ಸದಸ್ಯ:Abel armaan khan/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಸರು[ಬದಲಾಯಿಸಿ]

'ರಾಧಾ ಕೃಷ್ಣರು ಹಿಂದೂ ಧರ್ಮದಲ್ಲಿ ಒಟ್ಟಾಗಿ ದೇವರ ಸ್ತ್ರೀ ಹಾಗೂ ಪುರುಷ ಅಂಶಗಳ ಸಮ್ಮಿಲನವೆಂದು ಕರೆಯಲ್ಪಡುತ್ತಾರೆ. ಕೃಷ್ಣನನ್ನು ಗೌಡೀಯ ವೈಷ್ಣವ ದೇವತಾಶಾಸ್ತ್ರದಲ್ಲಿ ಹಲವುವೇಳೆ ಸ್ವಯಂ ಭಗವಾನ್ ಎಂದು ನಿರ್ದೇಶಿಸಲಾಗುತ್ತದೆ ಮತ್ತು ರಾಧೆಯು ಕೃಷ್ಣನ ಪರಮ ಪ್ರಿಯೆ. ಕೃಷ್ಣನ ಜೊತೆಗೆ, ರಾಧೆಯನ್ನು ಪರಮ ದೇವತೆ ಎಂದು ಗುರುತಿಸಲಾಗುತ್ತದೆ, ಏಕೆಂದರೆ ಅವಳು ಕೃಷ್ಣನನ್ನು ತನ್ನ ಪ್ರೀತಿಯಿಂದ ನಿಯಂತ್ರಿಸುತ್ತಾಳೆ ಎಂದು ಹೇಳಲಾಗುತ್ತದೆ.


ಆತ್ಮ ಸ್ವರೂಪಿ ಮತ್ತು ಪ್ರೇಮ ಸ್ವರೂಪಿ[ಬದಲಾಯಿಸಿ]

'ಕೃಷ್ಣ'ನು ಆತ್ಮ ಸ್ವರೂಪಿ.ಈ ಪರಮ ಪೂಜ್ಯ ಆತ್ಮನಿಗೆ ತನ್ನ ಪ್ರೀತಿ,ಪ್ರೆಮ,ವಾತ್ಸಲ್ಯಗಳಿಂದ ತನ್ನ ಹಿಡಿತದಲ್ಲಿ ಇಡುವ ಭಕ್ತಿ ಮತ್ತು ಪ್ರೆಮ ಸ್ವರೂಪಿಣಿ 'ರಾಧೆ'.ಕೃಷ್ಣನು ವಿಶ್ವವನ್ನು ಜಪಿಸುವನು, ಆತನ ಪ್ರೇಯಸಿ ರಾಧೆ ಆತನ್ನನ್ನೂ ಜಪಿಸುವಳು.ಕೃಷ್ಣನ 'ಶಕ್ತಿ' ರಾಧೆ.ಹಿಂದೂ ಧರ್ಮದಲ್ಲಿ ದಿವ್ಯದಂಪತಿಗಳನ್ನು ಪೂಜಿಸಲಾಗುತ್ತದೆ. ಶಿವ ಪಾರ್ವತಿ,ಲಕ್ಶ್ಮಿನಾರಯಣರ ಹಾಗೆ ರಾಧಕೃಷ್ಣರ ಅಧ್ಭುತ ಜೊಡಿಯೂ ಹಿಂದೂ ಧರ್ಮದ ಮೂಖ್ಯ ಪೂಜಿತ ದಂಪತಿಗಳಾಗಿದ್ದಾರೆ ಎಂದು ವಿಶ್ವಾಸದಿಂದ ಹೇಳಬಹುದು.ಈ ದಿವ್ಯ ಪ್ರೇಯಸಗಾರನು ಹಲವಾರು ರೂಪಧರಿಸಿ ಗೊಪಿಯರೊಂದಿಗೆ ರಾಸಲೀಲೆ ಸೃಷ್ಟಿಸಿ ತನ್ನ ನಿಜಸ್ವರೂಪದಲ್ಲಿ ಬೃಂದಾವನದ ದಟ್ಟ ವೃಕ್ಷಗಳ ಸಮೂಹದಲ್ಲಿ ರಾಧೆಯ ಕೃಷ್ಣನಾಗಿರುತ್ತನೆ. ಈ ಎರಡು ಹೃದಯಗಳು ಸೇರುವ ಆಕರ್ಷಕ , ಮನಮೂಹಕ ಸಮಯದಲ್ಲಿ ಆ ಕಮಲನಯನಗಳು ರಾಧೆಯ ಮೂಡಿಮಾಡುವ ನಯನಗಳನ್ನು ಪ್ರೆಮದಿಂದ ದಿಟ್ಟಿಸಿನೊಡುವ ಹಲವಾರು ಸಂಗತಿಗಲನ್ನು ನಾವು ಕೇಳಬಹುದು, ಪ್ರತಿಮೆಗಲ್ಲಲ್ಲಿ ನೋಡಬಹುದು. ತನ್ನ ಶಾಶ್ವತ ಗೇಳೆತನವನ್ನು, ಪ್ರೆಮವನ್ನು ಆಧರಿಸಿ ರಾಧೆ ಯಶೋದನಂದನನ್ನನ್ನು ಉಲ್ಲೇಖಿಸಿ ಸರ್ವಾಂತರಯಾಮಿಯಾದ ಕೃಷ್ಣನನ್ನು ತನ್ನ ಗಂಡನೆಂದು ತಿಳಿದು ಪ್ರಾರ್ಥನೆಯನ್ನು,ತಪ್ಪಸ್ಸನ್ನು ಮಾಡಿರುವಳು, ಈ ಹೇಣ್ಣಿನ ಜನ್ಮವು ಪರೀಕ್ಷೆಗಳ್ಳಿಂದ ಪುರಾತನ ಕಾಲದಿಂದಲು ತುಂಬಿರುವುದು.ಜೊಕಾಲಿಯ ಮೇಲೆ ಕುಳಿತು ಕೊಳಲು ಬಾರಿಸುವ ಕೃಷ್ಣನ ಭುಜದ ಮೇಲೆ ಮಲಗಿ ಆ ಧ್ವನಿಯ ಮೂಹಕ ವಾಣಿಯಲ್ಲಿ ಮುಳುಗಿ ಪ್ರೀತಿಯನ್ನು ಅನುಭವಿಸುವ ದ್ರಿಶ್ಯವನ್ನು ಹಲವಾರು ಚಿತ್ರಕಾರರು ಚಿತ್ರಿಸಿದ್ದರೆ.ಹೃದಯಗಳ ಹೃದಯವನ್ನುಧರಿಸಿರುವ ಶ್ಯಾಮಸುಂದರನು ರಾಧೆಯನ್ನು ತನ್ನ ಪ್ರೆಯಸಿಯಳಾಗಿ ಸ್ವಿಕರಿಸಿರುವನು.ಅನಂತರಲ್ಲಿ ಒಬ್ಬನಾದ ಕೃಷ್ಣ ಮತ್ತು ರಾಧೆಯ ಈ ಜೊಡಿಯನ್ನು ನಾವು ಪ್ರೇಮಪಕ್ಷಿಗಲನ್ನು ಕಂಡು , ಅವರನ್ನು ಹಾಸ್ಯಪಾತ್ರರಾಗುವ ಹಾಗೆ ಮಾಡುತ್ತಿವಿ.

ರಾಧಕೃಷ್ಣ - ಮೂರ್ತಿ



ಇತಿಹಾಸ[ಬದಲಾಯಿಸಿ]

ರಧಾಕೃಷ್ಣರನ್ನು ಪೂಜಿಸುವುದು ನಿಂಬರ್ಕ ಸಂಪ್ರದಾಯದಿಂದ ಪ್ರಾರಂಭವಾಗಿರುವುದೆಂದು ಧೃಡವಾಗಿ ನಂಬಲಾಗಿದೆ.ಸ್ವಾಮಿನಾರಯಣ ಸಂಪ್ರದಾಯದ ಪ್ರಕಾರ ಮೂರ್ತಿಗಳನ್ನು ಮಾಡಿ ಭಾರತದೇಶದ ಕೆಲವು ಪ್ರದೇಶಗಳಲ್ಲಿ ಪೂಜಿಸಲಾಗುತ್ತವೆ.ಬಾಂಕೆ ಭಿಹಾರಿ ಮಂದಿರ, ರಾಧಾರಮಣ,ರಾಧಗೋವಿಂದ ಮಂದಿರಗಳು ಮಥುರಾದಲ್ಲಿ ಬಹಳ ಪ್ರಸ್ಸಿದ್ಧವಾಗಿವೆ.ತನ್ನ ಪ್ರೇಮದಲ್ಲಿ ಇವರು ನೋವು, ನಲಿವು,ತ್ಯಾಗ,ಅಪಾರ ವಾತ್ಸಲ್ಯಗಳನ್ನು ಕಂಡಿರುವರು.ನಿಜವಾದ ಪ್ರೇತಿ,ಯವ ಮೋಹವುಯಿಲ್ಲದಂತೆ , ಮನದಾಳದಿಂದ ಹುಟ್ಟಿದ ನಿಜವಾದ ಪ್ರೀತಿ ಇವರದ್ದು.ಮಧುರ ರಸದ ಪ್ರೀತಿ.

ಪ್ರೇಮದ ಬಾಂಧವ್ಯ[ಬದಲಾಯಿಸಿ]

ಚಿತ್ರ:Https://commons.wikimedia.org/wiki/File:Abel armaan khan pot art , radha krishna.jpg
ರಾಧೆ ಕೃಷ್ಣ (ಅಬೇಲ್)
ರಾಧಕೃಷ್ಣರ ಚಿತ್ರಣ (ಅಬೇಲ್)
ರಾಧೆ ಬಿಸಿಬಿಸಿ ಹಾಲನ್ನು ಕುಡಿದಾಗ ಕೃಷ್ಣನ ಗಂಟಲು ಸುಟ್ಟಿಹೋಗಿರುವುದನ್ನು ಕೇಳಿದ್ದೀವಿ. ಇದು ನಿಜವದ ಬಾಂಧವ್ಯ. ಲೂಕದಲ್ಲಿ ಹಲವಾರು ಸಮಸ್ಯೆಗಳಿದ್ದರು, ಪ್ರೀತಿ ತನ್ನ ಸ್ಥನವನ್ನು ಹುಡುಕಿ, ಮನುಷ್ಯನನ್ನು ಸೇರುವುದು. ಪ್ರೇಮವು ದೇವರಿಗು,ರಾಕ್ಷಸರಿಗು,ಮಾನವರಿಗು ಸಮವಾಗಿ ದೊರೆತಿರುವ ಅಂಶವು.ವಯಸ್ಸಿನಲ್ಲಿ ಹಿರಿಯಳಾಗಿದ್ದ ರಾಧೆ,ಹುದ್ದೆ ಮತ್ತು ಸಂಪತ್ತಿನಲ್ಲಿ ಹಿರಿಯನಾಗಿದ್ದ ಕೃಷ್ಣನು ಒಬ್ಬರನ್ನೊಬ್ಬರು ಪ್ರೀತಿಸುತ್ತರೆ. ತಮ್ಮ ಮಧ್ಯ ಇರುವ ವ್ಯತ್ಯಾಸಗಳನ್ನು ಮರೆತು ಪ್ರೇಮದಂತಹ ಅಮರ ಭಾವನೆಯ ಪಾತ್ರರಾಗುತ್ತರೆ. ಕೃಷ್ಣನು ರಾಧೆಯನ್ನು ಮದುವೆಯಾಗಲು ಪ್ರಯತ್ನಿಸಿದಾಗ, ಕೃಷ್ಣನಿಗೆ ಕನ್ಸರಾಜನ್ನನ್ನು ಕೊಲ್ಲಲು ಮಥುರಾಗೆ ಹೂಗಬೇಕಾಗುತ್ತದೆ. ತನ್ನ ಎಲ್ಲಾ ಕೆಲಸಗಳನ್ನು ಬಿಟ್ಟಿ ಒಡಿಬರುವ ರಾಧೆ ಕೃಷ್ಣನನ್ನು ಕಂಡು ದುಃಖಿತಳಾಗುತ್ತಳೆ. ಕೃಷ್ಣನು ಹಲವಾರು ಮದುವೆಯಾದರು ಆತನು ಪ್ರೀತಿಸಿದ ಹೆಣ್ಣು ರಾಧೆ ಮಾತ್ರ. ಆದುದರಿಂದ ರಾಧೆಯನ್ನು ಕೃಷ್ಣನ ಶಕ್ತಿ,ಅರ್ಧಾಂಗಿಯಂದು ಹೇಳುತ್ತರೆ.ಲೀಲಾಧರನ ಮಾಯೆಯಲ್ಲಿ ಸಿಲುಕಿ ನೋವು ಅನುಭವಿಸಿದ ರಾಧೆಗೆ ಆ ಭಗವಂತನು ತನ್ನ ಸಮವಾದ ಸ್ಥಾನವನ್ನೆ ಕೊಟ್ಟಿರುವನು. ಪ್ರೀತಿಯನ್ನುವುದು ಮನಿಸ್ಸಿನ ಆಟವಲ್ಲ. ಪ್ರೀತಿಯಲ್ಲಿ ಯಾರೂ ಕೂಡ ಹಿರಿಯರಲ್ಲ. ಎಲ್ಲರು ಎಲ್ಲರಲ್ಲಿಯು ಸಮ. ಎರಡು ಜೀವ ಒಂದಾಗಿ ಅನುಭವಿಸುವ ಭಾವನೆ.

ಪ್ರೇಮದ ಫಲವಾದರೂ ಏನೂ?[ಬದಲಾಯಿಸಿ]

ರಾಧೆಶ್ಯಾಮರು ಒಂದಾಗಲಿಲ್ಲ.ಮದುವೆ,ದಾಂಪತ್ಯ,ಸಂಸಾರವೆಂಬ ಮಾಯೆಯಲ್ಲಿ ಸಿಲುಕಿ ಪರದಾಡಲಿಲ್ಲಿ. ಅಮರ ಪ್ರೇಮದ ಅಮರ ಪ್ರೇಮಿಗಳು. ಈ ಲೋಕದಲ್ಲಿ ಪ್ರೇಮ ಒಂದೇ ಶಾಶ್ವತ. ಅದನ್ನು ಈ ಕಲಿಯೂಗದಲ್ಲಂತು ಹೀನವಾಗಿ ಕಾಣುವ ಹಾಗೆ ಮಾಡಿರುವುದುಂಟು. ರಾಧೆಯನ್ನು ಹಲವಾರು ವರ್ಷಗಳ ನಂತರ ಭೇಟಿಯಾಗುವ ಕೃಷ್ಣನಿಗೆ ಕಣ್ಣೀರು ಮಾತ್ರವೆ ಮತನಾಡುವ ಮಾಧ್ಯಮವಾಗುತ್ತದೆ.ನಾಲಿಗೆಯಿಂದ ಮಾತುಗಳು ಹುರುಳುವುದಿಲ್ಲಾ. ರಾಧಕೃಷ್ಣರು ಯಾವ ಗಳಿಗೆಯಲ್ಲಿಯು ದೂರವಾಗಿರಲ್ಲಿಲ್ಲ. ಅವರ ಆತ್ಮವು ಒಂದಾಗಿತ್ತು, ಮನ್ನಸ್ಸು ಒಂದಾಗಿತ್ತು. ನಾವು ಹಲವಾರು ಪ್ರದೇಶಗಳಲ್ಲಿ ರಾಧಾಕೃಷ್ಣ ಮಂದಿರಗಳನ್ನು ಕಾಣಬಹುದು. ಗುಜರಾತಿನಲ್ಲಿ, ರಾಗಸ್ಥಾನದಲ್ಲಿ ಗರ್ಬ, ಡಾಂಡಿಯ,ಮೂಂತಾದ ಹಾಡು ಪ್ರಕಾರಗಳಿಂದ ಈ ಸಂಬಂಧವನ್ನು ಆಚರಿಸುತ್ತರೆ. ರಾಧೆಶ್ಯಾಮರು ಒಂದಾಗಲಿಲ್ಲ.ಮದುವೆ,ದಾಂಪತ್ಯ,ಸಂಸಾರವೆಂಬ ಮಾಯೆಯಲ್ಲಿ ಸಿಲುಕಿ ಪರದಾಡಲಿಲ್ಲಿ. ಅಮರ ಪ್ರೇಮದ ಅಮರ ಪ್ರೇಮಿಗಳು. ಈ ಲೋಕದಲ್ಲಿ ಪ್ರೇಮ ಒಂದೇ ಶಾಶ್ವತ. ಅದನ್ನು ಈ ಕಲಿಯೂಗದಲ್ಲಂತು ಹೀನವಾಗಿ ಕಾಣುವ ಹಾಗೆ ಮಾಡಿರುವುದುಂಟು. ರಾಧೆಯನ್ನು ಹಲವಾರು ವರ್ಷಗಳ ನಂತರ ಭೇಟಿಯಾಗುವ ಕೃಷ್ಣನಿಗೆ ಕಣ್ಣೀರು ಮಾತ್ರವೆ ಮತನಾಡುವ ಮಾಧ್ಯಮವಾಗುತ್ತದೆ.ನಾಲಿಗೆಯಿಂದ ಮಾತುಗಳು ಹುರುಳುವುದಿಲ್ಲಾ. ರಾಧಕೃಷ್ಣರು ಯಾವ ಗಳಿಗೆಯಲ್ಲಿಯು ದೂರವಾಗಿರಲ್ಲಿಲ್ಲ. ಅವರ ಆತ್ಮವು ಒಂದಾಗಿತ್ತು, ಮನ್ನಸ್ಸು ಒಂದಾಗಿತ್ತು. ನಾವು ಹಲವಾರು ಪ್ರದೇಶಗಳಲ್ಲಿ ರಾಧಾಕೃಷ್ಣ ಮಂದಿರಗಳನ್ನು ಕಾಣಬಹುದು. ಗುಜರಾತಿನಲ್ಲಿ, ರಾಜಸ್ಥಾನದಲ್ಲಿ ಗರ್ಬ, ಡಾಂಡಿಯ,ಮೂಂತಾದ ಹಾಡು ಪ್ರಕಾರಗಳಿಂದ ಈ ಸಂಬಂಧವನ್ನು ಆಚರಿಸುತ್ತರೆ.ರಾಧೆಯಿಲ್ಲದೆ ಕೃಷ್ಣನನ್ನು ಕಲ್ಪಿಸುವುದು ಅಸಾಧ್ಯ.ಅವರಿಬ್ಬರೂ ಮದುವೆಯಾಗಲಿಲ್ಲ ಆದರೂ ತಮ್ಮ ಪ್ರೀತಿಯನ್ನು ಮರೆತು ನಡೆದವರಲ್ಲ.ಜೀವನದಲ್ಲಿ ಸುಖಗಳು ಹೇಗೊ ಹಾಗೆ ದುಃಖಗಳು ಕೂಡ. ಅವುಗಳನ್ನು ಸಮವಾಗಿ ನೋಡಿ, ಆ ಭಗವಂತನ ಮೊರೆ ಹೋಗಬೇಕು.

ರಾಧಾಕೃಷ್ಣರ ಪ್ರೇಮ ಕಥೆ[ಬದಲಾಯಿಸಿ]

ವೃಂದಾವನದಲ್ಲಿ ಗೋಪಿಯರೊಡನೆ ರಾಸಲೀಲೆಯನ್ನು ಮಾಡುತ್ತಾ ಕುಣಿಯುತ್ತಾ ನಂದನಕುಮಾರನು ರಾಧೆಯ ಮನಸನ್ನು ಗೆಳುತ್ತನೆ.ರಾಧೆ ಕೃಷ್ಣನಿಗಿಂತ ೧೦ ವರ್ಷ ದೊಡ್ಡವಳು.ಸಕಲಕಲ ವಲ್ಲಭನಾದ ಆ ಪರಮ ಪೂಜ್ಯ ಶ್ರೀ ಕೃಷ್ಣನಿಗೆ ರಾಧೆಯಂದರೆ ಜೀವನವಾಗಿಬಿಟ್ಟಿತ್ತು.ಮ್ರಿತ್ಯುಲೋಕದಲ್ಲಿ, ದೇವಲೋಕದಲ್ಲಿ ಇವರಿಬ್ಬರ ಚರ್ಚೆ ಬಹಳ ನೆಡೆಯುತ್ತಿತ್ತು. ಆದರೆ ಇವರ್ರಿಬ್ಬರಿಗು ಇದರ ಅರಿವೇ ಇರಲ್ಲಿಲ್ಲ. ಪ್ರೇಮವೆಂಬ ನದಿಯಲ್ಲಿ ತೆಲುವ ಎಲೆಯಂತೆ ಇಬ್ಬರು ತಮ್ಮ ತಮ್ಮ ಜೀವನವನ್ನು ಸಾಗಿಸಲು ಆರಂಭಿಸಿದ್ದರು.ಒಂದೊಂದು ದಿನವನ್ನು ಒಂದೊಂದು ವರ್ಷದಂತೆ ಕಳಿಯುತ್ತಿದ್ದರು.ಹಾಡುತ್ತ ನಗುತ್ತ ಪ್ರೇಮದ ಈ ಅಮೂಲ್ಯ ಕಥೆಯೂ ದುಃಖದತ್ತ ಸಾಗುತ್ತದೆ.ಕೃಷ್ಣನಿಗೆ ಕೆಲೊಬ್ಬರಿಂದ ಈ ಸಂಬಂಧಕ್ಕೆ ತಿರಸ್ಕಾರವನ್ನು ಕಂಡು ಬಹಳ ದುಃಖವಾಯಿತು. ಪರದಾಡಿದನು. ರಾಧೆ!ರಾಧೆ!ರಾಧೆ!ಯಂದು ವೃಂದಾವನದಲ್ಲಿ ನೋವಿನಿಂದ ಕೊಗಲು ಆರಂಭಿಸುತ್ತನೆ.ಇಬ್ಬರು ದೂರವಾಗುತ್ತರೆ. ಕಂಸ ಮಹಾರಾಜನನ್ನು ಕೊಂದನಂತರ ದ್ವಾರಿಕಾ ನಗರಿಗೆ ಕೃಷ್ಣ ಹೋರಟು ಹೋಗುತ್ತನೆ. ಆದರೆ ರಾಧೆ ತನ್ನ ಗಂಡನನ್ನು ತ್ಯಜಿಸಿ ಶ್ಯಾಮಭಕ್ತಿಯಲ್ಲಿ ಮುಳುಗುತ್ತಳೆ. ರಾಧೆ ಯಾವಾಗಲು ಕೃಷ್ಣನ ಪಕ್ಕದಲ್ಲೆ ಇರುತ್ತಿದಲು. ಮುರುಳಿಧರನು ತನ್ನ ಪ್ರೇಯಸಿಗಾಗಿ ಹಾಡುತಿದ್ದನು.ಕಿಶೋರ - ಕಿಶೋರಿಯಂದೇ ಕರೆಯುತ್ತಿದ್ದರು. ಕೆಲವರಂತೂ ಆ ಹಿರಣ್ಯಗರ್ಭನಾದ ನಾಭಿಜನೆ ಈ ಜೋಡಿಯನ್ನು ಸ್ರಿಷ್ಟಿಸಿರುವನೆಂದು ಹೇಳುತ್ತರೆ, ಆದುದರಿಂದ ಇವರನ್ನು ಜೋತೆಗೆ ಪೂಜಿಸುತ್ತರೆ. [೧]

ಉಲ್ಲೇಖಗಳು[ಬದಲಾಯಿಸಿ]

[೨]

[೩]

[http://[೪] [೫]]


[೬]

  1. http://www.thehindu.com/features/friday-review/history-and-culture/radhakrishnas-love-story-goes-digital/article7255606.ece
  2. >https://kn.wikipedia.org/wiki/ಮಹಾಭಾರತ
  3. www.nationaldiscoverychannel.com/2012/12/untold-story-of-radha-and-krishna.htmhttp://www.nationaldiscoverychannel.com/2012/12/what-happened-to-radha-after-krishna.html
  4. %20https://www.quora.com/Why-didnt-Lord-Krishna-marry-Sri-Radha
  5. https://www.quora.com/Why-didnt-Lord-Krishna-marry-Sri-Radha
  6. http://www.amarujala.com/spirituality/religion/radha-krishna-first-meeting-and-love-story-hindi-rj