ಸದಸ್ಯ:Gopala Krishna A/ನನ್ನ ಕೆಲಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಈ ಪುಟ ಕನ್ನಡ ವಿಕಿಪೀಡಿಯ ಸಮುದಾಯ ಸಹಾಯಕನ ಕೆಲಸಗಳ ಪಟ್ಟಿಯನ್ನು ಹೊಂದಿದೆ." ಈ ಪುಟದಲ್ಲಿ ಸದಸ್ಯರು ತಮಗೆ ಮಾಡಬಹುದು/ಮಾಡಬೇಕೆಂದಿರುವ ಕೆಲಸಗಳನ್ನೂ ಸೇರಿಸಬಹುದು.

ಆಗಸ್ಟ್ ತಿಂಗಳಲ್ಲಿ ಮಾಡಬೇಕೆಂದಿರುವ ಕೆಲಸಗಳ ಪಟ್ಟಿ[ಬದಲಾಯಿಸಿ]

ಮಾಡಬೇಕೆಂದಿರುವ ಕೆಲಸದ ಪಟ್ಟಿ (ಬಾಕಿ ಪಟ್ಟಿ)[ಬದಲಾಯಿಸಿ]

  • ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಕಿಪೀಡಿಯದ ತರಬೇತಿ ಕಾರ್ಯಾಗಾರಗಳನ್ನು ನಡೆಸುವುದು.
  • ಹಿಂದೆ ನವಕರ್ನಾಟಕ ಪ್ರಕಾಶಕರಲ್ಲಿ ಚರ್ಚಿಸಿದಂತೆ, ಕನ್ನಡ ವಿಕಿಪೀಡಿಯದಲ್ಲಿ ಈಗ ಸ್ಥಳೀಯವಾಗಿ ಚಿತ್ರಗಳನ್ನು ಸೇರಿಸುವ ಅವಕಾಶ ಇರುವುದರಿಂದ ಪುಸ್ತಕಗಳ ಮುಖಪುಟ ಮತ್ತು ಹಿಂಬಾಗವನ್ನು ಸ್ಕ್ಯಾನ್ ಮಾಡಿ ಅವುಗಳ ಬಗ್ಗೆ ಲೇಖನ ಸೇರಿಸುವುದು.
  • ನಿರ್ವಾಹಕರೊಂದಿಗೆ ಸಂಪರ್ಕ ಬೆಳೆಸಿ ಈಗಾಗಲೇ ನಡೆದ ಟೆಂಪ್ಲೇಟು, ಇನ್ಫೋಬಾಕ್ಸ್‌ಗಳ ರಚನೆಯ ಕಾರ್ಯಾಗಾರದಲ್ಲಿ ನಡೆದ ಚರ್ಚೆಯಲ್ಲಿ ಆಮದು ಮಾಡಿಕೊಳ್ಳಬೇಕೆಂದಿರುವ ಟೆಂಪ್ಲೇಟುಗಳ ಬಗ್ಗೆ ಚರ್ಚೆ ನಡೆಸಿ ಮತ್ತು ಇತರ ಸಂದೇಹಗಳ ಬಗ್ಗೆ ಚರ್ಚೆ ನಡೆಸಲು ಒಂದು ಐ-ಆರ್-ಸಿಯನ್ನು ಸಂಘಟಿಸುವುದು.
  • ಈ ತಿಂಗಳ ಕೊನೆಯ ವಾರದಲ್ಲಿ ಒಂದು ದಿನ ನಿರ್ಧರಿಸಿ ಸಮುದಾಯದವರೊಂದಿಗೆ ಒಂದು ಐ-ಆರ್-ಸಿಯನ್ನು ಸಂಘಟಿಸುವುದು.
  • ವಿಜ್ಞಾನ ಲೇಖನ ಯೋಜನೆಗಳಲ್ಲಿ ಬೇಕಾಗಿರುವ ಲೇಖನಗಳನ್ನು ತಯಾರಿಸುವುದು.
  • ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ೨೦೧೬-೧೭ರ ಅವಧಿಯಲ್ಲಿ ನಡೆದ ಶಿಕ್ಷಣ ಯೋಜನೆಯ ಬಗ್ಗೆ ವರದಿ.
  • ಪವನಜರ ಮೂಲಕ ಕನ್ನಡ ಸಂಸ್ಕೃತಿ ಇಲಾಖೆಯನ್ನು ಸಂಪರ್ಕಿಸುವುದು.
  • ಪವನಜರೊಂದಿಗೆ ಸೇರಿ ಮೈಸೂರು ಸಂಗೀತ, ನೃತ್ಯ ವಿಶ್ವವಿದ್ಯಾವಿದ್ಯಾನಿಲಯದವರೊಂದಿಗೆ ಚರ್ಚಿಸಿ ಕಾರ್ಯಾಗಾರ ನಡೆಸುವುದು
  • ತುಮಕೂರು ವಿಜ್ಞಾನ ಕೇಂದ್ರದವರೊಂದಿಗೆ ಚರ್ಚಿಸಿ ಅವರು ಒಪ್ಪಿದರೆ ಕಾರ್ಯಾಗಾರ ನಡೆಸುವುದು.
  • ವಿಕಿಸೋರ್ಸ್‍ನಲ್ಲಿ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದ ವರ್ಗಗಳ ತಯಾರಿಕೆ.
  • ಸಮ್ಮಿಲನ ಅಥವಾ ಐ-ಆರ್-ಸಿ ನಡೆಸುವುದು.

ಪ್ರಮುಖ ಕೆಲಸಗಳು[ಬದಲಾಯಿಸಿ]

  • ಸಮ್ಮಿಲನ ಅಥವಾ ಐ-ಆರ್-ಸಿ ನಡೆಸುವುದು.
  • ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಕಿಪೀಡಿಯದ ತರಬೇತಿ ಕಾರ್ಯಾಗಾರಗಳನ್ನು ನಡೆಸುವುದು.
  • ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ೨೦೧೬-೧೭ರ ಅವಧಿಯಲ್ಲಿ ನಡೆದ ಶಿಕ್ಷಣ ಯೋಜನೆಯ ಬಗ್ಗೆ ವರದಿ.
  • ನಿರ್ವಾಹಕರೊಂದಿಗೆ ಸಂಪರ್ಕ ಬೆಳೆಸಿ ಈಗಾಗಲೇ ನಡೆದ ಟೆಂಪ್ಲೇಟು, ಇನ್ಫೋಬಾಕ್ಸ್‌ಗಳ ರಚನೆಯ ಕಾರ್ಯಾಗಾರದಲ್ಲಿ ನಡೆದ ಚರ್ಚೆಯಲ್ಲಿ ಆಮದು ಮಾಡಿಕೊಳ್ಳಬೇಕೆಂದಿರುವ ಟೆಂಪ್ಲೇಟುಗಳ ಬಗ್ಗೆ ಚರ್ಚೆ ನಡೆಸಿ ಮತ್ತು ಇತರ ಸಂದೇಹಗಳ ಬಗ್ಗೆ ಚರ್ಚೆ ನಡೆಸಲು ಒಂದು ಐ-ಆರ್-ಸಿಯನ್ನು ಸಂಘಟಿಸುವುದು.
  • ವಿಕಿಸೋರ್ಸ್‍ನಲ್ಲಿ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದ ವರ್ಗಗಳ ತಯಾರಿಕೆ.
  • ಕಾಮನ್ಸ್‌ನಲ್ಲಿ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಮತ್ತು ಕರ್ನಾಟಕ ಸರ್ಕಾರ ಬಿಡುಗಡೆಗೊಳಿಸಿದ ಪುಸ್ತಕಗಳ ಪಟ್ಟಿಯ ಪರಿಶೀಲನೆ.

ಪ್ರಗತಿಯಲ್ಲಿರುವುದು[ಬದಲಾಯಿಸಿ]

  • ಸಮ್ಮಿಲನ ನಡೆಸುವುದರ ಬಗ್ಗೆ ಚರ್ಚೆಗಳನ್ನು ನಡೆಯುತ್ತಿದೆ.
  • ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕಾರ್ಯಾಗಾರದ ಬಗ್ಗೆ ಅಲ್ಲಿಯ ಆಸಕ್ತ ಸಂಯೋಜಕರೊಂದಿಗೆ ಚರ್ಚೆ ನಡೆಯುತ್ತಿದೆ.
  • ಕಾಮನ್ಸ್ ನಲ್ಲಿ ಇರುವ ಮೈಸೂರು ಮತ್ತು ಕರ್ನಾಟಕ ಸರ್ಕಾರ ಬಿಡುಗಡೆಗೊಳಿಸಿದ ಪಟ್ಟಿಯನ್ನು ಪರೀಕ್ಷಿಸಲಾಗುತ್ತಿದೆ.

ಸಮುದಾಯ ಸದಸ್ಯರು ಹೆಚ್ಚಿನ ಸಲಹೆಗಳಿದ್ದರೆ ಈ ಕೆಳಗೆ ಸೂಚಿಸಬಹುದು[ಬದಲಾಯಿಸಿ]


ಆಗಸ್ಟ್ ತಿಂಗಳ ವರದಿ[ಬದಲಾಯಿಸಿ]

