ಕಡ್ಲೇವಾಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಡ್ಲೇವಾಡ
ಕಡ್ಲೇವಾಡ
village
Population
 (೨೦೧೨)
 • Total೧೫೦೦

ಕಡ್ಲೇವಾಡ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ.

ಇತಿಹಾಸ[ಬದಲಾಯಿಸಿ]

ವಿಜಯಪುರದಿಂದ ಪೂರ್ವಕ್ಕೆ ೬೦ ಕಿ.ಮೀ. ಅಂತರದಲ್ಲಿ ತಾಲೂಕಾ ಸ್ಥಳ ಸಿಂದಗಿ ಇರುತ್ತದೆ. ಅಲ್ಲಿಂದ ಉತ್ತರಕ್ಕೆ ೩೦ ಕಿ.ಮೀ. ದೂರದಲ್ಲಿ ಕಡ್ಲೇವಾಡ ಇರುತ್ತದೆ. ಈ ಊರು ದೇವಣಗಾಂವ ಸಮೀಪದಲ್ಲಿ ಭೀಮಾ ನದಿಯ ದಂಡೆಯ ಮೇಲಿದೆ.

ಕಡ್ಲೇವಾಡದಲ್ಲಿ ಕಲ್ಯಾಣ ಚಾಳುಕ್ಯ ಶೈಲಿಯ ಸೋಮೇಶ್ವರ ದೇವಾಲಯವು ಒಂದು ಸಂಕೀರ್ಣ ಕಟ್ಟಡವಾಗಿದೆ. ಇದಕ್ಕೆ ದಕ್ಷಿಣ ಕಾಶಿ ಎಂದೂ ಇಲ್ಲಿನ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಸ್ಥಳೀಯವಾಗಿ ಸ್ವಾಮಿಲಿಂಗ ಅಥವ ಸೋಮನಾಥ ದೇವಾಲಯವೆಂದು ಕರೆಯಲಾಗುತ್ತಿದೆ.

ದೇವಾಲಯದ ಗರ್ಭಗೃಹವು ನಕ್ಷತ್ರ ಆಕಾರದ ತಳವಿನ್ಯಾಸ ಹೊಂದಿದೆ. ಮೇಲ್ಭಾಗದಲ್ಲಿದ್ದ ಕದಂಬ ನಾಗರ ಶೈಲಿಯ ಶಿಖರವು ಬಿದ್ದಿದೆ. ಒಳಗೆ ಪ್ರಾಚೀನ ಪಾಣಿಪೀಠದ ಮೇಲೆ ಬಾಣಲಿಂಗವಿದೆ. ದೇವಾಲಯದ ನವರಂಗದ ಮುಂಭಾಗದಲ್ಲಿ ಕಿರು ಅರ್ಧ ಮಂಟಪವಿದ್ದು, ಇದರ ಮುಂದೆ ಎರಡು ವಿಶಾಲವಾದ ಮುಖಮಂಟಪಗಳಿವೆ. ಅಲ್ಲಿರುವ ಸ್ತಂಭಗಳ ಮೇಲೆ ಸೂರ್ಯ, ಕಾಳಭೈರವ, ಶಿವ, ವಿಷ್ಣು, ನಾರಾಯಣ, ಗೋಪಾಲಕೃಷ್ಣ, ಬೇಡರ ಕಣ್ಣಪ್ಪ ಮೊದಲಾದ ದೇವ-ದೇವತೆಗಳ ಸುಂದರ ಉಬ್ಬು ಶಿಲ್ಪಗಳಿವೆ. ಇವು ನೋಡುಗನ ಮನಸ್ಸನ್ನಾಕರ್ಷಿಸುತ್ತವೆ.

ದೇವಾಲಯದ ಗೋಡೆಗಳ ನಕ್ಷತ್ರಾಕಾರವಾಗಿರುವ ಮೂಲೆಗಳಲ್ಲಿ ನಾಟ್ಯಭಂಗಿಯಲ್ಲಿರುವ ಮದನಿಕೆಯರ ವಿಗ್ರಹಗಳನ್ನು ಅತ್ಯಂತ ಆಕರ್ಷಕವಾಗಿ ಕೆತ್ತಲಾಗಿದೆ. ಈ ರೀತಿಯ ವಿಗ್ರಹಗಳು ದೇವಾಲಯದ ಸುತ್ತಲೂ ಕಂಡುಬರುತ್ತವೆ. ತಳಪಾಯದ ಮೇಲೆ ಭಿತ್ತಿಗಳಲ್ಲಿ ಅಂಕಣಗಳಿದ್ದು ಹಂಸಗಳ ಸಾಲು, ಆನೆಗಳ ಸಾಲು ಮತ್ತು ವಿವಿಧ ಅಲಂಕಾರಿಕ ಲತೆ, ಬಳ್ಳಿಗಳ ಅಲಂಕಾರವಿರುವುದು ಕಂಡು ಬರುತ್ತವೆ. ಈ ರೀತಿಯ ಶಿಲ್ಪಕಲೆಯು ಹಂಪಿಯ ಹಜಾರ ರಾಮ ದೇವಸ್ಥಾನದಲ್ಲಿಯೂ ಕಾಣಬಹುದು.

ಸೋಮೇಶ್ವರ ದೇವಾಲಯದ ಹಿಂಭಾಗದಲ್ಲಿ ಅನತಿ ದೂರದಲ್ಲಿ ಇನ್ನೊಂದು ಕಲ್ಯಾಣ ಚಾಳುಕ್ಯರ ಶೈಲಿಯ ತ್ರಿಕೂಟಾಚಲವಿದೆ. ಈ ದೇವಾಲಯವು ಶಿಥಿಲಾವಸ್ಥೆಯಲ್ಲಿದೆ.

ಭೌಗೋಳಿಕ[ಬದಲಾಯಿಸಿ]

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ[ಬದಲಾಯಿಸಿ]

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ[ಬದಲಾಯಿಸಿ]

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 5000 ಇದೆ. ಅದರಲ್ಲಿ 2600 ಪುರುಷರು ಮತ್ತು 2400 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ[ಬದಲಾಯಿಸಿ]

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ,, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ[ಬದಲಾಯಿಸಿ]

ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮ[ಬದಲಾಯಿಸಿ]

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆ[ಬದಲಾಯಿಸಿ]

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯ[ಬದಲಾಯಿಸಿ]

  • ಶ್ರೀ ಮಹಾಲಕ್ಷ್ಮಿ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ವೆಂಕಟೇಶ್ವರ ದೇವಾಲಯ
  • ಶ್ರೀ ಪಾಂಡುರಂಗ ದೇವಾಲಯ
  • ಶ್ರೀ ಹಣಮಂತ ದೇವಾಲಯ

ಮಸೀದಿ[ಬದಲಾಯಿಸಿ]

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ[ಬದಲಾಯಿಸಿ]

ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕೃಷಿ ಮತ್ತು ತೋಟಗಾರಿಕೆ[ಬದಲಾಯಿಸಿ]

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಉದ್ಯೋಗ[ಬದಲಾಯಿಸಿ]

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆ[ಬದಲಾಯಿಸಿ]

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ[ಬದಲಾಯಿಸಿ]

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ[ಬದಲಾಯಿಸಿ]

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಹಬ್ಬ[ಬದಲಾಯಿಸಿ]

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ[ಬದಲಾಯಿಸಿ]

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ.

ಸಾಕ್ಷರತೆ[ಬದಲಾಯಿಸಿ]

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ[ಬದಲಾಯಿಸಿ]

ಗ್ರಾಮವು ಬಿಜಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಸೇವಾ ಸಂಸ್ಥೆಗಳು[ಬದಲಾಯಿಸಿ]

  • ಗ್ರಾಮ ಪಂಚಾಯತಿ, ಕಡ್ಲೇವಾಡ
  • ದೂರವಾಣಿ ವಿನಿಮಯ ಕೇಂದ್ರ, ಕಡ್ಲೇವಾಡ
  • ಅಂಚೆ ಕಚೇರಿ, ಕಡ್ಲೇವಾಡ
  • ಮಳೆ ಮಾಪನ ಕೇಂದ್ರ, ಕಡ್ಲೇವಾಡ
  • ನೀರು ಬಳಕೆದಾರರ ಸಹಕಾರ ಸಂಘ, ಕಡ್ಲೇವಾಡ
  • 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕಡ್ಲೇವಾಡ

ಪ್ರವಾಸ[ಬದಲಾಯಿಸಿ]

ದೂರ:

  • ಜಿಲ್ಲಾ ಕೇಂದ್ರದಿಂದ-೯೦ ಕಿ.ಮೀ.
  • ತಾಲೂಕ ಕೇಂದ್ರದಿಂದ-೩೦ ಕಿ.ಮೀ.

ವಿಜಾಪುರದಿಂದ ಪೂರ್ವಕ್ಕೆ ೬೦ ಕಿ.ಮೀ. ಅಂತರದಲ್ಲಿ ತಾಲೂಕಾ ಸ್ಥಳ ಸಿಂದಗಿ ಇರುತ್ತದೆ. ಅಲ್ಲಿಂದ ಉತ್ತರಕ್ಕೆ ೩೦ ಕಿ.ಮೀ. ದೂರದಲ್ಲಿ ಕಡ್ಲೇವಾಡ ಇರುತ್ತದೆ. ಈ ಊರು ದೇವಣಗಾಂವ ಸಮೀಪದಲ್ಲಿ ಭೀಮಾನದಿಯ ದಂಡೆಯ ಮೇಲಿದೆ.

