ದೇವನೂರು ಮಹಾದೇವ
ದೇವನೂರು ಮಹಾದೇವ | |
---|---|
![]() | |
ಜನನ | 10 ಜೂನ್ 1948 ದೇವನೂರು ನಂಜನಗೂಡು ತಾಲ್ಲೂಕು ಮೈಸೂರು ಜಿಲ್ಲೆ ಕರ್ನಾಟಕ |
ವೃತ್ತಿ | ಅಧ್ಯಾಪಕ, ಬರಹಗಾರ |
ರಾಷ್ಟ್ರೀಯತೆ | ಭಾರತೀಯ |
ವಿಷಯ | ಕನ್ನಡ ಸಾಹಿತ್ಯ |
ಸಾಹಿತ್ಯ ಚಳುವಳಿ | ಬಂಡಾಯ ಚಳುವಳಿ, ದಲಿತ ಸಂಘರ್ಷ ಸಮಿತಿ |
ಪ್ರಭಾವಗಳು
| |
ಪ್ರಭಾವಿತರು
|
`
ದೇವನೂರು ಮಹಾದೇವ ಇವರು ಕನ್ನಡದ ಸಾಹಿತಿ.
ಪರಿಚಯ
ದೇವನೂರು ಮಹಾದೇವರವರು 1949 ಜೂನ 10 ರಂದು ತಂದೆ ನಂಜಯ್ಯ ತಾಯಿ ನಂಜಮ್ಮರ ಮಗನಾಗಿ ಮೈಸೂರ್ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ ಜನಿಸಿದರು. ದೇವನೂರು, ನಂಜನಗೂಡು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಪಡೆದರು. ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ ಪಡೆದ ಇವರು, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪಡೆದಿದ್ದಾರೆ. ಕೆಲಕಾಲ ಮೈಸೂರಿನ ಸಿ.ಐ.ಐ.ಎಲ್.ನಲ್ಲಿ ಕೆಲಸ ಮಾಡಿ ಅಲ್ಲಿಯ ವೃತ್ತಿಗೆ ರಾಜೀನಾಮೆ ನೀಡಿ ವ್ಯವಸಾಯದಲ್ಲಿ ತೊಡಗಿದರು. ಇವರ ‘ಒಡಲಾಳ ‘ ಕೃತಿಯನ್ನು ಕಲ್ಕತ್ತಾದ ಭಾರತೀಯ ಪರಿಷತ್ 1984ರ ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿತು. 1991ರಲ್ಲಿ ಇವರ ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ನೀಡಿತು. ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿರುವ ದೇವನೂರ ಮಹಾದೇವ 1989ರಲ್ಲಿ ಅಮೆರಿಕಾದಲ್ಲಿ ನಡೆದ ‘ಇಂಟರ್ನ್ಯಾಶನಲ್ ರೈಟಿಂಗ್ ಪ್ರೋಗ್ರಾಂ(International writting Programme)’ನಲ್ಲಿ ಭಾಗವಹಿಸಿದ್ದರು. ವರ್ಷದ ಹಿಂದೆ ದೇವನೂರು ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಹ ಲಭಿಸಿತು.[೧] ಇವರ ಕೃತಿಗಳು ‘ದ್ಯಾವನೂರು’, ‘ಒಡಲಾಳ’ ಮತ್ತು ‘ಕುಸುಮಬಾಲೆ’.
ಬಾಲ್ಯ
ದೇವನೂರು ಮಹಾದೇವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನವರು. ಜನನ 1949ರಲ್ಲಿ. ತಂದೆ ಸಿ.ನಂಜಯ್ಯ (ಪೋಲಿಸ್ ಕಾನ್ಸ್ ಟೇಬಲ್), ತಾಯಿ ನಂಜಮ್ಮ. ನಂಜನಗೂಡು, ಹುಣಸೂರು ಹಾಗು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ಮೈಸೂರಿನ ಭಾರತೀಯ ಭಾಷಾ ಸಂಸ್ಥೆ ಯಲ್ಲಿ ಕೆಲಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಆ ಬಳಿಕ ವ್ಯವಸಾಯದಲ್ಲಿ ತೊಡಗಿ ಮೈಸೂರಿನಲ್ಲಿ ನೆಲೆಸಿದರು. ಪತ್ನಿ ಕೆ.ಸುಮಿತ್ರಬಾಯಿ, ಇಬ್ಬರು ಮಕ್ಕಳು-ಉಜ್ವಲ ಮತ್ತು ಮಿತಾ. ಫೋರ್ಡ ಫೌಂಡೇಶನ್ ಕೊಡಮಾಡಿದ ಸಂಶೋಧನವೇತನವನ್ನು, ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನು, ಹಾಸನದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು,[೨].
