ವಿಜಯನಗರ ಸಾಮ್ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೨ ನೇ ಸಾಲು: ೨೨ ನೇ ಸಾಲು:
ಸೂಚನೆ : ಹೆಚ್ಚಿನ ದಾಖಲೆಗಳಿಗೆ
ಸೂಚನೆ : ಹೆಚ್ಚಿನ ದಾಖಲೆಗಳಿಗೆ


()
==ಇತಿವೃತ್ತ==
*ರಾಜಧಾನಿ ಮೊದಲು ಪ್ರಾಯಶಃ [[ತುಂಗಭದ್ರಾ ನದಿ|ತುಂಗಭದ್ರಾ ನದಿಯ]] ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ [[ಆನೆಗುಂದಿ]] ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ [[ವಿಜಯನಗರ|ವಿಜಯನಗರಕ್ಕೆ]] ವರ್ಗಾಯಿಸಲಾಯಿತು. ನಗರ [[೧೪ನೇ ಶತಮಾನ|೧೪ನೇ ಶತಮಾನದಿಂದ]] [[೧೬ನೇ ಶತಮಾನ|೧೬ನೇ ಶತಮಾನದವರೆಗೆ]] ಉಚ್ಛ್ರಾಯ ಸ್ಥಿತಿಯಲ್ಲಿತ್ತು.
* ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟತುದಿಯಲ್ಲಿ. ಇದೇ ಸಮಯದಲ್ಲಿ ಅದು ಕಾಲಕಾಲಕ್ಕೆ ಉತ್ತರ [[ದಖನ್]] ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಅಥವಾ [[ಬಹಮನಿ]] ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಘಟ್ಟಿಸುತ್ತಿತ್ತು. [[೧೫೬೫]] ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು.
*ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ವಿಜಯನಗರದ ಅವನತಿಯ ನಂತ್ತರ ಅಲ್ಲಿಯ ಉನ್ನತ ಸ್ಥಾನದಲಿದ್ದ ನಾಯಕ ಸಮುದಾಯದವರು ಚಿತ್ರದುರ್ಗ, ಕೆಳದಿ,ಸುರಪೂರ ಹಿಗೆ ಅನೇಕ ಸ್ತಳಕ್ಕೆ ಹೊದರು.ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಕೆಳಮುಖವಾಯಿತು.ಅಂದಿಗೇ ಗಂಡುಗಲಿ ಕುಮಾರರಾಮನ ಕನಸ್ಸು ತಟಸ್ಥವಾಯಿತು. ರಣಕಲಿ ಹೆಬ್ಬುಲಿ ಕುಮಾರರಾಮನ ಕನಸ್ಸಾಗಿದ್ದ ವಿಜಯನಗರ ನಾಯಿ ನರಿಗಳ ಕಾಡು ಪ್ರಾಣಿಗಳ ಗೃಹವಾಯಿತು. ವಿಜಯನಗರವನ್ನು ಪುನರ್ನಿರ್ಮಾಣ ಮಾಡಲಾಗಲಿಲ್ಲ. ಇಂದಿನವರೆಗೂ ಅಲ್ಲಿ ಜನವಸತಿಯಿಲ್ಲ. ಅಂದಿನ [[ಮುಸ್ಲಿಮ್]] ರಾಜ್ಯಗಳ ಸಂಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು.


