ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ
| ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ,ಮಂಗಳೂರು ವಿಶ್ವವಿದ್ಯಾನಿಲಯ,ಮಂಗಳ ಗಂಗೋತ್ರಿ. | |
|---|---|
| ಸ್ಥಾಪನೆ | ೧೯೬೮ |
| ಪ್ರಕಾರ | ಸಾರ್ವಜನಿಕ |
| ಕುಲಪತಿಗಳು | ಶ್ರೀ ವಜುಭಾಯಿ ರೂಡಭಾಯಿ ವಾಲ.(ರಾಜ್ಯಪಾಲರು ಕರ್ನಾಟಕ,ಭಾರತ ಸರಕಾರ) |
| ಉಪಕುಲಪತಿಗಳು | 'ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ'[೧]. |
| ಸ್ನಾತಕೋತ್ತರ ಶಿಕ್ಷಣ | |
| ಡಾಕ್ಟರೇಟ್ ಪದವಿ | '೧೪೨' |
| ಆವರಣ | ಕೊಣಾಜೆ. |
| ಅಂತರಜಾಲ ತಾಣ | www.mangaloreuniversity.ac.in |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆ ಎಸ್.ವಿ.ಪರಮೇಶ್ವರ ಭಟ್ಟ ಮಂಗಳಗಂಗೋತ್ರಿ
[ಬದಲಾಯಿಸಿ]- ೧೯೬೮ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿ ಆರಂಭವಾಯಿತು. ಮಂಗಳೂರು ವಿಶ್ವವಿದ್ಯಾನಿಲಯ ಆರಂಭಗೊಂಡಾಗ ಇದ್ದ ಕೆಲವೇ ವಿಭಾಗಗಳಲ್ಲಿ ಕನ್ನಡ ವಿಭಾಗವೂ ಒಂದಾಗಿದೆ.[೨]
- ಕನ್ನಡ ಸ್ನಾತಕೋತ್ತರ ಪದವಿ. ಕಲಿಕೆಯ ಭಾಗವಾಗಿ ಕಂಪ್ಯೂಟರ್,ಅನುವಾದ,ಸಮೂಹ ಮಾಧ್ಯಮಗಳ ಕುರಿತು ತಿಳುವಳಿಕೆ ಮತ್ತು ತರಭೇತಿ. ಸಾಹಿತ್ಯ ಬರವಣಿಗೆ ಮತ್ತು ಮಾತುಗಾರಿಕೆಯ ಕೌಶಲ. ರಾಷ್ಟೀಯ ವಿಚಾರ ಸಂಕಿರಣ,ಕಾರ್ಯಾಗಾರಗಳಲ್ಲಿ ಭಾಗವಹಿಸುವ ಅವಕಾಶ ಈಗಮಂಗಳೂರು ವಿಶ್ವವಿದ್ಯಾಲಯದಲ್ಲಿದೆ.
ಅಧ್ಯಯನ ವಿಷಯಗಳು ಮತ್ತು ವಿಶೇಷ ಅಧ್ಯಯನ ವಿಷಯಗಳು
[ಬದಲಾಯಿಸಿ]- ಕನ್ನಡ ಸಾಹಿತ್ಯ: ಪ್ರಾಚೀನ,ಮಧ್ಯಕಾಲಿನ ಮತ್ತು ಆಧುನಿಕ, ಭಾಷಾವಿಜ್ಞಾನ,ಛಂದಸ್ಸು,ತೌಲನಿಕ ಕಾವ್ಯ ಮೀಮಾಂಸೆ, ಕಂಪ್ಯೂಟರ್, ಕನ್ನಡ ಸಾಹಿತ್ಯ ಮತ್ತು ಸಮೂಹ ಮಾಧ್ಯಮ,ಭಾಷಾಂತರ.
- ತುಳುವ ಅಧ್ಯಯನ,ಪ್ರಾಧೇಶಿಕ ಅಧ್ಯಯನ ಮತ್ತು ಕೊಡವ ಅಧ್ಯಯನ ಐಚ್ಛಿಕ ಪತ್ರಿಕೆಗಳು.
