ಅಚ್ಚ ಕನ್ನಡ
ಗೋಚರ
ಅಚ್ಚ ಕನ್ನಡವೆಂದರೆ, ಕನ್ನಡದ ಮೂಲಪದಗಳನ್ನು(ಪಲುಕುಗಳನ್ನು) ಬಳಸಿ ಹೇಳುವ, ಬರೆಯುವ, ಮಾತುಗೈವ ಒಂದು ಅಣ್ಕೆ. ಸಂಸ್ಕೃತದ ಒಂದೂ ಪದವನ್ನು(ಒರೆಯನ್ನು) ಬಳಸದೇ ಕನ್ನಡದಲ್ಲಿ ಕಾವ್ಯ(ಕಬ್ಬ) ಬರೆದ, ಸುಮಾರು ಕ್ರಿ.ಶ. ೧೨ನೆಯ ಶತಮಾನದಲ್ಲಿದ್ದ ಆಂಡಯ್ಯ ಎಂಬ ಕಬ್ಬಿಗನೇ ಇದರ ಪುರಿ.
ಮೊಗಸುಗಳು
[ಬದಲಾಯಿಸಿ]ಆಂಡಯ್ಯನ ಬಳಿಕ ಈ ಬಗೆಯಲ್ಲಿ ಹೆರನುಡಿಯ ಒರೆಗಳ ಹಂಗಿಲ್ಲದೆ ಬರೆಯುವ ಮೊಗಸು ನೂರಾರು ಏಡುಗಳ ವರೆಗೂ ನಡೆಯಲೇ ಇಲ್ಲ. ಆದರೆ ೧೯ನೇ ನೂರೇಡಿನ ತೊಡಗಿಕೆಯಲ್ಲಿ ೧೯೧೫ ರಲ್ಲಿ ಕೊಳಂಬೆ ಪುಟ್ಟಣ್ಣಗೌಡರು ಒಂದು ಈ ಬಗೆಯ ಮೊಗಸನ್ನು ಕಯ್ ಗೊಂಡರು. ಅವರು ಕಾಲೂರ ಚೆಲುವೆ ಎಂಬ ಅಚ್ಚಗನ್ನಡದ ಹಾಡುಗಬ್ಬ ಒಂದನ್ನು ಬರೆದರು. ಇವರು ಹಾಗೆಯೇ ಅಚ್ಚಗನ್ನಡ ನುಡಿಕೋಶವನ್ನೂ ಉಂಟು ಮಾಡಿದರು. ಇದಾದ ಬಳಿಕ ನೂರು ಏಡುಗಳು ಕಳೆದರೂ ಇದುವರೆಗೂ ಯಾರೂ ಮತ್ತೂಂದು ಈ ಬಗೆಯ ಮೊಗಸನ್ನು ಮಾಡಿಲ್ಲ. ಆದರೆ ಹಲವರು ಚಿಕ್ಕಪುಟ್ಟ ಬರಹಗಳನ್ನು ಅಚ್ಚಗನ್ನಡದಲ್ಲೇ ಬರೆಯುತ್ತಿದ್ದಾರೆ.