ತ್ಯಾಗರಾಜ ದೇವಾಲಯ, ತಿರುವೊಟ್ಟಿಯುರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತ್ಯಾಗರಾಜ ದೇವಾಲಯ(ವದಿವು ಅಮ್ಮನ್ ದೇವಸ್ಥಾನ ಎಂದು ಕೂಡ ಕರೆಯಲ್ಪಡುತ್ತದೆ) ಹಿಂದು ದೇವಾಲಯವಾಗಿದ್ದು,ಇದು ಶಿವನಿಗೆ ಮೀಸಲಾಗಿದೆ. ಇದು ಭಾರತತಮಿಳುನಾಡಿನ ಚೆನೈನ ಉತ್ತರ ಭಾಗದಲ್ಲಿ ತಿರುವೊಟ್ಟಿಯುರ್'ನಲ್ಲಿದೆ. ದೇವಾಲಯದ ಶೈವ ನಯನರ್ಸ್'ಗಳನ್ನು ೭ನೇ ಶತಮಾನದ ತಮಿಳು ಸಂತ ಕವಿಗಳ ತೆವರಂ ಕೀರ್ತನೆಗಳನ್ನು ಪೂಜ್ಯ ಮತ್ತು ಪಾದಲ್ ಪೆಟ್ರಾ ಸ್ಥಳಕ್ಕೆ ವರ್ಗೀಕರಿಸಲಾಗಿದೆ. ದೇವಾಲಯವು ನಿಕಟವಾಗಿ ಸಂತ ಕವಿ ಸುಂದರರ್ ಮತ್ತು ಪತ್ತಿನತ್ಹರ್ ರವರ ಸಹಭಾಗಿತ್ವದಲ್ಲಿರುತ್ತದೆ. ದೇವಾಲಯವು ೭ನೇ ಶತಮಾನದ ಪಲ್ಲವರ ಕಾಲದಿಂದಲೂ ರೂಢಿಯಲ್ಲಿದೆ ಮತ್ತು ವ್ಯಾಪಕವಾಗಿ ೧೧ ನೆಯ ಶತಮಾನದಲ್ಲಿ ಚೋಳ ರಾಜರಿಂದ ವಿಸ್ತರಿಸಲಾಗಿದೆ. ದೇವಾಲಯದ ಏಳು ಶ್ರೇಣೀಕೃತ ಮಹಾದ್ವಾರ ಗೋಪುರ ಮತ್ತು ಒಂದು ಕೊಳವನ್ನು ಒಳಗೊಂಡ ದೇವಾಲಯವು ಒಟ್ಟಾರೆ ಒಂದು ಎಕರೆ ಪ್ರದೇಶವಾಗಿದೆ. ದೇವಾಲಯವು ಹಿಂದೂ ಧಾರ್ಮಿಕ ಮತ್ತು ತಮಿಳುನಾಡು ಸರ್ಕಾರದ ದತ್ತಿ ಮಂಡಳಿಯ ಆಡಳಿತದಲ್ಲಿರುತ್ತದೆ. ಈ ದೇವಾಲಯವು ತಿರುವಾರೂರುನಲ್ಲಿರುವ ತ್ಯಾಗರಾಜ ದೇವಾಲಯಕ್ಕೆ ಸಮಾನಾಂತರವಾಗಿದ್ದು ರಾಜೇಂದ್ರ ಚೋಳ ೧ ,ಅವರಿಂದ ವಿಸ್ತರಿಸಲ್ಪಟ್ಟಿದೆ ಹಾಗು ಎರಡೂ ದೇವಾಲಯಗಳಲ್ಲಿರುವ ಶಿವನ ಮೂರ್ತಿಗಳು ಒಂದೇ ತರಹದ ನೃತ್ಯ ಭಂಗಿಯಲ್ಲಿರುತ್ತದೆ.

ದಂತಕಥೆ[ಬದಲಾಯಿಸಿ]

ಹಿಂದೂ ಧರ್ಮದ ಪ್ರಾಥಮಿಕ ದೇವರುಗಳಲ್ಲಿ ಮೊದಲನೆಯವನು ಬ್ರಹ್ಮ ಸೃಷ್ಟಿಕರ್ತ, ಏರಡನೆಯವನು ವಿಷ್ಣು ಸೃಷ್ಟಿಯ ಸಂರಕ್ಷಕ, ಮೂರನೇಯವನು ಶಿವ ವಿಧ್ವಂಸಕ. ಬ್ರಹ್ಮ, ದೇವಾನು-ದೇವತೆಯರನ್ನು ಮತ್ತು ರಾಕ್ಷಸರನ್ನು ಸೃಷ್ಟಿಸಿದನು - ಈ ಎರಡೂ ಗುಂಪುಗಳು ಪರಸ್ಪರ ಹೋರಾಡಿದರು. ಅಸುರರು ಎಂದು ಕರೆಯಲ್ಪಡುವ ರಾಕ್ಷಸರು ಜನಶಕ್ತಿಯನ್ನು ಬಳಸಿದರೆ, ದೇವತೆಗಳು ಪವಿತ್ರ ಗ್ರಂಥಗಳನ್ನು ಹೊಂದಿರುವ ವೇದ ಶಕ್ತಿಯನ್ನು ಬಳಸಿದರು. ಒಮ್ಮೆ, ಮಧು ಮತ್ತು ಕೈಥಬ ಎಂಬ ರಾಕ್ಷಸರು, ವೇದವನ್ನು ಕದಿಯಲು ದೇವರನ್ನು ಮೋಸಗೊಳಿಸಿದರು ಹಾಗು ಅದನ್ನು ಕತ್ತರಿಸಿ ಅದರ ತುಣುಕುಗಳನ್ನು ಸಮುದ್ರದ ತಳದಲ್ಲಿ ಬಚ್ಚಿಟ್ಟಿದ್ದರು. ವಿಷ್ಣು ರಾಕ್ಷಸರೊಡನೆ ಹೋರಾಡಿದನು, ಆದರೆ ಅವರನ್ನು ಸೋಲಿಸಲು ಸಾಧ್ಯವಾಗದ ಕಾರಣ, ಅವನು ಶಿವ ಹಾಗು ಪಾರ್ವತಿ ದೇವಿಯಲ್ಲಿ ಪ್ರಾರ್ಥಿಸಿದನು ಹಾಗು ಅದರಲ್ಲಿ ಸಾಧಿಸಿ ರಾಕ್ಷಸರನ್ನು ಸೋಲಿಸಿದನು. ವಿಷ್ಣು ವೇದವನ್ನು ಹುಡುಕಲು ಮತ್ಸ್ಯ (ಮೀನಿನ) ರೂಪವನ್ನು ತಾಳಿದನು. ಸಮುದ್ರದ ತಳಭಾಗದಲ್ಲಿದ್ದ ವೇದವನ್ನು ಹುಡುಕಿ ತಂದು ಈ ದೇವಾಲಯದ ದೇವತೆಗೆ ಸಮರ್ಪಿಸಿದನು. ಆಕೆ ಇದನ್ನು ಮರುಜೋಡಣೆ ಮಾಡಿ ಶುದ್ಧೀಕರಿಸಿದಳು.ದೇವಾನು-ದೇವತೆಗಳಿಂದ ಸೃಷ್ಟಿಸಲ್ಪಟ್ಟ ಇದು, ವರ ನೀಡುವ ವೃಕ್ಷ, ಮಕಿಜ್ಹವೃಕ್ಷ ಈ ದೇವಾಲಯದ ಪೂಜ್ಯ ಮರವಾಗಿದೆ.

