ವಿಕ್ರಮಾದಿತ್ಯ ೬

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರನೇ ವಿಕ್ರಮಾದಿತ್ಯನು ಕಲ್ಯಾಣಿ ಚಾಲುಕ್ಯ ರಾಜವಂಶದ‌ ಪ್ರಖ್ಯಾತ ಮತ್ತು ಪರಾಕ್ರಮಿ ದೊರೆ. ಇವನು ತನ್ನ ಅವಧಿಯಲ್ಲಿ ಶಾಲಿವಾಹನ ಶಕೆಯನ್ನು ರದ್ದು ಮಾಡಿ ತನ್ನದೇ ಆದ ವಿಕ್ರಮ ಶಕೆಯನ್ನು ಆರಂಭಿಸುತ್ತಾನೆ. ಇದು ಚಾಲುಕ್ಯ-ವಿಕ್ರಮ ಶಕೆ ಎಂದು ಪ್ರತೀತಿ ಪಡೆಯಿತು. ಇವನ ಆಳ್ವಿಕೆಯ ಕಾಲ ಕ್ರಿ.ಶ.೧೦೭೬-೧೧೨೬. ಈ ೫೦ ವರುಷಗಳು ಇಡಿಯ ಕಲ್ಯಾಣಿ ಚಾಲುಕ್ಯರ ವಂಶಾವಳಿಯಲ್ಲಿ ಅತ್ಯಂತ ಧೀರ್ಘ ಆಳ್ವಿಕೆ. ಈ ೬ನೇ ವಿಕ್ರಮಾದಿತ್ಯನು ತ್ರಿಭುವನಮಲ್ಲನೆಂದು ಬಿರುದಾಂಕಿತನಾಗಿದ್ದನು. ವಿಜಯನಗರ ಸಾಮ್ರಾಜ್ಯದ ಪೂರ್ವಕಾಲದಲ್ಲಿ ದೊರೆತ ಅತಿ ಹೆಚ್ಚು ಶಾಸನಗಳನ್ನು ಇವನ ಆಳ್ವಿಕೆಯಲ್ಲಿ ಬರೆಸಲ್ಪಟ್ಟಿವೆ.[೧]

ವಿಕ್ರಮಾದಿತ್ಯ ೬
ವಿಕ್ರಮಾದಿತ್ಯ ೬
ಕೈಠಭೇಶ್ವರ ದೇಗುಲ, ಕುಬತೂರು(ಕ್ರಿಶ.೧೧೧೦)
ಕಲ್ಯಾಣಿ ಚಾಲುಕ್ಯ ಅರಸ
ಆಳ್ವಿಕೆ ಕ್ರಿ.ಶ.೧೦೭೬ -೧೧೨೬(೫೦ ವರ್ಷಗಳು)
ಪೂರ್ವಾಧಿಕಾರಿ ಸೋಮೇಶ್ವರ ೨
ಉತ್ತರಾಧಿಕಾರಿ ಸೋಮೇಶ್ವರ ೩
ಗಂಡ/ಹೆಂಡತಿ ಚಂದಳಾ ದೇವಿ
ಕೇತಲಾ ದೇವಿ
ಸವಳಾ ದೇವಿ
ಸಂತಾನ
ಸೋಮೇಶ್ವರ ೩
ಮನೆತನ ಕಲ್ಯಾಣಿ ಚಾಲುಕ್ಯ
ತಂದೆ ಸೋಮೇಶ್ವರ ೧
ಮರಣ ಕ್ರಿ.ಶ.೧೧೨೬

ಈ ದೊರೆ ವಿಕ್ರಮಾದಿತ್ಯನು ಕಲೆ ಮತ್ತು ಸಂಸ್ಕೃತಿಯ ಪೋಷಣೆಗೆ ಗಮನಾರ್ಹನು.ಇವನ ಆಸ್ಥಾನ ಕನ್ನಡ ಮತ್ತು ಸಂಸ್ಕೃತ ಕವಿ, ಪಂಡಿತರಿಂದ ವಿಜೃಂಭಿಸುತ್ತಿತ್ತು.

6ನೇ ವಿಕ್ರಮಾಧಿತ್ಯ ಜೀವನ ಮತ್ತು ಸಾಧನಗಳು

ಚಿತ್ರ ಮಾಹಿತಿ[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]

ಆಕರ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Chalukyas of Kalyana". {{cite web}}: Text "ಜ್ಯೋತ್ಸ್ನಾ ಕಾಮತ್ ಅವರ ವೆಬ್ ತಾಣದ ಕಲ್ಯಾಣಿ ಚಾಲುಕ್ಯರ ಕುರಿತಾದ ಆಂಗ್ಲ ಮಾಹಿತಿ ಪುಟ" ignored (help)