ಗುಳೇದಗುಡ್ಡ
Guledgudda
ಗುಳೇದಗುಡ್ದ | |
---|---|
town | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಬಾಗಲಕೋಟೆ |
Area | |
• Total | ೪.೮೭ km೨ (೧.೮೮ sq mi) |
Elevation | ೫೧೫ m (೧,೬೯೦ ft) |
Population (2001) | |
• Total | ೩೩,೯೯೧ |
• Density | ೬,೯೭೯.೬೭/km೨ (೧೮,೦೭೭.೩/sq mi) |
ಭಾಷೆ | |
• Official | ಕನ್ನಡ |
Time zone | UTC+5:30 (IST) |
PIN | 587 203 |
Telephone code | 08357 |
Vehicle registration | KA-29 |
ಗುಳೇದಗುಡ್ಡ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ತಾಲ್ಲೂಕಿನ ಒಂದು ಪಟ್ಟಣ; ಹೋಬಳಿ ಕೇಂದ್ರ ಉ.ಅ. 160 3' ಮತ್ತು ಪು.ರೇ 750 47' ಮೇಲೆ ಬಾದಾಮಿಯಿಂದ ಈಶ್ಯಾನಕ್ಕೆ 15 ಕಿಮೀ ದೂರದಲ್ಲಿದೆ; ಗುಳೇದಗುಡ್ಡ ರೋಡ್ ರೈಲು ನಿಲ್ದಾಣಕ್ಕೆ ಈ ಸ್ಥಳದಿಂದ 10 ಕಿಮೀ ದೂರ.
ಇತಿಹಾಸ[ಬದಲಾಯಿಸಿ]
ಗುಳೇದಗುಡ್ಡ ಪಟ್ಟಣ ಹಿಂದೆ ಇಲ್ಲಿರುವ ಬೆಟ್ಟದ ಮೇಲಿತ್ತು. ಈಗಲೂ ಅಲ್ಲಿ ಪಟ್ಟಣದ ಅವಶೇಷಗಳನ್ನು ಕಾಣಬಹುದು. 1580ರಲ್ಲಿ ಬಿಜಾಪುರದ ಎರಡನೆಯ ಇಬ್ರಾಹಿಂ ಆದಿಲ್ಶಹ ಇಲ್ಲಿ ಒಂದು ಕೋಟೆ ಕಟ್ಟಿಸಿದ. 1706ರಲ್ಲಿ ಒಂದು ಸುಂದರ ಜಲಾಶಯದ ದಂಡೆಯ ಮೇಲೆ ಈ ಪಟ್ಟಣದ ಸ್ಥಾಪನೆಯಾಯಿತು. 1750ರಲ್ಲಿ ಈ ಪಟ್ಟಣ ಲೂಟಿಗೆ ಒಳಗಾಯಿತು. 1787ರಲ್ಲಿ ಇದು ಟಿಪ್ಪುವಿನ ಅಧೀನಕ್ಕೆ ಬಂತು. ಅನಂತರ ಮರಾಠರು ಇದನ್ನು ಲೂಟಿ ಮಾಡಿದಾಗ ಇಲ್ಲಿಯ ನಿವಾಸಿಗಳನೇಕರು ಇಲ್ಲಿಂದ ಓಡಿಹೋದರು. ದೇಸಾಯಿ ಮನೆತನದ ಪ್ರಭಾವದಿಂದಾಗಿ ಅವರು ಮತ್ತೆ ಇಲ್ಲಿಗೆ ಬಂದು ನೆಲೆಸಿದರು. ಮತ್ತೆ ನರಸಿಂಹನೆಂಬವನು ಈ ನಗರವನ್ನು ಲೂಟಿ ಮಾಡಿದ. ಜನ ಪುನಃ ಓಡಿಹೋದರು. 