ವಿಷಯಕ್ಕೆ ಹೋಗು

ಸುನಿತಾ ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ.ಸುನಿತಾ ಶೆಟ್ಟಿ
ಜನನ
ಸುನಿತಾ

(೨೭-೦೬-೧೯೩೨) ಮಂಗಳೂರು ತಾಲ್ಲೂಕಿನ ಕಳವಾರು ಗ್ರಾಮದಲ್ಲಿ ಜನಿಸಿದರು. ತಂದೆ, ಕೂಕ್ರ ಡಿ.ಶೆಟ್ಟಿ,ಹಾಗೂ ತಾಯಿ ಸುಂದರಿ ಶೆಟ್ಟಿಯವರು.
ರಾಷ್ಟ್ರೀಯತೆಭಾರತೀಯರು
ವಿದ್ಯಾಭ್ಯಾಸಮಂಗಳೂರಿನ ಸರ್ಕಾರಿ ಕಾಲೇಜ್, ಬಿ.ಟಿ-ಮಂಗಳೂರಿನ ಕಾಲೇಜ್, ಎಂ.ಎ; ಮುಂಬಯಿ ವಿಶ್ವವಿದ್ಯಾಲಯ, ಪಿ.ಎಚ್.ಡಿ.ಪದವಿ.
ಶಿಕ್ಷಣ(s)ನಿವೃತ್ತ ಪ್ರಾಧ್ಯಾಪಕಿ,ಮತ್ತು ಸಮಾಜಸೇವಕಿ,
Known forಸೃಜನ ಮಹಿಳಾ ಬರಹಗಾರ್ತಿಯರ ಬಳಗಕ್ಕೆ ಮಾರ್ಗದರ್ಶಿ ಹಾಗೂ ಸಂಚಾಲಕಿ

ಸುನೀತಾ ಶೆಟ್ಟಿ, ಎಂ (1932). ಪ್ರಧಾನವಾಗಿ ಸಾಹಿತ್ಯ ಸೇವೆಯನ್ನು ಕೈಗೊಂಡಿದ್ದರೂ ಕನ್ನಡ ಭಾಷೆಯ ಏಳಿಗೆಗಾಗಿ, ದೂರದ ಮುಂಬಯಿಯಲ್ಲಿ ದುಡಿಯುತ್ತಿರುವವರು. ಅಧ್ಯಾಪಕಿಯಾಗಿ, ಕನ್ನಡ ಪತ್ರಿಕೆಯೊಂದರ ಸಂಪಾದಕ ಮಂಡಳಿಯ ಸದಸ್ಯೆಯಾಗಿ, ಜೊತೆಯಲ್ಲಿ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡು ಕನ್ನಡದ ಕಂಪನ್ನು ಮಹಾರಾಷ್ಟ್ರದಲ್ಲಿ ಪಸರಿಸುವಂತೆ ಮಾಡುತ್ತಿದ್ದಾರೆ ಸುನೀತಾ ಶೆಟ್ಟಿ. ಸುನಿತಾ ಶೆಟ್ಟಿ ಎಂ, ಮುಂಬಯಿ ಮಹಾನಗರದ ಸಂಸ್ಕೃತಿ ವಲಯದ ಅಭಿವ್ಯಕ್ತಿಗಳಾದ, ಭಾಷೆ, ಸಂಗೀತ,ನಾಟಕ,ಸಾಹಿತ್ಯ ಸಮ್ಮೇಳನಗಳು, ಮೊದಲಾದವುಗಳಲ್ಲಿ ಅತ್ಯಂತ ಸಕ್ರಿಯರಾಗಿ ಭಾಗವಹಿಸುವುದಲ್ಲದೆ ಪ್ರೋತ್ಸಾಹಕೊಡಲು ಸದಾ ನಿರತರಾಗಿರುವ ವ್ಯಕ್ತಿಗಳಲ್ಲೊಬ್ಬರು. ಅವರು ಕನ್ನಡ, ತುಳು ಕನ್ನಡಿಗರಿಗೆ ಪರಿಚಿತರು.[]

ಜನನ, ಬಾಲ್ಯ, ವಿದ್ಯಾಭ್ಯಾಸ, ವೃತ್ತಿ

[ಬದಲಾಯಿಸಿ]

ಸುನಿತಾ ಶೆಟ್ಟಿಯವರು, (೨೭-೦೬-೧೯೩೨) ಮಂಗಳೂರು ತಾಲ್ಲೂಕಿನ ಕಳವಾರು ಗ್ರಾಮದಲ್ಲಿ ಜನಿಸಿದರು. ಅವರ ತಂದೆ ತಾಯಿಗಳು, ಕೂಕ್ರ ಡಿ.ಶೆಟ್ಟಿ,ಹಾಗೂ ಸುಂದರಿ ಶೆಟ್ಟಿಯವರು. ಪ್ರಾಥಮಿಕ ಶಿಕ್ಷಣ ಕಳವಾರಿನಲ್ಲಿ, ಮನೆಹತ್ತಿರದ ಶಾಲೆಯಲ್ಲಿ, (೧ರಿಂದ ೫ ನೆಯ ಇಯತ್ತೆವರೆಗೆ) ನಡೆಯಿತು. ಮಾಧ್ಯಮಿಕ ಶಾಲೆ. ಕಳವಾರಿನ ಚರ್ಚ್ ಶಾಲೆಯಲ್ಲಿ (೬ರಿಂದ ೮ನೆಯ ಇಯತ್ತೆ) ಪ್ರೌಢಶಾಲೆ ವಿದ್ಯಾದಾಯಿನಿ ಹೈಸ್ಕೂಲ್ ಸೂರಾತ್ಕಲ್, (೯ ರಿಂದ ೧೧ ನೇ ಇಯತ್ತೆವರೆಗೆ) ಇಂಟರ್ ಮೀಡಿಯೆಟ್ ಮಂಗಳೂರಿನ ಸರ್ಕಾರಿ ಕಾಲೇಜ್, ಬಿ.ಟಿ-ಮಂಗಳೂರಿನ ಕಾಲೇಜಿನಲ್ಲಿ ಸ್ನಾತಕೋತ್ತರ ಹಾಗೂ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಹಾಗೂ ಪಿಎಚ್.ಡಿ. ಪದವಿ ಪಡೆದರು. ಶಾಲಾಶಿಕ್ಷಕಿಯ ಹುದ್ದೆಯಿಂದ ಮುಂಬಯಿಯ ಗುರುನಾನಕ ಖಾಲ್ಸಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಆಮಂತ್ರಿತ ಪ್ರಾಧ್ಯಾಪಕಿಯಾಗಿ ಅಖಂಡವಾಗಿ ಮೂವತ್ತಾರು ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

ವಿವಾಹ

[ಬದಲಾಯಿಸಿ]

ಸುನಿತಾರವರು, ಮಹಾಬಲಶೆಟ್ಟಿಯವರ ಜೊತೆ ವಿವಾಹವಾದರು. ಅಧ್ಯಾಪತಕಿಯಾಗಿ, ಕೋಟೆಕಾರಿನ ಆನಂದಾಶ್ರಮ ಹೈಸ್ಕೂಲ್,ದಲ್ಲಿ ಕೆಲವು ತಿಂಗಳೂ,ಮುಂಬಯಿನ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ, ೧೯೬೬ ರ ವರೆಗೆ, ಕನ್ನಡ ಪ್ರಾಧ್ಯಾಪಕಿ, ಖಲ್ಸಾ ಕಾಲೇಜ್, ಮುಂಬಯಿ. ೧೯೬೬ರ ರಿಂದ []

ಸಾಹಿತ್ಯ ಸೇವೆ

[ಬದಲಾಯಿಸಿ]

