ವೈಶೇಷಿಕ ದರ್ಶನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೈಶೇಷಿಕ ದರ್ಶನ[ಬದಲಾಯಿಸಿ]

ವೈಶೇಷಿಕವು ಷಡ್ದರ್ಶನಗಳಲ್ಲಿ ಒಂದು
ವೈಶೇಷಿಕವು ಒಂದು ವಿಶಿಷ್ಟ ಅರ್ಥಾತ್ ವಿಶೇಷತೆಯುಳ್ಳ ದರ್ಶನವೆಂದು ಪರಿಗಣಿಸಲಾಗಿದೆ. ನ್ಯಾಯ ಮತ್ತು ವೈಶೇಷಿಕವು ಒಂದೇ ಗುಂಪಿಗೆ ಸೇರಿದವು. ನ್ಯಾಯವು ಪ್ರಮಾಣ ಶಾಸ್ತ್ರ -ಜ್ಞಾನ ಮೀಮಾಂಸೆ ಮತ್ತು ತರ್ಕಗಳನ್ನು ವಿವರಿಸುತ್ತದೆ. :ವೈಶೇಷಿಕವು ಪ್ರಮೇಯ ಶಾಸ್ತ್ರ, -ಎಂದರೆ ಪದಾರ್ಥ ವಿವರಣೆ ಯಾಗಿದೆ. ಮನುಷ್ಯರಲ್ಲಿ - ಪದಾರ್ಥಗಳಲ್ಲಿ ಪರಸ್ಪರ ಸಮಾನತೆ ಇದ್ದರೂ, ಪ್ರತಿಯೊಂದೂ ಬೇರೆ ಬೇರೆಯಾಗಿದೆ. ಪ್ರತಿಯೊಂದಕ್ಕೂ ಪ್ರತ್ಯೇಕ ವಿಶೇಷತೆ ಇದೆ. (ಉದಾಹರಣೆ ; ಒಬ್ಬರಂತೆ ಮತ್ತೊಬ್ಬರಿಲ್ಲ. -ಒಂದು ವಸ್ತುವಿನಂತೆ ಮತ್ತೊಂದಿಲ್ಲ.) . ಇದು ಈ ದರ್ಶನದ ಮುಖ್ಯ ತಳಹದಿ.
ಕಣಾದನು ಈ ದರ್ಶನದ ಸೂತ್ರಧಾರ. ಈತನಿಗೆ ಕಶ್ಯಪ , ಕಾಶ್ಯಪ, ಉಲೂಕ ಎಂಬ ಹೆಸರುಗಳಿವೆ. ಈತನು ಕಣವಾದಿಯಾದ್ದರಿಂದ , ಇವನನ್ನು ಕಣಾದ ಎಂದೂ ಕರೆಯುತ್ತಾರೆ. ಇವನ ಕಾಲ ಸುಮಾರು ಕ್ರಿ . ಪೂ. ೨--೪ ನೇ ಶತಮಾನ.
ಪ್ರಶಸ್ತಪಾದನ - "ಧರ್ಮಸಂಗ್ರಹ", ; ಉದಯನ ನ -"ಕಿರಣಾವಳಿ", ಗ್ರಂಥಗಳು ಪ್ರಸಿದ್ಧ . ಅಣ್ಣಂಭಟ್ಟನ "ತರ್ಕಸಂಗ್ರಹ"ವೂ ಪ್ರಸಿದ್ಧ . ಇದು ಕಾಲಾಂತರದಲ್ಲಿ ವೇದವನ್ನು ಒಪ್ಪಿಕೊಂಡು, ಆಸ್ತಿಕ ಧರ್ಮವೆನ್ನಿಸಿಕೊಂಡಿದೆ.

ಪದಾರ್ಥ[ಬದಲಾಯಿಸಿ]

