ಸದಸ್ಯ:Varsha.hegde/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಣೇಶಪಾಲ್[ಬದಲಾಯಿಸಿ]

ಗಣೇಶಪಾಲ ಎನ್ನುವುದು ಒಂದು ಗಣಪತಿಯ ದೇವಸ್ಥಾನ. ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಿಂದ ಸುಮಾರು 30 ಕಿ.ಮೀ ದೂರದಲ್ಲಿ ಈ ಗಣೇಶ ಪಾಲ ಇದೆ. ಇದು ಮಲೆನಾಡಿನ ಒಂದು ಮೂಲೆ ಅಂತಲೇ ಹೇಳ ಬಹುದು. ಹೋಗುವ ದಾರಿಯಲ್ಲಿ  ಸುತ್ತಲು ಗೂಂಡಾರಣ್ಯ. ಬರೀ ದೊಡ್ಡ ದೊಡ್ಡ  ಮರಗಳೇ ಇಲ್ಲಿ ಕಾಣಲು ಸಿಗುತ್ತದೆ. ಪ್ರಕೃತಿಯ ಸೌಂದರ್ಯವನ್ನು ಸವಿಯ ಬೇಕೆಂದರೆ ಒಮ್ಮೆ  ಗಣೇಶಪಾಲ್ ಗೆ ಹೋಗ ಬೇಕು ಎಂದು ಹೇಳ ಬಹುದು. ಶಿರಸಿಯಿಂದ ೩೦ ಕಿಲೋಮೀಟರ್ ಹಾಗು ಯೆಲ್ಲಾಪುರ ದಿಂದ ೩೪ ಕಿಲೋಮೀಟರು ದೂರದಲ್ಲಿದೆ. ಶಿರಸಿಯಿಂದ  ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲೂ ಪ್ರಯಾಣ ಮಾಡಬಹುದು. ಶಿರಸಿಯಿಂದ ಬೆಳಿಗ್ಗೆ ಮತ್ತು ಸಾಯಂಕಾಲ ಎರಡು ಬಸ್ಸುಗಳು ಇವೆ, ಅದಲ್ಲದೆ ಸ್ವಂತ ವಾಹನದಲ್ಲೂ ಕೂಡ ಹೋಗಬಹುದು. ಗಣೇಶಪಾಲಿಗೆ ಹೋಗಲು ಇನ್ನೊಂದು ದಾರಿಯಂದರೆ ಶಿರಸಿ-ಯೆಲ್ಲಾಪುರದ ಕಡೆಯಿಂದಲೂ ಬರಬಹುದು. ಶಿರಸಿ ಮತ್ತು ಯೆಲ್ಲಾಪುರ ಜನರ ಆರಾಧ್ಯಧೈವ ಈ ಗಣಪತಿ. ಈ ಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿ ಜನರು ತಮ್ಮ ಮನದಿಷ್ಟಾರ್ಥವನ್ನು ಬೇಡಿಕೊಳ್ಳುತ್ತಾರೆ.

ಇದು ಒಂದು ಶಕ್ತಿಯುತವಾದ ಪ್ರದೇಶ.

ಇತಿಹಾಸ[ಬದಲಾಯಿಸಿ]

ಮಹಾಗಣಪತಿ

ಗಣೇಶಪಾಲ್ಗೆ ೩೦೦ ವರ್ಷಗಳ ಇತಿಹಾಸವಿದೆ.

ಈ ಪ್ರದೇಶದ ಮಹಿಮೆಯ ಬಗ್ಗೆ ಮತ್ತು ಗಣಪತಿ ಬಂದು ನೆಲೆಸಿದ ಬಗ್ಗೆ ಒಂದು ಸತ್ಯವಾದ ಕಥೆ ಇದೆ.

ಕಟ್ಟಿನಹಕ್ಲು ಕುಟುಂಬದ ಹಿರಿಯರಾದ ಪುಟ್ಟಯ್ಯ ಹೆಗಡೆಯವರಿಗೆ ಒಂದು ದಿನ ಕನಸಿನಲ್ಲಿ ಬಂದು  ವಿಗ್ರಹ ಇರುವ ಜಾಗ ಹಾಗೂ ಅದನ್ನು ಸ್ಥಾಪಿಸುವಂತೆ  ಸೂಚನೆ ಬಂತು.

