ಧನಂಜಯ ಕುಂಬ್ಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ.ಧನಂಜಯ ಕುಂಬ್ಳೆ
ಜನನಕುಂಬ್ಳೆ
ವೃತ್ತಿಪ್ರಾಧ್ಯಾಪಕ
ರಾಷ್ಟ್ರೀಯತೆಭಾರತೀಯ
ಕಾಲಅಧುನಿಕ
ಪ್ರಕಾರ/ಶೈಲಿಕಾವ್ಯ
ವಿಷಯಸಾಹಿತ್ಯ ಮತ್ತು ವಿಮರ್ಶೆ

ಇವರು ಕನ್ನಡ ಮತ್ತು ತುಳುವಿನ ಕವಿ, ವಿಮರ್ಶಕ, ಕನ್ನಡ ಪ್ರಾಧ್ಯಾಪಕರು,ಸಂಶೋಧಕರು.

ಹುಟ್ಟು[ಬದಲಾಯಿಸಿ]

ಧನಂಜಯ ಕುಂಬ್ಳೆ[೧] ಇವರು ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ಕುಂಬ್ಳೆ ಗ್ರಾಮದಲ್ಲಿ ಜನಿಸಿದರು. ತಂದೆ ನಾರಾಯಣ ಎಂ, ತಾಯಿ ಶಾರದ.

ವಿದ್ಯಾಭ್ಯಾಸ[ಬದಲಾಯಿಸಿ]

ಇವರು ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಅಜ್ಜಿಬೆಟ್ಟು ಕಿರಿಯ ಪ್ರಾಥಮಿಕ ಶಾಲೆ ಬಂಟ್ವಾಳ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಬ್ಳೆಯಲ್ಲಿ,ಪ್ರೌಡಶಾಲೆಯನ್ನು ಸರಕಾರಿ ಪ್ರೌಡಶಾಲೆ ಕುಂಬ್ಳೆಯಲ್ಲಿ,ಕಾಲೇಜು ಶಿಕ್ಷಣವನ್ನು ಸರಕಾರಿ ಕಾಲೇಜು ಕಾಸರಗೋಡುವಿನಲ್ಲಿ ಮುಗಿಸಿದ್ದಾರೆ.ಹಾಗೆನೆ ಕಣ್ಣೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ,ಅದುವೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

ಪಿಹೆಚ್.ಡಿ[ಬದಲಾಯಿಸಿ]

ಅರುಣಾಬ್ಜ ಮತ್ತು ಕುಮಾರವ್ಯಾಸ ತೌಲನಿಕ ಅಧ್ಯಯನ.

ಉದ್ಯೋಗ[ಬದಲಾಯಿಸಿ]

ನಿರ್ವಹಿಸಿದ ಹುದ್ದೆಗಳು[ಬದಲಾಯಿಸಿ]

  1. ಶ್ರೀ ಪಿ.ಸತೀಶ್ ಪೈ ಮತ್ತು ಪಿ.ದಯಾನಂದ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿ‍ರ್ದೇಶಕರು .
  2. ಮಂಗಳೂರು ವಿವಿಯ ಪ್ರಸಾರಾಂಗದ ಸಹ ನಿರ್ದೇಶಕರು
  3. ಮಂಗಳೂರು ವಿವಿಯ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕರು
  4. ಮಂಗಳೂರು ವಿವಿ ಸಾಂಸ್ಕೃತಿಕ ನೀತಿ ಸಮಿತಿಯ ನೋಡಲ್ ಆಫೀಸರ್
  5. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ

ಪರಿಣತಿ[ಬದಲಾಯಿಸಿ]

  • ೮ ಮಂದಿ ಇವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ನಡೆಸುತ್ತಿದ್ದಾರೆ.

ಬರೆದ ಕೃತಿಗಳು[ಬದಲಾಯಿಸಿ]

ಕವನ ಸಂಕಲನ[ಬದಲಾಯಿಸಿ]

  • ಮೊದಲ ಪಾಪ
  • ಹಾಡು ಕಲಿತ ಹಕ್ಕಿಗೆ
  • ಹಣತೆ ಹಾಡು

ವಿಮರ್ಶೆ[ಬದಲಾಯಿಸಿ]

ವ್ಯಕ್ತಿ ಚಿತ್ರ[ಬದಲಾಯಿಸಿ]

  • ನಿರಂಜನ ವ್ಯಕ್ತಿ ಚಿತ್ರ.
  • ಕಜಂಪಾಡಿ ರಾಮ ವ್ಯಕ್ತಿ ಚಿತ್ರ.

ಸಂಶೋಧನ ಕೃತಿಗಳು[ಬದಲಾಯಿಸಿ]

ಸಂಪಾದಿತ ಕೃತಿಗಳು[ಬದಲಾಯಿಸಿ]

ಪ್ರಶಸ್ತಿ[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

  1. ಮುಂಬಯಿ ಕರ್ನಾಟಕ ಸಂಘ ನೀಡುವ "ಪೇಜಾವರ ಸದಾಶಿವರಾವ್ ಕಾವ್ಯ ಪ್ರಶಸ್ತಿ".
  2. ಕಾಂತಾವರ ಕನ್ನಡ ಸಂಘದ "ಮುದ್ದಣ ಕಾವ್ಯ ಪ್ರಶಸ್ತಿ"
  3. ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಮಯೂರವರ್ಮ ಪ್ರಶಸ್ತಿ.

ಉಲ್ಲೇಖ[ಬದಲಾಯಿಸಿ]

  1. http://www.mangaloreuniversity.ac.in/drdhananjaya
  2. "ಆರ್ಕೈವ್ ನಕಲು". Archived from the original on 2017-09-27. Retrieved 2017-09-25.
  3. http://alvascollege.com/