ಸದಸ್ಯ:HARSHITHA SHIVAKUMAR/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್[ಬದಲಾಯಿಸಿ]

ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ಎಂಬುದು ಭಾರತದಲ್ಲಿನ ಅತ್ಯಂತ ಮೌಲ್ಯಯುತವಾದ ಖಾಸಗಿ ಉಕ್ಕು ಉತ್ಪಾದನ ಕೇಂದ್ರವಾಗಿದ್ದು, 2.1 ಶತಕೋಟಿಗೂ ಹೆಚ್ಚಿರುವ ಒಂದು ವಾರ್ಷಿಕ ವಹಿವಾಟನ್ನು ಹೊಂದಿದೆ. ಜಿಂದಾಲ್ ಸ್ಟೀಲ್ & ಪವರ್ ಲಿಮಿಟೆಡ್ (JSPL), 12 ಶತಕೋಟಿ ಮೌಲ್ಯದ ಜಿಂದಾಲ್ ಸಮೂಹದ ಒಂದು ಭಾಗವೆನಿಸಿಕೊಂಡಿದೆ. ಉಕ್ಕು, ವಿದ್ಯುತ್, ಗಣಿಗಾರಿಕೆ, ತೈಲ ಮತ್ತು ಅನಿಲ ಹಾಗೂ ಮೂಲಭೂತ ಸೌಕರ್ಯಗಳ ವಲಯದಲ್ಲಿ ಜಿಂದಾಲ್ ಓರ್ವ ಅಗ್ರಗಣ್ಯ ವೃತ್ತಿನಿರತನಾಗಿದೆ. ದಿವಂಗತ ಶ್ರೀ ಓ.ಪಿ ಜಿಂದಾಲ್ಅವರ ಕಿರಿಯ ಮಗನಾದ ಶ್ರೀಮಾನ್ ನವೀನ್ ಜಿಂದಾಲ್,ಜಿಂದಾಲ್ ಸ್ಟೀಲ್ ಅಂಡ್ ಪವರ್ ಮತ್ತು ಅದರ ಸಮೂಹ ಕಂಪನಿಗಳಿಗೆ ಚಾಲಕಶಕ್ತಿಯಾಗಿದ್ದಾರೆ. ಜಿಂದಾಲ್ ಪವರ್ ಲಿಮಿಟೆಡ್, ಜಿಂದಾಲ್ ಪೆಟ್ರೋಲಿಯಂ ಲಿಮಿಟೆಡ್, ಜಿಂದಾಲ್ ಸಿಮೆಂಟ್ ಲಿಮಿಟೆಡ್ ಮತ್ತು ಜಿಂದಾಲ್ ಸ್ಟೀಲ್ ಬೊಲಿವಿಯಾ ಇವು ಈ ಸಮೂಹದ ಕಂಪನಿಗಳಾಗಿವೆ. ಸ್ವಯಂಪೂರ್ಣತೆಯ ಪರಿಕಲ್ಪನೆಯಲ್ಲಿ ತಾನಿಟ್ಟಿರುವ ಒಂದು