ವಿಷಯಕ್ಕೆ ಹೋಗು

ಉತ್ತಮಭದ್ರರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತಮಭದ್ರರು ಮಹಾಭಾರತ ಮತ್ತು ನಂತರದ ಶಾಸನಗಳಲ್ಲಿ ವಿವರಿಸಲಾದ ಪ್ರಾಚೀನ ಭಾರತೀಯ ಬುಡಕಟ್ಟು ಜನಾಂಗದವರು.

ಉತ್ತಮಭದ್ರರು ಪಂಜಾಬಿನಲ್ಲಿ ವಾಸಿಸುತ್ತಿದ್ದರು.[೧] ಉತ್ತಮಭದ್ರರು ಮೂಲತಃ ವೈದಿಕ ಕಾಲದಲ್ಲಿ ಭಾರತವನ್ನು ಪ್ರವೇಶಿಸಿದ ಬಾಲ್ಖ್ ಮೂಲದ ಜನರಾಗಿದ್ದಾರೆ. ವೈದಿಕ ಕಾಲದಲ್ಲಿ ಇವರು ಕುರು ಹಾಗೂ ಪುರುಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದರು.[೨] ಕೌರವರ ಪರವಾಗಿ ರಾಜ ಶಲ್ಯನು ಮಹಾಭಾರತ ಯುದ್ಧದಲ್ಲಿ ಭಾಗವಹಿಸಿದ್ದನು. ಪಾಂಡವರಾದ ನಕುಲ ಮತ್ತು ಸಹದೇವರ ತಾಯಿಯಾಗಿದ್ದ ಮಾದ್ರಿ ಒಬ್ಬ ಮದ್ರ ರಾಜಕುಮಾರಿ. ಮಾದ್ರಿಯನ್ನು ಬಹ್ಲಿಕಿ ಎಂದು ಕರೆಯಲಾಗುತ್ತದೆ, ಅಂದರೆ ಬಹ್ಲಿಕಾ ಜನಪದ/ಬುಡಕಟ್ಟಿನ ರಾಜಕುಮಾರಿ ಮತ್ತು ರಾಜ ಶಲ್ಯನನ್ನು ಬಹ್ಲಿಕಾ-ಪುಂಗವ ಎಂದು ಕರೆಯಲಾಗುತ್ತದೆ, ಎಂದರೆ ಬಹ್ಲಿಕರಲ್ಲಿ ಅಗ್ರಗಣ್ಯ. ಮಹಾಕಾವ್ಯವು ಸಾವಿತ್ರಿಯ ತಂದೆಯಾದ ಪೌರ ಜನಪದರ ಪ್ರಿಯನಾದ ಮದ್ರದ ರಾಜನಾದ ಅಶ್ವಪತಿಯನ್ನು ಸಹ ಉಲ್ಲೇಖಿಸುತ್ತದೆ. ರಾಜ ವ್ಯಾಸಿತಾಶ್ವನು ಋಗ್ವೇದ ಕಾಲದ ಪ್ರಸಿದ್ಧ ರಾಜನಾದ ಪುರುನ ವಂಶಸ್ಥನಾಗಿದ್ದನು.[೩]

ನಾಸಿಕ್ ಗುಹೆ ಶಾಸನ ಸಂಖ್ಯೆ ೧೦. ಉತ್ತಮಭದ್ರರ ರಕ್ಷಣೆಯನ್ನು ಉಷಾವದಾತ ವಿವರಿಸಿರುವುದು, ಗುಹೆಯ ಸಂಖ್ಯೆ ೧೦.

ಸುಮಾರು ಸಾ. ಶ. ೧೨೦ರಲ್ಲಿ, ಮಾಳವರು ನಡೆಸಿದ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದ ಉತ್ತಮಭದ್ರರನ್ನು ಪಶ್ಚಿಮ ಸತ್ರಪರ ಮಿತ್ರರೆಂದು ಹೇಳಲಾಗುತ್ತದೆ.[೪] ಈ ಹೇಳಿಕೆಯು ನಾಸಿಕ್ ಗುಹೆಗಳಲ್ಲಿನ ನಹಪಾನ ವೈಸ್ರಾಯ್ ಉಷಾವದಾತನು ಬರೆದ ಶಾಸನದಲ್ಲಿ ಕಂಡುಬರುತ್ತದೆ. ಶಾಸನದ ಹೇಳಿಕೆ ಹೀಗಿದೆ:

..ಮತ್ತು ಭಗವಂತನ ಆದೇಶದಂತೆ ನಾನು ಉತ್ತಮಭದ್ರರ ಮುಖ್ಯಸ್ಥನನ್ನು ಬಿಡುಗಡೆ ಮಾಡಲು ಹೋದೆನು, ಅವರು ಮಳೆಗಾಲದಲ್ಲಿ ಮಲೆಯಾಳರಿಂದ ಮುತ್ತಿಗೆ ಹಾಕಲ್ಪಟ್ಟಿದ್ದರು. ಆ ಮಲೆಯರು ಕೇವಲ ಘರ್ಜನೆಗೆ ( ನಾನು ಸಮೀಪಿಸಿದ) ಓಡಿಹೋದರು ಮತ್ತು ಅವರೆಲ್ಲರೂ ಉತ್ತಮಭದ್ರ ಯೋಧರ ಕೈದಿಗಳಾಗಿದ್ದಾರೆ.[೫]

ಟಿಪ್ಪಣಿಗಳು[ಬದಲಾಯಿಸಿ]

  1. Ethnic Settlements in Ancient India, p 25.
  2. Mahabharata 6.61.12; 4.71.14; 4.74.19; 8.7.15; 8.56.70
  3. Geographical Data in Early Puranas, A Critical Study, 1972, p 155, Dr M. R. Singh.
  4. Ancient Indian History and Civilization by Sailendra Nath Sen p.188
  5. Epigraphia Indica Vol.8 p.78-79