ಕನ್ನಡವಲ್ಲದೆ ಕರ್ನಾಟಕದ ಉಪ-ಭಾಷೆಗಳಾದ ಕೊಂಕಣಿ, ತುಳುಗಳಲ್ಲೂ, ನೆಲೆನಿಂತ ರಾಜ್ಯದ ಮರಾಠಿಯಲ್ಲಿಯೂ ಡಾ||ಎಂ.ಸುನೀತಾ ಅವರ ಸಾಹಿತ್ಯ ಕೊಡುಗೆ ಅಪಾರವಾದುದು. ರಾಜ್ಯ ಸರ್ಕಾರದಿಂದ `ರಾಣಿ ಅಬ್ಬಕ್ಕ ಪ್ರಶಸ್ತಿ ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ `ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, `ಪ್ರವಾಸಿಯ ಹೆಜ್ಜೆಗಳು ಕೃತಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ಕೊಡಮಾಡುವ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, `ಹೃದಯವಂತರು ಕೃತಿಗೆ ಮಂಗಳೂರಿನ ಪತ್ರಿಕಾ ಪ್ರಶಸ್ತಿ, ಪುತ್ತೂರಿನ ಕಿಲ್ಲೆ ಪ್ರತಿಷ್ಠಾನದವರ ಕಿಲ್ಲೆ ಪ್ರಶಸ್ತಿ, ಮುಂಬಯಿಯ ಗುರುನಾರಾಯಣ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರಲ್ಲದೆ, ರಾಷ್ಟ್ರ, ರಾಜ್ಯಮಟ್ಟದ ಅನೇಕ ಬಹು ಭಾಷಾ ಸಾಹಿತ್ಯ ಸಮ್ಮೇಳನಗಳಲ್ಲಿ, ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಮಂಗಳೂರಿನಲ್ಲಿ ನಡೆದ `ವಿಶ್ವ ತುಳು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಒಡೆಯೂರಿನಲ್ಲಿ ನಡೆದ ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಅಮೆರಿಕೆಯಲ್ಲಿ ನಡೆದ ವಿಶ್ವ ಬಂಟ್ ಸಮ್ಮೇಳನಕ್ಕೆ ಆಮಂತ್ರಿತ ಅತಿಥಿ. 2004ರಲ್ಲಿ ಮುಂಬಯಿಯಲ್ಲಿ ಮೂರು ದಿನಗಳ ಕಾಲ ನಡೆದ ಮಹಾರಾಷ್ಟ್ರ ರಾಜ್ಯ ಕನ್ನಡಿಗರ `ಆರನೆಯ ಸಾಹಿತ್ಯ ಮತ್ತು ಸಾಂಸ್ಕøತಿಕ ಸಮಾವೇಶದ ಅಧ್ಯಕ್ಷತೆ ಇತ್ಯಾದಿಗಳನ್ನು ಉದಾಹರಿಸಬಹುದು. ಡಾ||ಎಂ.ಸುನೀತಾ ಶೆಟ್ಟಿಯವರ ಇನ್ನೊಂದು ಮುಖ್ಯ ಕಾರ್ಯ ಕ್ಷೇತ್ರವೆಂದರೆ ಸಮಾಜಸೇವೆ. ಈ ದಿಸೆಯಲ್ಲಿ ಪುಣೆಯಿಂದ `ಗುಂಡುರಾಜ ಶೆಟ್ಟಿ ಬಂಗಾರದ ಪದಕ ಮತ್ತು `ಸಮಾಜ ಭೂಷಣಿ ಬಿರುದು ಪಡೆದಿದ್ದಾರೆ.

ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ವೈವಿಧ್ಯಮಯ. `ನಿನಾದ, `ಅಂತರ ಗಂಗೆ, `ಪಯಣ' ಕವಿತಾ ಸಂಕಲನ `ಸಮೀಕ್ಷಾ ಲೇಖನ ಸಂಗ್ರಹ, `ಪ್ರವಾಸಿಯ ಹೆಜ್ಜೆಗಳು, `ಅಕ್ಷಯ ಸಂಪದ, ಪ್ರವಾಸ ಕಥನ. ಸಂಪಾದಿತ ಕೃತಿಗಳಾಗಿ `ಬಂಟರು ಕೆಲವು ಅಧ್ಯಯನ, ಮತ್ತು `ಅರವತ್ತು ಕವಿತೆಗಳು, `ಡಾಕ್ಟರೇಟ್ ಪದವಿ ಗಳಿಸಿಕೊಟ್ಟ `ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ತ್ರೀ ಮಹಾಪ್ರಬಂಧ ಇವೆಲ್ಲ ಪ್ರಕಟವಾಗಿವೆ. ತುಳು ಭಾಷೆಯಲ್ಲಿ ರಚಿಸಿದ `ಪಿಂಗಾರ `ಸಂಕ್ರಾಂತಿ', `ನಾಗ ಸಂಪಿಗೆಗಳು ಗದ್ಯಕೃತಿಗಳು, `ಕಲಾ ತಪಸ್ವಿ-ಕೆ.ಕೆ.ಹೆಬ್ಬಾರ್ ವ್ಯಕ್ತಿ ಚಿತ್ರ ಇವು ಪ್ರಕಟವಾಗಿರುವ ಇನ್ನಿತರ ಗ್ರಂಥಗಳು.

ಆವರು ಪ್ರಕಟಿಸಿದ ಕವನ ಸಂಕಲನಗಳು :

  1. ಪಿಂಗಾರ,
  2. ಸಂಕ್ರಾಂತಿ,
  3. ನಾಗಸಂಪಿಗೆ,

ಕವನ ಸಂಕಲನಗಳು ತುಳು ಸಂಸ್ಕೃತಿಯ ಪರಿಚಯವನ್ನು ಮಾಡುವಲ್ಲಿ ಯಶಸ್ವಿಯಾಗಿರುವುದಲ್ಲದೆ, ತುಳುನಾಡಿನ ಮಹಿಳೆಯರ ಭಾವನೆಗಳಿಗೆ ನೇರವಾಗಿ ಸ್ಪಂದಿಸಿವೆ. ಸುನಿತಾರವರು, ಮುಂಬಯಿ ವಿಶ್ವವಿದ್ಯಾಲಯದಿಂದ 'ಡಾಕ್ಟರೇಟ್ ಪದವಿ' ಗಳಿಸಿದರು. ಅವರು ತೆಗೆದುಕೊಂಡ ವಿಷಯ, 'ವಿಮೆನ್ ಇನ್ ದ ನಾವೆಲ್ಸ್ ಆಫ್ ಡಾ ಶಿವರಾಮ ಕಾರಂತ'[]

ಸೃಜನಾ ಬರಹಗಾರ್ತಿಯರ ಬಳಗದಲ್ಲಿ

[ಬದಲಾಯಿಸಿ]

ಡಾ.ಸುನಿತಾ ಶೆಟ್ಟಿಯವರು, ಮುಂಬಯಿನಗರದ ಬರಹಗಾರ್ತಿಯರ ಬಳಗದ ಮಾರ್ಗದರ್ಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.[]

ಪ್ರಶಸ್ತಿಗಳು

[ಬದಲಾಯಿಸಿ]

ಕರ್ನಾಟಕದಲ್ಲಿ ಜನಿಸಿ, ಮುಂಬಯಿಯಲ್ಲಿ ಕನ್ನಡ ಸಾಹಿತ್ಯ ಕೃಷಿ ನಡೆಸುತ್ತಾ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಾರ್ಥಕ ಜೀವಿಯಾದ ಎಂ ಸುನೀತಾ ಶೆಟ್ಟಿಯವರಿಗೆ ಹಲವಾರು ಗೌರವಗಳು ಸಂದಿವೆ. # # ೨೦೦೪ರ ಕರ್ನಾಟಕ ಸರ್ಕಾರ, ದಾನ ಚಿಂತಾಮಣಿ ಪ್ರಶಸ್ತಿ.

