ಅಬ್ದುಲ್ ಕಲಾಮ್
Wikipedia ಇಂದ
| ಜನ್ಮ ದಿನಾಂಕ: | ಅಕ್ಟೋಬರ್ ೧೫ ೧೯೩೧ |
|---|---|
| ಭಾರತದ ರಾಷ್ಟ್ರಪತಿಗಳು | |
| ಅವಧಿಯ ಕ್ರಮಾಂಕ: | ೧೧ನೆ ರಾಷ್ಟ್ರಪತಿ |
| ಅಧಿಕಾರ ವಹಿಸಿದ ದಿನಾಂಕ: | ೨೫ ಜುಲೈ ೨೦೦೨ |
| ಅಧಿಕಾರ ತ್ಯಜಿಸಿದ ದಿನಾಂಕ: | ೨೫ ಜುಲೈ ೨೦೦೭ |
| ಪುರ್ವಾಧಿಕಾರಿ: | ಕೆ.ಆರ್. ನಾರಾಯಣನ್ |
| ಉತ್ತರಾಧಿಕಾರಿ: | ಪ್ರತಿಭಾ ಪಾಟೀಲ್ |
ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಮ್ ಜುಲೈ ೨೫, ೨೦೦೨ ರಿಂದ ಜುಲೈ ೨೫ ೨೦೦೭ ರ ತನಕ ಭಾರತದ ರಾಷ್ಟ್ರಪತಿಗಳಾಗಿದ್ದರು. ಇವರು ಭಾರತದ ಹನ್ನೊಂದನೇ ರಾಷ್ಟ್ರಪತಿಗಳಾಗಿ ಜುಲೈ ೨೫, ೨೦೦೨ ರಂದು ಅಧಿಕಾರ ಸ್ವೀಕರಿಸಿದರು.
[ಬದಲಾಯಿಸಿ] ರಾಮೇಶ್ವರಂನ ಧನುಷ್ಕೋಡಿಯಿಂದ, ರಾಜಧಾನಿ ದೆಹಲಿಯವರೆಗಿನ ಯಾತ್ರೆ, ಅವಿಸ್ಮರಣೀಯ. ರಾಷ್ಟ್ರಪತಿ-ಹುದ್ದೆ ಡಾ. ಕಲಾಂರವರನ್ನು, ಅರಸಿ ಬಂತು :
ಇವರ ಜನನ ಅಕ್ಟೋಬರ್ ೧೫,೧೯೩೧ ರಂದು ತಮಿಳುನಾಡಿನ ರಾಮೇಶ್ವರಂನ ಧನುಷ್ಕೋಡಿಯಲ್ಲಿ ಆಯಿತು. ೧೯೫೮ರಲ್ಲಿ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿಯಿಂದ ಏರೋನಾಟಿಕಲ್ ಇಂಜಿನಿಯರಿಂಗ್ನಲ್ಲಿ ಪದವಿಯನ್ನು ಪಡೆದರು. ಡಿಆರ್ಡಿಓ ಹಾಗೂ ಇಸ್ರೋಗಳಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿರುವ ಇವರು ಭಾರತದ ಅಣುಬಾಂಬು ಹಾಗು ಕ್ಷಿಪಣಿಗಳ ಜನಕ ಎಂದೇ ಪ್ರಸಿದ್ಧರು. ಇವರು ಬ್ರಹ್ಮಚಾರಿಗಳು.
[ಬದಲಾಯಿಸಿ] ಡಾ. ಕಲಾಂ ರಚಿಸಿದ ಕೆಳಗಿನ ಪುಸ್ತಕಗಳು ಇಂದಿನ ಯುವ ಜನಾಂಗಕ್ಕೆ ಸ್ಪೂರ್ಥಿಯ ಸೆಲೆಗಳಾಗಿವೆ :
೧, * Wings of Fire (ಕನ್ನಡ ಅನುವಾದ - ಅಗ್ನಿಯ ರೆಕ್ಕೆಗಳು): ಈ ಪುಸ್ತಕವು ಇವರ ಆತ್ಮಕಥೆಯಾಗಿದ್ದು, ಇವರ ಸರಳ ಹಾಗೂ ಮಾದರಿ ಜೀವನದ ಅನೇಕ ಘಟನೆಗಳನ್ನು ಓದುಗರಿಗೆ ತೆರೆದಿಡುತ್ತದೆ. ಇಂದಿನ ಯುವ ಪೀಳಿಗೆಗೆ ಇದೊಂದು ಅನುರೂಪವಾದ ಮಾರ್ಗದರ್ಶಿ.
೨. * India 2020 : ಈ ಪುಸ್ತಕದಲ್ಲಿ ಕಲಾಮ್ ರವರು ೨೦೨೦ನೇ ಇಸ್ವಿಯಲ್ಲಿ ಭಾವಿ ಭಾರತವು ಹೇಗಿರಬೇಕೆಂದು ತಮ್ಮ ಕನಸನ್ನು ಬಿಚ್ಚಿಡುತ್ತಾರೆ. ಯುವ ಜನಾಂಗಕ್ಕೆ ಸ್ಪೂರ್ಥಿಯಾಗಬಲ್ಲಂಥಹ ಕೃತಿ.
[ಬದಲಾಯಿಸಿ] " ಕಲಾಂ ಮೇಷ್ಟ್ರು ", ವಿಶೇಷ ಕಾಳಜಿವಹಿಸಿ, ಭಾರತದ ಮಕ್ಕಳಿಗಾಗಿಯೇ ರಚಿಸಿದ ಬಹುಮೂಲ್ಯ ಕೄತಿ.
ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಭಾರತದೇಶದ ಮಕ್ಕಳಿಗಾಗಿಯೇ ರಚಿಸಿದ, ಒಂದು ಅಪರೂಪದ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅದನ್ನು ರಚಿಸಿದವರು. ಪ್ರೊ. ಎಚ್. ಆರ್. ರಾಮಕೄಷ್ಣರಾಯರು. : ISBN : 81-7713-199-0. ಇದರ ೧,೦೦೦ ಪ್ರತಿಗಳು ಮಾರಾಟವಾಗಿವೆ.

