ವೈಜಯಂತಿ ಕಾಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೈಜಯಂತಿ ಕಾಶಿ

ವೈಜಯಂತಿ ಕಾಶಿ ಭಾರತೀಯ ಶಾಸ್ತ್ರೀಯ ನೃತ್ಯಕಲಾವಿದೆ ಹಾಗೂ ಕೂಚಿಪೂಡಿ ಪ್ರತಿಪಾದಕ. ಕುಚಿಪುಡಿ ಭಾರತಆಂಧ್ರಪ್ರದೇಶದ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಒಂದಾಗಿದೆ.[೧]

ಬಾಲ್ಯ[ಬದಲಾಯಿಸಿ]

ವೈಜಯಂತಿ ಕಾಶಿ ಅವರು ಜನವರಿ ೧, ೧೯೬೦ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ನಾಟಕರತ್ನ ಗುಬ್ಬಿ ವೀರಣ್ಣನವರ ಮೊಮ್ಮಗಳಾದ ವೈಜಯಂತಿ ಕಾಶಿ ಅವರ ತಂದೆ ವಿಶ್ವನಾಥ್ ಹಾಗೂ ತಾಯಿ ಗಿರಿಜಮ್ಮ.

ಶಿಕ್ಷಣ[ಬದಲಾಯಿಸಿ]

ತಮ್ಮ ನೃತ್ಯ ಶಿಕ್ಷಣವನ್ನು ತುಮಕೂರಿನಲ್ಲಿ ನಾಟ್ಯಾಚಾರ್ಯ ಕೆ.ಎ. ರಾಮನ್ ಅವರಲ್ಲಿ ಆರು ವರ್ಷವಿರುವಾಗಲೇ ಪ್ರಾರಂಭಿಸುತ್ತಾರೆ. [೨]ವೈಜಯಂತಿ ಅವರು ನಂತರ ಅಹಮದಾಬಾದಿನ ದರ್ಪಣ ಸಂಸ್ಥೆಯ ಹಿರಿಯ ನಾಟ್ಯಾಚಾರ್ಯ ಸಿ.ಆರ್. ಆಚಾರ್ಯ, ಗುರು ವೇದಾಂತಂ ಪ್ರಹ್ಲಾದ ಶರ್ಮ, ಪದ್ಮಭೂಷಣ ಡಾ. ನಟರಾಜ ರಾಮಕೃಷ್ಣ ಮುಂತಾದ ದಿಗ್ಗಜರುಗಳ ಬಳಿ ಕೂಚಿಪೂಡಿ ನೃತ್ಯ ಕಲೆಯಲ್ಲಿ ಶಿಕ್ಷಣ ಪಡೆದು ಆ ಪ್ರಕಾರದಲ್ಲಿ ಹೆಚ್ಚಿನ ಸಂಶೋಧನೆಯನ್ನು ಕೂಡಾ ನಡೆಸಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಫೆಲೋಷಿಪ್ ಪಡೆದ ಕರ್ನಾಟಕದ ಪ್ರಥಮ ಮಹಿಳಾ ಕಲಾವಿದೆ ಎಂಬ ಖ್ಯಾತಿಗೂ ಅವರು ಪಾತ್ರರಾಗಿದ್ದಾರೆ. ಅಂತಿಮವಾಗಿ, ಅವರು ಮೊದಲ ಶ್ರೇಯಾಂಕದೊಂದಿಗೆ ರಾಜ್ಯವನ್ನು ಅಗ್ರಸ್ಥಾನದಲ್ಲಿದ್ದರು ಮತ್ತು ಚಿನ್ನದ ಸರಪಳಿಯನ್ನೂ ಗೆದ್ದರು.

ಜೀವನ[ಬದಲಾಯಿಸಿ]

