ಸ್ನೇಹ ಸಂಬಂಧ ಪತ್ರಿಕೆ
ಸ್ನೇಹ ಸಂಬಂಧ,[೧]'ಮುಂಬಯಿ ಕರ್ನಾಟಕ ಸಂಘ, ಮಾಹಿಮ್,' ಪ್ರುಸ್ತುತ ಪಡಿಸುತ್ತಿರುವ ಸುಂದರ, ಹಾಗೂ ಮಾಹಿತಿಪೂರ್ಣ, 'ಮಾಸಪತ್ರಿಕೆ'. ಪ್ರತಿ ಬಾರಿಯೂ ಅದರಲ್ಲಿ ಒಂದು ಹೊಸತನವನ್ನು ನಾವು ಗುರುತಿಸಬಹುದು. ಹೊಸ ಮಾದರಿಯ ವಿನ್ಯಾಸ, ಲೇಖನದಲ್ಲಿ ಹೊಸತನ, ಮತ್ತು ಉತ್ತಮ ಲೇಖನಗಳನ್ನು ಬರೆಯುವ ಹಲವಾರು ಲೇಖಕ, ಲೇಖಕಿಯರ ಸಮೂಹವಿದೆ. ಅದರಲ್ಲಿ ಶಾಸ್ತ್ರೀಯ ಸಂಗೀತದ ಬಗ್ಗೆ ಅತಿ ನಿಖರವಾಗಿಯೂ ವಸ್ತುನಿಷ್ಠವಾಗಿಯೂ ಅತಿ ಸುಂದರವಾಗಿ ಪ್ರಸ್ತುತಪಡಿಸುತ್ತಿರುವ, ವಿದುಷಿ, ಶಾಸ್ತ್ರೀಯ-ಸಂಗೀತ ವಿಮರ್ಶಕಿ, ಹಾಗೂ ಉತ್ತಮ ಮಟ್ಟದ ಬರಹಗಾರ್ತಿ, 'ಶ್ರೀಮತಿ.ಶ್ಯಾಮಲಾ ಪ್ರಕಾಶ್,[೨] ಪ್ರಮುಖ ರಲ್ಲೊಬ್ಬರು. ಆ ಅಂಕಣಕ್ಕೆ ಅವರು ಕೊಟ್ಟಿರುವ ಹೆಸರು,'ನಾದೋಪಾಸನ,' ಎಂಬ ಹೆಸರು. ಸಂಗೀತದ ಪ್ರಕಾರಗಳನ್ನು ಗುರುತಿಸುತ್ತಾ, ಇಂದಿಗೂ ಸಂಗೀತದ ವಿದ್ಯಾರ್ಥಿನಿಯಾಗಿ, ಸಂಗೀತೋಪಾಸನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, 'ಶ್ಯಾಮಲಾ ಪ್ರಕಾಶ್', ಬೆಳೆಯುತ್ತಿರುವ ವ್ಯಕ್ತಿಯಾಗಿದ್ದಾರೆ.
'ಸ್ನೇಹ ಸಂಬಂಧ ಪತ್ರಿಕೆ'ಗೆ, ಈಗ ೨೫ ವರ್ಷದ ಸಂಭ್ರಮ
[ಬದಲಾಯಿಸಿ]ಈ ಪತ್ರಿಕೆಗೆ ವರ್ಷ ೨೦೦೯, 'ರಜತ ಮಹೋತ್ಸವ'ದ ಸಂಭ್ರಮ. ಈ ಪತ್ರಿಕೆಯಲ್ಲಿ ಬರೆಯುತ್ತಿರುವ, 'ಮೌಲಿಕ ಲೇಖಕ'/'ಲೇಖಕಿಯರು'
- 'ಡಾ. ಭರತ್ ಕುಮಾರ್ ಪೊಲಿಪು,'
- 'ಶ್ಯಾಮಲಾ ಮಾಧವ',
- 'ಶ್ರೀನಿವಾಸ ಜೋಕಟ್ಟೆ',
- 'ಪ್ರಕಾಶ್ ಜಿ. ಬುರ್ಡೆ',
- 'ಬಿ.ಎಸ್. ಕುರ್ಕಾಲ್',
- 'ಡಾ.ಜಿ. ಎನ್. ಉಪಾಧ್ಯ',
- 'ಓಂದಾಸ ಕಣ್ಣಂಗಾರ್,'
- 'ಡಾ.ಗಿರಿಜ ಶಾಸ್ತ್ರಿ,'
ಉಲ್ಲೇಖಗಳು
[ಬದಲಾಯಿಸಿ]- ↑ "'ಜಾಹಿರಾತಿನಲ್ಲಿ ಮಹಿಳೆಯ ಪ್ರವೇಶ-ಸುಖದ ತಪ್ಪು ಕಲ್ಪನೆ, ಡಾ. ವಿನಯ ಒಕ್ಕುಂದ, ಪು.೫, ಸ್ನೇಹ ಸಂಬಂಧ,ಮೇ, ೨೦೧೪" (PDF). Archived from the original (PDF) on 2016-03-28. Retrieved 2014-08-10.
- ↑ "'ವೀಣಾ ವಿದ್ವಾನ್ ಸಿ.ಕೆ.ಶಂಕರನಾರಾಯಣ ರಾವ್-ವಿದುಷಿ.ಶ್ಯಾಮಲಾ ಪ್ರಕಾಶ್,ಪುಟ.೧೧" (PDF). Archived from the original (PDF) on 2016-03-28. Retrieved 2014-08-10.
ಮುಂತಾದವರು.