ನಂಜನಗೂಡು ರಸಬಾಳೆಹಣ್ಣು
ನಂಜನಗೂಡು ಬಾಳೆಹಣ್ಣು | |
---|---|
ನಂಜನಗೂಡು ರಸಬಾಳೆಹಣ್ಣು ಒಂದು ವಿಶಿಷ್ಟ ಜಾತಿಯ ಬಾಳೆಹಣ್ಣು | |
ಬದಲಿ ಹೆಸರುಗಳು | ನಂಜನಗೂಡು ರಸಬಾಳೆಹಣ್ಣು |
ಪ್ರದೇಶ | ಮೈಸೂರು & ಚಾಮರಾಜನಗರ |
ದೇಶ | ಭಾರತ |
ನೊಂದಾಯಿಸಿದ್ದು | 2005 |
ಅಧಿಕೃತ ಜಾಲತಾಣ | ipindia |
ಸಾಮಾನ್ಯವಾಗಿ ನಂಜನಗೂಡು ಬಾಳೆಹಣ್ಣನ್ನು ನಂಜನಗೂಡು ರಸಬಾಳೆಹಣ್ಣು ಎಂದು ಕರೆಯುತ್ತಾರೆ. ಭಾರತದ, ಕರ್ನಾಟಕ ರಾಜ್ಯದ, ಮೈಸೂರು ಜಿಲ್ಲೆಯ ಚಾಮರಾಜನಗರ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ಹಣ್ಣು ಅನನ್ಯ ರುಚಿ ಮತ್ತು ಸುವಾಸನೆಯನ್ನು ಹೊಂದಿದೆ. ರಸಾಯನಿಕ ಗೊಬ್ಬರಗಳ ಅತೀ ಬಳಕೆಯಿಂದಾಗಿ ಅದರ ರುಚಿ ಮತ್ತು ಸುವಾಸನೆ ಬದಲಾಗಿದೆ. .[೧][೨][೩] ಕಯ್ಯಾರ ಕಿಞ್ಞಣ್ಣ ರೈ ಅವರ ಹಣ್ಣು ಮಾರುವವನ ಹಾಡಿ[೪] ನ ಮೂಲಕ ಇದು ಕನ್ನಡ ಸಾಹಿತ್ಯ ಲೋಕದಲ್ಲೂ ಪ್ರಸಿದ್ದವಾಗಿದೆ.
ಪರಿವಿಡಿ
ವೈಶಿಷ್ಟ್ಯ[ಬದಲಾಯಿಸಿ]
ನಂಜನಗೂಡು ಬಾಳೆಹಣ್ಣು ಅನನ್ಯ ರುಚಿ ಮತ್ತು ಸುವಾಸನೆಯನ್ನು ಹೊಂದಿರಲು ಕಾರಣ ನಂಜನಗೂಡಿನ ಸುತ್ತ ಮುತ್ತಲಿರುವ ಕಪ್ಪು ಜೇಡಿಮಣ್ಣು . ಇದೇ ಬಾಳೆಹಣ್ಣನ್ನು ಬೆರೋಂದು ಪ್ರದೇಶದಲ್ಲಿ ಬೆಳೆದರೆ ಅದರ ರುಚಿ ಮತ್ತು ಸುವಾಸನೆ ನಂಜನ ಗೂಡಿನ ಬಾಳೆಹಣ್ಣಿಗಿಂತ ಕಡಿಮೆಯಾಗಿರುತ್ತದೆ. ಈ ರುಚಿ ಹಾಗು ಸುವಾಸನೆಯ ಗುಟ್ಟು ಅದರ ಜೀನ್ ಗಳಲ್ಲಿವೆ ಎಂಬುದು ತಜ್ಞರ ಮತ. [೨].
