ಸದಸ್ಯ:Ramesh Doddagowdar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಪರಿಚಯ[ಬದಲಾಯಿಸಿ]

ರಮೇಶ.ಡಿ.ಕೆ ಎ೦ಬುದು ನನ್ನ ಹೆಸರು. ಶಿವಮೊಗ್ಗ ಜಿಲ್ಲೆಯಲ್ಲಿ ದಿನಾಂಕ ೧೧/೦೭/೨೦೦೦ ರಂದು ಜನಿಸಿದೆನು. ನಾನು ಜನಿಸಿದ್ದು ಶಿವಮೊಗ್ಗದಲ್ಲೆ ಆದರು, ಬೆಳೆದಿದ್ದು ಬೆಂಗಳೂರಿನಲ್ಲಿ. ನನ್ನ ತಂದೆಯ ಹೆಸರು ಕುಭೇರಪ್ಪ ಮತ್ತು ತಾಯಿಯ ಹೆಸರು ಚಂದ್ರಕಲಾ.ನಮ್ಮ ತಂದೆ- ತಾಯಿಗೆ ನಾನು ಒಬ್ಬನೆ ಮಗ, ತಂದೆ ಬೆಂಗಳೂರಿ

ಬೆಂಗಳೂರು ಅರಮನೆ

ನಲ್ಲಿರುವ ವಿದ್ಯ ಹರ್ಬ್ಸ್ ಯಂಬ ಕಂಪನಿಯಲ್ಲಿ ಮ್ಯನೇಜರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ತಾಯಿ ಗ್ರುಹಿಣಿಯಾಗಿದ್ದಾರೆ. ನನ್ನ ತಂದೆ- ತಾಯಿ ತುಂಬಾ ಶ್ರಮಪಟ್ಟು ನನ್ನನು ಸಾಕಿ- ಸಲುಹುತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಂದೆಯ ಜೊತೆ ಅಷ್ಟಾಗಿ ಹೊಂದುಕೊಳ್ಳದ ಕಾರಣ ನನ್ನ ತಾಯಿಯ ಜೊತೆಯೇ ಇರುತ್ತಿದ್ದೆಯೆಂದು ನನ್ನ ಅಜ್ಜಿ ಹೇಳಿದ್ದು ನೆನಪಿದೆ. ನಾನು ಓಂದನೆ ತರಗತಿಯವರೆಗೆ ಸಂತ ಜೊಸೆಫ ಶಾಲೆಯಲ್ಲಿ ಶಿಕ್ಷಣ ಪಡೆದೆನು. ೨-೧೦ ತರಗತಿಯವರೆಗೆ ನವೋದಯ ಏಜುಕೆಶನಲ್ ಟ್ರುಸ್ಟ್ ಶಾಲೆಯಲ್ಲಿ ಶಿಕ್ಷಣವನ್ನು ಪಡೆದು, ಎಸ್. ಎಸ್. ಎಲ್. ಸಿ. ಪರೀಕ್ಷೇಯಲ್ಲಿ ಶೇಕಡ ೯೦% ಅಂಕವನ್ನು ಪಡೆದು ಉತ್ತಿರ್ಣನಾದೆನು. ನನ್ನ ಅಂಕವನ್ನು ಕೀಳಿ ನಮ್ಮ ಸಂಭದಿಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ನಾನು ನನ್ನ ಶಾಲೆಯ ವಯಸ್ಸಿನಲ್ಲಿ ಷಾರ್ಟ್ ಪುಟ್ ಆಟದಕಲ್ಲಿ ಉತ್ತಿರ್ಣನಾಗಿದ್ದೆನು. ಓದುವುದರಲ್ಲಿಕೂಡ ನನ್ನ ಸ್ನೇಹಿತರು ಬಹಳ ಸಹಕಾರಿಯಾಗಿದ್ದರು. ನಮ್ಮ ಶಾಲೆಯ ಶಿಕ್ಷಕರಿಗೆ ಒಬ್ಬ ಒಳ್ಳೆ ವಿದ್ಯಾರ್ಥಿಯಾಗಿ ನನ್ನ ಶಾಲಾ ಶಿಕ್ಷಣವನ್ನು ಮುಗಿಸಿದೆನು.

