ವಿಷಯಕ್ಕೆ ಹೋಗು

ರಾಜೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಜೇಶ್
ಹುಟ್ಟು
ಮುನಿಚೌಡಪ್ಪ/ನಂತರ ವಿದ್ಯಾಸಾಗರ್

(೧೯೩೨-೦೪-೧೫)೧೫ ಏಪ್ರಿಲ್ ೧೯೩೨
ಸಾವು೧೯ ಫೆಬ್ರವರಿ ೨೦೨೨ (ವಯಸ್ಸು ೮೯)
ಉದ್ಯೋಗನಟ
ಸಕ್ರಿಯ ವರ್ಷಗಳು೧೯೬೩–೨೦೨೨
ಹೆಸರುವಾಸಿನಟ
ಮಕ್ಕಳು
ಸಂಬಂಧಿಕರುಅರ್ಜುನ್ ಸರ್ಜಾ (ಅಳಿಯ)

ರಾಜೇಶ್ (೧೫ ಏಪ್ರಿಲ್ ೧೯೩೫- ೧೯ ಫೆಬ್ರವರಿ ೨೦೨೨) ಅವರು ಕನ್ನಡ ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಭಾರತೀಯ ನಟ. ‘ಕಲಾ ತಪಸ್ವಿ’ ಎಂದೇ ಖ್ಯಾತರಾಗಿದ್ದ ರಾಜೇಶ್‍ರವರು ಸಾಹಿತ್ಯದ ಕಟ್ಟಾ ಅಭಿಮಾನಿಯಾಗಿದ್ದರು. ಅವರು ೧೯೬೦ ರ ದಶಕದ ಕೊನೆಯಲ್ಲಿ ಮತ್ತು ೧೯೭೦ ರ ದಶಕದ ಆರಂಭದಲ್ಲಿ ನಾಯಕರಾಗಿ ಅನೇಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರ ಮಗುಳು ನಟಿ ಆಶಾ ರಾಣಿ ಶಿವರಾಜ್‌ಕುಮಾರ್ ಅವರೊಂದಿಗೆ ರಥಸಪ್ತಮಿ ಚಿತ್ರದಲ್ಲಿ ನಟಿಸಿದ್ದಾರೆ. ರಾಜೇಶ್‍ರವರು ಜನಪ್ರಿಯ ಕನ್ನಡ ಮತ್ತು ತಮಿಳು ನಟ ಅರ್ಜುನ್ ಸರ್ಜಾ ಅವರ ಮಾವ.

'ರಾಜೇಶ್' ಸುಮಾರು ೧೫೦ ಚಿತ್ರಗಳಲ್ಲಿ ನಟಿಸಿದ್ದಾರೆ.[] ರಾಜೇಶ್ ಅವರ ಜೀವನ ಚರಿತ್ರೆ "ಕಲಾತಪಸ್ವಿ ರಾಜೇಶ್ ಆತ್ಮಕಥೆ". ೨೦೧೪ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಡಾ.ರಾಜ್‌ಕುಮಾರ್ ಸಾಂಸ್ಕೃತಿಕ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದರು.[] ಅವರು ಬೆಂಗಳೂರಿನ ವಿದ್ಯಾರಣ್ಯಪುರ ದಲ್ಲಿ ವಾಸಿಸುತ್ತಿದ್ದರು.[]

ರಾಜೇಶ್ ಅವರು ಏಪ್ರಿಲ್ ೧೫, ೧೯೩೫ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.[] ಅವರು ತ್ಯಾಗರಾಜ ಭಾಗವತರ್, ರಾಜಕುಮಾರ್ ಮತ್ತು ಟಿ.ಆರ್. ಮಹಾಲಿಂಗಂ ಅವರಂತಹ ಅಂದಿನ ತಾರೆಗಳನ್ನು ನೋಡುತ್ತಾ ಬೆಳೆದರು. ಬಾಲ್ಯದಿಂದಲೇ ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು ತಂದೆ-ತಾಯಿಯರಿಗೆ ತಿಳಿಯದಂತೆ ಸುದರ್ಶನ ನಾಟಕ ಮಂಡಳಿ ಸೇರಿದರು. ಟ್ಯೂಷನ್ ಹೆಸರಿನಲ್ಲಿ ಅಭ್ಯಾಸಕ್ಕೆ ಹೋಗುತ್ತಿದ್ದ ಅವರಿಗೆ ಮೊದಲ ಪಾತ್ರ ಸಿಕ್ಕಿದ್ದು ‘ಶ್ರೀರಾಮ’. ಕರಪತ್ರಗಳಿಂದ, ಅವರು ನಾಟಕ ತಂಡಕ್ಕೆ ಸೇರಿದ್ದಾರೆ ಎಂದು ಅವರ ಪೋಷಕರು ಕಂಡುಹಿಡಿದರು.

