ಶ್ರೀಮತಿ ರಾವ್ ಬಿ.ಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀಮತಿ ರಾವ್ ಬಿ.ಕೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನಲ್ಲಿ ಜನಿಸಿದರು. ಎಸ್.ಎಸ್.ಎಲ್.ಸಿ ಯವರೆಗಿನ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಇವರ ಅಂಕಿತನಾಮ 'ಶ್ರೀಗುರುಪ್ರಿಯವಿಠಲದಾಸಿ' ಹಾಗೂ ಇವರು ಅಧ್ಯಾತ್ಮಿಕ ಚಿಂತಕಿಯಾಗಿದ್ದಾರೆ[೧].

ಕೃತಿಗಳು[ಬದಲಾಯಿಸಿ]

ಕವನ ಸಂಕಲನ[ಬದಲಾಯಿಸಿ]

  • ಅಮೃತವರ್ಷಿಣಿ

ಭಕ್ತಿಗೀತೆಗಳ ಸಂಕಲನ[ಬದಲಾಯಿಸಿ]

  • ಧರೆಗಿಳಿದ ಧನ್ವಂತರಿ
  • ಧರ್ಮವೀರ ಕೊಲ್ಯಶ್ರೀ
  • ಭಕ್ತಿಗಂಗಾಲಹರಿ

ಭಜನೆಗಳು[ಬದಲಾಯಿಸಿ]

  • ಶ್ರೀ ಗುರುಪ್ರಿಯ ವಿಠಲ ಚರನಾಮೃತ
  • ಶ್ರೀ ಗುರುಪ್ರಿಯ ವಿಠಲ ಭಜನಾಮೃತ
  • ಶ್ರೀ ಗುರುಪ್ರಿಯ ವಿಠಲನಾಮಾಮೃತ
  • ಶ್ರೀಹರಿಗುರು ಸ್ತುತಿಮಾಲಾ

ಹರಿದಾಸ ಸಾಹಿತ್ಯ[ಬದಲಾಯಿಸಿ]

  • ಶ್ರೀಹರಿದಾಸ ವಿಜಯ
  • ತೌಳವದಾಸ ದರ್ಶನ
  • ಶ್ರೀಹರಿದಾಸ ಸೂಕ್ತಿಚಂದ್ರಿಕಾ
  • ಶ್ರೀ ತುಳಸೀ ಮಹಿಮಾಮೃತ
  • ಹರಿದಾಸ ವೆಂಕಣ್ಣ ಕವಿ ಮೂಲ್ಕಿ
  • ಹರಿದಾಸ ದರ್ಪಣ
  • ದಾಸಸಾಹಿತ್ಯ ರಸರಂಜಿನಿ

ಇತರ ಕೃತಿಗಳು[ಬದಲಾಯಿಸಿ]

  • ಬಣ್ಣದ ಹಕ್ಕಿ....ಬಾ..(ಶಿಶುಗೀತೆಗಳು)
  • ಶ್ರೀಮಂತ ರಾಮಾಯಣ(ಪೌರಾಣಿಕ ಕಿರು ಕಾದಂಬರಿ)
  • ಬದರೀ ಯಾತ್ರೆ-ಒಂದು ಅನುಭವ (ಪ್ರವಾಸಿ ಕಥನ)
  • ಹಸಿರು ತೋರಣ (ಸಂಪ್ರದಾಯದ ಹಾಡುಗಳು)
  • ಗುರುದಕ್ಷಿಣೆ(ಪೌರಾಣಿಕ ಕಥಾಸಂಕಲನ) ಇತ್ಯಾದಿ ಒಟ್ಟು ಮೂವತ್ತರೆಡು ಕೃತಿಗಳು ಪ್ರಕಟಗೊಂಡಿವೆ.

ಪ್ರಶಸ್ತಿಗಳು[ಬದಲಾಯಿಸಿ]

  1. ಅಭಿನವ ಶಾರದೆ(ಬಿರುದು)ದಾಸ ಸಾಹಿತ್ಯದಲ್ಲಿನ ಸೇವೆಗಾಗಿ.
  2. ಗೌರವ ಪತ್ರದೊಂದಿಗೆ ಸನ್ಮಾನ -ವಾದಿರಾಜ-ಕನಕದಾಸ-ಪುರಂದರದಾಸ ಸಾಹಿತ್ಯ ಸಂಗೀತೋತ್ಸವ -2008-09
  3. ಅಭಿನಂದನೆ-ಹರಿದಾಸ ರಂಗದ ಸೇವೆಗಾಗಿ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನ-2010
  4. ಪಾವಂಜೆ ಹರಿದಾಸ ಲಕ್ಷ್ಮೀ ನಾರ್ಣಪ್ಪಯ್ಯ ಪ್ರಾಶಸ್ತಿ-2011
  5. ಹರಿದಾಸ ಸಾಹಿತ್ಯರಸಜ್ಞೆ(ಬಿರುದು)-ಅಖಿಲ ಭಾರತ ಹರಿದಾಸ ಸಂಮ್ಮೇಳನ ಟ್ರಸ್ಟ್(ರಿ) ಬೆಂಗಳೂರು-2013
  6. ಶ್ರೀ ಪುರಂದರಾನುಗ್ರಹ ಪ್ರಶಸ್ತಿ-ದಾಸ ಸಾಹಿತ್ಯ ಪ್ರಾಜೆಕ್ಟ್, ತಿರುಪತಿಯ ತಿರುಮಲ ತಿರುಪತಿ ದೇವಸ್ಥಾನ-2015
  7. ಸಂತ ಗಿರಿಯಮ್ಮನವರ ಅನುಗ್ರಹ ಪ್ರಶಸ್ತಿ-2016
  8. ಕೋ.ಅ. ಉಡುಪ ಪ್ರಶಸ್ತಿ-2016.

ಉಲ್ಲೇಖ[ಬದಲಾಯಿಸಿ]

  1. ತಿರಿ (ಲೇಖಕಿಯರ, ವಾಚಕಿಯರ ಮಾಹಿತಿಕೋಶ), ಕರಾವಳಿ ಲೇಖಕಿಯರ-ವಾಚಕಿಯರ ಸಂಘ(ರಿ.) ಸಾಹಿತ್ಯ ಸದನ, ಮಂಗಳೂರು.