ಅಳತೆ[ಬದಲಾಯಿಸಿ]
ನಂಜನಗೂಡು ಬಾಳೆಹಣ್ಣಿನ ಘಾತ್ರ ಅನ್ಯ ಬಾಳೇಹಣ್ಣುಗಳಿಗಿಂತಲೂ ಚಿಕ್ಕದು . ಇದು ೫-೮ cm. ಉದ್ದವಿದ್ದು, ಹಣ್ಣಿನ ಮಧ್ಯದ ಕೊಳವಿ ಭಾಗದ ವ್ಯಾಸ ೨-೩ cm. ಇರುತ್ತದೆ. ಇದರ ಸಿಪ್ಪೆ ತೆಳುವಾಗಿರುತ್ತದೆ. ಸಾವಯವ ನಂಜನಗೂಡು ಬಾಳೆಹಣ್ಣು ಚನ್ನಾಗಿ ಕಳೆತಾಗ ಅದರ ಸಿಪ್ಪೆಯನ್ನು ಹಣ್ಣಿನೊಂದಿಗೆ , ಇಲ್ಲವೆ ಸಿಪ್ಪೆಯನ್ನು ಪ್ರತ್ಯೇಕವಾಗಿ (ಹಸಿಯಾಗಿ ಇಲ್ಲವೆ ತರಕಾರಿಯ ಪದಾರ್ತದಂತೆ)ತಿನ್ನುವುದೂ ಉಂಟು.
ಕೃಷಿ ಮತ್ತು ಅವಶ್ಯಕತೆ[ಬದಲಾಯಿಸಿ]
ನಂಜನಗೂಡು ಬಾಳೆ ಒಂದು ಉಷ್ಣವಲಯದ ಸಸ್ಯ .ಒಣಹವೆಯಲ್ಲಿ ಇದು ಉತ್ತಮವಾಗಿ ಬೆಳೆಯುತ್ತದೆ.
ಭೌಗೋಳಿಕ ಸೂಚನೆ[ಬದಲಾಯಿಸಿ]
ಕರ್ನಾಟಕ ಸರ್ಕಾರದ ತೋಟಗಾರಿಕ ಇಲಾಖೆ ನಂಜನಗೂಡು ಬಾಳೆಹಣ್ಣಿನ ನೋಂದಣಿ ಗೂಡ್ಸ್ ಆಕ್ಟ್, 1999 ಭೌಗೋಳಿಕ ಲಕ್ಷಣಗಳ (ಭೌಗೋಳಿಕ ಕುರುಹು) ಅಡಿಯಲ್ಲಿ, ಪೆಟೆಂಟ್ ಗಳಿಸಿತು. ಡಿಸೈನ್ಸ್ ನಿಯಂತ್ರಕ ಜನರಲ್ ಮತ್ತು ಟ್ರೇಡ್ಮಾರ್ಕ್ ಕಚೇರಿಯು ಮೈಸೂರು ರೈತರಿಗೆ ನಂಜನಗೂಡು ಬಾಳೆಹಣ್ಣಿನ ಮತ್ತು ಅದರ ಉತ್ಪನ್ನಗಳ ಬ್ರಾಂಡ್ ಹಕ್ಕು ನೀಡಿದೆ.[೨] ಇದಕ್ಕೆ ಭೌಗೋಳಿಕ ಲಕ್ಷಣದ ನೊಂದಣಿ ೨೦೦೫ ರಲ್ಲಿ ದೊರೆಯಿತು.
ಇವನ್ನೂ ನೋಡಿ[ಬದಲಾಯಿಸಿ]
ಬಾಹ್ಯ ಕೊಂಡಿಗಳು[ಬದಲಾಯಿಸಿ]
ಉಲ್ಲೇಖಗಳು[ಬದಲಾಯಿಸಿ]
- ↑ "Mangoes and grapes give K'taka farmers sweet taste of success". Times of India. 2016.
- ↑ ೨.೦ ೨.೧ ೨.೨ Geographical Indications Journal (PDF). New Delhi: Government of India (8–11): 44–49. 2005 http://ipindia.nic.in/girindia/journal/8.pdf. Missing or empty
|title=
(help) - ↑ "Farmers Come Together to Save Nanjangud Rasabale". the new indian express. 2015.
- ↑ ಕಯ್ಯಾರ ಕಿಞ್ಞಣ್ಣ ರೈ ಅವರ ಹಣ್ಣು ಮಾರುವವನ ಹಾಡು