ಟಿ. ಸತೀಶ್ ಜವರೇಗೌಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಿ. ಸತೀಶ್ ಜವರೇಗೌಡ
ಜನನಮಂಗಲ, ಮಂಡ್ಯ, ಕರ್ನಾಟಕ
ವೃತ್ತಿ
  • ಕವಿ
  • ಶಿಕ್ಷಕ
ಭಾಷೆಕನ್ನಡ
ಪ್ರಕಾರ/ಶೈಲಿಕವಿತೆ, ಲೇಖನ, ಜೀವನಚರಿತ್ರೆ

ತಿಮ್ಮೇಗೌಡ ಸತೀಶ್ ಜವರೇಗೌಡ, ಕನ್ನಡ ಭಾಷೆಯ ಪರಿಚಿತ ಕವಿ ಮತ್ತು ಸಂಘಟಕ.[೧][೨][೩] ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಲೇ, ಸಾಹಿತ್ಯಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಸತೀಶರು, ಹಲವಾರು ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಮತ್ತು ದಸರಾ ಕವಿಗೋಷ್ಠಿಗಳಲ್ಲಿ ಕವನಗಳನ್ನು ವಾಚಿಸಿರುವ ಸತೀಶ್ ಅವರು ಕನ್ನಡ ಪುಸ್ತಕ ಪ್ರಾಧಿಕಾರದ ಬಹುಮಾನ ಪಡೆದಿದ್ದಾರೆ.[೪]

ಜೀವನ - ಶಿಕ್ಷಣ[ಬದಲಾಯಿಸಿ]

ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ, ತಿಮ್ಮೇಗೌಡ ಮತ್ತು ಮಂಚಮ್ಮ ದಂಪತಿಗಳ ಮಗನಾಗಿ ಹುಟ್ಟಿದ ಸತೀಶ್ ಅವರು ಸ್ನಾತಕೋತ್ತರ ಪದವೀಧರ.[೫] ಶಾಲಾಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಯುವಬರಹಗಾರರ ವೇದಿಕೆಯ ಮೂಲಕ ಸಕ್ರಿಯರಾಗಿದ್ದು, ಸಮಕಾಲೀನ ವಿದ್ಯಮಾನಗಳಿಗೆ ಕವಿತೆಗಳ ಮೂಲಕ ಸ್ಪಂದಿಸುವಿಕೆಗೆ ಗುರುತಾಗಿದ್ದಾರೆ.[೬]

ಕೃತಿಗಳು[ಬದಲಾಯಿಸಿ]

ಕವನಸಂಕಲನಗಳು[ಬದಲಾಯಿಸಿ]

  • ಜೀವನ್ಮುಖಿ [೫]
  • ಹೊಳೆ ಜಂಗಮನ ಜೋಳಿಗೆ
  • ಸಂಜೆಮಳೆ
  • ಗಾಳಿಪಟ
  • ಕುಹೂ ಕುಹೂ ಕೋಗಿಲೆ [೪]
  • ದಿವ್ಯ ದೀವಿಗೆ
  • ಬಯಲ ಬೆಳಕಿಗೆ ಬಾಗಿ

ಸಂಪಾದನೆ[ಬದಲಾಯಿಸಿ]

  • ಕಾವ್ಯಸಿರಿ [೫]
  • ಸೇವಾಚೇತನ
  • ವಿಜ್ಞಾನ ಪಥಿಕ

ಪುರಸ್ಕಾರಗಳು[ಬದಲಾಯಿಸಿ]

