ಆರಿಫ಼್ ರಾಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರಿಫ್ ರಾಜ
ಜನನ೬ ಡಿಸೆಂಬರ್ ೧೯೮೩
ಆರಕೆರ, ದೇವದುರ್ಗ, ರಾಯಚೂರು ಜಿಲ್ಲೆ, ಕರ್ನಾಟಕ
ವೃತ್ತಿ
  • ಕವಿ
  • ಉಪನ್ಯಾಸಕ
ಭಾಷೆಕನ್ನಡ
ಪ್ರಕಾರ/ಶೈಲಿಕವಿತೆ
ಪ್ರಮುಖ ಪ್ರಶಸ್ತಿ(ಗಳು)ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ

ಆರಿಫ್ ರಾಜ (ಹುಟ್ಟು:೧೯೮೩), ಕನ್ನಡ ಭಾಷೆಯಲ್ಲಿ ಬರೆಯುವ ಕವಿ. ಇವರ ಜಂಗಮ ಫಕೀರನ ಜೋಳಿಗೆ ಕೃತಿಗೆ ೨೦೧೨ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಲಭಿಸಿದೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಆರಿಫ್ ರಾಜ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಆರಕೆರಾ ಗ್ರಾಮದವರು. ಇವರು ರಾಯಚೂರು ಜಿಲ್ಲೆಯ ಉಪ್ರಾಳ ಕ್ಯಾಂಪ್ನಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.ನಂತರದಲ್ಲಿ ಪ್ರಸ್ತುತವಾಗಿ ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇಳಕಲ್ನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೃತಿಗಳು[ಬದಲಾಯಿಸಿ]

  • ನಕ್ಷತ್ರ ಮೋಹ
  • ಸೈತಾನನ ಪ್ರವಾದಿ
  • ಜಂಗಮ ಫಕೀರನ ಜೋಳಿಗೆ
  • ಬೆಂಕಿಗೆ ತೊಡಿಸಿದ ಬಟ್ಟೆ
  • ಹೆದೆ ಹಾಲಿನ ಪಾಳಿ

ಪುರಸ್ಕಾರಗಳು[ಬದಲಾಯಿಸಿ]

"ಜಂಗಮ ಫಕೀರನ ಜೋಳಿಗೆ" ಸಂಕಲನಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಪುಸ್ತಕ ಪ್ರಶಸ್ತಿ, ಬೇಂದ್ರೆ ಪುಸ್ತಕ ಬಹುಮಾನ ಹಾಗು 2012ರ ಕೇಂದ್ರ ಸಾಹಿತ್ಯ ಅಕಾಡೆಮಿಯ "ಯುವ ಪುರಸ್ಕಾರ" ಪ್ರಶಸ್ತಿ ದೊರೆತಿವೆ. ಇವರ ಕವಿತೆಗಳು ಭಾರತದ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಪರ್ಷಿಯನ್ ಭಾಷೆಯಲ್ಲಿ ರಚಿತವಾದ "ಭಾರತದ ಸಮಕಾಲೀನ ಕವಿತೆಗಳು" ಸಂಕಲನದಲ್ಲಿ ಇವರ ಅನುವಾದಿತ ಕವಿತೆಗಳು ಪ್ರಕಟಗೊಂಡಿವೆ. ಇವರ "ಬೆಂಕಿಗೆ ತೊಡಿಸಿದ ಬಟ್ಟೆ" ಕೃತಿಗೆ 2014ರ ದಿನಕರ ದೇಸಾಯಿ ಪ್ರಶಸ್ತಿ ಒಲಿದು ಬಂದಿದೆ.

ಉಲ್ಲೇಖಗಳು[ಬದಲಾಯಿಸಿ]