ನಂಬಿಕೆಯನ್ನು ಕಂಪನಿಯು ಘೋಷಿಸುತ್ತದೆ. ತನ್ನದೇ ವಶದಲ್ಲಿರುವ ಕಲ್ಲಿದ್ದಲಿನ ಮತ್ತು ಕಬ್ಬಿಣದ-ಅದಿರಿನ ಗಣಿಗಳಿಂದ ಲಭ್ಯವಾಗುವ ಹಿಮ್ಮೊಗ ಸಮಗ್ರೀಕರಣದ ಮೂಲಕ ಕಂಪನಿಯು ಉಕ್ಕು ಮತ್ತು ವಿದ್ಯುತ್ತನ್ನು ಉತ್ಪಾದಿಸುತ್ತದೆ. ಓ. ಪಿ. ಜಿಂದಾಲ್ ಅವರು 1969ರಲ್ಲಿ ಪ್ರಥಮವಾಗಿ ಭಾರತದ ಹಿಸ್ಸಾರ್ ನಲ್ಲಿ ಪೈಪ್ ತಯಾರಿಸುವ ಘಟಕವನ್ನು ಸುಮಾರು ನೂರೈವತ್ತು ಎಕರೆ ಜಾಗದಲ್ಲಿ ಪ್ರಾರಂಭ ಮಾಡಿ ದೇಶದ ಆರ್ಥಿಕ ಬೆಳವಣಿಗೆ ಮುಂದುವರೆಯಲು ಪ್ರಮುಖ ಪಾತ್ರ ವಹಿಸಿದರು. ಅಷ್ಟೇ ಅಲ್ಲದೆ ಜಿಂದಾಲ್ ತನ್ನ ವ್ಯಾಪಾರವನ್ನು ನಾನ ಕಡೆ ಹರಡಿರುವದರಿಂದ ಟನ್ ಆಧಾರದ ಮೇಲೆ ಹೇಳುವುದಾದರೆ, ಇದು ಭಾರತದಲ್ಲಿನ ಮೂರನೇ ಅತಿದೊಡ್ಡ ಉಕ್ಕು ಉತ್ಪಾದಕನಾಗಿದೆ. ಮೆದು ಕಬ್ಬಿಣ, ಲಘು ಉಕ್ಕಿನ ಚಪ್ಪಡಿಗಳು, ಫೆರೋ ಕ್ರೋಮ್, ಕಬ್ಬಿಣ ಅದಿರು, ಲಘು ಉಕ್ಕು ಇವುಗಳನ್ನಷ್ಟೇ ಅಲ್ಲದೇ, ರಾಚನಿಕ ಬಳಕೆಯ, ಬಿಸಿಯಿರುವಾಗಲೇ ಆಕಾರನೀಡಲ್ಪಟ್ಟ ಪಟ್ಟಿಗಳು ಮತ್ತು ಸುರುಳಿಗಳನ್ನು ಹಾಗೂ ಕಲ್ಲಿದ್ದಲು ಆಧರಿತ ಮೆದು ಕಬ್ಬಿಣ ಸ್ಥಾವರವನ್ನು ಕಂಪನಿಯು ತಯಾರಿಸುತ್ತದೆ ಮತ್ತು ಮಾರಾಟಮಾಡುತ್ತದೆ. ಈ ಕಂಪನಿಯು ವಿದ್ಯುತ್ ಉತ್ಪಾದನೆಯಲ್ಲಿಯೂ ತೊಡಗಿಸಿಕೊಂಡಿದೆ.

ಆಡಲಿತ ಮತ್ತು ಬೆಳವಣಿಗೆ[ಬದಲಾಯಿಸಿ]

ಓ.ಪಿ ಜಿಂದಾಲ್ ಅವರಿಂದ (1930–2005) ಸಂಸ್ಥಾಪಿಸಲ್ಪಟ್ಟ ಜಿಂದಾಲ್ ಸಮೂಹ ದಲ್ಲಿ ಜಿಂದಾಲ್ ಸ್ಟೀಲ್ ಅಂಡ್ ಪವರ್ ಒಂದು ಭಾಗವಾಗಿದೆ. ಅವರ ವ್ಯವಹಾರ ಸಾಮ್ರಾಜ್ಯದ ಹಿಂದಿನ ಅವತಾರಗಳ ಪೈಕಿ ಒಂದಾದ ಪೈಪ್ ಯುನಿಟ್ ಜಿಂದಾಲ್ ಇಂಡಿಯಾ ಲಿಮಿಟೆಡ್ ನನ್ನು 1969ರಲ್ಲಿ ಅವರು ಆರಂಭಿಸಿದರು. 2005ರಲ್ಲಿ ಜಿಂದಾಲ್‌ರವರ ಮರಣವಾದ ನಂತರ, ಅವರ ಸ್ವತ್ತುಗಳ ಪೈಕಿಯ ಬಹುಭಾಗಗಳು ಅವರ ಹೆಂಡತಿ ಸಾವಿತ್ರಿ ಜಿಂದಾಲ್ ವರ್ಗಾಯಿಸಲ್ಪಟ್ಟವು. ಆಮೇಲೆ ಜಿಂದಾಲ್ ಸಮೂಹದ ಆಡಳಿತ ಮಂಡಳಿಯು ಅವರ ನಾಲ್ವರು ಗಂಡುಮಕ್ಕಳ ನಡುವೆ ವಿಭಾಗಿಸಲ್ಪಟ್ಟಿತು ಮತ್ತು ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ನಾ ವ್ಯವಸ್ಥಾಪಕ ನಿರ್ದೇಶಕರಾಗಿ ನವೀನ್ ಜಿಂದಾಲ್ ಅಧಿಕಾರ ವಹಿಸಿಕೊಂಡರು. ಅವರ ಹಿರಿಯ ಸೋದರರಾದ ಸಜ್ಜನ್ ಜಿಂದಾಲ್, ಪ್ರಸಕ್ತವಾಗಿ ASSOCHAMನ ಮುಖ್ಯಸ್ಥರಾಗಿದ್ದು, ಇದು ವಾಣಿಜ್ಯ ಮಂಡಲಿಗಳ ಒಂದು ಪ್ರಭಾವಶಾಲಿ ಘಟಕವಾಗಿದೆ; O.P. ಜಿಂದಾಲ್ ಸಮೂಹದ ಭಾಗವಾಗಿರುವ ಜಿಂದಾಲ್ ಸ್ಟೀಲ್ ವರ್ಕ್ ಇದರ ಮುಖ್ಯಸ್ಥರಾಗಿ ತಮ್ಮ ತಂದೆಯ ವ್ಯವಹಾರಗಳನ್ನು ವಿಶ್ವದಾದ್ಯಂತ ಯಶಸ್ವಿಯಾಗಿ ಮುನ್ನಡಿಸುತ್ತಿದ್ದಾರೆ.

ಜಿಂದಾಲ್ ಮುಖ್ಯಸ್ಥರು ಆದಂತಹ ಓ.ಪಿ ಜಿಂದಾಲ್ ಅವರು ಭಾರತ ಸರ್ಕಾರದ ರಾಜ್ಯ ಸಭೆಯ ಸಧಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈ ವೇಳೆಯಲ್ಲಿ ತಮ್ಮ ವ್ಯವಹಾರವನ್ನು ಭಾರತದಾದ್ಯಂತ ವಿಸ್ತರಿಸಲು ಶುರು ಮಾಡುತ್ತಾರೆ ಇದರ ಮುಖ್ಯ ಉದ್ದೇಶ ತಮ್ಮ ವ್ಯವಹಾರ ಒಂದು ಕಡೆ ಆದರೆ ಇನ್ನೊಂದೆಡೆ ತಮ್ಮ ಸಂಸ್ಥೆಯಲ್ಲಿ ಸಾವಿರಾರು ಉದ್ಯೋಗ ಕಲ್ಪಿಸುವ ಗುರಿ ಅವರಿಗಿತ್ತು. ಅವರ ಯೋಚನೆಯ ಅನುಸಾರ ಜಿಂದಾಲ್ ಕಂಪನಿಯೂ ತನ್ನ ಉಕ್ಕು ಉತ್ಪಾದನೆ ಕೇಂದ್ರವನ್ನು ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಅದಿರು ಸಿಗುವ ಕಾರಣದಿಂದ ತಮ್ಮ ಒಂದು ಘಟಕವನ್ನು ಬಳ್ಳಾರಿಯಲ್ಲಿ 1994ರಲ್ಲಿ ಆರಂಬಿಸಿದರು.