ವೃತ್ತಿ

[ಬದಲಾಯಿಸಿ]

ಆರಂಭಿಕ ವೃತ್ತಿ

[ಬದಲಾಯಿಸಿ]

ರಾಜೇಶ್ ಆರಂಭದಲ್ಲಿ ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಬೆಂಗಳೂರು ಕಚೇರಿಗಳಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಕಛೇರಿಯಲ್ಲಿ ಚಿ.ಉದಯಶಂಕರ್ ಖ್ಯಾತ ಸಿನಿಮಾ ಬರಹಗಾರರು ಕೆಲಸವನ್ನು ಮಾಡುತ್ತಿದ್ದರು. ಲೆಡ್ಜರ್ ಪುಸ್ತಕಗಳಲ್ಲಿ ಅವರು ಪ್ರಸಿದ್ಧ ಕಾದಂಬರಿಗಳನ್ನು ಇಟ್ಟುಕೊಂಡು ಓದುತ್ತಿದ್ದರು. ಅದಕ್ಕಾಗಿ ಚಿ.ಉದಯಶಂಕರ್ ಅವರನ್ನು ಕಚೇರಿಯಿಂದ ಹೊರಗೆ ಕಳುಹಿಸಲಾಗಿತ್ತು. ರಾಜೇಶ್ ಕೂಡ ಇದೇ ಪರಿಸ್ಥಿತಿ ಎದುರಿಸಿದರು. ನಂತರ ಅವರು ಶಕ್ತಿ ನಾಟಕ ಮಂಡಳಿಯನ್ನು ರಚಿಸಿದರು, ಅನೇಕ ಜನಪ್ರಿಯ ನಾಟಕಗಳನ್ನು ಪ್ರದರ್ಶಿಸಿದರು. ನಿರುದ್ಯೋಗದ ಬಗ್ಗೆ ನಾಟಕವನ್ನು ಬರೆಯಲು ಪ್ರಾರಂಭಿಸಿದರು, ಅದಕ್ಕೆ ‘ನಿರುದ್ಯೋಗಿ ಬಾಳು’ ಎಂಬ ಶೀರ್ಷಿಕೆ ನೀಡಲಾಗಿತ್ತು. ಇದಕ್ಕೆ ಒಳ್ಳೆಯ ಮೆಚ್ಚುಗೆ ಸಿಕ್ಕಿತು. ‘ಬಡವನ ಬಾಳು’ ಅವರ ಮುಂದಿನದ್ದು ಅದು ಹಾಗೆಯೇ ಮುಂದುವರೆಯಿತು.

ನಂತರದ ವೃತ್ತಿ

[ಬದಲಾಯಿಸಿ]

‘ದೇವರ ಗುಡಿ’ ಸಿನಿಮಾದಲ್ಲಿ ವಿಷ್ಣುವರ್ಧನ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.[] ಅದರ ನಂತರ ಅವರು ೧೯೭೦ ರ ದಶಕದಲ್ಲಿ ದೇವರ ದುಡ್ಡು, ಬದು ಬಂಗಾರವಾಯಿತು, ಬೆಳುವಾಳದ ಮಡಿಲಲ್ಲಿ, ಮುಗಿದ ಕಥೆ ಮತ್ತು ೧೯೮೦ ರ ದಶಕದಲ್ಲಿ ಕಲಿಯುಗ, ಪಿತಾಮಹ ಮತ್ತು ಸತ್ಯನಾರಾಯಣ ಪೂಜಾ ಫಲೆಯಂತಹ ಹೆಚ್ಚಿನ ಸಿನಿಮಾದಲ್ಲಿ ನಟಿಸಿದರು.

