ಸ್ಮಿತಾ ಅಮೃತರಾಜ್

ಸ್ಮಿತಾ ಅಮೃತರಾಜ್ ಸಂಪಾಜೆ ಕನ್ನಡದ ಸೃಜನಶೀಲ ಬರಹಗಾರ್ತಿ.[೧] ಸುಳ್ಯ ತಾಲೂಕಿನ ಸಂಪಾಜೆಯ ಚೆಂಬುವಿನ ಕುಯಿಂತೋಡಿನಲ್ಲಿ ವಾಸವಾಗಿದ್ದಾರೆ. ಗೃಹಿಣಿ ಮತ್ತು ಕೃಷಿಕ ಮಹಿಳೆ. ಕನ್ನಡ ಎಂ.ಎ. ಪದವೀಧರೆ. ಅಂಗಳದಂಚಿನ ಕನವರಿಕೆಗಳು, ಒಂದು ವಿಳಾಸದ ಹಿಂದೆ, ನೆಲದಾಯ ಪರಿಮಳ ಎಂಬ ಮೂರು ಲಲಿತ ಪ್ರಬಂಧಗಳು ಹಾಗೂ ಕಾಲ ಕಾಯುವುದಿಲ್ಲ, ತುಟಿಯಂಚಿನಲ್ಲಿ ಉಳಿದ ಕವಿತೆಗಳು, ಮಾತು ಮೀಟಿ ಹೋಗುವ ಹೊತ್ತು, ಅವರೆ ಚಪ್ಪರದ ಹಾಡು ಹೀಗೆ ನಾಲ್ಕು ಕವನ ಸಂಕಲನಗಳು, ಪುಸ್ತಕ ಪರಿಚಯ ಸೇರಿದಂತೆ ಒಟ್ಟು ಒಂಭತ್ತು ಪುಸ್ತಕಗಳು ಪ್ರಕಟಗೊಂಡಿವೆ. .[೨]
2021ರಲ್ಲಿ ದೆಹಲಿಯ ಸಾಹಿತ್ಯ ಅಕಾಡೆಮಿ ಆಯೋಜಿಸಿದ ಕವಿಗೋಷ್ಠಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಹೈದರಾಬಾದಿನಲ್ಲಿ ನಡೆದ ಹೊರನಾಡ ಕನ್ನಡಿಗರ ಕವಿಗೋಷ್ಠಿ, ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಹಾವೇರಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಮಂಡನೆ, ಮೈಸೂರು ದಸರಾ ಕವಿಗೋಷ್ಠಿ, ಹಾಸನದ ಹೊಯ್ಸಳೋತ್ಸವದ ಕವಿಗೋಷ್ಟಿ, ಬೆಂಗಳೂರಿನ ಲಿಟರೇಚರ್ ಪೆಸ್ಟಿವಲ್, ಬುಕ್ ಬ್ರಹ್ಮ ಲಿಟರೇಚರ್ ಪೆಸ್ಟಿವಲ್, ಮಂಗಳೂರು ಲಿಟ್ ಫೆಸ್ಟ್ನಲ್ಲಿ ಭಾಗವಹಿಸಿದ್ದಾರೆ. ಒಂದು ಕವಿತೆ, ಒಂದು ಪ್ರಬಂಧ ಮಂಗಳೂರು ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಮೈಸೂರು ಕವಿಗೋಷ್ಠಿ, ಮಡಿಕೇರಿ, ಬೆಂಗಳೂರು ಆಕಾಶವಾಣಿ ಸೇರಿದಂತೆ ಅನೇಕ ಕವಿಗೋಷ್ಠಿಗಳಲ್ಲಿ ಕವಿತೆ ವಾಚನ ಮಾಡಿದ್ದಾರೆ. ಇವರ ಕೆಲವು ಕತೆ, ಕವಿತೆ ಮತ್ತು ಪ್ರಬಂಧಗಳಿಗೆ ಬಹುಮಾನಗಳು ಸಂದಿವೆ. ಇವರ ಕೆಲ ಕವಿತೆಗಳು ಇಂಗ್ಲಿಷ್, ತೆಲುಗು, ಮತ್ತು ಮಲಯಾಳಂಗೆ ಅನುವಾದಗೊಂಡಿವೆ. ಎರಡು ಕತೆಗಳು ತಮಿಳು ಮತ್ತು ಮಲಯಾಳಂ ಭಾಷೆಗೆ ಅನುವಾದಗೊಂಡಿವೆ. ಇವರ ಕೆಲವು ಕವಿತ ಮತ್ತು ಪ್ರಬಂಧಗಳಿಗೆ ಬಹುಮಾನಗಳು ಸಂದಿವೆ.
ಇವರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಾಹಿತ್ಯ ಕೃತಿಗಳಿಗೆ ಸಂದಿವೆ. ಇವರು 2019-2022ರ ಅವಧಿಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು.
ಹುಟ್ಟು
[ಬದಲಾಯಿಸಿ]ಸ್ಮಿತಾ ರವರು 1978 ಜನವರಿ 08 ಜನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪಂಜ ಗ್ರಾಮದ ಪಳಂಗಾಯ ಮನೆಯಲ್ಲಿ ಜನಿಸಿದ ಇವರು ಕೊಡಗಿನ ಸಂಪಾಜೆ ಬಳಿಯ ಚೆಂಬುವಿನಲ್ಲಿ ವಾಸವಾಗಿದ್ದಾರೆ.
ಶಿಕ್ಷಣ
[ಬದಲಾಯಿಸಿ]ಪ್ರಾಥಮಿಕ ಶಿಕ್ಷಣವನ್ನು ಮಡಿಕೇರಿಯ ಮೇಕೇರಿ ಶಾಲೆ, ಪ್ರೌಡ ಶಿಕ್ಷಣ ಜೂನಿಯರ್ ಕಾಲೇಜು,ಮಡಿಕೇರಿ, ಪಿ.ಯು.ಸಿ.ಸಂತ ಪಿಲೋಮಿನ ಕಾಲೇಜು.ಪುತ್ತೂರು, ಪದವಿ - ನೆಹರು ಮೆಮೋರಿಯಲ್ ಕಾಲೇಜು.ಸುಳ್ಯ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ - ಮಂಗಳೂರು ಮುಕ್ತ ವಿಶ್ವವಿದ್ಯಾನಿಲಯ.
ಕೃತಿಗಳು
[ಬದಲಾಯಿಸಿ]ಕವನ ಸಂಕಲನ
[ಬದಲಾಯಿಸಿ]ಸ್ಮಿತಾ ಅವರ ಕವಿತೆಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.[೩]
- ಕಾಲ ಕಾಯುವುದಿಲ್ಲ
- ತುಟಿಯಂಚಿನಲ್ಲಿ ಉಳಿದ ಕವಿತೆಗಳು
- ಮಾತು ಮೀಟಿ ಹೋಗುವ ಹೊತ್ತು
- ಅವರೆ ಚಪ್ಪರದ ಹಾಡು
ಲಲಿತ ಪ್ರಬಂಧಗಳು
[ಬದಲಾಯಿಸಿ]- ಅಂಗಳದಂಚಿನ ಕನವರಿಕೆಗಳು
- ಒಂದು ವಿಳಾಸದ ಹಿಂದೆ[೪]
- ನೆಲದಾಯ ಪರಿಮಳ
ಕಥಾ ಸಂಕಲನ
[ಬದಲಾಯಿಸಿ]- ಹಾಯ್ ಮೆಟಾಯ್
ಅನುವಾದ
[ಬದಲಾಯಿಸಿ]- ಸಾರ್ಥ ಕಾದಂಬರಿಯ ಸಂಗ್ರಹಾನುವಾದವನ್ನು ಅರೆಭಾಷೆಗೆ ಅನುವಾದ
ಪುಸ್ತಕ ಪರಿಚಯ
[ಬದಲಾಯಿಸಿ]- ಹೊತ್ತಗೆ ಹೊತ್ತು
ಪ್ರಶಸ್ತಿಗಳು
[ಬದಲಾಯಿಸಿ]- ಮುಂಬೈಯ ಸುಶೀಲಾ ಸೀತಾರಾಮ ಶೆಟ್ಟಿ ಪ್ರಶಸ್ತಿ
- ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ
- ಕೊಡಗಿನ ಗೌರಮ್ಮ ಪ್ರಶಸ್ತಿ[೫]
- ಸಾಹಿತ್ಯ ರತ್ನ ಪ್ರಶಸ್ತಿ
- ಕಾಯಕ ರತ್ನ ಪ್ರಶಸ್ತಿ
- ಸುಳ್ಯದ ಚಂದನ ಪ್ರಶಸ್ತಿ
- ಬಿ.ಎಂ.ಶ್ರೀ ಸಾಹಿತ್ಯ ಪ್ರಶಸ್ತಿ
- ದಾರಿ ದೀಪ ಪ್ರಶಸ್ತಿ.