ಕಡ್ಲೇವಾಡದಲ್ಲಿ ಕಲ್ಯಾಣ ಚಾಳುಕ್ಯ ಶೈಲಿಯ ಸೋಮೇಶ್ವರ ದೇವಾಲಯವು ಒಂದು ಸಂಕೀರ್ಣ ಕಟ್ಟಡವಾಗಿದೆ. ಇದಕ್ಕೆ ದಕ್ಷಿಣ ಕಾಶಿ ಎಂದೂ ಇಲ್ಲಿನ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಸ್ಥಳೀಯವಾಗಿ ಸ್ವಾಮಿಲಿಂಗ ಅಥವಾ ಸೋಮನಾಥ ದೇವಾಲಯವೆಂದು ಕರೆಯಲಾಗುತ್ತಿದೆ.

ದೇವಾಲಯದ ಗರ್ಭಗೃಹವು ನಕ್ಷತ್ರ ಆಕಾರದ ತಳವಿನ್ಯಾಸ ಹೊಂದಿದೆ. ಮೇಲ್ಭಾಗದಲ್ಲಿದ್ದ ಕದಂಬ ನಾಗರ ಶೈಲಿಯ ಶಿಖರವು ಬಿದ್ದಿದೆ. ಒಳಗೆ ಪ್ರಾಚೀನ ಪಾಣಿಪೀಠದ ಮೇಲೆ ಬಾಣಲಿಂಗವಿದೆ. ದೇವಾಲಯದ ನವರಂಗದ ಮುಂಭಾಗದಲ್ಲಿ ಕಿರು ಅರ್ಧ ಮಂಟಪವಿದ್ದು, ಇದರ ಮುಂದೆ ಎರಡು ವಿಶಾಲವಾದ ಮುಖಮಂಟಪಗಳಿವೆ. ಅಲ್ಲಿರುವ ಸ್ತಂಭಗಳ ಮೇಲೆ ಸೂರ್ಯ, ಕಾಳಭೈರವ, ಶಿವ, ವಿಷ್ಣು, ನಾರಾಯಣ, ಗೋಪಾಲಕೃಷ್ಣ, ಬೇಡರ ಕಣ್ಣಪ್ಪ ಮೊದಲಾದ ದೇವ-ದೇವತೆಗಳ ಸುಂದರ ಉಬ್ಬು ಶಿಲ್ಪಗಳಿವೆ. ಇವು ನೋಡುಗನ ಮನಸ್ಸನ್ನಾಕರ್ಷಿಸುತ್ತವೆ.

ದೇವಾಲಯದ ಗೋಡೆಗಳ ನಕ್ಷತ್ರಾಕಾರವಾಗಿರುವ ಮೂಲೆಗಳಲ್ಲಿ ನಾಟ್ಯಭಂಗಿಯಲ್ಲಿರುವ ಮದನಿಕೆಯರ ವಿಗ್ರಹಗಳನ್ನು ಅತ್ಯಂತ ಆಕರ್ಷಕವಾಗಿ ಕೆತ್ತಲಾಗಿದೆ. ಈ ರೀತಿಯ ವಿಗ್ರಹಗಳು ದೇವಾಲಯದ ಸುತ್ತಲೂ ಕಂಡುಬರುತ್ತವೆ. ತಳಪಾಯದ ಮೇಲೆ ಭಿತ್ತಿಗಳಲ್ಲಿ ಅಂಕಣಗಳಿದ್ದು ಹಂಸಗಳ ಸಾಲು, ಆನೆಗಳ ಸಾಲು ಮತ್ತು ವಿವಿಧ ಅಲಂಕಾರಿಕ ಲತೆ, ಬಳ್ಳಿಗಳ ಅಲಂಕಾರವಿರುವುದು ಕಂಡು ಬರುತ್ತವೆ. ಈ ರೀತಿಯ ಶಿಲ್ಪಕಲೆಯು ಹಂಪಿಯ ಹಜಾರ ರಾಮ ದೇವಸ್ಥಾನದಲ್ಲಿಯೂ ಕಾಣಬಹುದು.

ಸೋಮೇಶ್ವರ ದೇವಾಲಯದ ಹಿಂಭಾಗದಲ್ಲಿ ಅನತಿ ದೂರದಲ್ಲಿ ಇನ್ನೊಂದು ಕಲ್ಯಾಣ ಚಾಳುಕ್ಯರ ಶೈಲಿಯ ತ್ರಿಕೂಟಾಚಲವಿದೆ. ಈ ದೇವಾಲಯವು ಶಿಥಿಲಾವಸ್ಥೆಯಲ್ಲಿದೆ.

ವಿಜಯಪುರ ಕರ್ನಾಟಕ