ಕನ್ನಡ ಅಧ್ಯಯನ ಸಂಸ್ಥೆಯ ವಿಶೇಷತೆ
[ಬದಲಾಯಿಸಿ]- ಅನುಭವಿ ತಜ್ಞ ಪ್ರಾಧ್ಯಾಪಕರ ವ್ರಂಧ.
- ವಿದ್ಯಾರ್ಥಿಗಳ ಬಳಕೆಗೆ ಸುಸಜ್ಜಿತ ಅಂತರಜಾಲ ಸೌಲಭ್ಯವುಳ್ಳ ಕಂಪ್ಯೂಟರ್ ಲ್ಯಾಬ್.
- ಅತ್ಯಾಧುನಿಕ ಸವಲತ್ತುಗಳನ್ನೋಳಗೊಂಡ ಛಾಯಾಚಿತ್ರ ಕೊಠಡಿ ಮತ್ತು ರೆಕಾರ್ಡಿಂಗ್ ವ್ಯವಸ್ಥೆ,ಆಡಿಯೋ ವೀಡೀಯೋ ವಿಶುವಲ್ ಮಿನಿ ಥಿಯೇಟರ್,ಸೆಮಿನಾರ್ ಹಾಲ್ ಮತ್ತು ಬಯಲು ರಂಗ ಮಂದಿರ.
ವಿಭಾಗೀಯ ಗ್ರಂಥಾಲಯ
[ಬದಲಾಯಿಸಿ]

- ಹಳೆಯ ತಾಳೆಗರಿಗಳ ಸಂಗ್ರಹ ಮತ್ತು ಸಂರಕ್ಷಣೆ ನವಯುಗ, ಸ್ವದೇಶಾಭಿಮಾನಿ... ಮೊದಲಾದ ಹಳೆಯ ಪತ್ರಿಕೆಗಳ ಅಪೂರ್ವ ಸಂಗ್ರಹ.

- ಸಾಹಿತ್ಯ,ಸಂಸ್ಕ್ರತಿ ಮತ್ತು ವಿವಿಧ ವಿಷಯಗಳ ಕುರಿತ ಅಮೂಲ್ಯ ಕ್ರತಿಗಳು, ವಿಶೇಷಾಂಕಗಳು.
- ಎಂ.ಫಿಲ್,ಪಿ.ಎಚ್ಡಿ, ಸಂಶೋಧನ ಮಹಾಪ್ರಬಂಧಗಳು, ವಿಚಾರ ಸಂಕಿರಣಗಳ ಪ್ರಬಂಧಗಳು,ದಿನ ಪತ್ರಿಕೆ,ನಿಯತಕಾಲಿಕೆ ಮತ್ತು ಸಾಹಿತ್ಯ ಪತ್ರಿಕೆಗಳು ಲಭ್ಯ.
ವಿಭಾಗದಲ್ಲಿ ಇರುವ ಪೀಠಗಳು
[ಬದಲಾಯಿಸಿ]- ಕನಕದಾಸರು ಸಂಶೋಧನಾ ಕೇಂದ್ರ.
- ಶಿವರಾಮ ಕಾರಂತ ಆಧ್ಯಯನ ಪೀಠ.
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ.
- ಅಂಬಿಗರ ಚೌಡಯ್ಯ ಅಧ್ಯಯನ ಕೇಂದ್ರ.
- ಕೊಡವಕೊಡವರು ಸಾಂಸ್ಕ್ರತಿಕ ಅಧ್ಯಯನ ಕೇಂದ್ರ.
- ಶ್ರೀ ಪಿ.ಸತೀಶ್ ಪೈ ಮತ್ತು ಪಿ.ದಯಾನಂದ ಪೈ ಯಕ್ಷಗಾನ ಅಧ್ಯಯನ ಕೇಂದ್ರ.
