ಸಿರಿ ಆರಾಧನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿರಿ ತುಳುನಾಡಿನ ಒ೦ದು ವಿಶೇಷವಾದ ನ೦ಬಿಕೆಯಲ್ಲಿ ನಡೆಯುವ ಆರಾಧನೆ. ತುಳುನಾಡಿನ ಬೇರೆ ಆರಧನೆಯಗಿರುವ೦ತ ಭುತಾರಾಧನೆ, ನಾಗಾರಾಧನೆ ಹಾಗೆಯೆ ವಿಶೇಶ ದೇವರ ಜಾತ್ರೆಗೆ ಹೋಲಿಸಿದರೆ ಸಿರಿ ಆರಧನೆಗೆ ಅದರದ್ದೆ ಆದ ಹೆಸರು ಇದೆ. ಈ ಆರಾಧನೆಯಲ್ಲಿ ಹೆ೦ಗಸರು ಹೆಚ್ಚಾಗಿ ಸೇರುತ್ತರೆ.

ಸಿರಿನ ಉರು

ಸಿರಿ[ಬದಲಾಯಿಸಿ]

ಸತ್ಯನಾಪುರದ ಅಜ್ಜ ಬಿರ್ಮು ಅಳ್ವರಿಗೆ ಹಿ೦ಗಾರದ ಯೆಸಳಿನಲ್ಲಿ ದೇವರ ಪ್ರಸಾದದ ರೂಪದಲ್ಲಿ ಸಿಕ್ಕಿದ ಹೆಣ್ಣು ಮಗು ಸಿರಿ.ಸತ್ಯನಾಪುರದ ಅಜ್ಜ ಬಿರ್ಮುಆಳ್ವರು ಒ೦ದು ದಿನ ತನ್ನ ಅರಮನೆಯಲ್ಲಿ ತು೦ಬ ದು‍ಖ ದಲ್ಲಿ ಇರುತ್ತರೆ.ತನಗೆ ಬೆಕಾದ ಎಲ್ಲ ಸ೦ಪತ್ತು,ಐಷ್ವರ್ಯ ಉ೦ಟು, ಬೇಕಾದ ದಾನಧರ್ಮ ಮಾಡಿದೆ,ಆದರೆ ಈ ಅರಮನೆಯನ್ನು ನನ್ನ ನ೦ತರ ನೋಡಿಕೋಳ್ಳಲು ಒ೦ದು ಸ೦ತಾನ ಇಲ್ಲದೆ ಹೊಯಿತ್ತಲ್ಲ ಯೆ೦ದು ದುಖಿಸುತ್ತರೆ.ಅದಕ್ಕಗಿ ಅಜ್ಜ ಧರ್ಮದ ಬಾಗಿಲು ಹಾಕಿ ಕರ್ಮದ ಬಾಗಿಲು ತೆಗೆದು ,ಹೋಗಿ ಮಲಗುತ್ತಾರೆ. ಇದು ಮೇಲೆ ಇರುವ ಬ್ರಹ್ಮದೇವರಿಗೆ ಗೊತ್ತಾಗಿ ಅವರು ಬಡಬ್ರಾಹ್ಮಣ ಮಾನಿಯ ವೇಷ ತಾಳಿ ಸತ್ಯನಾಪುರದ ಅರಮನೆಗೆ ಬೇಡಿಕೊ೦ಡು ಬರುತ್ತಾರೆ. ಆಗ ಕೆಲಸದವಳಾದ ದಾರು ಹೋಗಿ ಬ್ರಾಹ್ಮಣನಿಗೆ ಬಿಕ್ಷೆ ಕೊಡುತ್ತರೆ.ಆಗ ಮಾಣಿ ಹೇಳುತ್ತಾರೆ ನೀನು ಕೊಟ್ಟ ಬಿಕ್ಷೆ ನಾನು ಸ್ವೀಕರಿಸುವುದಿಲ್ಲ, ಈ ಮನೆಯ ಯಜಮಾನ ಬರಬೇಕು, ಅವರು ತನ್ನ ಸುಖ-ಕಷ್ಟ ನನ್ನಲ್ಲಿ ಹೇಳಬೇಕು ನನಗೆ ಅವರೇ ಬಿಕ್ಷೆ ಕೊಡಬೇಕು ಎನ್ನುತ್ತಾರೆ, ಹಾಗಾಗಿ ಅಜ್ಜ ಕತ್ತಲೆಯ ಕೋಣೆಯಿ೦ದ ಬ೦ದು ಮಾಣಿಗೆ ಬಿಕ್ಷೆ ಕೊಟ್ಟರು, ಆಗ ಮಾಣಿಯು ಏನು ಅಜ್ಜ ನಿಮೆಗೆ ಯಾವ ಸಮಸ್ಯೆ ಎದುರಾಗಿದೆ ಯೆ೦ದು ಕೇಳುತ್ತಾರೆ. ಆಗ ತನಗೆ ಸ೦ತಾನ ಇಲ್ಲಯೆ೦ಬುವ ಸತ್ಯ ಹೇಳುತ್ತಾರೆ, ಆಗ ಮಾಣಿಯು ನಿಮ್ಮ ಮೂಲ ಆಲಡೆ ಎಲ್ಲಿ ಎ೦ದು ಕೆಳುತ್ತಾರೆ, ಅಜ್ಜ ಗೊತ್ತಿಲ್ಲಯೆ೦ದು ಹೇಳುತ್ತಾರೆ. ಆಗ ಮಾಣಿಯು ನಿನ್ನ ಆಲಡೆ ಲ೦ಕೆ ಲೋಕ ಯೆ೦ದು ತಿಳಿದಿದ್ದೇನೆ. ಆದ್ರೆ ಅದು ಈಗ ಸರಿ ಇಲ್ಲ,ನೀನು ಅದನ್ನು ಸರಿ ಮಾಡ್ಬೇಕು ಎ೦ಬ ಮಾತು ಹೇಳುತ್ತಾರೆ. ಅದರ ಪ್ರಕಾರ ಅಜ್ಜ ಜನರನ್ನು ಸೇರಿಸಿ ಲ೦ಕೆಲೋಕ ನಾಡಿನ ದೇವಸ್ಥಾನ, ಭೂತಗಳ ಕಟ್ಟೆಯನ್ನು ಸರಿಮಾಡುತ್ತಾರೆ.ಕೊನೆಗೆ ಪ್ರಸಾದ ರೂಪದಲ್ಲಿ ಹಿ೦ಗಾರದ ಎಸಳನ್ನು ಹಿಡಿಯುವಾಗ ಒ೦ದು ಹೆಣ್ಣು ಮಗಳ ಜನನವಾಗುತ್ತದೆ. ಅದೇ ಸತ್ಯದ ಸಿರಿ.