ಅವರು ೧೯೫೦ ರ ದಶಕದಲ್ಲಿ ಹೊನ್ನಪ್ಪ ಭಾಗವತರ್, ರಾಜಕುಮಾರ್, ಉದಯಕುಮಾರ್, ಕಲ್ಯಾಣಕುಮಾರ್, ಬಿ.ಆರ್. ಪಂತುಲು, ಕೆ.ಎಸ್.ಅಶ್ವಥ್, ನರಸಿಂಹರಾಜು, ಬಾಲಕೃಷ್ಣ, ಅಯ್ಯರ್, ಬಿ.ಸರೋಜಾದೇವಿ, ಲೀಲಾವತಿ, ಪಂಡರಿ ಬಾಯಿ, ಎಂ.ವಿ.ರಾಜಮ್ಮ, ಮೈನಾವತಿ, ವಂದನಾ, ಕಲ್ಪನಾ, ಜಯಂತಿ, ಭಾರತಿ ಚಿತ್ರರಂಗವನ್ನು ಶ್ರೀಮಂತಗೊಳಿಸಿದರು. ಆದರೆ ಇತ್ತೀಚಿನ ದಿನಗಳಲ್ಲಿ ನಿರ್ಮಾಣವಾಗಿರುವ ಕನ್ನಡ ಚಿತ್ರಗಳು ಉತ್ತಮ ಕಥೆ ಮತ್ತು ಸಾಮಾಜಿಕ ಬದ್ಧತೆಯ ಕೊರತೆಯಿಂದ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ ಎಂದು ರಾಜೇಶ್ ವಿಷಾದ ವ್ಯಕ್ತಪಡಿಸಿದರು. ಹಿಂದಿನ ಸ್ಟಾರ್ "ಆ ಚಿತ್ರಗಳು ಆರೋಗ್ಯಕರ ಮನರಂಜನೆಯನ್ನು ಒದಗಿಸುವುದರ ಜೊತೆಗೆ ಸಮಾಜಕ್ಕೆ ಸಂದೇಶವನ್ನು ಹೊಂದಿದ್ದವು. ಆದರೆ ೧೯೮೦ ರ ನಂತರ ಬಂದ ಚಲನಚಿತ್ರಗಳು ಸಾಮಾಜಿಕ ಬದ್ಧತೆಯ ಕೊರತೆ ಮತ್ತು ಅಗ್ಗದ ಅಭಿರುಚಿಯನ್ನು ಹೊಂದಿವೆ. ತಂತ್ರಜ್ಞಾನದ ಬೆಳವಣಿಗೆ ಮತ್ತು ಚಲನಚಿತ್ರಗಳಿಗೆ ವ್ಯಯಿಸುತ್ತಿರುವ ಅಪಾರ ಹಣವನ್ನು ಚಲನಚಿತ್ರ ನಿರ್ಮಾಪಕರು ಸಮಾಜದ ಒಳಿತಿಗಾಗಿ ಬಳಸಲಿಲ್ಲ" ಹೇಳಿದರು.[]

ವೈಯಕ್ತಿಕ ಜೀವನ ಮತ್ತು ಸಾವು

[ಬದಲಾಯಿಸಿ]

ರಾಜೇಶ್‍ರವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ೧೯ ಫೆಬ್ರವರಿ ೨೦೨೨ ರಂದು ತಮ್ಮ ೮೭ ನೇ ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.[]

ಪ್ರಶಸ್ತಿಗಳು

[ಬದಲಾಯಿಸಿ]

ರಾಜೇಶ್ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ೨೦೧೨ ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. [][]