  • ೨೮ ಆಗಸ್ಟ್ ೨೦೧೭ ರಂದು ರಾತ್ರಿ ೮:೩೦ಕ್ಕೆ ಟೆಂಪ್ಲೇಟು ಕಾರ್ಯಾಗಾರ ಉದ್ದೇಶಿಸಿ ಐ-ಆರ್-ಸಿಯನ್ನು ನಡೆಸಲಾಯಿತು.
  • ನಿರ್ವಾಹಕರೊಂದಿಗೆ ಸಂಪರ್ಕ ಬೆಳೆಸಿ ಸಮುದಾಯ ಸದಸ್ಯರು ಕೇಳಿಕೊಂಡ ಟೆಂಪ್ಲೇಟುಗಳನ್ನು ಆಮದು ಮಾಡಿಕೊಳ್ಳಲು ಕೇಳಿಕೊಂಡಿದ್ದೇನೆ.
  • ಕ್ರೈಸ್ಟ್ ವಿಶ್ವವಿದ್ಯಾನಿಲಯದ ವರದಿಯನ್ನು ಪೂರ್ಣಗೊಳಿಸಲು ಅನಂತನಿಗೆ ಸಹಾಯ ಮಾಡಿದ್ದೇನೆ. ಕ್ರೈಸ್ಟ್ ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳಿಗೆ ತರಬೇತು ನೀಡಲು ಒಂದು ದಿನ ಹೋಗಿದ್ದೇನೆ.
  • ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ೩೧ ಆಗಸ್ಟ್ ಮತ್ತು ೧ ಸೆಪ್ಟೆಂಬರ್‌ನಂದು ಕಾರ್ಯಾಗಾರ ನಡೆಸಲಾಯಿತು. ಇದು ವಿಕ್ಷನರಿಯನ್ನು ಕೇಂದ್ರೀಕರಿಸಿ ನಡೆಸಿದ ತರಬೇತು ಕಾರ್ಯಾಗಾರವಾಗಿತ್ತು.

ಸಪ್ಟೆಂಬರ್ ತಿಂಗಳಲ್ಲಿ ಮಾಡಬೇಕೆಂದಿರುವ ಕೆಲಸದ ಪಟ್ಟಿ[ಬದಲಾಯಿಸಿ]

  • ಕನ್ನಡ ವಿಶ್ವವಿದ್ಯಾಲಯ ಹಂಪಿಯ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿ ಇದ್ದುಕೊಂಡು ಅವರ ಸಮಸ್ಯೆಗಳನ್ನು ಪರಿಹರಿಸುವುದು.
  • ತುಮಕೂರು ವಿಶ್ವವಿದ್ಯಾಲಯದೊಂದಿಗೆ ಸಂಪರ್ಕ ಬೆಳೆಸಲು ಪ್ರಯತ್ನಿಸುವುದು.
  • ವಿಕಿಪೀಡಿಯದಲ್ಲಿ ಕಪ್ಪೆಗಳ ಬಗ್ಗೆ ಮಾಹಿತಿ ತುಂಬಾ ಕಡಿಮೆ ಇದೆ. ಈ ನಿಟ್ಟಿನಲ್ಲಿ Wiki Loves Frogs ಅನ್ನು ಪ್ರಾರಂಭಿಸುವುದು.
  • ಡಿಎಸ್‍ಇಆರ್‍ಟಿ ಯೋಜನೆಯನ್ನು ಮುಂದುವರಿಸುವುದು.
  • ಪುಸ್ತಕಗಳ ಮುಖಪುಟವನ್ನು ವಿಕಿಗೆ ತರುವುದು.
  • ಬೆಂಗಳೂರಿನಲ್ಲಿ ಸಮ್ಮಿಲನವನ್ನು ಏರ್ಪಡಿಸುವುದು.

ಸೆಪ್ಟೆಂಬರ್ ತಿಂಗಳ ವರದಿ[ಬದಲಾಯಿಸಿ]

ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಕಾರ್ಯಕ್ರಮಗಳು[ಬದಲಾಯಿಸಿ]

  • ಸೆಪ್ಟೆಂಬರ್ ತಿಂಗಳ ಮೊದಲನೆಯ ವಾರದಲ್ಲಿ ದಿನಾಂಕ ೨&೩ ರಂದು ಕರಾವಳಿ ವಿಕಿಮೀಡಿಯನ್ನರ ತುಳು ವಿಕಿಪೀಡಿಯ ವರ್ಷಾಚರಣೆಯ ಕಾರ್ಯಕ್ರಮದ ಸಂದರ್ಭದಲ್ಲಿ ಅಸಫ್ ಅವರು ನಡೆಸಿಕೊಟ್ಟ ಎರಡು ದಿನದ ವಿಕಿಡೇಟಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ.
  • ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಐಆರ್‌ಸಿ ಯನ್ನು ನಡೆಸಲಾಯಿತು.
  • ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವದ ಅಂಗವಾಗಿ ನಡೆಸಬೇಕೆಂದಿರುವುದರ ಸಂಪಾದನೋತ್ಸವದ ಬಗ್ಗೆ ಮತ್ತು ಕನ್ನಡ ವಿಕಿಪೀಡಿಯದ ಕೆಲಸದಲ್ಲಿ ಸಮುದಾಯನದೊಂದಿಗೆ ಕೈಜೋಡಿಸುವಂತೆ ಗುಲಬರ್ಗ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಲ್ಲಿ ಮಿಂಚಂಚೆ ಮೂಲಕ ಮನವಿ ಮಾಡಿಕೊಂಡಿದ್ದೇನೆ.