ಇತಿಹಾಸ[ಬದಲಾಯಿಸಿ]

ತ್ಯಾಗರಾಜ ದೇವಾಲಯವು ಕಲಿಕಾ ಕೇಂದ್ರವಾಗಿದ್ದು, ದೇವಾಲಯದ ಸಭಾಂಗಣವು ವ್ಯಾಕರಣ(ಅನುವಾದ), ಸೋಮಸಿದ್ದಾಂತ(ತತ್ವಶಾಸ್ತ್ರ) ಮತ್ತು ಪಾಣಿನಿಯ ವ್ಯಾಕರಣ ಗ್ರಂಥ ರೀತಿಯ ಧಾರ್ಮಿಕ ಪ್ರವಚನಗಳನ್ನು ನೀಡುವ ತಾಣವಾಗಿತ್ತು. ೯ನೇ ಶತಮಾನದ ಅವಧಿಯಲ್ಲಿ, ದೇವಾಲಯದ ಅಂಗಣದಲ್ಲಿ ಯತಿಗಳ ಆಶ್ರಮವಿದ್ದು, ಅದಕ್ಕೆ ಕಾತುರನನಸ್ ಪಂಡಿತ್ಹರ್ ಅಧ್ಯಕ್ಷತೆಯನ್ನು ವಹಿಸಿದರು. ದೇವಾಲಯವು ತಾತ್ವಿಕ ಪ್ರವಚನಗಳನ್ನು ಮತ್ತು ವ್ಯಾಕರಣದ ಮೇಲೆ ಪ್ರತಿಪಾದನೆಗಳನ್ನು ಹೊಂದಿತ್ತು.ಪ್ರಭಾಕರ, ರುದ್ರ, ಯಮಲ, ಪುರಾಣ, ಶಿವಧರ್ಮ, ಪಂಚಾಂಗ ಮತ್ತು ಭರತ ನಿರೂಪಣೆಯ ಉಲ್ಲೇಖಗಳಿವೆ. ಭೂಮಿಯನ್ನು ವಿದ್ವಾಂಸರಿಗೆ ಮತ್ತು ಅವರ ಪೀಳಿಗೆಗಳಾದ ವೆದವೃತ್ತಿ, ಭಟ್ತವೃತ್ತಿ , ವೈದ್ಯವೃತ್ತಿ ಮತ್ತು ಅರ್ಚನವೃತ್ತಿಗೆ ನೀಡಲಾಯಿತು.

ದೇವಾಲಯದ ಒಳಗೆ ಪಲ್ಲವ ಅವಧಿಯ ಕಾಲಮಾನದ ಹಲವಾರು ಶಾಸನಗಳಿದೆ.೮ನೇ ಶತಮಾನದಲ್ಲಿ ಹಿಂದೂ ಧರ್ಮದ ಅದ್ವೈತ ಶಾಲೆಯಲ್ಲಿ ವಿದ್ವಾಂಸರಾಗಿದ್ದ ಶಂಕರಾಚಾರ್ಯ ದೇವಾಲಯಕ್ಕೆ ಭೇಟಿ ನೀಡಿ, ದುಷ್ಟ ಶಕ್ತಿಯನ್ನು ಪತನ ಮಾಡಿದರು ಎಂದು ನಂಬಲಾಗಿದೆ. ದೇವಾಲಯವನ್ನು ಮೂಲತಃ ಪಲ್ಲವರು ನಿರ್ಮಿಸಿದರು ನಂತರ ರಾಜೇಂದ್ರ ಚೋಳ ೧ ಮರುನಿರ್ಮಾಣ ಮಾಡಿದನು. ೧೦೪೬ ಇಸುವಿಯ ಕಾಲಾವಧಿಯಲ್ಲಿ, ದೇವಾಲಯದಲ್ಲಿ ೬೪ ಕಂಚಿನ ನಾಯನ್ಮಾರ್ ಪ್ರತಿಮೆಗಳನ್ನು ಸ್ಥಾಪಿಸಲಾಗಿತ್ತೆಂದು ಶಾಸನಗಳಲ್ಲಿ ಬಹಿರಂಗ ಮಾಡಲಾಗಿದೆ. ದೇವಾಲಯದಲ್ಲಿ ಸಮಾನ ಸಂಖ್ಯೆಯಲ್ಲಿದ್ದ,