== ಇತಿಹಾಸ ==
== ಇತಿಹಾಸ ==

೦೯:೫೦, ೧೨ ಅಕ್ಟೋಬರ್ ೨೦೧೮ ನಂತೆ ಪರಿಷ್ಕರಣೆ

ವಿಜಯನಗರ ಸಾಮ್ರಾಜ್ಯ:

ಇತಿಹಾಸಪ್ರಿಯ ಮಿತ್ರರೆ, ಇತ್ತೀಚೆಗೆ, ಮೈಸೂರಿನ ‘ದಸರಾ ಮಹೋತ್ಸವದ ಉಧ್ಘಾಟನಾ ಸಮಾರಂಭದಲ್ಲಿ ಸಂಸದರೊಬ್ಬರು, ತಮ್ಮ ಭಾಷಣದಲ್ಲಿ ಮೈಸೂರು ದಸರಾವನ್ನು ಆರಂಭಿಸಿದವರು ‘ಯದುವಂಶದ ದೊರೆಗಳು ಎಂದು ಪ್ರಸ್ತಾಪಿಸಿದ್ದಾರೆ. ಇತಿಹಾಸ ತಜ್ಞರಾದ ಶ್ರೀ ತಲಕಾಡು ಚಿಕ್ಕರಂಗೇಗೌಡರು “ಇದು ತಪ್ಪು ಇದನ್ನು ಆರಂಭಿಸಿದ್ದು ವಿಜಯನಗರದ ಅರಸರು. ಅದರಲ್ಲೂ ಹುಕ್ಕಬುಕ್ಕರೆಂಬ ಕುರುಬ ಸಮುದಾಯದ ಸಾಮ್ರಾಟರು ಎಂದು ಪ್ರತ್ಯುತ್ತರಿಸಿದ್ದಾರೆ. ಈ ಅಭಿಪ್ರಾಯವನ್ನು ಬೆಂಬಲಿಸಿ, ಫೇಸ್‌ಬುಕ್ ಮತ್ತು ವ್ಯಾಟ್ಸಅಪ್ ಮಾಧ್ಯಮಗಳಲ್ಲಿ ಅನೇಕರು ಸಂಸದರನ್ನು ಹೀಯಾಳಿಸಿರುವುದು ಕಂಡುಬರುತ್ತದೆ. ಒಂದು ವಿಚಾರವನ್ನು ಎಲ್ಲರೂ ಮರೆತಿದ್ದಾರೆ. ಅದೆಂದರೆ ಮೇಲೆ ಚರ್ಚಿಸಿದ ಇಬ್ಬರೂ ವ್ಯಕ್ತಿಗಳು ಅರ್ಧಸತ್ಯವನ್ನು ನುಡಿದಿರುವುದು. ಈ ವಿಷಯ ಕುರಿತು ಒಂದು ಚಿಕ್ಕ ಚರ್ಚೆ. ೧. ದಸರಾ ಹಬ್ಬದ ಮೂಲ ಕಲ್ಪನೆ ಅಂಕುರಿಸಿದ್ದು ಕುರುಬರ ಆರಾಧ್ಯದೈವ ಮೈಲಾರನ ಪರಂಪರೆಯಲ್ಲಿ. ಸಂಚಾರಿ ಪಶುಪಾಲಕರ ಸಾಂಸ್ಕೃತಿಕ ವೀರನಾಗಿದ್ದ ಮೈಲಾರನು ಮಧ್ಯ ಕರ್ನಾಟಕದ ಮೈಲಾರ ಗ್ರಾಮದ ಹತ್ತಿರ ಇರುವ ಡೆಂಕನಮರಡಿ ಎಂಬ ಕಾಡಿನಲ್ಲಿ ‘ಮಲ್ಲ ಎಂಬ ಬುಡಕಟ್ಟು ಜನಾಂಗವನ್ನು ಎದುರಿಸಿ ನಿಲ್ಲುತ್ತಾನೆ. ಇವನ ಪಶುಸಂಪತ್ತನ್ನು ಕದಿಯುತ್ತಿದ್ದ ಮಣಿಮಲ್ಲರನ್ನು ಮರ್ಧಿಸಲು ತನ್ನ ಗೊರವರ ಸೈನ್ಯದೊಂದಿಗೆ ಬೀಡುಬಿಟ್ಟು ಒಂಬತ್ತು ದಿನ ಕಾಯ್ದು ಹತ್ತನೆಯ ದಿನ ಅವರನ್ನು ವಧಿಸಿ, ಅವರ ರುಂಡಗಳೊಡನೆ ಹಿಂದಿರುಗಿ ಬಂದು ವಿಜಯೋತ್ಸವವನ್ನು ಆಚರಿಸಿಕೊಳ್ಳುತ್ತಾನೆ. ಇದೇ ನಿಜವಾದ ಐತಿಹಾಸಿಕ ‘ವಿಜಯ ದಶಮಿ. ಇದು ನಡೆದದ್ದು ಕ್ರಿ.