  • ಶಿಕ್ಷಣ ಚೇತನ ಪ್ರಶಸ್ತಿ [೭]
  • ಕುವೆಂಪು ಸಾಹಿತ್ಯ ಪ್ರಶಸ್ತಿ
  • ಜಿ. ಪಿ. ರಾಜರತ್ನಂ ಸಾಹಿತ್ಯ ಪ್ರಶಸ್ತಿ
  • ಕನ್ನಡ ಸಾಹಿತ್ಯ ಪರಿಷತ್ತು - ಅರಳು ಸಾಹಿತ್ಯ ಪ್ರಶಸ್ತಿ[೮][೯][೧೦]
  • ಎಸ್. ಕೆ. ಕರೀಂಖಾನ್ ಸಾಂಸ್ಕೃತಿಕ ಮತ್ತು ಸಾಹಿತ್ಯ ಪ್ರಶಸ್ತಿ [೨][೧]
  • ರೋಟರಿ ಆದರ್ಶ ಶಿಕ್ಷಕ ಪ್ರಶಸ್ತಿ
  • ಗಾಂಧಿ-ವಿವೇಕಾನಂದ ಸದ್ಭಾವನಾ ಪ್ರಶಸ್ತಿ[೧೧][೧೨]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "30ರಂದು ಸಾಹಿತಿ ಟಿ. ಸತೀಶ್ ಜವರೇಗೌಡಗೆ ಪ್ರಶಸ್ತಿ ಪ್ರದಾನ". Vijayavani. Retrieved 17 April 2021.[ಶಾಶ್ವತವಾಗಿ ಮಡಿದ ಕೊಂಡಿ]
  2. ೨.೦ ೨.೧ "ಸಾಹಿತಿ ಟಿ. ಸತೀಶ್ ಜವರೇಗೌಡಗೆ ಎಸ್. ಕೆ. ಕರೀಂಖಾನ್ ಪ್ರಶಸ್ತಿ". Varthabharati. 25 June 2019. Retrieved 17 April 2021.
  3. "ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಿಗೆ ಆಕರ್ಷಿತರಾದ ಯುವಪೀಳಿಗೆ ಸಮಾಜದಿಂದ ವಿಮುಖರಾಗುತ್ತಿದ್ದಾರೆ: ಸಾಹಿತಿ ಸತೀಶ್ ಜವರೇಗೌಡ". Pandava News. 12 April 2019. Archived from the original on 17 ಏಪ್ರಿಲ್ 2021. Retrieved 17 April 2021.
  4. ೪.೦ ೪.೧ "Kannada Pustaka Pradhikara official website". Retrieved 17 April 2021.
  5. ೫.೦ ೫.೧ ೫.೨ "ಸಾಹಿತಿ ಸತೀಶ್ ಜವರೇಗೌಡ". Book Brahma. Retrieved 17 April 2021.
  6. "ಯಾರನ್ನು ದೂರುವುದು?". Publicstory Digital News TV. 28 April 2020. Retrieved 17 April 2021.
  7. "T. Satish Javaregowda selected for 'Shikshana Chetana Award'". Star of Mysore. 22 September 2020. Retrieved 18 April 2021.
  8. "ಯುವ ಲೇಖಕರಿಂದ ಪ್ರಶಸ್ತಿ ವಾಪಸ್". Prajavani. Archived from the original on 17 ಏಪ್ರಿಲ್ 2021. Retrieved 17 April 2021.
  9. "ಕಲಬುರ್ಗಿ ಹತ್ಯೆಗೆ ಖಂಡನೆ, ಸಾಹಿತಿಗಳಿಂದ ಪ್ರಶಸ್ತಿ ವಾಪಸ್". Kannada One India. 2 October 2015. Retrieved 17 April 2021.
  10. "Six Kannada Writers Return Awards Over Kalaburgi Probe Delay". The New Indian Express. 4 October 2015. Retrieved 18 April 2021.
  11. "ಗಾಂಧೀ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿಗೆ ಟಿ. ಸತೀಶ್ ಆಯ್ಕೆ". Vaarthabharathi. 8 March 2019. Retrieved 17 April 2021.
  12. "ವಿವೇಕಾನಂದ ಸದ್ಭಾವನಾ ಪ್ರಶಸ್ತಿಗೆ ಟಿ.ಸತೀಶ್ ಜವರೇಗೌಡರ ಆಯ್ಕೆ". Mysuru Mithra. 10 January 2020. Retrieved 17 April 2021.