ಸದಸ್ಯ:Parimala rao/Sripurusha

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Infobox ಶ್ರೇಷ್ಟತೆ

ಶ್ರೀಪುರುಷನು ಪಶ್ಚಿಮ ಗಂಗಾ ರಾಜವಂಶದ ರಾಜನಾಗಿದ್ದನು. ಅವನು 726 - 788 CE ವರೆಗೆ ಆಳಿದನು. ಜಾವಳಿ ಶಾಸನದ ಪ್ರಕಾರ ಶ್ರೀಪುರುಷನು 62 ವರ್ಷಗಳ ಕಾಲ ಆಳಿದರು. ಅವನು ಬಾದಾಮಿ ಚಾಲುಕ್ಯರೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದಿದ್ದನು ಮತ್ತು ಮುತ್ತರಸ, ರಾಜಕೇಸರಿ, ಭೀಮಕೋಪ ಮತ್ತು ರಣಭಜನ ಮುಂತಾದ ಬಿರುದುಗಳನ್ನು ಬಳಸಿದನು. . ಆತ ಸಮರ್ಥ ಯೋಧ ಮತ್ತು ವಿದ್ವಾಂಸ, ಅವನು ಸಂಸ್ಕೃತ ಕೃತಿ ಗಜಶಾಸ್ತ್ರವನ್ನು ಬರೆದಿದ್ದಾನೆ. ಅವನು ಅಣೆಕಟ್ಟು (ಕಟ್ಟೆ ) ನಿರ್ಮಾಣದಂತಹ ಮಹತ್ವದ ನೀರಾವರಿ ಯೋಜನೆಗಳನ್ನು ಕೈಗೊಂಡಿದ್ದಾನೆ ಎಂದು ತಿಳಿದುಬಂದಿದೆ. [೧]

ದಕ್ಷಿಣದ ರಾಜಕೀಯ[ಬದಲಾಯಿಸಿ]

ಶ್ರೀಪುರುಷ ಮುತ್ತರಸನ ಆಳ್ವಿಕೆಯು ಕಂಚಿಯ ಪಲ್ಲವರು, ಪಾಂಡ್ಯರೊಂದಿಗೆ ಹಾಗು, ನಂತರ ವಾತಾಪಿ ಚಾಲುಕ್ಯರನ್ನು ಪದಚ್ಯುತಗೊಳಿಸಿದ ರಾಷ್ಟ್ರಕೂಟರೊಂದಿಗಿನ ಸಂಘರ್ಷಗಳಿಂದ ತುಂಬಿತ್ತು. ಪಲ್ಲವ ಪರಮೇಶ್ವರವರ್ಮನ್ II ರ ಮೇಲೆ ಶ್ರೀಪುರುಷನು ವಿಜಯ ಸಾಧಿಸಿದನು ಮತ್ತು ಪೆರ್ಮಾನಡಿ ಎಂಬ ಬಿರುದನ್ನು ಪಡೆದನು . ಅವನು ಚಾಲುಕ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದನು ಮತ್ತು ವಿಕ್ರಮಾದಿತ್ಯ II ರ ಆಳ್ವಿಕೆಯಲ್ಲಿ ಪಲ್ಲವರ ವಿರುದ್ಧ ಹೋರಾಡಲು ಅವರಿಗೆ ಸಹಾಯ ಮಾಡಿದನು. ಅವರು ಚಾಲುಕ್ಯ ಕೀರ್ತಿವರ್ಮನ್ II ರ ಆಳ್ವಿಕೆಯಲ್ಲಿ ಪಾಂಡ್ಯರ ವಿರುದ್ಧ ಹೋರಾಡಿದರು ಆದರೆ ವೆಂಬೈನಲ್ಲಿ ಸೋಲನ್ನು ಅನುಭವಿಸಿದರು. ಆದರೂ ರಾಷ್ಟ್ರಕೂಟರು, ನೊಲಂಬರ ವಿರುದ್ಧ ಅಧಿಕಾರವನ್ನು ಪಡೆದಾಗ, ಶ್ರೀಪುರುಷನು ಒಂದನೇ ಕೃಷ್ಣನ ವಿರುದ್ಧ ಜಯ ಗಳಿಸಿದನು ಹಾಗೂ ಕೆಲವು ಪ್ರಾಂತ್ಯಗಳನ್ನು ಆಕ್ರಮಿಕೊಂಡನು. ಗಂಗರು ಸಮರ ಮೈತ್ರಿಗಳೊಂದಿಗೆ ತಮ್ಮ ಸಂಬಂಧವನ್ನು ಸಾಮಾನ್ಯಗೊಳಿಸುವ ಮೊದಲು ರಾಷ್ಟ್ರಕೂಟರಿಗೆ ಈ ಪ್ರತಿರೋಧವು ಸ್ವಲ್ಪ ಸಮಯದವರೆಗೆ ಹಾಗೆಯೇ ಮುಂದುವರೆಯಿತು.

ಉಲ್ಲೇಖಗಳು[ಬದಲಾಯಿಸಿ]

ಟಿಪ್ಪಣಿಗಳು 

ಬಾಹ್ಯ ಕೊಂಡಿಗಳು[ಬದಲಾಯಿಸಿ]

[[ವರ್ಗ:ಕರ್ನಾಟಕದ ಇತಿಹಾಸ]]

  1. Adiga, Malini (2006). The Making of Southern Karnataka: Society, Polity and Culture in the Early Medieval Period. Orient BlackSwan. pp. 43, 115, 123, 191. ISBN 9788125029120.