ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು/Archive

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಬರ್ಟ್ಸನ್ ಪೇಟೆ[ಬದಲಾಯಿಸಿ]

ಈ ಪುಟವನ್ನು ಇಂಗ್ಲಿಷ್ ಭಾಷೆಯಲ್ಲಿ ಇದ್ದ ಕಾರಣ ಅಳಿಸುವಿಕೆಗೆ ಹಾಕಲಾಗಿದೆ. ನಾನು ಸಂಪೂರ್ಣ ಪುಟವನ್ನು ಕನ್ನಡಕ್ಕೆ ಅನುವಾದ ಮಾಡಿದ್ದೇನೆ. ಅಳಿಸುವ ಪಟ್ಟಿಯಿಂದ ತೆಗೆಯಲು ವಿನಂತಿಸುತ್ತೇನೆ.Raghuveer1995 (ಚರ್ಚೆ) ೨೦:೧೦, ೨೨ ಅಕ್ಟೋಬರ್ ೨೦೧೯ (UTC)

ಅನುರೂಪ (ಚಲನಚಿತ್ರ)[ಬದಲಾಯಿಸಿ]

ಈ ಲೇಖನವನ್ನು ಅಳಿಸುವ ಬಗ್ಗೆ ನನ್ನ ವಿರೋಧವಿದೆ. ಈ ಪುಟದ ಅಳಿಸುವಿಕೆಗೆ ಹಾಕಿದ ಕಾರಣ ಅಲ್ಲಿಲ್ಲ ; ಅಳಿಸುವಿಕೆಯಿಂದ ಅನೆಕ ಪ್ರಶಸ್ತಿ ಪಡೆದ ಈ ಚಿತ್ರದ ಮಾಹಿತಿ - ಇಲ್ಲಿ ಈಗ ಇರುವಷ್ಟು ಮಾಹಿತಿ- ಕೂಡ ಇಲ್ಲದಂತಾಗುವುದು. Shreekant.mishrikoti (ಚರ್ಚೆ) ೦೭:೧೧, ೧ ಆಗಸ್ಟ್ ೨೦೧೮ (UTC)

ಎಲ್ ಮಹಲಿಂಗಪ್ಪ[ಬದಲಾಯಿಸಿ]

ಈ ಲೇಖನವನ್ನು ಅಳಿಸುವ ಬಗ್ಗೆ ನನ್ನ ವಿರೋಧವಿದೆ. ವಿಗಳಾಗಿ ಮಾಡಿರುವ ಸಾಧನೆ ಮರೆಯಬರದಲ್ವ,? ಕವಿಗೋಷ್ಠಿ ಗಳಲ್ಲಿ ಭಾಗವಸಿದ್ರು, ಅದರಲ್ಲ ತುಂಬಾ ಹೆಸರುವಾಸಿ ಆಗಿದ್ದರು ಮತ್ತು ಇನ್ನೆರಡು ಕಾವ್ಯಗಳ ರಚನೆಯು ಅಗಿದ್ದೂ, ಕಾಪೀ ರೈಟ್ಸ್ ಬರುವ ಮುನ್ನವೇ ಹೋದರು. ಸುಮಾರು ಪತ್ರಿಕೆ ಗಳಲ್ಲಿ ಇವರ ಕಾರ್ಯವೈಕರಿ ಬಗ್ಗೆ ( ಕವಿಗೋಷ್ಠಿ) ಬರೆಯಲಾಗಿದೆ ಆದರೆ ಆ ಎಲ್ಲ ಪತ್ರಿಕೆಗಳ ಹಾರ್ಡ್ ಕಾಪೀ ಮಾತ್ರ ಇದೆ, ಅದನ್ನೆಲ್ಲ ಹೇಗೆ ಲಿಂಕ್ ಮಾಡುವುದು ಗೊತ್ತಾಗುತ್ತಿಲ್ಲ. ಮತ್ತೆ ಇದರಲ್ಲಿ ನನ್ನ ಸ್ವಂತ ಪಾತ್ರ ಏನಿಲ್ಲ ಆದ್ರೆ ನನ್ನ ಗುರುಗಳಾಗಿದ್ದರು ಅನ್ನುವ ಪ್ರಶಂಸೆ ಅಂಡ್ ರಿಲೇಟಿವ್ ಆಗಿದ್ದಾರಾ ಅನ್ನುವ ಭಾವನೆ ಎಲ್ಲೂ ಬಿಂಬಿಸುವುದಿಲ್ಲ. ಎಸ್ಟೋ ಜನರಿಗೆ ಇವ್ರು ಮಾದರಿ ಆಗಿದ್ದರು . ರೆಕಮೆಂಡೇಶನ್ ಅಂತಾನೂ ಇಲ್ಲ ಆದರೆ ಆ ಗಡಿಯಿಂದ (ಥಟ್ ರೀಜನ್) ಬಂದ ಯುವ ಕವಿಗಳಲ್ಲಿ ಸಾ ಶಿ ಮರುಳಯ್ಯ ಬಿಟ್ಟರೆ ನೆಕ್ಸ್ಟ್ ಇವ್ರೇ ಅನ್ನುವ ಭಾವನೆ. ಅನಿಸಿಕೆ ಹೇಗಿದೆ ಅನ್ನುವುದರ ಬಗ್ಗೆ ಹೇಳಿ. ಈ ಪುಟ ವನ್ನು ಅಳಿಸುವ ಮುನ್ನ, ಇದರ ಬಗ್ಗೆ ಚರ್ಚೆ ಮಾಡುವಿರಾ? ಸುಮಾರು ವಿಕಿ ಪೆಡಿಯ ಪೇಜ್ ಗಳಲ್ಲಿ ತುಂಬಾ ಸಂಕ್ಷಿಪ್ತವಾಗಿ ಬರೆಯಲಾಗಿದೆ ಮತ್ತು ಆ ಪುಟಗಳ ಪ್ರಾಮುಖ್ಯತೆಯೂ ಇಲ್ಲ. some one please comment here. Dharanesha.e (ಚರ್ಚೆ • ಸಂಪಾದನೆಗಳು)

@ User:Dharanesha.e ಪರಿಶೀಲಿಸಿದಾಗ ಅಥವಾ ಯಾದೃಚ್ಛಿಕವಾಗಿ ಗಮನಾರ್ಹತೆಗೆ ಅನುಗುಣವಾಗಿಲ್ಲದ ಲೇಖನಗಳು ಕಂಡುಬಂದರೆ ಅಳಿಸಲಾಗುತ್ತದೆ. ಅದಕ್ಕಾಗಿಯೇ ಲೇಖನದ ಮೇಲಿರುವ ಅಳಿಸುವಿಕೆಗಾಗಿ ಗುರುತಿಸಲಾಗಿದೆ,ದಯವಿಟ್ಟು ವ್ಯಕ್ತಿಯ ಮಹತ್ವವನ್ನು ದೃಢೀಕರಿಸಲು ಉಲ್ಲೇಖವನ್ನು ಸೇರಿಸಿ ಮತ್ತು ನೀವು ಅಳಿಸುವಿಕೆಗೆ ವಿರುದ್ಧವಾಗಿ ಸ್ಪರ್ಧಿಸಬಹುದು. ★ Anoop / ಅನೂಪ್ © ೧೩:೪೯, ೨೨ ಸೆಪ್ಟೆಂಬರ್ ೨೦೧೭ (UTC)

Dharanesha.e (ಚರ್ಚೆ • ಸಂಪಾದನೆಗಳು) ಇದರಲ್ಲಿರುವ ಉಲ್ಲೇಖಗಳು ನಿಜವಾಗಿದ್ದು , ಕೆಲವು ಅಂಶಗಳು ಪತ್ರಿಕೆಗಳಲ್ಲಿ ಬಂದಿವೆ, ಹಾಗೂ ಆಫ್‌ಲೈನ್ ಪೇಪರ್ ಗಳ ಪ್ರತಿಗಳನ್ನು ಅಪ್ಲೋಡ್ ಮಾಡುತ್ತೇನೆ.

ಹಸುರ ಮೇದುದು ಕವಿ ಪ್ರಾಣಕೋಶ![ಬದಲಾಯಿಸಿ]

ಈ ಲೇಖನವನ್ನು ಅಳಿಸುವ ಬಗ್ಗೆ ನನ್ನ ವಿರೋಧವಿದೆ. ಇಲ್ಲಿ ಕವಿತೆ ಯ ವಿಮರ್ಶೆ ಮಾಡಿಲ್ಲ. ಕೇವಲ ಕವಿತೆ ಹುಟ್ಟಿನ ಹಿನ್ನೆಲೆಯನ್ನು ಐತಿಹಾಸಿಕ ಮಹತ್ವದ ಹಿನ್ನೆಲೆಯಲ್ಲಿ ನೋಡಲಾಗಿದೆ. ಆದ್ದರಿಂದ ಈ ಲೇಖನವನ್ನು ಅಳಿಸುವ ಅಗತ್ಯವಿಲ್ಲ. ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಇದು ಆ ಕವಿತೆಯ ವಿಮರ್ಶೆಯಲ್ಲ.

ಮಾನ್ಯರೆ, ಕುವೆಂಪು ಅವರ ಕೆಲವು ಕವಿತೆಗಳ ಹಿನ್ನೆಲಯೆನ್ನು ಅವುಗಳ ಐತಿಹಾಸಿಕ ಮಹತ್ವದ ಹಿನ್ನೆಲೆಯಲ್ಲಿ ದಾಖಲಿಸಲಾಗಿದೆ. ವಿಕಿಯಲ್ಲಿ ಸುಮಾರು ಐವತ್ತು ಲೇಖನಗಳಿವೆ. ಆದರೆ ಈ ಮೂರನ್ನು ಅಳಿಸುವಿಕೆಗೆ ಗುರುತು ಮಾಡಿರುವ ಉದ್ದೇಶ ತಿಳಿಯಲಿಲ್ಲ. ದಯಮಾಡಿ ಮಹಾಕವಿಯೊಬ್ಬರ ಕವಿತೆಯೊಂದರ ಹಿನ್ನೆಲೆ ಸಾಹಿತ್ಯದ ಅಭ್ಯಾಸಿಗಳಿಗೆ ಅನುಕೂಲವಾಗುತ್ತದೆ. ಆದ್ದರಿಂದ ಈ ಮೂರೂ ಲೇಖನಗಳ ಅಳಿಸುವಿಕೆಗೆ ನನ್ನ ವಿರೋಧವಿದೆ.

ಕುವೆಂಪು ಕವಿತೆ - ಸಿಡ್ಲೆಹಳ್ಳಿ ಮತ್ತು ತಾರಿಣಿಯ ಪ್ರಾರ್ಥನೆ[ಬದಲಾಯಿಸಿ]

ಈ ಲೇಖನವನ್ನು ಅಳಿಸುವ ಬಗ್ಗೆ ನನ್ನ ವಿರೋಧವಿದೆ. ಇಲ್ಲಿ ಕವಿತೆ ಯ ವಿಮರ್ಶೆ ಮಾಡಿಲ್ಲ. ಕೇವಲ ಕವಿತೆ ಹುಟ್ಟಿನ ಹಿನ್ನೆಲೆಯನ್ನು ಐತಿಹಾಸಿಕ ಮಹತ್ವದ ಹಿನ್ನೆಲೆಯಲ್ಲಿ ನೋಡಲಾಗಿದೆ. ಆದ್ದರಿಂದ ಈ ಲೇಖನವನ್ನು ಅಳಿಸುವ ಅಗತ್ಯವಿಲ್ಲ. ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಇದು ಆ ಕವಿತೆಯ ವಿಮರ್ಶೆಯಲ್ಲ. --Satyanbr (talk)

ಕುವೆಂಪು ಕವಿತೆ : ದೇವರು ರುಜು ಮಾಡಿದನು[ಬದಲಾಯಿಸಿ]

ಈ ಲೇಖನವನ್ನು ಅಳಿಸುವ ಬಗ್ಗೆ ನನ್ನ ವಿರೋಧವಿದೆ. ಇಲ್ಲಿ ಕವಿತೆ ಯ ವಿಮರ್ಶೆ ಮಾಡಿಲ್ಲ. ಕೇವಲ ಕವಿತೆ ಹುಟ್ಟಿನ ಹಿನ್ನೆಲೆಯನ್ನು ಐತಿಹಾಸಿಕ ಮಹತ್ವದ ಹಿನ್ನೆಲೆಯಲ್ಲಿ ನೋಡಲಾಗಿದೆ. ಆದ್ದರಿಂದ ಈ ಲೇಖನವನ್ನು ಅಳಿಸುವ ಅಗತ್ಯವಿಲ್ಲ. ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಇದು ಆ ಕವಿತೆಯ ವಿಮರ್ಶೆಯಲ್ಲ --Satyanbr (talk)

(ಮೆಕಿನ್ಸೆ & ಕಂಪನಿ)[ಬದಲಾಯಿಸಿ]

ಯಾಕೆ ಅಳಿಸುವಿರಿ? ಕಾರಣವೇನು? ಸತ್ಯಪ್ರಕಾಶ್ ೯೮೮೬೩ ೩೪೬೬೭ arogyasathya@yahoo.co.in

ಯಾವ ಲೇಖನವನ್ನು ಉದ್ದೇಶಿಸುತ್ತಿದ್ದೀರೆಂಬುದನ್ನ ನೀವು ಇಲ್ಲಿ ತಿಳಿಸಿದರೆ ಉತ್ತಮ. ಹಾಗೆಯೇ, ವಿಕಿಯಲ್ಲಿ ಚರ್ಚೆಪುಟಗಳಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ. ಸಹಿ ಹಾಕಲು --~~~~ ಬಳಸಿ. ಹೆಚ್ಚಿನ ಮಾಹಿತಿಗೆ ಸಹಾಯ ಪುಟಗಳನ್ನೋದಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೩:೩೬, ೨೩ May ೨೦೦೬ (UTC)

Template:ಕನ್ನಡ[ಬದಲಾಯಿಸಿ]

ಕನ್ನಡ ಲೇಖನ ಕನ್ನಡ ಭಾಷೆಗೆ ಸಂಬಂದಿಸಿದ ಸಾಕಷ್ಟು ಮಾಹಿತಿ ನೀಡುತ್ತದೆ. ಇದನ್ನು ಅಳಿಸುವಲ್ಲಿ ನನ್ನ ತೀವ್ರ ವಿರೋಧವಿದೆ.

ಭಾರತೀಯ ಜನತಾಪಕ್ಷ[ಬದಲಾಯಿಸಿ]

ಸದರಿ ಲೇಖನವು ಒಂದು ಪ್ರಮುಖ ರಾಷ್ಟ್ರೀಯ ಪಕ್ಷದ ಬಗ್ಗೆ ಮಾಹಿತಿ ನೀಡುವಂತಹದಾಗಿದ್ದು, ಲೇಖನದಲ್ಲಿ ಸುಧಾರಣೆಯಾಗಬೇಕಾಗಿದೆ. ಆದರೆ ಲೇಖನವನ್ನು ಅಳಿಸುವಿಕೆಗೆ ಹಾಕಲಾಗಿರುವುದಕ್ಕೆ ಸಕಾರಣವಿಲ್ಲ. ಆದ್ದರಿಂದ ಭಾರತೀಯ ಜನತಾಪಕ್ಷ ಲೇಖನವನ್ನು ಅಳಿಸುವುದಕ್ಕೆ ನನ್ನ ವಿರೋಧವಿದೆ. --ರಾಜಾ ಹುಸೇನ್ ೦೪:೧೧, ೨೪ May ೨೦೦೬ (UTC)

ಲೇಖನವನ್ನು ಭಾರತೀಯ ಜನತಾ ಪಕ್ಷ - ಮುಂಚೆ ಇದ್ದ ಈ ಲೇಖನದೊಂದಿಗೆ ವಿಲೀನಗೊಳಿಸಲಾಗಿದೆ. ಆದ್ದರಿಂದ ಲೇಖನ ಅಳಿಸುವಿಕೆಗೆ ಹಾಕಿರುವುದು ಅರ್ಥಪೂರ್ಣ - -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೪:೫೮, ೨೪ May ೨೦೦೬ (UTC)

We are the kannada teachers of "vidya shilp" academy. your sites are very useful and informative. The information about "Mangalore" is informative and it gives the basic knowledge about that place. So we request you to add up more information for this site instead of deleting it. Thanking you,

Dear teachers from "Vidya Shilp Academy": I assume you can read Kannada, based on your comments above.
ಮಂಗಳೂರು ಬಗೆಗಿನ ಲೇಖನ ಅಳಿಸುತ್ತಿಲ್ಲ. ಆ ಲೇಖನ ಖಂಡಿತಾ ವಿಕಿಯಲ್ಲಿ ಇದ್ದೇ ಇರುತ್ತದೆ. ಲೇಖನ: ಮಂಗಳೂರು
ಈಗ ಅಳಿಸುವಿಕೆಗೆ ಹಾಕಿರುವುದು ಮ೦ಗಳೂರು ಲೇಖನವನ್ನು. ಲೇಖನದ ಹೆಸರು ತಪ್ಪಿದೆ, ಹಾಗು ಇದನ್ನು ವಿಕಿಯಲ್ಲಿ ಇರಲು ಬಿಡಬಾರದು ಎಂಬ ಕಾರಣಕ್ಕೆ ಅಳಿಸುವಿಕೆಗೆ ಹಾಕಲಾಗಿದೆ. ಎರಡೂ ಲೇಖನಗಳ ಹೆಸರಿನಲ್ಲಿರುವ ವ್ಯತ್ಯಾಸ, ಅನುಸ್ವಾರಕ್ಕೆ ಬದಲಾಗಿ ಸೊನ್ನೆಯನ್ನು ಬಳಸಿರುವುದು.
ಆಂಗ್ಲದಲ್ಲಿ ಬರೆದರೆ ಹೀಗೆ ಅರ್ಥೈಸಬಹುದು: ಸರಿಯಾದ ಲೇಖನ - Mangalore ಅಳಿಸುವಿಕೆಗೆ ಹಾಕಲಾಗಿರುವ ಲೇಖನ - Ma0galore
- ಮನ | Mana ೧೬:೧೧, ೨೦ June ೨೦೦೬ (UTC)

ಲೇಖನ:ಅಂತರ್ಜಾಲ[ಬದಲಾಯಿಸಿ]

ನನ್ನ ಅಭಿಪ್ರಾಯದಂತೆ, ಅಂತರ್ಜಾಲ ಲೇಖನವನ್ನು ಅಳಿಸುವ ಬದಲು ಅಂತರಜಾಲ ಲೇಖನಕ್ಕೆ ರೀ-ಡೈರೆಕ್ಟ್ ಮಾಡುವುದು ಸೂಕ್ತವೆನಿಸುತ್ತದೆ. Internetಗೆ ಸಮಾನ್ಯವಾಗಿ ಗೂಗಲ್ ಒಳಗೊಂಡಂತೆ ಅನೇಕ ಕಡೆ ಅಂತರ್ಜಾಲಪದದ ಪ್ರಯೋಗ ಕಂಡುಬರುತ್ತದೆ. Naveenbm ೧೫:೧೦, ೨೪ July ೨೦೦೬ (UTC)ನವೀನ್

ನವೀನ್, ಅಂತರ ಜಾಲ, ಅಂತರ್ಜಾಲ, ಅಂತರಜಾಲ ಈ ಮೂರೂ ಹೆಸರುಗಳನ್ನು ಒಂದೇ ಲೇಖನಕ್ಕೆ ರೀ-ಡೈರೆಕ್ಟ್ ಮಾಡುವುದು ಸೂಕ್ತವಾಗಿಯೇ ಇದೆ. ಆದರೆ ಅಳಿಸುವಿಕೆಗೆ ಹಾಕಿರುವ ಲೇಖನ ಅ೦ತರಜಾಲ. ಅನುಸ್ವಾರದ ಬದಲಿಗೆ ಸೊನ್ನೆಯನ್ನು ಉಪಯೋಗಿಸಲಾಗಿದೆ, ಲೇಖನದ ಹೆಸರಿನಲ್ಲಿ. - ಮನ|Mana Talk - Contribs ೧೬:೨೭, ೨೪ July ೨೦೦೬ (UTC)

ಭಾರತದ ಮೊದಲ ಪ್ರಧಾನಿಯವರ ಲೇಖನವು ಜವಾಹರಲಾಲ್ ನೆಹರು ಎಂದು ಇದೆ. ಆಂಗ್ಲದಲ್ಲಿ Jawaharlal Nehru ಎನ್ನಲಾಗುತ್ತದೆ.

  • ಕನ್ನಡದಲ್ಲಿ, ಆಡುಮಾತಿನಲ್ಲಿ ಮತ್ತು ಬರೆವಣಿಗೆಯಲ್ಲಿ ಜವಾಹರಲಾಲ್ ನೆಹರು, ಜವಹರಲಾಲ್ ನೆಹರು ಎರಡನ್ನೂ ಉಪಯೋಗಿಸಲಾಗುತ್ತದೆ. ಜವಹರಲಾಲ್ ನೆಹರು ಎಂದು ಹೊಸ ಓದುಗರೊಬ್ಬರು ವಿಕಿಪೀಡಿಯದಲ್ಲಿ ಹುಡುಕುವ ಸಾಧ್ಯತೆಗಳು ಇಲ್ಲದಿಲ್ಲ. ಅವರಿಗೆ ಲೇಖನ ಸಿಗುವಂತಾಗಬೇಕು.
  • ಜೊತೆಗೆ ಜವಹರಲಾಲ್ ನೆಹರು ಎಂದು ಕೆಲವು ಲೇಖನಗಳಲ್ಲಿಯೂ ಸಂಪರ್ಕ ಹೊಂದಿದೆ.

ಈ ಕಾರಣಗಳಿಂದ ಜವಹರಲಾಲ್ ನೆಹರು ರೀಡೈರೆಕ್ಟ್ ಪುಟವನ್ನು ಅಳಿಸಿಹಾಕುವುದು ಬೇಡ. ಜವಾಹರಲಾಲ್ ನೆಹರು ಲೇಖನವು ದೊರಕುವಂತೆ ಜವಹರಲಾಲ್ ನೆಹರು ಲೇಖನದಿಂದ ರೀಡೈರೆಕ್ಟ್ ಕೊಡುವುದು ಸೂಕ್ತ. - ಮನ|Mana Talk - Contribs ೧೭:೨೭, ೨೮ ಆಗಸ್ಟ್ ೨೦೦೬ (UTC)

ಮೇಲೆ ತಿಳಿಸಿರುವ ಕಾರಣಗಳೇ ರೆಗಿನಾಲ್ಡ್ ಡೈಯರ್ ಲೇಖನಕ್ಕೂ ಅನ್ವಯಿಸುತ್ತದೆ. ರೆಗಿನಾಲ್ಡ್ ಡೈಯರ್ ಲೇಖನದಿಂದ ರೆಜಿನಾಲ್ಡ್ ಡೈಯರ್ ಲೇಖನಕ್ಕೆ ರೀಡೈರೆಕ್ಟ್ ಕೊಡುವುದು ಸೂಕ್ತ. - ಮನ|Mana Talk - Contribs ೧೯:೨೪, ೯ September ೨೦೦೬ (UTC)

ಈ ಪುಟಗಳು ಖಾಲಿಯಿವೆ. ಮತ್ತು ಇವುಗಳ ಲೇಖನಗಳನ್ನು ಆಗಲೇ ಅಳಿಸಿಹಾಕಲಾಗಿದೆ. ಇವೆರಡು ಪುಟಗಳನ್ನು ಕೂಡ ಅಳಿಸಿಹಾಕಬೇಕು ಎಂದು ಕೋರುತ್ತೇನೆ. - ಮನ|Mana Talk - Contribs ೧೭:೪೩, ೨೮ ಆಗಸ್ಟ್ ೨೦೦೬ (UTC)

ಇದೊಂದು ತಾಂತ್ರಿಕ ಸಮಸ್ಯೆ. ಸಾಧ್ಯವಾದರೆ ಇದರ ಬಗ್ಗೆ ವಿಕಿಮೀಡಿಯ ಬಗ್-ಝಿಲಾದಲ್ಲಿ ಒಂದು ರಿಪೋರ್ಟು ಸೇರಿಸಿ. ಸದ್ಯಕ್ಕೆ ಚರ್ಚೆ ಪುಟಗಳು ಹಾಗೆಯೇ ಇದ್ದರೆ ತೊಂದರೆಯೇನಿಲ್ಲ - ಅಧಿಕೃತ ಲೇಖನಗಳ ಅಂಕಿಗೆ ಚರ್ಚೆಪುಟಗಳು ಸೇರ್ಪಡೆಯಾಗವು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೧೧, ೨೯ ಆಗಸ್ಟ್ ೨೦೦೬ (UTC)

Comment by anon[ಬದಲಾಯಿಸಿ]

The comment below was added by an anon in the middle of the page. So I have shifted it down here. ಶುಶ್ರುತ \ಮಾತು \ಕತೆ ೦೨:೧೯, ೨೬ February ೨೦೦೭ (UTC)

davangere benne dose famous because do't delete this item - umesh

(sunkadavar ೦೧:೧೨, ೨೧ ಜೂನ್ ೨೦೦೮ (UTC)) ವರ್ಗ : ಲಿಪಿಕಾರ,ಸಂಪಾದಕ,ಅನುವಾದಕ, ಡಾ.ಚಂದ್ರಶೇಖರ್, ನಿಮಗೆ ಆಪತ್ತು ಜನಕವೆಂದು ತೋರಿಬಂದರೆ, ಅದನ್ನು ತೆಗೆದುಹಾಕಿ. [['

ಅಣ್ಣಾ ಬಾಂಡ್[ಬದಲಾಯಿಸಿ]

ಇದು ಕನ್ನಡದ ಪ್ರಮುಖ ನಟ ಪುನೀತ್ ರಾಜ್ ಕುಮಾರ್ ರವರ ಚಿತ್ರ. ಈ ಚಿತ್ರ ಇದೀಗ ಬಿಡುಗಡೆ ಆಗಿದೆ. ಯಾವುದೇ ಚಿತ್ರ ಬಿಡುಗಡೆ ಆಗುವ ಮೊದಲೇ ಆ ಚಿತ್ರದ ಪುಟವನ್ನು ತೆಗೆದು ಹಾಕುವುದು ಸರಿಯಲ್ಲ. User:vchetans ಚೇತನ್,


ಪುಟ ಮತ್ತು ಈಶಾವಾಸ್ಯ ಉಪನಿಷತ್ ಈ ಪುಟಗಳಲ್ಲಿ ಪುಟ ದಲ್ಲಿ ಇರುವ ಪದ್ಯಗಳು ಈಶಾವಾಸ್ಯ ಉಪನಿಷತ್ ನಲ್ಲಿ ಸೇರಿಸಲಾಗಿದೆ. ಆದ್ದರಿಂದ ಪುಟ ದಲ್ಲಿರುವ ಲೇಖನವನ್ನು ಅಳಿಸಬಹುದು. ಮೊದಲಿಗೆ ಪ್ರಯೋಗಾರ್ಥವಾಗಿ ಪುಟ ದಲ್ಲಿ ತುಂಬಲಾಗಿತ್ತು. ಬಿ.ಎಸ್. ಚಂದ್ರಶೇಖರ ಸಾಗರ :Bschandrasgr ೧೩:೫೨, ೨೯ ಮೇ ೨೦೧೨ (UTC)


ಪರುಪಳ್ಳಿ ಕಶ್ಯಪ್[ಬದಲಾಯಿಸಿ]

ಈಗಿನ್ನೂ ಈ ಪುಟವನ್ನು ಸಿಧ್ಧಪಡಿಸಿ ಮಾಹಿತಿ ಅಚ್ಚಿಸುತ್ತಿದ್ದೆ. ಅಷ್ಟರಲ್ಲಿ ಅಳಿಸುವಿಕೆಗೆ ಗುರುತಿಸಲಾಗಿದೆ. ಯಾಕೆ ಹೀಗೆ ? ಒಂದೆರೆಡು ದಿನ ಕಾದು ನೋಡಬೇಕಲ್ಲವೆ ? Subrahmanyahs

  • ಪುಟದಲ್ಲಿದ್ದ ಅಳಿಸುವಿಕೆ ತೆಗಿಯಲಾಗಿದೆ.ಗಮನಿಸಿರಿ.ಲೇಖನಗಳನ್ನು ಬರೆಯುವಾಗ ಲೇಖನ ಪ್ರಮಾಣ ಕನಿಷ್ಟ ೩ಸಾವಿರ ಬೈಟ್ ಗಳು ಇದ್ದೆಹಾಗೇ ಬರೆಯುವುಡು ಉತ್ತಮಾ.ಈಗಾಗೆಲೇ ನಮ್ಮ ವಿಕೀಪಿಡಿಯಾದಲ್ಲಿ ಚುಟುಕುಗಳು ಹೆಚ್ಚಿನ ಸಂಖ್ಯಯಲ್ಲಿವೆ.ನಿಮ್ಮಿಂದ ಇನ್ನೂ ತೇಖನಗಳು ಬರಬೇಕಂತ ಆಶಿಸುತ್ತಾನೆ.ಪಾಲಗಿರಿ (talk) ೦೨:೨೩, ೨೪ ಆಗಸ್ಟ್ ೨೦೧೩ (UTC)

ರಮ್ಯ ಕಾವ್ಯ-ನವೋದಯ ಕಾವ್ಯ[ಬದಲಾಯಿಸಿ]

ಅಳಿಸುವಿಕೆಗೆ ? ಮಾನ್ಯ ಹರೀಷರವರೇ, ಕಾವ್ಯ ಪ್ರಕಾರಗಳಲ್ಲಿ ಕವನ ಮಾದರಿಗಳನ್ನು ಅಳಿಸುವಿಕೆಗೆ ಹಾಕುತ್ತಿದ್ದೀರಿ - ಮಾದರಿ ಹಾಕದಿದ್ದರೆ ತಿಳಿಯುವುದು ಹೆಗೆ? ಶ್ರೀ ಪವನಜ ಅವರು ಮಾದರಿ ಹಾಕಬಹುದು ಎಂದಿದ್ದಾರೆ. ಬೇರೆಯವರ ಕವನ ಹಾಕಿದರೆ ಅದಕ್ಕೆ ಕಾಪೀರೈಟ್ ಸಮಸ್ಯೆ ಇರುತ್ತದೆ. ಅದಕ್ಕೆ ಉದಾಹರಣೆಗೆ ಒಂದೆರೆಡು ಕವನ /ಲೇಖನ ಹಾಕಬೇಕಾಗುವುದು-ಅದಿಲ್ಲದೆ ಲೇಖನ ವ್ಯರ್ಥ.ನೀವೇ ಮಾದರಿ ಕವನ/ ಲೇಖನ ಹಾಕಿ. ಬರೆಯುವವರಿಗೆ ಡಿಸ್ಕರೇಜ್ ಆದರೆ ವಿಕಿಪೀಡಿಯಾಕ್ಕೇ- ಕನ್ನಡಕ್ಕೇ ನಷ್ಟ!! ನೀವು ಹೆಸರು ಕೊಡದೆ ಎಡಿಟ್ ಮಾಡುವುದು ತಪ್ಪಲ್ಲವೇ?Bschandrasgr ೧೬:೪೨, ೧೫ ಜುಲೈ ೨೦೧೪ (UTC) ಸದಸ್ಯ:Bschandrasgr

ಪಟಾಕಿ[ಬದಲಾಯಿಸಿ]

ಪಟಾಕಿ ಕುರಿತಾದ ಪುಟದಲ್ಲಿ ಪಟಾಕಿ ಸಂಸ್ಕೃತಿ ಹಾಗೂ ವಿಜ್ಞಾನ ವಿಷಯಗಳ ಕುರಿತು ಹಲವಾರು ಮಾಹಿತಿಗಳನ್ನು ಬರೆಯಬಹುದು. ~ ಗುರುಪಾದ ಹೆಗಡೆ\ಚರ್ಚೆ \ಕಾಣಿಕೆಗಳು

ಗುರುಪಾದ ಹೆಗಡೆ ಪುಟವನ್ನು ಸೃಷ್ಟಿಸುವ ಬಗ್ಗೆ ಅಳಿಸುವಿಕೆಗೆ ಹಾಕಲಾಗಿರುವ ಲೇಖನ ವಿಭಾಗದಲ್ಲಿ ಬರೆಯುವ ಅವಶ್ಯಕತೆ ಇಲ್ಲ ಅಲ್ಲವೇ? ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೯:೦೫, ೨೬ ಏಪ್ರಿಲ್ ೨೦೧೫ (UTC)
ಓಂಶಿವಪ್ರಕಾಶ್/Omshivaprakash, ಅಸಂಬದ್ಧ ವಿಷಯ ಎಂದು ಗುರುತು ಮಾಡಿರುವುದರಿಂದ ಈ ಪುಟದಲ್ಲಿ ಉಲ್ಲೋಖಿಸುವುದು ಸಹಜ ಎಂದು ಕೊಂಡಿದ್ದೇನೆ. ತಪ್ಪಿದ್ದರೆ ಕ್ಷಮಿಸಿ: ಗುರುಪಾದ ಹೆಗಡೆ
ಸಂದೇಶದಲ್ಲಿ ಪುಟದ ಕೊಂಡಿ ಇಲ್ಲದಿದ್ದುದರಿಂದ ತಕ್ಷಣ ನೀವು ಬರೆದ ಮಾಹಿತಿ ಹೊಸ ಪುಟದ ಕೋರಿಕೆ ಎಂದೆನಿಸಿತು :). ಅಳಿಸುವಿಕೆಯ ಟೆಂಪ್ಲೇಟು ತೆಗೆಯದೆ ಇಂಗ್ಲೀಷ್‌ನ ಪುಟದಲ್ಲಿನ ಮಾಹಿತಿ ಅನುವಾದ ಮಾಡಲು ಪ್ರಯತ್ನಿಸಿ, ಇಲ್ಲಿ ಮತ್ತೊಮ್ಮೆ ಮಾಹಿತಿ ಹಾಕಿ, ಅಳಿಸುವಿಕೆ ತೆಗೆಯೋಣ. ಸಧ್ಯಕ್ಕೆ ಪುಟದಲ್ಲಿ ಮಾಹಿತಿ ಸರಿಯಿಲ್ಲ ಜೊತೆಗೆ ಅವಶ್ಯಕವಾದ ಉಲ್ಲೇಖಗಳೂ ಇಲ್ಲ. ಅನುವಾದಕ್ಕೆ ವಿಷಯ ಅನುವಾದಕವನ್ನೂ ಬಳಸಬಹುದು ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೯:೩೨, ೨೬ ಏಪ್ರಿಲ್ ೨೦೧೫ (UTC)

ಈ ಲೇಖನವನ್ನು ಅಳಿಸುವ ಬಗ್ಗೆ ನನ್ನ ವಿರೋಧವಿದೆ. ಈ ಪುಟ ಅಭಿವ್ರುದ್ಧಿ ಮಾಡಿ

ಶೃಂಗೇರಿ ಲೇಖನ ಈಗಾಗಲೇ ಇದೆ. ಅದನ್ನೇ ವಿಸ್ತರಿಸಬಹುದು. ಮಲೆನಾಡ ಮಡಿಲ ಶಾರದೆಯ ನೆಲೆವೀಡು ಎಂಬ ಕಾವ್ಯಮಯ ಶೀರ್ಷಿಕೆ ವಿಶ್ವಕೋಶಕ್ಕೆ ಸರಿಹೊಂದುವುದೂ ಇಲ್ಲ.--Pavanaja (ಚರ್ಚೆ) ೦೨:೩೩, ೨೯ ಏಪ್ರಿಲ್ ೨೦೧೫ (UTC)

ಸುಲಭ ಕುಲಕರ್ಣಿ[ಬದಲಾಯಿಸಿ]

ಈ ಲೇಖನವನ್ನು ಅಳಿಸುವುದಕ್ಕಿಂತ ಇಂಗ್ಲಿಷ್ ವಿಕಿಪೀಡಿಯದಲ್ಲಿರುವ Sulabha K Kulkarni ಲೇಖನದಲ್ಲಿರುವ ಮಾಹಿತಿಗಳನ್ನು ಸೇರಿಸಿ ಉತ್ತಮಪಡಿಸುವುದು ಸೂಕ್ತ.--Pavanaja (ಚರ್ಚೆ) ೧೫:೩೯, ೨೬ ಮೇ ೨೦೧೫ (UTC)

ಲೇಖನಕ್ಕೆ ಉಲ್ಲೇಖಗಳನ್ನು ಸೇರಿಸಿ ವಿಸ್ತರಿಸಲಾಗಿದೆ. ಅಳಿಸುವ ಅಗತ್ಯವಿಲ್ಲ--Pavanaja (ಚರ್ಚೆ) ೦೯:೩೭, ೨೬ ಜೂನ್ ೨೦೧೫ (UTC)

ಇದು ಖಂಡಿತ 'Google Translated Text' ಅಲ್ಲ. 'ಅಧ್ಯಾತ್ಮ' ಎನ್ನುವುದು ಅತ್ಯಂತ ಮಹತ್ವಪೂರ್ಣವಾದ ವಿಷಯ. ಇಂಗ್ಲಿಷಿನ 'Philosophy' ಎಂಬ ಪದಕ್ಕೆ ಸಮಾನ ಪದವಾದ ಈ ಪದಕ್ಕೆ ಬಹು ದೊಡ್ಡ ವ್ಯಾಪ್ತಿಯಿದೆ. ದಯಮಾಡಿ ನೋಡಿ https://en.wikipedia.org/wiki/Philosophy. ಬರುವ ದಿನಗಳಲ್ಲಿ ಈ ಲೇಖನ ಬೆಳೆಯಬೇಕಾಗಿದೆ. ಜೊತೆಗೆ ತತ್ತ್ವಶಾಸ್ತ್ರಕ್ಕೆ ಸಂಬಂಧ ಪಟ್ಟ ಅನೇಕ ಪುಟಗಳು ಈಗಾಗಲೇ ವಿಕಿಪೀಡಿಯಾದಲ್ಲಿ ಇದೇ ಹೆಸರಿನ ವರ್ಗದೊಂದಿಗೆ ಸೃಷ್ಟಿಸಲ್ಪಟ್ಟಿವೆ. ಹಾಗಾಗಿ ಈ ವಿಷಯವನ್ನು ಅಳಿಸುವುದು ಸರಿಯಲ್ಲ. ಬದಲಾಗಿ ಇದನ್ನು 'ಚುಟುಕು ಲೇಖನ' ಎಂದು ಪರಿಗಣಿಸಬಹುದು. --Asvija b (ಚರ್ಚೆ) ೦೮:೪೪, ೧೯ ಆಗಸ್ಟ್ ೨೦೧೫ (UTC)

ಸೂಳೆ ಸಂಕವ್ವ[ಬದಲಾಯಿಸಿ]

ಕನ್ನಡ ಸಾಹಿತ್ಯವನ್ನು ಓದಿದವರಾರು ನಿಮ್ಮ ಮಾತನ್ನು ಒಪ್ಪುವುದಿಲ್ಲ. ೧೨ನೇ ಶತಮಾನದ ವಚನಕಾರರ ಕಾಲದಲ್ಲಿ "ಸೂಳೆ ಸಂಕವ್ವ" ಎನ್ನುವ ಮಹಿಳೆ ತನ್ನ ಕಾಯಕ ವೃತ್ತಿಯ ಬಗ್ಗೆ ಯಾವ ಕೀಳರಿಮೆಯೂ ಇಲ್ಲದೆ ಸೂಳೆ ಸಂಕವ್ವ ಎಂದು ಹೇಳುವ ದೈರ್ಯ ಮಾಡಿದ್ದಾಳೆ. ಈ ಲೇಖನವನ್ನು ಅಳಿಸುವಿಕೆಗೆ ಹಾಕಿರುವ ಬಗ್ಗೆ ನನ್ನ ಸಂಪೂರ್ಣ ವಿರೋಧವಿದೆ. ದಯವಿಟ್ಟು ಯಾರೇ ಆಗಲಿ ಎಳಸೆಳಸಾಗಿ ಕನ್ನಡ ಸಾಹಿತ್ಯವನ್ನು ನೋಡುವ ಪ್ರಯತ್ನ ಮಾಡಬೇಡಿ. ಅಶ್ಲೀಲತೆ ಇರುವುದು ಆಕೆಯ ಹೆಸರಿನಲ್ಲಿ ಅಲ್ಲ. ನಿಮ್ಮ ಮನಸ್ಸಿನಲ್ಲಿ.

ಮೆಚ್ಚಿಗೆಪೂರ್ಣ ವಿಚಾರಣೆ[ಬದಲಾಯಿಸಿ]

ಈ ಲೇಖನ ನಮ್ಮ ಕಾಲೇಜ್ ಪ್ರಾಜೆಕ್ಟ್ಗಾಗಿ ಬರಿಯಲ್ಪಟ್ಟಿದೆ. ಆದ ಕಾರಣ ಈ ಲೇಖನ ಪ್ರಬಂಧ ಮಾದಿರಿಯಲ್ಲಿದೆ. ಏದನ್ನು ನಮ್ಮ ಉಪಾಧ್ಯಾಯರು ಅನುಮಡಿಸಿದ ಮೇಲೆ ಇನ್ನೂ ಹೆಚ್ಚು ವಿಚಾರ ಬರಯಲಾಗುತದೆ. ದಯವಿಟ್ಟು ಈ ಲೇಖನವನ್ನು ಅಳಿಸಿಬೀಡಿ

ಈ ಲೇಖನ ನನ್ನ ಕಾಲೇಜ್ನಲ್ಲಿ ಕೊಟ್ಟಿದ ಒಂದು ಕಾರಿಯ. ನಾನು ಈ https://en.wikipedia.org/wiki/Learning_theory_(education) ಇಂಗ್ಲೀಷ್ ಲೇಖನದ ಒಂದು ಭಾಗವನು ಕನ್ನಡಕೆ ಭಾಷಾಂತರಿಸಿದೆನೆ. ಈ ಲೇಖನದಲ್ಲಿ ತಪ್ಪುಗಳು ಇದಾಲ್ಲಿ ದೈಯಿವಿಟು ಪರೀಕ್ಷಿಶಿ ಸುಧಾರಿಸಲು ಅವ್ಕಾಶ ಮಾಡಿಕೊಡಿ. ದೈಯಿವಿಟು ಲೇಖನವನ ಅಳ್ಲಿಸಬೇಡಿ.

ದಯವಿಟ್ಟು ನಿಮ್ಮ ಲೇಖನವನ್ನು ನಿಮ್ಮ ಪ್ರಯೋಗಪುಟದಲ್ಲಿ ತಯಾರಿಸಿ. ಅದು ಸರಿಯಿದೆ ಎಂದು ನಿಮ್ಮ ಶಿಕ್ಷಕರು ಮತ್ತು ವಿಕಿಪೀಡಿಯ ಸಮುದಾಯ ಒಪ್ಪಿದ ಮೇಲೆ ಲೇಖನವನ್ನು ವಿಕಿಪೀಡಿಯಕ್ಕೆ ಸೇರಿಸಿ--Pavanaja (ಚರ್ಚೆ) ೧೧:೨೨, ೨೨ ಸೆಪ್ಟೆಂಬರ್ ೨೦೧೫ (UTC)

A number of copyrigthed files[ಬದಲಾಯಿಸಿ]

I have tagged a number of copyrigthed files with ಟೆಂಪ್ಲೇಟು:Di-no license:

--° (Gradzeichen) ೦೬:೪೭, ೨ ಫೆಬ್ರುವರಿ ೨೦೧೬ (UTC)

ಪುಟವನ್ನು ಪೂರ್ಣ ಕನ್ನಡಕ್ಕೆ ಅನುವಾದ ಮಾದಿದೆ - ಅಳಿಸುವಿಕೆ ಟೆಂಪ್ಲೇಟ್ ತೆಗೆಯಬಹುದು. Bschandrasgr (ಚರ್ಚೆ) ೧೩:೪೭, ೩ ಫೆಬ್ರುವರಿ ೨೦೧೬ (UTC)

ಅಂಜನಾ[ಬದಲಾಯಿಸಿ]

೧೯೯೦ರ ದಶಕದಲ್ಲಿ ಚಾಲ್ತಿಯಲ್ಲಿದ್ದ ಕನ್ನಡ ನಟಿ ಅಂಜನಾ ಕುರಿತು ಇರುವ ವಿಕಿಪೀಡಿಯ ಪುಟವನ್ನು ಸರಿಯಾದ ಮಾಹಿತಿಗಳ ಕೊರತೆ ಎನ್ನುವ ಕಾರಣಕ್ಕೆ ಅಳಿಸುವಿಕೆಗೆ ಹಾಕಲಾಗಿದೆ. ಅಂಜನಾ ಕುರಿತು ಯಾವುದೇ ಜಾಲತಾಣಗಳಲ್ಲಿ ಸರಿಯಾದ ಮಾಹಿತಿ ಇಲ್ಲವಾದ್ದರಿಂದ ಯಾವುದೇ ಉಲ್ಲೇಖಗಳನ್ನು ಸೇರಿಸಲಾಗಿಲ್ಲ. ಆದರೆ ಅಂಜನಾ ೧೯೯೦ರ ದಶಕದಲ್ಲಿ ಅನೇಕ ಕನ್ನಡ ಚಿತ್ರಗಳಲ್ಲಿ ವಿಷ್ಣುವರ್ಧನ್, ಅಂಬರೀಶ್, ಪ್ರಭಾಕರ್, ಅನಂತ್ ನಾಗ್ ಮತ್ತು ದೇವರಾಜ್ ಮುಂತಾದ ಮೇರು ನಟರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ ಎಂಬುದು ೯೦ರ ದಶಕದ ಕನ್ನಡ ಪ್ರೇಕ್ಷಕರಿಗೆ ತಿಳಿದಿರುವ ವಿಷಯ. ಮಾಹಿತಿಗಳ ಕೊರತೆ ಎನ್ನುವ ಒಂದೇ ಕಾರಣಕ್ಕೆ ಪುಟವನ್ನು ಅಳಿಸಿ ಹಾಕುವುದು ಎಷ್ಟು ಸರಿ?. ಚಿಲೋಕ.ಕಾಮ್ ಜಾಲತಾಣದಲ್ಲಿರುವ ನಟಿ ಅಂಜನಾ ಕುರಿತು ಇರುವ ಪುಟದ ಉಲ್ಲೇಖ ಮಾಡಿದ್ದಾಗ್ಯೂ ಪುಟವನ್ನು ಅಳಿಸುವಿಕೆಗೆ ಹಾಕಿದ್ದೀರಿ. ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಇನ್ನೊಂದು ಉಲ್ಲೇಖವನ್ನೂ ಸೇರಿಸಿದ್ದೇನೆ. ದಯಮಾಡಿ ಪುಟವನ್ನು ಅಳಿಸಬೇಡಿ. ಈಗಾಗಲೇ ಮರೆತು ಹೋಗಿರುವ ನಟಿಯ ಕೆಲವು ವಿವರಗಳು ಕೊನೆಪಕ್ಷ ವಿಶ್ವಕೋಶವಾದ ವಿಕಿಪೀಡಿಯದಲ್ಲಿಯಾದರೂ ಉಳಿದರೆ ಚಲನಚಿತ್ರಗಳ ಬಗ್ಗೆ ಆಸಕ್ತಿ ಇರುವ ಮುಂದಿನ ಪೀಳಿಗೆಗೆ ಸಿಗಬಹುದೆಂಬ ಸದುದ್ದೇಶವಷ್ಟೆ. ಧನ್ಯವಾದಗಳು.Kannadacinema