ಇತರೆ ಚಿತ್ರಕಥೆ

[ಬದಲಾಯಿಸಿ]
ವರ್ಷ ಚಲನಚಿತ್ರ (ಕನ್ನಡದಲ್ಲಿ) ಪಾತ್ರ
೧೯೬೩ಶ್ರೀ. ರಾಮಾಂಜನೇಯ ಯುದ್ಧ
೧೯೬೪ವೀರ ಸಂಕಲ್ಪ
೧೯೬೭ಗಂಗೆ ಗೌರಿ
೧೯೬೮ನಮ್ಮ ಊರು
೧೯೬೯ಸುವರ್ಣ ಭೂಮಿ
ಬ್ರೋಕರ್ ಭೀಷ್ಮಾಚಾರಿ
ಕಪ್ಪು ಬಿಳುಪು
ಎರಡು ಮುಖ
ಪುಣ್ಯ ಪುರುಷ
ಕಾಣಿಕೆ
ಬೃಂದಾವನ
ಭಲೇ ಬಸವ
೧೯೭೦ಅರಿಶಿನ ಕುಂಕುಮ
ಮೂರು ಮುತ್ತುಗಳು
ಬೋರೇಗೌಡ ಬೆಂಗಳೂರಿಗೆ ಬಂದ
ನಮ್ಮ ಮನೆ
ಸುಕ ಸಂಸಾರ
ಆರು ಮೂರು ವಂಬತ್ತು.
ದೇವರ ಮಕ್ಕಳು
೧೯೭೧ಪೂರ್ಣಿಮಾ
ಬೇತಾಳ ಗುಡ್ಡ
ನಮ್ಮ ಬದುಕು
ಭಲೇ ಅದೃಷ್ಟವೋ ಅದ್ರುಷ್ಟಃ
ಭಲೇ ಭಾಸ್ಕರ
ಹೆಣ್ಣು, ಹೊನ್ನು, ಮಣ್ಣು
ಪ್ರತಿಧ್ವನಿ
೧೯೭೨ವಿಷಕನ್ಯೇ
ಸುಭದ್ರಾ ಕಲ್ಯಾಣ
ಒಂದು ಹೆಣ್ಣಿನ ಕಥೆ
ಕ್ರಾಂತಿ ವೀರ
ಭಾಂದವ್ಯ
ಮರೆಯಾದ ದೀಪಾವಳಿ
೧೯೭೩ಸಹಧರ್ಮಿಣಿ
ಬಿಡುಗಡೆ
೧೯೭೪ಊರ್ವಶಿ
ಗೃಹಿಣಿ
೧೯೭೫ದೇವರ ಗುಡಿ
ಕಸ್ತೂರಿ ವಿಜಯ
ಮನೆ ಬೆಳಕು
ಸರ್ಪ ಕಾವಲು
ಕಾವೇರಿ
ಕ್ರಾಂತಿ ವನಿತೆ
ಆಶೀರ್ವಾದ
ಬೆಳವಲದ ಮಡಿಲಳ್ಳಿ
೧೯೭೬ಬದುಕು ಬಂಗಾರವಾಯಿತು
ಮುಗಿಯದ ಕಥೆ
ಮಾಯಾ ಮನುಷ್ಯ
ರಾಜನಾರ್ಥಕೀಯ ರಹಸ್ಯ
೧೯೭೭ದೇವರ ದುಡ್ಡು
ರೇಣುಕಾದೇವಿ ಮಹಾತ್ಮೆ
ಸೊಸೆ ತಂದ ಸೌಭಾಗ್ಯ
೧೯೭೮ಆತ್ಮ ಶಕ್ತಿ
೧೯೮೦ಗುರುಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ
ಮಾಯೆಯ ಮುಸುಕು
೧೯೮೧ಪ್ರೇಮನುಬಂದ
ಚದುರಿದ ಚಿತ್ರಗಳು
೧೯೮೨ವಸಂತ ನಿಲಯ
೧೯೮೩ಆನಂದ ಭೈರವಿ
೧೯೮೪ಕಲಿಯುಗ
೧೯೮೫ದೇವರ ಮನೆ
ಪಿತಾಮಹ
೧೯೮೬ತವರು ಮನೆ
ಸೆಡಿನಾ ಸಂಚು
ಎಲ್ಲಾ ಹೆಂಗಸರಿಂದ
೧೯೮೯ಬಾಳ ಹೊಂಬಾಳೆ
೧೯೯೧ತವರುಮನೆ ಉಡುಗೋರೆ
೧೯೯೬ ಕರ್ನಾಟಕ ಸುಪುತ್ರ

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. 1 2 "From theatre to celluloid". The Hindu. 9 April 2011. Archived from the original on 8 April 2014. Retrieved 14 April 2011.
  2. "'Quality of Kannada films has declined'". The Hindu. 26 April 2014. Archived from the original on 3 May 2014. Retrieved 3 May 2014.
  3. 1 2 "Rajesh: Stunner on Silver Screen". Archived from the original on 14 March 2016. Retrieved 29 October 2011.
  4. Rajesh's View on Current Trend in Film Industry
  5. "Veteran actor Rajesh passes away". The Times of India (in ಇಂಗ್ಲಿಷ್). Archived from the original on 19 February 2022. Retrieved 19 February 2022.
  6. "Rajesh honarary [sic] doctorate - Kannada Movie News". Indiaglitz.com. 4 January 2012. Archived from the original on 4 October 2013. Retrieved 5 August 2014.
  7. "Doctorate for Rajesh". Supergoodmovies.com. 4 January 2012. Archived from the original on 5 October 2013. Retrieved 5 August 2014.
"https://kn.wikipedia.org/w/index.php?title=ರಾಜೇಶ್&oldid=1374661" ಇಂದ ಪಡೆಯಲ್ಪಟ್ಟಿದೆ