- ಜೈನ ಕವಿ ರತ್ನಾಕರ ವರ್ಣಿ ಅಧ್ಯಯನ ಪೀಠ.
ಕನ್ನಡ ಮ್ಯೂಸಿಯಂ
[ಬದಲಾಯಿಸಿ]- ಕರಾವಳಿಯ ಸಾಂಸ್ಕ್ರತಿಕ ಮಹತ್ವವನ್ನು ಸಾರುವ ಅಪೂರ್ವ ವಸ್ತುಗಳ ಸಂಗ್ರಹಾಲಯ.ಕೃಷಿ, ಭೂತಾರಾಧನೆಭೂತಾರಾಧನೆ,ಕೌಟಂಬಿಕ,ದಾರ್ಮಿಕ,ನಿತ್ಯ ಬಳಕೆಯ ವಸ್ತುಗಳು,ಕಾಷ್ಠಶಿಲ್ಪ ಮೊದಲಾದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಅಪೂರ್ವ ವಸ್ತುಗಳ ಸಂಗ್ರಹ.
ವಿವಿಧ ಸಂಶೋಧನಾ ಯೋಜನೆಗಳು
[ಬದಲಾಯಿಸಿ]- ಪಶ್ಚಿಮ ಘಟ್ಟಗಳ ಸಸ್ಯ ಜಾನಪದ.
- ಸಾಹಿತ್ಯ ವಿಮರ್ಶೆಯ ಸಿದ್ಧಾಂತಗಳು
- ಕನ್ನಡ ಭಾಷಾಭೀವೃದ್ಧಿ ಯೋಜನೆ(ದಕ್ಷಿಣ ಕನ್ನಡ,ಉಡುಪಿ ಮತ್ತು ಕೊಡಗು ಜಿಲ್ಲೆಗಳ ಸಾಹಿತ್ಯ ಸಂಸ್ಕ್ರತಿ ಮತ್ತು ಸಾಮಾಜಕ ಅಧ್ಯಯನ).
- ಪಿ.ಎಚ್.ಡಿ.ಸಂಶೋಧನೆ ಕನ್ನಡ ಆಧ್ಯಯನ,ತುಳುವ ಅಧ್ಯಯನ,ಜಾನಪದಜಾನಪದ ಅಧ್ಯಯನ,ಮಹಿಳಾ ಅಧ್ಯಯನ ಮತ್ತು ಸಾಂಸ್ಕ್ರತಿಕ ಅಧ್ಯಯನಕ್ಕೆ ಅವಕಾಶ.
ಕನ್ನಡ ವಿಭಾಗದಿಂದ ಹೊರಬಂದ ಪುಸ್ತಕಗಳು
[ಬದಲಾಯಿಸಿ]- ಡಾ.ಬಿ.ಪುರುಷೋತ್ತಮ-ಕರಾವಳಿ ಜಾನಪದ-೧೯೯೯೦
- ಡಾ.ಕೆ.ಚಿನ್ನಪ್ಪ ಗೌಡ-ಭೂತಾರಾಧನೆ ಜನಪದೀಯ ಅಧ್ಯಯನ-೧೯೯೦
- ಸಂ-ಡಾ.ಬಿ.ಎ.ವಿವೇಕ ರೈ- ಕಡೆಂಗೋಡ್ಲು ಸಾಹಿತ್ಯ-೧೯೮೮
- ಡಾ.ಬಿ.ಎ.ವಿವೇಕ ರೈ-ಕನ್ನಡ ಕಾದಂಬರಿಯ ಮೊದಲ ಹೆಜ್ಜೆಗಳು-೧೯೮೮
ಕನ್ನಡ ವಿಭಾಗದ ಇತರ ಚಟುವಟಿಕೆಗಳು
[ಬದಲಾಯಿಸಿ]- ಬಿತ್ತಿ ಗೋಡೆ ಬರಹ :-
ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ‘ಬಿತ್ತಿ’ ಗೋಡೆ ಬರಹ 1991ರಲ್ಲಿ ಆರಂಭಗೊಂಡಿದ್ದು, ಇಂದಿನವರೆಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸಹಕಾರದೊಂದಿಗೆ ವ್ಯವಸ್ಥಿತವಾಗಿ ಮುಂದುವರಿಯುತ್ತಿದೆ. ಈ ಬಿತ್ತಿ ಗೋಡೆ ಬರಹವು ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಆಸಕ್ತಿ ಹಾಗೂ ಸಾಹಿತ್ಯಿಕ ಕೌಶಲ್ಯಗಳನ್ನು ವೃದ್ಧಿಸುವ ವೇದಿಕೆಯಾಗಿದ್ದು, ಅವರ ಸೃಜನಶೀಲ ಅಭಿವ್ಯಕ್ತಿಗೆ ಅವಕಾಶ ಒದಗಿಸುತ್ತದೆ.