ವಸ್ತುವಿಗೆ ಪದಾರ್ಥವೆನ್ನುವರು .ಪದಾರ್ಥಗಳು ಏಳು. ೧.ದ್ರವ್ಯ, ; ೨. ಗುಣ. ; ೩. ಕರ್ಮ. ; ೪. ಸಾಮಾನ್ಯ. ; ೫. ವಿಶೇಷ. ; ೬. ಸಮವಾಯು. ; ಇವು ಆರು ಸತ್ತಾತ್ಮಕ ; ೭. ಅಭಾವ.- ಸೇರಿ ಏಳು . ಲೋಕವಿಲ್ಲಾ ಈ ಏಳು ಪದಾರ್ಥಗಳೇ ಆಗಿವೆ .
ದ್ರವ್ಯ : ಕಾರ್ಯಕ್ಕೆ ಸಮವಾಯು ಕಾರಣವಾಗಿ ಇರುವಿಕೆ (ಉದಾಹರಣೆ : ಮಡಕೆಗೆ ಮಣ್ಣು ಸಮವಾಯು ಕಾರಣ) ಗುಣಕ್ಕೆ ,ಕರ್ಮಕ್ಕೆ ಆಶ್ರಯವಾದುದು ದ್ರವ್ಯ. ದ್ರವ್ಯಗಳು ಒಂಭತ್ತು. ಪೃಥ್ವಿ , ಜಲ, ತೇಜ , ವಾಯು , ಆಕಾಶ , ಕಾಲ , ದಿಕ್ಕು , ಆತ್ಮ , ಮತ್ತು ಮನಸ್ಸು . ಪೃಥ್ವಿಯು ಗಂಧ ಗುಣವುಳದ್ದು. ಅದು ಮುಖ್ಯ ಗುಣ (ಅದರಲ್ಲಿ ರೂಪ,ರಸ, ಸ್ಪರ್ಶ ಗಳಿದ್ದರೂ ಕೂಡ.) ; ಹೀಗೆ
ಜಲಕ್ಕೆ ಶೀತ ಮುಖ್ಯ ಗುಣ -ಇತರ ಗುಣಗಳು ಇದ್ದರೂ ಕೂಡ. ಅದೇ ರೀತಿ ತೇಜಕ್ಕೆ ಉಷ್ಣ , ವಾಯುವಿಗೆ ಸ್ಪರ್ಶ , ಆಕಾಶಕ್ಕೆ ಶಬ್ದ . (ಆಕಾಶವು ನಿತ್ಯವಾಗಿದೆ.) ಕಾಲಕ್ಕೆ ಅಜ್ಞಾನ ಗುಣ , ದಿಕ್ಕಿಗೆ ಹತ್ತಿರ - ದೂರ , ಪೂರ್ವ ಪಶ್ಚಿಮ -ಇತ್ಯಾದಿ. ಗುಣ.
ಆತ್ಮ : ಇಂದ್ರಿಯಗಳ ಅನುಭವಕ್ಕೆ ಕರ್ತೃ . ಅದರ ಫಲವನ್ನು ಅನುಭವಿಸುವವನು ಆತ್ಮ : ಜೀವವೂ ಆತ್ಮ .

ಉಸಿರಾಟ , ಕಣ್ಣು ಮಿಟಕಿಸುವುದು , ಚೇತನ ಕೆಲಸವಾದ್ದರಿಂದ, .ಆತ್ಮನಿದ್ದಾನೆ. ಹಲವು ಇಂದ್ರಿಯಗಳ ಅನುಭವವನ್ನು ಒಂದೇ ವಸ್ತು ಪಡೆಯುತ್ತದೆ - ಅದು ಆತ್ಮ . ಸುಖ , ದುಃಖ ಅಪೇಕ್ಷೆ ಇವುಗಳ ಆಶ್ರಯ -ಆತ್ಮ .

