ಕಮಲಾದೇವಿ ಚಟ್ಟೋಪಾಧ್ಯಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಮಲಾದೇವಿ ಚಟ್ಟೋಪಾಧ್ಯಾಯ
ಜನನ
ಕಮಲಾದೇವಿ

(೧೯೦೩-೦೪-೦೩)೩ ಏಪ್ರಿಲ್ ೧೯೦೩
ಮಂಗಳೂರು, ಕರ್ನಾಟಕ, ಭಾರತ
ಮರಣ29 October 1988(1988-10-29) (aged 85)
ಹಳೆ ವಿದ್ಯಾರ್ಥಿಬೆಡ್ಫೋರ್ಡ್ ಕಾಲೇಜ್ (ಲಂಡನ್)
ಜೀವನ ಸಂಗಾತಿKrishna Rao (ವಿವಾಹ 1917–ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".)
Harindranath Chattopadhyay (ವಿವಾಹ 1919–ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".)
ಮಕ್ಕಳುರಾಮಕೃಷ್ಣ ಚಟ್ಟೋಪಾಧ್ಯಾಯ
ಪ್ರಶಸ್ತಿಗಳುRamon Magsaysay Award (1966)
Padma Bhushan (1955)
Padma Vibhushan (1987)

'

ಜನನ, ಬಾಲ್ಯ ಹಾಗೂ ವಿದ್ಯಾಭ್ಯಾಸ[ಬದಲಾಯಿಸಿ]

ಕಮಲಾದೇವಿ ೧೯೦೩ ಎಪ್ರಿಲ ೩ರಂದು ಮಂಗಳೂರಿನಲ್ಲಿ ಜನಿಸಿದರು.ಇವರ ತಾಯಿ ಗಿರಿಜಾಬಾಯಿ ; ತಂದೆ ಮಂಗಳೂರಿನ ಜಿಲ್ಲಾ ಕಲೆಕ್ಟರ ಆಗಿದ್ದರು. ಕಮಲಾದೇವಿಯವರ 'ಮದುವೆ,' ಅವರ 'ಹದಿನಾಲ್ಕನೆಯ ವಯಸ್ಸಿನಲ್ಲಿ' ಆಯಿತು. 'ಶಾಲಾ ವಿದ್ಯಾರ್ಥಿ'ಯಾಗಿದ್ದಾಗಲೆ , ಎರಡು ವರ್ಷಗಳ ಬಳಿಕ ಅವರು 'ವಿಧವೆ'ಯಾದರು. ಕಮಲಾದೇವಿ ಧೃತಿಗೆಡಲಿಲ್ಲ. ಉನ್ನತ ವರ್ಗದ ಕುಟುಂಬಗಳ ಹೆಣ್ಣುಮಕ್ಕಳಿಗೆ ಬಹಿಷ್ಕೃತವಾದ ಅಭಿನಯವನ್ನು ಸ್ವೀಕರಿಸಿದ 'ಕಮಲಾದೇವಿ' ಎರಡು 'ಮೂಕಿ ಚಿತ್ರಗಳಲ್ಲಿ ಸಹ ಅಭಿನಯಿಸಿದರು'. ೧೯೨೦ರಲ್ಲಿ ಕಮಲಾದೇವಿಯವರ ಮದುವೆ, ಸರೋಜಿನಿ ನಾಯಡು [೧] ಅವರ sahodara ಸುಪ್ರಸಿದ್ಧ ಕವಿ, ಹಾಗು ನಾಟಕಕಾರರಾದ 'ಹರೀಂದ್ರನಾಥ ಚಟ್ಟೋಪಾಧ್ಯಾಯ' [೨] ಇವರೊಡನೆ ಜರುಗಿತು. ಕೆಲದಿನಗಳಲ್ಲಿಯೆ ಹರೀಂದ್ರನಾಥರೊಡನೆ ಲಂಡನ್ನಿಗೆ ತೆರಳಿದ 'ಕಮಲಾದೇವಿ' ಅಲ್ಲಿ 'ಬೆಡ್‍ಫೋರ್ಡ್ ಕಾಲೇಜು' ಸೇರಿಕೊಂಡು 'ಸಮಾಜಶಾಸ್ತ್ರ'ದ ಅಧ್ಯಯನ ಮಾಡಿದರು.

'ಕಮಲಾದೇವಿಯವರು ಬರೆದ ಪುಸ್ತಕ,'A True Karmayogi'

ಸಮಾಜ ಸೇವೆ[ಬದಲಾಯಿಸಿ]

೧೯೨೩ರಲ್ಲಿ ಭಾರತಕ್ಕೆ ಮರಳಿದ ದಂಪತಿಗಳು ಮಹಾತ್ಮಾ ಗಾಂಧಿಯವರ 'ಅಸಹಕಾರ ಚಳುವಳಿ'ಯಲ್ಲಿ ಭಾಗವಹಿಸಿದರು. ಕಮಲಾದೇವಿ 'ಸೇವಾದಳ'ವನ್ನು ಸೇರಿದರು. ಈ ನಡುವೆ, ಕಮಲಾದೇವಿಯವರ 'ವಿವಾಹ ವಿಚ್ಛೇದನ'ವೂ ಆಯಿತು.

ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಭಾಗವಹಿಸಿದರು[ಬದಲಾಯಿಸಿ]

೧೯೨೬ರಲ್ಲಿ 'ಮಾರ್ಗಾರೆಟ್ ಕಜಿನ್' ಇವರ ಸಲಹೆಯ ಮೇರೆಗೆ 'ಮದ್ರಾಸ ಪ್ರಾಂತೀಯ ಶಾಸನ ಸಭೆಯ ಚುನಾವಣೆ'ಗೆ ಸ್ಪರ್ಧಿಸಿದ 'ಕಮಲಾದೇವಿ' ಕೇವಲ ೨೦೦ ಮತಗಳ ಅಂತರದಲ್ಲಿ ಸೋತರು. ೧೯೩೦ರಲ್ಲಿ ಉಪ್ಪಿನ ಸತ್ಯಾಗ್ರಹ ನಡೆದಾಗ, ಪ್ರತಿಬಂಧಿತ ಉಪ್ಪನ್ನು 'ಮುಂಬಯಿ ಸ್ಟಾಕ್ ಎಕ್ಸ್ಚೇಂಜಿ'ನಲ್ಲಿ ಮಾರಾಟ ಮಾಡಲು ಹೋಗಿ, ಜೇಲಿಗೆ ತೆರಳಿದರು. ೧೯೩೬ರಲ್ಲಿ 'ಕಮಲಾದೇವಿ' 'ಕಾಂಗ್ರೆಸ್ ಸಮಾಜವಾದಿ ಪಕ್ಷದ ಅಧ್ಯಕ್ಷ'ರಾಗಿ, 'ಜಯಪ್ರಕಾಶ ನಾರಾಯಣ್' [೩], 'ರಾಮ ಮನೋಹರ ಲೋಹಿಯಾ' [೪] ಹಾಗು 'ಮೀನೂ ಮಸಾನಿ'ಯವರ ಜೊತೆಗೆ ದುಡಿದರು.

ನಿರಾಶ್ರಿತರ ಮರುವಸತಿಯ ಏರ್ಪಾಡು[ಬದಲಾಯಿಸಿ]

ಎರಡನೆಯ ಜಾಗತಿಕ ಯುದ್ಧ ಪ್ರಾರಂಭವಾದಾಗ, ಕಮಲಾದೇವಿ ಜಗತ್ತನ್ನೆಲ್ಲ ಸುತ್ತು ಹಾಕುತ್ತ, ಭಾರತದ ಸ್ವಾತಂತ್ರ್ಯಕ್ಕಾಗಿ ಜಾಗತಿಕ ಸದಭಿಪ್ರಾಯ ಮೂಡಿಸಲು ಪ್ರಯತ್ನಪಟ್ಟರು. ಸ್ವಾತಂತ್ರ್ಯದ ಜೊತೆಯಲ್ಲಿಯೇ ದೇಶವಿಭಜನೆಯಾಗಿ ಲಕ್ಷಾಂತರ ನಿರಾಶ್ರಿತರು ಭಾರತದಲ್ಲಿ ಬರತೊಡಗಿದಾಗ, 'ಕಮಲಾದೇವಿ,' 'ಭಾರತೀಯ ಸಹಕಾರಿ ಒಕ್ಕೂಟ'ವನ್ನು ಸ್ಥಾಪಿಸಿ, 'ನಿರಾಶ್ರಿತರ ಪುನರ್ವಸತಿ'ಗೆ ಪ್ರಯತ್ನಿಸಿದರು. ಇದರ ಅಂಗವಾಗಿ ದಿಲ್ಲಿಯ ಹೊರವಲಯದಲ್ಲಿ 'ಕಮಲಾದೇವಿ' ಹಾಗು 'ಸುಶೀಲಾ ನಯ್ಯರ' ಜೊತೆಯಾಗಿ ದುಡಿದು 'ಫರೀದಾಬಾದ' ಎನ್ನುವ ಗ್ರಾಮವನ್ನು ಸ್ಥಾಪಿಸಿದರು. ವಾಯವ್ಯ ಗಡಿಭಾಗದಿಂದ ಬಂದ ೩೦,೦೦೦ 'ಪಠಾಣರು' ಇಲ್ಲಿ ವಸತಿಯಾದರು.

ಕಲೆ ಹಾಗೂ ಕರಕೌಶಲ್ಯಗಳಿಗೆ ಆದ್ಯತೆ[ಬದಲಾಯಿಸಿ]

ಸ್ವಾತಂತ್ರ್ಯದ ನಂತರ ಪ್ರಧಾನ ಮಂತ್ರಿ 'ಜವಾಹರಲಾಲ ನೆಹರೂ'ರವರ ಯಾಂತ್ರೀಕರಣದ ಒಲವಿನಿಂದಾಗಿ ಕರಕುಶಲ ಕೈಗಾರಿಕೆಗಳಿಗೆ , ವಿಶೇಶತಃ ಅಸಂಘಟಿತ ಹೆಣ್ಣು ಮಕ್ಕಳ ಕೈಗಾರಿಕೆಗಳಿಗೆ ಧಕ್ಕೆ ಬರುವ ಸಂಭಾವ್ಯತೆಯನ್ನು ಕಂಡ ಕಮಲಾದೇವಿಯವರು ಅನೇಕ 'ಕರಕುಶಲ ವಸ್ತುಸಂಗ್ರಹಾಲಯ'ಗಳನ್ನು ಸ್ಥಾಪಿಸಿದರು. ಇದರಲ್ಲಿ ದಿಲ್ಲಿಯಲ್ಲಿರುವ 'Theatre Crafts Museum' ಪ್ರಮುಖವಾದದ್ದು. ಇದಲ್ಲದೆ 'National School of Drama,' [೫] ವನ್ನು ಸಹ ಇವರು ಸ್ಥಾಪಿಸಿದರು. ಸಂಗೀತ ನಾಟಕ ಅಕಾಡೆಮಿ [೬]ಯ ಅಧ್ಯಕ್ಷೆ ಸಹ ಆದರು. ಇದರಂತೆಯೆ All-India Handicrafts Board ಸಹ ಇವರ ಸ್ಥಾಪನೆ. ಇದರ ಮೂಲಕ ಅನೇಕ 'ಕರಕುಶಲ ಕರ್ಮಿಗಳಿಗೆ ಸನ್ಮಾನ' ನೀಡಲಾಗುತ್ತಿದೆ.

ಗೌರವ[ಬದಲಾಯಿಸಿ]

ನಿಧನ[ಬದಲಾಯಿಸಿ]

ಕಮಲಾ ದೇವಿ ಚಟ್ಟೋಪಾಧ್ಯಾಯ ರವರು ೧೯೮೮ ರಲ್ಲಿ ನಿಧನರಾದರು.