ಬಿತ್ತಿ ಗೋಡೆ ಬರಹವು ಸಾಹಿತ್ಯ ಬರಹಗಳಿಗಾಗಿ ಒಂದು ಕಿರು ವೇದಿಕೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಕವಿಗಳು, ಕಥೆಗಾರರು, ವಿಮರ್ಶಕರು ಹಾಗೂ ಇತರೆ ಸಾಹಿತ್ಯಾಸಕ್ತರನ್ನು ರೂಪಿಸುವಲ್ಲಿ ಸಹಾಯಕವಾಗಿದೆ. ಈ ವೇದಿಕೆಯಲ್ಲಿ ಬರವಣಿಗೆಯ ಮೂಲಕ ತಮ್ಮನ್ನು ತೊಡಗಿಸಿಕೊಂಡು, ನಂತರ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಹಲವರಿದ್ದಾರೆ.
ಈ ವೇದಿಕೆ ಕೇವಲ ಸ್ನಾತಕೋತ್ತರ ಕನ್ನಡ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೆ, ಕ್ಯಾಂಪಸ್ಸಿನ ಇತರೆ ವಿಭಾಗಗಳ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಪೀಠದ ಸಂಶೋಧಕರಿಗೂ ತಮ್ಮ ಸಾಹಿತ್ಯಿಕ ಬರಹಗಳನ್ನು ಪ್ರಕಟಿಸುವ ಅವಕಾಶವನ್ನು ನೀಡುತ್ತಿದೆ.
ಈ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ರಚಿತವಾದ ಬರಹಗಳನ್ನು ಬಿತ್ತಿ ಗೋಡೆಯಲ್ಲಿ ವಾರಕ್ಕೆ ಒಂದು ಸಂಚಿಕೆಯಂತೆ ಪ್ರಕಟಿಸಲಾಗುತ್ತದೆ. ಅಧುನಿಕ ಯುಗದ ಅವಶ್ಯಕತೆಗೆ ಅನುಗುಣವಾಗಿ, ಇಂತಹ ಬರಹಗಳ ಆನ್ಲೈನ್ ಪ್ರಕಟಣೆಗೆ ವಾಟ್ಸಪ್ ಚಾನಲ್ (WhatsApp Channel)[೩], ಇನ್ಸ್ಟಾಗ್ರಾಮ್ (Instagram)[೪] ಅನ್ನು ಸಹ ಬಳಸಲಾಗುತ್ತಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ . P S Yadapadithaya in new vice-chancellor of Mangalore University - Times of India https://timesofindia.indiatimes.com/home/education/news/p-s-yadapadithaya-in-new-vice-chancellor-of-mangalore-university/articleshow/69638813.cms
- ↑ "ಆರ್ಕೈವ್ ನಕಲು". Archived from the original on 2023-11-22. Retrieved 2015-09-03.
- ↑ https://whatsapp.com/channel/0029VbAxnNo11ulX3tV3v42g
- ↑ https://www.instagram.com/svp.bittibaraha?igsh=dDh3OTdxOXVseXVq