ಶ ಎರಡನೆಯ ಶತಮಾನದಲ್ಲಿ ಎಂದು ಬಹುತೇಕ ವಿದ್ವಾಂಸರು ಒಪ್ಪಿಕೊಳ್ಳುತ್ತಾರೆ (ಪುರುಷೋತ್ತಮ ಬಿಳಿಮಲೆ. ಹಾಲಕೆನೆ, ಪುಟ ೪೮). ಈ ಕಾಲವನ್ನು ನವಶಿಲಾಯುಗದ ಪೂರ್ವಕಾಲವೆಂದು ಸೋಂಥೆಮರ್ ಹೇಳುತ್ತಾರೆ(ಸೋಂಥೆಮರ್, ೧೯೮೦, ೧೬೭). ಮಧ್ಯಭಾರತದ ಮೈಲಾರನ ಎಲ್ಲ ಕ್ಷೇತ್ರಗಳಲ್ಲಿ ವಿಜಯದಶಮಿಯ ದಿನ ಗೊರವರ ಅಣಕು ಯುದ್ಧ ಮತ್ತು ವಿಜಯೋತ್ಸವಗಳು ನಡೆಯುತ್ತವೆ. ೨. ಕ್ರಿ.ಶ. ಏಳನೆಯ ಶತಮಾನದ ಶಾಸನವೊಂದು ಇಂದಿನ ಹಂಪಿಯನ್ನು ಪಂಪಾಕ್ಷೇತ್ರವೆಂದು ಕರೆಯಲಾಗುತ್ತಿತ್ತು ಮತ್ತು ಅದು ಚಾಳುಕ್ಯ ದೊರೆಗಳ ಸೇನಾನೆಲೆಯಾಗಿ ಅಲ್ಲಿ ಸೈನಿಕರಿಗೆ ಯುದ್ಧ ತರಬೇತಿಯನ್ನು ನೀಡಲಾಗುತ್ತಿತ್ತೆಂದು ತಿಳಿಸುತ್ತದೆ. ಅದೇ ರೀತಿ ವಿಜಯನಗರದ ಸಂಗಮ(ಕುರುಬ) ವಂಶದ ದೊರೆಗಳು, ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಮೈಲಾರನ ‘ಮೀನಗುಂದಿ ಎಂಬ ಕ್ಷೇತ್ರದ ಗುಡ್ಡಕಣಿವೆಗಳ ನಾಡನ್ನು ತಮ್ಮ ಸೇನೆಯ ಒಂದು ನೆಲೆಯನ್ನಾಗಿ ಮಾಡಿಕೊಂಡಿದ್ದರೆಂದು ಇತಿಹಾಸಕಾರರು ಗುರುತಿಸುತ್ತಾರೆ. ಮೀನಗೊಂದಿ(ದೇವರಗುಡ್ಡ)ಯಲ್ಲಿ ನಡೆಯುವ ಮೈಲಾರನ ವಿಜಯೋತ್ಸವದಿಂದ ಪ್ರೇರಿತರಾದ ಸಂಗಮ ವಂಶದ ದೊರೆಗಳು ತಮ್ಮ ರಾಜಧಾನಿ ‘ವಿಜಯವಿರುಪಾಕ್ಷ ಹೊಸಪಟ್ಟಣ(ಹಂಪಿ)ದಲ್ಲಿ ಇಂದಿನ ಮಹಾನವಮಿ ದಿಬ್ಬದ ಜಾಗದಲ್ಲ್ಲಿ ದಸರಾವನ್ನು ಆರಂಭಿಸಿದರು. ಅಲ್ಲಿ ಅರಸರು ಕುಳಿತುಕೊಳ್ಳಲು ಸಣ್ಣ ದಿಬ್ಬವೊಂದನ್ನು ಕಟ್ಟಿಸಿದರು. ಮುಂದೆ ಬಂದ ಇದೇ ಕುರುಬ ವಂಶದ ಶ್ರೀಕೃಷ್ಣದೇವರಾಯ ಒರಿಸ್ಸಾ ರಾಜ್ಯವನ್ನು ಗೆದ್ದ ಕುರುವಿಗಾಗಿ, ಇಂದು ಕಾಣುವ ಬೃಹತ್ ಗಾತ್ರದ, ಕಲಾತ್ಮಕ ಮಹಾನವಮಿ ದಿಬ್ಬವನ್ನು ಕಟ್ಟಿಸಿ, ಅಲ್ಲಿ ದಸರಾ ಹಬ್ಬವನ್ನು ಆರಂಭಿಸಿ ವಿಜಯೋತ್ಸವವನ್ನು ಆಚರಿಸತೊಡಗಿದ. ಇಲ್ಲಿ ಸೇನೆಯ ಕವಾಯತು, ಕುಸ್ತಿ, ಕತ್ತಿವರಸೆ ಮೊದಲಾಸ ಸಾಹಸ ಪ್ರದರ್ಶನಗಳು, ಇಂದಿನ ಮೈಸೂರು ಅರಮನೆಯ ಆವರಣದಲ್ಲಿ ನಡೆಯುವಂತೆ ನಡೆಯುತ್ತಿದ್ದುದು ಗಮನಾರ್ಹ. ಆದರೆ ಅಂದು ಈ ಸಮಾರಂಭದ ಉತ್ಸವಮೂರ್ತಿ ‘ವಿಜಯ ವಿರುಪಾಕ್ಷನೇ ಆಗಿದ್ದ. ೩. ಮೂರನೆಯ ಹಂತದಲ್ಲಿ, ಅಂದರೆ ವಿಜಯನಗರದ ಅವಸಾನ(ಕ್ರಿ.ಶ. ೧೫೬೫)ದ ನಂತರ ಕ್ರಿ.ಶ. ೧೬೧೦ರಲ್ಲಿ ಶ್ರೀರಂಗಪಟ್ಟಣದಲ್ಲಿ ಮೊತ್ತಮೊದಲ ಬಾರಿಗೆ ಮೈಸೂರ ಅರಸ ರಾಜ ಒಡೆಯರು ದಸರಾ ಮಹೋತ್ಸವವನ್ನು ಪುನಃ ಪ್ರಾರಂಭಿಸಿದರು. ಮೈಸೂರು ಅರಸರ ಆಳ್ವಿಕೆಯಲ್ಲಿ ಶಕ್ತಿ ದೇವತೆ ಚಾಮುಂಡಿಗೆ ಪ್ರಾಶಸ್ತ್ಯವನ್ನು ಕೊಡಲಾಯಿತು. ವಿಜಯನಗರದ ಅರಸರ ಬದಲಿಗೆ ಮೈಸೂರು ಅರಸರು ಚಿನ್ನದ ಅಂಭಾರಿಯಲ್ಲಿ ಮೆರವಣಿಗೆ ನಡೆಸಿದರು. ಈ ಮೆರವಣಿಗೆಯಲ್ಲಿ ದೇವಗಣಗಳ ಸ್ಥಾನದಲ್ಲಿ ಸೈನ್ಯಶಕ್ತಿ, ಆನೆ, ಕುದುರೆ, ಒಂಟೆಗಳ ಮೆರವಣಿಗೆ, ಸೈನಿಕರ ಮೆರವಣಿಗೆಗಳು ನಡೆಯುತ್ತ ಬಂದವು. ಮೈಲಾರನ ಸದರಕಟ್ಟೆಯ ಆಸ್ಥಾನ; ನಂತರ ವಿಜಯನಗರದ ಮಹಾನವಮಿ ದಿಬ್ಬದ ಮೇಲಿನ ಸಾಮ್ರಾಟನ ಒಡ್ಡೋಲಗವು; ಮೈಸೂರು ಅರಸರ ಕಾಲದಲ್ಲಿ ಅವರ ಅರಮನೆಯ ರಾಜಾಸ್ಥಾನವನ್ನು ಪ್ರವೇಶಿಸಿತು. ಒಂಬತ್ತು ದಿನ ವೈಭವದ ದಸರಾಕ್ಕೆ ಕರ್ನಾಟಕದ ಸಾಂಸ್ಕೃತಿಕ ಲೋಕ ತನ್ನನ್ನು ಅರ್ಪಿಸಿಕೊಳ್ಳುತ್ತದೆ. ಕುಸ್ತಿ, ಸಾಹಸ ಕಲೆ, ಸಂಗೀತ ಪ್ರದರ್ಶನಗಳು ಮುಂದುವರೆದವು. ೪. ಭಾರತ ಸ್ವತಂತ್ರಗೊಂಡ ನಂತರ ಮೈಸೂರು ಸಂಸ್ಥಾನವು ಕರ್ನಾಟಕ ರಾಜ್ಯದಲ್ಲಿ ವಿಲೀನಗೊಳ್ಳುತ್ತದೆ. ಆದರೆ ದಸರಾ ಆಚರಣೆ ಮೈಸೂರು ದಸರಾ ಎಂಬ ಹೆಸರನ್ನು ಪಡೆಯುತ್ತದೆ. ಮೈಲಾರನ ಸದರ ಕಟ್ಟೆಯ ಸಭೆ, ವಿಜಯನಗರದ ಮಹಾನವಮಿ ದಿಬ್ಬದ ಸಾಮ್ರಾಟ ಸಭೆಯಾಗಿ, ನಂತರ ಮೈಸೂರು ಅರಸರ ಆಸ್ಥಾನವಾಗಿ ಈಗ ಪ್ರಜಾಪ್ರಭುತ್ವ ಕಾಲದಲ್ಲಿ, ಖಾಸಗಿ ದರ್ಭಾರಿನ ರೂಪದಲ್ಲಿ ಉಳಿದುಕೊಂಡಿದೆ. ಆದರೆ ಆಯುಧ ಪೂಜೆ ನಿಂತಿಲ್ಲ. ಅಂದಿನಿಂದ ಇಂದಿನವರೆಗೂ ಶತಶತಮಾನಗಳ ಕಾಲ ನಡೆದುಕೊಂಡು ಬಂದಿದೆ. ಮೈಲಾರ ದೇವರ ದೇವಗಣಗಳಾದ ಗೊರವರ, ಕಂಚಾವೀರರ ಪಡೆಯಂತೆ, ನಂತರದ ವಿಜಯನಗರ ಸಾಮ್ರಾಟರ ಸೈನ್ಯ-ಸೇನಾಪತಿಗಳಂತೆ, ಮೈಸೂರು ಅರಸರ ಸೇನಾಬಲದಂತೆ ಇಂದು ಗಣರಾಜ್ಯೋತ್ಸವದ ದಿನ(ಜನೆವರಿ ೨೬) ಸ್ವತಂತ್ರ ಭಾರತದ ರಾಜ್ಯಗಳ ರಾಜಧಾನಿಗಳಲ್ಲಿ ಪೋಲೀಸ್ ಪಡೆಗಳು, ಅರೆಸೇನಾಪಡೆಗಳು ಕವಾಯತು ನಡೆಸುತ್ತವೆ. ದೇಹಲಿಯ ಕೆಂಪುಕೋಟೆಯ ಮುಂದೆ ಪ್ರಧಾನಿಯ ಎದುರಿಗೆ ಸ್ವತಂತ್ರ ಭಾರತದ ಸೇನಾಪಡೆಯ ಕವಾಯತು-ಕಸರತ್ತುಗಳು ನಡೆಯುತ್ತವೆ. ಆದಿಮ ಕಾಲದ ಮೈಲಾರಲಿಂಗ, ವಿಜಯನಗರದ ಸಾಮ್ರಾಟ ಹಾಗೂ ಮೈಸೂರು ಅರಸರಂತೆ ಪ್ರಧಾನಿ-ಮುಖ್ಯಮಂತ್ರಿಗಳು ಸೇನಾಪಡೆಯ ಗೌರವವನ್ನು ಸ್ವೀಕರಿಸುತ್ತ ನಿಂತಿದ್ದಾರೆ. ಹಾಲುಮತ ಆದಿ ದೈವದ ಆಚರಣೆಯೊಂದು ಈ ನಾಡಿನ ನಾಡಹಬ್ಬವಾಗಿ ಪರಿವರ್ತನೆಗೊಳ್ಳುತ್ತ ಬಂದು, ಇಂದು ದೇಶವನ್ನೆ ವ್ಯಾಪಿಸಿರುವುದು ಸತ್ಯವಲ್ಲವೆ? ವಿಷಯ ಅದಲ್ಲ! ಯಾದವರೆಂದರೆ ಯಾರು? ದಸರಾ ಆಚರಣೆಯನ್ನು ಆರಂಭಿಸಿದ್ದು ಮೈಸೂರಿನ ಯದುವಂಶಸ್ಥರಾದ ಒಡೆಯರಲ್ಲ. ಅದನ್ನು ಆರಂಭಿಸಿದ್ದು ಕುರುಬ ರಾಜಬುಡಕಟ್ಟಿನಲ್ಲಿ ಹುಟ್ಟ್ಟಿ ಸಾಮ್ರಾಟರಾಗಿ ಆಳಿ ತಮ್ಮನ್ನು ಯಾದವರೆಂದು ಕರೆದುಕೊಂಡ ವಿಜಯನಗರದ ಅರಸರು ಎಂಬ ಸತ್ಯವನ್ನು ನಾವು ಸಾರಬೇಕಾಗಿದೆ. ೧. ಖ್ಯಾತ ಇತಿಹಾಸ ತಜ್ಞರಾದ ಸಕಲೇಶಪುರದ ಶ್ರೀಕಂಠಯ್ಯನವರ ಗುರುಗಳಾದ ಡಾ. ಟಬರ್ಟ ಅವರು, “ಹೊಯ್ಸಳರು-ವಿಜಯನಗರದ ಅರಸರು ಮತ್ತು ಮೈಸೂರ ಅರಸರ ನಡುವೆ ರಾಜಕೀಯ ಸಂಬಂಧ ಹೊರತುಪಡಿಸಿದ, ಕುಲಸಂಬಂಧವಿತ್ತು. ಆ ಮೂರೂ ಮನೆತನದವರು ಯಾದವರಾಗಿದ್ದರು ಎಂದು ಹೇಳುತ್ತಾರೆ(ಸಂಗಮರ ಕಾಲದ ಶಾಸನಗಳು, ಮುನ್ನುಡಿ). ೨. ಡಾ. ಟೇಲರ್ ಎಂಬವರು, “ಙಚಿಜಚಿvಚಿ is ಚಿ ಃಡಿಚಿhmಚಿಟಿiಛಿಚಿಟ ಟಿಚಿme oಜಿ Sheಠಿheಡಿಜs ಎಂದು ಹೇಳುತ್ತಾರೆ. ೩. ಸಂಗಮ ವಂಶದ ಒಂದನೆಯ ದೇವರಾಯನ ಅಮಾತ್ಯನಾಗಿದ್ದ ಲಕ್ಷ್ಮೀಧರಾಮಾತ್ಯನ ಕ್ರಿ.ಶ. ೧೪೧೧ರ ಕಾಲದ ಶಾಸನ ಮೊದಲನೆಯ ರಾಜವಂಶವನ್ನು “ಯದುವಂಶಂ ಎಂದೂ ಹುಕ್ಕಬುಕ್ಕರ ತಂದೆಯಾದ ಸಂಗಮ ನನ್ನು “ಯದುವಂಶಾವನೀಪಾಲ ಎಂದೂ ಕರೆದಿದೆ. ೪. ಮೇಲುಕೋಟೆಯ ಜೀಯರ ದೇವಸ್ಥಾನದ ಕೈಸಾಲೆಯ ಎಡಪಾಶ್ವದಲ್ಲಿ ನೆಟ್ಟ ಕಲ್ಲು ಶಾಸನ ಸಂಖ್ಯೆ ೧೭೯(III, ಶ್ರೀಪ ೮೯) ವಿಜಯನಗರ ಸ್ಥಾಪಕರಾದ ಹುಕ್ಕಬುಕ್ಕರು ಸಂಗಮನ ಮಕ್ಕಳು ಎಂದು ಧೃಡೀಕರಿಸುತ್ತ ಅವರು ಯಾದವರು ಅಂದರೆ ಕುರುಬರು ಎಂದು ಹೇಳುತ್ತದೆ. ೫. ದ್ವಿತೀಯ ಹರಿಹರನ ನೆಲ್ಲೂರು ದಾನಪತ್ರವು ಒಳಗೊಂಡ ವರ್ಣನೆಯು ಇಂತಿದೆ, “ಸೋಮವಂಶ್ಯಾ ಯತಃ ಶ್ಲಾಘ್ಯಾ ಯಾದವಾ ಇತಿ ವಿಶ್ರುತಾಃ | ತಸ್ಮಿನ್ ಯದುಕುಲೇ ಶ್ಲಾಘ್ಯ ಸೋಭೂಚ್ಛೀ ಸಂಗಮೇಶ್ವರಃ || (ಸೋಮವಂಶದಲ್ಲಿ ಜನಿಸಿದ್ದಕ್ಕೆ ಯಾರು ಶ್ಲಾಘನೀಯವೆನಿಸಿದರೋ, ಅಂತಹ ಪ್ರಸಿದ್ಧ ಯಾದವ ಕುಲದಲ್ಲಿ ಶ್ರೀ ಸಂಗಮೇಶ್ವರ(ಹುಕ್ಕಬುಕ್ಕರ ತಂದೆ)ನು ಆಗಿಹೋದನು.) ಹೀಗೆ ನಾನು ನೂರಾರು ದಾಖಲೆಗಳನ್ನು ನೀಡಬಲ್ಲೆ. ವಿಜಯನಗರದ ಅರಸರು ಸಹ ಯಾದವ ವಂಶಸ್ಥರೇ ಆಗಿದ್ದರು. ಮತ್ತು ದಸರಾವನ್ನು ಅವರೇ ಆರಂಭಿಸಿದರು. ಆದ್ದರಿಂದ ಸಂಸದರ ಮಾತು ಅರ್ಧ ಸತ್ಯವನ್ನು ಹೇಳುತ್ತದೆ. ಇದೋ ಚರ್ಚೆಗೆ ನಿಮ್ಮನ್ನು ಆಹ್ವಾನಿಸುತ್ತೇನೆ. ಡಾ. ಲಿಂಗದಹಳ್ಳಿ ಹಾಲಪ್ಪ ಇತಿಹಾಸ, ಸಂಸ್ಕೃತಿ ಚಿಂತಕರು ಸೂಚನೆ : ಹೆಚ್ಚಿನ ದಾಖಲೆಗಳಿಗೆ

()

ಇತಿಹಾಸ

  • ವಿಜಯ ನಗರ ಸಾಮ್ರಾಜ್ಯ ಸ್ಥಾಪನೆಯ ಬಗ್ಗೆ ಇತಿಹಾಸಕಾರರಲ್ಲಿ ಅನೇಕ ಸಿದ್ದಾoತಗಳಿವೆ.13 ನೇ ಶತಮಾನದಲ್ಲಿ(1290) ರಲ್ಲಿ ಕಂಪ್ಲಿ ರಾಜ್ಯದ ಮಹಾರಾಜನಾದ ರಾಜಾ ಕಂಪಿಲರಾಯನ ಪುತ್ರನಾದ ಗಂಡುಗಲಿ ಕುಮಾರರಾಮನ ಕನಸೆ ಈ ವಿಜಯನಗರ ಸಾಮ್ರಾಜ ಸ್ಥಾಪನೆಯಾಗಿತ್ತು ಹಾಗೂ ದಕ್ಷಿಣ ಭಾರತವನ್ನು(ಹಿಂದೂಗಳನ್ನು) ಮುಸ್ಲೀಂರ ದಾಳಿಯಿಂದ ರಕ್ಷಿಸುವುದೆ ಬಹುದೊಡ್ಡ ಗುರಿಯಾಗಿತ್ತು.
