿಸುತ್ತಾನೆ. ಪ್ರೊಫೆಸರ್ ರಾಧಿಕಾ ಮೆನನ್ ಅವರ ಸಲಹೆಯಂತೆ, ಅವರು ಕಾಶ್ಮೀರದ ಸಮಸ್ಯೆಗೆ ಭಾರತ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುತ್ತಾನೆ, ಇದರಿಂದ ಪುಷ್ಕರ್ ಕೋಪಿಸಿಕೊಳ್ಳುತ್ತಾನೆ. ಪುಷ್ಕರ್ ಸತ್ತಾಗ, ಪುಷ್ಕರನ ಕೊನೆಯ ಆಸೆಯಂತೆ ಚಿತಾಭಸ್ಮವನ್ನು ಚೆಲ್ಲಲು ಕೃಷ್ಣನು ಕಾಶ್ಮೀರದಲ್ಲಿರುವ ತನ್ನ ಪೂರ್ವಜರ ಮನೆಗೆ ಪ್ರಯಾಣಿಸುತ್ತಾನೆ. ಕಾಶ್ಮೀರಕ್ಕೆ ಹೋದಾಗ ಕಾಶ್ಮೀರದ ಕೆಲವು ದೃಶ್ಯಗಳನ್ನು ರೆಕಾರ್ಡ್ ಮಾಡಲು ಮೆನನ್ ಕೃಷ್ಣನನ್ನು ಕೇಳುತ್ತಾನೆ. ಹಿಂದೂಗಳ ವಿರುದ್ಧ ಹರಿಹಾಯುವ ದೋಣಿ ಚಾಲಕನ ಮಾತುಗಳನ್ನು ಕೃಷ್ಣ ರೆಕಾರ್ಡ್ ಮಾಡುತ್ತಾನೆ. ಮೆನನ್ ಅವರ ಸಂಪರ್ಕದ ಸಹಾಯದಿಂದ, ಕೃಷ್ಣ ಭಯೋತ್ಪಾದಕ ಬಿಟ್ಟಾನನ್ನು ಭೇಟಿಯಾಗುತ್ತಾನೆ. ಬಿಟ್ಟಾ ತನ್ನನ್ನು ಅಹಿಂಸಾತ್ಮಕ ಪ್ರಜಾಸತ್ತಾತ್ಮಕ ಚಳವಳಿಯನ್ನು ಮುನ್ನಡೆಸುತ್ತಿರುವ ನವಯುಗದ ಗಾಂಧಿ ಎಂದು ಘೋಷಿಸಿಕೊಳ್ಳುತ್ತಾನೆ. ಕೃಷ್ಣನ ತಾಯಿ ಮತ್ತು ಸಹೋದರನನ್ನು ಕೊಂದದ್ದು ಭಾರತೀಯ ಸೇನೆ ಎಂದು ಬಿಟ್ಟಾ ಹೇಳುತ್ತಾನೆ. ಈ ಹೇಳಿಕೆಯ ಬಗ್ಗೆ ಕೃಷ್ಣನು ಬ್ರಹ್ಮನನ್ನು ಪ್ರಶ್ನಿಸಿದಾಗ, ಬ್ರಹ್ಮನು ಅವನಿಗೆ ಪತ್ರಿಕೆಯ ಕಟಿಂಗ್‌ಗಳನ್ನು (ಪುಷ್ಕರ್ ಸಂಗ್ರಹಿಸಿದ) ಹಸ್ತಾಂತರಿಸುತ್ತಾನೆ, ಭಾರತೀಯ ಸೇನೆಯ ಸೈನಿಕರಂತೆ ವೇಷ ಧರಿಸಿದ ಉಗ್ರಗಾಮಿಗಳು ಅವರನ್ನು ಕೊಂದಿದ್ದಾರೆ ಎಂಬ ವರದಿಯನ್ನು ಓದುತ್ತಾನೆ.

ಕೃಷ್ಣ ಅವರು ದೆಹಲಿಗೆ ಹಿಂದಿರುಗುತ್ತಾನೆ. ANU ಕ್ಯಾಂಪಸ್‌ನಲ್ಲಿ ವಿಶ್ವವಿದ್ಯಾನಿಲಯದ ಅಧ್ಯಕ್ಷೀಯ ಚುನಾವಣೆಗಳಿಗಾಗಿ ತಮ್ಮ ನಿಗದಿತ ಭಾಷಣವನ್ನು ನೀಡುತ್ತಾರೆ. ಕಾಶ್ಮೀರದ ಇತಿಹಾಸ, ಹಿಂದೂಗಳ ದಾರುಣ ಸ್ಥಿತಿಯ ಬಗ್ಗೆ ಮಾತನಾಡುತ್ತಾನೆ. ಇದರಿಂದ ಆತನ ಮಾರ್ಗದರ್ಶಕ ಪ್ರೊಫೆಸರ್ ಮೆನನ್ ಮತ್ತು ಇತರ ವಿದ್ಯಾರ್ಥಿಗಳಿಗೆ ಆಘಾತವಾಗುತ್ತದೆ. ಕೃಷ್ಣ ವಿದ್ಯಾರ್ಥಿಗಳಿಂದ ಪ್ರತಿರೋಧ ಮತ್ತು ಅಪಹಾಸ್ಯವನ್ನು ಎದುರಿಸುತ್ತಾನೆ. ಅಂತಿಮವಾಗಿ ಅನೇಕರು ಆತನ ಮಾತುಗಳನ್ನು ಒಪ್ಪುತ್ತಾರೆ.