ಎಲ್ ಮ್ಯುಟೂನ್ ಪ್ರದೇಶದಲ್ಲಿನ ವಿಶ್ವದ ಅತಿದೊಡ್ಡ ಕಬ್ಬಿಣ ಅದಿರು ಮೀಸಲುಗಳ ಪೈಕಿ ಒಂದಕ್ಕೆ ಸಂಬಂಧಿಸಿದ ಅಭಿವೃದ್ಧಿಯ ಹಕ್ಕುಗಳನ್ನು 2006ರ ಜೂನ್ 3ರಂದು ಜಿಂದಾಲ್ ಸ್ಟೀಲ್ ಗೆ ಬೊಲಿವಿಯಾ ಮಂಜೂರು ಮಾಡಿತು. 1.5 ಶತಕೋಟಿ US$ನಷ್ಟು ಪ್ರಮಾಣದ ಒಂದು ಆರಂಭಿಕ ಹೂಡಿಕೆಯೊಂದಿಗೆ ಕಾರ್ಯಾರಂಭ ಮಾಡಿದ ಕಂಪನಿಯು, ದಕ್ಷಿಣ ಅಮೆರಿಕಾದ ದೇಶದಲ್ಲಿ ಮುಂಬರುವ ಎಂಟು ವರ್ಷಗಳ ಅವಧಿಯಲ್ಲಿ ಹೆಚ್ಚುವರಿಯಾಗಿ 2.1 ಶತಕೋಟಿ US$ನಷ್ಟು ಹಣವನ್ನು ಹೂಡಲು ಯೋಜಿಸುತ್ತಿದೆ.

ಫೋರ್ಬ್ಸ್ ನಿಯತಕಾಲಿಕದ ಅನುಸಾರ, ಓ.ಪಿ.ಜಿಂದಾಲ್ ಅವರ ಮಡದಿ ಸಾವಿತ್ರಿ ಜಿಂದಾಲ್ 19ನೇ ಅತ್ಯಂತ ಶ್ರೀಮಂತ ಭಾರತೀಯ ವ್ಯಕ್ತಿ ಎಂಬ ಶ್ರೇಯಾಂಕ ಪಡೆದಿದ್ದಾರೆ.

ಸಮಾಜ ಮುಖಿ ಕೆಲಸಗಳು[ಬದಲಾಯಿಸಿ]

