|
ವಿಕಿಪೀಡಿಯಕ್ಕೆ ಸ್ವಾಗತ!
ಕನ್ನಡ ವಿಕಿಪೀಡಿಯ ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ
ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ೧೩,೦೪೫ ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ.
|
|
|
ವಿಶೇಷ ಲೇಖನ
|
ಚಿಪ್ಪಿನ ಆಕಾರ ಹೊಂದಿರುವ ಆಮೆಗಳು ಸರೀಸೃಪ ಜಾತಿಗೆ ಸೇರಿದವು. (ಇವುಗಳಲ್ಲಿ ಮೇಲು ವರ್ಗದ ದೊಡ್ಡ ಗಾತ್ರದ ಗುಂಪಿಗೆ ಸೇರಿದ್ದು ಚಿಪ್ಪಿರುವ ಪ್ರಾಣಿ -ಕೆಲೋನಿಯಾ-) ವಿಶೇಷ ಎಲುಬು ಅಥವಾ ಮೃದುವಾದ ಎಲುಬಿನ ಚಿಪ್ಪು ಅವುಗಳ ಪಕ್ಕೆಲಬುಗಳಿಂದ ಬೆಳವಣಿಗೆ ಹೊಂದಿ ಅವು ಕವಚದ ಆಕಾರದಲ್ಲಿ ಕಾರ್ಯನಿರ್ವಹಿಸುತ್ತವೆ. "ಆಮೆ"ಗಳನ್ನು ಇಡಿಯಾಗಿ ಚಿಪ್ಪಿರುವ ಪ್ರಾಣಿವರ್ಗಕ್ಕೆ ಸೇರಿಸಬಹುದು ಅಥವಾ ಅಥವಾ ಒಂದೇ ಸ್ವಭಾವ ಇರುವ ಚಿಪ್ಪಿರುವ ಪ್ರಾಣಿಗಳ ವರ್ಗಕ್ಕೂ ಸೇರಿಸಬಹುದು - ಸಮುದ್ರ ಆಮೆ, ಸಿಹಿ ನೀರಿನ ಆಮೆ, ಕೂರ್ಮ ಮತ್ತು ಕೆಳಗಿನ ಚರ್ಚೆಯನ್ನೂ ನೋಡಿ.
ಚಿಪ್ಪಿರುವ ಪ್ರಾಣಿ ವರ್ಗದಲ್ಲಿ ಈಗಲೂ ಇರುವ (ಜೀವಿಸಿರುವ) ಮತ್ತು ನಶಿಸಿ ಹೋಗಿರುವ ತಳಿಗಳಿವೆ. ಆಮೆಗಳ ಅತಿ ಪ್ರಾಚೀನ ಅಸ್ತಿತ್ವ ಕಂಡು ಬಂದದ್ದು ೨೧೫ ದಶಲಕ್ಷ ವರ್ಷಗಳ ಹಿಂದೆ. ಇದು ಆಮೆಗಳನ್ನು ಅತಿ ಹಳೆಯ ಸರೀಸೃಪ ವರ್ಗಕ್ಕೆ ಸೇರಿಸಿದೆ ಮತ್ತು ಹಲ್ಲಿಗಳು ಹಾಗೂ ಹಾವುಗಳಿಗಿಂತಲೂ ಇವು ಪ್ರಾಚೀನವಾಗಿವೆ. ಇಂದು ಜೀವಂತವಿರುವ ಅನೇಕ ತಳಿಗಳಲ್ಲಿ ಕೆಲವು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿವೆ. (ಹೆಚ್ಚಿನ ಮಾಹಿತಿ...)
« ಹಿಂದಿನ ಸಂಚಿಕೆ | ಹಳೆಯ ಸಂಚಿಕೆಗಳು »
|
ನಮ್ಮ ಹೊಸ ಲೇಖನಗಳಿಂದ...
|
|
ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:
- ಕಾಳಿಂಗ ಸರ್ಪ (ಚಿತ್ರಿತ) - ೫.೬ ಮೀಟರ್ಗಳವರೆಗೆ ಬೆಳೆಯುವ ವಿಶ್ವದ ಅತಿ ಉದ್ದದ ಈ ವಿಷಪೂರಿತ ಹಾವು ಆಗ್ನೇಯ ಏಷ್ಯಾ ಮತ್ತು ಭಾರತದ ಭಾಗಗಳಲ್ಲಿ ಕಾಣಸಿಗುತ್ತದೆ.