ಶಿಕ್ಷಣ[ಬದಲಾಯಿಸಿ]

ಶಿಕ್ಷಣ ಮುಗಿದ ನಂತರ, ಮುಂದಿನ ವಿದ್ಯಬ್ಯಾಸಕ್ಕಾಗಿ ಒಂದು ಒಳ್ಳೆಯ ಕಾಲೇಜನ್ನು ಸೇರಬೇಕೆಂಬ ಉದ್ದೇಶದಿಂದ [೧]ಕ್ರೈಸ್ಟ್ ಆಕಾಡಮಿ ಕಾಲೇಜನ್ನು ಸೇರಿಕೊಂಡೆನು. ನನಗೆ ಇಷ್ಟವಾದ ಸೈನ್ಸ್ ಅನ್ನು ಪ್ರಮುಕ ವಿಷಯವನ್ನಾಗಿ ಇಟ್ಟುಕೊಂಡು ಮುಂದಿನ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದೆನು. ಕಾಲೇಜಿನಲ್ಲು ಕೂಡ ಬಹಳಷ್ಟು ಸ್ನೇಹಿತರಾದರು, ನನ್ನ ಓದಿನೊಂದಿಗೆ ಸಹಕರಿಸಿದರು. ಕಾಲೇಜಿನಲ್ಲಿ ಬಹಳಷ್ಟು ವಿದ್ಯಾರ್ಥಿಗಳಿದ್ದಕಾರಣ ಕ್ಲಸ್ಸ್ ರೂಂಗಳನ್ನು ಸೆಕ್ಷನ್ ಗಳಾಗಿ ವಿಂಗಡಿಸಲಾಗಿತ್ತು. ಅದರಲ್ಲಿ ನಾನು ಏ-ಸೆಕ್ಷನ್ ಅಲ್ಲಿ ಪ್ರಥಮ ಪಿ.ಯು.ಸಿ ಯನ್ನು ಶೇಕದ ೮೬% ಅಂಕವನ್ನು ಪಡೆದು ಉತ್ತಿರ್ಣನಾದೆನು. ನನ್ನ ದ್ವಿತೀಯ ಪಿ.ಯು.ಸಿ ಯನ್ನು ಅದೇ ಕಾಲೇಜಿನ ಡಿ-ಸೆಕ್ಷನ್ ಅಲ್ಲಿ ಶೇಕಡ ೭೨% ಅಂಕವನ್ನು ಪಡೆದು ಉತ್ತಿರ್ಣನಾದೆನು. ಎಲ್ಲರು ತಮ್ಮ ಜೀವನದಲ್ಲಿ ಮಾಡುವಂತೆ, ನಾನು ಸಹ ಮೋಜು-ಮಸ್ತಿಯಿಂದ ನನ್ನ ಜುನಿಯರ್ ಕಾಲೇಜನ್ನು ಮುಗಿಸಿದೆನು. ಜುನಿಯರ್ ಕಾಲೇಜಿನಲ್ಲಿ ಇದ್ದಾಗಲು ಕೂಡ ವರ್ಷದ ಶ್ರೇಷ್ಟ ವಿದ್ಯಾರ್ಥಿಯಂಬ ಪ್ರಶಸ್ತಿಯನ್ನು ಪಡೆದಿದ್ದೆನು. ಹೀಗೆ ನೋಡನೋಡುತ್ತಲೇ ನನ್ನ ಜುನಿಯರ್ ಕಾಲೇಜಿನ ಜೀವನ ಕಳೆಯಿತು.

