ವರದಹಳ್ಳಿ
ವಿಕಿಪೀಡಿಯ ಇಂದ
ವರದಹಳ್ಳಿ ಅಥವಾ ವರದಪುರ ಅಥವಾ ವದ್ದಳ್ಳಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇದು ಶ್ರೀ ಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ ಮತ್ತು ಸಮಾಧಿ ಹೊಂದಿದ ಸ್ಥಳ. ಇಲ್ಲಿ ಶ್ರೀಧರ ಸ್ವಾಮಿಗಳು ಸ್ಥಾಪಿಸಿದ ಆಶ್ರಮ, ಅವರ ಸಮಾಧಿ ಮತ್ತು ಧರ್ಮ ಧ್ವಜಗಳನ್ನು ಕಾಣಬಹುದು.
ತಲುಪುವ ದಾರಿ [ಬದಲಾಯಿಸಿ]
ವರದಹಳ್ಳಿಯು ಸಾಗರದಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿದೆ. ಅಲ್ಲಿಗೆ ತಲುಪಲು ಅನೇಕ ದಾರಿಗಳಿವೆ:
- ಸಾಗರದಿಂದ ಬಿ.ಎಚ್ ರಸ್ತೆಯಲ್ಲಿ ಹೊನ್ನಾವರಕ್ಕೆ ಹೋಗುವ ದಾರಿಯಲ್ಲಿ ವರದಹಳ್ಳಿ ಕತ್ತರಿಯ ಬಳಿ ಎಡಕ್ಕೆ ತಿರುಗಿ ಹೋಗಬೇಕು.
- ಸಾಗರದಿಂದ ಹೊರಟು ಇಕ್ಕೇರಿ ದೇವಸ್ಥಾನ ನೋಡಿಕೊಂಡು ಕಲ್ಮನೆ ಮುಖಾಂತರ ಹಾಗೆಯೇ ವರದಹಳ್ಳಿ ತಲುಪಬಹುದಾಗಿದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |