ಮೇಘದೂತಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇಘದೂತಮ್ ಅಥವಾ ಮೇಘಸಂದೇಶಮ್ ಕಾಳಿದಾಸನಿಂದ ಬರೆಯಲ್ಪಟ್ಟಿರುವ ಒಂದು ಸಂಸ್ಕೃತ ಖಂಡಕಾವ್ಯ. ೧೧೧ ಶ್ಲೋಕಗಳನ್ನು ಒಳಗೊಂಡಿರುವ ಈ ಕಾವ್ಯವು ಕರ್ತವ್ಯಲೋಪವೆಸಗಿದ್ದಕ್ಕಾಗಿ ಬಹಿಷ್ಕೃತಗೊಂಡು ಮಧ್ಯ ಭಾರತದಲ್ಲಿ ಅಜ್ಞಾತವಾಸ ಅನುಭವಿಸುತ್ತಿದ್ದ ಯಕ್ಷನೊಬ್ಬನು ಕೈಲಾಸ ಪರ್ವತದ ಅಲಕಾವತಿಯಲ್ಲಿರುವ ತನ್ನ ಪ್ರಿಯತಮೆಗೆ ಮೋಡಗಳ ಮೂಲಕ ಸಂದೇಶ ಕಳಿಸುವ ವರ್ಣನೆಯನ್ನು ಒಳಗೊಂಡಿದೆ.