ನನ್ನ ಮುಂದಿನ ವಿದ್ಯಬ್ಯಾಸವನ್ನು ಆಯ್ಕೇ ಮಾಡಲು [೨]ಸಿ.ಯಿ.ಟಿ ಮತ್ತು ಏನ್.ಯಿ.ಯಿ.ಟಿ ಪರಿಕ್ಷೇಗಳನ್ನು ಬರೆದಿದ್ದೆನು. ಇದರ ಜೊತೆಯೇ ಕ್ರೈಸ್ಟ್ ಯ್ಯುನಿವರ್ಸಿಟಿಯಲ್ಲಿ ಬಿ.ಯಸ್.ಸಿ (ಬಯೊಟೆಕ್ನೊಲಜಿ)ಗು ಕೂಡ ಪರಿಕ್ಷೇಯನ್ನು ಬರೆದಿದ್ದೆನು. ಸಿ.ಯಿ.ಟಿ ಮತ್ತು ಏನ್.ಯಿ.ಯಿ.ಟಿ ಪರಿಕ್ಷೇಗಳಲ್ಲಿ ಅಷ್ಟಾಗಿ ಉತ್ತಿರ್ಣನಾಗದ ಕಾರಣ ಪ್ರವೇಶ ಸಿಗಲಿಲ್ಲ. ಆದರೇ ಕ್ರೈಸ್ಟ್ ಯ್ಯುನಿವರ್ಸಿಟಿ

ಕ್ರೈಸ್ಟ್ ಯ್ಯುನಿವರ್ಸಿಟಿ

ಯಲ್ಲಿ ಪ್ರವೇಶ ಸಿಕ್ಕಿತು. ಆದ್ದರಿಂದ ಬಿ.ಯಸ್.ಸಿ (ಬಯೊಟೆಕ್ನೊಲಜಿ) ಕೋರ್ಸ್ಸನ್ನು ಸೆರಿಕೊಂಡೆನು. ಈಗ ಕ್ರೈಸ್ಟ್ ಯ್ಯುನಿವರ್ಸಿಟಿಗೆ ಬಂದ ನಂತರ ನನ್ನ ಜೀವನ ಬಹಳಷ್ಟು ಬದಲಾಗಿದೆ. ಕ್ರೈಸ್ಟ್ ಯ್ಯುನಿವರ್ಸಿಟಿಯ ವಾತವರಣವು ಬಹಳ ಚೆನ್ನಾಗಿದೆ. ಕ್ರೈಸ್ಟ್ ಯೂನಿವರ್ಸಿಟಿ ಪ್ರವೇಶಿಸಿ ನೋಡಿದರೆ, ಈಡೀ ಭಾರತವನ್ನೆ ನೋಡಿದಂತೆ ಬಾಸವಗುತ್ತದೆ. ಇಲ್ಲು ಕೂಡ ಬಹಳಷ್ಟು ಜನರೊಡನೆ ಸ್ನೇಹವಾಗಿದೆ. ಸದ್ಯಕ್ಕೆ ಮೊದಲನೆ ಸೆಮಿಸ್ಷರನ್ನು ಮುಗಿಸಿ, ಏರಡನೆ ಸೆಮಿಸ್ಷರನ್ನು ಓದುತಿದ್ದೆನೆ.

ನಾನು ಜೀವನದಲ್ಲಿ ಬಹಳ ಪ್ರಸಿದ್ಧಿಯಾಗಬೇಕೆಂಬ ಆಸೆ ಇದೇ.

