ಸದಸ್ಯ:Musthafa K Hasainar/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರೊ. ಸೋಮಣ್ಣ ಹೊಂಗಳ್ಳಿ ಮಂಗಳೂರು ವಿಶ್ವವಿದ್ಯಾನಿಲಯಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ (ಮಂಗಳ ಗಂಗೋತ್ರಿ)ಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 1992ರಲ್ಲಿ ಎಂ ಎ ಪದವಿ ಪಡೆದಿರುವ ಇವರು ಕುಂತಿಪೂಜೆ ಎಂಬ ವಿಷಯದ ಬಗ್ಗೆ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ[೧]. ಕಥೆಗಾರರಾಗಿ, ಜನಪದ ವಿದ್ವಾಂಸರಾಗಿ ಕಾರ್ಯನಿರ್ವಹಿಸಿದ ಇವರ ಆಸಕ್ತಿದಾಯಕ ಕ್ಷೇತ್ರ ಹಳೆಗನ್ನಡ, ಮಧ್ಯಕಾಲೀನ ಕನ್ನಡ ಸಾಹಿತ್ಯದ ಪ್ರಕಾರಗಳಾದ ವಚನ ಮತ್ತು ರಗಳೆ.ಇವರು ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಲ್ಲಿ ಒಂದಾದ ಮಡಿಕೇರಿಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜುನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಉಪನ್ಯಾಸಕ ವೃತ್ತಿಯನ್ನು ಪ್ರಾರಂಭಿಸಿದರು.

ಪ್ರಮುಖ ಕೃತಿಗಳು[ಬದಲಾಯಿಸಿ]

  1. ಕುಂತಿಪೂಜೆ ಒಂದು ಅಧ್ಯಯನ (ಪಿಎಚ್ ಡಿ ಮಹಾ ಪ್ರಬಂಧ)
  2. ಮೇಗಳಕೇರಿ(ಕಥಾ ಸಂಕಲನ)
  3. ಕ್ವಾರಿ(ಕಾದಂಬರಿ)
  4. ತಮಟೆ(ಕಥಾ ಸಂಕಲನ)
  5. ಲಂಬಾಣಿ ಜನಪದ ಕಥೆಗಳು(ಕಥಾ ಸಂಗ್ರಹ)
  6. ಕಾವೇರಿ ತೀರದಲ್ಲಿಕಾದಂಬರಿ)
  7. ಸಣ್ಣಕಥೆಗಳ ಇತಿಹಾಸ
  8. ತಮಿಳು ನಾಡು ದಲಿತ ಸಾಹಿತ್ಯ
  9. ಹೊಸಗನ್ನಡ ಸಾಹಿತ್ಯ ಪರಿಶೀಲನೆ
  10. ಅಕ್ಕಮಹಾದೇವಿ ವಚನದಲ್ಲಿ ಬಂಡಾಯ
  11. ಆಧುನಿಕ ಕನ್ನಡ ಕಾವ್ಯಗಳ ಪರಿಶೀಲನೆ

ಉಲ್ಲೇಖಗಳು[ಬದಲಾಯಿಸಿ]

ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ ಕನ್ನಡ ಐಚ್ಚಿಕ ಪತ್ರಿಕೆಯ-6ನೇ ಚತುರ್ಮಾಸಕ್ಕೆ ಈ ಕೃತಿ ಪಠ್ಯಪುಸ್ತಕವಾಗಿ ಆಯ್ಕೆಯಾಗಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ಮಲೆನಾಡು ಪ್ರದೇಶಗಳಲ್ಲಿ ಬಳಕೆಯಲ್ಲಿರುವ ವ್ಯವಸಾಯ ಸಂಬಂಧಿಯಾದ ಆಚರಣೆಗಳ ಕುರಿತ ವಿವೇಚನೆ ವಿಶ್ಲೇಷಣೆಯನ್ನು ತಳಸ್ಪರ್ಶಿಯಾಗಿ ಮಾಡಲಾಗಿದೆ.ಆರಾಧನ ಕ್ರಮ, ಸಂಪ್ರದಾಯ, ನಂಬಿಕೆ, ವ್ಯವಸಾಯ ಸಂಬಂಧಿಯಾದ ಆಚರಣೆಗಳು ಹುಟ್ಟಿಕೊಂಡ ಕುರಿತು ಚರ್ಚಿಸಲಾಗಿದೆ. --ಆಧ್ಯಾಯಗಳು--

  1. ಕುಂತಿಪೂಜೆ
  2. ತಿಂಗಳ ಮಾವನ ಪೂಜೆ
  3. ಅರಲೆ ಬಸವನ ಪೂಜೆ
  4. ಮಳೆಯಾಯನ ಪೂಜೆ
  5. ಜೋಕುಮಾರನ ಪೂಜೆ
  6. ಗೂರ್ಜಿ ಆಚರಣೆ
  7. ತಾರ್ಲೆ ಆಚರಣೆ
  8. ಕೈಲು ಮೂಹೂರ್ತ
  9. ಹುತ್ತರಿ ಆಚರಣೆ
  1. http://www.mangaloreuniversity.ac.in/dr-somanna