ಅರವಿಂದ ನಾಡಕರ್ಣಿ
Appearance
ಅರವಿಂದ ನಾಡಕರ್ಣಿಯವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ೧೯೩೧ರ ಜನವರಿ ೧ರಂದು ಜನಿಸಿದರು. ಇವರ ತಂದೆ ಶಂಕರ ದತ್ತಾತ್ರೇಯ ನಾಡಕರ್ಣಿ. ತಾಯಿ ಉಮಾಬಾಯಿ (ಭವಾನಿ). ಮುಂಬಯಿಯಲ್ಲಿ ಉದ್ಯೋಗ. ಕನ್ನಡದ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರ. ಮಡಿಕೇರಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಅಧ್ಯಕ್ಷರಾಗಿದ್ದರು.[೧]
ಕೃತಿಗಳು[ಬದಲಾಯಿಸಿ]
- ಕಾವ್ಯಾರ್ಪಣ
- ಮಾಯಾವಿ
- ಜರಾಸಂಧ
- ನಾ ಭಾರತೀಕುಮಾರ
- ನಗರಾಯಣ
- ಆತ್ಮಭಾರತ
- ಷಟ್ಪದ
- ಸಂಗ್ರಹ ಕಾವ್ಯ
- ಅಜ್ಞಾತ
- ಆಹತ
ಪುರಸ್ಕಾರ[ಬದಲಾಯಿಸಿ]
ಇವರ ಆತ್ಮಭಾರತಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.