ಸದಸ್ಯ:Vinodhinisomu/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತ್ಯಾಗರಾಜ ದೇವಾಲಯ, ತಿರುವೊಟ್ಟಿಯುರ್[ಬದಲಾಯಿಸಿ]

ತ್ಯಾಗರಾಜ ದೇವಾಲಯ(ವದಿವು ಅಮ್ಮನ್ ದೇವಸ್ಥಾನ ಎಂದು ಕೂಡ ಕರೆಯಲ್ಪಡುತ್ತದೆ) ಹಿಂದು ದೇವಾಲಯವಾಗಿದ್ದು,ಇದು ಶಿವನಿಗೆ ಮೀಸಲಾಗಿದೆ. ಇದು ಭಾರತತಮಿಳುನಾಡಿನ ಚೆನೈನ ಉತ್ತರ ಭಾಗದಲ್ಲಿ ತಿರುವೊಟ್ಟಿಯುರ್'ನಲ್ಲಿದೆ. ದೇವಾಲಯದ ಶೈವ ನಯನರ್ಸ್'ಗಳನ್ನು ೭ನೇ ಶತಮಾನದ ತಮಿಳು ಸಂತ ಕವಿಗಳ ತೆವರಂ ಕೀರ್ತನೆಗಳನ್ನು ಪೂಜ್ಯ ಮತ್ತು ಪಾದಲ್ ಪೆಟ್ರಾ ಸ್ಥಳಕ್ಕೆ ವರ್ಗೀಕರಿಸಲಾಗಿದೆ. ದೇವಾಲಯವು ನಿಕಟವಾಗಿ ಸಂತ ಕವಿ ಸುಂದರರ್ ಮತ್ತು ಪತ್ತಿನತ್ಹರ್ ರವರ ಸಹಭಾಗಿತ್ವದಲ್ಲಿರುತ್ತದೆ. ದೇವಾಲಯವು ೭ನೇ ಶತಮಾನದ ಪಲ್ಲವರ ಕಾಲದಿಂದಲೂ ರೂಢಿಯಲ್ಲಿದೆ ಮತ್ತು ವ್ಯಾಪಕವಾಗಿ ೧೧ ನೆಯ ಶತಮಾನದಲ್ಲಿ ಚೋಳ ರಾಜರಿಂದ ವಿಸ್ತರಿಸಲಾಗಿದೆ. ದೇವಾಲಯದ ಏಳು ಶ್ರೇಣೀಕೃತ ಮಹಾದ್ವಾರ ಗೋಪುರ ಮತ್ತು ಒಂದು ಕೊಳವನ್ನು ಒಳಗೊಂಡ ದೇವಾಲಯವು ಒಟ್ಟಾರೆ ಒಂದು ಎಕರೆ ಪ್ರದೇಶವಾಗಿದೆ. ದೇವಾಲಯವು ಹಿಂದೂ ಧಾರ್ಮಿಕ ಮತ್ತು ತಮಿಳುನಾಡು ಸರ್ಕಾರದ ದತ್ತಿ ಮಂಡಳಿಯ ಆಡಳಿತದಲ್ಲಿರುತ್ತದೆ. ಈ ದೇವಾಲಯವು ತಿರುವಾರೂರುನಲ್ಲಿರುವ ತ್ಯಾಗರಾಜ ದೇವಾಲಯಕ್ಕೆ ಸಮಾನಾಂತರವಾಗಿದ್ದು ರಾಜೇಂದ್ರ ಚೋಳ ೧ ,ಅವರಿಂದ ವಿಸ್ತರಿಸಲ್ಪಟ್ಟಿದೆ ಹಾಗು ಎರಡೂ ದೇವಾಲಯಗಳಲ್ಲಿರುವ ಶಿವನ ಮೂರ್ತಿಗಳು ಒಂದೇ ತರಹದ ನೃತ್ಯ ಭಂಗಿಯಲ್ಲಿರುತ್ತದೆ.

ದಂತಕಥೆ[ಬದಲಾಯಿಸಿ]

ಹಿಂದೂ ಧರ್ಮದ ಪ್ರಾಥಮಿಕ ದೇವರುಗಳಲ್ಲಿ ಮೊದಲನೆಯವನು ಬ್ರಹ್ಮ ಸೃಷ್ಟಿಕರ್ತ, ಏರಡನೆಯವನು ವಿಷ್ಣು ಸೃಷ್ಟಿಯ ಸಂರಕ್ಷಕ, ಮೂರನೇಯವನು ಶಿವ ವಿಧ್ವಂಸಕ. ಬ್ರಹ್ಮ, ದೇವಾನು-ದೇವತೆಯರನ್ನು ಮತ್ತು ರಾಕ್ಷಸರನ್ನು ಸೃಷ್ಟಿಸಿದನು - ಈ ಎರಡೂ ಗುಂಪುಗಳು ಪರಸ್ಪರ ಹೋರಾಡಿದರು. ಅಸುರರು ಎಂದು ಕರೆಯಲ್ಪಡುವ ರಾಕ್ಷಸರು ಜನಶಕ್ತಿಯನ್ನು ಬಳಸಿದರೆ, ದೇವತೆಗಳು ಪವಿತ್ರ ಗ್ರಂಥಗಳನ್ನು ಹೊಂದಿರುವ ವೇದ ಶಕ್ತಿಯನ್ನು ಬಳಸಿದರು. ಒಮ್ಮೆ, ಮಧು ಮತ್ತು ಕೈಥಬ ಎಂಬ ರಾಕ್ಷಸರು, ವೇದವನ್ನು ಕದಿಯಲು ದೇವರನ್ನು ಮೋಸಗೊಳಿಸಿದರು ಹಾಗು ಅದನ್ನು ಕತ್ತರಿಸಿ ಅದರ ತುಣುಕುಗಳನ್ನು ಸಮುದ್ರದ ತಳದಲ್ಲಿ ಬಚ್ಚಿಟ್ಟಿದ್ದರು. ವಿಷ್ಣು ರಾಕ್ಷಸರೊಡನೆ ಹೋರಾಡಿದನು, ಆದರೆ ಅವರನ್ನು ಸೋಲಿಸಲು ಸಾಧ್ಯವಾಗದ ಕಾರಣ, ಅವನು ಶಿವ ಹಾಗು ಪಾರ್ವತಿ ದೇವಿಯಲ್ಲಿ ಪ್ರಾರ್ಥಿಸಿದನು ಹಾಗು ಅದರಲ್ಲಿ ಸಾಧಿಸಿ ರಾಕ್ಷಸರನ್ನು ಸೋಲಿಸಿದನು. ವಿಷ್ಣು ವೇದವನ್ನು ಹುಡುಕಲು ಮತ್ಸ್ಯ (ಮೀನಿನ) ರೂಪವನ್ನು ತಾಳಿದನು. ಸಮುದ್ರದ ತಳಭಾಗದಲ್ಲಿದ್ದ ವೇದವನ್ನು ಹುಡುಕಿ ತಂದು ಈ ದೇವಾಲಯದ ದೇವತೆಗೆ ಸಮರ್ಪಿಸಿದನು. ಆಕೆ ಇದನ್ನು ಮರುಜೋಡಣೆ ಮಾಡಿ ಶುದ್ಧೀಕರಿಸಿದಳು.ದೇವಾನು-ದೇವತೆಗಳಿಂದ ಸೃಷ್ಟಿಸಲ್ಪಟ್ಟ ಇದು, ವರ ನೀಡುವ ವೃಕ್ಷ, ಮಕಿಜ್ಹವೃಕ್ಷ ಈ ದೇವಾಲಯದ ಪೂಜ್ಯ ಮರವಾಗಿದೆ.

ಇತಿಹಾಸ[ಬದಲಾಯಿಸಿ]

ತ್ಯಾಗರಾಜ ದೇವಾಲಯವು ಕಲಿಕಾ ಕೇಂದ್ರವಾಗಿದ್ದು, ದೇವಾಲಯದ ಸಭಾಂಗಣವು ವ್ಯಾಕರಣ(ಅನುವಾದ), ಸೋಮಸಿದ್ದಾಂತ(ತತ್ವಶಾಸ್ತ್ರ) ಮತ್ತು ಪಾಣಿನಿಯ ವ್ಯಾಕರಣ ಗ್ರಂಥ ರೀತಿಯ ಧಾರ್ಮಿಕ ಪ್ರವಚನಗಳನ್ನು ನೀಡುವ ತಾಣವಾಗಿತ್ತು. ೯ನೇ ಶತಮಾನದ ಅವಧಿಯಲ್ಲಿ, ದೇವಾಲಯದ ಅಂಗಣದಲ್ಲಿ ಯತಿಗಳ ಆಶ್ರಮವಿದ್ದು, ಅದಕ್ಕೆ ಕಾತುರನನಸ್ ಪಂಡಿತ್ಹರ್ ಅಧ್ಯಕ್ಷತೆಯನ್ನು ವಹಿಸಿದರು. ದೇವಾಲಯವು ತಾತ್ವಿಕ ಪ್ರವಚನಗಳನ್ನು ಮತ್ತು ವ್ಯಾಕರಣದ ಮೇಲೆ ಪ್ರತಿಪಾದನೆಗಳನ್ನು ಹೊಂದಿತ್ತು.ಪ್ರಭಾಕರ, ರುದ್ರ, ಯಮಲ, ಪುರಾಣ, ಶಿವಧರ್ಮ, ಪಂಚಾಂಗ ಮತ್ತು ಭರತ ನಿರೂಪಣೆಯ ಉಲ್ಲೇಖಗಳಿವೆ. ಭೂಮಿಯನ್ನು ವಿದ್ವಾಂಸರಿಗೆ ಮತ್ತು ಅವರ ಪೀಳಿಗೆಗಳಾದ ವೆದವೃತ್ತಿ, ಭಟ್ತವೃತ್ತಿ , ವೈದ್ಯವೃತ್ತಿ ಮತ್ತು ಅರ್ಚನವೃತ್ತಿಗೆ ನೀಡಲಾಯಿತು.

ದೇವಾಲಯದ ಒಳಗೆ ಪಲ್ಲವ ಅವಧಿಯ ಕಾಲಮಾನದ ಹಲವಾರು ಶಾಸನಗಳಿದೆ.೮ನೇ ಶತಮಾನದಲ್ಲಿ ಹಿಂದೂ ಧರ್ಮದ ಅದ್ವೈತ ಶಾಲೆಯಲ್ಲಿ ವಿದ್ವಾಂಸರಾಗಿದ್ದ ಶಂಕರಾಚಾರ್ಯ ದೇವಾಲಯಕ್ಕೆ ಭೇಟಿ ನೀಡಿ, ದುಷ್ಟ ಶಕ್ತಿಯನ್ನು ಪತನ ಮಾಡಿದರು ಎಂದು ನಂಬಲಾಗಿದೆ. ದೇವಾಲಯವನ್ನು ಮೂಲತಃ ಪಲ್ಲವರು ನಿರ್ಮಿಸಿದರು ನಂತರ ರಾಜೇಂದ್ರ ಚೋಳ ೧ ಮರುನಿರ್ಮಾಣ ಮಾಡಿದನು. ೧೦೪೬ ಇಸುವಿಯ ಕಾಲಾವಧಿಯಲ್ಲಿ, ದೇವಾಲಯದಲ್ಲಿ ೬೪ ಕಂಚಿನ ನಾಯನ್ಮಾರ್ ಪ್ರತಿಮೆಗಳನ್ನು ಸ್ಥಾಪಿಸಲಾಗಿತ್ತೆಂದು ಶಾಸನಗಳಲ್ಲಿ ಬಹಿರಂಗ ಮಾಡಲಾಗಿದೆ. ದೇವಾಲಯದಲ್ಲಿ ಸಮಾನ ಸಂಖ್ಯೆಯಲ್ಲಿದ್ದ, ನರ್ತಿಸುವ ಕನ್ಯೆಯರನ್ನು ದೇವದಾಸಿಗಳೆಂದು ಕರೆಯಲಾಗಿತ್ತು. ಈ ದೇವದಾಸಿಯರನ್ನು ಎರಡು ಗುಂಪುಗಳಾಗಿ ವಿಭಾಗಿಸಲಾಗಿತ್ತು. 'ವಾಲಂಕೈ' ದೇವದಾಸಿಯರು ತ್ಯಾಗರಾಜರಿಗೆ ನೃತ್ಯ ಮಾಡಿದರು, ಹಾಗೆಯೇ 'ಇದಂಗೈ' ದಾಸಿಯರು ವಡಿವುದೈ ಅಮ್ಮಾನವರಿಗೆ ನೃತ್ಯ ಮಾಡಿದರು.ಮಲಿಕ್ ಕಾಫರ್ ಆಳ್ವಿಕೆಯ ಅವಧಿಯಲ್ಲಿ, ದೇವಾಲಯದ ಹೆಚ್ಚು ಭಾಗವು ನಾಶಮಾಡಲಾಗಿತ್ತು ಮತ್ತು ದೇವಾಲಯದಲ್ಲಿ ಈಗ ಪ್ರಸ್ತುತವಿರುವ ಕಂಚಿನ ವಿಗ್ರಹಗಳು ೧೫ನೇ ಶತಮಾನದ ವಿಜಯನಗರ ಅವಧಿಯಲ್ಲಿ ಅಳವಡಿಸಲಾಯಿತು. ೧೩ನೇ ಶತಮಾನದ ಶಾಸನದಲ್ಲಿ ದೇವತೆಗಳಿಗೆ ಪ್ರಾಣಿ ಬಲಿದಾನದ ಪದ್ಧತಿಯ ಜೊತೆಗೆ ೨೦೦೦ ದ ಅವಧಿಯವರೆಗೆ ಅಮಲೇರಿಸುವ ಪಾನೀಯ ನೀಡುವುದು ರೂಢಿಯಲ್ಲಿತ್ತು.ಪ್ರಸಿದ್ಧ ಸಂತರಾದ ಪತ್ತಿನಾಥರ್ , ತೋಪೆಸ್ವಾಮಿಯರು ಮತ್ತು ರಾಮಲಿಂಗ ಸ್ವಾಮಿಗಳು ಈ ಪಟ್ಟಣದಲ್ಲಿ ವಾಸಿಸುತ್ತಿದ್ದರು ಹಾಗು ಈ ದೇವಾಲಯದಲ್ಲಿ ತ್ಯಾಗರಾಜರನನ್ನು ಪ್ರಾರ್ಥಸುತ್ತಿದ್ದರು .ಕರ್ನಾಟಕ ಸಂಗೀತ ಸಂಯೋಜಕ ಹಾಗು ಕವಿಯಾಗಿದ್ದ, ತಿರುವೊಟ್ಟಿಯೂರ್ ತ್ಯಾಗಯ್ಯರ್ ಇಲ್ಲಿ ನೆಲೆಸಿದ್ದರು.

ದೇವಸ್ಥಾನ[ಬದಲಾಯಿಸಿ]

ಪ್ರಧಾನ ದೇವರಾಗಿ ಆಧಿಪುರೇಶ್ವರರ್, ಮಣ್ಣಿನ ದಿಬ್ಬದ ಒಂದು ರಕ್ಷಾಕವಚ ಆವರಿಸಿದ ರೂಪದಲ್ಲಿರುತ್ತಾರೆ. ತಮಿಳು ತಿಂಗಳಿನ ಕಾರ್ಥಿಗೈ ಹುಣ್ಣಿಮೆಯ ದಿನದಂದು, ರಕ್ಷಾಕವಚವನ್ನು ತೆಗೆಯಲಾಗಿದೆ ಮತ್ತು ದೇವರು ಪ್ರಾತಿನಿಧ್ಯ ಭಕ್ತರಿಗೆ ಗೋಚರಿಸುತ್ತಾರೆ. ದೇವರಿಗೆ ಪುನುಗು , ಜವ್ವಧು ಮತ್ತು ಸಂಪಿರಾಣಿ ತೈಲಗಳಿಂದ ಅಭಿಷೇಕ ಮಾಡಲಾಗುತ್ತದೆ. ದೇವಾಲಯದ ಉತ್ತರ ಭಾಗದಲ್ಲಿ ಒಂದು ದುರ್ಗಾ ದೇಗುಲವಿದೆ. ಮುಖ್ಯ ದೇವಾಲಯ ಕಟ್ಟಡ ಸಂಕೀರ್ಣದ ಒಳಗಡೆ - ಮುಖ್ಯ ಮಂದಿರದ ಅಭಿಮುಖ ನಟರಾಜ ದೇವಾಲಯ ಮತ್ತು ಕೋಷ್ಠರಲ್ಲಿ ಗಣಪತಿ ದೇವಾಲಯವಿದೆ. ಗಣಪತಿ ದೇವರನ್ನು ಗುಣಾಲಯ ಗಣಪತಿ (ಆನಂದ ವಾಸಸ್ಥಾನಕ್ಕೆ) ಎಂದು ಕರೆಯಲಾಗುತ್ತದೆ ಮತ್ತು ನಾವು ದೇವಾಲಯದ ಸುತ್ತಲು ಆದಿ ಶಂಕರ ವಿಗ್ರಹದ ಒಳಗೆ ಮುಖ್ಯ ಗುಡಿಯ ಹಿಂದೆ ನೋಡಬಹುದು.ಸುಬ್ರಹ್ಮಣ್ಯ ಸ್ವಾಮಿಯ ಮತ್ತು ಅವರ ಹಾಗೆ ಅನ್ಯ ದೇವತೆಗಳು ದೇವಾಲಯದಲ್ಲಿ ಸ್ಥಾಪಿಸಲಾಗಿದೆ.

ದಕ್ಷಿಣಾಮೂರ್ತಿ ಪ್ರತಿಮೆಯು ದಕ್ಷಿಣ ಕೋಷ್ಠದ ಕಡೆಯಿದ್ದು, ಉತ್ತರ ದೆಸೆಯನ್ನು ಎದುರಿಸುತ್ತಿದೆ ಮತ್ತು ನಾವು ಕಾಳಿಯ ದೇವಾಲಯವನ್ನು ಉಪ ಸಂಕೀರ್ಣದಲ್ಲಿ ದರ್ಶನ ಮಾಡಬಹುದು. ಆದಿ ಶಂಕರ, ದೇವಿಯನ್ನು ಶಾಂತಗೊಳಿಸಲು ಮತ್ತು ಅವಳನ್ನು ಸೌಮ್ಯ ರೂಪಿ ( ಕಾಮ್ ಮತ್ತು ಮೆಲ್ಲೋಟ್ರೋನ್ನಲ್ಲಿ ) ಯಾಗಿ ಮಾಡಲು ಒಂದು ಚಕ್ರವನ್ನು ದೇವಾಲಯದಲ್ಲಿ ಅನುಸ್ಥಾಪಿಸಿದ್ದಾರೆ ಎಂದು ಹೇಳಲಾಗುತ್ತದೆ. ಈ ದಿನ - ನಂಪೂತಿರಿ ಕುಟುಂಬದವರು ಒಂದು ಆಯ್ದ ಗುಂಪನ್ನು, ಆದಿ ಶಂಕರಾಚಾರ್ಯರು ಬಯಸಿದ ಹಾಗೇ ಈ ಸ್ವಾಮಿಗೆ ಪೂಜೆ ಮತ್ತು ಆರಾಧನೆಯನ್ನು ನಿರ್ವಹಿಸಲಾಗುತ್ತದೆ. ಈ ದೇವಸ್ಥಾನದಲ್ಲಿ ದೇವತೆಯ ಹೆಸರು 'ವಡಿವುದೈ ಅಮ್ಮಾನ್' ಉಪನಾಮ ತ್ರಿಪುರಸುಂದರಿ ಆಗಿದೆ. ದೇವತೆಯು ದೇವಾಲಯದ ಕಟ್ಟಡ ಸಂಕೀರ್ಣದ ಒಳಗಡೆ ಪ್ರತ್ಯೇಕ ದೇವಾಲಯದಲ್ಲಿ ಒಳಪಡಿಸಿಕೊಳ್ಳಲಾಗಿದೆ. ದೇವಾಲಯದಲ್ಲಿ ಇರುವ ಇತರ ದೇವತೆಗಳಲ್ಲಿ ತಿರುಪತೀಶ್ವರರ್, ಕುಜ್ಹಂಧೈ ಈಸರ್, ಜಗಣಧರ್ , ಅನ್ನಮಲಯಾರ್ , ಜಂಬುಕೇಶ್ವರರ್ , ನಾಗಲಿಂಗರ್ , ಮೀನಾಕ್ಷಿ , ಸುಂದರೇಶ್ವರರ್ , ಸಾಗಸ್ರಲಿಂಗಮ್ , ಅಮಿರಥಕಂಡೀಶರ್ , ಗೌರಿಈಶ್ವರರ್ , ಮತ್ತು ಏಕಪಾಧರ್ ಸೇರಿವೆ.

ತ್ಯಾಗರಾಜ ಆರಾಧನಾ-ಪದ್ಧತಿ[ಬದಲಾಯಿಸಿ]

ದೇವಸ್ಥಾನದ ಮುಖ್ಯ ದೇವತೆ ಆದಿಪುರೀಶ್ವರರ್'ಯಾದರೆ, ದೇವಾಲಯವು ನಿಕಟವಾಗಿ ಶೈವ ಧರ್ಮದ ತ್ಯಾಗರಾಜ ಆರಾಧನೆಗೆ ಸಂಬಂಧಿಸಿದೆ. ಸೋಮಸ್ಕಂದ ತ್ಯಾಗರಾಜ ಪ್ರತಿಮಾರೂಪದ ರೂಪ ಮತ್ತು ೧೦ನೇ ಶತಮಾನದ ಅವಧಿಯಲ್ಲಿ ಕಾಕತಾಳೀಯವಾಗಿ ರಾಜಾ ರಾಜಾ ಚೋಳರಿಂದ ಹುಟ್ಟಿಗೆ ಕಾರಣವಾಯಿತು ಎಂದು ನಂಬಲಾಗಿದೆ. ೮ನೇ ಶತಮಾನದ ಸಂತರಾದ ಸುಂದರರ್ ತ್ಯಾಗರಾಜ ಆರಾಧನಾ-ಪದ್ಧತಿಯನ್ನು ತಿರುವಾರೂರುರಿಂದ ದೇವಸ್ಥಾನದವರೆಗೆ ಹರಡಿದ್ದರು ಎಂದು ನಂಬಲಾಗಿದೆ. ದೇವರು ಆತನಿಂದ ತಿರುವೊಟ್ಟಿಯುರ್ ಬಿಟ್ಟು ಹೋಗಬಾರದೆಂದು ಮೋಸಗೊಳಿಸಿ ಅವನಿಂದ ಭಾಷೆ ತೆಗೆದುಕೊಂಡರು, ಆದರೆ ಅವರು ನೀಡಿದ ಭಾಷೆಯನ್ನು ಅನುಸರಿಸಲಿಲ್ಲ. ಇದರಿಂದ ಅವರು ಕುರುಡರಾದರು. ತಿರುವೊಟ್ಟಿಯುರ್ ಮತ್ತು ತಿರುವಾರೂರ ದೇವಸ್ಥಾನದ ದೇವರು ಧಾರ್ಮಿಕ ವ್ಯವಹಾರ ಕೌಶಲ ವಿಷಯದಲ್ಲಿ ಒಂದೇ,ಆದರೆ ಯಾತ್ರಿ ಸಂಪ್ರದಾಯದ ಪ್ರಕಾರ,ಸುಂದರರ್ ತಿರುವೊಟ್ಟಿಯುರನ್ನು ಪರಿತ್ಯಜಿಸಿ ತಿರುವಾರೂರಿಗೆ ತೆರಳಿದರು. ಇದರಿಂದ ತಿರುವೊಟ್ಟಿಯೂರಿಗೆ ಅವಹೇಳನವಾಯಿತು. ಈ ಪ್ರಸಂಗವನ್ನು ದೇವಾಲಯದಲ್ಲಿ ಪ್ರತಿ ವರ್ಷ ಆಚರಿಸಲಾಗುತ್ತದೆ.

ತ್ಯಾಗರಾಜರ ಏಳು ನೃತ್ಯ ರೂಪಗಳಾದ, ಸಪ್ತವಿತಾನ್ಕಮ್, ತ್ಯಾಗರಾಜರ್ ದೇವಾಲಯ ಒಳಗೊಂಡ ಶ್ರೇಣಿಗಳು ಧಾರ್ಮಿಕ ಪಂಥದ ಸರಣಿಯಲ್ಲಿ ಪ್ರತಿನಿಧಿಸಲಾಗುತ್ತದೆ. ತಿರುವಾರೂರ್'ನಲ್ಲಿ, ತಿರುನಲ್ಲರ್'ರಲ್ಲಿ ಧರ್ಬಾರಣ್ಯೇಶ್ವರರ್ ದೇವಾಲಯ,ನಾಗಪಟ್ಟಣದಲ್ಲಿ ಕಾಯರೋಹಣಸ್ವಾಮಿ ದೇವಾಲಯ,ತಿರುಕರಯಿಲ್'ರಲ್ಲಿ ಕನ್ನಯರಿಯಮುದಾಯರ್ ದೇವಾಲಯ, ತಿರುಕ್ಕುವಲೈ'ರಲ್ಲಿ ಬ್ರಹ್ಮಪುರೇಶ್ವರರ್ ದೇವಾಲಯ, ತಿರುವೈಮುರ್'ರಲ್ಲಿ ವೈಮೂರ್ನಾಥರ್ ದೇವಾಲಯ ಮತ್ತು ವೇದಾರಣ್ಯಂ'ನಲ್ಲಿ ವೇದರಾಣ್ಯೇಶ್ವರರ್ ದೇವಾಲಯ. ತಿರುವೊಟ್ಟಿಯೂರ್ ದೇವಸ್ಥಾನ, ತಿರುವಣ್ಮೈಯುರ್'ರಲ್ಲಿ ಮರುಂದೀಶ್ವರರ್ ದೇವಾಲಯ ಒಳಗೊಂಡ ಹೋಲುವ ಜಾಲದ ಕೇಂದ್ರದಲ್ಲಿ ಇರಿಸಲಾಗಿದೆ. ಅಚ್ಚಲಪುರಂ ಸಿಂಗಪೆರುಮಾಳ್ಕೊಯ್ಲ್ ಬಳಿ ಸಿರ್ಕಳಿ ಮತ್ತು ತಿರುಕಚೂರ್'ರಲ್ಲಿ ತಿರುವಾರೂರು ಪುರಾಣಕ್ಕೆ ಸಮೀಪವಿರುವ ಚಿಕಿತ್ಸೆಯಾಗಿದೆ. ತಿರುವಾರೂರು ಮತ್ತು ತಿರುವೋತ್ತ್ರಿಯೂರ್ ದೇವಾಲಯಗಳು ಶಿವನ ಒಂದೇ ರೀತಿಯ ನೃತ್ಯ ಭಂಗಿಯನ್ನು ಹೊಂದಿವೆ ಎಂದು ತಿರುವೋರ್ರಿಯುರ್ಪುರಣಂ ಪ್ರತಿಪಾದಿಸಿದೆ. ದೇವಾಲಯದ ನೃತ್ಯ ಮಾದರಿ ಪದಮನತನಮ್ ಎಂದು ಕರೆಯಲಾಗುತ್ತದೆ. ತಿರುವಾರೂರು ದೇವಾಲಯದ ನಿಲ್ಲದಿಕೆ - ವಿಷ್ಣು ರೊಚ್ಚಿಗೆದ್ದು ಹೋಗಿದ್ದರು ಮತ್ತು ತಿರುವಾರೂರಿನಲ್ಲಿ ನಡೆದ ನೃತ್ಯವನ್ನು ತಪ್ಪಿಸಿಕೊಂಡರು ಮತ್ತು ತ್ಯಾಗರಾಜರು ಅವರನ್ನು ತಿರುವೋತ್ತ್ರಿಯೂರಿಗೆ ಹೋಗಿ ಅದೇ ನೃತ್ಯವನ್ನು ನಿರ್ವಹಿಸುತ್ತಾರೆ ಎಂದು ಭರವಸೆ ನೀಡಿದರು.

ಉತ್ಸವ[ಬದಲಾಯಿಸಿ]

ಪ್ರಧಾನ ಹಬ್ಬದ ತಮಿಳು ತಿಂಗಳ ಪ್ರದರ್ಶನ ಮಾಸಿ (ಫೆಬ್ರವರಿ ಮಾರ್ಚ್ ) ಮತ್ತು ಐತಿಹಾಸಿಕವಾಗಿ ದೊಡ್ಡ ಗುಂಪು ಸೆಳೆಯುತ್ತದೆ. ಎಂಟನೇ ದಿನದಂದು, ಮಹಿಳಾದಿಸೇವೈ ಎಂಬ ಹೆಚ್ಚುವರಿ ಕಾರ್ಯವನ್ನು ನಡೆಸಲಾಗುತ್ತದೆ.ದೇವಾಲಯದ ಉತ್ತರ ಭಾಗದಲ್ಲಿ ದುರ್ಗಾ ದೇವಿ ದೇವಾಲಯವು ಕಣ್ಣಾಗಿ ಸಂಬಂಧಿಸಿದೆ, ಸಿಲಪ್ಪದಿಕಾರಂ ಅನುಯಾಯಿ , ಎಂಬ ೨ನೇ ಶತಮಾನದ ತಮಿಳು ಮಹಾಕಾವ್ಯವಾಗಿದೆ.ಪ್ರತಿ ವರ್ಷ ೧೫ ದಿನಗಳ ಹಬ್ಬವು ದುರ್ಗಾ ದೇವಿಯ ಗೌರವಾರ್ಥಕ್ಕೆ ಆಚರಿಸಲಾಗುತ್ತದೆ. ಹಬ್ಬದ ಕೊನೆ ದಿನದಂದು , ಹುಲ್ಲಿನ ಛಾವಣಿಯನ್ನು ಸುಟ್ಟು ಅದನ್ನು ಕಣ್ಣಾಗಿ ಮಧುರೈಯನ್ನು ಸುಡುವ ಮಹಾಕಾವ್ಯದ ಘಟನೆಯನ್ನು ಕೊನೆಯಲ್ಲಿ ಸಂಕೇತಿಸಿದ್ದಾರೆ.

ದೇವಾಲಯದ ಆಡಳಿತ[ಬದಲಾಯಿಸಿ]