  • ಇತಿಹಾಸಕಾರರ ಪ್ರಕಾರ ವಿಜಯ ನಗರದ ಸ್ಥಾಪಕರಾದ ಹರಿಹರ (I) ಮತ್ತು ಬುಕ್ಕರಾಯ (I) ರು ಕುಮಾರರಾಮನ ಮಾವನ ಮಕ್ಕಳು ಮತ್ತು ಕಾಕತೀಯರ ಸ೦ಭ೦ಧಿಗಳು ಎಂದು ಇತಿಹಾಸದಿಂದ ತಿಳಿಯುತ್ತದೆ, ಹೊಯ್ಸಳ ಸಾಮ್ರಾಜ್ಯದ ಅವನತಿಯಿ೦ದ ಕಾಕತೀಯರು ಅಧೀನಕ್ಕೆ ಬ೦ದಿದ್ದ ಉತ್ತರ ಪ್ರಾ೦ತ್ಯಗಳ ಮಾ೦ಡಳಿಕರಾಗಿದ್ದರು.

ಹರಿಹರ (ಕ್ರಿ.ಶ.೧೩೩೬ ರಿಂದ ೧೩೫೬)

  • ಸಂಗಮನ ಐವರು ಮಕ್ಕಳಾ‌ದ ಹರಿಹರ, ಮಾರಪ್ಪ, ಮುದ್ದಪ್ಪ ಮತ್ತು ಬುಕ್ಕರಾಯರಲ್ಲಿ ಹಿರಿಯನಾದ ಹಕ್ಕ(ನಂತರ ಹರಿಹರ್) ಕ್ರಿ.ಶ. ೧೩೩೬ರಲ್ಲಿ ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ.
  • ಕೆಲವು ಇತಿಹಾಸಕಾರರ ಪ್ರಕಾರ ಹರಿಹರ (I) ಮತ್ತು ಬುಕ್ಕರಾಯ (I) ರು ಕನ್ನಡಿಗರಾಗಿದ್ದರು ಹಾಗೂ ಹೊಯ್ಸಳ ಸಾಮ್ರಾಜ್ಯದ ತುಂಗಭದ್ರಾ ಭಾಗದ ಪ್ರತಿನಿಧಿಗಳಾಗಿದ್ದು ಉತ್ತರದಿಂದ ನಿರಂತರವಾಗಿ ನಡೆಯುತ್ತಿದ್ದ ಮುಸ್ಲಿಂ ದಾಳಿಯನ್ನು ಹಿಮ್ಮೆಟ್ಟಿಸಲು ಕುಮಾರರಾಮನ ಕನಸಂತ್ತೆ ಸಾಮ್ರಾಜ್ಯವನ್ನು ಸ್ತಾಪಿಸಿದರು. ಹಕ್ಕ-ಬುಕ್ಕರು ನಾಯಕ (ಬೇಡ, ವಾಲ್ಮೀಕಿ) ಸಮುದಾಯಕ್ಕೆ ಸೇರಿದವರು[೧][೨][೩][೪].[೫][೬], ಮೂಲತಃ ಕನ್ನಕಡಿಗರು ಕನಕಗಿರಿ ಸಂಸ್ಥಾನದ ವೀರ ಕಂಪಿಲರಾಯನ ಬೀಗರು ಕುಮ್ಮಟದ ಪ್ರದೇಶದಲ್ಲಿ ನಾಯಕರು ಪ್ರಬಲವಾಗಿ ಆಡಳಿತ ಮಾಡಿದ್ದಾರೆ. ದಕ್ಷಿಣ ಭಾರತದ ಹಿಂದೂ ಸಾಮ್ರಾಜ್ಯ ಮತ್ತು ವಿಶ್ವದ ಅತೀ ಶ್ರೀಮಂತ ಬಲಿಷ್ಠ ಸಾಮ್ರಾಜ್ಯವಾಗಿದ್ದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಹಕ್ಕ-ಬುಕ್ಕರು ಕನ್ನಡಿಗರೆಂದು ಶೀಲಾ ಶಾಸನಗಳು ಮತ್ತು ಇತಿಹಾಸಕಾರರು ಹೇಳುತ್ತಾರೆ 
  • ಆದರೂ ಕೂಡ ಇತಿಹಾಸಕಾರರ ಒಮ್ಮತ ಅಭಿಪ್ರಾಯದಂತೆ ಪೂಜ್ಯ ಶ್ರೀ. ವಿದ್ಯಾರಣ್ಯರ ಸ್ಪೂರ್ತಿ ಮತ್ತು ಅನುಗ್ರಹ ಬಲದಿಂದ ಹರಿಹರ (I) ಮತ್ತು ಬುಕ್ಕರಾಯ (I) ರು ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದರು ಅವರ ರಾಜಧಾನಿ "ವಿದ್ಯಾನಗರ" ವಾಗಿತ್ತು. ಶ್ರೀ. ವಿದ್ಯಾರಣ್ಯರು ಶೃಂಗೇರಿ ಮಠದ ೧೨ನೇ ಗುರುಗಳಾಗಿದ್ದು ಇವರು ಸಹ ದಕ್ಷಿಣ ಭಾರತವನ್ನು ಮುಸ್ಲಿಂ ಸುಲ್ತಾನರ ದಾಳಿಗಳಿಂದ ರಕ್ಷಿಸುವ ಕನಸು ಕಂಡಿದ್ದರು.