  • ನಮ್ಮ ದೇಶದಲ್ಲಿರುವ ಸಾಧನೆ ಮಾಡಿದ ಕ್ರೀಡಾಪಟುಗಳ ಮತ್ತು ಅವರ ಸಾಧನೆಗಳ ಒಂದು ಪಟ್ಟಿ ಇದ್ದರೆ ಅದು ವಿಶ್ವಕೋಶದ ಆಶಯಕ್ಕೆ ಪೂರಕವೆಂದು ಭಾವಿಸುತ್ತೇನೆ. ಇಂಗ್ಲಿಷ್ ವಿಭಾಗದಲ್ಲಿರುವಂತೆ ಪ್ರತಿಯೊಂದು ಕ್ರೀಡೆ-ಆಟೋಟಗಳಿಗೆ, ಮತ್ತು ಕ್ರೀಡಾಪಟುವಿಗೆ ಕನ್ನಡದಲ್ಲಿ ಪುಟ ತೆರೆದು ವಿವರ ತುಂಬಲು ಸಾದ್ಯವಿಲ್ಲವೆಂದು ಭಾವಿಸಿದ್ದೇನೆ. ಅದಕ್ಕಾಗಿ ನಮ್ಮದೇಶದ ಕ್ರೀಡಾಪಟುಗಳು ಮತ್ತು ಅವರ ಸಾಧನೆಯ ಒಂದು ಪುಟವಿದ್ದರೆ ಅದು ಯಾವುದೇ ಕ್ರೀಡಾಪಟುವಿನ ಕ್ರೀಡೆ ಮತ್ತು ಸಾಧನೆ ತಿಳಿಯಲು ಅನುಕೂಲ. ಆ ಬಗೆಯ ಮಾಹಿತಿಯನ್ನು ಇನ್ನೆಲ್ಲಿ ಎಲ್ಲಾ ಕನ್ನಡಿಗರಿಗೂ ಸಿಗುವಂತೆ ಮಾಡಬಹುದು? ಈಗ ಒಲಂಪಿಕ್‍ಗೆ ಹೋಗುವವರಲ್ಲದೆ, ಇತರೆ ಉತ್ತಮ ಸೀನಿಯರ್ ಮತ್ತು ಜೂನಿಯರ್ ವಿಭಾಗದಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದವರಿದ್ದಾರೆ. ಅವರೆಲ್ಲರ ಹೆಸರು ಒಂದುಕಡೆ ಸಿಗುವಂತಿದ್ದರೆ ಒಳ್ಳೆಯದು.
  • ಅದೇ ರೀತಿ ಕರ್ನಾಟಕದ ಉತ್ತಮ ಕ್ರೀಡಾಪಟುಗಳ ಒಂದು ಪುಟವನ್ನೂ ತೆರೆಯಬೇಕೆಂದಿದ್ದೇನೆ. ವಿಶ್ವಕೋಶ ಎಲ್ಲದರ ಮಾಹಿತಿ ಎಂದು ನನ್ನ ಭಾವನೆ. "ರಾಜ್ಯ ಮುಖ್ಯ ಮಂತ್ರಿಗಳ ಪಟ್ಟಿಯ ಪುಟ" ಇರುವುದಾದರೆ ಕ್ರೀಡಾ ಸಾಧಕರ ಪಟ್ಟಿ ಇರಬಹುದಲ್ಲವೇ. ವಿಶ್ವಕೋಶದಲ್ಲಿ ಯಾವುದೇ ಅಸಂಬದ್ಧತೆಯಿಲ್ಲದ ಪೂರ್ವಾಗ್ರವಿಲ್ಲದ ಎಲ್ಲಾ ಮಾಹಿತಿಗೂ ಅವಕಾಶವಿರಬೇಕೆಂದು ನನ್ನ ಅನಿಸಿಕೆ. "ಕೇಂದ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದವರ ಪಟ್ಟಿ"ಗೆ ಅವಕಾಶವಿದ್ದರೆ ರಾಷ್ಟ್ರಮಟ್ಟದ ಸಾಧನೆ ಮಾಡಿದ ಕ್ರೀಡಾಪಟುಗಳ ಪಟ್ಟಿ ಇದ್ದರೆ ವಿಶ್ವಕೋಶದ ನಿಯಮಕ್ಕೆ ವಿರೋಧವಾಗುವುದೇ? ವಿಶ್ವ ಕೋಶಕ್ಕೆ ಓದುಗರ ಅನುಕೂಲ-ಅಗತ್ಯಗಳ ಮಾಹಿತಿಯ ಸಾಮಾನ್ಯ (commonsense rule & utility oriented motto) ನಿಯಮದ ಕಟ್ಟು, ಅತಿ ಶಾಸ್ತ್ರೀಯ ನಿಯಮದ ಕಟ್ಟಿಗಿಂತ (hard & fast rule) ಒಳ್ಳೆಯದು ಎಂದು ನನ್ನ ಬಾವನೆ. ಸಮಾಜಮುಖಿ ನಿಯಮ ಉತ್ತಮವೆಂದು ನನ್ನ ಅನಿಸಿಕೆ. ದೀಪಿಕಾ ಮತ್ತು ಘೋಷಾಲ್ ಸ್ಕ್ವಾಷ್‍ನಲ್ಲಿ ನಿನ್ನೆ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದುದನ್ನು ಈ ಪುಟದಲ್ಲಿ ಹಾಕಬೇಕೆಂದಿದ್ದೆ, ಆದರೆ ಪುಟವನ್ನು ರದ್ದಿಗೆ ಹಾಕಿದ್ದು ನೋಡಿ ಬಿಟ್ಟೆ! ನಿಮ್ಮವ,Bschandrasgr (ಚರ್ಚೆ) ೧೦:೫೭, ೧೮ ಜುಲೈ ೨೦೧೬ (UTC)

ಮಾನ್ಯ, ಪವನಜರವರೇ, ಈಬಗೆಯ ಪದ್ಯಗಳನ್ನೂ ಅದರ ಸೌಂದರ್ಯ ವಿವರಿಸುವ ವಿಮರ್ಶೆಯನ್ನೂ ವಿಕಿಯಲ್ಲಿ ಹಾಕಬಹುದು. ಎಲ್ಲದಕ್ಕೂ ವಿಕಿಸೋರ್ಸ್ ಅಲ್ಲ! ಹೆಚ್ಚು ಪದ್ಯಗಳಿದ್ದು ಅವುಗಳನ್ನೇ ತುಂಬುವುದಾದರೆ ಅಥವಾ ಒಂದು ಕವನ ಸಂಕಲನವನ್ನೇ ತುಂಬುವುದಾದರೆ ವಿಕಿಸೋರ್ಸಿಗೆ ಹಕ್ಕಿನ ವಿನಾಯತಿ ಇದ್ದರೆ ಹಾಕಬಹುದು. ದಯವಿಟ್ಟು ನೀವೂ ವಿಕಾಸ ಹೆಗಡೆಯವರೂ ಕುರುಡಾಗಿ ನಿಯಮ ಅನುಸುವ ಕ್ರಮ ಸರಿಯಲ್ಲವೆಂದು ವಿನಯಪೂರ್ವಕ ಹೇಳಬಯಸುತ್ತೇನೆ. ನಾನು ಹಾಕಿದ 'ಮಕ್ಕಳ ಕವನ'ದ ಪುಟವನ್ನೂ ಅಳಿಸಿದ್ದೀರಿ -ಅದನ್ನು ವಿಕಿಸೋರ್ಸಿಗೆ ಹಾಕಿದಂತೆಯೂ ಕಾಣಿಸಲಿಲ್ಲ. ನಿಮ್ಮ ತಪ್ಪು ತಿಳುವಳಿಕೆಗೆ ನಾವು ಸಂಪಾದಕರು ಬಲಿಪಶು. ವಿಕಿಸೋರ್ಸಿ ಹಾಕಬೇಕೆಂದಿದ್ದರೆ ನೀವೇ ಅದನ್ನು ಸುಲಭವಾಗಿ ಅಲ್ಲಿಗೆ ವರ್ಗಾವಣೆ ಮಾಡಬಹುದು ಮತ್ತು ಆ ಸಂದೇಶ ಹಾಕಬಹುದು. ಸಂಪಾದನೆ ಮಾಡಿದವರಿಗೆ ಉತ್ಸಾಹ ಭಂಗವಾಗುವುದಿಲ್ಲ.

ವಿಕಿಪೀಡಿಯ ಒಂದು ವಿಶ್ವಕೋಶ. ಕಥೆ, ಕವನ, ಕಾದಂಬರಿ ಇತ್ಯಾದಿ ಕಥನ ಸಾಹಿತ್ಯಕ್ಕೆ ಇಲ್ಲಿ ಜಾಗವಿಲ್ಲ. ಇಲ್ಲಿ ಮಾಹಿತಿ ಸಾಹಿತ್ಯಕ್ಕೆ ಮಾತ್ರ ಪ್ರಾಶಸ್ತ್ಯ. ಐತಿಹಾಸಿಕವಾಗಿ ಪ್ರಸಿದ್ಧ ಕವನಗಳ ಬಗೆಗೆ ವಿವರ ಬರೆಯಬಹುದು. ಕವನ ಹುಟ್ಟಿದ ಬಗೆ, ಅದು ಎಷ್ಟು ಜನಪ್ರಿಯವಾಗಿತ್ತು, ಅದರ ಅರ್ಥವೇನು, ಇತ್ಯಾದಿ ಬರೆಯಬಹುದು. ಅಂದರೆ ಕವನದ ಬಗೆಗೆ ವಿವರ ನೀಡುವ ಲೇಖನ, ವಿಮರ್ಶೆ ಅಲ್ಲ. ವಿಕಿಸೋರ್ಸ್‍ನಲ್ಲಿ ಹಕ್ಕುಸ್ವಾಮ್ಯ ಇಲ್ಲದ ಕವನ, ಕಥೆ, ಕಾದಂಬರಿ ಎಲ್ಲ ಸೇರಿಸಬಹುದು. ಭಾರತೀಯ ಕಾಪಿರೈಟ್ ಆಕ್ಟ್ ಪ್ರಕಾರ ಕರ್ತೃ ಸತ್ತು ೬೦ ವರ್ಷಗಳ ನಂತರ ಅದು ಹಕ್ಕುಸ್ವಾಮ್ಯದಿಂದ ಮುಕ್ತವಾಗುತ್ತದೆ. ಪಂಜೆ ಮಂಗೇಶರಾಯರು ೧೯೩೭ರಲ್ಲಿ ನಿಧನರಾದದ್ದು. ಅಂದರೆ ಈ ಹಾಡು ಈಗ ಹಕ್ಕುಸ್ವಾಮ್ಯದಿಂದ ಮುಕ್ತವಾಗಿದೆ. ಧಾರಾಳವಾಗಿ ವಿಕಿಸೋರ್ಸ್‍ನಲ್ಲಿ ಸೇರಿಸಬಹುದು.--ಪವನಜ (ಚರ್ಚೆ) ೦೮:೧೬, ೧೨ ಡಿಸೆಂಬರ್ ೨೦೧೬ (UTC)
ನೀವು ಯಾವ "ಮಕ್ಕಳ ಕವನ"ದ ಬಗೆಗೆ ಮಾತನಾಡುತ್ತಿದ್ದೀರಿ ಎಂಬುದು ತಿಳಿಯುತ್ತಿಲ್ಲ. ಈಗಾಗಲೇ ತಿಳಿಸಿದಂತೆ ಅದು ಹಕ್ಕುಸ್ವಾಮ್ಯದಿಂದ ಮುಕ್ತವಾಗಿದ್ದಲ್ಲಿ ಅದನ್ನು ವಿಕಿಸೋರ್ಸ್‍ಗೆ ಸೇರಿಸಬಹುದು.--ಪವನಜ (ಚರ್ಚೆ) ೦೮:೧೬, ೧೨ ಡಿಸೆಂಬರ್ ೨೦೧೬ (UTC)

[ನಿಯಮದ ಬಗ್ಗೆ ವಿಕಿ ಸಂದೇಶ ಈ ಟೆಂಪ್ಲೇಟ್ ನೋಡಿ:(ಟೆಂಪ್ಲೇಟ್ ಇದೆ-ಕೆಟ್ಟಿದೆ: This guideline is a part of the English Wikipedia's Manual of Style. Use common sense in applying it; it will have occasional exceptions. ]

  • ಎರಡನೆಯದು ಯಾವುದೇ ಹೊಗಳಿಕೆಯ ಯಾ ತೆಗಳಿಕೆಯ ಗುಣವಾಚಕ ಉಪಯೋಗಿಸಬಾರದೆಂಬ ವಿಚಾರ: ಅನಾವಶ್ಯಕ ಅಲಂಕಾರಕ್ಕಾಗಿ ಉತ್ಪ್ರೇಕ್ಷೆಮಾಡಿ ಉಪಯೋಗಿಸಬಾರದು. ಹಿತವಾದ ಸತ್ಯವಾದುದನ್ನು ಬರೆಯಯದಿದ್ದರೆ 'ಸತ್ಯಕ್ಕೆ ಅಪಚಾರ',ವ್ಯಕ್ತಿಗೆ ಅಪಚಾರ, ಲೇಖನಕ್ಕೇ ಅಪಚಾರ ಓದುಗರಿಗಾಗಿ ಇರುವುದು ಬರವಣಿಗೆ,ಅವರಿಗೆ ಸತ್ಯ ತಿಳಿಸದೇ ಅಪಚಾರ.ನೊಬೆಲ್ ಬಹುಮಾನ ಬಂದವರಿಗೆ, ಭಾರತ ರತ್ನ ಗಳಿಸಿದವರಿಗೆ ಅವರ ಶ್ರೇಷ್ಠತೆಯನ್ನು ಬರೆಯದಿದ್ದರೆಹೇಗೆ? (ಅಪ್ರಿಯವಾದ ಸತ್ಯವನ್ನು ಬರೆಯದಿರುವುದು ಸರಿ) ನಿಯಮದ ಬಗ್ಗೆ dogmatism ಸರಿಯಲ್ಲವೆಂದು ನಾನು ನಂಬಿದ್ದೇನೆ. ಇದನ್ನು ಬರೆಯಲ್ಲು ಕಾರಣ "ಜಯಲಲಿತಾ ಅಸಾಧಾರಣ ಜನಪ್ರಯತೆಯುಳ್ಳವರು ಅವರಿಗೆ ಶಿಕ್ಷಯಾದುದನ್ನು ಕೇಳಿಯೇ ೨೫ ಜನ ಹೃದಯಾಘಾತದಿಂದ ಸತ್ತರು,ಕೆಲವರು ಆತ್ಮಹತ್ಯೆ ಮಾಡಿಕೊಂಡರು" ಎಂದು ಬರೆದಿದ್ದೆ. ಅದನ್ನು ವಿಕಾಸ ಹೆಗಡೆಯವರು ಅಳಿಸಿದ್ದಾರೆ. ವಿಷಯ-ಅದು "ಸತ್ಯ". ಸತ್ಯವನ್ನು ಬರೆಯುವುದು ನಿಯಮ ಭಂಗವೇ? ಅದರಿಂದ ವಿಕಿ ನಿಯಮಕ್ಕೆ ಭಂಗವಿಲ್ಲ. ಹಾಗೆಯೇ ಸುಬ್ಬಲಕ್ಷ್ಮಿ ಅತಿಜನಪ್ರಿಯ ಗಾಯಕಿ ಎಂದು ಬರೆಯುವುದು ತಪ್ಪಂತೆ- (ವಿಕಾಸಹೆಗಡೆ) (ಇಂಗ್ಲಿಷ್ ವಿಕಿಯಲ್ಲಿ:Carnatic classical vocalist Subbulakshmi, often hailed as "Queen of songs", is the first Indian musician to receive the Ramon Magsaysay award.) ಇಲ್ಲಿ dogmatism conservatism ಸರಿಯಲ್ಲ, ಸತ್ಯಕ್ಕಾಗಿ, ಲೇಖನದ ಘನತೆಗಾಗಿ ಸತ್ವನ್ನು ಬರೆಯೋಣ; ನಿಯಮವಲ್ಲದಿದ್ದರೆ ನ್ಯಾಯಕ್ಕಾಗಿ ಒಂದು ಹೆಜ್ಜೆ ಮೋದುವರಿಯೋಣ. ನೀವು ಅಳಿಸಿದ ಮಕ್ಕಳ ಕವನ ದ ಈಗ ಅಳಿಸಲು ಹಾಕಿರುವ 'ನಾಗರಹಾವೆ'ಈ ಬಗ್ಗೆ ಒಂದು ಜನಪ್ರಿಯ ಇಂಗ್ಲಿಷ್ ಮಕ್ಕಳ ಕವನವನ್ನು ಉದಾಹರಣೆಯಾಗಿ ಹಾಕಿದ್ದೇನೆ.
೨೫ ಜನ ಸತ್ತಿದ್ದಕ್ಕೆ ನಂಬಲರ್ಹವಾದ, ಪರಿಶೀಲಿಸಬಹುದಾದ (verifiable) ದಾಖಲೆ, ಉಲ್ಲೇಖ ನೀಡಬೇಕು.--ಪವನಜ (ಚರ್ಚೆ) ೦೮:೨೩, ೧೨ ಡಿಸೆಂಬರ್ ೨೦೧೬ (UTC)
ಪತ್ರಿಕಾ ವರದಿಯೇ ದಾಖಲೆ; ೨-೩ ಪತ್ರಿಕೆಗಳಲ್ಲಿ ಅದು ಬಂದಿದ್ದರೆ ಸಾಕೆಂದು ನನ್ನ ಭಾವನೆ. ನಾನು ಒಂದು ಪತ್ರಿಕೆಯ -ಪ್ರಜಾವಾಣಿ- ಸಮತೋಲ ಸುದ್ದಯ ಪತ್ರಿಕೆ-ಅದರ ಆಧಾರ ಹಾಕಿದ್ದೆನೆಂದು ನೆನಪು.ಆ ಬಗೆಯ ವಿಷಯಗಳನ್ನು ಆಧಾರವಿಲ್ಲದೆ ಹಾಕಲು ಆಗದು. ಅವರಿಗೆ ಅದು ಪ್ರಚಾರಕ್ಕೆ ಉಪಯೋಗಿಸುವ ಸುದ್ದಿಯಂತೆ ಕಂಡಿರಬಹುದು. ನನಗೆ ಜಯಲಲಿತಾಬಗ್ಗೆ ಪರ-ವಿರೋಧ ಎರಡೂ ಇಲ್ಲ. ಆದರೆ ಓದುಗರಿಗೆ ಅವಳ ವಿಶಿಷ್ಟ ( + -)ಅದ್ಭುತ ವ್ಯಕ್ತಿತ್ವ ಗೊತ್ತಾಗಬೇಕು- ಇದು ನನ್ನ ವಿಚಾರ. Bschandrasgr (ಚರ್ಚೆ) ೦೯:೪೭, ೧೨ ಡಿಸೆಂಬರ್ ೨೦೧೬ (UTC)
ಪತ್ರಿಕಾ ವರದಿಯ ಜಾಲತಾಣದ ಪುಟಕ್ಕೆ ಕೊಂಡಿ ನೀಡಿದ್ದಿರಾ? ಪತ್ರಿಕೆಯಲ್ಲಿ ಬಂದಿತ್ತು ಎಂದು ಆ ದಿನ ನಿಮಗೆ ಗೊತ್ತಿದ್ದಿರಬಹುದು. ಹಲವು ವರ್ಷಗಳ ನಂತರ ಆ ಲೇಖನವನ್ನು ಓದುವಾಗ ಉಲ್ಲೇಖದ ಕೊಂಡಿ ಇದ್ದರೆ ಮಾತ್ರ ಅದು ಅಧಿಕೃತವಾಗುತ್ತದೆ.--ಪವನಜ (ಚರ್ಚೆ) ೧೪:೫೫, ೧೨ ಡಿಸೆಂಬರ್ ೨೦೧೬ (UTC)
  • ಪುಟ: Twinkle, Twinkle, Little Star ಇದು ಇಂಗ್ಲಿಷಿನಲ್ಲಿ ಇರಬಹುದಾದರೆ ಕನ್ನಡದಲ್ಲಿ 'ನಾಗರಹಾವು 'ಇರಬಾರದೆ? ಕುರುಡಾಗಿ ಇಂಗ್ಲಿಷ್ ವಿಕಿ ಅನುಸರಿಸುವುದೂ ಸರಿಯಲ್ಲ. ಅವರ ಭಾವನೆ-ರೀತಿ ಬಾರತೀಯ ಸಂಸ್ಕೃತಿಗೆ ಕೆಲವು ಹೊಂದದಿರಬಹುದು.
ಇಂಗ್ಲಿಶ್ ವಿಕಿಯಲ್ಲಿ, ನಾನು ಮೇಲೆ ಬರೆದಂತೆ, ಹಾಡಿನ ಉಗಮ, ಇತಿಹಾಸ, ಎಲ್ಲ ವಿವರಗಳಿವೆ. ಅದೇ ರೀತಿ ಬರೆಯಬಹುದು ಎಂದು ನಾನು ಈಗಾಗಲೇ ತಿಳಿಸಿದ್ದೇನೆ. ಕೇವಲ ಹಾಡಿನ ಸಾಹಿತ್ಯವಾದರೆ ಅದನ್ನು ವಿಕಿಸೋರ್ಸ್‍ಗೆ ಸೇರಿಸಬಹುದು.--ಪವನಜ (ಚರ್ಚೆ) ೦೮:೨೧, ೧೨ ಡಿಸೆಂಬರ್ ೨೦೧೬ (UTC)
  • ಇದಕ್ಕೆ ಸಂಬಂದಪಟ್ಟಂತೆ: ಅದೇ ವಾಜಪೇಯಿ ಮತ್ತು ಮೋದಿಯವರನ್ನು ಈ ವಿಕಿಯಲ್ಲಿ ಎಷ್ಟು ಹೊಗಳಿದ್ದಾರೆಂದು ನೋಡಿ! ಅವರು ಮಾಡಿದ ದೇಶ ಸೇವೆ ಅಭಿವೃದ್ಧಿ ಕೆಲಸ ಅದರಲ್ಲಿ ಇಲ್ಲ. ನಿಮ್ಮವBschandrasgr (ಚರ್ಚೆ) ೦೭:೩೮, ೧೦ ಡಿಸೆಂಬರ್ ೨೦೧೬ (UTC)


ಈ ಚರ್ಚೆ ಬೇರೆಯ ಕೆಲವು ಪ್ರಶ್ನೆಗಳನ್ನೂ ನಮ್ಮ ಮುಂದಿಡುತ್ತಿದೆ. "ಇಂತಿಷ್ಟು ಜನರು ಇಂತಹ ರಾಜಕೀಯ ನಾಯಕರಿಗೆ ಜೈಲಾದರೆ ಸತ್ತರು" ಎಂಬುದು ಅವರ ಜನಪ್ರಿಯತೆಯ ಬಗೆಗೆ ನಿರ್ಣಯಕ್ಕೆ ಬರಲಷ್ಟೆ ಬಳಸಬಹುದೇ, ನಮ್ಮ ನ್ಯಾಯವ್ಯವಸ್ಥೆಯ ಬಗೆಗೆನ ಜನರ ಅವಜ್ಞೆ ಬಗೆಗೆ ಅದು ಏನನ್ನೂ ಹೇಳುವುದಿಲ್ಲವೇ? ಅಥವಾ ಅವರೇನಾದರೂ ಸಾರ್ವಜನಿಕರಿಗೆ ಸಂಬಂಧಿಸಿದ ಕಾರಣಕ್ಕೆ ಜೈಲಿಗೆ ಹೋದರೆಂದು ಅರ್ಥಮಾಡಿಕೊಳ್ಳ ಬೇಕೆ? ಇಂತಹ ಹೇಳಿಕೆ ಹೇಗೆ ತಟಸ್ಥ ದೋರಣೆಯಾಗಬಲ್ಲದು?