ನನ್ನ ಜೀವನದ ಆದರ್ಶ ವ್ಯಕ್ತಿಯಂದರೇ ಡಾ||ಬಿ.ಆರ್.ಅಂಬೇಡ್ಕರ್[೩]. ಡಾ|| ಬಿ ಆರ್ ಅ೦ಬೆಡ್ಕರ್ ಏಕೆಂದರೆ, ಅವರು ಕೆಳವರ್ಗದ ಜನರ ಏಳಿಗೆಗಾಗಿ ಶ್ರಮಿಸಿದವರು. ನಾನು ಕೂಡ ಕೆಳವರ್ಗದ ಜನರ ಏಳಿಗೆಗಾಗಿ ಶ್ರಮಿಸಬೇಕೆಂದುಕೊಂಡಿದ್ದೆನೆ. ಕ್ರೈಸ್ಟ್ ಯ್ಯುನಿವರ್ಸಿಟಿಯಲ್ಲಿ ಓದುತ್ತಿರುವಾಗ ಒಂದು ದಿನ ಸಿ.ಯಸ್.ಏ ವತಿಯಿಂದ ಕೋಲರಕ್ಕೆ ಬಡ ಮಕ್ಕಳ ಸೇವೆಗೆಂದು ಕರೆದುಕೊಂಡು ಹೊಗಿದ್ದರು. ಅಲ್ಲಿನ ಬಡ ಮಕ್ಕಳನ್ನು ನೋಡಿ, ಅವರಿಗೆ ಏನಾದರು ಸಹಾಯ ಮಡಬೇಕೆಂಬ ಮನೋಭಾವನೆ ಹುಟ್ಟಿತು.

ಮೆಚ್ಚುಗೆಗಳು[ಬದಲಾಯಿಸಿ]

ನನ್ನ ನೆಚ್ಚಿನ ಆಟ ಕ್ರಿಕೆಟ್. ನನಗೆ ಅಷ್ಟಾಗಿ ಆಡಲು ಬರದಿದ್ದರು, [೪]ಕ್ರಿಕೆಟ್ ಅಂದರೆ ಪಂಚ ಪ್ರಾಣ. ನನ್ನ ನೆಚ್ಚಿನ ಆಟಗಾರ ರೋಹೆತ್ ಶರ್ಮ

ರೋಹಿತ್ ಶರ್ಮ

.ನನಗೆ ಪ್ರಯಾಣ ಮಾಡುವುದೆಂದರೇ ಬಹಳ ಇಷ್ಟ. ಅದಕ್ಕಾಗಿ ಕಾರ್ ಡ್ರೈವಿಂಗ್ ಕೂಡ ಕಲಿಯುತ್ತಿದ್ದೆನೆ. ನನಗೆ ಪ್ರಾಣಿಗಳೆಂದರೆ ಬಹಳ ಅಚ್ಚು- ಮೆಚ್ಚು, ಅದರಲ್ಲು ಶ್ವಾನಗಳೆಂದರೆ ಬಹಳ ಪ್ರೀತಿ. ನನ್ನ ಹವ್ಯಸಗಳೆಂದರೆ ಪುಸ್ತಕಗಳನ್ನು ಓದುವುದು, ವಿಡಿಯೋ ಗೇಂಗಳನ್ನು ಆಡುವುದು, ಹಾಡುವುದು, ಗೆಳೆಯರೊಡನೆ ಕಾಲ ಕಳೆಯುವುದು ಇತ್ಯಾದಿ. ನನ್ನ ಜೀವನದ ಗುರಿಯೆಂದರೆ, ಒಂದೊಳ್ಳೆ ಕೆಲಸಕ್ಕೆ ಸೇರಿ, ನನ್ನ ತಂದೆ- ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದುಕೊಂಡಿದ್ದೆನೆ. ಜೀವನದಲ್ಲಿ ಏನಾದರು ಸಾದಿಸಿ ಪ್ರಸಿದ್ದವಾಗಬೆಕೆಂಬ ಹಂಬಲ ಇದೆ.

ವಂದನೆಗಳು.

ಉಲ್ಲೇಖನಗಳು[ಬದಲಾಯಿಸಿ]

{{Reflist}}

  1. https://en.wikipedia.org/wiki/Christ_Academy
  2. https://en.wikipedia.org/wiki/CET
  3. https://en.wikipedia.org/wiki/B._R._Ambedkar
  4. https://en.wikipedia.org/wiki/Cricket