- ಗುರುಕುಲ ಶರಭ ಪ್ರಶಸ್ತಿ 2021
- ಅಡ್ವೈಸರ್ ಕಾವ್ಯ ಪ್ರಶಸ್ತಿ 2021
- ಸಾಭಿಮಾನಿ ಪುಸ್ತಕ ಪ್ರಶಸ್ತಿ 2021
- ಸಮರ್ಥ ಕನ್ನಡಿಗ
- ಬುದ್ದ ಬಸವ ಗಾಂಧಿ
- ಅಪ್ಪ ಪ್ರಶಸ್ತಿ
- ಡಾ. ಲತಾ ರಾಜಶೇಖರ್ ಕಾವ್ಯ ಪ್ರಶಸ್ತಿ
- ವಿಜಯಾ ವಿಷ್ಣು ಭಟ್ ದತ್ತಿಪ್ರಶಸ್ತಿ
- ಕನ್ನಡ ಪಯಸ್ವಿನಿ ಪ್ರಶಸ್ತಿ
- ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿ ಪ್ರಶಸ್ತಿ
- ಸಾಹಿತ್ಯ ಪರಿಷತ್ತಿನ ಗೌರಮ್ಮ ಹಾರ್ನಳ್ಳಿ ದತ್ತಿ ಬಹುಮಾನ
ಗೌರವ
[ಬದಲಾಯಿಸಿ]ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು.
ಉಲ್ಲೇಖ
[ಬದಲಾಯಿಸಿ]- ↑ "ಸ್ಮಿತಾ ಅಮೃತರಾಜ್". www.bookbrahma.com (in ಇಂಗ್ಲಿಷ್).
- ↑ "ಸ್ಮಿತಾ ಅಮೃತರಾಜ್ ಕವಿತೆ- ರೂಪಾಂತರ | ಅವಧಿ । AVADHI". avadhimag.in. 10 August 2020. Archived from the original on 16 ನವೆಂಬರ್ 2021. Retrieved 16 ನವೆಂಬರ್ 2021.
- ↑ "ಸ್ಮಿತಾ ಅಮೃತರಾಜ್". Prajavani.
- ↑ "ಸ್ಮಿತಾ ಅಮೃತರಾಜ್ ಅವರ ಪ್ರಬಂಧ ಸಂಕಲನ ಬಹುಮಾನಕ್ಕೆ ಆಯ್ಕೆ - Shakthi Daily". www.shakthidaily.info (in ಇಂಗ್ಲಿಷ್).
- ↑ https://vijaykarnataka.indiatimes.com/district/kodagu/smita-was-selected-gowramma-award/articleshow/48332789.cms
ಹೆಚ್ಚಿನ ಮಾಹಿತಿಗಾಗಿ ನೋಡಿ
[ಬದಲಾಯಿಸಿ]- ಸಂಪಿಗೆ ಕವಯಿತ್ರಿ ಸ್ಮಿತಾ ಅಮೃತರಾಜ್ | https://www.youtube.com/watch?v=jY1qpR6QOwU
- ಶ್ರೀಮತಿ ಸ್ಮಿತಾ ಅಮೃತರಾಜ್ ಸಂಪಾಜೆ ಕೃತಿ - ಒಂದು ವಿಳಾಸದ ಹಿಂದೆ |https://www.youtube.com/watch?v=zNGv0DtSRco
- https://www.kendasampige.com/ಸ್ಮಿತಾ-ಅಮೃತರಾಜ್-ಬರೆದ-ದಿನ
- https://sangaati.in/?p=12910 | ಸ್ಮಿತಾರವರ ಎರಡು ಕವಿತೆಗಳು
- ಸ್ಮಿತಾ ಅಮೃತರಾಜ್ | https://www.sallapa.com/2025/01/blog-post_81.html
- ಕವನ ಸುಂದರಿ: ಸ್ಮಿತಾ ಅಮೃತರಾಜ್: ಒಂದು ಖಾಲಿ ಜಾಗ |https://www.kannadaprabha.com/sanchaya/poems/2022/Jan/04/kavana-sundari-smitha-amruthraj-poem-ondu-khaali-jaaga-461491.html
- ನಸುಕು.ಕಾಮ್ | https://nasuku.com/ನುಕ್ಕುಳನ್ನು-ಹುಡ್ಕಿಕಂಡ್/