ಮೊದಲನೆಯ ದಿನ ಪುಟ್ಟಯ್ಯ ಹೆಗಡೆಯವರು ಇದನ್ನು ನಂಬಲಿಲ್ಲ. ಮಾರನೆಯ ದಿನ ಮತ್ತೆ ಕನಸಿನಲ್ಲಿ ಬಂದು ವಿಗ್ರಹ ಸ್ಥಾಪಿಸುವಂತೆ ಕೇಳಿಕೊಂಡಾಗ, ಅದೇ ಪಕಾರ ಅವರು ಮಾಡಿದರು. ಮಾರನೆ ದಿನ ಹೆಗಡೆಯವರು ಖುಷಿಯಿಂದ ಕುಟುಂಬದವರೊಡಗೂಡಿ  ಕನಸಿನಲ್ಲಿ ಸೂಚಿನೆ ಸಿಕ್ಕ ಸ್ಥಳಕ್ಕೆ ಹೋದಾಗ ಆಶ್ಚರ್ಯ, ಆನಂದ.ಹಾಗೂ ಭಕ್ತಿಯಲಿ ಮಿಂದರು, ಆ ವಿಗ್ರಹವನ್ನು  ಎತ್ತಿ ತರಲು ಪ್ರಯತ್ನ ಪಟ್ಟರೆ  ಅದನ್ನ ಕದಲಿಸಲು ಸಾಧ್ಯವಾಗದೆ ಭಾರವಾದ ಮನಸ್ಸಿನಿಂದಲೇ ಮನೆಗೆ ಬಂದರು. ಅದೇ ದಿನ ರಾತ್ರಿ ಮತ್ತೆ ಗಣಪತಿ ಕನಸಿನಲ್ಲಿ ಬಂದು ಹೆಗಡೆಯವರೊಬ್ಬರೆ ಬಂದು ತನ್ನನ್ನು ಕೊಂಡೊಯ್ಯುವಂತೆ ಸೂಚಿಸಿತು. ಇದರಿಂದ ಸಂತೋಷ ಗೊಂಡ ಹೆಗಡೆ ಅವರು ಬೆಳಿಗ್ಗೆ ಬೇಗ ಎದ್ದು ಶುದ್ಧ ಮನಸಿನಿಂದ, ಭಕ್ತಿಯಿಂದ ಗಣಪತಿಯ ಮೂರ್ತಿ ಇರುವಲ್ಲಿಗೆ ಹೋದರು, ಗಣಪತಿಗೆ ಸಾಷ್ಟಾಂಗ  ನಮಸ್ಕಾರ ಮಾಡಿ, ಮೂರ್ತಿಯನ್ನು ಎತ್ತಲು ಹೋದರು. ಆಗ ಸಲೀಸಾಗಿ ಅಷ್ಟುದೊಡ್ಡ ಮೂರ್ತಿಯನ್ನು ಎತ್ತಲು ಅವರು ಶಕ್ತರಾದರು. ಸಂತೋಷಗೊಂಡ ಹೆಗಡೆಯವರು ಗಣೇಶನ ಮೂರ್ತಿಯನ್ನು ಹೊತ್ತು ಶಾಲ್ಮಲಾ ನದಿಯನ್ನು ದಾಟುತ್ತಿರುವಾಗ, ನದಿಯ ಮದ್ಯಭಾಘದಲ್ಲಿಯೇ ಗಣಪತಿ ಪ್ರತ್ಯಕ್ಷನಾಗಿ ತನ್ನನ್ನು ಅಲ್ಲಿಯೇ ಸ್ಥಾಪಿಸುವಂತೆ ಹೇಳಿ ಅಲ್ಲೇ ನೆಲೆನಿಂತನು. ನಿನ್ನ ಭಕ್ತಿ ಗೆ ಸಂತೋಷಗೊಂಡು  ವರ ಕೇಳು ಎನ್ನಲು ಹೆಗಡೆಯವರು  ತಮ್ಮ ಕುಟುಂಬದ ಮೇಲೆ ಯಾವಾಗಲೂ ನಿನ್ನ ಅನುಗ್ರಹ ವಿರಲಿ ಭಗವಂತ ಎಂದು ಬೇಡಿಕೊಂಡರು.