೧೭೮೬ - ೧೮೩೧ ಇಸುವಿಯ ಸಮಯದಲ್ಲಿ ಶ್ರೀಮಂತ ವರ್ತಕರನು ದೇವಾಲಯದ ಮುಖ್ಯ ನಿರ್ವಾಹಕರಾಗಿ ಕಚೇರಿಯನ್ನು ದಯಪಾಲಿಸಲು ಬ್ರಿಟಿಷ್ ಆಡಳಿತಗಾರರ ವಾಡಿಕೆಯಾಗಿತ್ತು. ಸಂಪ್ರದಾಯವನ್ನು ನಿರ್ಮಿಸಿದ ನಂತರ, ಲಿಂಗಿ ಚೆಟ್ಟಿ ೧೭೫೪ ಇಸುವಿಯಲ್ಲಿ ಮುಖ್ಯಸ್ಥರಾದರು ಮತ್ತು ಅವರ ಸಾವಿನ ನಂತರ, ಅವರ ಕುಟುಂಬ ಈ ಪದವಿಯನ್ನು ಆನುವಂಶಿಸಿದ್ದರು. ಬಲಗೈ ಜಾತಿ ಜನರು, ಎಡಗೈ ಜಾತಿಯ ಜನರಿಂದ ಪದವಿಯನ್ನು ಆನುವಂಶಿಸಿದ್ದರಿಂದ ಅವರಿಗೆ ಹೆಚ್ಚು ಸಿಟ್ಟಿಗೆದ್ದರು. ಆಗಸ್ಟ್ ೧೭೮೬ ರಲ್ಲಿ ಎಡಗೈ ಜಾತಿಯ ಜನರು ಬಲಗೈ ಜಾತಿಯ ಜನರನ್ನು ಆರೋಪಿಸಿ ಅರ್ಜಿಯೊಂದನ್ನು ಗವರ್ನರ್ ಮತ್ತು ಫೋರ್ಟಿನ ಸಂತ ಜಾರ್ಜ್ ಮಂಡಳಿಯಲ್ಲಿ ಇಂಗ್ಲೀಷ್ ಆಡಳಿತವು ಪಾರಾಗಿ ,ಎರಡೂ ಆಯಾ ಪದ್ಧತಿಗಳ ಪ್ರಕಾರ ಸಮಾರಂಭಗಳನ್ನು ಸ್ವಾತಂತ್ರ್ಯವಾಗಿ ನಿರ್ವಹಿಸಲೆಂದು ತೀರ್ಮಾನ ನೀಡಿದರು. ಇವರ ಆದೇಶವನ್ನು ಎದುರಿಸಿದರೆ ಅಪರಾಧಿ ಹಾಗು ಅಪರಾಧಿಯ ಜಾತಿಯ ಮುಖ್ಯಸ್ಥರು ಜವಾಬ್ದಾರಿ ಎಂದು ಘೋಷಿಸಲಾಯಿತು. ಎಡಗೈ ಜಾತಿಯವರು ಆದೇಶವನ್ನು ಪಾಲಿಸಿದರು,ಆದರೆ ಬಲಗೈ ಜಾತಿಯವರ ಪದ್ಧತಿಯನ್ನು ನಿಲ್ಲಿಸಿದರು. ಎರಡೂ ಜಾತಿಯ ಪಕ್ಷಗಳಲ್ಲಿ ಎಡೆಬಿಟ್ಟು ನಡೆಯುವ ಘರ್ಷಣೆಯಿಂದ ಒಮ್ಮೆ ರಕ್ಷಣೆ ಒಳಗೊಂಡಿರುವ ಸಿಪಾಯಿಗಳನ್ನು ಆಕ್ರಮಣ ಮಾಡಲಾಯಿತು. ೧೮೨೮ರಲ್ಲಿ ಪ್ರಧಾನ ಅರ್ಚಕರು ಮುಖ್ಯ ಆಡಳಿತಾಧಿಕಾರಿಯರನ್ನು ದೂರಿದರು, ಆಗ ಮತ್ತೊಮ್ಮೆ ಒಪ್ಪಂದ ಮುರಿದು ಬಿದ್ದಿತ್ತು. ೧೮೩೧ರಲ್ಲಿ ಮುಖ್ಯ ಆಡಳಿತಾಧಿಕಾರಿಗಳ ಮೇಲೆ ದೂರು ದಾಖಲಿಸಲಾಯಿತು, ಆ ದೂರಿನಲ್ಲಿ ಅವರು ನರ್ತಕಿಯರಿಗೆ ಹಣಪಾವತಿಸದೆಯಿರುವುದರಿಂದ ಅವರನ್ನು ತಕ್ಶಣ ವರ್ಜಿಗೊಳಿಸಲಾಯಿತು. ತಕ್ಷಣ ನರ್ತಕಿಯರನ್ನು ದೇವಾಲಯದಿಂದ ಹೊರಗೆ ಹಾಕಲಾಗಿತು. ನಂತರ ಜಿಲ್ಲಾಧಿಕಾರಿಗಳು ನರ್ತಕಿಯರ ವಿರುದ್ಧ ಕ್ರಮ ಕೈಗೊಂಡು ಹಾಗು ಎಡಪಂಥೀಯರಾದ ಅರುಣಾಚಲ ಚೆಟ್ಟಿಯವರೇ ಇದರ ಮೇಲುಸ್ತುವಾರಿಗಳು ಎಂದು ತೀರ್ಮಾನಿಸಲಾಯಿತು. ಬಲಪಂಥದವರಿಂದ ಈ ವಿಷಯದ ಕುರಿತಾಗಿ, ಬಲವಾದ ಕಾರಣ ಸಿಗುವ ತನಕ, ಯಾವ ದೂರನ್ನು ಸ್ವೀಕರಿಸದಿರಲು ತೀರ್ಮಾನಿಸಿದರು. ಇದರಿಂದ ಬಲಪಂಥೀಯವರು ಸಾಂಪ್ರದಾಯಕವಾಗಿ ಹೊರನಡೆದರು.

ಉಲ್ಲೇಖನಗಳು[ಬದಲಾಯಿಸಿ]