ಹಲವು ಅಂಶಗಳನ್ನು ಬಿಡಿಬಿಡಿಯಾಗಿ ಇಲ್ಲಿ ಚರ್ಚಿಸಿದಲ್ಲಿ ಗೊಂದಲ ಹೆಚ್ಚಾಗ ಬಹುದು (ಇದು ತಮಿಳುನಾಡು ಸರ್ಕಾರದ ಚರ್ಚೆ ಪುಟದ ಮುಂದುವರಿಕೆಯಂತೆ ಭಾಸವಾಗುವುದರಿಂದ). ಒಂದು ಸರಕಾರ ಬಗೆಗಿನ ಲೇಖನದಲ್ಲಿ ಅದರ ರೂಪರೇಖೆ ಚರ್ಚಿಸುವುದು ಮುಖ್ಯ. ಆದರೆ "ಹಿಂದಿನ ಮುಖ್ಯಮಂತ್ರಿಗಳ ಯೋಜನೆಗಳ ಪಟ್ಟಿ" ಹೇಗೆ ಸಂಬಂಧಿಸುತ್ತದೆ. ಈ ಬಗೆಗೆ Wikipedia:Relevance_of_content ಹೀಗೆ ಹೇಳುತ್ತದೆ.

Wikipedia's size is effectively unlimited. Individual articles, however, should be of finite size and stay focused on a small number of topics for ease of reading and navigation. An article that is dense with information only tenuously connected to its subject does little to inform readers about that subject. (ಒತ್ತು ನನ್ನದು)

ಇಂದಿನ ಸರಕಾರ ಅಧಿಕಾರಕ್ಕೆ ಬಂದ ಹಿನ್ನೆಲೆ ಬೇಕಾದರೆ "ಇತ್ತೀಚೆಗಷ್ಟೇ ಅವರು ತಮ್ಮ ಜನಪ್ರಿಯ ಯೋಜನೆಗಳ ಮೂಲಕ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿದ್ದರು" ಸಾಕಾಗುತ್ತದೆಯಲ್ಲವೇ?

ಆದರೆ ಪವನಜ ಅವರು ಹೇಳುವ ಉಲ್ಲೇಖ ಬಗೆಗಿನ ನಿಲುವು "ಲೇಖನವನ್ನು ಓದುವಾಗ ಉಲ್ಲೇಖದ ಕೊಂಡಿ ಇದ್ದರೆ ಮಾತ್ರ ಅದು ಅಧಿಕೃತವಾಗುತ್ತದೆ" ಸರಿಯೇ ಎಂದು ನನ್ನ ಅನುಮಾನ. ಇರುವಿಕೆಯನ್ನು ವಿಕಿಪೀಡೀಯದ Wikipedia:No_original_research ಹೀಗೆ ವ್ಯಾಖ್ಯಾನಿಸುತ್ತದೆ.

By "exists", the community means that the reliable source must have been published and still exist—somewhere in the world, in any language, whether or not it is reachable online—even if no source is currently named in the article.

ಹೀಗಾಗಿ ಪ್ರಕಟವಾಗಿರ ಬಹುದಾದ ಮಾಹಿತಿಯ ವೆಬ್ ಆವೃತ್ತಿ (ಉದಾ. ನಂಬಲರ್ಹ ಪತ್ರಿಕೆಯದು) ಬಳಸುವುದು ತಪ್ಪಾಗಲಾರದು. ಪ್ರದೀಪ್ ಬೆಳಗಲ್ (ಚರ್ಚೆ) ೧೬:೫೦, ೧೩ ಡಿಸೆಂಬರ್ ೨೦೧೬ (UTC)

ನಾನು ಆ ನಿರ್ದಿಷ್ಟ ವಿಷಯಕ್ಕೆ, ಪುಟಕ್ಕೆ, ಸಂದರ್ಭಕ್ಕೆ ಮತ್ತು ನಿರೂಪಣಾ ಶೈಲಿಯ ಚರ್ಚೆಯಲ್ಲಿ ತಿಳಿಸಿದ ಕೆಲವು ಮಾಹಿತಿಗಳನ್ನು ಸುಖಾಸುಮ್ಮನೇ ನನ್ನ ಹೆಸರನ್ನು ಬಳಸಿಕೊಂಡು ತಪ್ಪು ಅರ್ಥ ಬರುವಂತೆ ನನ್ನ ಹೆಸರು ಹಾಕಿ ನಾನು ಹೇಳುತ್ತೇನೆ ಎಂಬಂತೆ ಹೇಳುವುದನ್ನು ಖಂಡಿಸುತ್ತೇನೆ. --Vikas Hegde (ಚರ್ಚೆ) ೧೪:೪೩, ೨೬ ಏಪ್ರಿಲ್ ೨೦೧೭ (UTC)
  • Gopala Krishna A (ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ) ‎ವಿಕಿಪೀಡಿಯಕ್ಕೆ ತಕ್ಕುದಾದ ಲೇಖನ ಅಲ್ಲ ಎಂದಿದ್ದೀರಿ. ವಿಕಿಪೀಡಿಯಾ ಒಂದು ಮಹಿತಿ ಕಣಜ. ಅದು ಇದ್ದರೆ ತೊಂದರೆ ಏನು? ಆಧಾರವಿಲ್ಲದ್ದನ್ನು ಮಾತ್ರಾ ತೆಗೆಯಬಹುದು. ಕುರುಡಾಗಿ ನಿಯಮಗಳನ್ನು ಅನುಸರಿಸಬೇಡಿ; ವಿಕಿಯ - ನಿಯಮದಲ್ಲೇ ಕಾಮನ್‍ಸೆನ್ಸ್ ಉಪಯೋಗಿಸಿ ಎಂದಿದೆ, ಮತ್ತೊಮ್ಮೆ ಓದಿ. ಇಂಗ್ಲಿಷ್‍ನಲ್ಲಿ ಎಷ್ಟು ಬಗೆಯ ಲೇಖನಗಳಿವೆ ನೋಡಿ. ಇರುವುದನ್ನು ಅಳಿಸುವುದಕ್ಕಿಂತ ಬಿಡುವು ಇದ್ದರೆ, ಉತ್ತಮ ಹೊಸ ಲೇಖನ ಬರೆದು ಹಾಕಿ.
  • ಇದೇ ವಿಷಯವನ್ನು ಇಂಗ್ಲಿಷ್‍ನಲ್ಲಿ "Ripley's Believe It or Not!" ಎಂದು ಹಾಕಿದೆ. Ripley's Believe It or Not! is an American franchise, founded by Robert Ripley, which deals in bizarre events and items so strange and unusual that readers might question the claims. The Believe It or Not panel proved popular and was later adapted into a wide variety of formats, including radio, television, comic books, a chain of museums, and a book series.

Bschandrasgr (ಚರ್ಚೆ) ೦೯:೩೦, ೨೪ ಏಪ್ರಿಲ್ ೨೦೧೭ (UTC)

Ripley's Believe It or Not! ಒಂದು ಟೆಲಿವಿಶನ್ ಕಾರ್ಯಕ್ರಮ. ಇಂಗ್ಲಿಶ್ ವಿಕಿಯಲ್ಲಿರುವುದು ಆ ಕಾರ್ಯಕ್ರಮದ ಬಗೆಗಿನ ಪುಟ. ಆ ಕಾರ್ಯಕ್ರಮದಲ್ಲಿ ತೋರಿಸಿದ ಎಲ್ಲ ವಿಷಯಗಳು ಸತ್ಯ ಎಂದು ಆ ವಿಕಿ ಪುಟದಲ್ಲಿ ಎಲ್ಲೂ ಹೇಳಿಲ್ಲ. ಆಶ್ಚರ್ಯ ಮತ್ತು ಅದ್ಭುತಗಳು ಎಂಬ ಪುಟದಲ್ಲಿರುವುದು ಪತ್ರಿಕಾ ವರದಿಗಳ ಸಂಗ್ರಹ. ದಟ್ಟರಿಗೆ /ಮೂರ್ಖರಿಗೆ 'ಕತ್ತೆ' ಎಂದು ಬೈಯ್ಯುವುದು ರೂಢಿ, ಆದರೆ ಕತ್ತೆ ಅಷ್ಟೇನೂ ದಡ್ಡ ಪ್ರಾಣಿಯಲ್ಲ. ಆದರೆ ಅದರ ಹಾಲಿಗೆ ಅತ್ಯುನ್ನತ ಬೆಲೆ !! -ಇಂತಹ ವಾಕ್ಯಗಳು ವಿಕಿಪೀಡಿಯಕ್ಕೆ ಸರಿಹೊಂದುವುದಿಲ್ಲ. ವಿಕಿಪೀಡಿಯ ಇರುವುದು ಪತ್ರಿಕಾವರದಿಗಳನ್ನು ಸಂಗ್ರಹಿಸಿ ನೀಡಲು ಅಲ್ಲ. ಅದೊಂದು ವಿಶ್ವಕೋಶ. ಅದರಲ್ಲಿ ವಿಶ್ವಕೋಶದ ಮಾದರಿಯ ಲೇಖನಗಳು ಮಾತ್ರ ಇರತಕ್ಕದ್ದು--ಪವನಜ (ಚರ್ಚೆ) ೧೨:೨೩, ೨೪ ಏಪ್ರಿಲ್ ೨೦೧೭ (UTC)
ಹೌದು. ಪವನಜರು ಹೇಳಿದ ವಿಷಯಗಳನ್ನು ಗಮನದಲ್ಲಿರಿಸಿಯೇ ಅಳಿಸುವಿಕೆಗೆ ಗುರುತಿಸಿದ್ದು. --Gopala Krishna A|(talk) ೦೯:೨೧, ೨೬ ಏಪ್ರಿಲ್ ೨೦೧೭ (UTC)
ಪವನಜರು ಹೇಳಿರುವ ಅಂಶಗಳು ಸರಿಯಾಗಿವೆ. ಮೊದಲಿಗೆ ಪುಟದ ಹೆಸರೇ ವಿಕಿಗೆ ತಕ್ಕುದಾಗಿಲ್ಲ. ’ಆಶ್ಚರ್ಯ ಮತ್ತು ಅದ್ಭುತ’ ಅಂತೆಲ್ಲಾ ಲೇಖನ ಮಾಡುವುದೇ ಹಾಸ್ಯಾಸ್ಪದ. ಇಂಗ್ಲೀಶಲ್ಲಿದೆ ಅದಕ್ಕೇ ಮಾಡಿದ್ದೆ ಅಂತ ಸಮರ್ಥನೆಗಳನ್ನು ಕೊಡುವ ಮುಂಚೆ ಅದರಲ್ಲಿ ಏನಿದೆ ಅಂತ ನೋಡಬೇಕು. ವಿಕಿಯಲ್ಲಿ ಇಂತಹ ಅಪ್ರಯೋಜಕ ಪುಟಗಳು ಲೇಖನ ಸಂಖ್ಯೆ ಹೆಚ್ಚಿಸಬಲ್ಲವೇ ಹೊರತು ಗುಣಮಟ್ಟ ಹಳ್ಳ ಹಿಡಿಸುತ್ತವೆ.--Vikas Hegde (ಚರ್ಚೆ) ೧೪:೩೯, ೨೬ ಏಪ್ರಿಲ್ ೨೦೧೭ (UTC)


  • ಬಹುಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಲೇಖನವನ್ನು ಅಳಿಸಲಾಗಿದೆ --ಪವನಜ (ಚರ್ಚೆ) ೧೪:೪೬, ೧೭ ಮೇ ೨೦೧೭ (UTC)
  • ಇಂಗ್ಲಿಷನಲ್ಲಿ en:Terrorism ಎಂದು ಇರುವ ಪುಟವನ್ನು ಬಹಳ ಹಿಂದೆಯೇ 'ಚುಟುಕ'ವಾಗಿ ಆರಂಭಿಸಿ ಬಿಟ್ಟಿದ್ದರು. ಅದನ್ನು ನಾನು ಮುಂದುವರಿಸಿದ್ದೇನೆ. ಇಂಗ್ಲಿಷ್‍ನಲ್ಲಿರಬಹುದಾದರೆ ಕನ್ನಡದಲ್ಲಿ ಏಕೆ ಇರಬಾರದು? ಅದರಲ್ಲಿಯೂ ಪತ್ರಿಕಾ ವರದಿಯಿಂದಲೇ ಎಲ್ಲಾ ಆಯ್ದು ಬರೆಯಲಾಗಿದೆ. ಕೆಲವು ಅವರ ಆಯ್ಕೆ ಬೇರೆ ಇರಬಹುದು-ಪಾಶ್ಚಿಮಾತ್ಯ ದೃಷ್ಟಿಕೋನಕ್ಕೆ ಅನುಗುಣವಾಗಿ. ಅದರಲ್ಲಿ ಅನೇಕ ಐತಿಹಾಸಿಕ ದಾಖಲೆಗಳಿವೆ. ಆದ್ದರಿಂದ ಇದನ್ನು ಅಳಿಸುವುದು ಸರಿಯಲ್ಲವೆಂದು ನನ್ನ ಅಭಿಪ್ರಾಯ. ಇತಿಹಾಸದಲ್ಲಿ ಕೆಡುಕಿನ ವಿಷಯ ಇದ್ದರೆ ಅದನ್ನು ದಾಖಲಿಸುವುದು ತಪ್ಪೇ. ಮೊನ್ನೆ ಮಸೂಲಿನ ಯುದ್ಧದಲ್ಲಿ ಸಅಔಇರಾರುಜನ ಸತ್ತರು. ಇಸ್ಲಾಮಿಕ್ ಸ್ಟೇಟ್ ವಿಭಾಗದಲ್ಲಿ ಇಂಗ್ಲಿಷ್ ನಲ್ಲಿ ಅದನ್ನು ದಾಖಲಿಸುತ್ತಾರೆ - ಅಲ್ಲಿ ಮಾಡಿದರೆ ಸರಿ; ಅದೇ ಇಲ್ಲಿದ್ದರೆ ಅದು ತಪ್ಪು. ಭಯೋತ್ಪಾದನೆ ಒಂದು ಮುಖ್ಯ ವಿಷಯ. ಮುಖ್ಯವಾಗಿ ಪ್ರಸ್ತುತ ಇತಿಹಾಸ ಪತ್ರಿಕಾವರದಿಗಳಿಂದಲೇ ದಾಖಲಾಗುವುದು, ಅದು "ಇಂಗ್ಲಿಷ್ ವಿಕಿಯ ವಿಶೇಷ". ಇದರಲ್ಲಿ ಹಿಂದಿನ ಮುದ್ರಿತ ವಿಶ್ವಕೋಶಕ್ಕೂ ಇದಕ್ಕೂ ಪ್ರಸ್ತುತವಿಷಯಗಳನ್ನು ತೆಗೆದುಕೊಳ್ಳುವುದೇ ವಿಷೇಶವಾದದ್ದು. ನಿಮಗೆ ಬಿಡುವಿದ್ದರ ಕನ್ನಡ ವಿಕಿಯಲ್ಲಿ ಆಧಾರ ಹಾಕದ ಅರ್ಥವಾಗದ ಅನೇಕ ಲೇಖನಗಳಿವೆ. ಅವನ್ನು ಹುಡುಕಬಹುದು. ದಯವಿಟ್ಟು ಅಳಿಸುವುದು ಹವ್ಯಾಸಕ್ಕಾಗಿ ಆಗುವುದು ತರವಲ್ಲವೆಂದು ನ್ನ ವಿನಯ ಪೂರ್ವಕ ಸಲಹೆ.
  • ಮಾನ್ಯ ಗೋಪಲಕೃಷ್ಣರವರೇ ಅಳಿಸುವ ಘನ ಕಾರ್ಯಕ್ಕಿಂತ ಯಾವುದಾದರೂ ಉತ್ತಮ ಲೇಖನ ತಯಾರಿಸಿ ಹಾಕಿದರೆ ಕನ್ನಡ ವಿಕಿಸೇವೆಯನ್ನು ಅರ್ಥಪೂರ್ಣವಾಗಿ ಮಾಡಿದಂತೆ ಆಗುವುದು. ಆಧಾರವಿಲ್ಲದ ಕೊಂಡಿಗಳಿಲ್ಲದ ನೂರಾರು ಲೇಖನಗಳ ಪಟ್ಟಿಯನ್ನು ನಿಮಗೆ ಕೊಡಬಲ್ಲೆ - ನಿಮಗೆ ಅದೇ ಅಳಿಸುವುದೇ ಪ್ರಾಮುಖ್ಯವಾದ ವಿಕಿಸೇವೆ ಅನಿಸಿದರೆ. ತಪ್ಪು ಕಂಡರೆ ತಿದ್ದಿ ಸರಿಪಡಿಸಿ. ವಿಕಿಗೆ ಲೇಖನ ಹಾಕುವವರೇ ಕಡಿಮೆ! ಸಾದ್ಯವಾದರೆ ಉತ್ತಮ ಲೇಖನ ಹಾಕಿ ವಿಕಿ-ಬೆಳೆಸಿ; ನಿರುತ್ಸಾಹಗೊಳಿಸುವುದು ಸರಿಯಲ್ಲ! (ಬೇಜಾರಾದಾಗ ಕಲ್ಲು ಹೊಡೆದಂತೆ) Bschandrasgr (ಚರ್ಚೆ) ೦೭:೪೭, ೧೧ ಜುಲೈ ೨೦೧೭ (UTC)
Bschandrasgrರವರೆ ನಿಮ್ಮ ಲೇಖನ ಕೆಳಗಿನ ವಿಷಗಳನ್ನು ಹೊಂದಿಲ್ಲ.ಬರಿ ಸಾವಿನ ಸುದ್ದಿ ಮಾತ್ರ ಹೊಂದಿದೆ.ಆದ್ದರಿಂದ ಅಳಿಸುವಿಕೆಗೆ ಹಾಕಲಾಗಿದೆ ಎಂದು ನನ್ನ ಅನಿಸಿಕೆ.Sangappadyamani (ಚರ್ಚೆ) ೦೯:೪೨, ೧೧ ಜುಲೈ ೨೦೧೭ (UTC)

ಪರಿವಿಡಿ 1 ಪರಿಭಾಷೆ 1.1 ಪದದ ಮೂಲ 1.2 ವ್ಯಾಖ್ಯಾನ 1.3 ಭೀಕರವಾದ ಬಳಕೆ 2 ಇತಿಹಾಸ 3 ಇನ್ಫೋಗ್ರಾಫಿಕ್ಸ್ 4 ವಿಧಗಳು ಭಯೋತ್ಪಾದಕರ 5 ಪ್ರೇರಣೆಗಳು 6 ಪ್ರಜಾಪ್ರಭುತ್ವ ಮತ್ತು ಪ್ರಾದೇಶಿಕ ಭಯೋತ್ಪಾದನೆಯ 7 ಧಾರ್ಮಿಕ ಭಯೋತ್ಪಾದನೆ 8 ಅಪರಾಧಿಗಳು 8.1 ನಾನ್-ಸ್ಟೇಟ್ ಗುಂಪುಗಳು 8.2 ರಾಜ್ಯ ಪ್ರಾಯೋಜಕರು 8.3 ರಾಜ್ಯ ಭಯೋತ್ಪಾದನೆ 9 ಪ್ರವಾಸೋದ್ಯಮದೊಂದಿಗಿನ ಸಂಪರ್ಕ 10 ಫಂಡಿಂಗ್ 11 ಟ್ಯಾಕ್ಟಿಕ್ಸ್ 12 ಪ್ರತಿಸ್ಪಂದನಗಳು 12.1 ಯುನೈಟೆಡ್ ಸ್ಟೇಟ್ಸ್ನಲ್ಲಿ ಪ್ರತಿಕ್ರಿಯೆ 12.2 ಭಯೋತ್ಪಾದನೆ ಸಂಶೋಧನೆ ಮಾಸ್ ಮಾಧ್ಯಮ 14 ಭಯೋತ್ಪಾದಕ ಗುಂಪುಗಳ ಫಲಿತಾಂಶ 15 ಡೇಟಾಬೇಸ್ಗಳು 16 ಇದನ್ನೂ ನೋಡಿ 17 ಟಿಪ್ಪಣಿಗಳು 18 ಉಲ್ಲೇಖಗಳು 19 ಹೆಚ್ಚಿನ ಓದಿಗಾಗಿ

ಉತ್ತರ ಮತ್ತು ಸೂಚನೆ[ಬದಲಾಯಿಸಿ]

  • ನೀವು ಜಾಣರು; ನಿಮಗೆ ಸಾದ್ಯವಿದ್ದರೆ ಸರಿಪಡಿಸಿ, ; ದೋಷಗಳನ್ನು ಕಂಡುಹಿಡಿಯುವುದು- ಅಳಿಸುವುದು ದೊಡ್ಡ ಯಾ ಕಷ್ಟದ ಕೆಲದಸವಲ್ಲ. ನೀವು ಹೇಳುವುದು ವಿಮರ್ಶಾತ್ಮಕ ಸಂಶೋದನಾ ಲೇಖನ. ಇತಿಹಾಸದ ಇತಿಹಾಸಿಕ ಘಟನೆಗಳ ವಿವರ ಬೇರೆ ಸಂಶೋಧನೆ ಮತ್ತು ವಿಮರ್ಶೆಯ ಲೇಖನ ಬೇರೆ. ನೀವು ದಯವಿಟ್ಟು ಆ ಬಗೆಯ ಹೊಸ ಲೇಖನ ಬರೆದು ವಿಕಿಯನ್ನು ಅಭಿವೃದ್ಧಪಡಿಸಿ.Bschandrasgr (ಚರ್ಚೆ) ೦೯:೫೫, ೧೧ ಜುಲೈ ೨೦೧೭ (UTC)
ಉತ್ತಮ ಲೇಖನ ಹೇಗಿರಬೆಕು ಎಂಬುದನ್ನು ಈ ಪುಟದಲ್ಲಿ ವಿವರಿಸಲಾಗಿದೆ.--ಪವನಜ (ಚರ್ಚೆ) ೧೪:೧೬, ೧೧ ಜುಲೈ ೨೦೧೭ (UTC)
  • ಈ ಲೇಖನ ಕೆಲವು ಇಂಗ್ಲಿಷ್ ಲೇಖನಗಳಂತೆ ಕೇವಲ ಐತಿಹಾಸಿಕ ದಾಖಲೆಯನ್ನೊಳಗೊಂಡಿದೆ. ಅಲ್ಲಿ ದಿನಾಂಕ ಹಾಕಿ ಪಟ್ಟಿಗಳನ್ನು ಕೊಟ್ಟು ಕೊಮಡಿಗಳ ಮೂಲಕ ವಿವರಣೆ ಕೊಟ್ಟಿದೆ. ಇಲ್ಲಿ ಸಂಕ್ಷಿಪ್ತ ವಿವರಣೆ ಇದೆ. ಪ್ರತ್ಯೇಕ ಲೇಖನ ಮಾಡಿಲ್ಲ.ಇದು ಸಾಂಪ್ರದಾಯಿಕ ವಿಶ್ವಕೋಶವಲ್ಲದೆ, ಪ್ರಸ್ತುತ ಘಟನೆಗಳ ವಿಷಯವನ್ನೂ ಒಳಗೊಂಡಿದೆ; ಅದೇ ಅಂತರ್ಜಾಲವಿಕಿಯ ವಿಶೇಷತೆ ಎಂದು ಕೊಂಡಿದ್ದೇನೆ. ಅದಿಲ್ಲದಿದ್ದರೆ ನಮ್ಮ ನಕಲುಮಾಡವ ವಿಶಿಷ್ಟ ಸಂಸ್ಕೃತಿಯಂತೆ ಕೊನೆಯಲ್ಲಿ ಇಂಗ್ಲಿಷ್ ವಿಕಿಯಲ್ಲಿ ಮಾಡಿದ ಪಟ್ಟಿಯನ್ನು ಕೊಂಡಿಗಳ ಲೇಖನಗಳಿಲ್ಲದಿದ್ದರೂ ಕೊಂಡಿಗಳನ್ನು ಹಾಕಿ ನಕಲು ಮಾಡಬೇಕಷ್ಟೆ! Bschandrasgr (ಚರ್ಚೆ) ೦೫:೨೧, ೨೮ ಜುಲೈ ೨೦೧೭ (UTC)
ಭಯೋತ್ಪಾದನೆ ಲೇಖನ ಉತ್ತಮವಾಗಿದೆ ಎಂದು ನನ್ನ ಅನಿಸಿಕೆ ಅದ್ದರಿಂದ ಈ ಲೇಖನವನ್ನು ಅಳಿಸುವಿಕೆಗೆ ಹಾಕಲಾಗುವ ವರ್ಗ ದಿಂದ ತೆಗೆದು ಹಾಕ್ಕಿದ್ದೆನೆ.★ Anoop/ಅನೂಪ್ (Talk)(Edits) ೦೫:೪೨, ೨೮ ಜುಲೈ ೨೦೧೭ (UTC)
@ಅನೂಪ್ ಅವರೇ ದಯವಿಟ್ಟು ಮೇಲೆ ಪವನಜರು ತಿಳಿಸಿದ ಉತ್ತಮ ಲೇಖನ ಹೇಗಿರಬೇಕೆಂಬ ನಿಯಮಗಳನ್ನು ಮತ್ತು ಈ ಲೇಖನವನ್ನು ತುಲನೆ ಮಾಡಿ ನೋಡಿ. ಗೋಪಾಲಕೃಷ್ಣ (ಚರ್ಚೆ) ೦೭:೩೬, ೩೦ ಜುಲೈ ೨೦೧೭ (UTC)
ಗೋಪಾಲಕೃಷ್ಣ ಪ್ರಸ್ತುತ ಲೇಖನ ಉತ್ತಮ ಸ್ಥಿತಿಯಲ್ಲಿದೆ, ನೀವು ಯಾಕೆ ಅಳಿಸಲು ಆ ಲೇಖನವನ್ನು ಪ್ರಸ್ತಾಪಿಸುತ್ತೀರಿ ಎಂದು ನನಗೆ ಗೊತ್ತಿಲ್ಲ, ಮತ್ತು ಕನ್ನಡ ವಿಕಿಪೀಡಿಯ ಮೇಲಿನ ಎಲ್ಲಾ ಲೇಖನಗಳು ಪುಟದಲ್ಲಿ ಹೇಳಿದ ಹಾಗೆ ಹೊಂದಾಣಿಕೆಯಾಗುವುದಿಲ್ಲ. ★ Anoop/ಅನೂಪ್ (Talk)(Edits) ೧೫:೨೫, ೩೦ ಜುಲೈ ೨೦೧೭ (UTC)
@ಅನೂಪ್ ಉತ್ತಮ ಸ್ಥಿತಿಯಲ್ಲಿ ಎಂದರೆ ಪತ್ರಿಕಾ ವರದಿಯ ಹಾಗಲ್ಲ. ಈ ಲೇಖನ ಪತ್ರಿಕಾ ವರದಿಯಂತಿದೆ. ಹೆಚ್ಚಿನ ಭಾಗವು ಪತ್ರಿಕಾ ವರದಿಗಳಾಗಿದೆ. ನೀವು ಕೊಟ್ಟ ಉಲ್ಲೇಖಗಳಲ್ಲಿ ನೋಡಿದರೆ ನೇರವಾಗಿ ಪತ್ರಿಕೆಗಳಿಂದ ನಕಲು ಪಡಿಸಿದ್ದಾಗಿದೆ. ಅದು ವಿಶ್ವಕೋಶಕ್ಕೆ ಅನಗತ್ಯ ಎಂದು ನನ್ನ ಅಭಿಪ್ರಾಯ. ಮತ್ತು ನೀವು ಮೇಲೆ ಹೇಳಿದಿರಲ್ಲ ಎಲ್ಲಾ ಲೇಖನಗಳು ಪುಟದಲ್ಲಿ ಹೇಳಿದ ಹಾಗೆ ಹೊಂದಾಣಿಕೆಯಾಗುವುದಿಲ್ಲ ಎಂದು. ಉದಾಹರಣೆಗಳನ್ನು ಕೊಡಬಹುದೇ? --ಗೋಪಾಲಕೃಷ್ಣ (ಚರ್ಚೆ) ೧೦:೨೩, ೩೧ ಜುಲೈ ೨೦೧೭ (UTC)
  • ಕನ್ನಡ ವಿಕಿಪೀಡಿಯದಲ್ಲಿರುವ ಭಯೋತ್ಪಾದನೆ ಲೇಖನದಲ್ಲಿ ಆಂಗ್ಲ ವಿಕಿಪೀಡಿಯದ ಪುಟದಲ್ಲಿರುವಂತೆ ಸಮಗ್ರ ಮಾಹಿತಿ ಕಂಡುಬರುತ್ತಿಲ್ಲ. ಗೋಪಾಲಕೃಷ್ಣ ಅವರು ಹೇಳಿದಂತೆ ಕೇವಲ ಭಯೋತ್ಪಾದಕ ದಾಳಿಗಳ ಪಟ್ಟಿಯಂತೆ ಕಂಡುಬರುತ್ತಿದೆ. ಆದರೆ, ಈಗಿರುವ ಲೇಖನಕ್ಕೆ ಹೆಚ್ಚುವರಿಯಾಗಿ ಆಂಗ್ಲ ಲೇಖನದಲ್ಲಿರುವಂತೆಯೇ ಭಯೋತ್ಪಾದನೆಯ ಬೇರೆ ಬೇರೆ ವ್ಯಾಖ್ಯಾನಗಳು, ಇತಿಹಾಸ, ವಿಧಗಳು ಇತ್ಯಾದಿ ವಿವರಗಳನ್ನು ಸೇರಿಸಿ ಉತ್ತಮಗೊಳಿಸಬಹುದು. ಹಾಗಾಗಿ ಈ ಲೇಖನವನ್ನು ಅಳಿಸುವುದು ಸರಿಯಲ್ಲವೆಂದು ನನ್ನ ಅನಿಸಿಕೆ. ~ ಹರೀಶ / ಚರ್ಚೆ / ಕಾಣಿಕೆಗಳು ೧೧:೩೮, ೩೧ ಜುಲೈ ೨೦೧೭ (UTC)
ಸರಿ. ಪತ್ರಿಕಾ ವರದಿಗಳನ್ನೆಲ್ಲ ಅಳಿಸಬಹುದಲ್ಲವೇ? --ಗೋಪಾಲಕೃಷ್ಣ (ಚರ್ಚೆ) ೧೨:೧೬, ೩೧ ಜುಲೈ ೨೦೧೭ (UTC)
ಅದು ಪತ್ರಿಕೆಯಲ್ಲಿ ಬಂದ ಬಹೋತ್ಪಾದನೆಯ ಬಗೆಗೆ ಐತಿಹಾಸಿಕ ದಾಖಲೆಗಳು ಅದಿಲ್ಲದೆ ಬರಿಯ ವ್ಯಾಖ್ಯೆ/ ಡೆಫೆನಿಶನ್ ಇದ್ದರೆ ಏನು ಪ್ರಯೋಜನ. ಆ ಬಗೆಯ ವ್ಯಾಖ್ಯಾನವನ್ನು ಒಬ್ಬೊರುಒಂದೊಂದು ರೀತಿ ಮಾಡಬಹುದು. ಅವೆಲ್ಲವೂ ಅವರವರ ಸ್ವಂರ ಅಭಿಪ್ರಾಯಗಳು. ಲೇಖನ ಹಾಕಿದವರ ಅಭಿಪ್ರಾಯಯವೂ ಸೇರಿರಬಹುದು. ವ್ಯಾಖ್ಯೆಗೆ ಆಧಾರ ಯಾವುದು? ಏನೇ ಆಗಲಿ ಪ್ರಸ್ತುತ ಇತಿಹಾಸಕ್ಕೆ ಈಗ ಪತ್ರಿಕಾ ವರದಿಯೇ ಆಧಾರ. ಅದನ್ನೇ ನಕಲು ಮಾಡಬಾರೆಂದೆಂಬ ಆಗ್ರಹವಿದ್ದರೆ, ಅದರ ವಾಕ್ಯಗಲನ್ನು ಅದಲುಬದಲು ಮಾಡಿ ಹಾಕಿ ಲೇಖನ ಉತ್ತಮ ಪಡಿಸಿ. ನೀವು ನಿಯಮದ ಬಾಲ ಹಿಡಿದು ಐತಿಹಾಸಿಕ ದಾಖಲೆಗಳನ್ನೇ ತೆಗೆಯುತ್ತಿದ್ದೀರೆಂದು ನನ್ನ ಭಾವನೆ.

ಉದಾ:"ಭಾರತದ 14ನೇ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‌ ಆಯ್ಕೆಯಾಗಿದ್ದಾರೆ". ಎಂಬ ಪತ್ರಿಕಾ ವರದಿಯನ್ನು ಹಾಗೇ ಹಾಕಿದರೆ "ವರದಿಯಂತಿದೆ ಎಂದು, ಪದಗಳನ್ನು ಹಿಂದು ಮುಂದು ಮಾಡಿ ಹಾಕಿದರೆ, ಅದು "ಉತ್ತಮ ವಿಕಿನಿಯಮ" ಪಾಲನೆಯೇ?;

ಮುಖ್ಯವಾಗಿ ಸ್ವಂತ ಅಭಿಪ್ರಾಯವಿರುವ, ಉತ್ಪ್ರೇಕ್ಷಿತ, ವರದಿಗಳು ಹಾಗೆಯೇ ಹಾಕಲು ಯೋಗ್ಯವಲ್ಲ, ಹೆಚ್ಚು ವರದಿಗಳು ಆ ಬಗೆಯವು. ಆ ದೃಷ್ಟಿಯಿಂದ ಆ ನಿಯಮವಿದೆ. ಪ್ರಸ್ತುತ ಅಥವಾ ಹಿಂದಿನ ಪ್ರಮುಖ ಐತಿಹಾಸಿಕ ಘಟನೆಗಳು ಮೇಲಿನಂತೆ ಚಿಕ್ಕ ಚೊಕ್ಕ ವರದಿಯಾಗಿದ್ದರೆ ಅದನ್ನು ಹಾಕದಿದ್ದರೆ, ನೀವು ವಿಷಯವನ್ನು ಅಪ್‍ಡೇಟ್ ಮಾಡುವುದು ಹೇಗೆ? ಪತ್ರಿಕೆಯಿಂದ ಆರಿಸಿಕೊಳ್ಳದೆ ಸ್ವಂತ ಊಹಿಸಿ ಬರೆಯಲಾಗುವುದೇ?
ದಯವಿಟ್ಟು ನೀವು ಸ್ವತಃ ಕೆಲವು ರಾಜಕೀಯ ಘಟನೆಯ ಮತ್ತು ಕ್ರೀಡೆಯ ಪುಟಗಳನ್ನು ಅಪ್‍ಡೇಟ್ ಮಾಡಿ ನೋಡಿ. ನಿಯಮಗಳಿವೆ - ಆದರೆ ಕುರುಡು ಅನುಸರಣೆ ಅನುಸರಣೆ ಅರ್ಥಹೀನ ಮತ್ತು ಪ್ರಯೋಜನಕ್ಕೆ ಬರದೆಂದು ನನ್ನ ಅನಿಸಿಕೆ. ರಾಜಕಿಯ ಕ್ರೀಡೆ ಇವನ್ನು ಯಾರೂ ಅಪ್‍ಡೇಟ್ ಮಾಡದೆ ಇರುವುದರಿಂದ ನಾನು ಪತ್ರಿಕಾವರದಿಯಿಂದ ಪ್ರಮುಖ ಪಕ್ಷಪಾತವಲ್ಲದ ವಿಷಯಗಳನ್ನು ತೆಗೆದುಕೊಂಡು ಹಾಕುತ್ತಿದ್ದೇನೆ. ಅದಕ್ಕಿಂತ ಉತ್ತಮವಾಗಿ ಯಾರಾದರೂ ಅಪ್‍ಡೇಟ್ ಮಾಡಿದರೆ ನನಗೆ ಸಂತೋಷ. ದಯವಿಟ್ಟು ಮಾಡಿ ತೋರಿಸಿ. Bschandrasgr (ಚರ್ಚೆ) ೧೩:೨೭, ೩೧ ಜುಲೈ ೨೦೧೭ (UTC)
ಈ ಸಮಸ್ಯೆ ಈ ಪುಟದ ಸಮಸ್ಯೆ ಮಾತ್ರ ಅಲ್ಲ. ಸದರಿ ಸಂಪಾದಕರು ಹಾಕಿರುವ, ಹಾಕುತ್ತಿರುವ ಬಹಳಷ್ಟು ಪುಟಗಳದ್ದೂ ಆಗಿದೆ. ವಿಕಿಪೀಡಿಯಾ ಅಂದರೆ ಏನು, ವಿಶ್ವಕೋಶ ಶೈಲಿ ಎಂದರೆ ಏನು ಎಂಬ ಬೇಸಿಕ್ ತಿಳುವಳಿಕೆಯಲ್ಲೇ ಸಂಪಾದಕರು ವಿಫಲರಾಗಿದ್ದಾರೆ ಅನ್ನಿಸುತ್ತದೆ. ಯಾವುದೇ ವಿಷಯ ತೆಗೆದುಕೊಂಡರೂ ಅದನ್ನು ಪ್ರಸ್ತುತಿಪಡಿಸಲು ಒಂದು ಹಂತ ಹಂತವಾದ ಶೈಲಿ ಇರುತ್ತದೆ. ಅದು ಸುದ್ದಿ ವರದಿಯಂತಿರದೇ ಭವಿಷ್ಯಕಾಲಕ್ಕೂ ಸಲ್ಲುವ ವಿಶ್ವಕೋಶ ಮಾಹಿತಿ ಶೈಲಿಯಲ್ಲಿರಬೇಕು. present continuous tenseಗಳ ಬಳಕೆ ಆಗಬಾರದು. ಸುಮ್ಮನೇ ಪತ್ರಿಕೆಗಳಿಂದ, ಅಂತರಜಾಲ ತಾಣಗಳಿಂದ ಮಾಹಿತಿ ಕಾಪಿ ಮಾಡಿ ಅದರ ವರದಿಯಂತಹ ಶೈಲಿಯನ್ನೂ ಬದಲಿಸದೇ ಇಲ್ಲಿ ಡಂಪ್ ಮಾಡುವುದು ಸರ್ವಥಾ ತಪ್ಪು. ಇಂಗ್ಲೀಶ್ ವಿಕಿಯಲ್ಲಾದರೆ ಇಷ್ಟೊತ್ತಿಗೆ ಈ ಸಂಪಾದಕರ ಮುಕ್ಕಾಲು ಭಾಗ ಪುಟಗಳು ಅಳಿಸಿಹೋಗಿರುತ್ತಿದ್ದವು. ಇದನ್ನು ಹಲವಾರು ಬಾರಿ ಎಲ್ಲಾ ಬಗೆಯಲ್ಲೂ ಉದಾಹರಣೆ ಸಮೇತ ಅವರಿಗೆ ತಿಳಿಸಿ ಹೇಳಲಾಗಿದೆ. ಆದರೂ ಸಹ ಇವರು ನಾವು ಹೇಳಿದ್ದೇ ತಪ್ಪು, ನೀವೇ ಸರಿಮಾಡಿ ಎಂಬಂತೆ ಉತ್ತರ ಕೊಡುತ್ತಿದ್ದಾರೆಯೇ ಹೊರತು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಿದ್ದಾರೆ. ಹಾಗಾಗಿ ವಿಕಿಸಮುದಾಯ ಈ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಅಗತ್ಯವಿದೆ. ಸದರಿ ಲೇಖನಕ್ಕೆ ಈಗ ತಗುಲಿಸಿರುವ ಟೆಂಫ್ಲೇಟು ಸರಿ ಇದೆ. ಕ್ಲೀನ್ ಅಪ್ ಆಗಲಿಲ್ಲದಿದ್ದರೆ, ಮುಂದೆ ಡಿಲೀಟ್ ಮಾಡಲು ಹಾಕಬಹುದು.--Vikashegde (ಚರ್ಚೆ) ೧೪:೫೦, ೩೧ ಜುಲೈ ೨೦೧೭ (UTC)
ಹೌದು. ವಿಕಾಸ್ ಅವರು ಹೇಳಿದ್ದು ಸರಿಯಾಗಿದೆ. ಆಧಾರ, ಉಲ್ಲೇಖನೀಡುವುದು ಎಂದರೆ ಪತ್ರಿಕೆಯಿಂದ ವರದಿಯನ್ನು ನಕಲು ಪಡಿಸಿ ಇಲ್ಲಿ ಹಾಕುವುದು ಅಲ್ಲ. ಬದಲಾಗಿ ಲೇಖನಕ್ಕೆ ಸೂಕ್ತವಾಗಿರುವ ಮಾಹಿತಿಯೇ ಇಲ್ಲವೇ ಅನಗತ್ಯವೇ ಎಂದು ವಿಶ್ಲೇಷಿಸಿ ವಿಶ್ವಕೋಶದ ಮಾದರಿಯಲ್ಲಿ ಬರೆದು, ಪತ್ರಿಕೆಯ ಆಧಾರವನ್ನು ನೀಡಬಹುದು.--ಗೋಪಾಲಕೃಷ್ಣ (ಚರ್ಚೆ) ೧೧:೪೫, ೮ ಆಗಸ್ಟ್ ೨೦೧೭ (UTC)Gopala Krishna A
ಉತ್ತರ- *Gopala Krishna A ಅವರಿಗೆ: ಸೊಳ್ಳೆಯ ಬಗೆಗೆ ಹೊಸ ಸಂಶೋದನೆಯನ್ನು ನೀವ ಅಗತ್ಯವಿಲ್ಲ ಎಂದು ಅಳಿಸಿದ್ದೀರಿ. ಹಾಗಿದ್ದರೆ ನೀವು ಇನ್ನು ನನ್ನ ಅಪ್ಡೇಟುಗಳನ್ನೆಲ್ಲಾ ಹೀಗೇ ನೀವು ಅಳಿಸಬಹುದು. ಏಕೆಂದರೆ ನಿಮ್ಮ ನಿರ್ಣಯಕ್ಕೆ ಕಾರಣಗಳೇ ಇಲ್ಲ. ಆದ್ದರಿಂದ ಇನ್ನು ಮೇಲೆ ನಾನು ಅಪ್ ಡೇಟ್ ಮಾಡುವುದನ್ನು ನಿಲ್ಲಿಸುತ್ತೇನೆ, ನೀವೇ ಅಪಡೇಟ್ ಮಾಡಿ; ಇಲ್ಲವೇ ಪ್ರಸ್ತುತ ವಿಷಯ, ಮತ್ತು ಈಚಿನ ವಿಜ್ಞಾನ, ಕ್ರೀಡೆ, ರಾಜಕೀಯ ವಿಷಯಗಳ ಬೆಳವಣಿಗೆಗಳ ಅಪ್‍ಡೇಟಿಂಗ್ ಕೆಲಸ ನಿಲ್ಲಿಸುತ್ತೇನೆ. ಕನ್ನಡ ವಿಕಿ ವಿಷಯದ ಕೊರತೆಯಿಂದ ಬಡವಾದರೂ ನಿಮಗೆ ಚಿಂತೆ ಇಲ್ಲ ಎಂದಾಯಿತು, ಇದಕ್ಕೆ ಏನು ಹೇಳಬೇಕೆಂದು ತಿಳಿಯದು, ಏಕೆಂದರೆ ಹೊಸ ಸಂಶೋದನೆಯ ವಿಷಯ ಕನ್ನಡಕ್ಕೆ ಅನಗತ್ಯ ಎಂದಂತಾಯಿತು. ಇದೇ ಬಗೆಯ ಕಾರಣಕ್ಕೆ ತಮಿಳುನಾಡು ಸರ್ಕಾರ ಪುಟವನ್ನು ನಾನು ಅಪ್‍ಡೇಟ್‍ ಮಾಡುವುದನ್ನು ನಿಲ್ಲಿಸಿದೆ, ಅದು ಹಳೆಯ ಮುಖ್ಯಮಂತ್ರಿಯ ಹೆಸರನ್ನೇ ಹೊಂದಿದೆ, ಆದರೆ ಅದನ್ನು ತಿದ್ದಿದವರು ಅಪಡೇಟ್ ಬಗ್ಗೆ ಕಿಂಚತ್ತು ಯೋಚಿಸಿಲ್ಲ ಎನ್ನವುದು ವಿಷಾದದ ಸಂಗತಿ. ನಿಮ್ಮಿಂದ ಕನ್ನಡ ವಿಕಿ ಚೆನ್ನಾಗಿ ಬೆಳೆಯಲಿ. ವಿಜ್ಞಾನದ ಹೊಸ ಸಂಶೋದನೆಗಳು ಅನಗತ್ಯ ಎನ್ನುವ ವಿಚಾರ ಅಧ್ಭುತವಾದುದು! ನೀವು ಪರೋಕ್ಷವಾಗಿ ನನ್ನನ್ನು ಹೊರ ತಳ್ಳುತ್ತಿದ್ದೀರಿ,-ವಿಶ್ರಾಂತಿ ನೀಡುತ್ತಿದ್ದೀರಿ; ಧನ್ಯವಾದಗಳು.Bschandrasgr (ಚರ್ಚೆ) ೧೦:೫೯, ೨ ಆಗಸ್ಟ್ ೨೦೧೭ (UTC)
ನಾನು ನಿಮ್ಮನ್ನು ಪರೋಕ್ಷವಾಗಿ ಹೊರ ತಳ್ಳುತ್ತಿಲ್ಲ. ನಿಮಗೆ ಹಾಗೇನಾದರೂ ಅನಿಸಿದರೆ ದಯವಿಟ್ಟು ಕ್ಷಮಿಸಿ. ನಾನು ಅದನ್ನು ಅಳಿಸಿದ್ದು ಏಕೆಂದರೆ ಅದೊಂದು ಪತ್ರಿಕಾ ವರದಿ. ಅದನ್ನು ಕಾಪಿ ಮಾಡಿ ಲೇಖಕರು ಇಲ್ಲಿ ಹಾಕಿದ್ದಾರೆ ಎಂದು. ವಿಕಿಪೀಡಿಯ ಇರುವುದು ಪತ್ರಿಕೆಗಳಿಂದ ಕಾಪಿ ಹೊಡದ ಮಾಹಿತಿ ಸೇರಿಸಲು ಇರುವ ವಿಶ್ವಕೋಶ ಅಲ್ಲ ಎಂಬುದು ನನ್ನ ಅನಿಸಿಕೆ. ಇಂಗ್ಲಿಷ್ ವಿಕಿಪೀಡಿಯದಲ್ಲಿ ಸೊಳ್ಳೆಯ ಬಗ್ಗೆ ಲೇಖನ ಇದೆ. ಇದನ್ನು ವೀಕ್ಷಿಸಿ. ಅದು ಅಪ್‌ಡೇಟ್ ಆಗುತ್ತಲೇ ಇದೆ. ಎಲ್ಲಾ ವಿಕಿಯವರು ಉತ್ತಮವಾಗಿ ವಿಷಯ ಸೇರಿಸುತ್ತಿರುವಾಗ ನಾವು ಕನ್ನಡದವರು ಕೇವಲ ಪತ್ರಿಕೆಯಿಂದ ಕಾಪಿ ಹೊಡೆಯುವುದು ಎಷ್ಟು ಉತ್ತಮ? ಪತ್ರಿಕೆಗಳಲ್ಲಿ ಕೊಡುವ ವಿಷಯಗಳು ಎಲ್ಲಾ ಸಂದರ್ಭಗಳಲ್ಲಿ ನಿಜವಾಗಿರುವುದೂ ಇಲ್ಲ. ಅದಕ್ಕಾಗಿಯೇ ವಿಕಿಪೀಡಿಯದಲ್ಲಿ ಬರೆಯುವಾಗ ಒಂದು ವಿಷಯದ ಬಗ್ಗೆ ಸಂಶೋಧಿಸಿ ಬರೆಯುತ್ತಾರೆ. ಅದಕ್ಕಾಗಿ ಸರಿಯಾದ ಉಲ್ಲೇಖಗಳನ್ನು ಕೊಡುತ್ತಾರೆ. ಇದು ನನ್ನ ಅನಿಸಿಕೆ. ನೀವು ನನ್ನಿಂದ ತುಂಬಾ ಹಿರಿಯರು ಆದ್ದರಿಂದ ನಿಮ್ಮ ಮಾತಿಗೆ ಬೆಲೆ ಕೊಟ್ಟು ಮಾಹಿತಿಯನ್ನು ಪುನಃ ಸೇರಿಸುತ್ತೇನೆ. --ಗೋಪಾಲಕೃಷ್ಣ (ಚರ್ಚೆ) ೧೩:೨೯, ೨ ಆಗಸ್ಟ್ ೨೦೧೭ (UTC)
ನಾನು ಮೊದಲಿಂದಲೂ ಹೇಳುತ್ತಿರುವುದು, ಪತ್ರಿಕೆಯಲ್ಲಿ ಬರುವ ಕೆಲವು ವಿಷಯಗಳು ಸಂಕ್ಷಿಪ್ತವಾಗಿದ್ದು ಪೂರ್ವಾಗ್ರವಿಲ್ಲದ ವಿಷಯ ಮಾತ್ರಾ ನಿರೂಪನೆಯಾಗಿದ್ದು, ಅದು ಸಾರ್ವಜನಿಕವಾಗಿ ಕಾಪಿರೈಟ್ ಇಲ್ಲದ ವಿಷಯವಾಗಿದ್ದರೆ ಅದರ ಒಕ್ಕಣೆ ಬದಲಾಯಿಸುವುದು ಹೇಗೆ? ಅದು ವಿಕಿ ಮಾಹಿತಿಗೆ ಅದರ ಭಾಷೆಗೆ ಸರಿ ಇದ್ದು ಜನರಿಗೆ ಉಪಯೋಗವಾಗುವ ವಿಷಯವಾಗಿದ್ದರೆ ಏಕೆ ತೆಗೆದುಕೊಳ್ಳಬಾರದು? ವಿಕಿ ನಿಯಮಕ್ಕೆ ಹೊಂದುವಂತಿದ್ದರೆ, ಪತ್ರಿಕೆಯಲ್ಲಿಕೊಟ್ಟಿದೆ ಎಂದರೆ ಅದನ್ನು ಹಾಗೆಯೇ ತೆಗೆದುಕೊಳ್ಳಬಾರದು ಎಂಬ ನಿಯಮ ಇದೆಯೇ? ಇಂಗ್ಲಿಷ್ ವಿಕಿಯಲ್ಲಿ ಹತ್ತಾರು ಸಾವಿರ ಜನ ತಜ್ಞರು ಒಂದೊಂದು ವಿಷಯಕ್ಕೆ ಒಬ್ಬರಂತೆ ಸತತ ಕೆಲಸ ಮಾಡುತ್ತಾರೆ. ಆದರೆ "ಅದರಲ್ಲಿಯೂ ದೊಷಗಳಿವೆ ಸಮಗ್ರತೆ ಅಗತ್ಯ ವಿವರ" ಅನೇಕಬಾರಿ ಇರುವುದಿಲ್ಲ. ಪ್ರತಿಯೊಂದಕ್ಕೂಲಿಂಕ್ ಕೊಡುವುದರಿಂದ ಲೇಖನ ಅರ್ಥವೇ ಆಗುವುದಿಲ್ಲ.ವಿಕಿ ಓದುಗರು ಏನು ಅಪೇಕ್ಷಿಸುತ್ತಾರೆ, ಅದೂ ಮುಖ್ಯವಾಗಬೇಕು. ಉದಾ:ಇಂಗ್ಲಿಷ್ ನಲ್ಲಿ "ಪಾಕಿಸ್ತಾನದ ಹೊಸ ಪ್ರಧಾನಿ ಆಯ್ಕೆಯಾದ ತಕ್ಷಣ" ಹಳಬರನ್ನು ತೆಗೆದು, ಹೊಸಬರನ್ನು ವಿಕಿಗೆ ಹಾಕಿದ್ದಾರೆ, ಫೋಟೋ ಸಮೇತ; ಆದರೆ ಆ ಹೊಸ ಪ್ರಧಾನಿ ಯಾರು? ತಾತ್ಕಾಲಿಕವೇ ಖಾಯಂ ಇರುವವರೇ- ಈ ಯಾವ ವಿವರವೂ ಇಲ್ಲ; ಯಾಕೆ ಬೇಕು ಆ ಬಗೆಯ ಅಸ್ಪಷ್ಟ, ವಿಷಯ ನಿರೂಪಣೆ, ನೀವೂ ಅದನ್ನೇ ನನಗೆ ಅನುಸರಿಸಲು ಹೇಳಿದರೆ, ಅಸಾಧ್ಯ! ಕುರುಡು ಅನುಕರಣೆ ಅನುಸರಣೆಗೆ ನಾನು ಸರ್ವಥಾ ವಿರೋಧಿ/ ಅರ್ಥಹೀನ ಅನುಸರಣೆ /ಅನುಕರಣೆ ಯಾಕೆ ಬೇಕು? ವಿಚಾರ ಮಾಡಿ.ನಿಮ್ಮವ/Bschandrasgr (ಚರ್ಚೆ) ೧೪:೧೭, ೨ ಆಗಸ್ಟ್ ೨೦೧೭ (UTC)