ಪಾತ್ರಗಳು[ಬದಲಾಯಿಸಿ]

  • ಅಧಿಕಾರಿ ಬ್ರಹ್ಮದತ್ತನ ಪಾತ್ರದಲ್ಲಿ ಮಿಥುನ್ ಚಕ್ರವರ್ತಿ.
  • ಪುಷ್ಕರ್ ಪಂಡಿತನ ಪಾತ್ರದಲ್ಲಿ ಅನುಪಮ್ ಖೇರ್
  • ಕೃಷ್ಣ ಪಂಡಿತ್ ನ ಪಾತ್ರದಲ್ಲಿ ದರ್ಶನ್ ಕುಮಾರ್
  • ರಾಧಿಕಾ ಮೆನನ್ ಪಾತ್ರದಲ್ಲಿ ಪಲ್ಲವಿ ಜೋಶಿ
  • ಫಾರೂಕ್ ಮಲ್ಲಿಕ್ ಬಿಟ್ಟಾನ ಪಾತ್ರದಲ್ಲಿ ಚಿನ್ಮಯ್ ಮಂಡ್ಲೇಕರ್
  • ಡಾಕ್ಟರ್ ಮಹೇಶ್ ನ ಪಾತ್ರದಲ್ಲಿ ಪ್ರಕಾಶ್ ಬೆಳವಾಡಿ
  • ಡಿ.ಜಿ.ಪಿ ಹರಿ ನರೈನ್ ಪಾತ್ರದಲ್ಲಿ ಪುನೀತ್ ಇಸ್ಸಾರ್
  • ಶಾರದಾ ಪಂಡಿತ್ ಪಾತ್ರದಲ್ಲಿ ಭಾಷಾ ಸುಂಬ್ಲಿ
  • ಅಫ್ಝಲ್ ನ ಪಾತ್ರದಲ್ಲಿ ಸೌರವ್ ವರ್ಮಾ
  • ಲಕ್ಷೀ ದತ್ ಪಾತ್ರದಲ್ಲಿ ಮೃಣಾಲ್ ಕುಲಕರ್ಣಿ
  • ವಿಷ್ಣು ರಾಮ್ ನ ಪಾತ್ರದಲ್ಲಿ ಅತುಲ್ ಶ್ರೀವಾಸ್ತವ
  • ಶಿವ ಪಂಡಿತ್ ನ ಪಾತ್ರದಲ್ಲಿ ಪೃಥ್ವಿರಾಜ್ ಸರ್ನಾಯಕ್
  • ಕರಣ್ ಪಂಡಿತ್ ನ ಪಾತ್ರದಲ್ಲಿ ಅಮಾನ್ ಇಕ್ಬಾಲ್.

ನಿರ್ಮಾಣ[ಬದಲಾಯಿಸಿ]

ಆಗಸ್ಟ್ ೧೫, ೨೦೧೯ ರಂದು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಯಿತು. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಚಿತ್ರ ಆಗಸ್ಟ್ ೧೫ ೨೦೨೦ ರಂದು ಬಿಡುಗಡೆಯಾಗುತ್ತದೆ. ಎಂದು ಹೇಳಿದ್ದರು. ಕಾಶ್ಮೀರಿ ಪಂಡಿತರ ಉಚ್ಚಾಟನೆ ಈ ಚಿತ್ರದ ಪ್ರಮುಖ ವಿಷಯವಾಗಿರುತ್ತದೆ[೭] [೮], ಅನ್ಟೋಲ್ಡ್ ಸ್ಟೋರಿ ಆಫ್ ಇಂಡಿಪೆಂಡೆಂಟ್ ಇಂಡಿಯಾ ಎಂಬ ಸರಣಿಯ ಎರಡನೇ ಭಾಗವೇ ಈ ಚಿತ್ರ ಎಂದು ಹೇಳಿದರು. ಮೊದಲನೇ ಚಿತ್ರ ದಿ ತಾಷ್ಕೆಂಟ್ ಫೈಲ್ಸ್ (೨೦೧೯), ಹಾಗೂ ಮುಂಬರುವ ಚಿತ್ರ ದಿ ದೆಹಲಿ ಫೈಲ್ಸ್[೯]. ಪ್ರಸ್ತುತ ಕಾಶ್ಮೀರಿ ಫೈಲ್ಸ್ ಚಿತ್ರಕ್ಕಾಗಿ ಸುಮಾರು ೭೦೦ ಉಚ್ಚಾಟಿತರನ್ನು ಸಂಪರ್ಕಿಸಿದ್ದಾರೆ [೧೦] ನಟ ಅನುಪಮ್ ಖೇರ್ ಅವರು ಡಿಸೆಂಬರ್ ೨೦೧೯[೧೧]ರಲ್ಲಿ ಚಿತ್ರದ ನಾಯಕ ನಟರಾಗಿ ಚಿತ್ರತಂಡವನ್ನು ಸೇರಿಕೊಂಡರು.

