ವಿಷಯಕ್ಕೆ ಹೋಗು

ವಿಪ್ರಚಿತ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಪ್ರಚಿತ್ತಿ ಹಿಂದೂ ಪಠ್ಯದಲ್ಲಿ ಕಾಣಿಸಿಕೊಂಡಿರುವ ದಾನವ. ಈತ ಕಶ್ಯಪ ಮತ್ತು ದನುವಿನ ಮಗ. [೧] ಮಹಾಭಾರತದ ಪ್ರಕಾರ, ಇಂದ್ರನು ವಿಪ್ರಚಿತ್ತಿಯ ಸಹೋದರನಾದ ಪುಲೋಮನನ್ನು ಕೊಂದ ನಂತರ ವಿಪ್ರಚಿತ್ತಿ ದಾನವರ ರಾಜನಾಗುತ್ತಾನೆ. ವಿಪ್ರಚಿತ್ತಿಯು ಹಿರಣ್ಯಕಶಿಪುವಿನ ಸಹೋದರಿ ಮತ್ತು ದಿತಿಯ ಮಗಳಾದ ಸಿಂಹಿಕಾಳನ್ನು ಮದುವೆಯಾಗುತ್ತಾನೆ. ಆದ್ದರಿಂದ, ಅವರು ಒಂದೇ ತಂದೆಯ (ಕಶ್ಯಪ) ಮತ್ತು ವಿಭಿನ್ನ ತಾಯಂದಿರ (ದಿತಿ - ಸಿಂಹಿಕಾ/ಹೋಲಿಕಾ ಮತ್ತು ದನು - ವಿಪ್ರಚಿತ್ತಿ) ಮಕ್ಕಳಾಗುತ್ತಾರೆ.

ಅವನಿಗೆ ಸ್ವರ್ಭಾನು ಎಂಬ ಮಗನಿದ್ದಾನೆ. ಅವನ ಸೈನ್ಯವು ಸ್ವರ್ಭಾನುವಿನ ಮಾರ್ಗದರ್ಶನದಲ್ಲಿ ದೇವತೆಗಳನ್ನು ಸೋಲಿಸಿತು ಎಂದು ಹೇಳಲಾಗುತ್ತದೆ.

ಅವನು ಮತ್ತು ಅವನ ೧೩ ಪುತ್ರರನ್ನು ಕಾಳಿಯ ಅವತಾರವಾದ ರಕ್ತದಂತಿಕಾ ದೇವಿಯು ಕೊಂದಳು.

ಅವತಾರ[ಬದಲಾಯಿಸಿ]

ವಿಪ್ರಚಿತ್ತಿಯು ಮಹಾಭಾರತದಲ್ಲಿ ಮುಂದೆ ಜರಾಸಂಧನಾಗಿ ಅವತರಿಸುತ್ತಾನೆ.

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. A Classical Dictionary of India, p. 173