    ಹಂಪೆಯ ಸ್ಮಾರಕಗಳ ಸಮೂಹ
    ವಿಜಯನಗರ
    A view of the Virupaksha complex from Hemakuta hill
    ವಿಜಯನಗರ ಸಾಮ್ರಾಜ್ಯ is located in Karnataka
    ವಿಜಯನಗರ ಸಾಮ್ರಾಜ್ಯ
    ಸ್ಥಳಹಂಪೆ, ಬಳ್ಳಾರಿ, ಕರ್ನಾಟಕ, ಭಾರತ
    ಪ್ರಕಾರSettlement
    ವಿಸ್ತೀರ್ಣ650 km2 (250 sq mi)
    Official name: Group of Monuments at Hampi
    ಪ್ರಕಾರಸಾಂಸ್ಕೃತಿಕ
    ಮಾನದಂಡi, iii, iv
    ನಾಮಾಂಕಿತ1986 (10th session)
    ಉಲ್ಲೇಖ ಸಂ.241
    Regionಏಷ್ಯಾ ಮತ್ತು ಓಷಿಯಾನಿಯಾ
    ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸಂಚರಿಸಿದ ವಿದೇಶಿ ಯಾತ್ರಿಕರ ಬರಹಗಳಿಂದ ಮತ್ತು ಇತ್ತೀಚೆಗೆ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಿಂದ ಸಾಮ್ರಾಜ್ಯದ ಚರಿತ್ರೆ, ಕೋಟೆ ಕೋತ್ತಳಗಳ ಬಗ್ಗೆ, ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ, ಮತ್ತು ವಾಸ್ತುಶಿಲ್ಪದ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ. ಇಮ್ಮಡಿ ದೇವರಾಯ ಮತ್ತು ಕ್ರಿಷ್ಣದೇವರಾಯನ ಕಾಲದಲ್ಲಿ ವಿಜಯನಗರ ಸಾಮ್ರಾಜ ದೊಢ್ಢದಾಗಿ ವಿಸ್ತಾರವಾಗಿತ್ತು. ೧೪ನೇ ಶತಮಾನದ ಆರ೦ಭದಲ್ಲಿ, ದಕ್ಷಿಣ ಭಾರತದ ಹಿ೦ದೂ ಸಾಮ್ರಾಜ್ಯಗಳಾಗಿದ್ದ ದೇವಗಿರಿಯಾದವರು, ವಾರ೦ಗಲ್ಲಿನ ಕಾಕತೀಯರು, ಮಧುರೈನ ಪಾ೦ಡ್ಯರು

    ಉಲ್ಲೇಖಗಳು

    1. "http://belagavisuddi.com/valmiki-jayanthi-belagavi-dc-meeting/". Retrieved 30 ಅಕ್ಟೋಬರ್ 2016. {{cite web}}: External link in |title= (help)
    2. http://www.janakalotishreekumararama.org/
    3. http://www.kanaja.in/ವ್ಯಾಧ-ಚರಿತೆ-ಬೇಡ-ಕುಲಮೂಲದ-ಕ-14/
    4. http://kannadamma.net/?p=130044
    5. http://www.kanaja.in/ವ್ಯಾಧ-ಚರಿತೆ-ಬೇಡ-ಕುಲಮೂಲದ-ಕ-4/
    6. http://vijaykarnataka.indiatimes.com/district/koppala/-/articleshow/45967545.cms