ಈ ಮೇಲಿನ ಲೇಖನವು ವಿಶ್ವಕೋಶ ಮಾದರಿಯಲ್ಲಿ ಇಲ್ಲ. ಹಾಗೂ ಲೇಖನವು ವ್ಯಕ್ತಿಯ ಮಾಹಿತಿಯನ್ನು ಮತ್ತೆ ಮತ್ತೆ ನಕಲು ಮಾಡಲಾಗಿದೆ. ಕಾರಣಕ್ಕೆ ಮೇಲಿನ.ಲೆಖನವನ್ನು ಆಳಿಸಬಹುದು.--Lokesha kunchadka (ಚರ್ಚೆ) ೦೬:೫೨, ೧೫ ಡಿಸೆಂಬರ್ ೨೦೧೭ (UTC)

ಈ ಮೇಲಿನ ಲೇಖನ ಭಗವದ್ಗೀತೆಯ ಉಳಿದ ಎಲ್ಲಾ ಅಧ್ಯಾಯಗಳ ಲೇಖನಗಳಂತೆಯೇ ಸೃಷ್ಟಿಯಾದದ್ದು. ಇದರಲ್ಲಿ ಕೂಡ ಮೂಲದ ಜೊತೆಯಲ್ಲಿ ಕನ್ನಡದ ಅರ್ಥ ಮತ್ತು ವಿವರಣೆಗಳನ್ನು ಸೇರಿಸಬಹುದು. ಆದ್ದರಿಂದ ಅಳಿಸುವ ಅಗತ್ಯವಿಲ್ಲವೆಂದು ಭಾವಿಸುತ್ತೇನೆ. Manjappabg (ಚರ್ಚೆ) ೧೮:೩೮, ೨೦ ಡಿಸೆಂಬರ್ ೨೦೧೭ (UTC)

ಭಗವದ್ಗೀತೆಯ ಬಗ್ಗೆ, ಅದರ ಅಧ್ಯಾಯಗಳ ಬಗ್ಗೆ ಉಲ್ಲೇಖ ಸಹಿತ ಲೇಖನ ಸೇರಿಸಬಹುದು. ಎಲ್ಲ ಅಧ್ಯಾಯ ಸೇರಿಸಿ ಒಂದೇ ಲೇಖನ ಮಾಡಿದರೆ ಉತ್ತಮ. ವಿಮರ್ಶೆ, ವೈಯಕ್ತಿಕ ಅಭಿಪ್ರಾಯಗಳನ್ನು ಸೇರಿಸುವಂತಿಲ್ಲ ಆದರೆ ಭಗವದ್ಗೀತೆಯ ಶ್ಲೋಕಗಳನ್ನು ವಿಕಿಸೋರ್ಸ್‍ಗೆ ಸೇರಿಸಬೇಕು, ವಿಕಿಪೀಡಿಯಕ್ಕಲ್ಲ.--ಪವನಜ (ಚರ್ಚೆ) ೦೮:೩೧, ೨೫ ಡಿಸೆಂಬರ್ ೨೦೧೭ (UTC)
  • ವಿರೋಧ ಈಗಿನ ಕಾಲಮಾನದಲ್ಲಿ ಗಮನಾರ್ಹ ಸಾಧನೆ ಎನ್ನುವುದಕ್ಕೆ ಮಾನದಂಡ ನೀಡುವುದು ಬಹಳ ಕಷ್ಟ. ಸಧ್ಯಕ್ಕಂತೂ ಗೂಗಲ್ ನಲ್ಲಿ ಅತ್ಯಂತ ಹೆಚ್ಚು ಹುಡುಕಾಡಲ್ಪಡುತ್ತಿರುವ ವ್ಯಕ್ತಿ. ಇಂತಹ ಸಂಧರ್ಭದಲ್ಲಿ ಕನ್ನಡದಲ್ಲಿ ಅವರ ಬಗ್ಗೆ ಮಾಹಿತಿ ನೀಡಬೇಕಿರುವುದು ಅತ್ಯಂತ ಅವಶ್ಯಕ. ವಿಕಿಪೀಡಿಯಾ ಕೇವಲ ವಿದ್ವಾಂಸರಿಗಲ್ಲದೆ, ಜನ ಸಾಮಾನ್ಯರಿಗೂ ವಿಷಯ ತಿಳಿಸಬೇಕಾಗಿದೆ. ಈ ಮೂಲಕ ಹೆಚ್ಚು ಜನರು ವಿಕಿಪೀಡಿಯಾ ಒದುವಂತೆ ಮಾಡಬಹುದು. ಆದರೆ ಇದನ್ನು ರಂಜನೀಯ ಮಾಡಬೇಕೆಂದು ಹೇಳುತ್ತಿಲ್ಲ. ಆದರೆ ಜನ ಸಾಮಾನ್ಯರು ಕೇಳುವ ಎಲ್ಲಾ ವಿಷಯಗಳು ವಸ್ತು ನಿಷ್ಟವಾಗಿ ಇದರಲ್ಲಿ ಇರಬೇಕು. ಆದ್ದರಿಂದ ಈ ಪುಟ ಇರಬೇಕೆಂದು ನನ್ನ ಅಭಿಪ್ರಾಯ. Chetan (ಚರ್ಚೆ) ೦೫:೪೬, ೨೨ ಫೆಬ್ರುವರಿ ೨೦೧೮ (UTC)
ಚಲನಚಿತ್ರ ತಾರೆಯರು ಕನಿಷ್ಟ ೫ ಚಲನಚಿತ್ರದಲ್ಲಿ ಗಮನಾರ್ಹ ಪಾತ್ರಗಳಲ್ಲಿ ನಟಿಸಿರಬೇಕು.
ಅವರು ಕನಿಷ್ಟ ಎರಡು ರಾಜ್ಯ ಅಥವಾ ರಾಷ್ಟ್ರ ಪ್ರಶಸ್ತಿ ಪಡೆದಿರಬೇಕು ಅಥವಾ ಜನಪ್ರಿಯತೆ ಹೊಂದಿರಬೇಕು.Sangappadyamani (ಚರ್ಚೆ) ೧೨:೨೫, ೨೩ ಫೆಬ್ರುವರಿ ೨೦೧೮ (UTC)
  • ಸಮ್ಮತಿ ಗಮನಾರ್ಹತೆ ಅನ್ನುವುದು ವೈರಲ್ ವೀಡಿಯೋದಂತಹ ಸಂಗತಿಗಳಿಂದ ತೀರ್ಮಾನವಾಗದೇ ಸಾಧನೆಯಿಂದ, ಪ್ರತಿಭೆಯಿಂದ ಆಗಬೇಕಿದೆ. ವಿಕಿಪೀಡಿಯಾ ರೋಚಕತೆಯ ಜನಪ್ರಿಯತೆಯ ಹಿಂದೆ ಹೋಗದೆ ವಿಶ್ವಾಸಾರ್ಹತೆ ಮತ್ತು ಗಂಭೀರತೆ ಕಾಯ್ದುಕೊಳ್ಳಬೇಕು. ಹಾಗಾಗಿ ಅಳಿಸುವಿಕೆಗೆ ನನ್ನ ಬೆಂಬಲ --Vikashegde (ಚರ್ಚೆ) ೦೭:೧೩, ೨೮ ಫೆಬ್ರುವರಿ ೨೦೧೮ (UTC)
  • ಸಮ್ಮತಿ ಗೂಗಲ್‌ ಸರ್ಚ್ ಜಾಸ್ತಿ ಇದೆ ಎಂದು ವಿಕಿಯಲ್ಲಿ ಪುಟ ತಯಾರಿಸುವುದು ಉತ್ತಮವಲ್ಲ. ನಾವು ಸರ್ಚ್‌ನ ವಿಷಯಗಳು ವಿಕಿಯ ಮಾನದಂಡಕ್ಕೆ ಹೊಂದುತ್ತಿದೆಯೇ ಎಂದು ನೋಡಿಕೊಂಡೇ ಲೇಖನ ತಯಾರಿಸುವುದು ಉತ್ತಮ. ಕೇವಲ ಎರಡು ತುಣುಕುಗಳು ಯುಟ್ಯೂಬಿನಲ್ಲಿ ಇವೆ. (ಇತರೆ ಪತ್ರಿಕಾ ಗೋಷ್ಟಿಗಳದ್ದು) ಸಿನೆಮಾ ಇನ್ನು ಬಿಡುಗಡೆಗೊಳ್ಳಲಿಲ್ಲ. ಚಿತ್ರೀಕರಣ ನಡೆಯುತ್ತಿದೆ ಅಷ್ಟೇ. ಸಿನೆಮಾ ಬಿಡುಗಡೆಯ ದಿನಾಂಕವೂ ಬಿಡುಗಡೆಯಾಗಿಲ್ಲ. ಆ ಎರಡು ವೀಡಿಯೋಗಳು ಕೇವಲ ಪ್ರಚಾರಕ್ಕಾಗಿ ಚಿತ್ರ ತಂಡ ಬಿಡುಗಡೆ ಮಾಡಿದೆ ಅಷ್ಟೇ. ಸೋಷಿಯಲ್ ಮೀಡಿಯಗಳಿಂದಾಗಿ ಅಷ್ಟು ಪ್ರಚಾರ ಸಿಕ್ಕಿತು ಹೊರತು ಗಮನಾರ್ಹ ಸಾಧನೆಯಿಂದಾಗಿ ಅಲ್ಲ. ಇರಡು ವೀಡಿಯೋಗಳಲ್ಲದೆ ಗಮನಾರ್ಹ ಸಾಧನೆ ಏನೂ ಇಲ್ಲ. ಅಳಿಸಲು ನನ್ನ ಸಮ್ಮತಿ ಇದೆ. --ಗೋಪಾಲಕೃಷ್ಣ (ಚರ್ಚೆ) ೦೮:೨೩, ೨೮ ಫೆಬ್ರುವರಿ ೨೦೧೮ (UTC)

ಈ ಮೇಲಿನ ಪುಟವು ಮೈಸೂರು ವಿಶ್ವವಿದ್ಯಾನಿಲಯದ ಪುಟದಲ್ಲಿ ಸೇರಿರುತ್ತದೆ.--Lokesha kunchadka (ಚರ್ಚೆ) ೦೬:೩೧, ೧ ಮಾರ್ಚ್ ೨೦೧೮ (UTC) ಈ ಲೇಖನವನ್ನು ಅಳಿಸಬಹುದು. Support ಬೆಂಬಲ ಮೈಸೂರು ವಿಶ್ವವಿದ್ಯಾಲಯ ಲೇಖನವು ಈಗಾಗಲೇ ಇದೆ. ಬೇರೆ ಲೇಖನದ ಅಗತ್ಯ ಇಲ್ಲ. --ಗೋಪಾಲಕೃಷ್ಣ (ಚರ್ಚೆ) ೦೮:೩೩, ೨೮ ಫೆಬ್ರುವರಿ ೨೦೧೮ (UTC)

ಮಾನಸ ಗಂಗೋತ್ರಿ ಮತ್ತು ಮೈಸೂರು ವಿಶ್ವವಿದ್ಯಾನಿಲಯ ಒಂದೇ ಅಲ್ಲ. ಮೈಸೂರು ವಿ.ವಿ.ಯ ಸ್ನಾತಕೋತ್ತರ ಕೇಂದ್ರ ಇರುವುದು ಮಾನಸ ಗಂಗೋತ್ರಿಯಲ್ಲಿ. ಮೈಸೂರು ವಿ.ವಿ.ಯಲ್ಲಿ ಅದರ ಆಢಳಿತ ಕಚೇರಿ (ಕ್ರಾಫರ್ಡ್ ಹಾಲ್), ಹಲವು ಕಾಲೇಜುಗಳು, ಸಂಶೋಧನಾ ಕೇಂದ್ರಗಳು ಎಲ್ಲ ಸೇರಿವೆ. ಮಾನಸ ಗಂಗೋತ್ರಿಯ ಬಗೆಗೆ ವಿಸ್ತೃತ ಲೇಖನ ಮಾಡುವುದು ಸರಿಯಾದ ಕ್ರಮ--ಪವನಜ (ಚರ್ಚೆ) ೧೪:೨೨, ೨೮ ಫೆಬ್ರುವರಿ ೨೦೧೮ (UTC)

ಎಸ್.ವಿ ಪರಮೇಶ್ವರ ಭಟ್ಟ ಈ ಪುಟದಲ್ಲಿ ಹೆಚ್ಚಿನ ಮಾಹಿತಿ ಇಲ್ಲ ಈ ಪುಟವನ್ನು ಕೇವಲ ಆಂಕಕ್ಕಾಗಿ ತಯಾರಿಸಿದ್ದಾರೆ. ಆದ್ದರಿಂದ ಮೇಲಿನ ಪುಟವನ್ನು ಉಳಿಸಿವುದು.--Lokesha kunchadka (ಚರ್ಚೆ) ೦೬:೦೩, ೪ ಮಾರ್ಚ್ ೨೦೧೮ (UTC)

ಲೋಕೇಶ್ ರವರೆ ನಾನು ನಿಮ್ಮ ಮೇಲಿನ ವಾದ ಈ ಪುಟವನ್ನು ಕೇವಲ ಆಂಕಕ್ಕಾಗಿ ತಯಾರಿಸಿದ್ದಾರೆ ನಾನು ಒಪ್ಪುವದಿಲ್ಲ.ಲೇಖನ ಚಿಕ್ಕದಾಗಿದ್ದರೆ ಚುಟುಕು ಎಂಬ ಟೆಂಪ್ಲೇಟ್ ಹಾಕಿ.ನೀವು ಲೇಖನದಲ್ಲಿ ಯಾವುದೇ ಟೆಂಪ್ಲೇಟ್ ಹಾಕದೆ ಅಳಿಸಲು ಹಾಕಲಾದ ಪುಟದಲ್ಲಿ ಚರ್ಚಿಸುವ ಬದಲು,ಲೇಖನದ ಚರ್ಚೆ ಪುಟದಲ್ಲಿ ಚರ್ಚಿಸಲು ವಿನಂತಿ.Sangappadyamani (ಚರ್ಚೆ) ೦೫:೨೮, ೫ ಮಾರ್ಚ್ ೨೦೧೮ (UTC)
ಎಸ್.ವಿ ಪರಮೇಶ್ವರ ಭಟ್ಟರು ಕನ್ನಡ ಒಬ್ಬ ಖ್ಯಾತ ಸಾಹಿತಿ. ಅವರ ಬಗ್ಗೆ ಲೇಖನ ಕನ್ನಡ ವಿಕಿಪೀಡಿಯದಲ್ಲಿ ಇರುವುದು ಅಗತ್ಯ. ಯಾರಾದರೂ ಇದನ್ನು ಪೂರ್ಣಗೊಳಿಸಿದರೆ ಉತ್ತಮ.--ಪವನಜ (ಚರ್ಚೆ) ೦೫:೫೬, ೫ ಮಾರ್ಚ್ ೨೦೧೮ (UTC)
ಎಸ್. ವಿ. ಪರಮೇಶ್ವರ ಭಟ್ಟ ಲೇಖನ ಇದೆ. ಎಸ್.ವಿ ಪರಮೇಶ್ವರ ಭಟ್ಟ ಪುಟದಲ್ಲಿ ಪುನರ್ನಿರ್ದೇಶನ ಕೊಂಡಿ ಹಾಕಿದ್ದೇನೆ.--ಪವನಜ (ಚರ್ಚೆ) ೦೬:೦೧, ೫ ಮಾರ್ಚ್ ೨೦೧೮ (UTC)
  • ಈ ಲೇಖನ ಗಮನಾರ್ಹತೆ ಹೊಂದಿಲ್ಲ.Sangappadyamani (ಚರ್ಚೆ) ೧೩:೨೮, ೫ ಮಾರ್ಚ್ ೨೦೧೮ (UTC)
ಈ ಲೇಖನವನ್ನು ವಿಕಿಪೀಡಿಯ:Criteria_for_speedy_deletion#A7 ಆದಾರದ ಮೇಲೆ ಅಳಿಸಿಹಾಕಲಾಗಿದೆ. ★ Anoop / ಅನೂಪ್ © ೧೬:೦೨, ೫ ಮಾರ್ಚ್ ೨೦೧೮ (UTC)
ಮತ್ತೆ ಲೇಖನ ರಚಿಸಲಾಗಿದೆ.Sangappadyamani (ಚರ್ಚೆ) ೦೧:೪೭, ೭ ಮಾರ್ಚ್ ೨೦೧೮ (UTC)

ಈ ಮೇಲಿನ ಪುಟವನ್ನು ಬೇರೆ ಲೇಖನದಿಂದ ನಕಲು ಮಾಡಿ ಹಾಕಿದ್ದಾರೆ--Lokesha kunchadka (ಚರ್ಚೆ) ೦೫:೪೭, ೧೮ ಆಗಸ್ಟ್ ೨೦೧೮ (UTC)

ಈ ಪುಟವನ್ನು ಆರು ವರ್ಷಗಳ ಹಿಂದೆ ಆರಂಭಿಸಲಾಗಿದೆ. ಸಾವಿರಾರು ಜನರು ಓದಿದ್ದಾರೆ. ಅವರು ಯಾರಿಗೂ ಕಾಣದ ದೋಷ ವಿಕಾಸ ಹೆಗಡೆಯವರಿಗೆ ಕಾಣುತ್ತದೆ- ಇದು ಅವರ ಪೂರ್ವಾಗ್ರಹದ ದೊಷವಿರಬುದೆಂದು ಅನುಮಾನವಾಗುತ್ತದೆ. ಅದೇರೀತಿ ವಿಕಿಸೋರ್ಸ್ನಲ್ಲಿ ಸರ್ಕಾರದ ಹಕ್ಕಿನಲ್ಲಿರವ "ಮಂಕುತಿಮ್ಮನ ಕಗ್ಗ" ಪುಟಕ್ಕೆ ಸರಿಯಾಗಿ ಕಾಪಿರೈಟ್ ಜ್ನಾಬವಿಲ್ಲದೆ ತಕರಾಯು ಹಾಕಿ ಆ ಪುಟವನ್ನು ರದ್ದು ಮಾಡಿಸಿದರು.

