ಕೆ. ಎಸ್. ನಿಸಾರ್ ಅಹಮದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನಿಸಾರ್ ಅಹಮ್ಮದ್ ಇಂದ ಪುನರ್ನಿರ್ದೇಶಿತ)
ಪ್ರೊ. ಕೆ. ಎಸ್. ನಿಸಾರ್ ಅಹಮದ್
ಕಾರ್ಯಕ್ರಮವೊಂದರಲ್ಲಿ ನಿಸಾರ್ ಅಹಮದ್
ಜನನ(೧೯೩೬-೦೨-೦೫)೫ ಫೆಬ್ರವರಿ ೧೯೩೬
ದೇವನಹಳ್ಳಿ, ಮೈಸೂರು ಸಂಸ್ಥಾನ, ಬ್ರಿಟಿಷ್ ಇಂಡಿಯಾ
ಮರಣ3 May 2020(2020-05-03) (aged 84)[೧]
ಬೆಂಗಳೂರು, yelahanka
ವೃತ್ತಿಸಾಹಿತಿ, ಪ್ರಾಧ್ಯಾಪಕ
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕಾವ್ಯ ಮತ್ತು ವಿಮರ್ಶೆ
ಸಾಹಿತ್ಯ ಚಳುವಳಿನವ್ಯ ಕಾವ್ಯ
ಪ್ರಮುಖ ಕೆಲಸ(ಗಳು)ಮನಸು ಗಾಂಧಿ ಬಜಾರು(1960)
ನಿತ್ಯೋತ್ಸವ
ಪ್ರಮುಖ ಪ್ರಶಸ್ತಿ(ಗಳು)ಪದ್ಮಶ್ರೀ (೨೦೦೮), ರಾಜ್ಯೋತ್ಸವ (೧೯೮೧)

ಪ್ರೊ.ಕೆ.ಎಸ್.ನಿಸಾರ್ ಅಹಮದ್(5 ಫೆಬ್ರುವರಿ 1936 - 3 ಮೇ 2020) ಕನ್ನಡದ ಪ್ರಮುಖ ಕವಿಯಾಗಿದ್ದರು. ಅವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್. ಅವರು ಬರೆದ 'ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ' ಎಂಬ ಪದ್ಯವು ಬಹಳ ಜನಪ್ರಿಯವಾಗಿ ಅವರು ನಿತ್ಯೋತ್ಸವ ಕವಿಯೆಂದೂ ಕರೆಯಲ್ಪಡುತ್ತಿದ್ದರು.

ಜೀವನ[ಬದಲಾಯಿಸಿ]

ನಿಸಾರ್ ಅಹಮದ್ ಬೆಂಗಳೂರ ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫,೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂರಚನಶಾಸ್ತ್ರ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತರು

ಸಾಹಿತ್ಯ[ಬದಲಾಯಿಸಿ]

ನಿಸಾರ್ ಅಹಮದ್ [೨] ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (೨೦೧೮) ೨೧ ಕವನ ಸಂಕಲನಗಳು, ೧೪ ವೈಚಾರಿಕೆ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.

  • ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗೂ ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.[೩]
  • ೧೯೭೮ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ (೨೦೧೮) ೧೩ ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು,ಗೀತೆಗಳು ಸಂಗೀತದೊಂದಿಗೆ ಪ್ರಚಾರಗೊಂಡಿತು.


  • ಕುರಿಗಳು ಸಾರ್‍ ಕುರಿಗಳು, ರಾಜಕೀಯ ವಿಡಂಬನೆ ಕವನ
  • ಭಾರತವು ನಮ್ಮ ದೇಶ (ಸರ್‍ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ)
  • ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.

ಕೃತಿಗಳು[ಬದಲಾಯಿಸಿ]

ಕವನ ಸಂಕಲನಗಳು[ಬದಲಾಯಿಸಿ]

  • ಮನಸು ಗಾಂಧಿ ಬಜಾರು (೧೯೬೦)[೪]
  • ನೆನೆದವರ ಮನದಲ್ಲಿ (೧೯೬೪)
  • ಸುಮುಹೂರ್ತ (೧೯೬೭)
  • ಸಂಜೆ ಐದರ ಮಳೆ (೧೯೭೦)
  • ನಾನೆಂಬ ಪರಕೀಯ (೧೯
  • ನಿತ್ಯೋತ್ಸವ (೧೯೭೬)
  • ಸ್ವಯಂ ಸೇವೆಯ ಗಿಳಿಗಳು (೧೯೭೭)
  • ಅನಾಮಿಕ ಆಂಗ್ಲರು(೧೯೮೨),
  • ಬಹಿರಂತರ (೧೯೯೦)
  • ಸಮಗ್ರ ಕವಿತೆಗಳು (೧೯೯೧)
  • ನವೋಲ್ಲಾಸ (೧೯೯೪)
  • ಆಕಾಶಕ್ಕೆ ಸರಹದ್ದುಗಳಿಲ್ಲ (೧೯೯೮)
  • ಅರವತ್ತೈದರ ಐಸಿರಿ(೨೦೦೧)
  • ಸಮಗ್ರ ಭಾವಗೀತೆಗಳು(೨೦೦೧)
  • ಪ್ರಾತಿನಿಧಿಕ ಕವನಗಳು(೨೦೦೨)
  • ನಿತ್ಯೋತ್ಸವ ಕವಿತೆ [೫]

ಗದ್ಯ ಸಾಹಿತ್ಯ[ಬದಲಾಯಿಸಿ]

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "ಕೆ ಎಸ್ ನಿಸಾರ್ ಅಹಮದ್ ನಿಧನ". ಪ್ರಜಾವಾಣಿ. Retrieved 3 May 2020.
  2. ಕೆ. ಎಸ್. ನಿಸಾರ್ ಅಹಮದ್[ಶಾಶ್ವತವಾಗಿ ಮಡಿದ ಕೊಂಡಿ]
  3. ಬಿಗಿದು ನಿನ್ನ ನಲಿವಿನಲ್ಲಿ ಪಾಲುಗೊಳ್ಳದೆ ಮನಸು
  4. 'ಮಾಸ್ತಿ': ಅವರಿಲ್ಲದ ಗಾಂಧೀಬಜಾರು ಬರೀ ಬೇಜಾರು
  5. ಭಾವಗೀತೆ, ಜೋಗದ ಸಿರಿಬೆಳಕಿನಲ್ಲಿ

ಹೊರಸಂಪರ್ಕಕೊಂಡಿಗಳು[ಬದಲಾಯಿಸಿ]