==ಸಾಹಿತ್ಯ ಕೃತಿಗಳು==ನರ ಬಂಡಾಯ (panchama)ಇವರ ಪತ್ರಿಕೆ
ಕಥಾಸಂಕಲನಗಳು
- ದ್ಯಾವನೂರು(ಮಾರಿಕೊಂಡವರು, ದತ್ತ,
ಡಾಂಬರುಬಂದರು, ಅಮಾಸ,ಮೂಡಲಸಿಮೆಯಲ್ಲಿ ಕೊಲೆ ಗಿಲೆ,ಗ್ರಾಸ್ಥರು)
- ಒಡಲಾಳ
ಕಾದಂಬರಿ
- ಕುಸುಮಬಾಲೆ (ಅಕ್ಕಮ್ಮ ಯಾದ್ದೇಗೌಡ ಕುಸುಮ ಸೋಮಣ್ಣ ಚನ್ನ 3/5 ತಲೆಮಾರಿನ ಕಥೆ ಅಮಾಸ ಭಾಗವತಿ ಜೋತಮ್ಮಂದಿರ )
ಬಿಡಿ ಬರಹಗಳು
- ಎದೆಗೆ ಬಿದ್ದ ಅಕ್ಷರ
=ವೈಚಾರಿಕ ಬರಹ
- ನೋಡು ಮತ್ತು ಕೂಡು
ಅನುವಾದ
- ಗಾಂಧಿ ಮತ್ತು ಮಾವೋ
- ಕುಸುಮಬಾಲೆ ಇವರು ಬರೆದ ಕಾದಂಬರಿ. ಸ್ಥಳೀಯ ಭಾಷೆಯಲ್ಲಿ ಬರೆದ ೭೫ ಪುಟಗಳ ಈ ಕೃತಿಯನ್ನು “ಕನ್ನಡಕ್ಕೆ ಭಾಷಾಂತರಿಸಬೇಕೆಂದು”, ಮತ್ತೊಬ್ಬ ಸಾಹಿತಿ ಚಂದ್ರಶೇಖರ ಪಾಟೀಲ ಹಾಸ್ಯ ಮಾಡಿದ್ದರು. ಅಷ್ಟರ ಮಟ್ಟಿಗೆ ಮೈಸೂರಿನ ಹಳ್ಳಿ ನುಡಿಗಟ್ಟುಗಳು ಆ ಕೃತಿಯಲ್ಲಿದ್ದವು.
ದೇವನೂರು ಸಾಹಿತ್ಯ ಕುರಿತ ಇತರೆ ಕೃತಿಗಳು
- ಅವರ ಬರಹಗಳ ಬಗ್ಗೆ ವಿಮರ್ಶೆ ಹಾಗು ಅನಿಸಿಕೆಗಳನ್ನೊಳಗೊಂಡ ಯಾರ ಜಪ್ತಿಗೂ ಸಿಗದ ನವಿಲು ಎಂಬ ಕೃತಿಯನ್ನು ಪಿ.ಚಂದ್ರಿಕಾ ಅವರು ಸಂಪಾದಿಸಿದ್ದಾರೆ.
- ದೇವನೂರು ಮಹಾದೇವರ ಕಥೆಗಳು, ಕಾದಂಬರಿಗಳು - ಉದಯಕುಮಾರ ಹುಬ್ಬು
- ದೇವನೂರು ಮಹಾದೇವ - ಎನ್.ಪಿ. ಶಂಕರನಾರಾಯಣರಾವ್
ನಿರ್ವಹಿಸಿದ ಜವಾಬ್ದಾರಿಗಳು
- ದೇವನೂರು ಮಹಾದೇವ ಅವರು ಕೆಲಕಾಲ ‘ನರಬಂಡಾಯ’ ಹೆಸರಿನ ಪತ್ರಿಕೆ ನಡೆಸಿದರು. ಬಳಿಕ ಅದಕ್ಕೆ ‘ಪಂಚಮ’ ಎಂದು ಹೆಸರಿಟ್ಟರು.
- ಅಧ್ಯಕ್ಷರು -ಜೆ.ಪಿ.ಸ್ವಾಗತ ಸಮಿತಿ ಮತ್ತು ಸರ್ವೋದಯ ಕರ್ನಾಟಕ ಪಕ್ಷ
- ಸಂಚಾಲಕರು - ದಲಿತ ಸಂಘರ್ಷ ಸಮಿತಿ
- ಸದಸ್ಯರು - ಅಂಬೇಡ್ಕರ್ ಸಾಹಿತ್ಯ ಅನುವಾದ ಮಂಡಲಿ, ಕನ್ನಡ ಕಾವಲು ಸಮಿತಿ
- ಅಧ್ಯಾಪಕರು- ಮೈಸೂರಿನ ಭಾರತೀಯ ಭಾಷಾ ಸಂಸ್ಥೆ
- ಸಂದರ್ಶನ ಪ್ರಾಧ್ಯಪಕರು- ಹಂಪಿ ವಿಶ್ವವಿದ್ಯಾನಿಲಯ[ಸೂಕ್ತ ಉಲ್ಲೇಖನ ಬೇಕು]
ಸಾಮಾಜಿಕ
ದೇವನೂರು ಮಹಾದೇವ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರು. ಇವರು ಪ್ರಸ್ತುತ ಕರ್ನಾಟಕ ಸರ್ವೋದಯ ಪಕ್ಷದ ಅಧ್ಯಕ್ಷರಾಗಿದ್ದಾರೆ.
ವಿಚಾರಗಳು
ಗೌರವ, ಪುರಸ್ಕಾರ
- ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- ೧೯೯೧ರಲ್ಲಿ ‘ಕುಸುಮಬಾಲೆ’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ[೩]
- ಅಲ್ಲಮಪ್ರಭು ಪ್ರಶಸ್ತಿ-೨೦೧೩
- ಬೋಧಿವೃಕ್ಷ ಪ್ತಶಸ್ತಿ -೨೦೧೩
- ವಿ,ಎಂ.ಇನಾಂದಾರ್ ಪ್ರಶಸ್ತಿ - ಎದೆಗೆ ಬಿದ್ದ ಅಕ್ಷರ ಕೃತಿಗೆ
- ಇವರ ಒಡಲಾಳ ಕೃತಿಗೆ ಕಲ್ಕತ್ತಾದ ಭಾರತೀಯ ಭಾಷಾ ಪರಿಷತ್ ೧೯೮೪ರ ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿದೆ.
- ೨೦೧೧ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರಿ ಪ್ರಶಸ್ತಿ ಯನ್ನು ಕೊಟ್ಟೂ ಗೌರವಿಸಿದೆ,[೪]
- ಗೌರವ ಡಾಕ್ಟರೇಟ್, ಮೈಸೂರು ವಿಶ್ವವಿದ್ಯಾನಿಲಯ - ೨೦೧೪
- ಇದಲ್ಲದೆ ಅಮೇರಿಕಾದಲ್ಲಿ ನಡೆದ ‘ಇಂಟರನ್ಯಾಷನಲ್ ರೈಟಿಂಗ್ ಪ್ರೋಗ್ರಾಮ'ದಲ್ಲಿ ಭಾಗವಹಿಸಿದ್ದಾರೆ.
- ಕುವೆಂಪು ರಾಷ್ಟ್ರೀಯ ಪ್ರಶಸ್ತಿ[೫]
ಉಲ್ಲೇಖಗಳು
- ↑ ಪ್ರಜಾವಾಣಿ. "128 ಗಣ್ಯರಿಗೆ ಪದ್ಮ ಪ್ರಶಸ್ತಿ".
- ↑ http://www.newindianexpress.com/states/karnataka/Devanoor-rejected-hon-degrees-V-C/2013/06/09/article 1626864.ece
- ↑ "ಕನ್ನಡ ಪ್ರಭ". Archived from the original on 2016-10-06. Retrieved 2017-05-10.
- ↑ "Padma award winners from Karnataka".
- ↑ "ಕನ್ನಡ ಪ್ರಭ ಪತ್ರಿಕಾ ವರದಿ". Archived from the original on 2016-10-06. Retrieved 2017-05-10.
ಬಾಹ್ಯ ಸಂಪರ್ಕಗಳು
- ಕೆಂಡಸಂಪಿಗೆ ಅಂತರಜಾಲ ತಾಣದಲ್ಲಿರುವ ದೇವನೂರು ಮಹಾದೇವ ಅವರ ಪುಟ Archived 2010-11-25 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- Pages using div col with unknown parameters
- Articles with unsourced statements
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಸಾಹಿತಿಗಳು
- ಪತ್ರಕರ್ತರು
- ೧೯೪೯ ಜನನ
- ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
- ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
- ಲೇಖಕರು
- ಕನ್ನಡ ಸಾಹಿತಿಗಳು