ವಿಷಯಕ್ಕೆ ಹೋಗು

ಸಿಂಧನೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sindhanur
taluk
Country India
StateKarnataka
DistrictRaichur
Lok Sabha ConstituencyKoppal
HeadquartersSindhanur
ವಿಸ್ತಾರ
  ಒಟ್ಟು1,567.70 km2 (605.29 sq mi)
Elevation
377 m (1,237 ft)
ಜನಸಂಖ್ಯೆ
  ಒಟ್ಟು೩,೬೦,೧೬೪ (city: ೭೫,೮೩೭)
  ಸಾಂದ್ರತೆ229.74/km2 (595.0/sq mi)
Languages
  OfficialKannada
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
PIN
584128
Telephone code8535
ISO 3166 codeIN-KA-RA-SI
ವಾಹನ ನೋಂದಣಿKA-36
ರಾಯಚೂರು ಜಿಲ್ಲೆಯಲ್ಲಿ ಸಿಂಧನೂರು ತಾಲ್ಲೂಕು

ಸಿಂಧನೂರು ನಗರ ಸಿಂಧನೂರು ತಾಲ್ಲೂಕಿನ ಕೇಂದ್ರವಾಗಿದ್ದು, ರಾಯಚೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ತಾಲ್ಲೂಕಿನ ಹೆಚ್ಚಿನ ಕೃಷಿ ಭೂಮಿಯು ತುಂಗಭದ್ರಾ ಎಡದಂಡೆ ಕಾಲುವೆಯ ನೀರಾವರಿ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ನೀರಾವರಿಯ ಸೌಕರ್ಯ ವರ್ಷದ ಎರಡೂ ಬೆಳಗಳಿಗೆ ಲಭ್ಯವಾಗಿ ಭತ್ತವನ್ನು ಎಥೇಚ್ಛವಾಗಿ ಬೆಳೆಯಲಾಗುತ್ತದೆ. ಆದ್ದರಿಂದ ಈ ತಾಲ್ಲೂಕನ್ನು ಭತ್ತದ ಖಣಜ, ಭತ್ತದ ನಾಡು ಎಂದು ಕರೆಯಲಾಗುತ್ತದೆ. ೨೦೧೧ನೇ ಜನಗಣತಿಯ ಪ್ರಕಾರ ತಾಲ್ಲೂಕಿನ ಜನಸಂಖ್ಯೆಯು ೩೬೦೧೬೪ ಇದ್ದು ಸಾಕ್ಷರತೆ ಪ್ರಮಾಣ ಶೇ. ೫೦.೬ ರಷ್ಟಿದೆ. ತಾಲ್ಲೂಕಿನ ವಿಸ್ತೀರ್ಣ ೧೫೬೭.೭೦ ಚದರ ಕಿ.ಮೀ. ಇದೆ.[]

ಇತಿಹಾಸ

[ಬದಲಾಯಿಸಿ]

"ಸಿಂಧ" ಎಂದರೆ ಈ ಭಾಗದಲ್ಲಿ ಆಳುತ್ತಿದ್ದ ಸಿಂಧರು ಎಂಬ ಅರಸು ಮನೆತನ "ನೂರು" ಎಂದರೆ ಊರು. "ಸಿಂಧನೂರು" ಎಂಬ ಹೆಸರು ಈ ಭಾಗದಲ್ಲಿ ಆಳುತ್ತಿದ್ದ ಚಾಲುಕ್ಯರ ಮಾಂಡಲಿಕರಾಗಿದ್ದ ಸಿಂಧರಿಂದ ಬಂದಿದೆ ಎಂದು ಹೇಳಲಾಗುತ್ತದೆ.

ಭೌಗೋಳಿಕ ಲಕ್ಷಣಗಳು

[ಬದಲಾಯಿಸಿ]

ತಾಲ್ಲೂಕಿನ ವ್ಯಾಪ್ತಿಯ ಬಹುತೇಕ ಕೃಷಿ ಭೂಮಿಯು ಕಪ್ಪು ಮಣ್ಣಿನಿಂದ ಕೂಡಿದ್ದು, ಫಲವತ್ತಾಗಿದೆ. ಭೂಮಿಯು ಸಮತಟ್ಟಾಗಿದ್ದು, ಭತ್ತ ಮತ್ತು ಹತ್ತಿ ಬೆಳೆಯಲು ಯೋಗ್ಯವಾಗಿದೆ.

ಹಿರಿಮೆ

[ಬದಲಾಯಿಸಿ]
ನನ್ನಯ್ಯಸ್ವಾಮಿ ವಿರೂಪಾಕ್ಷಯ್ಯ
  • ನನ್ನಯ್ಯಸ್ವಾಮಿ ವಿರೂಪಾಕ್ಷಯ್ಯ ಕಾನಿಹಾಲ್ ಮಠ್ ಅಲಬನೂರು ಇವರು ಮಾಜಿ ಸೈನಿಕರು ಇವರು ಎರಡು ಬಾರಿ ಪಾಕಿಸ್ತಾನ ಮತ್ತು ಚೀನಾ ಯುದ್ದದಲ್ಲಿ ಭಾಗವಹಿಸಿದ್ದರು. ಬಾದರ್ಲಿ ಮಂಡಲ ಪಂಚಾಯಿತಿಗೆ 4 ಬಾರಿ ಅವಿರೋಧವಾಗಿ ಆಯ್ಕೆಯಾದರು.
  • ಶ್ರೀ ಒಳಬಳ್ಳಾರಿ ಚನ್ನಬಸವೇಶ್ವರ ತಾತ ಕಾರುಣ್ಯ ಯೋಗಿ, ಕಾಯಕ ಯೋಗಿ, ಅಕ್ಷರ ದಾಸೋಹಿ, ಜನರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮೂಡಿಪಾಗಿಟ್ಟ ವೀರಕ್ತ ಯೋಗಿ ಜನಿಸಿದ ಬೆಳಸಿದ ಊರು ನಮ್ಮ ಹೆಮ್ಮೆಯ ಸಿಂಧನೂರು.
  • ಶ್ರೀ ಕರಡಿ ಸಂಗಣ್ಣ, ಸಂಸದರು, ಕೊಪ್ಪಳ ಕ್ಷೇತ್ರ ಇವರು ಕೊಪ್ಪಳರವರಾಗಿದ್ದು, ಬಿ ಜೆ ಪಿ ಪಕ್ಷದಿಂದ ಚುನಾಯಿತರಾಗಿದ್ದಾರೆ.
  • ಶ್ರೀ ಹಂಪನಗೌಡ ಬಾದರ್ಲಿ ಶಾಸಕರು, ಸಿಂಧನೂರು ವಿಧಾನ ಸಭಾ ಕ್ಷೇತ್ರ. ಕಾಂಗ್ರೆಸ್ ಪಕ್ಷದಿಂದ ಆರಿಸಿ ಬಂದಿದ್ದಾರೆ.
  • ಕು. ಚನ್ನಬಸವ ಹಿರೇಮಠ ಎಂಬ ವ್ಯಕ್ತಿ ಅತೀ ಕಿರಿಯ ವಯಸ್ಸಿನಲ್ಲಿ ತಮ್ಮ ಕೌಟುಂಬಿಕ ಜೀವನದಲ್ಲಿ ಆದ ಕಹಿ ಘಟನೆಗಳಿಂದ ಬೇರೆ ಯಾರಿಗೂ ಅಂತಹ ಪರಿಸ್ಥಿತಿ ಬರಬಾರದು ಎಂದು ಶ್ರೀ ಶ್ರೀ ಶ್ರೀ ಸ್ವಾಮಿ ವಿವೇಕಾನಂದ ಜನಕಲ್ಯಾಣ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಎಷ್ಟೋ ಬಡ ಹಾಗೂ ಅರ್ಹ ಅಭ್ಯರ್ಥಿಗಳ ಜೀವನ ಕೌಶಲ್ಯ ಹಾಗೂ ಜೀವನ ಅಭಿವೃದ್ಧಿಗೆ ಮಾದರಿಯಾಗಿ ಜೀವನ ನಡೆಸಿದ ನಮ್ಮ ಹಿರಿಮೆಯ ಅತೀ ಅಮೂಲ್ಯ ರತ್ನ ಎಂದು ಭಾರತದ ಪ್ರಧಾನಮಂತ್ರಿಗಳಿಂದ ವಿಶೇಷ ಗೌರವವನ್ನು ಪಡೆದುಕೊಂಡು ಬೆಳೆದ ಸ್ಥಳ ಅದುವೇ ನಮ್ಮ ಹೆಮ್ಮೆಯ ಸಿಂಧನೂರು.
  • ಕನ್ನಡ,ತೆಲುಗು,ಬೆಂಗಾಲಿ ಹಾಗೂ ಉರ್ದು ಮಾತನಾಡುವ ಭಾಷಿಕರಿದ್ದಾರೆ.
  • ಒಂದು ಮೂಲದ ಪ್ರಕಾರ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಟ್ರ್ಯಾಕ್ಟರ್ ಗಳು ಮಾರಾಟವಾಗುವ/ ಉಪಯೋಗಿಸುವ ಕೇಂದ್ರವಾಗಿದೆ.
  • ಇಲ್ಲಿ ಉತ್ಕೃಷ್ಟ ಗುಣಮಟ್ಟದ ವಿದೇಶಗಳಿಗೆ ರಫ್ತಾಗುವ ಸೋನಾಮಸೂರಿ ಹಾಗೂ ಬಾಸುಮತಿ ಅಕ್ಕಿಯನ್ನು ಬೆಳೆಯಲಾಗುತ್ತದೆ.

ಇದು ರಾಯಚೂರು ಜಿಲ್ಲೆಯ ಒಂದನೇ ಅತಿ ದೊಡ್ಡ ತಾಲ್ಲೂಕು ಇಲ್ಲಿ ತುಂಗಭದ್ರಾ ನದಿಯ ಎಡದಂಡೆ ಕಾಲುವೆ ನೀರು ಹರಿದು ಬರುತ್ತದೆ.ಇಲ್ಲಿ ಜನರು ಕೃಷಿಯಲ್ಲಿ ಭತ್ತವನ್ನು ಅತಿ ಹೆಚ್ಚು ಬೇಳಿಯುತಾರೆ ಆದರಿಂದ. ಈ ಪ್ರದೇಶವನ್ನು ಭತ್ತದ ಕಣಜ ಎಂದು ಕರೆಯಲಾಗಿದೆ.ಇಲ್ಲಿ ಕೃಷಿ ಮತ್ತು ಸರಕು ಸಾಮಾಗ್ರಿಗಳನ್ನು ರಫ್ತು ಮಾಡಲಾುತ್ತಿದೆ.ಅತಿ ಹೆಚ್ಚು ಟ್ರ್ಯಾಕ್ಟರ್ ಆಮದು ಮಾಡಿಕೊಳ್ಳುವ ಮೂಲಕ ಮೊದಲನೇ ಸ್ಥಾನ ಹೊಂದಿದೆ.ಬಟ್ಟೆ ಗಿರಣಿಗಳು ಕೂಡ ಇವೆ. ಕುಡಿಯುವ ನೀರು ಶುದ್ಧೀಕರಣ ಘಟಕ ಇದೆ.ಇದರಿಂದ ೨೫ ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]