ಸದಸ್ಯ:Naheem mohammed/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kuvempu1
Kuvempu 2017 stamp of India

ಕುವೆಂಪು ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ 29, 1904 ರಲ್ಲಿ ಜನಿಸಿದರು.[೨] ತಂದೆ ವೆಂಕಟಪ್ಪಗೌಡ; ತಾಯಿ ಸೀತಮ್ಮ. ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ. ಎ. ಪದವಿಯನ್ನೂ, ಕನ್ನಡದಲ್ಲಿ ಎಂ. ಎ. ಪದವಿಯನ್ನೂ ಪಡೆದರು ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದರು. ನಂತರ ಉಪಕುಲಪತಿಗಳಾದರು. ಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು. ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕಳು. ಕುವೆಂಪು ಅವರು ನವೆಂಬರ್ 11, 1994ರಂದು ಮೈಸೂರಿನಲ್ಲಿ ನಿಧನರಾದರು. ತಮ್ಮ ಹುಟ್ಟೂರಾದ ಕುಪ್ಪಳಿಯಲ್ಲಿ ಕನ್ನಡದ ಅಗ್ರಮಾನ್ಯ ಕವಿ, ನಾಟಕಕಾರ, ಕಾದಂಬರಿಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು.

ಕೃತಿಗಳು[ಬದಲಾಯಿಸಿ]

ಕವನ ಸಂಕಲನಗಳು[ಬದಲಾಯಿಸಿ]

೧.ಕಥನ ಕವನಗಳು(1937)[೧]

೨.ಪ್ರೇಮ ಕಾಶ್ಮೀರ (1946)

೩.ಚಂದ್ರಮಂಚಕೆ ಬಾ ಚಕೋರಿ (1957)[೨]

೪.ಅನಿಕೇತನ (1963)

೫.ಜೇನಾಗುವ (1964)[೩]

೬.ಅನುತ್ತರಾ (1965)

೭.ಮಂತ್ರಾಕ್ಷತೆ (1966)

೮.ಕದರಡಕೆ (1967)

೯.ಪ್ರೇತಕ್ಯೂ (1967)

೧೦.ಕುಟೀಚಕ (1967)

೧೧.ಹೊನ್ನ ಹೊತ್ತಾರೆ (1976)

೧೨.ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ (1981)

ಮಹಾಕಾವ್ಯ[ಬದಲಾಯಿಸಿ]

೧. ಶ್ರೀ ರಾಮಾಯಣ ದರ್ಶನಂ (1949)[೪]

ವಕಥಾ ಸಂಕಲನ[ಬದಲಾಯಿಸಿ]

೧.ಸಂನ್ಯಾಸಿ ಮತ್ತು ಇತರ ಕಥೆಗಳು (1936) ೨.ನನ್ನ ದೇವರು ಮತ್ತು ಇತರ ಕಥೆಗಳು (1940)

ನಾಟಕಗಳು[ಬದಲಾಯಿಸಿ]

೧.ಜಲಗಾರ (1928)

೨.ಯಮನ ಸೋಲು (1928)

೩.ಬಿರುಗಾಳಿ (1930)

೪.ಸ್ಶಶಾನ ಕುರುಕ್ಷೇತ್ರಂ (1931)

೫.ವಾಲ್ಮೀಕಿಯ ಭಾಗ್ಯ (1931)

೬.ಮಹಾರಾತ್ರಿ (1931)

೭.ರಕ್ತಾಕ್ಷಿ (1933)

೮.ಶೂದ್ರ ತಪಸ್ವಿ (1944)

೯.ಬೆರಳ್‍ಗೆ ಕೊರಳ್ (1947)

೧೦.ಬಲಿದಾನ (1948)

೧೧.ಚಂದ್ರಹಾಸ (1963)

೧೨.ಕಾನೀನ (1974)

ಪ್ರಬಂಧ[ಬದಲಾಯಿಸಿ]

೧.ಮಲೆನಾಡಿನ ಚಿತ್ರಗಳು (1933)

ಜೀವನ ಚರಿತ್ರೆಗಳು[ಬದಲಾಯಿಸಿ]

೧.ಸ್ವಾಮಿ ವಿವೇಕಾನಂದ ೨.ರಾಮಕೃಷ್ಣ ಪರಮಹಂಸ

ಇತರೆ[ಬದಲಾಯಿಸಿ]

೧.ಜನಪ್ರಿಯ ವಾಲ್ಮೀಕಿ ರಾಮಾಯಣ


ಉಲ್ಲೇಖನ: