ಕಮಲ ಬಸದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಮಲ ಬಸದಿಯು ಕರ್ನಾಟಕದ ಬೆಳಗಾವಿ ನಗರದ ಬೆಳಗಾವಿ ಕೋಟೆಯ ಒಳಗಿರುವ ಜೈನ ದೇವಾಲಯವಾಗಿದೆ . [೧]

ಇತಿಹಾಸ[ಬದಲಾಯಿಸಿ]

ಕಮಲ್ ಬಸದಿಯು ಬಿಚ್ಚಿರಾಜ ಅಥವಾ ಬಿಚಲನಿಂದ ನಿರ್ಮಿಸಲ್ಪಟ್ಟಿತು. [೨] ರಟ್ಟ ರಾಜವಂಶದ ನಾಲ್ಕನೇ ಕಾರ್ತವೀರ್ಯನ [೩] ಆಸ್ಥಾನದಲ್ಲಿದ್ದ ಅಧಿಕಾರಿ ಬಿಚನನು ಜೈನ ಸನ್ಯಾಸಿ ಸುಭಚಂದ್ರಭಟ್ಟಾರಕದೇವರ ಮಾರ್ಗದರ್ಶನದಲ್ಲಿ. [೪] [೫] ಕ್ರಿ.ಶ ೧೨೦೪ರಲ್ಲಿಕಟ್ಟಿಸಿದನು.ವಾಸ್ತುಶಿಲ್ಪಿ ಕಾರ್ತವೀರ್ಯದೇವ ಮತ್ತು ಯುವರಾಜಕುಮಾರ ಮಲ್ಲಿಕಾರ್ಜುನದೇವ ನಿರ್ಮಿಸಿದ್ದಾರೆ. [೬]

ವಾಸ್ತುಶಿಲ್ಪ[ಬದಲಾಯಿಸಿ]

ಮೇಲ್ಛಾವಣಿ

ಕಮಲ ಬಸದಿಯ ಮಧ್ಯದ ಛಾವಣಿಯು ಗುಮ್ಮಟದಿಂದ ವಿಸ್ತರಿಸಿರುವ ಕಮಲದ ಕೆತ್ತನೆಗಳನ್ನು ಒಳಗೊಂಡಿದೆ. ಆದ್ದರಿಂದ ಕಮಲ ಬಸದಿ ಎಂದು ಪ್ರಸಿದ್ಧವಾಗಿದೆ. [೭] [೮] [೪] ಕಮಲವು 72 ದಳಗಳನ್ನು ಹೊಂದಿದ್ದು ಭೂತ, ವರ್ತಮಾನ ಮತ್ತು ಭವಿಷ್ಯದ 24 ತೀರ್ಥಂಕರರನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ. ದೇವಾಲಯದ ಗೋಡೆಗಳಲ್ಲಿ ಸಂಕೀರ್ಣವಾದ ವಿನ್ಯಾಸಗಳು, ಗಡಿಗಳು ಮತ್ತು ಶಿಲ್ಪಗಳನ್ನು ಕೆತ್ತಲಾಗಿದೆ. [೯] ದೇವಾಲಯದ ಗೋಡೆಯು ಕಂಬಗಳಿಂದ ಕೂಡಿದೆ ಮತ್ತು ಪ್ರತಿ ಆವರಣದ ಕೊನೆಯಲ್ಲಿ ನಾಗರ ಕೆತ್ತನೆ ಇದೆ. ಸ್ತಂಭಗಳನ್ನು ಅಲಂಕಾರಯುತವಾಗಿ ಕೆತ್ತಲಾಗಿದೆ ಮತ್ತು ಅಂದವಾಗಿ ಪಾಲಿಶ್ ಮಾಡಲಾಗಿದೆ. ದೇವಾಲಯವು ಶ್ರೀಮಂತ ಕೆತ್ತನೆಯ ದ್ವಾರವನ್ನು ಹೊಂದಿದೆ. [೧] ತೀರ್ಥಂಕರರ ವಿಗ್ರಹಗಳನ್ನು ಹೊಂದಿರುವ ಒಟ್ಟು ಐದು ಸಣ್ಣ ಕಿಂಡಿಗಳಿವೆ; ಈ ಕಿಂಡಿಗಳ ನಡುವೆ ನಾಲ್ಕು ಯಕ್ಷ ಮತ್ತು ಯಕ್ಷಿಯು ಸಣ್ಣ ಮೇಲಾವರಣದ ಕೆಳಗೆ ನಿಂತಿರುವ ಭಂಗಿಯಲ್ಲಿರುತ್ತಾರೆ. ಗರ್ಭಗೃಹದ ಒಳಗಿನ ಕಂಬಗಳು ಚೌಕಾಕಾರ ಮತ್ತು ಬೃಹತ್ ಗಾತ್ರದಲ್ಲಿವೆ. ಬಾಗಿಲಿನ ಪ್ರತಿ ಬದಿಯಲ್ಲಿ, ಜೈನ ದೇವತೆಗಳ ಕೆತ್ತನೆಗಳಿವೆ. [೭] ದೇವಾಲಯದ ಮುಖಮಂಟಪವನ್ನು ವಾಸ್ತುಶಿಲ್ಪದ ಮೇರುಕೃತಿ ಎಂದು ಪರಿಗಣಿಸಲಾಗಿದೆ. ದೇವಾಲಯದ ಮೂಲದೇವತೆ ನೇಮಿನಾಥನ ಕಪ್ಪು ಬಣ್ಣದ ವಿಗ್ರಹವಾಗಿದೆ. [೨] ದೇವಾಲಯದಲ್ಲಿ ರಿಷಭನಾಥನ ಪದ್ಮಾಸನ ಭಂಗಿ, ಸುಮತಿನಾಥ ಕಾಯೋತ್ಸರ್ಗ ಭಂಗಿ ಮತ್ತು ಏಳು ಹೆಡೆಯ ಸರ್ಪದ ಮೇಲಿರುವ ಪಾರ್ಶ್ವನಾಥನ ವಿಗ್ರಹಗಳಿವೆ. ಒಂಬತ್ತು ತೀರ್ಥಂಕರರನ್ನು ಪ್ರತಿನಿಧಿಸುವ ನವಗ್ರಹದ ಏಕಶಿಲಾ ವಿಗ್ರಹವನ್ನು ಸಹ ದೇವಾಲಯ ಒಳಗೊಂಡಿದೆ. [೯]

ಚಿಕ್ಕಿ ಬಸದಿ ಹಾಗೂ ಅರ್ಚಕರ ಮನೆ ಕಮಲ ಬಸದಿಯ ಸಮೀಪದಲ್ಲಿದೆ. [೧೦]

ಜನಪ್ರಿಯ ಸಂಸ್ಕೃತಿಯಲ್ಲಿ[ಬದಲಾಯಿಸಿ]

ಕಮಲ ಬಸದಿಯ 816 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ 23ನೇ ಡಿಸೆಂಬರ್ 2020 [೩] ವಿಶೇಷ ಅಂಚೆ ಕವರ್ ಅನ್ನು ಬಿಡುಗಡೆ ಮಾಡಲಾಗಿದೆ.

ಚಿತ್ರಗಳು[ಬದಲಾಯಿಸಿ]


ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]