ಆರಂಭದಲ್ಲಿ ನೃತ್ಯದಲ್ಲಿ ಆಸಕ್ತಿ ಹೊಂದಿರದ ವೈಜಯಂತಿ ಕಾಶಿ ಅಂತಿಮವಾಗಿ ರಂಗಮಂದಿರವನ್ನು ತೆಗೆದುಕೊಂಡರು. ಅಲ್ಲಿ ಅವರು ಕನ್ನಡ ಚಲನಚಿತ್ರೋದ್ಯಮದ ನಿರ್ದೇಶಕರಾಗಿದ್ದ ಟಿ.ಎಸ್.ನಾಗಾಭರಣನೊಂದಿಗೆ ಕೆಲಸ ಮಾಡಿದರು. ಸ್ವಲ್ಪ ಕಾಲ ಬ್ಯಾಂಕಿನಲ್ಲಿ ಕೆಲಸವನ್ನು ಮಾಡಿದರು, ಇದಾದ ನಂತರ ಅವರು ಸಂಪೂರ್ಣವಾಗಿ ನೃತ್ಯಕ್ಕಾಗಿ ಸಮಯವನ್ನು ಮೀಸಲಿಟ್ಟಿದ್ದರು. ಕೆಲ ಕಾಲ ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸಿದ ವೈಜಯಂತಿ ಅವರು ಮುಂದೆ ನೃತ್ಯವನ್ನೇ ತಮ್ಮ ಬದುಕಾಗಿಸಿಕೊಂಡರು.

ವೃತ್ತಿ ಜೀವನ[ಬದಲಾಯಿಸಿ]

'ಶಾಂಭವಿ ನೃತ್ಯ ಶಾಲೆ’ ಹಾಗೂ ನಾಟ್ಯ ಶಾಸ್ತ್ರದ 'ನೃತ್ಯ ಕೇಂದ್ರ’ಗಳ ಸಂಸ್ಥಾಪಕ ನಿರ್ದೇಶಕಾರಾಗಿ ವೈಜಯಂತಿ ಕಾಶಿ ಅವರು ಅನೇಕ ಪ್ರಯೋಗಗಳನ್ನು ವೇದಿಕೆಯ ಮೇಲೆ ಪ್ರದರ್ಶಿಸಿದ್ದಾರೆ. ಅನೇಕ ಪ್ರಸಂಗಗಳನ್ನು ಸಂಯೋಜನೆ ಮಾಡಿದ್ದಾರೆ. ಅವರು ಕೆಂಗೇರಿ ಉಪನಗರದಲ್ಲಿ ತಮ್ಮದೇ ಆದ ನಾಟ್ಯ ಮಂದಿರವನ್ನೂ ನಿರ್ಮಿಸಿದ್ದಾರೆ. ಇವರು ರೂಪಿಸಿದ 'ನೃತ್ಯಜಾತ್ರೆ' ಭಾರತದ ಏಕೈಕ ‘ನೃತ್ಯಮೇಳ’ವೆಂಬ ಪ್ರಸಿದ್ಧಿಗೆ ಪಾತ್ರವಾಗಿದ್ದು ಕಲಾಜಗತ್ತಿನಲ್ಲೊಂದು ಇತಿಹಾಸವನ್ನೇ ಸೃಷ್ಟಿಸಿದೆ. 'ಕುಚಿಪುಡಿ ನೃತ್ಯ ಸಂಪ್ರದಾಯ’,'ಮಂತ್ರಗಳ ಶಕ್ತಿ’ ಮುಂತಾದ ಧ್ವನಿ ದೃಶ್ಯ ಸುರುಳಿಗಳನ್ನು ಸಹ ಅವರು ಹೊರ ತಂದಿದ್ದಾರೆ. ರಾಷ್ಟ್ರೀಯ-ಅಂತರಾಷ್ಟ್ರೀಯ ಖ್ಯಾತಿ ಹೊಂದಿರುವ ವೈಜಯಂತಿ ದೂರದರ್ಶನ ಕೇಂದ್ರದ 'ಎ' ದರ್ಜೆ ಕಲಾವಿದರಾಗಿದ್ದಾರೆ. ಅನೇಕ ನೃತ್ಯೋತ್ಸವಗಳಲ್ಲಿ ಕಾರ್ಯಕ್ರಮಗಳಲ್ಲದೇ ಸೋದಾಹರಣ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ವಂಶಪಾರಂಪರ್ಯವಾಗಿ ಬಂದ ರಂಗವೃತ್ತಿಯನ್ನು ಕೂಡ ತ್ಯಜಿಸಿ ರಂಗಭೂಮಿಯಲ್ಲದೇ ಇತ್ತೀಚಿನ ಅನೇಕ ಧಾರಾವಾಹಿ ಚಿತ್ರಣಗಳಲ್ಲೂ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪರಿವಾರ[ಬದಲಾಯಿಸಿ]

[೩]ರಂಗಭೂಮಿಯಲ್ಲಿ ಅಭಿನಯಿಸುವಾಗ ಅವರು ಭೇಟಿಯಾದ ದೂರದರ್ಶನದ ಮತ್ತು ರಂಗಕಲೆ ಕಲಾವಿದ ವಿಜಯಾ ಕಾಶಿ ಅವರನ್ನು ವಿವಾಹವಾದರು. ಅವರಿಗೆ ಕುಚೀಪುಡಿ ನರ್ತಕಿಯಾಗಿರುವ ಪ್ರತೇಕ್ಷ ಕಾಶಿ ಎಂಬ ಮಗಳಿದ್ದಾಳೆ.

ಕೂಚಿಪೂಡಿಗೆ ಅರ್ಪಣೆ[ಬದಲಾಯಿಸಿ]

ಕೂಚಿಪೂಡಿ ಗುರು ಸಿ.ಆರ್. ಆಚಾರ್ಯರನ್ನು ಭೇಟಿಯಾದರು. ಅವಳು ಹೇಳಿದ ಸಂದರ್ಶನವೊಂದರಲ್ಲಿ ಇದು ತನ್ನ ಜೀವನದ ದಿಕ್ಕು ಬದಲಿಸಿತು. ಅವರು ೩೦ನೇ ವಯಸ್ಸಿನಲ್ಲಿ ಕುಚಿಪುಡಿಯನ್ನು ಮತ್ತೊಮ್ಮೆ ನೃತ್ಯ ಮಾಡಲು ಪ್ರಾರಂಭಿಸಿದರು. ಭಾರತೀಯ ಶಾಸ್ತ್ರೀಯ ನೃತ್ಯ ರೂಪಗಳಲ್ಲಿ ಭರತನಾಟ್ಯ, ಕುಚುಪುಡಿ ಮತ್ತು ಟೆಂಪಲ್ ರಿಚುಯಲ್ ನೃತ್ಯಗಳನ್ನು ಕಲಿತರು. ತಮ್ಮ ಗುರುಗಳಾದ ಲೇಟ್ ಗುರು ಸಿಆರ್ ಆಚಾರ್ಯ, ಲೇಟ್ ವೇದಾಂತ ಪ್ರಹಲದಾ ಶರ್ಮಾ, ಪದ್ಮಶ್ರೀ ವೇದಾಂತಮ್ ಸತ್ಯನಾರಾಯಣ ಶರ್ಮಾ, ಕೋರಡಾ ನರಸಿಂಹ ರಾವ್ ಮತ್ತಿತರರು ಕುಚಿಪುಡಿನಲ್ಲಿ ಡೈನಮಿಕ್ ಫೋಸ್೯ ಸಾಬೀತುಪಡಿಸಿದ್ದಾರೆ. ವೈಜಯಂತಿಯವರು ಕುಚಿಪುಡಿಯ ಕಲೆಯ ಬಗ್ಗೆ ಆಳವಾದ ಮತ್ತು ಸಂಯೋಜಿತ ತಿಳುವಳಿಕೆಯನ್ನು ಮಾತ್ರವಲ್ಲದೇ ದೂರದರ್ಶನ ಮತ್ತು ರಂಗಮಂದಿರಗಳಲ್ಲಿ ನಟಿಯಾಗಿ ಮತ್ತು ನೃತ್ಯ ಸಂಯೋಜಕ ಮತ್ತು ನೃತ್ಯ-ಚಿಕಿತ್ಸಕರಾಗಿ ಕೆಲಸ ಮಾಡುತ್ತಾರೆ.

ಪ್ರದರ್ಶನಗಳು[ಬದಲಾಯಿಸಿ]

