ಕುಣಿಗಲ್ ರಾಮನಾಥ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕುಣಿಗಲ್ ರಾಮನಾಥ್
ಜನನಡಿಸೆಂಬರ್ 1932
ಮರಣಫೆಬ್ರವರಿ 1, 2016
ಅಂತ್ಯ ಸಂಸ್ಕಾರ ಸ್ಥಳಬ್ರಾಹ್ಮಣ ರುದ್ರಭೂಮಿ, ಕುಣಿಗಲ್‍
ವೃತ್ತಿಚಿತ್ರನಟ
ರಾಷ್ಟ್ರೀಯತೆಭಾರತೀಯ

ಕನ್ನಡ ಚಿತ್ರನಟ ಕುಣಿಗಲ್‍ ರಾಮನಾಥ್ ಅವರು ಕುಣಿಗಲ್‍ನವರು. ಅವರು ಡಾ. ರಾಜ್‍ಕುಮಾರ್ ಅವರಿಗೆ ಪರಮಾಪ್ತರಾಗಿದ್ದರು[೧]. ಅವರು ಕುಣಿಗಲ್‍ನಲ್ಲಿರುವ ದುರ್ಗಾಭವನ್ ಲಾಡ್ಜ್‍ನ ಮಾಲೀಕರು.

ಜನನ[ಬದಲಾಯಿಸಿ]

ಕುಣಿಗಲ್‍ ರಾಮನಾಥ್ ಅವರು 1932ರ ಡಿಸೆಂಬರ್‍ನಲ್ಲಿ ಕೃಷ್ಣರಾವ್ ಹಾಗೂ ರಮಾಬಾಯಿ ದಂಪತಿಗಳ ಮಗನಾಗಿ ಜನಿಸಿದರು.

ಶಿಕ್ಷಣ[ಬದಲಾಯಿಸಿ]

ಆಂಧ್ರಪ್ರದೇಶದ ಕಡಪಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು.

ಸಾಂಸಾರಿಕ ಜೀವನ[ಬದಲಾಯಿಸಿ]

ಕುಣಿಗಲ್‍ ರಾಮನಾಥ್ ಅವರು 19ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು.

ಸೇವೆ[ಬದಲಾಯಿಸಿ]

ಕುಣಿಗಲ್‍ ರಾಮನಾಥ್ ಅವರು 'ಸಂಪತ್ತಿಗೆ ಸವಾಲ್', 'ಹಾವಿನ ಹೆಡೆ', 'ಚಲಿಸುವ ಮೋಡಗಳು', 'ಸಮ್ಮಿಲನ', 'ತೂಗುವೆ ಕೃಷ್ಣನ', 'ಅನುರಾಗದ ಅಲೆಗಳು', 'ಪ್ರಾಣಸ್ನೇಹಿತ', 'ಸಪ್ತಪದಿ', 'ಕಿತ್ತೂರಿನ ಹುಲಿ' ಮುಂತಾದ ಸುಮಾರು 220ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಿಧನ[ಬದಲಾಯಿಸಿ]

ಕುಣಿಗಲ್ ರಾಮನಾಥ್ ಅವರು ದಿನಾಂಕ 1-2-2016ರಂದು ಮಧ್ಯಾಹ್ನ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾದರು[೨]. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಒಬ್ಬ ಮಗ ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಅಂದೇ ಸಂಜೆ ಕುಣಿಗಲ್‍ನ ಬ್ರಾಹ್ಮಣ ರುದ್ರಭೂಮಿಯಲ್ಲಿ ನಡೆಯಿತು.

ಉಲ್ಲೇಖ[ಬದಲಾಯಿಸಿ]

  1. http://kannada.filmibeat.com/news/kannada-actor-kunigal-ramanath-is-no-more-020676.html
  2. "ಪ್ರಜಾವಾಣಿ". 2 Feb 2016. Archived from the original on 2 ಫೆಬ್ರವರಿ 2016. Retrieved 2 Feb 2016.{{cite web}}: CS1 maint: bot: original URL status unknown (link)