ವರ್ಗ:ಔಷಧಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಶ್ವಗಂಧ

“ಮದ್ದಿಲ್ಲದ ರೋಗಕ್ಕೆ ಹಿರೇಮದ್ದಿನ ಬೇರು” ಎಂಬ ನಾಡ್ನುಡಿ ಬಹುಕಾಲದಿಂದಲೂ ಪ್ರಚಲಿತವಿದ್ದು ಚಿಕಿತ್ಸಾ ದೃಷ್ಟಿಯಿಂದ ಹಿರೇಮದ್ದು ಅಂದರೆ ಅಶ್ವಗಂಧದ ಬೇರು, ಅತ್ಯಂತ ಸೂಕ್ತವಾಗಿದೆ.

ಜನರನ್ನು ಕಾಡುತ್ತಿರುವ ಇಂದಿನ ಮದ್ದಿಲ್ಲದ ಸೋಂಕಿಗೆ ಅಶ್ವಗಂಧ ಒಂದು ಶ್ರೇಷ್ಠ ಉಪಾಯವಾಗಬಲ್ಲದು.

ಗಿಡಮೂಲಿಕೆಗಳಲ್ಲೇ ಅತ್ಯಂತ ಹೆಚ್ಚು ಅಲಕಲಾಯಿಡ್ಸ್ ಗಳನ್ನು ಹೊಂದಿರುವ ಅಶ್ವಗಂಧವು ಮೂರು ಕೆಲಸವನ್ನು ಒಟ್ಟಿಗೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಯಾವುದೇ ಊತನಾಶಕ ದ್ರವ್ಯವು ಹೊಂದಿರದ ಪೋಷಕ ಗುಣವನ್ನು ಅಶ್ವಗಂಧವು ಹೊಂದಿದೆ. ಶರೀರದ ಎಲ್ಲಾ ಅವಯವಗಳ ಎಲ್ಲಾ ಸ್ಥರಗಳಲ್ಲೂ ಪೋಷಕವಾಗಿ ಕಾರ್ಯನಿರ್ವಹಿಸುವಷ್ಟು ಗುಣವನ್ನು ಹೊಂದಿದ್ದರೂ ಅನಗತ್ಯ ಊತವನ್ನು ತನ್ನ ಪೋಷಕ ಶಕ್ತಿಯಿಂದಲೇ ನಿವಾರಿಸುತ್ತದೆ.ಆದ್ದರಿಂದ ಇದು ಊತನಿವಾರಕವೂ, ಪೋಷಕವೂ ಆಗಿದೆ.

ಅಶ್ವಗಂಧದಲ್ಲಿ ವಾತ ಮತ್ತು ಕಫವನ್ನು ಏಕಕಾಲಕ್ಕೆ ಸಮರ್ಥವಾಗಿ ನಿರ್ವಹಿಸುವ ಅನೇಕ ರಾಸಾಯನಿಕಗಳಿದ್ದು, ಪೋಷಣ ಅಭಾವದಲ್ಲೂ ಮತ್ತು ಅನಿಯಂತ್ರಿತ ಅಧಿಕ ಪೋಷಣೆಯಲ್ಲೂ ಆಗುವ ವಿಕಾರಗಳನ್ನು ಏಕ ಕಾಲಕ್ಕೆ ಸಮತೋಲನಕ್ಕೆ ತರುತ್ತದೆ.

ಅವಯವಗಳಿಗೆ ಗಡಸುತನವನ್ನು ಕೊಟ್ಟು ಅವು ಬಿಗಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಕ್ಯಾಲ್ಸಿಯಂ ಅತ್ಯಗತ್ಯ. ಆದರೆ ಇದು ಅತ್ಯಂತ ಸಮತೊಲನ ಸ್ಥಿತಿಯಲ್ಲಿ ಇರಬೇಕಾಗುತ್ತದೆ. ಅಂದರೆ- ಕ್ಯಾಲ್ಸಿಯಂ ಕಣವು ಹೃದಯದ ಮಾಂಸಖಂಡಗಳಿಗೆ, ಪುಪ್ಪುಸದ ಸ್ನಾಯುಗಳಿಗೆ, ರಕ್ತನಾಳಗಳಿಗೆ, ಶರೀರದ ಮಾಂಸಖಂಡಗಳಿಗೆ ಮತ್ತು ಮೂಳೆಗಳಿಗೆ ಒಂದೇ ಸಾಂದ್ರತೆಯಲ್ಲಿ ಹಂಚಿಕೆಯಾಗಲಾರದು.

ಕ್ಯಾಲ್ಸಿಯಂನ ಈ ಹಂಚಿಕೆಯ ಪ್ರಮಾಣದಲ್ಲಿ ವ್ಯತ್ಯಾಸವಾದಲ್ಲಿ ಶರೀರವು ಅಗಾಧವಾದ ವೇದನೆಯನ್ನೋ, ಆಘಾತವನ್ನೋ, ಅಪಾಯವನ್ನೋ, ಮರಣವನ್ನೋ ತಂದೊಡ್ಡಬಲ್ಲದು.

ಪ್ರಸ್ತುತ ಸನ್ನಿವೇಶದಲ್ಲಿ ಪುಪ್ಪುಸದ ಸ್ನಾಯುಗಳ ಸಂಕೋಚ, ಅಲ್ಲಿನ ರಕ್ತನಾಳಗಳ ಸಂಕೋಚ ಮತ್ತು ಅದಕ್ಕೆ ಸಮಸಮವಾಗಿ ಹೃದಯ ಸ್ನಾಯುಗಳ ಸಂಕೋಚ ಈ ಮೂರರ ನಡುವಿನ ಆಘಾತಕಾರಿ ಅಸಮತೋಲನವೇ ಮರಣವನ್ನು ತರುತ್ತಿದೆ. ಏಕೆಂದರೆ, ಸೋಂಕಿಗೆ ಪ್ರತಿಕ್ರಿಯೆ ತೋರಲು ಪುಪ್ಪುಸವು, ಅದಕ್ಕೆ ಬಲವಾಗಿ ರಕ್ತವನ್ನು ಹರಿಸಲು ಪ್ರಯತ್ನಿಸುವ ಹೃದಯವು, ಆ ಒತ್ತಡವನ್ನು ತಾಳಿಕೊಳ್ಳದ ರಕ್ತನಾಳಗಳು ಸಂಕೋಚಗೊಂಡು ವ್ಯಕ್ತಿಯನ್ನು ಅಪಾಯಕ್ಕೆ ನೂಕುತ್ತವೆ.

ಅಶ್ವಗಂಧವು ತನ್ನ ಬಲಕಾರಕ ಗುಣದಿಂದ ಕ್ಯಾಲ್ಸಿಯಂ ಹಂಚಿಕೆಯನ್ನು ಜೀವಕೋಶಕಗಳ ಎಲ್ಲಾ ಸ್ಥರದಲ್ಲೂ ಸುಲಲಿತಗೊಳಿಸುವುದರಿಂದ ತೀವ್ರ ಸೋಂಕಿನ ಅವಸ್ಥೆಯಲ್ಲೂ ಸಹ ಜೀವಚೈತನ್ಯ ಅವಯವಾಗಳಾದ ಹೃದಯ-ಪುಪ್ಪುಸಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತವೆ ಆದ್ದರಿಂದ ಅಲ್ಲಿ ಊತವಾಗಲೀ, ಸಂಕೋಚವಾಗಲೀ ಉಂಟಾಗುವುದೇ ಇಲ್ಲ. ಹಾಗಾಗಿ ಸೋಂಕಿತ ವ್ಯಕ್ತಿಯು ಅಶ್ವಗಂಧವನ್ನು ನಿತ್ಯವೂ ಸೇವಿಸುತ್ತಿದ್ದರೆ ಮರಣದ ಸಾಧ್ಯತೆ ಇಲ್ಲವೇ ಇಲ್ಲ ಎಂದು ಹೇಳಬಹುದು.


ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲಿ:

  ಊಟ ಬಲ್ಲವನಿಗೆ ರೋಗ ಇಲ್ಲ, ಮಾತು ಬಲ್ಲವನಿಗೆ ಜಗಳ ಇಲ್ಲ.

ಅರೋಗ್ಯ ಸಿರಿ:

ನವಣೆ, ಸಾಮೆ, ಆರ್ಕಾ, ಊದಲು ಮತ್ತು ಕೊರಳೆ ಇವು, ಐದು ಪ್ರಕಾರದ ಶಿರಿಧಾನ್ಯಗಳು.

ಸಿರಿಧಾನ್ಯಗಳು ಶರೀರದಲ್ಲಿ ಸಕ್ಕರೆಯನ್ನು ನಿಧಾನವಾಗಿ, ನಿಯಂತ್ರಿತವಾಗಿ ಬಿಡುವುದರಿಂದ, ಹೆಚ್ಚಿನ ಕೊಬ್ಬು ಸಂಗ್ರಹವಾಗುವುದಿಲ್ಲ. ಅಲ್ಲದೆ ನಾರಿನಾಂಶ ಅಧಿಕ ಇರುವುದರಿಂದ, ದೊಡ್ಡ ಕರುಳಿನ ಆರೊಗ್ಯ ಕಾಪಾಡುತ್ತದೆ. ಮಲಬದ್ಧತೆ ಇಲ್ಲದಂತೆ ಮಾಡುತ್ತದೆ. ಸಕ್ಕರೆ ಬೇನೆ ಹೆಸರಿಲ್ಲದೇ ಓಡಿಹೋಗುತ್ತದೆ. ಐದೂ ಸಿರಿಧಾನ್ಯಗಳನ್ನು ನಿಯಮಿತವಾಗಿ ಬಳಸುವುದರಿಂದ, ಹಾಗು ಕೆಲವು ಕಶಾಯಗಳನ್ನು ದಿರ್ಘಕಾಲ ಬಳಸುವುದರಿಂದ, ಕ್ಯಾನ್ಸರ್ ರೋಗ ಕೋಡ ಶಮನಗೊಂಡು, ಮನುಸ್ಯನು ಸಾವಿನಿಂದ ಪಾರಾಗುತ್ತಾನೆ. ಆದ್ದರಿಂದ ಅರಿತು ಸಿರಿಧಾನ್ಯ ಬಳಸಿದವನೇ ಜಾಣ.

ಆಹಾರ ಮತ್ತು ಆರೊಗ್ಯ:

ಅಕ್ಕಿ, ಗೋಧಿ, ಹಾಲು, ಸಕ್ಕರೆ, ಮತ್ತು ಮಾಂಸವನ್ನು ಯಾವತ್ತೂ ಬಳಸಬಾರದು.

ಈ ಪಂಚ ಆಹಾರಗಳನ್ನು ಕಡ್ಡಾಯವಾಗಿ ಬಿಡಲೇ ಬೇಕು.

ನಿಯಮಿತ ದೈಹಿಕ ವ್ಯಾಯಾಮ, ಕಾಲ್ನಡಿಗೆ, ಯೋಗ, ಧ್ಯಾನ, ಒಳ್ಳೆಯ ಹವ್ಯಾಸ, ಅಭಿರುಚಿ, ಈ ಎಲ್ಲವೂ ನಮ್ಮ ಆರೊಗ್ಯವನ್ನು ನಿರ್ಧರಿಸುತ್ತವೆ.

ನವಣೆ, ಊದಲು, ಆರ್ಕ, ಸಾಮೆ, ಮತ್ತು ಕೊರಳೆ ಸಿರಿಧಾನ್ಯಗಳು ಯಾವತ್ತು ಸುಸ್ಥಿರ ಬದಿಕಿಗೆ ಐಸಿರಿಗಳೇ.

ಕಷಾಯ ಅಂದ್ರೆ ಆರೊಗ್ಯಕರ ಪಾನೀಯ. ಇದನ್ನು ನಿತ್ಯವೂ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಮೂರು-ನಾಲ್ಕು ತಿಂಗಳು ಸೇವನೆ ಮಾಡುತ್ತಲೇ ಇರಬೇಕು.

ವಾರಕ್ಕೊಮ್ಮೆ ಒಂದು ಎಳ್ಳುಂಡೆ ತಿನ್ನಬೇಕು.

ಕಾಫೀ, ಮತ್ತು ಟೀ ಕುಡಿಯುವುದು ಖಂಡಿತ ಆರೊಗ್ಯಕರ ಲಕ್ಷಣವಲ್ಲ.

ತರಕಾರಿ, ಸೊಪ್ಪು ಚೆನ್ನಾಗಿ ತೊಳೆದು ಅಡುಗೆಗೆ ಬಳಸಿ.

ನಿಮ್ಮ ಆರೊಗ್ಯ ನೀವೇ ಕಾಪಾಡಿಕೊಳ್ಳಿ.

ಗುಳಿಗೆಗಿಂತ ಆಹಾರವೇ ಮುಖ್ಯ ಎನ್ನುವುದು ಮೊದಲ ಹೆಜ್ಜೆ. ಆಹಾರ ಬದಲಾಯಿಸಿ ಅರೋಗ್ಯ ಉಳಿಸಿಕೊಳ್ಳಿ.

ನಮ್ಮ ಆಹಾರ ಸರಿ ಇದ್ದರೆ ಯಾವ ಔಷಧ ಬೇಕಾಗಿಲ್ಲ. ನಮ್ಮ ಆಹಾರ ಸರಿ ಇಲ್ಲದಿದ್ದರೆ, ಯಾವ ಔಷಧಿಯು ಕೆಲಸ ಮಾಡಲ್ಲ.

ಚಹಾ, ಕಾಫಿ, ಹಾಲು ಮತ್ತು ಸಕ್ಕರೆ ಬಿಟ್ಟುಬಿಡಿ. ಹಾಲಿನಲ್ಲಿ ಹಾರ್ಮೋನುಗಳು ತುಂಬಿವೆ. ಕಾಫಿ ಕುಡಿಯುವುದನ್ನು ನಿಲ್ಲಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

ಮಾಂಸ ಮೊಟ್ಟೆ ತಿನ್ನಬೇಡಿ. ಅಕ್ಕಿ, ಗೋಧಿ ಹಾಲು ಸಕ್ಕರೆ ಬೇಡವೇ ಬೇಡ. ಅಕ್ಕಿ ಗೋಧಿ ತಿನ್ನಬೇಡಿ ಇದು ಒಳ್ಳೆಯ ಆಹಾರ ಅಲ್ಲ [ಇದರಲ್ಲಿ ನಾರಿನಂಶ ಇಲ್ಲ ].

ನಮ್ಮ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದೇ ನಮಗೆ ರೋಗ ಬರಲು ಕಾರಣ.

ರಾತ್ರಿ ಹೊತ್ತು ಕತ್ತಲಲ್ಲಿ ಚೆನ್ನಾಗೆ ನಿದ್ದೆ ಮಾಡಿರಿ. ಬಾಯಿ ಮುಚ್ಚಿ ಬಿದ್ದುಕೊಳ್ಳಿ. ನಿರ್ನಾಳ ಗ್ರಂಥಿಗಳು ಚೈತನ್ಯವನ್ನು ತುಂಬುತ್ತವೆ.

ಸಿರಿಧಾನ್ಯವನ್ನು ಇಡೀ ಮಾನವ ಕುಲ ಬಳಸಬೇಕು. ಸಿರಿಧಾನ್ಯ ನಿಧಾನವಾಗಿ ಅರೋಗ್ಯ ಸುಧಾರಿಸುವ ಕ್ರಮ.

ಕಾಫಿ ಟಿ ಬಿಟ್ಟರೆ, ೫೦% ರೋಗನಿರೋಧಕ ಶಕ್ತಿ ಬರುತ್ತದೆ. ಸಕ್ಕರೆ ಕಾಫಿ ಟೀ ಬಿಡಬೇಕು. ಕಷಾಯ ಕುಡಿಯಿರಿ. ಕೇವಲ ಸಿರಿಧಾನ್ಯಗಳನ್ನೇ ಬಳಸಿ. ನಿಮ್ಮ ಆರೋಗ್ಯ ಗ್ಯಾರಂಟಿ.

ಸಿರಿಧಾನ್ಯಗಳನ್ನು ಎರಡು ಅಥವಾ ಮೂರು ತಾಸು ನೆನೆಹಾಕಿ ಆಮೇಲೆ ಅಡಿಗೆ ಮಾಡಿ ತಿನ್ನಿರಿ. ಇದರಿಂದ ಪೂರ್ಣ ಲಾಭ ಪಡೆಯುವಿರಿ.ರಾತ್ರಿ ಮಲಗುವುದಕ್ಕೆ ಮುನ್ನ, ಒಂದು ಗ್ಲಾಸ್ ಅಕ್ಕಿಗೆ ಎರಡು ಗ್ಲಾಸ್ ನೀರು ಹಾಕಿ ನೆನೆಯಿಡಿರಿ. ಐದು ಪ್ರಕಾರದ ಸಿರಿಧಾನ್ಯದ ಅಕ್ಕಿಯನ್ನು ಎರಡು ದಿನಕ್ಕೆ ಒಮ್ಮೆ ಬದಲಾಯಿಸಿರಿ.

ಸಿರಿಧಾನ್ಯಗಳು ನಿಧಾನವಾಗಿ ಸಕ್ಕರೆ ಬಿಡುವುದರಿಂದ ಶರೀರದ ನಿರ್ನಾಳ ಗ್ರಂಥಿಗಳು ತಮ್ಮ ಕೆಲಸವನ್ನು ಸರಾಗವಾಗಿ ಮಾಡುತ್ತವೆ. ರಕ್ತ ಶುದ್ಧವಾಗುತ್ತದೆ. ವಾರಕ್ಕೊಮ್ಮೆ ಒಂದು ಎಳ್ಳಿನ ಉಂಡೆ ತಿನ್ನುವುದು ಒಳ್ಳೆಯ ಅಭ್ಯಾಸ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಬಳಸಿರಿ. ಇದರಿಂದ ಕೂದಲು ಉದುರುವುದಿಲ್ಲ.

ಗಾಣದ ಎಣ್ಣೆ , ಕುಸುಬೆ ಎಣ್ಣೆ, ಸೇಂಗಾ ಎಣ್ಣೆ , ಕೊಬ್ಬರಿ ಎಣ್ಣೆ ಬಳಸಿ. ಹುಣುಚೇ ಚಿಗುರು, ನುಗ್ಗೆ ಸೊಪ್ಪಿನ ಹೂವು ಬಳಸಿರಿ. ಸಿರಿಧಾನ್ಯಗಳೇ ನಿಮ್ಮ ಆಹಾರವಾಗಿರಲಿ.

ಏಳು ಪ್ರಕಾರದ ಕಷಾಯಗಳನ್ನು, [ಗರಿಕೀ, ತುಳಸಿ, ಅಮ್ರತಬೆಳ್ಳಿ, ಬಿಲ್ವ, ಹೊಂಗೆ, ಬೇವು, ಮತ್ತು ಅರಳಿ] ಕೇವಲ ೨೮ ದಿನಗಳವರೆಗೆ ಕುಡಿಯಿರಿ. ರೋಗ ನಿರೋಧಕ ಶಕ್ತಿ ಉಂಟಾಗುತ್ತದೆ. ಮುಂದಿನ ಒಂದು ವರುಷದ ವರೆಗೆ ರೋಗ ಬರುವುದಿಲ್ಲ. ಕಷಾಯ ಮತ್ತು ಐದು ಪ್ರಕಾರದ ಸಿರಿಧಾನ್ಯದಿಂದ ನಿಮ್ಮ ಅರೋಗ್ಯ ಗ್ಯಾರಂಟಿ. ೪೫ ದಿನಗಳಲ್ಲಿ ಅರೋಗ್ಯ ಸುಧಾರಿಸಿಕೊಳ್ಳುತ್ತದೆ. ಏನು ಖರ್ಚು ಇಲ್ಲದೆ ಅರೋಗ್ಯ ಪಡೆಯಿರಿ.

ಕ್ಯಾಲ್ಸಿಯಂ ಕೊರತೆ ನೀಗಿಸಲು, ಎಳ್ಳು ಉಂಡೆ, ರಾಗಿ ಮುದ್ದೆ, ಸಜ್ಜೆ ರೊಟ್ಟಿ ಬಳಸಿರಿ. ಹಾಲು ಬೇಡ.

ನವಣೆ ಮತ್ತು ಕೊರಳೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಥೈರಾಯ್ಡ್ ಸಮಸ್ಯೆ ಇರುವವರು ಸಾಮೆ ಮೂರೂ ದಿನ, ಇತರೆ ಸಿರಿಧಾನ್ಯ ಒಂದೊಂದು ದಿನ ಬಳಸಿ, ಮತ್ತು ಕೊಬ್ಬರಿ ಎಣ್ಣೆ, ಕುಸುಬೆ ಎಣ್ಣೆ, ಮತ್ತು ಎಳ್ಳೆಣ್ಣೆ ಎರಡು ಚಮಚ ಕುಡಿಯಿರಿ. ನಿಧಾನವಾಗಿ ರೋಗದಿಂದ ಮುಕ್ತಿ ಸಿಗುತ್ತೆ.

ಕಿಡ್ನಿ ಕಲ್ಲು ಕರಗಿಸಲು, ಐದು ಪ್ರಕಾರದ ಸಿರಿಧಾನ್ಯಗಳಲ್ಲಿ ಅರ್ಕಾ, ಸಾಮೆ ಮತ್ತು ಊದಲು ಹೆಚ್ಚಿಗೆ ಬಳಸತಕ್ಕದ್ದು. ಪಪಾಯ ಹಣ್ಣು ಮತ್ತು ಸೀತಾಫಲ ಹಣ್ಣು ಉತ್ತಮ. ಕುಸುಬೆ ಎಣ್ಣೆ ಬಳಸಿ. ಪುದಿನಾ ಕಷಾಯ ಕೊತ್ತಂಬರಿ ಕಷಾಯ ಬಳಸಿರಿ.

ಇತರೆ ಸ್ಥಳದ [ಗಾಲ್ ಬ್ಲ್ಯಾಡರ್] ಕಲ್ಲು ಕರಗಿಸಲು ಕೊರಳೆ ಮತ್ತು ನವಣೆ ಹೆಚ್ಚಾಗಿ ಬಳಸಿರಿ. ಸಾಸುವೆ ಎಣ್ಣೆ ಬಳಸಿರಿ. ಬಾಳೆ-ದಿಂಡು ಕಶಾಯ, ನಾಗದಾಳಿ ಸೊಪ್ಪಿನ ಕಶಾಯ ಬಳಸಿ.

ನೆನಪಿನ ಶಕ್ತಿ ಕಳೆದುಕೊಳ್ಳುವ ಪಾರ್ಕಿನ್ಸನ್ ರೋಗ ನಿವಾರಣೆಗೆ, ಅರ್ಕ ಅಕ್ಕಿ ಮತ್ತು ಸಾಮೆ ಅಕ್ಕಿ ಬಳಸಿರಿ.ಅರಸಿನ ಕಷಾಯ, ನುಗ್ಗೆ ಹೂವಿನ ಕಷಾಯ ಬಳಸಿರಿ.

ಗ್ಯಾಂಗ್ರಿನ್ ಸಮಸ್ಯೆ ಇರುವವರು ಚಂಡು ಹೂವಿನ ಎಲೆಗಳ ಕಷಾಯ ಕುಡಿಯಿರಿ.

ಪಾರ್ಶ್ವವಾಯು ಸಮಷ್ಯ ಇರುವವರು, ನವಣೆ ಹಾಗು ಆರ್ಕಾ ಬಳಸಬೇಕು. ಅರಿಷಿಣದ ಕಷಾಯ ಕುಡಿಯಬೇಕು.

"ಔಷಧಿಗಳು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ೭ ಪುಟಗಳನ್ನು ಸೇರಿಸಿ, ಒಟ್ಟು ೭ ಪುಟಗಳು ಇವೆ.