ವೈಜಯಂತಿ ಅವರು ಅಂತರರಾಷ್ಟ್ರೀಯ ಕುಚಿಪುಡಿ ಕನ್ವೆನ್ಷನ್ ಯುಎಸ್ಎ, ಮಿಲಾಪ್ ಫೆಸ್ಟ್ ಯುಕೆ, ಓರಿಯಂಟಲ್ ಡ್ಯಾನ್ಸ್ ಫೆಸ್ಟಿವಲ್ ಜರ್ಮನಿ, ಆಫ್ರಿಕಾದಲ್ಲಿ ಭಾರತದ ಉತ್ಸವ, ಮಲಗಾದಲ್ಲಿನ ಇಂಡಿಯಾ ಫಿಲ್ಮ್ ಫೆಸ್ಟಿವಲ್, ಕೊರಿಯಾದಲ್ಲಿನ ಅಪ್ಪಾನ್ ಡಾನ್ಸ್ ಫೆಸ್ಟಿವಲ್, ಒಲಿಂಪಿಕ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಉತ್ಸವಗಳಲ್ಲಿ ಕಾಣಿಸಿಕೊಂಡಿದೆ. ಇಟಲಿಯಲ್ಲಿ ಉತ್ಸವ, ಲಾಸ್ ಎಂಜಲೀಸ್ನಲ್ಲಿ ಇಂಟರ್ನ್ಯಾಷನಲ್ ಕನ್ನಡ ಕನ್ವೆನ್ಷನ್, ಈಜಿಪ್ಟ್, ಮಾಲ್ಟಾ, ಟ್ಯುನೀಷಿಯಾ, ಇಸ್ರೇಲನಲ್ಲಿ ಕರ್ಮಿಯಲ್ ನೃತ್ಯ ಉತ್ಸವ ಮತ್ತು ಇನ್ನಿತರ ಅನೇಕ ಅಂತಾರಾಷ್ಟ್ರೀಯ ನೃತ್ಯ ಮತ್ತು ಸಂಗೀತ ಉತ್ಸವ. ಅವರು ಉಪನ್ಯಾಸ-ಪ್ರದರ್ಶನ ನೀಡಿದ್ದಾರೆ ಮತ್ತು ಯುಎಸ್, ಇಟಲಿ, ಜರ್ಮನಿ, ದುಬೈ, ಸಿಂಗಪುರ, ಮಲೇಷಿಯಾ, ಜಪಾನ್, ಬರ್ಲಿನ್, ಆಸ್ಟ್ರೇಲಿಯಾ, ಆಸ್ಟ್ರಿಯಾ, ಸ್ಪೇನ್, ಸ್ವಿಟ್ಜರ್ಲ್ಯಾಂಡ್ ಮತ್ತು ಇತರ ಹಲವು ದೇಶಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ವೈಜಯಂತಿ ಕಾಶಿ ಹಾಗೂ ಮಗಳು ಪ್ರತೀಕ್ಷ ಕಾಶಿ ಒಗ್ಗೂಡಿ ಜೋಡಿಹಾಡಿಗೆ ಪ್ರದರ್ಶನವನ್ನು ನೀಡಿದ್ದಾರೆ. ಈ ತಾಯಿ-ಮಗಳನ್ನು ಭಾರತದಲ್ಲಿ ಉತ್ತಮ ಜೋಡಿ ಕೂಚಿಪೂಡಿ ನೃತ್ಯಕಲಾವಿದರು ಎಂದು ಪರಿಗಣಿಸಿದ್ದಾರೆ. ಲೋಕ-ಜಾನಪದ ಉತ್ಸವದಲ್ಲಿ, ಎಲುರು, ಆಂಧ್ರಪ್ರದೇಶದಲ್ಲಿ ಶಾಂಭಾವಿ ಶಾಲೆ ನೃತ್ಯದ ಗುಂಪಿನೊಂದಿಗೆ ಪ್ರದರ್ಶಿಸಿದರು.

ಪ್ರಮುಖ ಸಾಧನೆಗಳು ಮತ್ತು ಪ್ರಶಸ್ತಿಗಳು[ಬದಲಾಯಿಸಿ]

ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರಗಳಲ್ಲದೇ ‘ಕರ್ನಾಟಕ ಕಲಾಶ್ರೀ’, 'ಸಿಂಗಾರಮಣಿ’, 'ಆರ್ಯಭಟ’ ಮುಂತಾದ ಅನೇಕ ಗೌರವಗಳು ವೈಜಯಂತಿ ಕಾಶಿ ಅವರನ್ನರಸಿ ಬಂದಿವೆ. ವೈಜಯಂತಿ ಕಾಶಿ ಅವರು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ವೈಜಯಂತಿ ಕಾಶಿ ಅವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೨೦೦೧-೦೨ನೇ ಸಾಲಿನ 'ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.[೪] ಅವರು ಕೂಚಿಪುಡಿ ಪ್ರಾಚೀನ ಶೈಲಿ ಮತ್ತು ಹೆಚ್ಚು ಸಮಕಾಲೀನ ಸೌಂದರ್ಯದ ನಡುವೆ ನೃತ್ಯ-ಸೇತುವೆಯಾಗಿದ್ದಾರೆ. ಅವರು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಕಲೆ ಮತ್ತು ಸಂಸ್ಕ್ರತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಉಲ್ಲೇಖ[ಬದಲಾಯಿಸಿ]