ಆತ್ಮಗಳು ಅನೇಕ. ಏಕೆಂದರೆ ಒಂದೊಂದು ಶರೀರದ ಅನುಭವ ಒಂದೊಂದು ರೀತಿ. ಮನಸ್ಸು ಆತ್ಮಕ್ಕೆ ಸಹಕಾರಿ ; ಅದು ಆತ್ಮಕ್ಕಿಂತ ಬೇರೆ.
ಮನಸ್ಸು : ಮನಸ್ಸು ಆತ್ಮಕ್ಕಿಂತ ಬೇರೆ . ಮನಸ್ಸು ಬೇರೆ ಕಡೆ ತಲ್ಲೀನವಾದರೆ ಆತ್ಮವಿದ್ದರೂ ಗ್ರಹಿಸುವುದಿಲ್ಲ . ಆದ್ದರಿಂದ ಆತ್ಮ -ಮನಸ್ಸು ಬೇರೆ ಬೇರೆ .
ಗುಣ : ದ್ರವ್ಯದಲ್ಲಿರುವ ಪದಾರ್ಥವೇ ಗುಣ . ಗುಣದ ಅಸ್ತಿತ್ವವು ದ್ರವ್ಯದ ಮೂಲಕ ತಿಳಿಯುತ್ತದೆ. ಸ್ವತಂತ್ರವಾಗಿ ಅಲ್ಲ. ಸಿಹಿ ಎಂಬುದೇ ಬೇರೆ ಇಲ್ಲ (ಸಕ್ಕರೆ ಇದ್ದರೆ ಮಾತ್ರಾ ಸಿಹಿ ಇರುತ್ತದೆ ) . ಗುಣಕ್ಕೆ ಗುಣವಿಲ್ಲ .
ಕಣಾದನು ಹದಿನೇಳು ಗುಣಗಳನ್ನೂ ಭಾಷ್ಯಕಾರರು ಇನ್ನೂ ಏಳು ಗುಣಗಳನ್ನೂ ಹೇಳಿದ್ದಾರೆ . ಶಬ್ದ , ಸ್ಪರ್ಶ, ರೂಪ , ರಸ , ಗಂಧ , ಸಂಖ್ಯಾ , ಪರಿಣಾಮ (ಗಾತ್ರ) , ಪೃಥಕ್ (ಬೇರೆ ಬೇರೆ ಆಗುವಿಕೆ) , ಸಂಯೋಗ , ವಿಭಾಗ , ಗುರುತ್ವ , ದ್ರವತ್ವ , ಸ್ನೇಹ , ಸಂಸ್ಕಾರ , ಅಪರತ್ವ , ಪರತ್ವ , ಬುದ್ಧಿ , ಸುಖ , ದುಃಖ , ಇಚ್ಛೆ , ದ್ವೇಷ , ಪ್ರಯತ್ನ , ಧರ್ಮ , ಅಧರ್ಮ .

ಪರಮಾಣುವಾದ[ಬದಲಾಯಿಸಿ]

ಜಗತ್ತಿಗೆ ಮೂಲ ಉಪಾದಾನ ಕಾರಣ (ಮೂಲವಸ್ತು) ಯಾವುದು ? ಎಂಬುದು - ದಾರ್ಶನಿಕರು ಉತ್ತರಿಸಬೇಕಾದ ಪ್ರಶ್ನೆ (ಹಿಂದೆ -ಈಗ ವಿಜ್ಞಾನ) . ಸಾಂಖ್ಯರು ಪ್ರಕೃತಿ ಎನ್ನುತ್ತಾರೆ ; ಅದ್ವೈತಿಗಳು ಮಾಯೆ ಎನ್ನುತ್ತಾರೆ -ಇತ್ಯಾದಿ .
ಬಿಸಿಲು ಕೋಲಿನಲ್ಲಿ ಕಾಣುವ ಧೂಳಿನ ಕಣದ ಆರನೆಯ ಒಂದು ಭಾಗವೇ ಪರಮಾಣು ಎಂದು ವೈಶೇಷಿಕರು ಹೇಳುತ್ತಾರೆ. ಇದು ಅವಿಭಾಜ್ಯ ವಸ್ತು. ಎರಡು ಪಮಾಣು ಒಂದು ದ್ವಣುಕ ; ಮೂರು ದ್ವ ಣುಕ ಸೇರಿ ಒಂಗು ತ್ರ್ಯಣುಕ .ಇದು ದೃಷಿ ಗೋಚರ. ಪರಮಾಣು ಶಾಶ್ವತ . ಉಳಿದೆಲ್ಲಾ ಶಾಶ್ವತ. - ತ್ರ್ಯಣಕುಗಳಿಂದ ದೃಷ್ಟಿ ಗೋಚರ ಜಗತ್ತು ಆಗಿದೆ. ಬೇರೆ ಬೇರೆ ರೀತಿಯಲ್ಲಿ ಪರಮಾಣು ಸೇರಿ ಈ ವಿವಿಧ ವಿಚಿತ್ರ ಪ್ರಪಂಚ ಆಗಿದೆ.
ಅವು ಯಾಕೆ ಸೇರಿದವು ? ಸ್ಪಂದನ ಏಕೆ ಆಯಿತು ? ಅದೃಷ್ಡವೇ ಕಾರಣ. ಇದು ಗೋಚರವಾದ ಜಗತ್ತಿನ ಬಗೆಗ ವೈಶೇಷಿಕರ ಸಿದ್ಧಾಂತ .