ಜಿಂದಾಲ್ ಕಂಪನಿಯು ಕೇವಲ ವ್ಯವಹಾರದ ದೃಷ್ಟಿಯಿಂದ ಕೆಲಸ ಮಾಡದೆ ತನ್ನ ಸುತ್ತ ಮುತ್ತಲಿನ ಸಮಾಜದ ಬೆಳವಣಿಗೆಗೆ ತುಂಬ ಪರಿಶ್ರಮ ಪಟ್ಟಿದೆ. 1982ರಲ್ಲಿ ಅನಾಥ ಮಕ್ಕಳ ಬೆಳವಣಿಗೆಗೆ ಎಂದು ಬಿಹಾರ್ ನಲ್ಲಿ ಸುಮಾರು 10,000ಕ್ಕು ಹೆಚ್ಚಿನ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುತ್ತ ಬಂದಿದ್ದಾರೆ. ಇನ್ನೊಂದು ವಿಶೇಶದ ಸಂಗತಿ ಎಂದರೆ ಪ್ರತಿ ವರ್ಷವೂ ಜಿಂದಾಲ್ ಕಂಪನಿಯೂ ತನ್ನ 21,000 ಉದ್ಯೋಗಿಗಳಿಗೆ ಯಾವುದೇ ತರಹದ ಆರೋಗ್ಯ ಸಮಸ್ಯೆಗಳು ಬಂದರು ಅವರಿಗೆ ಬರುವ ಆಸ್ಪತ್ರಿಕ ವೆಚ್ಚದಲ್ಲಿ ಸುಮಾರು 15-20% ಹಣವನ್ನು ತನ್ನ ಕೆಲಸಗಾರರಿಗೆ ನೀಡುತ್ತದೆ.ಹುಡುಗಿಯರಿಗಾಗಿಯೇ ಮೀಸಲಾದ ವಿದ್ಯಾ ದೇವಿ ಜಿಂದಾಲ್ ಸ್ಕೂಲ್ ಎಂಬ ಒಂದು ವಸತಿ ಶಾಲೆಯನ್ನು ಜಿಂದಾಲ್ ಕುಟುಂಬವು 1984ರಲ್ಲಿ ಭಾರತದ ಹಿಸಾರ್ ನಲ್ಲಿ ಸ್ಥಾಪಿಸಿತು. ಈ ಶಾಲೆಯ ಕುರಿತು ಅಷ್ಟೊಂದು ಹೆಚ್ಚಿನ ಪ್ರಚಾರ ಅಥವಾ ಮಾರುಕಟ್ಟೆ ಕಾರ್ಯವನ್ನು ಮಾಡಿಲ್ಲವಾದರೂ, ಇದಿರುವ ಖಾಸಗಿ ತಾಣ ಮತ್ತು ಗಮನಾರ್ಹ ಶ್ರೇಣಿಯ ಚಟುವಟಿಕೆಗಳ ಕಾರಣದಿಂದಾಗಿ, ಈ ಶಾಲೆಯು ಶ್ರೀಮಂತ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಕ್ಕಾಗಿ ಸ್ಥಾಪಿಸಲ್ಪಟ್ಟಿದೆ ಎಂದು ವ್ಯಾಪಕವಾಗಿ ತಿಳಿದುಬಂದಿದೆ. ಭಾರತದ ಸಿರಿವಂತ ವ್ಯವಹಾರಸ್ಥ ಕುಟುಂಬ ಮತ್ತು ರಾಜಕೀಯ ಕುಟುಂಬಗಳಿಗೆ ಸೇರಿದ ಹುಡುಗಿಯರನ್ನು ಈ ಶಾಲೆಯ ವಿದ್ಯಾರ್ಥಿವೃಂದವು ಒಳಗೊಳ್ಳುತ್ತದೆ. ಜಿಂದಾಲ್ ಕಂಪನಿಯೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯಕ್ಕೆ ಒಂದು ಕೈ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. 1994ರಲ್ಲಿ ಬಳ್ಳಾರಿಯಲ್ಲಿ ಒಂದು ಹುಕ್ಕಿನ ಕೇಂದ್ರ ಆರಂಭಿಸಿ ಇವತ್ತು ಸುಮಾರು 3000 ಜನರು ಅಲ್ಲಿ ಕೆಲಸ ಮಾಡುತಿದ್ದು ನಮ್ಮ ರಾಜ್ಯಕ್ಕೆ ಒಂದು ಹೆಮ್ಮೆಯ ವಿಷಯವಾಗಿದೆ. ಅಷ್ಟೇ ಅಲ್ಲದೆ ಸುಮಾರು ಎಂಟು ವರ್ಷಗಳ ಕಾಲ ಪ್ರತಿ ಮಧ್ಯಾಹ್ನ ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡುವ ಅಕ್ಷೆಯ ಪಾತ್ರ ಎಂಬ ಬಿಸಿ ಊಟದ ಯೋಜನೆಯನ್ನು ಮುನ್ನಡಿಸಿಕೊಂಡು ಪ್ರತಿ ನಿತ್ಯ ಬಡ ಮಕ್ಕಳ ಹಸಿವು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತಿದ್ದೆ.

ಒಟ್ಟಾರೆ ಜಿಂದಾಲ್ ಎಂಬ ಒಂದು ವಿಶ್ವ ಪ್ರಸಿದ್ಧ ಕಂಪನಿಯೂ ನಮ್ಮ ದೇಶದ್ದು ಎಂಬುದು ಒಂದು ಹೆಮ್ಮೆಯ ವಿಷಯ ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಅದರ ಒಂದು ಘಟಕವಿರುವುದು ಇನ್ನು ಹೆಚ್ಚು ಸಂತೋಷ ಪಡುವ ವಿಷಯ, ಹಾಗೂ ಕಂಪನಿಯ ಮುಖ್ಯ ವ್ಯಕ್ತಿಗಳು ಸಹ ಬೇರೆ ವ್ಯಾಪಾರಿಗಳಂತೆ ಕೇವಲ ದುಡ್ಡಿನ ಹಿಂದೆ ಹೋಗದೆ ಸಮಾಜಕ್ಕೂ ಒತ್ತು ನೀಡುತಿದ್ದಾರೆ ಇದು ಬೇರೆ ಅವರಿಗೆ ಮಾದರಿಯಗಬೇಕು.