ವಿಫಲತೆಗಳು[ಬದಲಾಯಿಸಿ]

  • ಮುಖ್ಯವಾಗಿ ಸಪ್ಟೆಂಬರ್ ತಿಂಗಳಲ್ಲಿ ನಡೆಬೇಕೆಂದಿದ್ದ ಟೆಂಪ್ಲೇಟು ಕಾರ್ಯಾಗಾರದ ಮುಂದಿನ ಭಾಗ ಸಾಧ್ಯವಾಗಲಿಲ್ಲ. ಸಮುದಾಯ ಸದಸ್ಯರಲ್ಲಿ ಕೇಳಿಕೊಂಡಾಗ ಸಂಪನ್ಮೂಲ ವ್ಯಕ್ತಿಗಳು ಬದಲಾಗಬೇಕೆಂದು ಕೇಳಿಬಂತು. ಹಾಗಾಗಿ ಸಮುದಾಯದ ಬಳಿಯೇ ಸಂಪನ್ಮೂಲ ವ್ಯಕ್ತಿಗಳನ್ನು ಸೂಚಿಸಲು ಕೇಳಿಕೊಂಡೆವು. ನಂತರ ಸಂಪನ್ಮೂಲ ವ್ಯಕ್ತಿಗಳು ಹಿಂದಿನ ಬಾರಿಯವರೇ ಆಗಬಹುದು ಆದರೆ ಸಲಹೆಯಲ್ಲಿ ಸೂಚಿಸಿದ ವಿಷಯಗಳನ್ನು ಅಳವಡಿಸಿಕೊಂಡರೆ ಉತ್ತಮ ಎನ್ನುವ ವಿಚಾರ ಬಂತು.
  • ತುಮಕೂರು ವಿಜ್ಞಾನ ಕೇಂದ್ರವನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಏನೂ ಉತ್ತರ ಬಂದಿಲ್ಲ.
  • ಇನ್ನೂ ಹೆಚ್ಚಿನ ವಿಶ್ಯವಿದ್ಯಾಲಯಗಳಿಗೆ, ಸಂಸ್ಥೆಗಳಿಗೆ ಮಿಂಚಂಚೆ ಮೂಲಕ ಕನ್ನಡ ವಿಕಿಪೀಡಿಯದ ಕಾರ್ಯಕ್ರಮಗಳ ಬಗ್ಗೆ ತಿಳಿಸಿ, ಅವರು ವಿಕಿಮೀಡಿಯದ ಯೋಜನೆಗಳಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಳ್ಳುವುದರಲ್ಲಿ ಇನ್ನೂ ಹೆಚ್ಚಿನ ಶ್ರಮ ಬೇಕೆಂದು ನನ್ನ ಅಭಿಪ್ರಾಯ.
  • ಡಿಎಸ್‌ಸಿಆರ್‍ಟಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ನನ್ನಲ್ಲಿರುವ ದೂರವಾಣಿ ಸಂಖ್ಯೆ ಕೆಲಸ ಮಾಡಲಿಲ್ಲ.

ಅಕ್ಟೋಬರ್ ತಿಂಗಳಲ್ಲಿ ಮಾಡಬೇಕೆಂದಿರುವುದು[ಬದಲಾಯಿಸಿ]