ಭಾರತದಲ್ಲಿ COVID-19 ಸಾಂಕ್ರಾಮಿಕ ರೋಗದಿಂದಾಗಿ ಚಿತ್ರದ ಬಿಡುಗಡೆ ನಿಗದಿತ ದಿನಾಂಕದಂದು ಸಾಧ್ಯವಾಗಲಿಲ್ಲ[೧೨][೧೩] ಇಡೀ ಚಲನಚಿತ್ರವನ್ನು 30 ದಿನಗಳಲ್ಲಿ ಹೆಚ್ಚಾಗಿ ಮಸ್ಸೂರಿ ಮತ್ತು ಡೆಹ್ರಾಡೂನ್‌ನಲ್ಲಿ ಚಿತ್ರೀಕರಿಸಲಾಯಿತು, ಜೊತೆಗೆ ಕಾಶ್ಮೀರದಲ್ಲಿ ದಾಲ್ ಸರೋವರದ ಪರಿಸರದಲ್ಲಿ ಒಂದು ವಾರದ ಅವಧಿಯ ಚಿತ್ರೀಕರಣ ನಡೆಸಲಾಯಿತು. [೧೪] ಯೋಗರಾಜ್ ಸಿಂಗ್ ಅವರ ಬದಲಿಗೆ ಪುನೀತ್ ಇಸ್ಸಾರ್ ಅವರನ್ನು ಚಿತ್ರತಂಡದಲ್ಲಿ ಸೇರಿಸಿಕೊಳ್ಳಲಾಯಿತು. ಸರಹ್ನಾ ಎಂಬ ಸಹ ನಿರ್ಮಾಪಕರು ಚಿತ್ರೀಕರಣದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಉಲ್ಲೇಖ[ಬದಲಾಯಿಸಿ]

  1. "Kashmir Files Vivek Agnihotri's film exposes India's new fault lines". BBC. 15 March 2022. Retrieved 16 March 2022.
  2. Negi, Shrishti (9 March 2022). "The Kashmir Files Producer Pallavi Joshi: Am I Making the Film for Hindu Rashtra? I'm Just Telling a Story". News18. Retrieved 11 March 2022.
  3. "Vivek Agnihotri's The Kashmir Files to CLASH with Prabhas-starrer Radhe Shyam on March 11". Bollywood Hungama. 8 February 2022. Retrieved 8 February 2022.
  4. Akhil, Kumar (18 March 2022). "How 'The Kashmir Files', Praised By PM Modi, Became A Runaway Success". NDTV. Retrieved 2022-03-20.
  5. Sebastian, Meryl (15 March 2022). "Kashmir Files: Vivek Agnihotri's film exposes India's new fault lines". BBC News (in ಬ್ರಿಟಿಷ್ ಇಂಗ್ಲಿಷ್). Retrieved 15 March 2022.
  6. "Kashmir Files, hailed by Modi, triggers anti-Muslim hate speech". Al Jazeera (in ಇಂಗ್ಲಿಷ್). 2022-03-17. Retrieved 2022-03-23.
  7. "Vivek Agnihotri's The Kashmir Files to go on floors next month". Cinema Express. 1 January 2020. Retrieved 31 December 2020.
  8. "The Kashmir Files: Vivek Agnihotri announces new film through poster, announces its release on 15 August, 2020". Firstpost. 14 August 2019. Retrieved 18 March 2022.
  9. "Vivek Agnihotri to complete trilogy, announces The Delhi Files". Cinema Express. 13 September 2021. Retrieved 19 March 2022.
  10. "Vivek Agnihotri on The Kashmir Files: 'I wanted to make a film about people who did not pick up guns'-Entertainment News, Firstpost". Firstpost. 7 March 2022. Retrieved 11 March 2022.
  11. "Anupam Kher joins Vivek Agnihotri's next, The Kashmir Files". Bollywood Hungama. 5 December 2019.
  12. "COVID 19 effect: Shooting of 'The Kashmir Files' called off". The Times of India. 17 March 2020. Retrieved 31 December 2020.
  13. "Yograj Singh out of Vivek Ranjan Agnihotri's The Kashmir Files". The Tribune (Chandigarh). 12 December 2020. Retrieved 20 March 2022.
  14. Verma, Neha (15 March 2022). "The Kashmir Files DOP Uday Singh Mohite says the shooting experience was depressing. Here's why". India Today.