ಸುರೇಂದ್ರ ದಾನಿ
ಸುರೇಂದ್ರ ದಾನಿ ಇವರು ೧೯೨೫ ಅಗಸ್ಟ ೧೭ರಂದು ಧಾರವಾಡದಲ್ಲಿ ಜನಿಸಿದರು. ಕನ್ನಡ ಹಾಗು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.
ವೃತ್ತಿ[ಬದಲಾಯಿಸಿ]
ಸುರೇಂದ್ರ ದಾನಿಯವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ವರ್ಗದಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಸುರಾಜ್ಯಪಥ ಎನ್ನುವ ಪಾಕ್ಷಿಕದ ಸಂಪಾದಕರಾಗಿ ಸಹ ಕಾರ್ಯ ನಿರ್ವಹಿಸಿದ್ದಾರೆ.
ಸಾಹಿತ್ಯ[ಬದಲಾಯಿಸಿ]
ಜೀವನ ಚರಿತ್ರೆ[ಬದಲಾಯಿಸಿ]
- ಕೌಜಲಗಿ ಹನುಮಂತರಾಯರು
- ಮೊಹರೆ ಹಣಮಂತರಾವ
- ಲೀಲಾತಾಯಿ ಮಾಗಡಿ
ಇತರ[ಬದಲಾಯಿಸಿ]
- ಕನ್ನಡ ಸಾಹಿತ್ಯ ಸಮ್ಮೇಳನದ ಕಥೆ
- ಸಾಧನೆ ಸವಾಲು
- ಸ್ವಯಂಸೇವಕನ ನೆನಪುಗಳು
- ಪತ್ರಿಕಾ ಪ್ರಬಂಧಗಳು
- ವ್ಯಾಸಸೃಷ್ಟಿ-ಕುಮಾರವ್ಯಾಸ ದೃಷ್ಟಿ
- ತಿಳಿವಿನ ತಿರುವು
- ಧಾರವಾಡ ಜಿಲ್ಲಾ ಸ್ವಾತಂತ್ರ್ಯ ಸಂಗ್ರಾಮ
ಅನುವಾದ[ಬದಲಾಯಿಸಿ]
- ಜೋಸೆಫ್ ಪುಲಿಟ್ಝರ
- ಕಮ್ಯುನಿಸ್ಟ ಚೀನಾ
ಪುರಸ್ಕಾರ[ಬದಲಾಯಿಸಿ]
- ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ
- ಖಾದ್ರಿ ಶಾಮಣ್ಣ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