  • ತುಮಕೂರು ವಿಜ್ಞಾನ ಕೇಂದ್ರದ ಭೇಟಿ.
  • ಡಿಎಸ್‌ಸಿ‌ಆರ್‌ಟಿಯಲ್ಲಿ ಸಂಬಂಧಪಟ್ಟವರ ಭೇಟಿ.
  • ಸಮುದಾಯ ಸದಸ್ಯರು ತಮಗೆ ಪರಿಚಯವಿರುವ ಕನ್ನಡದ ಬಗ್ಗೆ ಕಾಳಜಿ ಇದ್ದು ಕೆಲಸ ಮಾಡುವ ಯಾವುದೇ ಸಂಸ್ಥೆಯಲ್ಲಿ ಪರಿಚಯದವರು ಇದ್ದಲ್ಲಿ ಅವರ ಮಾಹಿತಿಯನ್ನು ನನ್ನಲ್ಲಿ ದಯವಿಟ್ಟು ಹಂಚಿಕೊಳ್ಳಬೇಕಾಗಿ ವಿನಂತಿ. ಅವರಿಗೆ ಮಿಂಚಂಚೆ ಮೂಲಕ ಸಂಪರ್ಕಿಸುವುದರಿಂದ ಮಾಹಿತಿ ತಿಳಿಸಿದ ಸದಸ್ಯರೊಂದಿಗೆ ಸೇರಿ ಮುಖತಃ ಭೇಟಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿದಲ್ಲಿ ಹೆಚ್ಚಿನ ಪ್ರಯೋಜನ ಎಂದು ನನ್ನ ಅನಿಸಿಕೆ.
  • ಹಂಪಿ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ನಿಘಂಟನ್ನು ಡಿಜಿಟಲೀಕರಣ ನಡೆಸಿದ್ದಾರೆ. ಕೆಲವರಿಗೆ ಯುನಿಕೋಡ್ ಸಮಸ್ಯೆ ಎದುರಾಗಿದೆ. ಅದನ್ನು ಬಗೆಹರಿಸಿ ಎಲ್ಲವನ್ನೂ ವಿಕ್ಷನರಿಗೆ ತರವುದು.
  • ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಸಬೇಕೆಂದಿರುವ ಸಂಪಾದನೋತ್ಸವದ ತಯಾರಿ.
  • ಗೋಕರ್ಣದ ಸ್ವಸ್ವರ ಎಂಬ ರೆಸಾರ್ಟಿಗೆ ಭೇಟಿನೀಡಿದ್ದಾಗ ಅವರು ವಿಕಿಪೀಡಿಯಕ್ಕೆ ನಾವೇನಾದರೂ ಸಹಾಯ ಮಾಡಬಹುದೇ ಎಂದು ಮುಂದೆ ಬಂದಿದ್ದರು. ಹೀಗಾಗಿ ಅವರ ಆವರಣದಲ್ಲಿ ಸಾಕಷ್ಟು ಸಸ್ಯ ಸಂಪತ್ತು ಇದೆ. ಅದರಲ್ಲಿ ಔಷಧೀಯ ಸಸ್ಯಗಳೂ ಸೇರಿವೆ. ಅವುಗಳ ಚಿತ್ರ, ಮತ್ತು ಮಾಹಿತಿಗಳನ್ನು ಸಂಗ್ರಹಿಸುವುದು. ಇದು ಔಷಧೀಯ ಸಸ್ಯಗಳ ಯೋಜನೆಗೆ ಸಹಕಾರಿ ಆಗುತ್ತದೆ. ಇದರ ಜೊತೆ ಇತರ ಸಸ್ಯ, ಪ್ರಾಣಿಗಳ ಬಗ್ಗೆಯೂ ಮಾಹಿತಿ ಸೇರಿಸುವುದು.


ಅಕ್ಟೋಬರ್ ತಿಂಗಳ ವರದಿ[ಬದಲಾಯಿಸಿ]

  • ಕಳೆದ ತಿಂಗಳಿನಲ್ಲಿ ವಿವಿಧ ವಿಶ್ವವಿದ್ಯಾಲಯಗಳಿಗೆ ಮತ್ತು ಸರಕಾರಿ ಸಂಸ್ಥೆಗಳಿಗೆ ಮತ್ತು ಅಧಿಕಾರಿಗಳಿಗೆ ಮಿಂಚಂಚೆಯನ್ನು ಕಳಿಸಿದ್ದೇನೆ. ಅವರಿಂದ ಯಾವುದೇ ಉತ್ತರ ಈ ವರೆಗೆ ಬಂದಿಲ್ಲ.
  • ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣಾ ಸಂಪಾದನೋತ್ಸವ 2017 ಮತ್ತು ವಿಕಿಪೀಡಿಯ ಏಷ್ಯನ್ ತಿಂಗಳು 2017ರನ್ನು ಸಂಘಟಿಸುತ್ತಿದ್ದೇನೆ.
  • ಈ ಪ್ರಯುಕ್ತ ಗುಬ್ಬಿ ಲ್ಯಾಬ್‌ ಅವರೊಂದಿಗೆ ಮಾತಾಡಿ ಅವರೂ ನಮ್ಮ ಜೊತೆ ಕೈಜೋಡಿಸುತ್ತಿದ್ದಾರೆ. ಗುಬ್ಬಿ ಲ್ಯಾಬ್‌ ಜೊತೆ ಸೇರಿ ಮೊದಲಿಗೆ ಕರ್ನಾಟಕದ ವನ್ಯಜೀವಿಗಳ ಬಗ್ಗೆ ಲೇಖನಗಳನ್ನು ಸೇರಿಸುವ ಯೋಜನೆ ಮತ್ತು ಅವುಗಳನ್ನು ವಿಕಿಡೇಟಾಕ್ಕೂ ಸೇರಿಸುವುದು ಎಂಬುವುದನ್ನು ನಿರ್ಧರಿಸಿದ್ದೇವೆ. ಇದಕ್ಕಾಗಿ ನವೆಂಬರ್ ತಿಂಗಳಿನಲ್ಲಿ ಒಂದು ಕಾರ್ಯಾಗಾರವನ್ನು ನಡೆಸುವುದು ಎಂದೂ ತೀರ್ಮಾನಿಸಿದ್ದೇವೆ. ಇದಕ್ಕಾಗಿ ದಿನಾಂಕವನ್ನು ನಿರ್ಧರಿಸಬೇಕಷ್ಟೇ.
  • ಪುಸ್ತಕಗಳ ಪರಿಚಯವನ್ನು ಕನ್ನಡ ವಿಕಿಪೀಡಿಯದಲ್ಲಿ ಪ್ರಾರಂಭಿಸಬೇಕೆಂಬುದು ನನ್ನ ಆಶಯ. ಇದಕ್ಕಾಗಿ ಮುನ್ನೋಟ, ಆಕೃತಿ ಮುಂತಾದ ಪುಸ್ತಕ ಮಳಿಗೆ, ಅಡಿಗ ಅಂಗಳ, ಋತುಮಾನಗಳ ಮುಖ್ಯಸ್ಥರ ಜೊತೆ ಮಾತನಾಡಿದ್ದೇನೆ. ಅವರು ಯೋಚನೆಯನ್ನು ಮೆಚ್ಚಿದ್ದಾರೆ. ಮುಂದಿನ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇನೆ.
  • ಮಂಗಳೂರಿನ ಮಹಾಲಸ ಕಲಾಶಾಲೆಯನ್ನು ಭೇಟಿನೀಡಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಬಗ್ಗೆ ಮಾಹಿತಿ ಪಡೆದುಕೊಂಡು, ಅಲ್ಲಿ ಭೇಟಿಮಾಡಬೇಕೆಂದಿರುವ ವ್ಯಕ್ತಿಗಳ ಮಾಹಿತಿ ಪಡೆದುಕೊಂಡೆ.

ನವೆಂಬರ್ ತಿಂಗಳ ಯೋಜನೆ[ಬದಲಾಯಿಸಿ]

  • ವಿಕಿಸೋರ್ಸ್‌ನಲ್ಲಿ ಸಾಕಷ್ಟು ಕೆಲಸಗಳು ಬಾಕಿ ಇವೆ. ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶಕ್ಕೆ ಅಕಾರಾದಿ ವರ್ಗೀಕರಣ ಆಗಬೇಕಿದೆ. ಈ ಕೆಲಸವನ್ನು ನವೆಂಬರ್ ತಿಂಗಳಿನಲ್ಲಿ ಮಾಡಬೇಕು. ಕಾಮನ್ಸ್‌ನಲ್ಲಿರುವ ಹೆಚ್ಚಿನ ಪುಸ್ತಕಗಳನ್ನು ವಿಕಿಸೋರ್ಸ್‌ಗೆ ಈಗಾಗಲೇ ಸೇರಿಸಲಾಗಿದೆ. ಮುಂದೆ ಕೆಲವು ಪುಸ್ತಕಗಳನ್ನು ಸೇರಿಸಬೇಕಿದೆ. ಅದಕ್ಕಿಂತ ಮೊದಲು ಇರುವ ಪುಸ್ತಕಗಳನ್ನು ಪೂರ್ಣಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ.
  • ವಿಕಿಡೇಟಾದಲ್ಲಿ ಭಾರತೀಯ ಮಟ್ಟದಲ್ಲಿ ಒಂದು ಯೋಜನೆ ಶುರುವಾಗಿದೆ. ಅದರಲ್ಲಿ ಈಗಾಗಲೇ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇನೆ. ಇದು ಅಸಫ್ ಅವರ ವಿಕಿಡೇಟಾ ಕಾರ್ಯಾಗಾರದ ನಂತರ ಪ್ರಾರಂಭವಾದ ಯೋಜನೆ. ಅದೇ ಯೋಜನೆಯನ್ನು ಕನ್ನಡ ವಿಕಿಪೀಡಿಯ ಸಮುದಾಯದ ಕಡೆಗೆ ಕೊಂಡುಹೋಗಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಒಂದು PPT ಯನ್ನು ಅಥವಾ ಕೈಪಿಡಿಯನ್ನು ಮಾಡಿ ಕನ್ನಡ ಸಮುದಾಯಕ್ಕೆ ಹಂಚಬೇಕೆಂದಿದ್ದೇನೆ.
  • ನವೆಂಬರ್ ತಿಂಗಳಿನಲ್ಲಿ ಸಮ್ಮಿಲನವನ್ನು ಏರ್ಪಡಿಸಬೇಕೆಂದಿದ್ದೇನೆ. ವಿಕಿಪೀಡಿಯ ಸಮುದಾಯದವರಾದ ವಿಕಾಸ್ ಹೆಗಡೆ ಮತ್ತು ಸಂಗಪ್ಪ ದ್ಯಾಮಣಿ ಅವರನ್ನು ಮಾತಾಡಿಸಿದ್ದಾಗ ಅಟೋ ವಿಕಿ ಬ್ರೌಸರ್ (AWB) ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ಉತ್ತಮ. ಈ ಬಗ್ಗೆ ಒಂದು ಕಾರ್ಯಾಗಾರವನ್ನು ಏರ್ಪಡಿಸಿ ಎಂದು ಕೇಳಿದ್ದಾರೆ. ಅದನ್ನು ಈ ತಿಂಗಳು ಮಾಡಬೇಕೆಂದಿದ್ದೇನೆ.
  • ಸರಕಾರಿ ಸಂಸ್ಥೆಗಳಾದ ಡಿ.ಎಸ್.ಸಿ.ಆರ್.ಟಿಗೆ ಭೇಟಿ ನೀಡಿ ಈಗಾಗಲೇ ಇರುವ ಯೋಜನೆಯನ್ನು ಪುನಃ ಪ್ರಾರಂಭಿಸಬೇಕು ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿಗಳಿಗೆ ಭೇಟಿನೀಡಿ ಅವರಲ್ಲಿ ವಿಕಿಪೀಡಿಯಕ್ಕೆ ಸಹಾಯ ಮಾಡುವಂತೆ ಕೇಳಿಕೊಳ್ಳಬೇಕು.