ವಿಶೇಷತೆ[ಬದಲಾಯಿಸಿ]

ಗಣೇಶ ಪಾಲಿನ ವಿಶೇಷತೆ ಎಂದರೆ ಇಲ್ಲಿ ನಾವು ಬೇರೆ ದೇವಸ್ಥಾನದ ಹಾಗೆ ಯಾವುದೆ ಕಟ್ಟಡಗಳನ್ನು  ನೋಡಲಿಕ್ಕೆ ಸಾಧ್ಯವಿಲ್ಲ. ಸಿಮೆಂಟಿನ ಅಗಲವಾದ ಕಟ್ಟೆಯ ಮೇಲೆ ಗಣಪತಿಯನ್ನು ಸ್ಥಾಪಿಸಿದ್ದಾರೆ. ಸುತ್ತಲೂ ಶಾಲ್ಮಲಾ ನದಿ. ಕಟ್ಟೆಯಮೇಲೆ ಗಣಪತಿಯಲ್ಲದೇ ದೊಡ್ಡದಾದ ಶಿವಲಿಂಗ, ಎದುರುಗಡೆ ಬಸವನನ್ನು ಸ್ಥಾಪಿಸಿದ್ದಾರೆ. ವರ್ಷಪೂರ್ತಿ ಸುತ್ತಲೂ ಹೊಳೆ ಜುಳುಜುಳು ಹರಿಯುತ್ತಿರುತ್ತದೆ.

ಈ ವಿಗ್ರಹಕ್ಕೆ ಯಾವುದೇ ಗುಡಿ ಗೋಪುರವಿಲ್ಲ. ಮಳೆಗಾಲದಲ್ಲಿ  ಈ ವಿಗ್ರಹದ ಮೇಲೆ ನಾಲ್ಕೈದು ಅಡಿಯಷ್ಟು ನೀರು ಹರಿದರೂ ವಿಗ್ರಹ ಮಾತ್ರ ಅಚಲವಾಗಿರುತ್ತದೆ. ಒಂದು ವೇಳೆ ನೀರಲ್ಲಿ ತೇಲಿದರು ಕೂಡ ತಾನಿರುವ ಜಾಗವನ್ನು ಹೆಗಡೆಯವರಿಗೆ ತಿಳಿಸಿ ಅವರು ತೆಪ್ಪದ ಮೇಲೆ ಹೋಗಿ ಅದನ್ನು ತಂದು  ಅದೇ ಜಾಗದಲ್ಲಿ ಇಡುತ್ತಿದ್ದರಂತೆ.

ಅಂತೆಯೇ  ಈ ಕುಟುಂಬ ಇವತ್ತಿಗೂ  ಈ ಗಣಪತಿಯ ಸನ್ನಧಿಯಲ್ಲಿ ಸದಾಕಾಲ ತಮ್ಮ ಸೇವೆಯನ್ನು ಸಲ್ಲಿಸುತ್ತಲೇ ಬಂದಿದೆ.

 ಪ್ರತಿ ವರ್ಷ ಮಾಘ ಶುದ್ಧ ಚೌತಿಯಂದು ಇಲ್ಲಿ ಹವನ, ಜಾತ್ರೆ ನಡೆಯುತ್ತದೆ ಸಾವಿರಾರು ಭಕ್ತರು ಆಗಮಿಸಿ ಗಣಪತಿಯ ಕೃಪೆಗೆ ಪಾತ್ರರಾಗುತ್ತಾರೆ.

ಅಲಂಕೃತ ಮಹಾಗಣಪತಿ

ಗಣೇಶ ಪಾಲ್ ದೇವಸ್ಥಾನಕ್ಕೆ ಅನೇಕ ಭಕ್ತರು ನಾನಾ ತರದ ಹರಕೆಯನ್ನು ಹೊತ್ತುಕೊಂಡು ಇಷ್ಟಾರ್ಥ ನೆರವೇರಿದ ಮೇಲೆ ಬಂದು ಹರಕೆಯನ್ನು ತೀರಿಸಿಕೊಳ್ಳುತ್ತಾರೆ.  ಇಲ್ಲಿ  ಮದುವೆ, ಮುಂಜಿ ಮುಂತಾದ  ಮಂಗಳಕಾರ್ಯಗಳನ್ನೂ ಮಾಡುತ್ತಾರೆ. ಸುಮಾರು ಮಾರ್ಚ್ ತಿಂಗಳಿಂದ ಮೇ ತಿಂಗಳ ವರೆಗೂ, ಸುಮಾರು ಪ್ರತಿದಿನ ಒಂದಿಲ್ಲೊಂದು ಮಂಗಳ ಕಾರ್ಯ ನಡೆಯುತ್ತದೆ. ಮದ್ಯದಲ್ಲಿ ಗಣಪತಿ ಕಟ್ಟೆ , ಹೋಮ, ಹವನ ಇತ್ಯಾದಿಗಳನ್ನು  ಮಾಡಲು ಜಾಗದ ವ್ಯವಸ್ಥೆ ಇದೆ.