  1. ೧೯೯೬-೯೭ ರ ಸಾಲಿನ, ಕರ್ನಾಟಕ ತುಳು ಅಕ್ಯಾಡೆಮಿ ಪ್ರಶಸ್ತಿ.
  2. ೨೦೧೮ ರ ಸಾಲಿನ 'ಯು.ಎ.ಇ ಬಂಟ್ಸ್ ನ ಪ್ರತಿಷ್ಠಿತ ಬಂಟ್ ವಿಭೂಷಣ ಪ್ರಶಸ್ತಿ' ಪ್ರದಾನ ಮಾಡಲಾಯಿತು.[]
  3. ಡಾ. ಸುನೀತಾ ಎಂ.ಶೆಟ್ಟಿಯವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. http://www.daijiworld.com/news/news_disp.asp?n_id=114590
  2. "ಆರ್ಕೈವ್ ನಕಲು". Archived from the original on 2014-04-08. Retrieved 2014-04-01.
  3. ಡಾ.ಸುನೀತಾ ಶೆಟ್ಟಿ ಅನುವಾದಿತ 'ಪೊಣ್ಣ ಉಡಲ್ ಬೆಂಗ್ ದ ಕಡಲ್',ಕೃತಿಬಿಡುಗಡೆ,ಕಡಿವಾಣವಿಲ್ಲದ ಸ್ವಾತಂತ್ರ್ಯ ಸರ್ವರಿಗೂ ಸರಿಸಮಾನವಾಗಿರಬೇಕು ಶ್ರೇಣಿಶ್ಯಾಮ ಭಟ್ (ಚಿತ್ರವರದಿ : ರೋನ್ಸ್ ಬಂಟ್ವಾಳ್)
  4. ೧೫, ಮೇ, ೨೦೧೬, ಪುಟ.೧೩, ಕರ್ನಾಟಕ ಮಲ್ಲ, ದಿನಪತ್ರಿಕೆಯಲ್ಲಿ ಸೃಜನಾದ ಚೈತ್ರಯಾತ್ರೆ 'ಕವಿ ಶೈಲ'ಕ್ಕೆ, ಎಂಬ ಶೀರ್ಷಿಕೆಯ ಬರಹದಲ್ಲಿ ಸೃಜನಾ ಮಹಿಳೆಯರ ಗುಂಪು, ರಾಷ್ಟ್ರಕವಿ ಕುವೆಂಪುರವರ ಕವಿಶೈಲಕ್ಕೆ ಭೇಟಿನೀಡಿದ ವಿವರಗಳನ್ನು ತಮ್ಮ ಬರಹದಲ್ಲಿ ಸುದೀರ್ಘವಾಗಿ ದಾಖಲಿಸಿದ್ದಾರೆ
  5. ಯು.ಎ.ಇ ಬಂಟ್ಸ್ ನ ಪ್ರತಿಷ್ಠಿತ ಬಂಟ್ ವಿಭೂಷಣ ಪ್ರಶಸ್ತಿ' ಪ್ರದಾನಮಾಡಲಾಯಿತು
  6. "ಚಂದ್ರಶೇಖರ ಪಾಲೆತ್ತಾಡಿ, ಡಾ.ಸುನೀತಾ ಎಮ್.ಶೆಟ್ಟಿ, ಡಾ.ಸುರೇಶ್ ರಾವ್, ಸಹಿತ ೬೬ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸನ್ಮಾನ, ಕರ್ನಾಟಕ ಮಲ್ಲ, ೦೨,೧೧,೨೦೨೧". Archived from the original on 2021-11-14. Retrieved 2021-11-14.

ಬಾಹ್ಯಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: