ಸದಸ್ಯ:Vinu Sujitha Michael/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|ನರೇಶ್ ಮೆಹ್ತಾ ಅವರ ಪುರುಶ್ ಪುಸ್ತಕ [[ಚಿತ್ರ: thumb|ಮೆಹ್ತಾ ಅವರ ಕಾವ್ಯ ಪುಸ್ತಕ |thumb]]thumb|ನರೇಶ್ ಮೆಹ್ತಾ

ನರೇಶ್ ಮೆಹ್ತಾ[ಬದಲಾಯಿಸಿ]

ನರೇಶ್ ಮೆಹ್ತಾ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿಂದಿ ಸಾಹಿತಿ. ಭಾರತದ ಪ್ರಮುಖ ಹಿಂದಿ ಲೇಖಕರು. ಕವಿತೆ,ನಾಟಕ ಮುಂತಾಗಿ ಸುಮಾರು ೫೦ಕ್ಕಿಂತಲೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ.ಇವರಿಗೆ ೧೯೮೮ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ೧೯೯೨ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಂದಿದೆ.

ಜೀವನ[ಬದಲಾಯಿಸಿ]

ನರೇಶ್ ಮೆಹ್ತಾ ಅವರು ೧೯೯೨ ಫೆಬ್ರವರಿ ೧೫ರಂದು ಜನಿಸಿದರು. ಇವರ ಜನ್ಮ ಸ್ಥಳ ಭಾರತ ಮಧ್ಯಪ್ರದೇಶದ ಶಾಜಾಪುರ. ಇವರು ಬನಾರಸಿ ವಿಶ್ವವಿದ್ಯಾಲಯದಿಂದ ಎಮ್.ಎ ಪದವಿ ಪಡೆದರು. ಆಲ್ ಇಂಡಿಯಾ ರೇಡಿಯೊ, ಅಲ್ಲಹಬದ್ನಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಭಾಷಾ ಶೈಲಿ[ಬದಲಾಯಿಸಿ]

ನರೇಶ್ ಮೆಹ್ತಾ ಅವರ ಭಾಷಾ ಶೈಲಿ ಸಾಂಸ್ಕ್ರುತಿಕ ಖಾಡಿಬೊಲಿ. ಶಿಲ್ಪ ಕಲೆ ಮತ್ತು ಅಭಿವ್ಯಕ್ತಿ ಮಟ್ಟ ಅವರಿಗೆ ತಾಜಾತನ ಮತ್ತು ಹೊಸತನವಾಗಿತ್ತು. ನೇರವಾದ ಸರಳವಾದ ಬಿಂಬವನ್ನು ತಮ್ಮ ಕವಿತೆಯಲ್ಲಿ ವ್ಯಕ್ತಪಡಿಸುತ್ತಿದ್ದರು. ಮೆಹ್ತಾ ಅವರ ಭಾಷಾ ಶೈಲಿ ಭಾವಪೂರ್ಣ ಹಾಗೂ ಮಾಹಿತಿಯುಳ್ಳದಲ್ಲದೆ ಪರಿಣಾಮರಕಾರಿಯೂ ಆಗಿತ್ತು. ಅವರ ಕಾವ್ಯದಲ್ಲಿ ರೂಪಕಾಲಂಕಾರ, ಉಪಮಾಲಂಕಾರ, ಅನುಪ್ರಾಸ, ವ್ಯಕ್ತೀಕರಣ ಮುಂತಾದ ಅಲಂಕಾರಗಳನ್ನು ಉಪಯೋಗಿಸಿದ್ದಾರೆ. ಮೆಹ್ತಾ ಅವರು ನವೀನ ಉಪಮಾನದ ಜೊತೆಗೆ ಸಾಂಪ್ರದಾಯಿಕ ಹಾಗೂ ನವೀನ ಹೊಸತನವನ್ನು ಸಹ ಪ್ರಯೋಗ ಮಾಡುತ್ತಿದ್ದರು. ನರೇಶ್ ಮೆಹ್ತಾ ಅವರು ಆಧುನಿಕ ಕವಿತೆಗೆ ಸೌಮ್ಯೋಕ್ತಿಯ ಜೊತೆಗೆ ಹೊಸ ತಿರುವನ್ನು ನೀಡಿದ್ದಾರೆ.

ಕೃತಿಗಳು[ಬದಲಾಯಿಸಿ]

ಮೆಹ್ತಾ ಅವರ ಪ್ರಮುಖ ಕೃತಿಗಳು - ಅರಣ್ಯ್ , ಉತ್ತರ್ ಕಥಾ , ಎಕ್ ಸಮರ್ಪಿಥ್ ಮಹಿಳಾ , ಕಿತ್ನಾ ಅಕೆಲಾ ಆಕಾಶ್ ,ಚೌತ್ಯ , ದೊ ಎಕಾನ್ , ಧೂಮ್ಕೆತು ಎಕ್ ಶ್ರುತಿ , ಪುರುಷ್ , , ಪ್ರವಾದ್ ಪರ್ವ್ , ಬೋಲ್ನೆ ದೊ ಚಿಡ್ ಕೊ , ಯಹ ಪಥ್ ಬನ್ಧು ಥಾ , ಹಮ್ ಅನಿಕೆತನ್ .

ಕೊಡುಗೆಗಳು[ಬದಲಾಯಿಸಿ]

ಮೆಹ್ತಾ ಅವರು ಇಂಡೋರ್ ಪ್ರಕಾಶನ ಮಾಡಿರುವ 'ಚುಥಾ ಸಂಸಾರ' ಕೃತಿಯನ್ನು ಹಿಂದಿ ದಿನ ಪತ್ರಿಕೆಯಾಗಿ ಮುದ್ರಣ ಮಾಡಲಾಗಿತ್ತು. ಸುಮಾರು ೧೯೫೦ರಲ್ಲಿ ಆರಂಭಿಸಿದ ಅನೇಕ ಕವಿತೆ ಶಾಲೆಗಳಲ್ಲಿ ನಕೆನ್ವಾಡ್ ಪ್ರಮುಖವಾದದ್ದು. ಈ ಶಾಲೆಯ ಮೂರು ಆದ್ಯಪ್ರವರ್ತಕರಲ್ಲಿ ಮೆಹ್ತಾನೂ ಒಬ್ಬರು . ಅವರ ಎರಡೆನೆಯ ಸತ್ಪಕದಿಂದ ಅವರ ಪ್ರಸಿದ್ದ ಕವಿಯಾಗಿ ರೂಪುಗೊಂಡರು.

ನಿಧನ[ಬದಲಾಯಿಸಿ]

ಮೆಹ್ತಾ ಅವರು ೨೦೦೦ ನವೆಂಬರ್ ೨೨ರಂದು ನಿಧನರಾದರು.

<ref>http://www.jnanpith.net/author/naresh-mehta<ref> <ref>http://www.veethi.com/india-people/naresh_mehta-profile-2361-25.htm<ref> <ref>https://www.poemhunter.com/naresh-mehta/biography/<ref>