ಸುತ್ತಲೂ ಮರಳಿನ ಸಮತಟ್ಟಾದ ಜಾಗ, ಸುಮಾರು ನಾಲ್ಕು- ಐದು ಸಾವಿರ ಜನರು ಸೇರಿದರೂ ಜಾಗದ ಕೊರತೆಯಾಗುವುದಿಲ್ಲ. ವಿಶಾಲವಾದ ಅಡಿಗೆ ಮನೆ, ಅಡಿಗೆ ಮಾಡಲು ಮಣ್ಣಿನ ಒಲೆ, ಬೀಸುಕಲ್ಲುಗಳು, ನೀರಿನ ವ್ಯವಸ್ಥೆ ಎಲ್ಲವೂ ಇದೆ. ಬೇಸಿಗೆಯಲ್ಲಿ ಚಪ್ಪರವನ್ನು ಹಾಕಿ ಮಲಗುವ ಕೋಣೆ, ಊಟ ದ ಕೋಣೆ ಎಲ್ಲವನ್ನು ಊರಿನ ಜನರು ತಯಾರು ಮಾಡಿ ಇಡುತ್ತಾರೆ. ಯಾರು ಬೇಕಾದರೂ ಬಂದು ಪೂಜೆ ಮಾಡಿ ಹೋಗಬಹುದು.

ಮಳೆ ಕಡಿಮೆ, ಅಥವಾ ಕಾಲಕ್ಕೆ ಸರಿಯಾಗಿ ಮಳೆ ಶುರುವಾಗದೆ ಇದ್ದರೆ ಇಲ್ಲಿ ಪರ್ಜನ್ಯ ವನ್ನು ಮಾಡುತ್ತಾರೆ. ಅಂದರೆ ಗಣಪತಿಯ ಸುತ್ತಲೂ ಹರಿಯುವ ನೀರನ್ನು ಬಿಂದಿಗೆಯಲ್ಲಿ ತಂದು ದೇವರಿಗೆ ಅಭಿಷೇಕ ಮಾಡುತ್ತಾರೆ.ಅಭಿಷೇಕ ಮಾಡಿದ ನೀರು ತಿರುಗಿ ಹೊಳೆಗೆ ಹರಿದು ಸೇರಿದಾಗ ಸಾಕಷ್ಟು ಮಳೆಯಾಗುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಇಲ್ಲಿನ ಭಕ್ತರು ನಂಬಿದ್ದಾರೆ.

ಅನೇಕರು ಮಕ್ಕಳಿಗೆ ಮದುವೆ ಆಗದಿದ್ದರೆ  ಗಣಪತಿಯ ಸನ್ನಿದಿಯಲ್ಲಿ ಮದುವೆಮಾಡಿ ಕೊಡುತ್ತೇವೆ ಎಂಬ ಹರಕೆಯನ್ನು ಹೊತ್ತು ಕೊಳ್ಳುತ್ತಾರೆ. ನಂತರ ಅಲ್ಲಿಯೇ  ಮದುವೆ  ಮಾಡುತ್ತಾರೆ.

ಮಳೆಗಾಲದಲ್ಲಿ ಗಣಪತಿಯ ಹತ್ತಿರ ಹೋಗಿ  ಯಾವುದೇ ಪೂಜೆ ಮಾಡಲು ಸಾಧ್ಯವಿಲ್ಲ. ಗಣಪತಿ ಮುಳುಗುವಷ್ಟು ಸುತ್ತಲೂ ನೀರು ತುಂಬಿರುತ್ತದೆ.

ಗುಡ್ದಚಾರಣ ಮಾಡುವವರು ಮತ್ತು ಪರಿಸರ ಸ್ನೇಹಿಗಳು ಈ ಜಾಗವನ್ನು ಆಯ್ಕೆ ಮಾಡಬಹುದು   

ಉಲ್ಲೇಖಗಳು[ಬದಲಾಯಿಸಿ]

<r> https://www.youtube.com/watch?v=FlluvWX9Pkw </r>

<r> https://www.inspirock.com/india/yellapur/ganesh-pal-a7308920545 </r>