ಪ್ರಮಾಣಗಳು[ಬದಲಾಯಿಸಿ]

ಇದನ್ನೆಲ್ಲಾ ಸಾಧಿಸಿ ತೋರಿಸಲು. ವೈಶೇಷಿಕವು , ಪ್ರತ್ಯಕ್ಷ , ಅನುಮಾನ ((inference :The reasoning involved in drawing a conclusion or making a logical judgment on the basis ofcircumstantial evidence and prior conclusions rather than on the basis of direct observation), ಎಂಬ ಪ್ರಮಾಣಗಳನ್ನು ಮಾತ್ರಾ ಸ್ವೀಕರಿಸಿದೆ. ಉಳಿದದ್ದೆಲ್ಲಾ ಅದರಲ್ಲೇ ಬರುತ್ತದೆ ಎಂದು ಹೇಳುತ್ತದೆ.

ಶಬ್ದ[ಬದಲಾಯಿಸಿ]

ಶಬ್ದ ಪ್ರಮಾಣ

ವೇದಗಳನ್ನು ಜ್ಞಾನಿಗಳ ವಾಕ್ಯಗಳಾದುದರಿಂದ ಪ್ರಮಾಣವೆನ್ನುತ್ತಾರೆ.

ಈಶ್ವರ - ಮೋಕ್ಷ[ಬದಲಾಯಿಸಿ]

ನ್ಯಾಯ ವೈಶೇಷಿಕ ದರ್ಶನಗಳು ಮೂಲತಃ ನಿರೀಶ್ವರ ದರ್ಶನಗಳು , ನಂತರ ಈಶ್ವರನನ್ನು ಒಪ್ಪಿಕೊಂಡರು. ಇವರ ಈಶ್ವರನಿಗೆ ನಿಗ್ರಹ -ಅನುಗ್ರಹ ಶಕ್ತಿ ಇಲ್ಲ. ಈಶ್ವರನು ಮಡಕೆ ಮಾಡುವ ಕುಂಬಾರನ ತಂದೆ ಇದ್ದಂತೆ. ಮನುಷ್ಯನ ಉನ್ನತಿ - ಅವನತಿಗೆ ಅವನ ಕರ್ಮವೇ ಕಾರಣ. -ಈಶ್ವರನಲ್ಲ .. ಈಶ್ವರನು ಆತ್ಮ ಗಳಲ್ಲಿ ಒಂದು ಶ್ರೇಷ್ಟ ಆತ್ಮ .
ಅದೃಷವೆಂಬ ಧರ್ಮ-ಅಧರ್ಮಗಳ ಪ್ರವಾಹ ನಿಂತು ಹೋದಾಗ . ಆತ್ಮನಿಗೆ ಮೋಕ್ಷ ಸಿಗುವುದು. ಪದಾರ್ಥಗಳ ಯತಾರ್ಥ ಜ್ಞಾನವಾದರೆ ಮೋಕ್ಷ . ನಿಷ್ಕಾಮ ಕರ್ಮದ ಮೂಲಕವೂ ಜ್ಞಾನ ಲಭಿಸುವುದು.

ಸಮೀಕ್ಷೆ[ಬದಲಾಯಿಸಿ]

ಇದು ವಾಸ್ತವವಾದಿ ದರ್ಶನ ( realism) . ಆಕಾಲದಲ್ಲೇ ಅಣುಗಳಿಂದ ಜಗತ್ತಾಗಿದೆ ಎಂಬ ಭಾವನೆ ವೈಜ್ಞಾ ನಿಕವಾಗಿದ್ದು ,ಚರ್ವಾಕ , ಸಾಂಖ್ಯ, ಜೈನದೊಂದಿಗೆ ಈ ದರ್ಶನ ಸಾಮ್ಯವನ್ನು ಹೊಂದಿದೆ.[೧][೨]

ಓಂ ಸತ್ಸತ್

ನೋಡಿ[ಬದಲಾಯಿಸಿ]

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;[[ರೆಣುಕರ ಆದಿಯಾಗಿ ಪಂಚಾಚಾರ್ಯಾರುಗಳಾದ ರೇಣುಕಾರಾಧ್ಯರು ಧಾರುಕಾರಾಧ್ಯ ಏಕೋರಾಮರಾಧ್ಯ ಪಂಡಿತಾರಾಧ್ಯ ವಿಶ್ವಾರಾಧ್ಯರುಗಳು ವಿಷಿಶ್ಟಾಧ್ವೈತ]] ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮಮೋಕ್ಷ

ಉಲ್ಲೇಖ[ಬದಲಾಯಿಸಿ]

  1. ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್
  2. ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & (ಪ್ರೊ.ಎಂ.ಎ.ಹೆಗಡೆ) ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.]]