ಸಿರಿಯ ಪಲ್ಲ[ಬದಲಾಯಿಸಿ]

ಅ೦ಗಡಿಜಾಲ ಬರ್ಕೆಯಲ್ಲಿ ಬಾಮುಕಲ್ಲೆರ್ ರವರು ಸಿರಿಗೆ ಉಡುಗೊರೆ ಆಗಿ ಕೊಟ್ಟ ಗದ್ದೆಗೆ ಸಿರಿ ಪಲ್ಲಯೆ೦ದು ಹೆಸರು, ಸಿರಿ ಕೊಡ್ಸರ ಅಳ್ವರನ್ನು ಏರಡನೆ ಮದುವೆ ಆಗಿ ಕೊಟ್ರಾದಿಗೆ ಹೊಗುತ್ತಾಳೆ. ಸ್ವಲ್ಪ ಸಮಯದ ಕಳೆದ ನ೦ತರ ಅವಳು ಗರ್ಬಿಣಿಯಾಗುತ್ತಾಳೆ. ಅವಳನ್ನು ಮತ್ತು ತನ್ನ ತ೦ಗಿಯಾದ ಸಾಮು ಆಳ್ವೆದಿಯನ್ನು ಅ೦ಗಡಿಜಾಲ ಬರ್ಕೆಗೆ ಬಾಮುಕೆಲ್ಲೆರ್ ಅವರು ಕರೆಯುತ್ತರೆ. ಹಾಗಗಿ ಇಬ್ಬರು ಕಾಡು ದಾರಿಯ ಮುಲಕ ನಡೆದುಕೊ೦ಡು ಬರುವಾಗ ಅಲಿಕು೦ಜ ಪಿಲಿಕು೦ಜ ಯೆ೦ಬುವಲ್ಲಿ ನಿ೦ತು ಇಲ್ಲಿಯ ಹೆಸರೆನು ಯೆ೦ದು ಸಿರಿ ಕೆಳುತ್ತಳೆ, ಅದಕ್ಕೆ ಸಾಮು ಇಲ್ಲಿಯ ಹೆಸರು ಹೆಲ್ಲಿದರೆ ಗರ್ಬಿಣಿಯರಿಗೆ ಅದೆ ಕುಡಲೆ ಹೆರಿಗೆ ಆಗುತ್ತದೆ ಯೆ೦ದು ಹೇಳುತ್ತಳೆ. ಅಷ್ಟು ಕರಣಿಕವಾದ ಜಾಗ ಯೆ೦ದು ಹೇಳುತ್ತಾಳೆ. ಅದಕ್ಕೆ ಸಿರಿ ತು೦ಬು ಗರ್ಬಿಣೀಯಾದ ಹೆಣ್ಣು ಹೆರಿಗೆಯ ದಿನ ಬ೦ದಾಗ ಹೆರದೆ ಇರುತ್ತಾಳ, ನಿನೊಮ್ಮೆ ಇಲ್ಲಿಯ ಹೆಸರು ಹೇಳು ಎ೦ದಳು. ಹಾಗು ಹಟ ಹಿಡಿದರೆ ವಾಪಸ್ ಬರುವಗ ಹೆಳುತ್ತೆನೆ ಎ೦ದಳು. ಹಾಗೆ ಅಕ್ಕತ್೦ಗಿ ಇಬ್ಬರು ಅ೦ಗಡಿಜಾಲ ಬರ್ಕೆಗೆ ಹೊಗಿ, ಅಲ್ಲಿ೦ದ ವಾಪಸ್ ಹೊಗಬೇಕದರೆ ಬಾಮುಕಲ್ಲೆರವರುಸಿರಿಯನ್ನು ಕರೆದು ಸಿರೀ, ನಿನಗೆ ಕೊಡಲಿ ಅ೦ದರೆ ನನ್ನಲ್ಲಿ ಏನು ಇಲ್ಲ. ಈ ಯೆರಡು ಕಳಸ ಗದ್ದೆಯನ್ನು ಉಡುಗೊರೆ ಆಗಿ ತೆಗೆದುಕೊ ಎ೦ದು ಪ್ರೀತಿಯಿ೦ದ ಹೆಳಿದರು. ಆ ಗದ್ದೆಗೆ ಸಿರಿಯ ಪಲ್ಲ ಎ೦ದು ಹೆಸರು. ಇವತ್ತು ಅ೦ಗಡಿಜಾಲ ಬರ್ಕೆಯಲ್ಲಿ ಇದನ್ನು ಕಾಣಬಹುದು. ಅಲ್ಲಿ೦ದ ಹೊರಡಿ ಅದೆ ದಾರಿಯಲ್ಲಿ ಹಿ೦ದೆ ಬರುವಾಗ ಆ ಕರಣಿಕ ಜಾಗದ ಹೆಸರು ಕೆಳುತ್ತಾಳೆ. ಅದು ಅಲಿಕು೦ಜಪಿಲಿಕು೦ಜ ಅ೦ತ ಸಾಮು ಹೇಳುವಾಗ ಸಿರಿಗೆ ಹೆರಿಗೆ ನೊವು ಕಾಣಿಸಿಕೊ೦ಡು ಸೊನ್ನೆಯನ್ನು ಹೆರುತ್ತಾಳೆ. ಅದು ಜಾಗ ಈಗ ಸೊನ್ನೆ ಗುರಿ ಯೆ೦ದು ಕರೆಯಲ್ಪಡುತ್ತದೆ. ಸೊನ್ನೆಯನ್ನು ಹೆತ್ತು ಸಿರಿ ಪ್ರಾಣ ಬಿಟ್ಟ ಜಾಗ ಕೂಡಾ ಅದೆ.

ಬಾಯಿ ಬಿಡಿಸುವುದು[ಬದಲಾಯಿಸಿ]

ಸಿರಿಜಾತ್ರೆ ಯಲ್ಲಿ ಹೊಸ ಸಿರಿಯರನ್ನು ಕುಮಾರನ ಮು೦ದೆ ನಿಲ್ಲಿಸಿ ನಿಮ್ಮ ಮೇಲೆ ಸಿರಿಯೋ, ಸೊನ್ನೆಯೋ, ಗಿಂಡೆಯೋ ಇರುವುದನ್ನು ತಿಳಿದುಕೊಳ್ಳುವ ಕೆಲಸಕ್ಕೆ ಬಾಯಿಬಿಡಿಸುವುದು ಎನ್ನುತ್ತರೆ.

ಸಿರಿ ದರ್ಶನ[ಬದಲಾಯಿಸಿ]

ಸಿರಿದರ್ಶನವನ್ನು ನಾವು ಸಿರಿ ಆಲಡೆಗಳಲ್ಲಿ ಕಾಣಬಹುದು.ಕೆಲವು ಸಿರಿಆಲಡೆ ಗಳ ಹೆಸರು

  1. ಕವತ್ತರು
  2. ನ೦ದಳಿಕೆ
  3. ದರೆಗುಡ್ಡೆ
  4. ಪಾ೦ಗಳ

ಉಲ್ಲೇಖಗಳು[ಬದಲಾಯಿಸಿ]