ನವೆಂಬರ್ ತಿಂಗಳ ವರದಿ[ಬದಲಾಯಿಸಿ]

  • ಕನ್ನಡ ಅಭಿವೃದ್ಧಿ ಪ್ರಾಧಿಕಾರ ಭೇಟಿ.
  • ಮುನ್ನೋಟದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ಭೇಟಿ ನೀಡಿ ಅಲ್ಲಿ ಸೇರಿದವರಲ್ಲಿ ವಿಕಿಪೀಡಿಯ ಬಗ್ಗೆ ಮಾಹಿತಿ ನೀಡಲು ಪ್ರಯತ್ನ.
  • ಗುಬ್ಬಿ ಸಂಶೋಧನಾಲಯ ಬೆಂಗಳೂರಿನಲ್ಲಿ ಕಾರ್ಯಾಗಾರ.

ಡಿಸೆಂಬರ್ ತಿಂಗಳ ಯೋಜನೆ[ಬದಲಾಯಿಸಿ]

  • ಮೈಸೂರಿನ ಸ್ವಾಮಿ ವಿವೇಕಾನಂತ ನಾಯಕತ್ವ ಅಭಿವೃದ್ಧಿ ಕಾಲೇಜಿನಲ್ಲಿ ಕಾರ್ಯಾಗಾರ.
  • ಉತ್ತರ ಕರ್ನಾಟಕದ ಕಾಲೇಜುಗಳೊಂದಿಗೆ ಮಿಂಚಂಚೆ ಮೂಲಕ ಸಂಪರ್ಕ ಸಾಧಿಸಲು ಪ್ರಯತ್ನ.
  • ಕನ್ನಡ ಅಭಿವೃಧ್ಧಿ ಪ್ರಾಧಿಕಾರ ಭೇಟಿ.

ಡಿಸೆಂಬರ್ ತಿಂಗಳ ವರದಿ[ಬದಲಾಯಿಸಿ]

ಜನವರಿ ತಿಂಗಳ ಯೋಜನೆ[ಬದಲಾಯಿಸಿ]

  • ಸಿ. ಆರ್. ಚಂದ್ರಶೇಖರರು ಪುಸ್ತಕಗಳನ್ನು ಸೇರಿಸುವುದು.
  • ಮೈಸೂರಿನಲ್ಲಿ ನಡೆಯುವ TTT-೨೦೧೮ ರಲ್ಲಿ ಪಾಲ್ಗೊಳ್ಳುವಿಕೆ.
  • ತುಮಕೂರಿನಲ್ಲಿ ಕಾರ್ಯಾಗಾರ.
  • ಬದುಕು ಮತ್ತು ವೈಟ್‌ಸ್ವಾನ್ ಫೌಂಡೇಶನ್‌ ಭೇಟಿ.

ಜನವರಿ ತಿಂಗಳ ಪ್ರಗತಿ[ಬದಲಾಯಿಸಿ]

  • ಸಿ. ಆರ್. ಚಂದ್ರಶೇಖರರು CC-BY-SA 4.0 ಅಡಿಯಲ್ಲಿ ಬಿಡುಗಡೆ ಗೊಳಿಸಿದ ಪುಸ್ತಕಗಳನ್ನು ಕೊಡುವಂತೆ ಪ್ರಕಾಶಕರಲ್ಲಿ ಮನವಿ ಮಾಡಿಕೊಂಡಿದ್ದೇನೆ.
  • TTT ಯಲ್ಲಿ ಪಾಲ್ಗೊಂಡು ಕನ್ನಡ ಸಮುದಾಯದ ಸಂಪಾದಕರೊಂದಿಗೆ ಚರ್ಚೆ, ಇತರ ಸಮುದಾಯದ ಸದಸ್ಯರೊಂದಿಗೆ ಕನ್ನಡ ಸಮುದಾಯ ಹೇಗೆ ಕೆಲಸ ಮಾಡಬಹುದು ಎಂಬುದನ್ನು ಚರ್ಚಿಸಿ ತಿಳಿದುಕೊಂಡೆ.

ಫೆಬ್ರವರಿ ತಿಂಗಳ ಕೆಲಸದ ಪಟ್ಟಿ[ಬದಲಾಯಿಸಿ]

ಮಾಡಬೇಕಾಗಿರುವ ಕೆಲಸಗಳು[ಬದಲಾಯಿಸಿ]

  • ಮೈಸೂರು ಕಾರ್ಯಾಗಾರ
  • ತುಮಕೂರು ಕಾರ್ಯಾಗಾರ
  • ಹುಬ್ಬಳ್ಳಿ ಕಾರ್ಯಾಗಾರ
  • ಒನ್-ಇಂಡಿಯಾ ಕಾರ್ಯಾಗಾರದಲ್ಲಿ ವಿಕಾಸರಿಗೆ ಸಹಾಯ
  • AWB ಕಾರ್ಯಾಗಾರದ ಬಗ್ಗೆ ಸಮುದಾಯ ಸದಸ್ಯರಲ್ಲಿ ಮಾತುಕತೆ
  • ವಿಕಿಸೋರ್ಸ್‌ನಲ್ಲಿ ಗ್ಯಾಜೆಟ್ಟುಗಳ ಅಳವಡಿಕೆ.

ನಡೆದ ಕೆಲಸಗಳು[ಬದಲಾಯಿಸಿ]

  • ಮೈಸೂರು ಕಾರ್ಯಾಗಾರ.
  • ತುಮಕೂರು ಕಾರ್ಯಾಗಾರದ ಮಾತುಕತೆ.
  • ಹುಬ್ಬಳ್ಳಿ ಕಾರ್ಯಾಗಾರದ ಮಾತುಕತೆ ನಡೆದಿದೆ. ಕಾರಣಾಂತರಗಳಿಂದ ಕಾರ್ಯಾಗಾರ ಸಾಧ್ಯವಾಗಲಿಲ್ಲ.
  • ಒನ್-ಇಂಡಿಯಾ ಕಾರ್ಯಾಗಾರ.
  • AWB, Tools ಕಾರ್ಯಾಗಾರದ ಬಗ್ಗೆ ಮಾತುಕತೆ ನಡೆದು ಕಾರ್ಯಾಗಾರ ನಡೆಸುವ ಬಗ್ಗೆ ತಯಾರಿ.
  • ಅಡ್ಮಿನ್ ಮತ್ತು ವಿಕಿಸೋರ್ಸ್ ಪರಿಣತರ ಸಹಾಯದಿಂದ ವಿಕಿಸೋರ್ಸ್‌ನಲ್ಲಿ ಗ್ಯಾಜೆಟ್ಟುಗಳ ಅಳವಡಿಕೆ.

ಮಾರ್ಚ್ ತಿಂಗಳ ಕೆಲಸಗಳು[ಬದಲಾಯಿಸಿ]

ಮಾಡಬೇಕಾಗಿರುವ ಕೆಲಸಗಳು[ಬದಲಾಯಿಸಿ]

  • AWB, Tools ಕಾರ್ಯಾಗಾರ.
  • ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಾಗಾರ. (ಜನಸ್ತು)
  • ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಾಗಾರದ ಮೂದಿನ ಕಾರ್ಯಕ್ರಮ.
  • ಹುಬ್ಬಳ್ಳಿ ಕಾರ್ಯಾಗಾರ/ಸಂಪಾದನೋತ್ಸವ.
  • ಸಿ. ಆರ್. ಚಂದ್ರಶೇಖರರ ಪುಸ್ತಕ ಸ್ಕ್ಯಾನಿಂಗ್/ಸಾಪ್ಟ್ ಕಾಪಿಯನ್ನು ಪಡೆದು ಅಪ್ಲೋಡ್.

ನಡೆದ ಕೆಲಸಗಳು[ಬದಲಾಯಿಸಿ]

  • AWB, Tools ಕಾರ್ಯಾಗಾರ
  • ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಾಗಾರ (ಜನಸ್ತುವಿನಲ್ಲಿ).