- ಕೊವಾಲಾ - ದಿನದ ೧೬ ಗಂಟೆಗಳಷ್ಟು ಕಾಲ ನಿದ್ದೆ ಮಾಡುವ ಈ ಪ್ರಾಣಿಯ ಮುಖ್ಯ ಆಹಾರ ನೀಲಗಿರಿ ಮರದ ಎಲೆಗಳು.
- ರೆಕ್ಕೆದಿರಿಸು ಹಾರಾಟ - ಒಂದು ವಿಶೇಷವಾದ ಜಿಗಿತದ ದಿರಿಸನ್ನು ಬಳಸಿಕೊಂಡು ಗಾಳಿಯಲ್ಲಿ ತೇಲಿಕೊಂಡು ಸಾಗುವ ಕ್ರೀಡೆಯಾಗಿದೆ.
- ಸರ್ದಾರ್ ವಲ್ಲಭಭಾಯ್ ಪಟೇಲ್ - ಉಕ್ಕಿನ ಮನುಷ್ಯ ಎಂದು ಹೆಸರಾದ ಇವರು ಭಾರತದ ೫೦೦ ಕ್ಕೂ ಹೆಚ್ಚಿನ ಅರಸೊತ್ತಿಗೆಗಳನ್ನು ಹಾಗೂ ಸಂಸ್ಥಾನಗಳನ್ನು ಏಕೀಕರಿಸುವಲ್ಲಿ ಪೂರ್ಣ ಯಶಸ್ಸು ಸಾಧಿಸಿದರು
|
|
ಸುದ್ದಿಯಲ್ಲಿ
|
- ಮೇ ೧೪ರಂದು ಖ್ಯಾತ ದಾವೂದಿ ಬೊಹ್ರಾ ಸಮುದಾಯದ ಮುಖ್ಯಸ್ಥ, 'ಅಸ್ಘರ್ ಆಲಿ ಎಂಜಿನಿಯರ್' ಮುಂಬಯಿಯಲ್ಲಿ ನಿಧನ.
- ಮೇ ೧೩ರಂದು ಶ್ರೀ ಸಿದ್ದರಾಮಯ್ಯ ಅವರಿಂದ ಕರ್ನಾಟಕದ ೨೨ನೆಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ
- ಮೇ ೫ ರಂದು ಕರ್ನಾಟಕ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಆಢಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಸೋಲು ಮತ್ತು ಕಾಂಗ್ರಸ್ ಪಕ್ಷಕ್ಕೆ ನಿಚ್ಚಳ ಬಹುಮತ
- ಖ್ಯಾತ ಕರ್ನಾಟಕ ಸಂಗೀತ ಪಿಟೀಲು ವಾದಕ ಲಾಲ್ಗುಡಿ ಜಯರಾಮನ್ ಏಪ್ರಿಲ್ ೨೨ ರಂದು ನಿಧನ
- ಮಾನವ ಕಂಪ್ಯೂಟರ್ ಎಂದೇ ಖ್ಯಾತರಾಗಿದ್ದ ಶಕುಂತಲಾ ದೇವಿ ಏಪ್ರಿಲ್ ೨೧ರಂದು ಬೆಂಗಳೂರಿನಲ್ಲಿ ನಿಧನ
- ಒರಿಯ ಲೇಖಕಿ ಪ್ರತಿಭಾ ರೇಗೆ ೨೦೧೧ರ ಮತ್ತು ತೆಲುಗು ಲೇಖಕ ರವುರಿ ಭಾರದ್ವಾಜರಿಗೆ ೨೦೧೨ರ ಭಾರತೀಯ ಜ್ಞಾನಪೀಠ ಪುರಸ್ಕಾರ
- ಏಪ್ರಿಲ್ ೧೭ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಾಂಬ್ ಸ್ಫೋಟದಲ್ಲಿ ೧೬ ಜನರಿಗೆ ಗಾಯ
|
ಈ ತಿಂಗಳ ಪ್ರಮುಖ ದಿನಗಳು
|
| ಮೇ:
|
|
ಭಾರತದ ಇತರ ನುಡಿಗಳಲ್ಲಿ ವಿಕಿಪೀಡಿಯ
ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).