ತಿಂಡ್ಲು ಶಿಲಾಶಾಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಿಂಡ್ಲು ಶಿಲಾಶಾಸನ

ಈ ಶಿಲಾಶಾಸನವು ಬೆಂಗಳೂರಿನ ತಿಂಡ್ಲು ಪ್ರದೇಶದಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. 1368 ನೇ ಇಸವಿ. ಇದು ವಿಜಯನಗರ ಸಾಮ್ರಾಜ್ಯದ ಬುಕ್ಕರಾಯನ ಆಳ್ವಿಕೆಯ ಕಾಲದ ಶಾಸನವಾಗಿದೆ. ಈ ಶಾಸನ ಕಲ್ಲಿನ ಗಾತ್ರ 7'6" x 3'6". ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ.[೧]. ಈ ಶಾಸನದ ಕೆಲವು ಸಾಲುಗಳು ಮಾತ್ರ ಕಾಣವಂತಿದ್ದು ಉಳಿದ ಪಠ್ಯ ಸವೆದುಹೋಗಿ ಓದಲು ಸಾಧ್ಯವಾಗದಂತಿದೆ.

ಶಾಸನ ಪಠ್ಯ[ಬದಲಾಯಿಸಿ]

ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN27 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೨]


ಅದೇ ಹೊಬಳಿ ತಿಂಡ್ಲು ಗ್ರಾಮಕ್ಕೆ ದಕ್ಷಿಣದಲ್ಲಿ ಪೂಜಾರಿ ಹೊಲದಲ್ಲಿ

1. ಸ್ವಸ್ತಿಶ್ರೀಮತುಶಕವರುಸಂಗಳು೧೨೪.ಸಂ
2. ದುವಲವಂಗಸಂವತ್ಸರಪುವ್ಯಬ.....ಸೋದಲು
3. ಶ್ರೀಮನುಮಹಾಮಂಡಳೇಶ್ವರಅರಿರಾಯವಿ
4. ಭಾಡಭಾಷೆಗೆತಪ್ಪುವರಾಯರಗಂಡಚತುಸ್ಸ
5. ಮುದ್ರಾಧಿಪತಿವೀರಬುಕ್ಕಂಣ.......

(ಮುಂದೆ ಸವೆದು ಹೋಗಿದೆ)

ಅರ್ಥವಿವರಣೆ[ಬದಲಾಯಿಸಿ]

Be it well. (On the date specified), when the maha-mandalesvara, subdue of hostile kings, champion over kings who break their word, master of the four oceans, Bukkanna……(rest effaced).

ಆಕರಗಳು/ಉಲ್ಲೇಖಗಳು[ಬದಲಾಯಿಸಿ]

  1. City losing memories etched in stone, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್, 17th January 2018
  2. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)

ಹೊರಸಂಪರ್ಕಕೊಂಡಿಗಳು[ಬದಲಾಯಿಸಿ]