1818ರಲ್ಲಿ ದೇಸಾಯಿ ಪರಿವಾರದವರ ಒತ್ತಾಯ ಮತ್ತು ಸಹಯೋಗದಿಂದಾಗಿ ಜನರಲ್ ಮನ್ರೋ ಈ ಜನ ಪುನಃ ಇಲ್ಲಿಯೇ ವಾಸ ಮಾಡಲು ಅನುಕೂಲ ಮಾಡಿಕೊಟ್ಟ . ಮರಾಠರು ಗಜೇಂದ್ರಗಡ ಯುದ್ಧದಲ್ಲಿ ಮೈಸೂರ್ ಸಾಮ್ರಾಜ್ಯದ ಟಿಪ್ಪುವಿನ ವಿರುದ್ಧ ಸೋತಾಗ ಸೋತ ಸೇಡಿನಿಂದ ಅವರು ಹಿಂತಿರಿಗುವಾಗ ಗುಳೇದ್ಗುಡ್ಡವನ್ನ ಲೂಟಿ ಮಾಡಿ ಹೋದರು ಅದೇರೀತಿ ಮೈಸೂರಿನ ದಕ್ಷಿಣ ಭಾಗವಾದ ಶ್ರೀರಂಗನಾಥ ದೇವಸ್ಥಾನವನ್ನು ಭಗ್ನಗೊಳಿಸಿದರು ಆದರಿಂದ ಗುಳೇದ್ಗುಡ್ಡ ಕೋಟೆ ನಾಶವಾಗಿದೆ ತಡಾಂತರ ಗುಳೇದಗುಡ್ಡ ಮರಾಠ ಹೇಗೂ ಮೈಸೂರು ಸಾಮ್ರಾಜ್ಯದ ಗಡಿ ಇತ್ತು ತಡನಂತರ ಮೈಸೂರಿನ ನವಾಬ್ ಹೈದರ್ ಅಲಿ ಹೇಗು ಟಿಪ್ಪು ಈ ಕೋಟೆಯನ್ನು ಜೀರ್ಣೋದ್ದಾರ ಮಾಡು ಪ್ರಯತ್ನ ಮಾಡಿದರೂ ಅದೇ ಮಂಗಳೂರ ಓಪಂಡ ವಾಗಿ ಹಣಕಸಿನ ತೊಂದರೆ ಆದ ಕಾರಣ ಕೋಟೆ ಕಾರ್ಯ ಅಪೂರ್ಣವಾಯಿತು ಅದ್ರಿತಿ ಹೈಡ್ರಬಡಿನ ನಿಜಂ ಕೂಡ ಗುಳೇದಗುಡ್ಡವನ್ನು ಆಕ್ರಮಿಸಲು ಪ್ರಯತ್ನ ಮಾಡಿದನು
ವೈಶಿಷ್ಠ್ಯಗಳು[ಬದಲಾಯಿಸಿ]
ಗುಳೇದಗುಡ್ಡ ಅಭಿವೃದ್ದಿ ಹೊಂದುತ್ತಿರುವ ಒಂದು ಪಟ್ಟಣ. ಇಲ್ಲಿ ತಯಾರಾಗುವ ಕುಪ್ಪುಸದ ಕಣಗಳು ಭಾರತದಲ್ಲೆಲ್ಲ ಪ್ರಸಿದ್ಧಿ ಪಡೆದಿವೆ. ಇಳಕಲ್ಲ ಸೀರೆ, ಅಮೀನಗಡದ ಕರದಂಟು, ಗುಳೆದಗುಡ್ಡದ ಕಣ-ಇದು ಉತ್ತರ ಕರ್ನಾಟಕದಲ್ಲಿ ಮನೆಮಾತು. ಇಲ್ಲಿ ತಯಾರಾಗುವ ಹತ್ತಿ ಮತ್ತು ರೇಷ್ಮೆ ಬಟ್ಟೆಗಳು ಸೊಲ್ಲಾಪುರ, ಮುಂಬಯಿ, ಪುಣೆ, ನಾಸಿಕ್, ಪಂಡರಾಪುರ ಅಹ್ಮದ್ನಗರಗಳಿಗೆ ಸಾಗುತ್ತವೆ.
- 1 ದೇವಾಲಯಗಳು
- A.ಶ್ರೀ ಮುಕೇಶ್ವರಿ ದೇವಾಲಯ
- B. ಬನಶ೦ಕರಿ ದೇವಾಲಯ
- C ಸಾಲೇಶ್ವರ ದೇವಸ್ಥಾನ
- D ಸಂಗನಬಸವೇಶ್ವರ ದೇವಸ್ಥಾನ
ಉಲ್ಲೇಖ[ಬದಲಾಯಿಸಿ]
??
- ವರ್ಗ??