ಉದಾಹರಣೆಗೆ
ಕೃತಿಸ್ವಾಮ್ಯ ವಿಚಾರ- (ಸರ್ಕಾರದ ಕಾಪಿರೈಟ್-ವಿಕಿಸೋರ್ಸಿಗೆ ಹಾಕಿದ ಪಠ್ಯ-ಗ್ರಂಥ;
  • ಕರ್ನಾಟಕ ಸರ್ಕಾರ:
  • ಪುಟ:ಅರಮನೆ.pdf/೨
  • ಪುಟ:ಯಶೋಧರ ಚರಿತೆ.pdf/೨
  • ii ARAMANE A Novel, written by Kum. Veerabhadrappa, Published by Manu Baligar, Director, Department of Kannada and Culture, Kannada Bhavana, J.C.Road, Bengaluru ­ 560 002. ಈ ಆವೃತ್ತಿಯ ಹಕ್ಕು : ಕರ್ನಾಟಕ ಸರ್ಕಾರ ಮುದ್ರಿತ ವರ್ಷ ಪ್ರತಿಗಳು ಪುಟಗಳು ಬೆಲೆ 2011 1000 XXXII + 714 ರೂ. 150/-
  • ರಕ್ಷಾಪುಟ ವಿನ್ಯಾಸ : ಕೆ. ಚಂದ್ರನಾಥ ಆಚಾರ್ಯ ಮುದ್ರಕರು : ಮೆ|| ಮಯೂರ ಪ್ರಿಂಟ್ ಆ್ಯಡ್ಸ್ ನಂ. 69, ಸುಬೇದಾರ್‍ಛತ್ರಂ ರೋಡ್ ಬೆಂಗಳೂರು - 560 020 ದೂ : 23342724
  • ಇದನ್ನು ವಿಕಿಸೋರ್ಸಿಗೆ ಹಾಕಲು ಅವಕಾಶವಿದ್ದರೆ.,ನಾನು ಹಾಕಿದ- 'ಮಂಕುತಿಮ್ಮನ ಪದ್ಯ ಮತ್ತು ಅರ್ಥ'ವಿರುವ ಅದೇ ಕರ್ನಾಟಕ ಸರ್ಕಾರದ ಸ್ವಾಮ್ಯದ ಪಠ್ಯಗಳಿಗೆ ವಿ.ಹೆಗಡೆಯವರು ತಕರಾರು ಹಾಕಲು ಕಾರನವೇನು? ಅದರ ಮೊದಲ ಪುಟವನ್ನು ರದ್ದು ಮಾಡಿದೆ ಏಕೆ? ವಿಕಾಸ ಹೆಗಡೆಯವರು ಅಪರೂಪಕ್ಕೆ ಎಚ್ಚರಗೊಂಡು ಅನಗತ್ಯ ತಕರಾರು ತೆಗೆಯುವ (ಕಲ್ಲು ಹೊಡೆಯುವ)ಕೆಲಸವನ್ನು ಏಕೆ ಮಾಡುತ್ತಿದ್ದಾರೆ. ದಯವಿಟ್ಟು ಅವರು ವಿಕಿಪೀಡಿಯಾಕ್ಕೆ ಹೆಚ್ಚುಲೇಖನ ಹಾಕಿ ಅಭಿವೃದ್ಧಿ ಪಡಿಸಲಿ. ದಯವಿಟ್ಟು ಅವರು ಅಸೂಯೆಯನ್ನು ಬಿಡಲಿ ಎಂದು ಆಶಿಸುತ್ತೇನೆ.Bschandrasgr (ಚರ್ಚೆ) ೧೩:೩೭, ೭ ಡಿಸೆಂಬರ್ ೨೦೧೮ (UTC)


ದಯವಿಟ್ಟು ಬೇರೆ ಬೇರೆ ವಿಷಯಗಳನ್ನು ಬರೆಯುವಾಗ ಬೇರೆ ಬೇರೆ ವಿಭಾಗ ಮಾಡಿ ಬರೆಯಿರಿ.
ಅರಮನೆ ಮತ್ತು ಇನ್ನೂ ಹಲವು ಪುಸ್ತಕಗಳನ್ನು ಕರ್ನಾಟಕ ಸರಕಾರ ಮುಕ್ತ ಪರವಾನಗಿಯಲ್ಲಿ (ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್) ಬಿಡುಗಡೆ ಮಾಡಿದೆ. ಆ ಬಗ್ಗೆ ಸರಕಾರದ ಪ್ರಕಟಣೆ ಮತ್ತು ಆ ಪುಸ್ತಕಗಳು ಕಾಮನ್ಸ್‍ನಲ್ಲಿವೆ.--ಪವನಜ (ಚರ್ಚೆ) ೧೪:೪೨, ೭ ಡಿಸೆಂಬರ್ ೨೦೧೮ (UTC)

ಈ ಲೇಖನ ವಿಕಿಪೀಡಿಯ:ಜೀವಂತ ವ್ಯಕ್ತಿಗಳ ವ್ಯಕ್ತಿಚಿತ್ರ ಕಾರಣ ನೀಡಲಾಗಿದೆ ವ್ಯಕ್ತಿಯ ಚರ್ಚೆ ಪುಟದಲ್ಲಿ, ಆದರೆ ಅನೇಕ ರಾಜಕೀಯ, ಸಿನೆಮಾ ವ್ಯಕ್ತಿಗಳ,ಕ್ರಿಕೆಟ್ ಆಟಗಾರರ ಲೇಖನಗಳಿಗೆ ಈ ಮಾನದಂಡ ಅನ್ವಯಿಸಬೇಕಲ್ಲ.?? ತಟಸ್ಥ ಧೋರಣೆ ಯಾವುದು? ಎಲ್ಲಿದೆ ಸ್ವಲ್ಪ ತಿಳಿಸುವಿರಾ?. ಜಾಹಿರಾತು ಅಂದರೇನು? ಅಭಿವೃದ್ಧಿಯ ಹಂತದಲ್ಲಿ ಇರುವಾಗ ಅಳಿಸುವಿಕೆಗೆ ಹಾಕಿದ್ದು ತಪ್ಪು.--Lokesha kunchadka (ಚರ್ಚೆ) ೨೩:೧೬, ೮ ಡಿಸೆಂಬರ್ ೨೦೧೮ (UTC)

ಉತ್ತರ
@Lokesha kunchadkaರವರೆ ಇಲ್ಲಿ ಚರ್ಚೆ ನಡೆಯುತ್ತಿರುವದು ಗೋಪಾಲಕೃಷ್ಣ ದೇಲಂಪಾಡಿ ಪುಟದ ಬಗ್ಗೆ ಮಧ್ಯದಲ್ಲಿ ರಾಜಕೀಯ, ಸಿನೆಮಾ ವ್ಯಕ್ತಿಗಳ,ಕ್ರಿಕೆಟ್ ಆಟಗಾರರ ಲೇಖನಗಳಿಗೆ ಈ ಮಾನದಂಡ ಅನ್ವಯಿಸಬೇಕಲ್ಲ ಎಂಬ ಚರ್ಚೆ ಬೇಡ ಎಂಬುವದು ನನ್ನ ಅನಿಸಿಕೆ .
  • ಅಭಿವೃದ್ಧಿಯ ಹಂತದಲ್ಲಿ ಇರುವಾಗ ಅಳಿಸುವಿಕೆಗೆ ಹಾಕಿದ್ದು ತಪ್ಪು --- ಲೇಖನ ರಚನೆ ನಂತರ ಲೇಖನ ಅಭಿವೃದ್ಧಿಯ ಹಂತದಲ್ಲಿದೆ ಎಂಬ ಟೆಂಪ್ಲೇಟ್ ಹಾಕಿರಲಿಲ್ಲ. ಒಂದು ಸಲ ಲೇಖನ ರಚಿಸಿದ ಮೇಲೆ ಅದನ್ನು ಯಾರಾದರು ತಿದ್ದಬಹುದು,ಅನಿಸಿಕೆ ತಿಳಿಸಬಹುದು.ಪುಟ ವಿಕಿಗೆ ತಕ್ಕುದಲ್ಲದ್ದಾಗಿದ್ದರೆ (speedy deletion) ವೇಗವಾದ ಅಳಿಸುವಿಕೆಗೆ ಹಾಕಬಹುದು.
  • ಜಾಹಿರಾತು ಅಂದರೇನು?--- ಲೇಖನದಲ್ಲಿ ಅಪಾರ ಸಾಧನೆ ,ಹಲವು ಪುಸ್ತಕಗಳನ್ನು ಬರೆದಿರುತ್ತಾರೆ. ,ಸಣ್ಣ ಪ್ರಾಯದಲೇ ಯೋಗಲ್ಲಿ ಅಪಾರ ಆಸಕ್ತಿ ಇದ್ದು, ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ .“ಯೋಗಾಚಾರ್ಯ”, “ಯೋಗರತ್ನ ಯಾವ ಸಂಸ್ಥೆ ಎಂದು ಎಲ್ಲೂ ಉಲ್ಲೇಖಿಸಿಲ್ಲ.
  • ಫೇಸ್ಬುಕ್ ವಿಡಿಯೋವನ್ನು ಉಲ್ಲೇಖವಾಗಿ ಬಳಸಲಾಗಿದೆ ,ಬ್ಲಾಗ್ ಮತ್ತು ಬ್ಲಾಗ್ ಮಾದರಿ ಜಾಲತಾಣಗಳಿಂದ ಮಾಹಿತಿ ಹಾಕಿ ಉಲ್ಲೇಖ ಕೊಡಲಾಗಿದೆ.೩ ಫೋಟೋಗಳನ್ನು ದೊಡ್ಡದಾಗಿ ಹಾಕಲಾಗಿದೆ ಅಗತ್ಯವಿರಲಿಲ್ಲ.೧೧ ಪ್ರಶಸ್ತಿಗಳು ಮತ್ತು ೫ ಪುಸ್ತಕಗಳಿಗೆ ಉಲ್ಲೇಖ ಇಲ್ಲ.Sangappadyamani (ಚರ್ಚೆ) ೧೯:೦೬, ೧೩ ಡಿಸೆಂಬರ್ ೨೦೧೮ (UTC)
ನಿಮಗೆ ಇಷ್ಟವಿರುವಂತೆ ಈ ಅಳಿಸುವಿಕೆ ಟೆಂಪ್ಲೆಟ್ ಸೇರಿಸಿರುವಿರಾದರೆ, ನೀವು ಕನ್ನಡದ ನೂರಾರು ಲೇಖನಗಳನ್ನು ಅಳಿಸಬಹುದು. ಹಾಗೇ ಮಾಡಬಹುದು. ಗೋಪಾಲಕೃಷ್ಣರ ಹೆಸರಿನ ಲೇಖನವನ್ನು ಪ್ರಚಾರ ದೃಷ್ಟಿಯಿಂದ ರಚಿಸಿದ್ದು ಎಂಬುದು ಟೆಂಪ್ಲೆಟ್ ಒಳಗಿದ್ದರೂ ಇದು ಲೇಖನ ಆಗದಿದ್ದಲ್ಲಿ ದಯವಿಟ್ಟು ಡಿಲಿಟ್ ಮಾಡಬಹುದು. ಆದರೆ ಹೀಗೆ ಮಾಡುವುದಾದರೆ ಅನೇಕ ಲೇಖನಗಳನ್ನೂ ಸೇರಿಸಿಕೊಳ್ಳಿ. ವಿಕಿಪೀಡಿಯ ಎಲ್ಲರೂ ಸೇರಿ ಬರೆದ ಲೇಖನಗಳನ್ನು ಹೊಂದಿರುತ್ತದೆ.--Vishwanatha Badikana (ಚರ್ಚೆ) ೦೮:೧೬, ೨ ಜನವರಿ ೨೦೧೯ (UTC)
ನಿಮಗೆ ಇಷ್ಟವಿರುವಂತೆ ಈ ಅಳಿಸುವಿಕೆ ಟೆಂಪ್ಲೆಟ್ ಸೇರಿಸಿರುವಿರಾದರೆ, ನೀವು ಕನ್ನಡದ ನೂರಾರು ಲೇಖನಗಳನ್ನು ಅಳಿಸಬಹುದು (@Vishwanatha Badikana ರವರ ಪ್ರಶ್ನೆ ). ಉತ್ತರ__ ಸರ್ ನಾನು ಅಳಿಸುವಿಕೆಗೆ ಹಾಕಲು ಮೆಲೆ ಕಾರಣಗಳನ್ನು ತಿಳಿಸಿರುವೆನು.Sangappadyamani (ಚರ್ಚೆ) ೧೮:೫೧, ೪ ಜನವರಿ ೨೦೧೯ (UTC)
ಗೋಪಾಲಕೃಷ್ಣ ದೇಲಂಪಾಡಿಯವರ ಬಗ್ಗೆ ಕನ್ನಡ ವಿಕಿಪೀಡಿಯಕ್ಕೆ ಧಾರಾಳವಾಗಿ ಲೇಖನ ಸೇರಿಸಬಹುದು. ಅವರು ಧನದಾಸೆಯಿಲ್ಲದೆ ಉಚಿತವಾಗಿ ಯೋಗ ಶಿಬಿರ ನಡೆಸಿಕೊಡುತ್ತಿದ್ದಾರೆ. ಹಲವರು ಅವರ ತರಬೇತಿಯಿಂದ ಪ್ರಯೋಜನ ಪಡೆದಿದ್ದಾರೆ. ಅವರುಗಳಲ್ಲಿ ನಾನೂ ಒಬ್ಬ. ಅವರ ಪ್ರಶಸ್ತಿಗಳಿಗೆ ಉಲ್ಲೇಖವಾಗಿ ಪ್ರಶಸ್ತಿಪತ್ರಗಳ ಫೋಟೋಗಳನ್ನು ಸೇರಿಸಿದ್ದೇನೆ.--ಪವನಜ (ಚರ್ಚೆ) ೧೭:೧೩, ೪ ಜನವರಿ ೨೦೧೯ (UTC)
@ಪವನಜರವರೆ ಪ್ರಶಸ್ತಿಗಳಿಗೆ ಉಲ್ಲೇಖವಾಗಿ ಪ್ರಶಸ್ತಿಪತ್ರಗಳ ಫೋಟೋಗಳನ್ನು ಸೇರಿಸಿದ್ದೇನೆ ಎಂದು ಈ ಮೇಲೆ ತಿಳಿಸಿದ್ದಿರಿ.ಫೋಟೋಗಳನ್ನು ಉಲ್ಲೆಖವಾಗಿ ಪರಿಗಣಿಸುವ ಬಗ್ಗೆ ವಿಕಿಪಿಡಿಯದಲ್ಲಿ ಎಲ್ಲು ಮಾಹಿತಿ ಇಲ್ಲ .ಮತ್ತೊಮ್ಮೆ ಪರಿಶಿಲಿಸಲು ಮನವಿ.Sangappadyamani (ಚರ್ಚೆ) ೧೮:೪೯, ೫ ಜನವರಿ ೨೦೧೯ (UTC)
ಗೋಪಾಲಕೃಷ್ಣ ದೇಲಂಪಾಡಿಯವರಿಗೆ ನೀಡಿದ ಬಹುತೇಕ ಪ್ರಶಸ್ತಿಗಳು ಅಂತರಜಾಲ ಇಷ್ಟು ಜನಪ್ರಿಯವಾಗುವ ಕಾಲಕ್ಕಿಂತಲೂ ಮೊದಲು. ಪ್ರಶಸ್ತಿ ನೀಡಿದ ಸಂಘ ಸಂಸ್ಥೆಗಳಿಗೆ ಜಾಲತಾಣಗಳಿಲ್ಲ. ಆ ಕಾಲದ ಪತ್ರಿಕೆಗಳೂ ದೊರೆಯುವುದಿಲ್ಲ. ಕರ್ನಾಟಕ ಸರಕಾರವು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅದಕ್ಕೆ ಅವರಲ್ಲಿರುವ ಪ್ರಶಸ್ತಿಪತ್ರ ಬಿಟ್ಟರೆ ಬೇರೆ ಯಾವುದೇ ಉಲ್ಲೇಖವಿಲ್ಲ. ಉಳಿದವುಗಳ ಕಥೆಯೂ ಹೀಗೆಯೇ. ಆದುದರಿಂದ ಪ್ರಶಸ್ತಪತ್ರಗಳ ಫೋಟೋಗಳನ್ನು ಕನ್ನಡ ವಿಕಿಪೀಡಿಯದಲ್ಲಿ ಸ್ಥಳೀಯವಾಗಿ ಅಪ್‍ಲೋಡ್ ಮಾಡಿದ್ದು. ಸಂಗಪ್ಪನವರು ಇವರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಾವೇ ಮಂಗಳೂರಿಗೆ ಹೋಗಿ ಪಡೆಯಬಹುದು. ಅವರು ಖಂಡಿತವಾಗಿಯೂ ಗಮನಾನರ್ಹ ವ್ಯಕ್ತಿಯೆಂಬುದರಲ್ಲಿ ಅನುಮಾನವಿಲ್ಲ.--ಪವನಜ (ಚರ್ಚೆ) ೧೦:೩೭, ೬ ಜನವರಿ ೨೦೧೯ (UTC)

Keep ವಿಕಿಪೀಡಿಯದಲ್ಲಿ ಅನೇಕ, ಪ್ರಖ್ಯಾತ, ಸಾವಿರಾರು ಮುಂತಾದ ಶಬ್ದಗಳನ್ನು ಬಳಸುವುದು ಸರಿಯಲ್ಲ. ಕಾರಣ ನನಗೆ ಒಬ್ಬ ವ್ಯಕ್ತಿ ಪ್ರಖ್ಯಾತ ಎಂದು ಅನಿಸಿದರೆ ಎಲ್ಲರಿಗೂ ಆ ವ್ಯಕ್ತಿ ಪ್ರಖ್ಯಾತ ಎಂದು ಅನಿಸಬೇಕೆಂದಿಲ್ಲ. ಸಾವಿರಾರು ಎಂಬುದು ನನಗೆ ತುಂಬಾ ಎಂದು ಕಂಡರೆ ಬೇರೆಯವರಿಗೆ ಅದು ಏನೂ ಅಲ್ಲ ಎಂದು ಅನಿಸಬಹುದು. ಲೇಖನದ ಮೊದಲನೇ (Lead section) ವಾಕ್ಯ Oppanna ದಿಂದ ನಕಲು ಮಾಡಿ ಹವ್ಕಕದಿಂದ ಕನ್ನಡಕ್ಕೆ ಭಾಷಾಂತರ ಮಾಡಲಾಗಿತ್ತು. ಅದನ್ನು ತೆಗೆದು ಹಾಕಿ, ಉಲ್ಲೇಖ ಸೇರಿಸಿ, ಲೇಖನವನ್ನು ಸ್ವಚ್ಚಪಡಿಸಿರುತ್ತೇನೆ. ಲೇಖನಕ್ಕೆ ಇನ್ನೂ ಹೆಚ್ಚಿನ ಉಲ್ಲೇಖಗಳನ್ನು ಸೇರಿಸಬೇಕಿದೆ ಮತ್ತು ಉತ್ತಮ ಪಡಿಸಬೇಕಾಗಿದೆ. ಸದ್ಯಕ್ಕೆ ಅಳಿಸುವುದು ಬೇಡ. ಲೇಖನದಲ್ಲಿ ಪ್ರಗತಿ ಇಲ್ಲದೇ ಹೋದರೆ, ಉಲ್ಲೇಖಗಳು ಸರಿಯಾಗಿ ಇಲ್ಲದೇ ಹೋದರೆ ಒಂದೆರಡು ತಿಂಗಳ ನಂತರ ಅಳಿಸುವಿಕೆ ಹಾಕಬುದೇನೋ. (?) --ಗೋಪಾಲಕೃಷ್ಣ (ಚರ್ಚೆ) ೦೫:೦೩, ೫ ಜನವರಿ ೨೦೧೯ (UTC)

ಕನ್ನಡ ವಿಕಿಪೀಡಿಯದಲ್ಲಿ ಗುಣಮಟ್ಟ ಅತೀ ಅಗತ್ಯ ಎಂಬುದನ್ನು ನಾನು ಹಲವು ವರ್ಷಗಳಿಂದ ಹೇಳಿಕೊಂಡು ಬಂದಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ "ಪ್ರಖ್ಯಾತ" ಎಂಬ ಪದವನ್ನು ೮೯೭ ಸಲ ಬಳಸಲಾಗಿದೆ. ಈ ಎಲ್ಲ ಲೇಖನಗಳನ್ನು ತೆರೆದು ಅವುಗಳನ್ನು ಸಂಪಾದಿಸಿ ಕನ್ನಡ ವಿಕಿಪೀಡಿಯದ ಗುಣಮಟ್ಟವನ್ನು ಉತ್ತಮಪಡಿಸಲು @Gopala Krishna A: ಅವರನ್ನು ಕೇಳಿಕೊಳ್ಳುತ್ತಿದ್ದೇನೆ.--ಪವನಜ (ಚರ್ಚೆ) ೧೭:೧೦, ೫ ಜನವರಿ ೨೦೧೯ (UTC)
ನಮ್ಮ ವೃತ್ತಿ ಬಿಟ್ಟು ಎಲ್ಲೋ ಬೇರೆ ಕಡೆ ಹೋಗುತ್ತಿದ್ದೇನೆ ಅನ್ನಿಸುತ್ತಿದೆ. ಕನ್ನಡ ವಿಕಿಪೀಡಿಯ ಸಂಪಾದನೆ ಮಾಡಬೇಕಾ? ಈಈ ವಿಚಾರಗಳನ್ನು ನಾನು ಬ್ಲಾಗಲ್ಲಿ ಬರೆದರೆ ಇನ್ನಷ್ಟು ಪ್ರಯೋಜನವಾಗುತ್ತಿತ್ತು. ಸ್ವಲ್ಪ ಆಆಲೋಚನೆ ಮಾಡಲು ಅವಕಾಶ ಮಾಡಿಕೊಟ್ಟ ಮಹಾನುಭಾವರಿಗೆ ವಂದನೆ.Vishwanatha Badikana (ಚರ್ಚೆ) ೦೮:೫೬, ೬ ಜನವರಿ ೨೦೧೯ (UTC)

ಈ ಮೇಲಿನ ಪುಟವು ಚಿಕ್ಕದಾಗಿದೆ. ಕುಕ್ಕೆ ಸುಬ್ರಹ್ಮಣ್ಯಈ ಪುಟದಲ್ಲಿ ಸೂಕ್ತ ಮಾಹಿತಿ ಇದೆ.

ಈ ಮೇಲಿನ ಲೇಖನದಲ್ಲಿ ಹಲವು ಕಡೆಯಿಂದ ಮಾಹಿತಿ ತೆಗೆದು ಕಸದಂತೆ ಹಾಕಲಾಗಿದೆ.--Lokesha kunchadka (ಚರ್ಚೆ) ೧೬:೧೪, ೨೫ ಫೆಬ್ರುವರಿ ೨೦೧೯ (UTC)

+List of Latin words with English derivatives

  • ದಯವಿಟ್ಟು ಗಮನಿಸಿ ವಿಕಿಪೀಡಿಯಾದಲ್ಲಿ ಯಾವುದೇ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿ ಪಟ್ಟಿಗಳಿಗೆ ಅವಕಾಶವಿದೆ. ಮೇಲಿನ ಒಂದು ಉದಾಹರಣೆ ಕೊಟ್ಟಿದ್ದೇನೆ ಈ ಬಗೆಯ ನೂರಾರು ಉದಾಹರಣೆ ಕೊಡಬಹುದು. ವಿಕಿಪೀಡಿಯಾದಲ್ಲಿ ಕೇವಲ ಪ್ರಬಂಧ ಮಾದರಿಯ ಲೇಖನಗಳಷ್ಟೇ ಅಲ್ಲದೆ, ಯಾವುದೇ ಮಾಹಿತಿಯ ವ್ಯವಸ್ಥಿತ ನಿರೂಪಣೆ, ಪಟ್ಟಿ, ವಿವರಗಳಿಗೆ ಅವಕಾಶವಿದೆ. ವಿಕಿಪೀಡಿಯಾ ಲೇಖನ ಮಾತ್ರಕ್ಕೆ ಸೀಮಿತವಲ್ಲ, ಮಾಹಿತಿಗಳ ಕಣಜ - ದಯವಿಟ್ಟು ತಿಳಿಯಿರಿ. ತತ್ಸಮ ತದ್ಭವಗಳ ಪಟ್ಟಿಗೆ ಅಂಕಣ ಹಾಕಿ ವಿವರಣೆ ಇದ್ದರೆ, ಅದನ್ನು ಕೊಟ್ಟರೆ, ಚಂದ ಕಾಣುವುದು. ಅವರಿಗೆ ಅದರ ಪರಿಚಯ ಇಲ್ಲದಿದ್ದರೆ ಉಳಿದವರು ಮಾಡಬಹುದು. ರದ್ದು ಮಾಡುವುದಲ್ಲ. ವಿಕಿಯ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೆ ಅನೇಕ ಮಾಹಿತಿಗಳನ್ನು ರದ್ದು ಮಾಡಲಾಗಿದೆ. ಅದರಿಂದ ಅನೇಕ ಸಂಪಾದಕರು ವಿಕಿಯನ್ನು ತೊರೆದು ಹೋಗಿದ್ದಾರೆ. ಆ ಸಂಪಾದನೆಗಳಲ್ಲಿ - ಅದರಲ್ಲಿ ದೋಷ ಕಂಡರೆ ಉಳಿದವರು ಅದನ್ನು ತಿದ್ದಿ ಬೆಳಸಿ ಸರಿಪಡಿಸಬೇಕು. ಒಬ್ಬರೇ ಲೇಖನವನ್ನು ಪೂರ್ನ ಗೊಳಿಸಬೇಕೆಂಬ ನಿಯಮಿವಿಲ್ಲ. ತಿಳಿದವರು ತತ್ಸಮ ತದ್ಭವ ಪಟ್ಟಿಗೆ ಅಗತ್ಯ ವಿವರಣೆ ಮತ್ತು ಅಂಕನ ಹಾಕಿ ಅಭಿವೃದ್ಧಿಪಡಿಸಲಿ.ರದ್ದು ಮಾಡುವ ಅಗತ್ಯ ಇಲ್ಲ. Bschandrasgr (ಚರ್ಚೆ) ೦೪:೨೨, ೧೧ ಮೇ ೨೦೧೯ (UTC)
  • ತತ್ಸಮ ತದ್ಬವ ಕನ್ನಡ ವ್ಯಾಕರಣದ ಉಪಪುಟ ಅದರಲ್ಲಿರುವ ತತ್ಸಮ ತದ್ಭವ ಗಳಿಗೆ ಉದಾಹರಣೆ ಮತ್ತು ವಿವರಣೆ ಅಗತ್ಯವಾಗಿದೆ ಎಂದ ಮಾತ್ರಕ್ಕೆ. ಅಲ್ಲಿರುವ ಆ ಪುಟದ ಕೊಂಡಿಯನ್ನು ತೆಗೆದು ಹಾಕುವುದು ಸರಿಯಲ್ಲ. ಯಾವುದೇ ಸಂಪಾದಕರು ವಿವರಣೆ ಕೊಡಬಹುದು- ಕೊಡಲು ಅವಕಾಶವಿದೆ. ಕಲವು ವಿಷಯಗಳಿಗೆ ಪಟ್ಟಿ ಮಾತ್ರಾ ಇರುವುದು. ಅದು ತಪ್ಪಲ್ಲ. ಪ್ರತಿಷ್ಠೆಯ ವಿಷಯವಾಗಿ ದುರುದ್ದೇಶದಿಂದ ತೆಗೆದರೆ ಅದು ವಿಧ್ವಂಸಕ ಕೃತ್ಯ- ಅಭಿವೃದ್ಧಿಪಡಿಸಿ ಎಂದರೆ ತೆಗೆದು ಹಾಕುತ್ತೇನೆ ಎನ್ನುವುದು ನನ್ನ ಮೇಲಿನ ದ್ವೇಷಕ್ಕೇ ಎಂದು ಭಾವಿಸಬೇಕಾಗುವುದು. ನನಗೆ ನಷ್ಟವಿಲ್ಲ, ನಿಮಗೂ ಅದು ನಷ್ಟವಿಲ್ಲ, ಕನ್ನಡ ವಿಕಿಗೇ ನಷ್ಟ- ನಿಮಗೆ ಕನ್ನಡ ವಿಕಿಗೆ ಲೇಖನಗಳು ಬರದಿದ್ದರೆ ನಷ್ಟವೇ ಇಲ್ಲ - ವಾಸ್ತವವಾಗಿ ಕನ್ನಡ ವ್ಯಾಕರಣ ಪುಸ್ತಕಗಳಲ್ಲಿ ಕೇವಲ "ತತ್ಸಮ ತದ್ಬವ" ಪಟ್ಟಿಯೇ ಇದೆ. ಅದನ್ನು ನೋಡಿಯೇ ನಾನು ಉಲ್ಲೇಖ ಹಾಕಿದ್ದೇನೆ - ಪುಟವನ್ನೂ ಹಾಕಿದ್ದೇನೆ -ದಯವಿಟ್ಟು ನೋಡಿ. ಏನೇ ಆದರೂ ಅದು ಕನ್ನಡ ವ್ಯಾಕರಣದ ಕೊಂಡಿಯ ಪುಟವಾದ್ದರಿಂದ ತೆಗೆಯಲು ನನ್ನ ವಿರೋಧವಿದೆ. ತಾವು ಈ ಕನ್ನಡ ವಿಕಿಯ ಸರ್ವಾಧಿಕಾರಿಯೇ ಎಂದು ಕೇಳಬೇಕಾಗುವುದು. ಬೇರೆಯವರ ಅಭಿಪ್ರಾಯಕ್ಕೆ ಬೆಲೆ ಇಲ್ಲವೇ? ವಂದನೆಗಳು:Bschandrasgr (ಚರ್ಚೆ) ೧೪:೩೨, ೧೭ ಮೇ ೨೦೧೯ (UTC)
  • ತತ್ಸಮ ತದ್ಭವಎಂದರೇನು ಎನ್ನುವ ವಿವರಣೆಯನ್ನು ಕೊಟ್ಟಿದೆ. ಅದನ್ನು ಬಿಟ್ಟರೆ ಉದಾಹರಣೆ ವಿನಹ ಬೇರೆ ವಿವರಣಿ ಯಾವ ಕನ್ನಡ ವ್ಯಾಕರಣದಲ್ಲೂ ಇಲ್ಲ. ಮತ್ತು ಅಗತ್ಯವೂ ಇಲ್ಲ. ದಯಮಾಡಿ ಒಂದೆರಡು ತತ್ಸಮ ತದ್ಭವ ಕ್ಕೆ- ಕೇಳುವವರೇ ವಿವರಣೆ ಬರೆದು ತೋರಿಸಲಿ. ನಂತರ ಉಳಿದವರು ವಿಸ್ತರಿಸುತ್ತಾರೆ. -Bschandrasgr (ಚರ್ಚೆ) ೦೮:೨೯, ೧೮ ಮೇ ೨೦೧೯ (UTC)
  • ತತ್ಸಮ ತದ್ಭವ ಪುಟಕ್ಕೆ ಈಗ ಕೊಟ್ಟಿರುವ ವಿವರಣೆಗಿಂತಲೂ ಹೆಚ್ಚನ ವಿವರಣೆ ನನಗೆ ಲಭ್ಯವಿರುವ ಯಾವ ವ್ಯಾಕರಣ ಗ್ರಂಥಗಳಲ್ಲಿಯೂ ಸಿಗುವುದಿಲ್ಲ. ಮತ್ತು ಅಗತ್ಯವೂ ಇಲ್ಲ. ಆದ್ದರಿಂದ ತಪ್ಪು ತಿಳುವಳಿಕೆಯೆಯಿಂದ ಹಾಕಿದ ರದ್ದು ಸೂಚನೆಯನ್ನು ತೆಗೆಯತ್ತಿದ್ದೇನೆ. ತಮ್ಮವ:Bschandrasgr (ಚರ್ಚೆ) ೧೬:೧೨, ೧೯ ಮೇ ೨೦೧೯ (UTC)

"ಚರ್ಚೆಪುಟ:ಕನ್ನಡ ವ್ಯಾಕರಣ"[ಬದಲಾಯಿಸಿ]

  • ವಿಕಾಸ ಹೆಗಡೆಯವರಿಗೆ-
  • ಆ ಚರ್ಚೆಯು ನೇರವಾಗಿ ಕನ್ನಡ ವ್ಯಾಕರಣಕ್ಕೇ ಸಂಬಂಧಪಟ್ಟಿರುವುದರಿಂದ ಅಲ್ಲಿಗೆ ಹಾಕಿದೆ. ನೀವು ಅಳಿಸುವ ಕೆಲಸದಲಲ್ಲಿ ಮತ್ತು ರದ್ದುಮಾಡುವದರಲ್ಲಿ ಬಹಳ ಕ್ರಿಯಾಶಿಲರು. ಆ ಚರ್ಚೆ ಅಲ್ಲಿ ಇರುವುದರಿಂದ ಹೊಸ ಸಂಪಾದಕರಿಗೆ ಅನಗತ್ಯ ತೊಂದರೆಕೊಡಬಾರದೆಂಬುದು ಅರಿವಾಗುವುದು. ನೀವು ಅಸುಊಯೆಯಿಂದ ಬೇರೆ ಕಡೆಯೂ ಅಳಿಸುವ ಕಾರ್ಯದಲ್ಲಿ ತೊಡಗಿರುವುದು ವಿಷಾದನೀಯ. ವಂದನೆಗಳು-Bschandrasgr (ಚರ್ಚೆ) ೦೩:೪೧, ೬ ಜೂನ್ ೨೦೧೯ (UTC)

ವರ್ಗ:ಪುಸ್ತಕ ವಿಮರ್ಶೆ[ಬದಲಾಯಿಸಿ]

  • en:Category:Literary criticism ವಿಕಾಸ ಹೆಗಡೆಯವರು ಯಾವುದೇ ತಕರಾರು ಮಾಡುವಾಗ ಸರಿಯಾಗಿ ತಿಳಿದು ವಿಚಾರ ಮಾದಿ ಮಾಡಬೇಕು. ಅವರು ಯಾವ ಆಧಾರದ ಮೇಲೆ ವಿಕಿಪೀಡಿಯಾದಲ್ಲಿ ಪುಸ್ತಕ ವಿಮರ್ಶೆಗೆ ಅವಕಾಶವಿಲ್ಲ ಎಂದರು?; ಇಂಗ್ಲಿಷ ವಿಕಿಯಲ್ಲಿ ವಿಮರ್ಶೆಗೆ ಅವಕಾಶವಿದೆ ಅದರ ಕೊಂಡಿ ಕೊಟ್ಟಿದ್ದೇನೆ. ಆವರಣ (ಕಾದಂಬರಿ)(ವಿಮರ್ಶೆ ಲೇಖನ ವ್ಯವಸ್ಥಿತವಾಗಿಲ್ಲ ನಿಜ. ಆದರೆ ವಿಕಿಯಲ್ಲಿ ಅದಕ್ಕೆ ಅವಕಾಸವಿಲ್ಲವೆಂದು ಅಜ್ಞಾನದಿಂದ ಏಕಾಏಕಿ ರದ್ದಿಗೆ ಹಾಕುವುದು ಎಷ್ಟು ಸರಿ. ಇವರ ಸ್ನೇಹಿತರು ವಿಕಿಯಲ್ಲಿ ಪಟ್ಟಿಗೆ ಅಧಿಕಪ್ರಂಗದಿಂದ ವಿಚಾರ ಮಾಡದೆ ಅವಕಾಶವಿಲ್ಲ ಎಂದರು. ಇವರಿಬ್ಬರೂ ಸರಿಯಾಗಿ ಅರಿಯದೇ ಅನಾವಶ್ಯಕ ತರಲೆ ಮಾಡುತ್ತಿರುವುದು ಮತ್ತು ರದ್ದಿಗೆ ಹಾಕುವುದು ಏಕೆ ತಿಳಿಯುವುದಿಲ್ಲ.Bschandrasgr (ಚರ್ಚೆ) ೦೫:೨೪, ೩ ಜುಲೈ ೨೦೧೯ (UTC)
  • ಸುಭಾಸ್ ಕಾಕ್ ಇವರು ಭಾರತದ ಪದ್ಮಶ್ರೀ ವಿಜೇತ, ಭಾರತೀಯ ಲೇಖಕ; ಇವರ ಬಗೆಗೆ ಲೇಖನ ಹಿಂದಿ, ಇಂಗ್ಲಿಷ್, ಮರಾಠಿ, ಮಲೆಯಾಳಿ, ತೆಲಗು ಬಾಷೆಗಳಲ್ಲಿದೆ. ಕನ್ನಡದಲ್ಲಿ ಏಕೆ ಅನಗತ್ಯ? ತಿಳಿಸಿ, - ಸಾಧ್ಯವಿದ್ದರೆ ಉತ್ತಮ ಪಡಿಸಿ.Bschandrasgr (ಚರ್ಚೆ) ೧೫:೫೧, ೮ ಮಾರ್ಚ್ ೨೦೨೦ (UTC).
Bschandrasgr ಸರ್ ಸುಭಾಸ್ ಕಾಕ್ ವಿಕಿಪೀಡಿಯಕ್ಕೆ ತಕ್ಕುದಾದ ಲೇಖನವಾಗಿದ್ದು ಸುಧಾರಣೆಯ ಅಗತ್ಯವಿದೆ. ಲೇಖನದಿಂದ ಅಳಿಸುವಿಕೆ ಟೆಂಪ್ಲೆಟ್ ತೆಗೆದಿದ್ದೇನೆ.ಧನ್ಯವಾದ.Sangappadyamani (ಚರ್ಚೆ) ೦೩:೧೦, ೯ ಮಾರ್ಚ್ ೨೦೨೦ (UTC)

ಮನೆ ಮದ್ದು[ಬದಲಾಯಿಸಿ]

  • ಜನರಿಗೆ ಉಪಯೋಗವಾಗಬಹುದು ಎಂದು ಮನೆ ಮದ್ದು ವಿವರ ಹಾಕಿದ್ದೇನೆ. ಉಲ್ಲೇಖ ಹಾಕಿದ್ದೇನೆ. ಇನ್ನು ರದ್ದು ವಿಷಯ ನಿಮ್ಮ ವಿವೇಚನೆಗೆ ಬಿಟ್ಟಿದೆ.(ಎಷ್ಟೋ ಲೇಖನಗಳು ಯಾವ ಆಧಾರ -ಉಲ್ಲೇಖವಿಲ್ಲದೆ ಇವೆ) Bschandrasgr (ಚರ್ಚೆ) ೦೭:೨೭, ೪ ಏಪ್ರಿಲ್ ೨೦೨೦ (UTC)

ಈ ಲೇಖನವನ್ನು ಅಳಿಸುವ ಬಗ್ಗೆ ನನ್ನ ವಿರೋಧವಿದೆ. ಕ್ರಿಯಾಪದಗಳು ಎಲ್ಲಾ ಭಾಷೆಯ ವ್ಯಾಕರಣದಲ್ಲಿ ಇದ್ದೇ ಇರುತ್ತದೆ, ಇದು ಅಳಿಸಿಹಾಕುವಂತಹ ವಿಷಯವಲ್ಲ. ಅಳಿಸಿಹಾಕಲು "ಅಪೂರ್ಪ ಲೇಖನ" ಅಂತ ಕಾರಣ ಕೊಡಲಾಗಿದೆ. ಬಹುಶಃ ಅದು ಅಪೂರ್ಣ ಪದದ ದೋಷ ಇರಬೇಕು. ಲೇಖನ ಅಪೂರ್ಣವಾಗಿದ್ದರೆ ಅಪೂರ್ಣ ಲೇಖನ ಟೆಂಪ್ಲೇಟನ್ನು ಬಳಸಬಹುದು. ಕ್ರಿಯಾಪದದ ಲೇಖನಗಳು ಆಂಗ್ಲ ಸೇರಿದಂತೆ ೧೩೦ಕ್ಕೂ ಹೆಚ್ಚು ಭಾಷೆ ವಿಕಿಪೀಡಿಯಗಳಲ್ಲಿವೆ. ಇದನ್ನು ಅಳಿಸುವಿಕೆ ಪಟ್ಟಿಯಿಂದ ತೆಗೆಯಲು ವಿನಂತಿಸುತ್ತೇನೆ.
AVSmalnad77 (ಚರ್ಚೆ) ೦೪:೧೬, ೧೦ ನವೆಂಬರ್ ೨೦೨೦ (IST)[reply]

ವಿಕಿಪೀಡಿಯದಲ್ಲಿ ಸೃಷ್ಟಿಸುವ ವ್ಯಕ್ತಿಯ ಹೆಸರಿನಲ್ಲಿ ಖಾತೆ ತೆರೆಯಬೇಕೆಂದು ತಪ್ಪಾಗಿ ಭಾವಿಸಿದ್ದೆ.ಹಾಗಾಗಿ ನಾನು ವಿಕಿಪೀಡಿಯದಲ್ಲಿ ಖಾತೆ ತೆರೆಯುವಾಗ dandinashiva ಎಂಬ ಹೆಸರನ್ನು ನೀಡಿದ್ದೆ. ಶಿವಕುಮಾರ್ ದಂಡಿನ ಅವರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಹಾಗೂ ಪೋಲಿಸ್ ಹುದ್ದೆಯಲ್ಲಿದ್ದು ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಲೇಖನದಲ್ಲಿ ನೀಡಿರುವ ಉಲ್ಲೇಖಗಳೆ ಅವರ ಮಹತ್ವವನ್ನು ಹೇಳುತ್ತವೆ. ಇದು ತನ್ನ ಬಗ್ಗೆ ತಾನೇ ಬರೆದುಕೊಂಡ ಲೇಖನ ಆಗಿರುವುದಿಲ್ಲ. ಹಾಗಾಗಿ ಈ ಲೇಖನವನ್ನು ವಿಕಿಪೀಡಿಯದಲ್ಲಿ ಉಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. -Dandinashiva, (ಚರ್ಚೆ), ೦೭:೩೬, ೨ ನವೆಂಬರ್ ೨೦೨೦ (UTC)

ಈ ಲೇಖನವನ್ನು ಅಳಿಸುವ ಬಗ್ಗೆ ನನ್ನ ವಿರೋಧವಿದೆ. ಉಲ್ಲೇಖಗಳು ಇನ್ನಷ್ಟು ಬೇಕಿವೆ ಎಂದು ನನಗೂ ಅನಿಸಿದೆ. ಒಬ್ಬ ವ್ಯಕ್ತಿಯ ಬಗ್ಗೆ ಬರೆಯುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ. ಕೆಲವೊಂದುಷ್ಟು ವರದಿಗಳು ಸುದ್ದಿಪತ್ರಿಕೆಗಳಲ್ಲಿ ಬಂದಿದ್ದು, ಅದನ್ನು ಉಲ್ಲೇಖಿಸಲು ನೋಡುತ್ತೇನೆ. ಕನ್ನಡ ವಿಕಿಪೀಡಿಯದಲ್ಲಿ ಇದಕ್ಕಿಂತಲೂ ಹೀನಾಯ ಪರಿಸ್ಥಿತಿಯಲ್ಲಿ ಕೆಲವೊಂದಿಷ್ಟು ಬರಹಗಳು ಇನ್ನೂ ಜೀವಂತವಾಗಿರುವುದು ವಿಪರ್ಯಾಸ! ಲೇಖನವನ್ನು ಅಪ್ಡೇಟ್ ಮಾಡುವ ಪ್ರಯತ್ನ ಮಾಡುತ್ತೇನೆ. ಹಾಗಾಗಿ, ಇದನ್ನು ಅಳಿಸುವಿಕೆ ಪಟ್ಟಿಯಿಂದ ತೆಗೆದು, ಈ ಲೇಖನವನ್ನು ವಿಕಿಪೀಡಿಯದಲ್ಲಿ ಉಳಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ.— ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Indudhar Haleangadi (ಚರ್ಚೆಸಂಪಾದನೆಗಳು)

ಅಳಿಸಿ- ಲೇಖನದ ವ್ಯಕ್ತಿಯು ಇನ್ನೂ ಚಿಕ್ಕವರಿದ್ದಾರೆ. ವಿದ್ಯಾರ್ಥಿ ರಾಜಕೀಯ ಚಟುವಟಿಕೆಗಳು ವ್ಯಾಪಕವಾಗಿದ್ದರೂ ಇನ್ನೂ ಗುರುತರವಾದ ಹೆಸರು ಮಾಡುವ ಅವಕಾಶಗಳು ಮುಂದೆ ಬರಬಹುದಾಗಿದ್ದು, ಅನಂತರ ಲೇಖನ ಖಂಡಿತ ಬರೆಯಬಹುದಾಗಿದೆ.— ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Msclrfl22 (ಚರ್ಚೆಸಂಪಾದನೆಗಳು)